Tag: ಬಾಲಕಿ

  • ಭಾರೀ ಮಳೆಯಿಂದಾಗಿ ರೈಲು ಹಳಿಗಳಲ್ಲಿ ಭೂಕುಸಿತ- ವಿಮಾನ ಹಾರಾಟದಲ್ಲಿ ವ್ಯತ್ಯಯ

    ಭಾರೀ ಮಳೆಯಿಂದಾಗಿ ರೈಲು ಹಳಿಗಳಲ್ಲಿ ಭೂಕುಸಿತ- ವಿಮಾನ ಹಾರಾಟದಲ್ಲಿ ವ್ಯತ್ಯಯ

    ಮಂಗಳೂರು/ಉಡುಪಿ: ಭಾರೀ ಮಳೆಯಿಂದಾಗಿ ಮಂಗಳೂರಿನಲ್ಲಿ ರೈಲು ಹಳಿಗಳಲ್ಲಿ ಭೂಕುಸಿತವಾಗಿ, ರೈಲು ಸೇವೆಯಲ್ಲಿ ವ್ಯತ್ಯಯವಾಗಿದೆ. ಇತ್ತ ಮಳೆಯಿಂದಾಗಿ ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಿದೆ.

    ಎರಡು ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಿದ್ದು, ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನಗಳು ಮಂಗಳೂರು ಹವಾಮಾನ ವೈಪರೀತ್ಯಗಳಿಂದ ತಡವಾಗಿ ಆಗಮಿಸಿವೆ. ಇನ್ನೂ ಮಳೆಯಿಂದಾಗಿ ಅನೇಕ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

    ಭಾರೀ ಮಳೆಯಿಂದಾಗಿ ರೈಲು ಹಳಿಗಳಲ್ಲಿ ಭೂಕುಸಿತವಾಗಿದೆ. ವಿವಿಧೆಡೆ ರೈಲ್ವೇ ಹಳಿಗಳಿಗೆ ಹಾನಿಯಾಗಿದೆ. ಮಲಬಾರ್, ಮಾವೇಲಿ, ಪರಶುರಾಮ್ ಎಕ್ಸ್ ಪ್ರೆಸ್ ರೈಲು ವಿಳಂಬವಾಗಲಿದೆ. ಚೆನ್ನೈ ಮೈಲ್, ವೆಸ್ಟ್ ಕೋಸ್ಟ್, ಮತ್ಸ್ಯಗಂಧ ರೈಲು ಸಮಯ ಮರು ನಿಗದಿಯಾಗಲಿದೆ. ಇನ್ನೂ ಮಂಗಳೂರು ಸೆಂಟ್ರಲ್- ಮುಂಬೈ ಎಕ್ಸ್ ಪ್ರೆಸ್ ಸಮಯ ಬದಲಾಗಿದೆ.

    ಮಂಗಳೂರಿನಲ್ಲಿ ಧಾರಾಕಾರ ಮಳೆ ಸಾಧ್ಯತೆ ಹಿನ್ನೆಲೆಯಲ್ಲಿ ರಾತ್ರಿ ವೇಳೆ ಸಾರ್ವಜನಿಕರು ಅನಗತ್ಯವಾಗಿ ಹೊರಗಡೆ ಸಂಚರಿಸಬಾರದು. ನೀರು ನಿಂತ ಪ್ರದೇಶಕ್ಕೆ ತೆರಳದಂತೆ ಪೊಲೀಸರ ಸೂಚನೆ ನೀಡಿದ್ದಾರೆ. ತುರ್ತು ಸ್ಪಂದನೆಗೆ ಕಂಟ್ರೋಲ್ ರೂಂ 100 ಅಥವಾ 1077 ಗೆ ಕರೆ ಮಾಡುವಂತೆ ಸಲಹೆ ನೀಡಿದ್ದು, ಮಂಗಳೂರಿನಲ್ಲಿ ಸಂಚಾರ ಬದಲು ವ್ಯವಸ್ಥೆ ಪಾಲನೆಗೆ ಮನವಿ ಮಾಡಿಕೊಂಡಿದ್ದಾರೆ.

    ಇನ್ನೂ ಉಡುಪಿಯಲ್ಲಿ ನೀರುಪಾಲಾಗಿದ್ದ ಬಾಲಕಿಯ ಮೃತದೇಹ ಇಂದು ಪತ್ತೆಯಾಗಿದೆ. ನಿಧಿ ಆಚಾರ್ಯ(9) ನೀರುಪಾಲಾಗಿದ್ದ ಬಾಲಕಿಯಾಗಿದ್ದು, ಘಟನಾ ಸ್ಥಳದಿಂದ 100 ಮೀ ದೂರದಲ್ಲಿ ನಿಧಿ ಮೃತದೇಹ ಪತ್ತೆಯಾಗಿದೆ.

    ಮಂಗಳವಾರ ಸಂಜೆ ನಿಧಿ ಕೃತಕ ನೆರೆಗೆ ನೀರು ಪಾಲಾಗಿದ್ದು, ಶಾಲೆ ಬಿಟ್ಟು ಮನೆಗೆ ತೆರಳುವ ವೇಳೆ ಈ ಘಟನೆ ಸಂಭವಿಸಿತ್ತು. ಉಡುಪಿಯ ಪಡುಬಿದ್ರಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ನಿಧಿ ಆಚಾರ್ಯ ಪತ್ತೆಗಾಗಿ ಅಗ್ನಿಶಾಮಕ ದಳ, ಸ್ಥಳೀಯರು ಶೋಧ ನಡೆಸಿದ್ದರು.

