Tag: ಬಾಲಕಿ

  • ಟಿವಿ ತೋರಿಸೋದಾಗಿ ಹೇಳಿ ಸಂಬಂಧಿಕನಿಂದಲೇ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ!

    ಟಿವಿ ತೋರಿಸೋದಾಗಿ ಹೇಳಿ ಸಂಬಂಧಿಕನಿಂದಲೇ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ!

    ಮೈಸೂರು: ಹೆಚ್.ಡಿ ಕೋಟೆಯ ಗ್ರಾಮವೊಂದರಲ್ಲಿ 11 ವರ್ಷದ ಬಾಲಕಿಯ ಮೇಲೆ ಸಂಬಂಧಿಕನೇ ಅತ್ಯಾಚಾರ ಮಾಡಿದ್ದಾನೆ..

    ಆರೋಪಿಯನ್ನು 25 ವರ್ಷದ ಚಂದ್ರಶೇಖರ್ ಎಂದು ಗುರುತಿಸಲಾಗಿದೆ. ಮೂಲತಃ ವಿಡಿಯೋಗ್ರಾಫರ್ ಆಗಿರುವ ಚಂದ್ರಶೇಖರ್ ಅತ್ಯಾಚಾರಕ್ಕೊಳಗಾದ ಬಾಲಕಿಯ ಸಂಬಂಧಿಕನಾಗಿದ್ದಾನೆ. ಈತ ಟಿವಿ ತೋರಿಸುವುದಾಗಿ ಹೇಳಿ ಬಾಲಕಿಯನ್ನು ತನ್ನ ಮನೆಗೆ ಕರೆದೊಯ್ದು ಅತ್ಯಾಚಾರ ಮಾಡಿದ್ದಾನೆ.

    ಸದ್ಯಕ್ಕೆ ನೊಂದ ಬಾಲಕಿಯು ಹೆಚ್.ಡಿ ಕೋಟೆಯ ಸರಕಾರಿ ಆಸ್ಪತ್ರೆಯ `ಗೆಳತಿ’ ವಿಶೇಷ ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈಗಾಗಲೇ ಚಂದ್ರಶೇಖರ್ ಅನ್ನು ಪೋಕ್ಸೋ ಕಾಯ್ದೆ ಅಡಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.

    ಈ ಸಂಬಂಧ ಹೆಚ್.ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನಿವೃತ್ತ ಲೆಫ್ಟಿನೆಂಟ್ ಕರ್ನಲ್‍ನಿಂದ ಬಾಲಕಿ ಮೇಲೆ ಲೈಂಗಿಕ ಕಿರುಕುಳ

    ನಿವೃತ್ತ ಲೆಫ್ಟಿನೆಂಟ್ ಕರ್ನಲ್‍ನಿಂದ ಬಾಲಕಿ ಮೇಲೆ ಲೈಂಗಿಕ ಕಿರುಕುಳ

    ನವದೆಹಲಿ: ಬಾಲಕಿ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪವೊಂದು ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಮೇಲೆ ಕೇಳಿ ಬಂದಿದೆ.

    70 ವರ್ಷದ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ದೆಹಲಿ ದ್ವಾರಕಾ ನಗರದ ಅಪಾರ್ಟ್‍ಮೆಂಟ್ ನಿವಾಸಿಯಾಗಿದ್ದಾನೆ. ಕಳೆದ ಜೂನ್ 11ರ ಸಂಜೆ ತನ್ನದೇ ಅಪಾರ್ಟ್‍ಮೆಂಟ್‍ನ ಲಿಫ್ಟ್‍ನಲ್ಲಿ 8 ವರ್ಷದ ಬಾಲಕಿ ಮೇಲೆ ಲೈಂಗಿಕ ಕಿರುಕುಳ. ಈ ಹಿನ್ನೆಲೆಯಲ್ಲಿ ಬುಧವಾರ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಘಟನೆ ನಡೆದ ನಂತರ ಬಾಲಕಿ ತನ್ನ ಮೇಲಾದ ದೌರ್ಜನ್ಯವನ್ನು ಪೋಷಕರ ಬಳಿ ಹೇಳಿಕೊಂಡಾಗ ವಿಷಯ ಬೆಳಕಿಗೆ ಬಂದಿದೆ. ಕೂಡಲೇ ಪೋಷಕರು ಆರೋಪಿಯನ್ನು ಬಂಧಿಸುವಂತೆ ಪೊಲೀಸರಿಗೆ ದೂರನ್ನು ನೀಡಿದ್ದಾರೆ.