  • ಕರಾವಳಿ ಮಳೆಗೆ ನೀರಿನಲ್ಲಿ ಕೊಚ್ಚಿ ಹೋದ್ಳು ಬಾಲಕಿ, ಗುಡ್ಡ ಕುಸಿತಕ್ಕೆ ಮಹಿಳೆ ಬಲಿ

    ಕರಾವಳಿ ಮಳೆಗೆ ನೀರಿನಲ್ಲಿ ಕೊಚ್ಚಿ ಹೋದ್ಳು ಬಾಲಕಿ, ಗುಡ್ಡ ಕುಸಿತಕ್ಕೆ ಮಹಿಳೆ ಬಲಿ

    ಉಡುಪಿ/ಮಂಗಳೂರು/ಬೆಂಗಳೂರು: ಗಲ್ಫ್ ರಾಷ್ಟ್ರಗಳನ್ನು ಬೆಚ್ಚಿಬೀಳಿಸಿರುವ ಮೆಕುನು ಚಂಡಮಾರುತ ಕಾರವಳಿಯಲ್ಲೂ ಸಾಕಷ್ಟು ಅವಾಂತರಗಳಿಗೆ ಕಾರಣವಾಗಿದ್ದು, ಶಾಲೆಯಿಂದ ಹಿಂದಿರುಗುತ್ತಿದ್ದ ವಿದ್ಯಾರ್ಥಿನಿ ನೆರೆ ನೀರಿನಲ್ಲಿ ಕೊಚ್ಚಿ ಹೋದ ಘಟನೆ ಕಾಪು ತಾಲೂಕಿನ ಪಡುಬಿದ್ರಿಯಲ್ಲಿ ನಡೆದಿದೆ.

    ಇಲ್ಲಿನ ಪಾದೆಬೆಟ್ಟು ಎಂಬಲ್ಲಿ ನಿಧಿ ಆಚಾರ್ಯ ಎಂಬ 9 ವರ್ಷದ ಬಾಲಕಿ ಕಣ್ಮರೆಯಾಗಿದ್ದಾಳೆ. ನಿಧಿ ಆಚಾರ್ಯ ತನ್ನ ಅಕ್ಕ ನಿಶಾ ಆಚಾರ್ಯ ಜೊತೆ ಸೈಕಲ್ ನಲ್ಲಿ ಮನೆಗೆ ತೆರಳುತ್ತಿದ್ದಳು. ಪಟ್ಲ ಎಂಬಲ್ಲಿ ಕಿರು ಸೇತುವೆ ದಾಟುವಾಗ ಅವಘಡವಾಗಿದೆ. ರಭಸವಾಗಿ ಹರಿಯುತ್ತಿದ್ದ ನೀರು ಸೇತುವೆ ಮೇಲೆ ಬಂದಿತ್ತು. ಆ ರಭಸಕ್ಕೆ ಇಬ್ಬರು ಮಕ್ಕಳು ನೀರುಪಾಲಾಗಿದ್ದಾರೆ. ನಿಶಾ ಆಚಾರ್ಯಳನ್ನು ಸ್ಥಳೀಯರು ರಕ್ಷಿಸಿದ್ದಾರೆ. ಕಣ್ಮರೆಯಾದ ನಿಧಿ ಆಚಾರ್ಯಳಿಗೆ ಶೋಧಕಾರ್ಯ ಮುಂದುವರಿದಿದೆ.

    ಪಡುಬಿದ್ರೆಯ ಗಣಪತಿ ಸ್ಕೂಲ್ ನ ವಿದ್ಯಾರ್ಥಿನಿಯಾಗಿರುವ ನಿಧಿ ಮೂರು ಗಂಟೆಗೆ ಶಾಲೆ ಬಿಟ್ಟಿದ್ದು, ಮಳೆಯಿದ್ದ ಕಾರಣ ಮಕ್ಕಳಿಬ್ಬರು ತಡವಾಗಿ ಶಾಲೆಯಿಂದ ಹೊರಟಿದ್ದಾರೆ. ಕುಟುಂಬಸ್ಥರು, ಸ್ಥಳೀಯರು ಬಾಲಕಿಗಾಗಿ ಹುಡುಕಾಟ ಮಾಡುತ್ತಿದ್ದಾರೆ. ಪಡುಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಅಗ್ನಿಶಾಮಕ ಸಿಬ್ಬಂದಿ ಪೊಲೀಸರು ಹುಡುಕಾಟ ಮಾಡುತ್ತಿದ್ದಾರೆ. ವಿಪರೀತ ಮಳೆಯಿಂದಾಗಿ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದೆ.

    ಗುಡ್ಡ ಕುಸಿದು ಮಹಿಳೆ ಸಾವು: ಕರಾವಳಿಯಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಮಂಗಳೂರಿನ ಕೆಪಿಟಿ ಬಳಿ ಮನೆಗೆ ಗುಡ್ದ ಕುಸಿದ ಪರಿಣಾಮ ಮಹಿಳೆಯೊಬ್ಬರು ಮೃತ ಪಟ್ಟಿದ್ದಾರೆ. ಮೋಹಿನಿ (55) ಮಣ್ಣಿನ ಅಡಿ ಸಿಲುಕಿ ಮೃತಪಟ್ಟಿದ್ದಾರೆ. ಬೆಳಗ್ಗೆ 10 ಗಂಟೆಯ ವೇಳೆಗೆ ಈ ಘಟನೆ ನಡೆದಿದ್ದು, ಸತತ 9 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಮಹಿಳೆಯ ದೇಹವನ್ನು ಹೊರತೆಗೆಯಲಾಗಿದೆ.