    ತನಿಖೆ ವೇಳೆ ಆರೋಪಿಯು ಈ ಹಿಂದೆಯೂ ಕೂಡ ಇಂತಹುದೇ ಕೃತ್ಯ ಎಸಗಿದ್ದು, ಈ ಕುರಿತು ಅಪಾರ್ಟ್‍ಮೆಂಟ್‍ನ ನಿವಾಸಿಗಳು ದೂರು ನೀಡಿದ್ದಾರೆ. ಆದರೆ ಆರೋಪಿಯು ಸೇನೆಯ ಉನ್ನತ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಆದ್ದರಿಂದ ಸ್ಥಳೀಯ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

    ಆರೋಪಿ ಕಳೆದ ಹಲವು ದಿನಗಳಿಂದ ಒಬ್ಬಂಟಿಯಾಗಿ ಜೀವನ ಸಾಗಿಸುತ್ತಿದ್ದು, ಆತನ ಕುಟುಂಬವು ವಿದೇಶದಲ್ಲಿ ವಾಸವಾಗಿದ್ದಾರೆ ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ.

  • ನೀರೆಂದು ಥಿನ್ನರ್ ಕುಡಿದು 7 ವರ್ಷದ ಬಾಲಕಿ ಗಂಭೀರ!

    ನೀರೆಂದು ಥಿನ್ನರ್ ಕುಡಿದು 7 ವರ್ಷದ ಬಾಲಕಿ ಗಂಭೀರ!

    ಕಲಬುರಗಿ: ಮನೆಗೆ ಹಚ್ಚುವ ಪೇಂಟ್‍ನಲ್ಲಿ ಮಿಕ್ಸ್ ಮಾಡುವ ಥಿನ್ನರ್ ಅನ್ನು ಕುಡಿಯುವ ನೀರೆಂದು ತಿಳಿದು ಬಾಲಕಿಯೋರ್ವಳು ಕುಡಿದು ತೀವ್ರ ಅಸ್ವಸ್ಥಗೊಂಡಿರುವಂತಹ ಘಟನೆ ಜಿಲ್ಲೆಯ ಆಳಂದ ತಾಲೂಕಿನ ಲಿಂಗನವಾಡಿ ಗ್ರಾಮದಲ್ಲಿ ನಡೆದಿದೆ.

    7 ವರ್ಷದ ಬಾಲಕಿ ಸೌಮ್ಯ ಅಸ್ವಸ್ಥಗೊಂಡು ಕಲಬುರಗಿಯ ಬಸವೇಶ್ಬರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಮೂರು ದಿನಗಳ ಹಿಂದೆ ಬಾಲಕಿ ತಂದೆ ರೇವಣಸಿದ್ದಪ್ಪರು ಮನೆಗೆ ಪೇಂಟಿಂಗ್ ಮಾಡಿಸಲು ನಗರಕ್ಕೆ ಬಂದು ಪೇಂಟ್, ಪೆಂಟ್ ಬ್ರಷ್, ಥಿನ್ನರ್ ಸೇರಿದಂತೆ ಇನ್ನಿತರ ಸಾಮಾಗ್ರಿಗಳನ್ನ ಮನೆಗೆ ತಂದಿದ್ದಾರೆ.

    ಈ ವೇಳೆ ಮಗಳು ಸೌಮ್ಯ ಅಪ್ಪನ ಬಳಿ ಬಂದು ನನಗೇ ಏನು ತಿನ್ನಲು ತಂದಿದಿಯಾ ಅಂತಾ ಕೇಳಿದ್ದಾಳೆ. ಆಗ ಅಪ್ಪ ಮಗಳನ್ನ ನಾ ಏನೂ ತಂದಿಲ್ಲ ಅಂತಾ ಹೇಳಿ ಹೊರಗಡೆ ಹೋಗಿದ್ದಾರೆ. ಇದೇ ಸಂದರ್ಭದಲ್ಲಿ ಬಾಲಕಿಯು ಅಪ್ಪ ತಂದಿಟ್ಟಿದ್ದ ಬ್ಯಾಗ್ ತೆರೆದು ನೋಡಿದ್ದಾಳೆ. ಬ್ಯಾಗ್‍ನಲ್ಲಿದ್ದ ಥಿನ್ನರ್ ಬಾಟಲನ್ನು ಕುಡಿಯುವ ನೀರಿನ ಬಾಟಲ್ ಅಂತಾ ತಿಳಿದು ಗಳಗಳನೆ ಕುಡಿದಿದ್ದಾಳೆ.

    ಪರಿಣಾಮ ಬಾಲಕಿಯ ಮುಖವೆಲ್ಲ ವಿಚಿತ್ರವಾಗಿ ಊದಿಕೊಂಡಿದೆ. ಸದ್ಯ ಬಾಲಕಿಯು ಗಂಭೀರವಾಗಿ ಅಸ್ವಸ್ಥಗೊಂಡಿದ್ದು ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾಳೆ.

  • ಬಾಲಕಿಯನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರವೆಸಗಿ ವಿಷವುಣಿಸಿ ಕೊಂದ್ರು!

    ಬಾಲಕಿಯನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರವೆಸಗಿ ವಿಷವುಣಿಸಿ ಕೊಂದ್ರು!