    ಭಾರೀ ಮಳೆ ಸಾಧ್ಯತೆ: ಇನ್ನು ಮೆಕುನು ಚಂಡಮಾರುತ ಹಿನ್ನೆಲೆಯಲ್ಲಿ ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡಿದೆ. ಸಮುದ್ರದ ನೀರು ಬಣ್ಣ ಬದಲಾಯಿಸಿದ್ದು ಸ್ಥಳೀಯರು ಆತಂಕಗೊಂಡಿದ್ದಾರೆ. ಕಡಲ ಅಬ್ಬರ ತೀರದಿಂದ ಅರ್ಧ ಕಿ.ಮೀ ದೂರದಿಂದಲೇ ಮೇಲೇರಿ ಬರುತ್ತಿದೆ. ಕಡಲಿನ ಅಬ್ಬರ ಕಂಡು ಕರಾವಳಿಗರಲ್ಲಿ ಆತಂಕ ಸೃಷ್ಟಿಯಾಗಿದೆ. ಕಾಪು, ಮಲ್ಪೆ, ಮರವಂತೆ, ಪಡುಬಿದ್ರೆ ಬೀಚ್ ಗಳಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ. ಇನ್ನು 24 ಗಂಟೆಗಳ ಕಾಲ ಭಾರೀ ಮಳೆ ಆಗುವ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಸಿಎಂ ಸೂಚನೆ: ಉಡುಪಿ, ದಕ್ಷಿಣ ಕನ್ನಡದಲ್ಲಿ ಭೀಕರ ಮಳೆ ಹಿನ್ನಲೆಯಲ್ಲಿ ಸಿಎಂ ಕುಮಾರಸ್ವಾಮಿ ಅವರು ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದಿದ್ದು, ಪ್ರವಾಹದಿಂದ ಸಾರ್ವಜನಿಕರನ್ನು ರಕ್ಷಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಿಎಂ ಸೂಚನೆ ನೀಡಿದ್ದಾರೆ. ಅಲ್ಲದೇ ರಕ್ಷಣಾ ಕಾರ್ಯಾಚರಣೆಗೆ ಕೋಸ್ಟ್ ಗಾರ್ಡ್ ಪಡೆಯ ನೆರವು ಪಡೆದು ಹೆಚ್ಚಿನ ಅನಾಹುತಗಳಾಗದಂತೆ ಮುನ್ನೆಚ್ಚರಿಕೆ ವಹಿಸಲು ಆದೇಶ ನೀಡಿದ್ದಾರೆ.

    3 ದಿನ ಮುನ್ನವೇ ಮುಂಗಾರು ಆಗಮನ: ದೇಶಕ್ಕೆ ನೈರುತ್ಯ ಮುಂಗಾರು ಮಳೆ 3 ದಿನ ಮುನ್ನವೇ ಕೇರಳದ ಭಾಗಕ್ಕೆ ಆಗಮಿಸಿದ್ದು, ಇನ್ನೂ ಎರಡು ದಿನಗಳಲ್ಲಿ ರಾಜ್ಯಕ್ಕೆ ಮುಂಗಾರು ಅಗಮನ ಸಾಧ್ಯತೆ ಇರುವುದಾಗಿ ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆ ವಿಜ್ಞಾನಿ ಗವಾಸ್ಕರ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ಕೇರಳ ಕರಾವಳಿ ಭಾಗದಲ್ಲಿ ವಾಯುಭಾರ ಕುಸಿತ ಹಿನ್ನಲೆಯಲ್ಲಿ ಮುಂಗಾರು ಮತ್ತಷ್ಟು ಚುರುಕುಗೊಂಡಿದ್ದು, ಮುಂದಿನ ಎರಡು ದಿನಗಳಲ್ಲಿ ರಾಜ್ಯದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಅಲ್ಲದೇ ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಭಾಗದಲ್ಲಿ ಭಾರೀ ಮಳೆಯಾಗುವ ಸಂಭವಿದೆ ಎಂದು ತಿಳಿಸಿದ್ದಾರೆ.

    https://www.youtube.com/watch?v=-TAoAb4cibM

  • ಜೈಂಟ್ ವ್ಹೀಲ್ ಕುಸಿದು 10ರ ಬಾಲಕಿ ದುರ್ಮರಣ-ಮೂವರು ಮಕ್ಕಳು ಸೇರಿ 6 ಮಂದಿಗೆ ಗಾಯ

    ಜೈಂಟ್ ವ್ಹೀಲ್ ಕುಸಿದು 10ರ ಬಾಲಕಿ ದುರ್ಮರಣ-ಮೂವರು ಮಕ್ಕಳು ಸೇರಿ 6 ಮಂದಿಗೆ ಗಾಯ

    ಹೈದರಬಾದ್: ಜೈಂಟ್ ವ್ಹೀಲ್ ಕುಸಿದು 10 ವರ್ಷದ ಬಾಲಕಿ ದುರ್ಮರಣಕ್ಕೀಡಾದ ಆಘಾತಕಾರಿ ಘಟನೆಯೊಂದು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಭಾನುವಾರ ರಾತ್ರಿ ನಡೆದಿದೆ.

    ಮೃತ ದುರ್ದೈವಿ ಬಾಲಕಿಯನ್ನು ಅಮೃತ ಎಂದು ಗುರುತಿಸಲಾಗಿದೆ. ಈಕೆ ಅನಂತಪುರ ಕಾಲೇಜು ಮೈದಾನದಲ್ಲಿ ಆಯೋಜಿಸಲಾದ ಮೋಜು ಮೇಳ ಪ್ರದರ್ಶನಕ್ಕೆ ತೆರಳಿದ್ದಳು. ವೀಕೆಂಡ್ ಹಾಗೂ ಶಾಲೆಗೆ ರಜಾ ಸಮಯವಾಗಿದ್ದರಿಂದ ಪ್ರದರ್ಶನ ಜನಜಂಗುಳಿಯಿಂದ ಕೂಡಿತ್ತು. ಈ ವೇಳೆ ಅಮೃತ ಅಲ್ಲಿದ್ದ ಜೈಂಟ್ ವ್ಹೀಲ್ ನಲ್ಲಿ ಕುಳಿತಿದ್ದಾಳೆ.

    ಜೈಂಟ್ ವ್ಹೀಲ್ ತಿರುಗುತ್ತಿದ್ದ ಸಂದರ್ಭದಲ್ಲಿ ಅದರ ಒಂದು ಟ್ರಾಲಿ ಕಾರ್ ನ ಬೋಲ್ಟ್ ಸಡಿಲವಾಗಿದೆ. ಪರಿಣಾಮ ಏಕಾಏಕಿ ಕುಸಿದುಬಿದ್ದಿದೆ. ಹೀಗಾಗಿ ಎತ್ತರದಿಂದ ಬಿದ್ದಿದ್ದರಿಂದ ಬಾಲಕಿ ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾಳೆ. ಈ ಅಚ್ಚರಿ ಹಾಗೂ ಭಯಾನಕ ಘಟನೆಯಲ್ಲಿ ನೆರೆದಿದ್ದವರು ಕಣ್ಣಾರೆ ಕಂಡಿದ್ದಾರೆ.

    ಘಟನೆಯಲ್ಲಿ ಮೂವರು ಮಕ್ಕಳು ಸೇರಿ 6ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿವೆ. ಘಟನೆಯಲ್ಲಿ ಗಾಯಗೊಂಡವರನ್ನು ಅನಂತಪುರ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಜೈಂಟ್ ವ್ಹೀಲ್ ನ ಬೋಲ್ಟ್ ಸಡಿಲಗೊಂಡಿದ್ದನ್ನು ಗಮನಿಸಿದ ಕೂಡಲೇ ವ್ಹೀಲ್ ಆಪರೇಟರಿಗೆ ಮಾಹಿತಿ ರವಾನಿಸಿದ್ದಾರೆ. ಆದ್ರೆ ಆತ ಕುಡಿದ ಮತ್ತಿನಲ್ಲಿದ್ದರಿಂದ ತಕ್ಷಣವೇ ಸರಿಪಡಿಸಲು ಆಗಿಲ್ಲ. ಹೀಗಾಗಿ ಈ ದುರಂತ ಸಂಭವಿಸಿದೆ ಅಂತ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

    ದುರಂತ ಸಂಭವಿಸಿದ ಕೂಡಲೇ ಸ್ಥಳೀಯರು ವ್ಹೀಲ್ ಆಪರೇಟರನ್ನು ಹಿಡಿದು ಚೆನ್ನಾಗಿ ಥಳಿಸಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

  • ನಾಲ್ವರು ದುಷ್ಕರ್ಮಿಗಳಿಂದ ಬಾಲಕಿಗೆ ಚಾಕು ಇರಿತ!

    ನಾಲ್ವರು ದುಷ್ಕರ್ಮಿಗಳಿಂದ ಬಾಲಕಿಗೆ ಚಾಕು ಇರಿತ!

    ದಾವಣಗೆರೆ: ಮನೆಯಲ್ಲಿ ಯಾರು ಇಲ್ಲದ ವೇಳೆ ನೀರು ಕೇಳಲು ಹೋಗಿ ನಾಲ್ವರು ದುಷ್ಕರ್ಮಿಗಳು ಬಾಲಕಿಗೆ ಚಾಕುವಿನಿಂದ ಇರಿದ ಘಟನೆ ಜಿಲ್ಲೆಯ ಹೆಚ್.ಕೆ.ಆರ್ ನಗರದಲ್ಲಿ ನಡೆದಿದೆ.

    ಗುರುವಾರ ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದಳು. ತಂದೆ-ತಾಯಿ ಕೆಲಸಕ್ಕೆ ಹೋಗಿದ್ದ ಸಂದರ್ಭವನ್ನು ಬಳಸಿಕೊಂಡ ನಾಲ್ಕು ಮಂದಿ ದುಷ್ಕರ್ಮಿಗಳು ಮೊದಲು ಬಾಗಿಲು ಬಡಿದಿದ್ದಾರೆ. ಬಾಗಿಲು ತೆಗೆಯುತ್ತಿದ್ದಂತೆ ಬಾಲಕಿಯ ಕುತ್ತಿಗೆಗೆ ಚಾಕು ಹಾಕಲು ಮುಂದಾಗಿದ್ದಾರೆ.

    ಈ ವೇಳೆ ಬಾಲಕಿ ಕೈ ಅಡ್ಡ ತಂದಿದ್ದಕ್ಕೆ ಚಾಕು ಕೈಗೆ ಬಿದ್ದಿದೆ. ತಕ್ಷಣಕ್ಕೆ ಬಾಲಕಿ ಕಿರುಚಿಕೊಂಡಿದ್ದರಿಂದ ನಾಲ್ವರು ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಅಲ್ಲದೆ ಬಾಲಕಿಯನ್ನ ತಕ್ಷಣಕ್ಕೆ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

    ದುಷ್ಕರ್ಮಿಗಳು ಬುರ್ಕಾ ಹಾಕಿಕೊಂಡು ಬಂದಿದ್ದರಿಂದ ಮುಖದ ಚಹರೆ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಅಲ್ಲದೆ ಜಿಲ್ಲೆಯಲ್ಲಿ ಮಕ್ಕಳು ಕಳ್ಳರ ಹಾವಳಿ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿರುವುದರಿಂದ, ಮಕ್ಕಳ ಕಳ್ಳರೇ ಇರಬಹುದು ಎಂದು ಪೋಷಕರು ಹಾಗೂ ಸಾರ್ವಜನಿಕರು ಸಂಶಯ ವ್ಯಕ್ತಪಡಿಸಿದ್ದಾರೆ.

    ಘಟನೆ ನಡೆದ ಸ್ಥಳಕ್ಕೆ ಆರ್ ಎಂಸಿ ಠಾಣೆ ಪೊಲೀಸರು ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ.