    ಚಂಡೀಗಢ: ಆಪ್ರಾಪ್ತ ಬಾಲಕಿಯನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರ ನಡೆಸಿ ಆಕೆಗೆ ವಿಷವುಣಿಸಿ ಹತ್ಯೆ ಮಾಡಿದ ಅಮಾನವೀಯ ಘಟನೆ ಹರಿಯಾಣ ರಾಜ್ಯದ ಪತೇಹಬಾದ್ ಜಿಲ್ಲೆಯಲ್ಲಿ ನಡೆದಿದೆ.

    10ನೇ ತರಗತಿ ಓದುತ್ತಿದ್ದ ಅಪ್ರಾಪ್ತ ಬಾಲಕಿ ತನ್ನ ಪೋಷಕರೊಂದಿಗೆ ಬಟ್ಟು ಕಾಳನ್ ಬ್ಲಾಕ್‍ನ ಮನೆಯಲ್ಲಿ ವಾಸವಾಗಿದ್ದಳು. ಮಂಗಳವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮೂವರು ಯುವಕರು ಆಕೆಯನ್ನು ಮನೆಯಿಂದಲೇ ಅಪಹರಿಸಿದ್ದಾರೆ. ನಂತರ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಈ ವೇಳೆ ಆರೋಪಿಗಳು ಬಾಲಕಿಗೆ ವಿಷವುಣಿಸಿದ್ದಾರೆ. ಸಂಜೆ ವೇಳೆ ಆಕೆಯನ್ನು ಮನೆಯ ಹತ್ತಿರ ಬಿಟ್ಟು, ಪೋಷಕರಿಗೆ ಬಾಲಕಿಯು ಹುಷಾರಿಲ್ಲದ ಕಾರಣ ಔಷಧಿಯನ್ನು ಕೊಡಿಸಿದ್ದೇವೆಂದು ತಿಳಿಸಿ ಹೋಗಿದ್ದಾರೆ.

     

    ಬಾಲಕಿಯ ಆರೋಗ್ಯ ತೀವ್ರವಾಗಿ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಪೋಷಕರು ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪರೀಕ್ಷೆ ನಡೆಸಿದ ವೈದ್ಯರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ವಿಷ ಹಾಕಿದ್ದಾರೆ ಎಂದು ತಿಳಿಸಿದ್ದಾರೆ. ಈ ವೇಳೆ ಬಾಲಕಿಯು ನಡೆದ ಘಟನೆಯನ್ನು ವಿವರಿಸಿದ್ದಾಳೆ. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಬಾಲಕಿ ಮೃತಪಟ್ಟಿದ್ದಾಳೆ.

    ಈ ಕುರಿತು ಪೋಷಕರು ಮೂವರ ವಿರುದ್ಧ ದೂರನ್ನು ನೀಡಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಇಬ್ಬರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಒಬ್ಬ ಅಪ್ರಾಪ್ತ ಬಾಲಕ ಆರೋಪಿಯು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಅವನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ಸದ್ಯ ಆರೋಪಿಯು ಪ್ರಾಣಪಾಯದಿಂದ ಪಾರಾಗಿದ್ದು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಪ್ರಕರಣ ಕುರಿತು ಬುಧವಾರ ಮಾತನಾಡಿದ ಡಿಸಿಪಿ ಗುದ್ರ್ಯಾಲ್ ಸಿಂಗ್‍ರವರು, ಮೂವರು ಆರೋಪಿಗಳು ಸ್ಥಳೀಯ ನಿವಾಸಿಗಳಾಗಿದ್ದು, ಆರೋಪಿಗಳ ಗುರುತು ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ. ಮೂವರ ವಿರುದ್ಧ ಪೋಕ್ಸೋ ಕಾಯ್ದೆ ಹಾಗೂ ಕೊಲೆ ಆರೋಪ ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದೇವೆ. ಶೀಘ್ರವೇ ಉಳಿದ ಆರೋಪಿಗಳನ್ನು ಬಂಧಿಸುವುದಾಗಿ ಮಾಹಿತಿ ನೀಡಿದ್ದಾರೆ.

  • 1 ಗಂಟೆಗೂ ಹೆಚ್ಚು ಕಾಲ ನೀರಿನ ಮೇಲೆ ಕದಲದೆ ತೇಲಾಡುವ 4 ವರ್ಷದ ಪೋರಿ..!

    1 ಗಂಟೆಗೂ ಹೆಚ್ಚು ಕಾಲ ನೀರಿನ ಮೇಲೆ ಕದಲದೆ ತೇಲಾಡುವ 4 ವರ್ಷದ ಪೋರಿ..!

    ಚಿಕ್ಕಬಳ್ಳಾಪುರ: ನೀರಿನ ಮೇಲೆ ತೇಲಾಡೋಕೆ ಸಾಧ್ಯ ಅನ್ನೋದಾದರೂ ಅದೊಂದು ಕಠಿಣ ಅಭ್ಯಾಸ, ನಿರಂತರ ಪರಿಶ್ರಮದಿಂದಷ್ಟೇ ಅದು ಸಾಧ್ಯ. ಆದರೆ ಸತತ ಯೋಗಭ್ಯಾಸದ ಮೂಲಕ ಕೇವಲ 4 ವರ್ಷದ 8 ತಿಂಗಳ ಪುಟಾಣಿ ಪೋರಿಯೊಬ್ಬಳು ಕೇವಲ 30 ದಿನದಲ್ಲೇ, ನೀರಿನ ಮೇಲೆ ನಿರಾಯಾಸವಾಗಿ ತೇಲಾಡುವ ಮೂಲಕ ಎಲ್ಲರನ್ನ ಹುಬ್ಬೇರಿಸುವಂತೆ ಮಾಡಿದ್ದಾಳೆ.

    ಪುಟಾಣಿಯ ಹೆಸರು ಅದಿತಿ. ವಯಸ್ಸು ಕೇವಲ 4 ವರ್ಷದ 8 ತಿಂಗಳು. ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ರಾಮು-ಅನುಷಾ ದಂಪತಿಯ ಮಗಳು. ತಂದೆ ರಾಮು ಕಂಪೆನಿಯೊಂದರಲ್ಲಿ ಎಚ್.ಆರ್. ಆಗಿದ್ದು, ತಾಯಿ ಅನುಷಾ ಬ್ಯಾಂಕ್ ಎಂಪ್ಲಾಯ್ ಆಗಿ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಆದರೆ ಬೇಸಿಗೆ ರಜೆಗೆ ಅಂತ ಅಜ್ಜಿ ಮನೆಗೆ ಬಂದಿದ್ದ ಈ ಅದಿತಿ ಕೇವಲ ಒಂದೇ ತಿಂಗಳಲ್ಲಿ ಈಜುವ ಕಲೆಯನ್ನ ಕರಗತ ಮಾಡಿಕೊಂಡಿದ್ದಾಳೆ.

    ಚಿಂತಾಮಣಿ ನಗರದ ಯೋಗ ಗುರು ಗೋವಿಂದ್ ಬಳಿ ಕೇವಲ ಒಂದೇ ತಿಂಗಳಲ್ಲಿ ಕಠಿಣ ಪರಿಶ್ರಮದಿಂದ ಈಜುವ ಕಲೆಯನ್ನು ಕಲಿತ್ತಿದ್ದಾಳೆ. ಜೊತೆಗೆ ಯೋಗಾಭ್ಯಾಸದ ಮೂಲಕ ಕಠಿಣವಾದ ನೀರಿನ ಮೇಲೆ ತೇಲಾಡುವ ಶವಾಸಾನ ಭಂಗಿಯನ್ನ ಕಲಿತು ಎಲ್ಲರನ್ನ ಹುಬ್ಬೇರಿಸುವಂತೆ ಮಾಡಿದ್ದಾಳೆ. ಸುಮಾರು 30 ಅಡಿ ಆಳದ ಬೃಹಾದಾಕರಾದ ಬಾವಿಯಲ್ಲಿ ಯಾವುದೇ ಆಳಕು ಅಂಜಿಕೆಯಿಲ್ಲದೆ, ಒಂದು ಚೂರು ಅಲುಗಾಡದೆ, ಕದಲದೆ ನೀರಿನ ಮೇಲೆ ತೇಲಾಡುತ್ತಾಳೆ. ಮತ್ತೊಂದೆಡೆ ಬಾವಿಯ ಶೆಡ್ ನ ಮೇಲಿಂದ ಡೈ ಹೊಡಿತಾಳೆ.

    ಎಲ್ಲ ಮಕ್ಕಳಿಗಿಂತ ಬಹುಬೇಗ ಈಜು ಕಲಿತ ಅದಿತಿ, ಬ್ಯಾಕ್ ಸ್ವಿಮ್ಮಿಂಗ್, ಪ್ಲೋಟಿಂಗ್, ಹೈಟ್ ಜಂಪಿಂಗ್ ಸೇರಿದಂತೆ ಈಜಿನಲ್ಲಿ ನಾನಾ ಭಂಗಿಗಳನ್ನ ಪ್ರದರ್ಶಿಸುವ ಮೂಲಕ ಗಮನ ಸೆಳೆಯುತ್ತಿದ್ದಾಳೆ. ಹೀಗಾಗಿ ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಯ ತೇಲಾಡುವ ಮೂಲಕ ಅದಿತಿ ಲಿಮ್ಕಾ ಸಾಧನೆ ಮಾಡಲಿದ್ದಾಳೆ ಎಂದು ಈಜು-ಯೋಗ ಗುರು ಗೋವಿಂದ್ ಹೇಳಿದ್ದಾರೆ.

  • 4ರ ಬಾಲಕಿಯನ್ನ ರೇಪ್ ಮಾಡಿ, ಕೊಂದು ಡ್ರಮ್ ನಲ್ಲಿ ತುಂಬಿಸಿದ!

    4ರ ಬಾಲಕಿಯನ್ನ ರೇಪ್ ಮಾಡಿ, ಕೊಂದು ಡ್ರಮ್ ನಲ್ಲಿ ತುಂಬಿಸಿದ!