  • ಅಪ್ರಾಪ್ತೆಗೆ ಪತಿಯಿಂದ ಕಿರುಕುಳ- ದೂರು ನೀಡಲು ಬಂದ ಬಾಲಕಿ ಕೈಯನ್ನ ಬಿಸಿ ಎಣ್ಣೆಗೆ ಹಾಕಿದ್ಳು ಪತ್ನಿ

    ಅಪ್ರಾಪ್ತೆಗೆ ಪತಿಯಿಂದ ಕಿರುಕುಳ- ದೂರು ನೀಡಲು ಬಂದ ಬಾಲಕಿ ಕೈಯನ್ನ ಬಿಸಿ ಎಣ್ಣೆಗೆ ಹಾಕಿದ್ಳು ಪತ್ನಿ

    ಗಾಂಧಿನಗರ: ನಿಮ್ಮ ಪತಿ ನನ್ನನ್ನು ಚೇಡಿಸುತ್ತಿದ್ದಾನೆಂದು ಮಹಿಳೆಗೆ ದೂರು ನೀಡಲು ಬಂದ ಬಾಲಕಿಯ ಕೈಯನ್ನು ಬಿಸಿ ಎಣ್ಣೆಯಲ್ಲಿ ಹಾಕಿರುವ ಅಮಾನವೀಯ ಘಟನೆಯೊಂದು ಗುಜರಾತ್ ರಾಜ್ಯದ ರಾಜ್‍ಕೋಟ್‍ನಲ್ಲಿ ನಡೆದಿದೆ.

    ಕೆಲವು ದಿನಗಳಿಂದ ಬಾಲಕಿಗೆ ವ್ಯಕ್ತಿಯೊಬ್ಬ ಕಿರುಕುಳ ನೀಡುತ್ತಿದ್ದನು. ಇದ್ರಿಂದ ಬೇಸತ್ತ ಬಾಲಕಿ ವ್ಯಕ್ತಿಯ ಪತ್ನಿಗೆ ದೂರು ನೀಡಲು ಆತನ ಮನೆಗೆ ತೆರಳಿದ್ದಾಳೆ. ಈ ವೇಳೆ ಬಾಲಕಿಯ ಮಾತನ್ನು ಕೇಳಿದ ಮಹಿಳೆ, ನೀನು ಮಾಡುತ್ತಿರುವ ಆರೋಪಗಳೆಲ್ಲಾ ಸತ್ಯವಾಗಿದ್ರೆ ಬಿಸಿ ಎಣ್ಣೆಯಲ್ಲಿ ಕೈ ಹಾಕಿ ತೋರಿಸು ಅಂತಾ ಹೇಳಿದ್ದಾಳೆ.

    ಒಂದು ವೇಳೆ ನೀನು ಸತ್ಯ ಹೇಳಿದ್ರೆ ನಿನ್ನ ಕೈಗಳಿಗೆ ಯಾವುದೇ ರೀತಿಯಲ್ಲಿ ಅಪಾಯವಾಗಲ್ಲ ಅಂತಾ ನಂಬಿಸಿದ್ದಾಳೆ. ಮಹಿಳೆಯ ಮಾತನ್ನು ನಂಬಿದ ಬಾಲಕಿ ಬಿಸಿ ಎಣ್ಣೆಯಲ್ಲಿ ಕೈ ಹಾಕಿದ್ದಾಳೆ. ಇದೇ ವೇಳೆ ಬಾಲಕಿಯ ಸಂಬಂಧಿ ಮನೆಗೆ ಬಂದು ಗಾಯಗೊಂಡಿದ್ದ ಅಪ್ರಾಪ್ತೆಯನ್ನು ಕಾಪಾಡಿದ್ದಾರೆ.

    ಈ ಸಂಬಂಧ ಬಾಲಕಿಯ ಕುಟುಂಬಸ್ಥರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಮಹಿಳೆಯ ಪತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಘಟನೆ ಸಂಬಂಧ ನಮ್ಮಲ್ಲಿ ದೂರು ದಾಖಲಾಗಿದ್ದು, ಮಹಿಳೆ ಘಟನೆಯ ಬಳಿಕ ಪರಾರಿಯಾಗಿದ್ದಾಳೆ. ಆದ್ರೆ ದೂರಿನಲ್ಲಿ ಕೇವಲ ಬಾಲಕಿಯ ಕೈಯನ್ನು ಬಿಸಿ ಎಣ್ಣೆಯಲ್ಲಿ ಹಾಕಿಸಿದ್ದಾರೆ ಎಂದು ಮಾತ್ರ ಉಲ್ಲೇಖಿಸಲಾಗಿದೆ. ದೂರಿನಲ್ಲಿ ಎಲ್ಲಿಯೂ ಬಾಲಕಿಗೆ ಕಿರುಕುಳ ನೀಡಲಾಗಿದೆ ಎಂದು ಹೇಳಿಲ್ಲ. ಸದ್ಯ ಬಾಲಕಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಎಂ.ಎಂ.ಝಾಲಾ ತಿಳಿಸಿದ್ದಾರೆ.

  • ಆಟ ಆಡಲೆಂದು 30ನೇ ಅಂತಸ್ತಿನ ಕಿಟಕಿಗೆ ಜೋತು ಬಿದ್ದ ಬಾಲಕಿ!

    ಆಟ ಆಡಲೆಂದು 30ನೇ ಅಂತಸ್ತಿನ ಕಿಟಕಿಗೆ ಜೋತು ಬಿದ್ದ ಬಾಲಕಿ!

    ಬೀಜಿಂಗ್: ಬಾಲಕಿಯೊಬ್ಬಳು ಆಟ ಆಡುತ್ತಾ 30ನೇ ಅಂತಸ್ತಿನ ಕಿಟಕಿಗೆ ಜೋತು ಬಿದ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. ನೈಋತ್ಯ ಚೀನಾದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

    ಬಾಲಕಿ ಕಿಟಕಿಗೆ ಅಳವಡಿಸಲಾಗಿದ್ದ ಪ್ರೇಮ್ ಹಿಡಿದುಕೊಂಡು ಜೋತು ಬಿದ್ದಿದ್ದನ್ನು ಕಂಡ ಪಕ್ಕದ ಕಟ್ಟಡದ ಜನರು ಮೊಬೈಲ್‍ನಲ್ಲಿ ಎಲ್ಲ ದೃಶ್ಯಗಳನ್ನು ಸೆರೆಹಿಡಿದುಕೊಂಡಿದ್ದಾರೆ. ಕಿಟಕಿಯ ಹೊರಭಾಗದಲ್ಲಿ ನೇತಾಡುತ್ತಿದ್ದ ಬಾಲಕಿಯನ್ನು ಒಳಗಿನಿಂದ ಪೋಷಕರು ಎಳೆದುಕೊಂಡು ರಕ್ಷಿಸಿದ್ದಾರೆ. 30ನೇ ಅಂತಸ್ತಿನ ಕಿಟಿಕಿ ಅಂದ್ರೆ ಬರೋಬ್ಬರಿ ನೆಲದಿಂದ ಬರೋಬ್ಬರಿ 295 ಅಡಿಗಳ ಎತ್ತರದಲ್ಲಿ ಬಾಲಕಿ ನೇತಾಡುತ್ತಿದ್ದಳು.