    ಚಂಡೀಗಢ: ನಾಲ್ಕು ವರ್ಷದ ಬಾಲಕಿಯನ್ನು ಅತ್ಯಾಚಾರಗೈದು ಕೊಲೆ ಮಾಡಿರುವ ಅಮಾನವೀಯ ಘಟನೆಯೊಂದು ಹರಿಯಾಣ ರಾಜ್ಯದ ಫರಿದಾಬಾದ್ ಜಿಲ್ಲೆಯಲ್ಲಿ ನಡೆದಿದೆ.

    ರಾಜಧಾನಿ ನವದೆಹಲಿಯಿಂದ ಸುಮಾರು 80 ಕಿ.ಮೀ. ದೂರದಲ್ಲಿರುವ ಫರಿದಾಬಾದ್ ಪಾಲ್ವಾಲ್ನ ಅಸೋತಿ ಗ್ರಾಮದಲ್ಲಿ ಘಟನೆ ಈ ನಡೆದಿದೆ. ಆರೋಪಿ 24 ವರ್ಷದ ಬಾಲು ಅಲಿಯಾಸ್ ವೀರೇಂದ್ರ ಕಳೆದ ಒಂಬತ್ತು ವರ್ಷಗಳಿಂದ ಬಾಲಕಿಯ ತಂದೆಯ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದನು. ಗುರುವಾರ ಮಧ್ಯಾಹ್ನ ವೀರೇಂದ್ರ ಅಂಗಡಿಯಲ್ಲಿ ಕುಳಿತಿದ್ದ ಬಾಲಕಿಯನ್ನು ಕರೆದುಕೊಂಡು ಹೋಗಿ ಅತ್ಯಾಚಾರ ಎಸೆಗಿ ಕೊಲೆ ಮಾಡಿದ್ದಾನೆ.

    ಬಾಲಕಿಯನ್ನು ಕೊಂದು ಅಂಗಡಿ ಸೇರಿಕೊಂಡ ಆರೋಪಿ ವೀರೇಂದ್ರ ತನಗೆ ಏನು ಗೊತ್ತಿಲ್ಲವೆಂಬಂತೆ ಇದ್ದನು. ಸಂಜೆ ವೇಳೆ ಬಾಲಕಿ ಕಾಣದಿದ್ದಾಗ ಪೋಷಕರ ಜೊತೆಯಲ್ಲಿಯೇ ವೀರೇಂದ್ರ ಆಕೆಯನ್ನು ಹುಡುಕಿದಂತೆ ನಟಿಸಿದ್ದನು. ಆದ್ರೆ ನೆರೆಯ ವ್ಯಕ್ತಿಯೊಬ್ಬರು ಕೊನೆಯ ಬಾರಿ ಬಾಲಕಿ ವೀರೇಂದ್ರ ಜೊತೆ ಹೋಗಿರೋದನ್ನು ಗಮನಿಸಿ ಪೋಷಕರಿಗೆ ವಿಷಯ ತಿಳಿಸಿದ್ದರು.

    ವಿಷಯ ತಿಳಿದು ಆರೋಪಿ ವೀರೇಂದ್ರನ ಮನೆಯನ್ನು ಪರಿಶೀಲಿಸಿದಾಗ ಬಾಲಕಿಯ ಶವ ಡ್ರಮ್ ನಲ್ಲಿ ಪತ್ತೆಯಾಗಿದೆ. ನಾವು ಮಗಳನ್ನು ಹುಡುಕಲು ಆರಂಭಿಸಿದಾಗ ನಮ್ಮ ಜೊತೆ ಬಂದು ಹುಡುಕಿದಂತೆ ನಾಟಕ ಮಾಡಿದ್ದನು. ನಾವು ಮನೆಯ ಬಾಗಿಲನ್ನು ತೆಗೆಯುವಂತೆ ಹೇಳಿದ್ರೂ ಆತ ಬಹಳ ಸಮಯದವರೆಗೆ ತೆಗೆದಿರಲಿಲ್ಲ ಎಂದು ಬಾಲಕಿಯ ತಂದೆ ಹೇಳಿದ್ದಾರೆ.

    ಆರೋಪಿಯನ್ನು ಮರಣದಂಡನೆಗೆ ಗುರಿಪಡಿಸಬೇಕು. ಆತ ನನ್ನ ಮುದ್ದು ಮಗಳೊಂದಿಗೆ ಕ್ರೂರವಾಗಿ ವರ್ತಿಸಿದ್ದಾನೆ. ನಾವು ನಮ್ಮ ಮಗಳನ್ನು ಕಳೆದುಕೊಂಡಿದ್ದೇವೆ, ನಮಗೆ ನ್ಯಾಯ ಒದಗಿಸಿಕೊಡಬೇಕೆಂದು ಬಾಲಕಿಯ ತಾಯಿ ಮನವಿ ಮಾಡಿಕೊಂಡಿದ್ದಾರೆ.

    ಆರೋಪಿಯ ವಿರುದ್ಧ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಿದ್ದೇವೆ. ನಂತರ ಮೂರು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಸಿಸಿಟಿವಿ ತುಣುಕಗಳನ್ನು, ರಕ್ತದ ಕಲೆಗಳನ್ನು ಮತ್ತು ಪ್ರತ್ಯಕ್ಷದರ್ಶಿ ಹೇಳಿಕೆಗಳನ್ನು ಸಂಗ್ರಹಿಸಿ ತನಿಖೆ ಮಾಡುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿ ದೇವೇಂದರ್ ಸಿಂಗ್ ಹೇಳಿದರು.

  • 13 ವರ್ಷದ ಬಾಲಕಿಯನ್ನ ಮೂರು ತಿಂಗಳ ಗರ್ಭಿಣಿಯನ್ನಾಗಿಸಿದ 45ರ ಕಾಮುಕ

    13 ವರ್ಷದ ಬಾಲಕಿಯನ್ನ ಮೂರು ತಿಂಗಳ ಗರ್ಭಿಣಿಯನ್ನಾಗಿಸಿದ 45ರ ಕಾಮುಕ

    ಕೋಲಾರ: 45 ವರ್ಷದ ಕಾಮುಕನೊಬ್ಬ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸೆಗಿರುವ ಘಟನೆ ಜಿಲ್ಲೆಯ ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    45 ವರ್ಷದ ಗೋವಿಂದಪ್ಪ ಅತ್ಯಾಚಾರಗೈದ ಆರೋಪಿ. ಬಾಲಕಿಯ ಮೇಲೆ ಮೂರು ತಿಂಗಳ ಹಿಂದೆಯೇ ಅತ್ಯಾಚಾರ ನಡೆದಿದೆ. ಆದರೆ ಮನೆಯಲ್ಲಿ ಯಾರಿಗಾದ್ರೂ ಅತ್ಯಾಚಾರದ ವಿಷಯ ತಿಳಿಸಿದ್ರೆ ನಿನ್ನನ್ನು ಹಾಗು ಕುಟುಂಬಸ್ಥರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದನು. ಶುಕ್ರವಾರ ಅನಾರೋಗ್ಯವೆಂದು ಪೋಷಕರು ಬಾಲಕಿಯನ್ನು ವೈದ್ಯರ ಬಳಿ ಕರೆದುಕೊಂಡು ಹೋಗಿದ್ರು.

    ಬಾಲಕಿಯನ್ನು ತಪಾಸಣೆ ನಡೆಸಿದಾಗ ಆಕೆ ಮೂರು ತಿಂಗಳು ಗರ್ಭಿಣಿ ಎಂಬ ವಿಚಾರ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ರಾತ್ರಿಯೇ ಬಾಲಕಿಯ ಪೋಷಕರು ಠಾಣೆಯಲ್ಲಿ ದೂರು ದಾಖಲಿಸಿದ್ರೂ, ಪೊಲೀಸರು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ನಾವು ದಲಿತರೆಂದು ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಲಾಗ್ತಿದೆ ಎಂದು ಬಾಲಕಿಯ ಪೋಷಕರು ಆರೋಪಿಸುತ್ತಿದ್ದಾರೆ.

  • ಸ್ಲೈಡರ್ ಕಿಟಕಿ ಮೂಲಕ 8ನೇ ಮಹಡಿಯಿಂದ ಕೆಳಗೆ ಬಿದ್ದು ಬಾಲಕಿ ದುರ್ಮರಣ

    ಸ್ಲೈಡರ್ ಕಿಟಕಿ ಮೂಲಕ 8ನೇ ಮಹಡಿಯಿಂದ ಕೆಳಗೆ ಬಿದ್ದು ಬಾಲಕಿ ದುರ್ಮರಣ

    ಮಂಗಳೂರು: ಎಂಟನೇ ಮಹಡಿಯಿಂದ ಕೆಳಗೆ ಬಿದ್ದು ಬಾಲಕಿ ಮೃತಪಟ್ಟಿರುವ ಘಟನೆ ಮಂಗಳೂರಿನ ಶಕ್ತಿನಗರದಲ್ಲಿ ನಡೆದಿದೆ.

    ಶಾನೆಲ್ ಜೆನಿಶೀಯಾ ಡಿಸೋಜಾ (5) ಮೃತ ದುರ್ದೈವಿ. ವಿಲ್ಸನ್ ಮತ್ತು ಆಲಿತಾ ದಂಪತಿಯ ಮಗು ಶಾನೆಲ್. ಇವರು ಶಕ್ತಿನಗರದ ಫ್ಲಾಟ್ ನ ಎಂಟನೇ ಮಹಡಿಯಲ್ಲಿ ವಾಸವಿದ್ದರು. ಇಂದು ಬಾಲಕಿ ಡಿಸೋಜಾ ಸ್ಲೈಡರ್ ಕಿಟಕಿ ಮೂಲಕ ಕೆಳಗೆ ಇಣುಕಿದ್ದಾಳೆ. ಆಗ ಆಯತಪ್ಪಿ ಎಂಟನೇ ಮಹಡಿಯಿಂದ ಕೆಳಗೆ ಬಿದ್ದು ಬಾಲಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.