    ಹತ್ತಿರದ ಕಟ್ಟಡದಲ್ಲಿದ್ದ ಜನರು ತಾವು ಚಿತ್ರೀಕರಿಸಿದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ವಿಡಿಯೋ ಜನರು ಬಾಲಕಿಯ ಪೋಷಕರ ವಿರುದ್ಧ ಆಕ್ರೋಶವನ್ನು ಹೊರ ಹಾಕಿದ್ದಾರೆ. ಮನೆಯಲ್ಲಿರುವ ಪೋಷಕರು ತಮ್ಮ ಮಕ್ಕಳ ಮೇಲೆ ಗಮನವನ್ನು ಇಟ್ಟಿರಬೇಕು ಅಂತಾ ಕೆಲವರು ಸಲಹೆ ನೀಡಿದ್ರೆ, ಒಂದು ವೇಳೆ ಬಾಲಕಿ ಬಿದ್ದು ಸಾವನ್ನಪ್ಪಿದ್ರೆ, ಒಬ್ಬ ತಾಯಿ ತನ್ನ ಮಗಳನ್ನು ಕಳೆದುಕೊಳ್ಳುತ್ತಿದ್ದಳು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

    https://www.youtube.com/watch?v=AuPF3PgdBSs

  • ಶಾಲೆಯಲ್ಲಿ ವರ್ಗಾವಣೆ ಪತ್ರ ತರಲು ಹೋಗಿದ್ದ ವೇಳೆ ಬಾಲಕಿ ಕಿಡ್ನಾಪ್!

    ಶಾಲೆಯಲ್ಲಿ ವರ್ಗಾವಣೆ ಪತ್ರ ತರಲು ಹೋಗಿದ್ದ ವೇಳೆ ಬಾಲಕಿ ಕಿಡ್ನಾಪ್!

    ಮೈಸೂರು: ಸಿನಿಮೀಯ ರೀತಿಯಲ್ಲಿ ಅಪ್ರಾಪ್ತ ಬಾಲಕಿಯನ್ನು ಅಪಹರಣ ಮಾಡಿದ ಘಟನೆ ಮೈಸೂರು ತಾಲುಕಿನ ಜೆಟ್ಟಿಹುಂಡಿಯಲ್ಲಿ ನಡೆದಿದೆ.

    ಪ್ರಕಾಶ್ ಅಪ್ರಾಪ್ತ ಬಾಲಕಿಯನ್ನು ಅಪಹರಣ ಮಾಡಿದ ಯುವಕ. ಬಾಲಕಿ ಹತ್ತನೇ ತರಗತಿ ಓದುತ್ತಿದ್ದು, ಶಾಲೆಯಲ್ಲಿ ವರ್ಗಾವಣೆ ಪತ್ರ ತರಲು ಹೋಗಿದ್ದ ವೇಳೆ ಅಪಹರಣ ನಡೆದಿದೆ. ನಾಲ್ವರು ಯುವಕರ ತಂಡ ಈ ಕೃತ್ಯ ಎಸಗಿದೆ.

    ಮೂರು ದಿನಗಳ ಹಿಂದೆ ಬಾಲಕಿಯ ಅಪಹರಣವಾಗಿದ್ದು, ಇನ್ನೂ ಬಾಲಕಿ ಪತ್ತೆಯಾಗಿಲ್ಲ. ಸದ್ಯ ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಕ್ಸೋ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ಇಲವಾಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಚಲಿಸುತ್ತಿದ್ದ ಕಾರಿನ ರೂಫ್ ಮೇಲೆ ಬಾಲಕಿಯಿಂದ ಹೋಂವರ್ಕ್: ವೈರಲ್ ವಿಡಿಯೋ

    ಚಲಿಸುತ್ತಿದ್ದ ಕಾರಿನ ರೂಫ್ ಮೇಲೆ ಬಾಲಕಿಯಿಂದ ಹೋಂವರ್ಕ್: ವೈರಲ್ ವಿಡಿಯೋ

    ಬೀಜಿಂಗ್: ಬಾಲಕಿಯೊಬ್ಬಳು ಚಲಿಸುತ್ತಿದ್ದ ಕಾರಿನ ರೂಫ್ ಮೇಲೆ ತನ್ನ ಹೋಂವರ್ಕ್ ಮಾಡಿದ ಘಟನೆ ಚೀನಾದಲ್ಲಿ ನಡೆದಿದೆ.

    ಬಾಲಕಿ ತಂದೆ ಕಾರನ್ನು ಚಲಾಯಿಸುತ್ತಿದ್ದರು. ಬಾಲಕಿ ಚಲಿಸುತ್ತಿದ್ದ ಕಾರಿನ ರೂಫ್ ಮೇಲೆ ಪುಸ್ತಕವನ್ನು ಇಟ್ಟುಕೊಂಡು ತನ್ನ ಹೋಂವರ್ಕ್ ಮಾಡಿದ್ದಾಳೆ.