    ಈ ಘಟನೆ ಕಂಕನಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಿಟಕಿಗೆ ರಾಡ್ ಅಳವಡಿಸದೇ ಇರುವುದರಿಂದ ಈ ಅನಾಹುತ ಸಂಭವಿಸಿದೆ.

  • ರಂಜಾನ್ ಔತಣಕ್ಕೆ ತನ್ನ ಹುಂಜ ಕೊಡಲ್ಲ ಎಂದ ಬಾಲಕಿ – ವಿಡಿಯೋ ವೈರಲ್

    ರಂಜಾನ್ ಔತಣಕ್ಕೆ ತನ್ನ ಹುಂಜ ಕೊಡಲ್ಲ ಎಂದ ಬಾಲಕಿ – ವಿಡಿಯೋ ವೈರಲ್

    ತಿರುವನಂತಪುರಂ: ರಂಜಾನ್ ಹಬ್ಬ ಔತಣ ಕೂಟಕ್ಕೆ ಮನೆಯಲ್ಲಿ ಸಾಕಿದ್ದ ಕೋಳಿ ಹುಂಜವನ್ನು ನೀಡುವುದಿಲ್ಲ ಎಂದು ಬಾಲಕಿಯೊಬ್ಬಳು ಪೋಷಕರ ಮನವೊಲಿಸಲು ಮುಂದಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲೆಡೆ ಬಾಲಕಿಯ ಮುಗ್ಧತೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಸದ್ಯ ಬಾಲಕಿಯ ವಿಡಿಯೋವನ್ನು ಸ್ಥಳೀಯ ಶಾಸಕರೊಬ್ಬರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದು, ವಿಡಿಯೋ ಪೋಸ್ಟ್ ಆದ ಕೆಲ ಕ್ಷಣಗಳಲ್ಲೇ 38 ಸಾವಿರಕ್ಕೂ ಹೆಚ್ಚು ಮಂದಿ ನೋಡಿದ್ದಾರೆ.

    ಬಾಲಕಿ ವಿಡಿಯೋ ದಲ್ಲಿ ತಾನೇ ನಿತ್ಯ ಆಹಾರ ನೀಡಿ ಸಾಕಿದ ಕೋಳಿಯನ್ನು ಕತ್ತರಿಸುವುದು ಪಾಪದ ಕೆಲಸ ಅಲ್ಲವೇ ಎಂದು ಮನೆ ಮಂದಿಯನ್ನು ಪ್ರಶ್ನಿಸಿ ಮುಗ್ಧತೆ ಪ್ರದರ್ಶಿಸಿದ್ದಾಳೆ. ಈ ವೇಳೆ ಮನೆಯವರು ಕೋಳಿ ಹುಂಜವನನ್ನು ಇಟ್ಟು ಕೊಂಡು ಏನು ಮಾಡುವುದು ಎಂದು ಪ್ರಶ್ನಿಸಿದಕ್ಕೆ ತನಗೆ ಈ ಕುರಿತು ಗೊತ್ತಿಲ್ಲಾ ಬೇರೆ ಯಾರಿಗಾದರು ಕೊಟ್ಟು ಬಿಡಿ. ಅವರು ಏನು ಮಾಡಿದರು ತನಗೆ ತಿಳಿಯುವುದಿಲ್ಲ ಎಂದು ಹೇಳಿದ್ದಾಳೆ.

    https://www.facebook.com/drktjaleelonline/videos/912356418947176/

    ಈ ವೇಳೆ ಬಾಲಕಿಯ ಮನವೊಲಿಸಲು ಮುಂದಾಗಿದ್ದ ಪೋಷಕರು ಈ ಹಿಂದೆ ಬೆಕ್ಕು ಕೋಳಿಯನ್ನು ತೆಗೆದುಕೊಂದು ಹೋದಾಗ ನಿನಗೆ ಏನಾಗಿತ್ತು ಎಂದು ಕೇಳಿದ್ದು, ಇದಕ್ಕೂ ತನ್ನ ಅಳು ಮೊಗದ ಮೂಲವೇ ಉತ್ತರಿಸಿರುವ ಬಾಲಕಿ ಅದನ್ನು ನಾನು ಸಾಕಿಲ್ಲ. ಆ ಕೋಳಿ ಮನೆ ಬಿಟ್ಟು ಊರು ಸುತ್ತಾಡಲು ಹೋಗುತ್ತಿತ್ತು. ಆದರೆ ಈ ಕೋಳಿ ಪ್ರತಿದಿನ ನಮ್ಮನ್ನು ಬೆಳಗ್ಗೆ ನಿದ್ದೆಯಿಂದ ಎಚ್ಚರಗೊಳಿಸುತ್ತದೆ. ಕೋಳಿ ಎಚ್ಚರಗೊಳಿಸದಿದ್ದರೆ ನಾವು ಬೇಗ ಏಳಲು ಸಾಧ್ಯವಾಗುತ್ತಿರಲಿಲ್ಲ ಎಂಬ ಸಮರ್ಥನೆಯನ್ನು ಮುಂದಿಟ್ಟಿದ್ದಾಳೆ.

    ಕೇರಳ ಶಾಸಕರು ಪೋಸ್ಟ್ ಮಾಡಿರುವ ಈ ವಿಡಿಯೋವನ್ನು 1 ಸಾವಿರ ಮಂದಿ ಶೇರ್ ಮಾಡಿದ್ದು, 1 ಸಾವಿರಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ.

  • ನೀರುಪಾಲಾದ ಬಾಲೆ ಶವವಾಗಿ ಪತ್ತೆ – ಮುಗಿಲುಮುಟ್ಟಿದ ಹೆತ್ತವರ ಆಕ್ರಂದನ

    ನೀರುಪಾಲಾದ ಬಾಲೆ ಶವವಾಗಿ ಪತ್ತೆ – ಮುಗಿಲುಮುಟ್ಟಿದ ಹೆತ್ತವರ ಆಕ್ರಂದನ

    ಉಡುಪಿ: ಮಂಗಳವಾರ ಸಂಜೆ ಮಳೆಯ ಹೊಡೆತಕ್ಕೆ ನೀರುಪಾಲಾದ ಬಾಲಕಿಯ ಮೃತದೇಹ ಇಂದು ಉಡುಪಿ ಜಿಲ್ಲೆ ಕಾಪು ತಾಲೂಕಿನ ಪಡುಬಿದ್ರೆಯಲ್ಲಿ ಪತ್ತೆಯಾಗಿದೆ.

    ನಿಧಿ ಆಚಾರ್ಯ(9) ನೀರುಪಾಲಾಗಿದ್ದ ಬಾಲಕಿಯಾಗಿದ್ದು, ಘಟನಾ ಸ್ಥಳದಿಂದ 100 ಮೀ ದೂರದಲ್ಲಿ ನಿಧಿ ಮೃತದೇಹ ಪತ್ತೆಯಾಗಿದೆ. 4ನೇ ವಿದ್ಯಾರ್ಥಿನಿ ನಿಧಿ ಆಚಾರ್ಯ ನೀರುಪಾಲಾಗಿದ್ದಳು. ಕಳೆದ ರಾತ್ರಿ ಅಗ್ನಿಶಾಮಕ, ಪೊಲೀಸರು, ಸ್ಥಳೀಯರು ಕಾರ್ಯಾಚರಣೆ ಮಾಡಿದ್ದರು. ಆದರೆ ಬಾಲಕಿ ನಿಧಿ ಪತ್ತೆಯಾಗಿರಲಿಲ್ಲ.

    ಇದೀಗ ಇಂದು ಘಟನಾ ಸ್ಥಳದಿಂದ 100 ಮೀ ದೂರದಲ್ಲಿ ನಿಧಿ ಮೃತದೇಹ ಪತ್ತೆಯಾಗಿದೆ. ಎನ್‍ಡಿಆರ್ ಎಫ್ ಅಧಿಕಾರಿಗಳು ಬಂದು ಶೋಧ ಕಾರ್ಯ ಆರಂಭದಲ್ಲೇ ಮೃತದೇಹ ಸಿಕ್ಕಿದೆ. ಎನ್‍ಡಿಆರ್ ಎಫ್ ಜೊತೆ ಸ್ಥಳೀಯ ಮನೋಹರ್ ಎಂಬವರೂ ಬೋಟ್ ನಲ್ಲಿ ತೆರಳಿದ್ದರು.

    ನಿಧಿ ಮೃತದೇಹವನ್ನು ಮನೋಹರ್ ಮೊದಲು ಪತ್ತೆ ಮಾಡಿದರು. ಘಟನೆ ನಡೆದು ಸುಮಾರು 16 ಗಂಟೆಗಳ ಬಳಿಕ ಮೃತದೇಹ ಪತ್ತೆಯಾಗಿದೆ. ಸ್ಕೂಲ್ ಬ್ಯಾಗ್, ಜಾಕೆಟ್ ಕೂಡಾ ಸ್ಥಳದಲ್ಲೇ ಸಿಕ್ಕಿದೆ. ಕಳೆದ ರಾತ್ರಿ ಸೈಕಲ್ ಪತ್ತೆಯಾಗಿತ್ತು. ಈ ಸಂಬಂಧ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಾಲಕಿ ಮೃತದೇಹವನ್ನು ಪಡುಬಿದ್ರೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

    ಮಂಗಳವಾರ ಸಂಜೆ ನಿಧಿ ಕೃತಕ ನೆರೆಗೆ ನೀರು ಪಾಲಾಗಿದ್ದು, ಶಾಲೆ ಬಿಟ್ಟು ಮನೆಗೆ ತೆರಳುವ ವೇಳೆ ಈ ಘಟನೆ ಸಂಭವಿಸಿತ್ತು.