    ಚಲಿಸುತ್ತಿದ್ದ ಕಾರಿನ ಕಿಟಕಿಯಿಂದ ದೇಹವನ್ನು ಹೊರ ಹಾಕಿ ಕಾರಿನ ರೂಫ್ ಅನ್ನು ಡೆಸ್ಕ್ ರೀತಿ ಮಾಡಿಕೊಂಡು ಅದರ ಮೇಲೆ ತನ್ನ ಪುಸ್ತಕವನ್ನು ಇಟ್ಟುಕೊಂಡು ಬಾಲಕಿ ತನ್ನ ಹೋಂವರ್ಕ್ ಮಾಡಿದ್ದಾಳೆ. ಬಾಲಕಿ ಹೋಂವರ್ಕ್ ಮಾಡುತ್ತಿರುವುದನ್ನು ನೋಡಿದ ಜನರು ತಮ್ಮ ಮೊಬೈಲ್‍ನಲ್ಲಿ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.

    ಬಾಲಕಿಯ ತಂದೆ ಕಾರು ಚಲಾಯಿಸುತ್ತಾ ಪಕ್ಕದ ಸೀಟಿನಲ್ಲಿ ಇದ್ದ ತನ್ನ ಸ್ನೇಹಿತನ ಜೊತೆ ಮಾತನಾಡುತ್ತಿದ್ದರು. ಆಗ ಅವರು ತನ್ನ ಮಗಳು ಕಾರಿನ ಕಿಟಕಿಯ ತುದಿಯಲ್ಲಿ ಕುಳಿತಿರುವುದನ್ನು ಗಮನಿಸಿದ್ದರು. ಆಗ ತಂದೆ ತಕ್ಷಣ ತನ್ನ ಮಗಳನ್ನು ಒಳಗೆ ಎಳೆದಿದ್ದಾರೆ.

    ಆಕೆ ಚಲಿಸುತ್ತಿದ್ದ ಕಾರಿನ ರೂಫ್ ಮೇಲೆ ಹೋಂವರ್ಕ್ ಮಾಡುತ್ತಿರುವುದ್ದನ್ನು ನಾನು ಗಮನಿಸಲಿಲ್ಲ. ಇದಾದ ಬಳಿಕ ಈ ರೀತಿ ಮತ್ತೆ ಮಾಡಬಾರದು ಎಂದು ನನ್ನ ಮಗಳಿಗೆ ಎಚ್ಚರಿಕೆ ನೀಡಿದ್ದೇನೆ ಎಂದು ಬಾಲಕಿಯ ತಂದೆ ಮಿ. ಚೇಂಗ್ ತಿಳಿಸಿದ್ದಾರೆ.

    ಸದ್ಯ ಬಾಲಕಿಯ ತಂದೆಯ ಡ್ರೈವಿಂಗ್ ಲೈಸೆನ್ಸ್ ಅಮಾನತುಗಳಿಸಲಾಗಿದ್ದು, ಕಂಪನಿ ಮಿ. ಚೇಂಗ್‍ನನ್ನು ಮತ್ತೆ ಟ್ಯಾಕ್ಸಿ ಚಲಾಯಿಸಲು ಅವಕಾಶ ನೀಡುವುದಿಲ್ಲ ಎಂದು ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ.  ಇದನ್ನೂ ಓದಿ: ಚಲಿಸುತ್ತಿದ ಸ್ಕೂಟಿ ಹಿಂಬದಿಯಲ್ಲಿ ಕೂತು ಹೋಂವರ್ಕ್ ಮಾಡಿದ ಬಾಲಕ- ವಿಡಿಯೋ ವೈರಲ್

  • ಎರಡು ಅಂತಸ್ತಿನಿಂದ ಬೀಳ್ತಿದ್ದ ಬಾಲಕಿಯನ್ನು ರಕ್ಷಿಸಿದ ಅಂಗಡಿ ಮಾಲೀಕ

    ಎರಡು ಅಂತಸ್ತಿನಿಂದ ಬೀಳ್ತಿದ್ದ ಬಾಲಕಿಯನ್ನು ರಕ್ಷಿಸಿದ ಅಂಗಡಿ ಮಾಲೀಕ

    ಬೀಜಿಂಗ್: ಎರಡು ಅಂತಸ್ತಿನ ಮೇಲಿನಿಂದ ಬಾಲಕಿಯೊಬ್ಬಳನ್ನು ರಕ್ಷಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.

    ಅಂಗಡಿ ಮಾಲೀಕ ಫೋನ್ ನಲ್ಲಿ ಮಾತನಾಡುತ್ತಾ ಎದುರಿನ ಕಟ್ಟಡದಿಂದ ಬೀಳುತ್ತಿದ್ದ ಬಾಲಕಿಯನ್ನು ನೋಡಿದ್ದಾರೆ. ತನ್ನ ಅಂಗಡಿಗೂ ಬಾಲಕಿ ಬೀಳುತ್ತಿದ್ದ ಕಟ್ಟಡಕ್ಕೆ ಅಂದಾಜು 40 ಮೀಟರ್ ದೂರವಿದ್ರೂ ಕ್ಷಣಾರ್ಧದಲ್ಲಿ ಓಡಿ ಹೋಗಿ ಆಕೆಯನ್ನು ಕ್ಯಾಚ್ ಹಿಡಿದಿದ್ದಾರೆ.

    ರಸ್ತೆಯಲ್ಲಿ ಬಾಲಕಿ ಬೀಳುತ್ತಿದ್ದನ್ನು ಹಲವರು ಅಸಹಾಯಕರಾಗಿ ನೋಡುತ್ತಿದ್ದರು. ಅಂಗಡಿ ಮಾಲೀಕನ ಸಮಯ ಪ್ರಜ್ಞೆಯಿಂದಾಗಿ ಬಾಲಕಿಯ ಜೀವ ಉಳಿದಿದೆ. ನೈಋತ್ಯ ಚೀನಾದ ಚಾಂಗ್ಕಿಂಗ್ ಎಂಬಲ್ಲಿ ಈ ಘಟನೆ ನಡೆದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಅಂಗಡಿ ಮಾಲೀಕ ಕಟ್ಟಡದಿಂದ ಬೀಳುತ್ತಿದ್ದ ಬಾಲಕಿಯನ್ನು ಕ್ಯಾಚ್ ಹಿಡಿದಿರುವ ಎಲ್ಲ ದೃಶ್ಯಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ.

    ಇತ್ತೀಚೆಗೆ ಏಪ್ರಿಲ್ 30ರಂದು ಬಾಲಕನೊಬ್ಬ ಚರಂಡಿ ನೀರಿನಲ್ಲಿ ಕೊಚ್ಚಿ ಹೋಗ್ತಿದ್ದ ಬಾಲಕನನ್ನು ಚಾಲಕ ಕಾರ್ ನಿಲ್ಲಿಸಿ ತನ್ನ ಪ್ರಾಣವನ್ನು ಲೆಕ್ಕಿಸದೇ ಆತನನ್ನು ರಕ್ಷಣೆ ಮಾಡಿದ್ದರು.

  • 13ರ ಬಾಲೆ ಮೇಲೆ ಅತ್ಯಾಚಾರವೆಸಗಿದ್ದ 75ರ ಶಿಕ್ಷಕನಿಗೆ ಜೀವಾವಧಿ ಶಿಕ್ಷೆ

    13ರ ಬಾಲೆ ಮೇಲೆ ಅತ್ಯಾಚಾರವೆಸಗಿದ್ದ 75ರ ಶಿಕ್ಷಕನಿಗೆ ಜೀವಾವಧಿ ಶಿಕ್ಷೆ

    ಮುಂಬೈ: ಪರೀಕ್ಷೆಗೆ ಟಿಪ್ಸ್ ಹೇಳಿಕೊಡುವ ನೆಪವೊಡ್ಡಿ 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಶಿಕ್ಷಕನಿಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.

    75 ವರ್ಷದ ಶಿಕ್ಷಕನೊಬ್ಬ ಪರೀಕ್ಷೆಗೆ ಟಿಪ್ಸ್ ಹೇಳಿಕೊಡುವ ನೆಪವೊಡ್ಡಿ 13 ವರ್ಷದ ಬಾಲಕಿಯ ಮೇಲೆ ಪದೇ ಪದೇ ಅತ್ಯಾಚಾರ ನಡೆಸಿದ್ದ. ಅಷ್ಟೇ ಅಲ್ಲದೆ ವಿಡಿಯೋ ಚಿತ್ರೀಕರಿಸಿದ್ದ. ಈತನ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪೋಸ್ಕೋ ಕಾಯ್ದೆಯ ಅಡಿಯಲ್ಲಿ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.

    ಶಿಕ್ಷಕನ ಕೃತ್ಯದ ವಿಡಿಯೋವನ್ನು ಯುವಕರು ಮೊಬೈಲ್ ನಲ್ಲಿ ನೋಡುತ್ತಿದ್ದಾಗ ಸಂತ್ರಸ್ತೆಯ ನೆರೆಮನೆಯಾತ ಗಮನಿಸಿದ್ದಾನೆ. ಈ ವಿಚಾರವನ್ನು ಆತ ಬಾಲಕಿಯ ಸಂಬಂಧಿಕರಿಗೆ ತಿಳಿಸಿದ ಪರಿಣಾಮ ಪ್ರಕರಣ ಬೆಳಕಿಗೆ ಬಂದಿದೆ.

    2013ರಲ್ಲಿ ಈ ಪ್ರಕರಣ ಬೆಳಕಿಗೆ ಬಂದಿತ್ತು. ನಂತರ ಅವರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. 4 ವರ್ಷಗಳ ಕಾಲ ನಡೆದ ವಿಚಾರಣೆಯಲ್ಲಿ ಆರೋಪ ಸಾಬೀತಾಗಿದ್ದು, 75 ವರ್ಷದ ಆರೋಪಿಗೆ ಜೀವಾವಧಿ ಶಿಕ್ಷೆಯಾಗಿದೆ.

    ಕೃತ್ಯ ಎಸಗಿದ್ದು ಹೇಗೆ?
    2012ರ ಡಿಸೆಂಬರ್‍ನಲ್ಲಿ ಒಂದು ದಿನ ಬಾಲಕಿ ತನ್ನ ಸ್ನೇಹಿತೆಯರೊಂದಿಗೆ ಪರೀಕ್ಷೆಗೆ ಹೋಗುತ್ತಿದ್ದಳು. ಆರೋಪಿ ಶಿಕ್ಷಕ ಅವರನ್ನು ಕರೆದು ಪರೀಕ್ಷೆಯ ಟಿಪ್ಸ್ ಹಾಗೂ ನೋಟ್ಸ್ ನೀಡುವುದಾಗಿ ಹೇಳಿದ್ದಾನೆ.

    ಹುಡಗಿಯರು ಒಳಗೆ ಬರುತ್ತಿದ್ದಂತೆ ಬಾಗಿಲು ಹಾಕಲು ಪ್ರಯತ್ನಿಸಿದಾಗ ಸಂತ್ರಸ್ತ ಬಾಲಕಿಯನ್ನು ಬಿಟ್ಟು ಎಲ್ಲ ಹುಡುಗಿಯರು ತಪ್ಪಿಸಿಕೊಂಡಿದ್ದಾರೆ. ಆದರೆ, ಅಲ್ಲೆ ಉಳಿದುಕೊಂಡ ಬಾಲಕಿಯ ಮೇಲೆ ಶಿಕ್ಷಕ ಅತ್ಯಾಚಾರವೆಸಗಿದ್ದ. ನಂತರ ಮತ್ತೆರಡು ಬಾರಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಈ ವೇಳೆ ವಿಡಿಯೋ ಕೂಡ ಮಾಡಿಕೊಂಡಿದ್ದನು. ಅಲ್ಲದೇ ಯಾರಿಗಾದರೂ ಹೇಳಿದರೆ ನಿಮ್ಮ ತಂದೆ-ತಾಯಿಯರನ್ನು ಕೊಲೆ ಮಾಡುವುದಾಗಿ ಬೆದರಿಸಿದ್ದ.