Tag: ಬಾಲಕಿ

  • ತಂದೆಯಿಂದಲೇ ಅಪ್ರಾಪ್ತೆಯ ಮೇಲೆ ರೇಪ್: 13 ವಾರಗಳ ಭ್ರೂಣ ತೆಗೆಯಲು ಅನುಮತಿ

    ತಂದೆಯಿಂದಲೇ ಅಪ್ರಾಪ್ತೆಯ ಮೇಲೆ ರೇಪ್: 13 ವಾರಗಳ ಭ್ರೂಣ ತೆಗೆಯಲು ಅನುಮತಿ

    ಲಕ್ನೋ: ತಂದೆಯಿಂದಲೇ ಅತ್ಯಾಚಾರಕ್ಕೊಳಗಾದ ಅಪ್ರಾಪ್ತ ಬಾಲಕಿಯ ಹೊಟ್ಟೆಯಲ್ಲಿ ಬೆಳೆಯುತ್ತಿರುವ 13 ವಾರಗಳ ಭ್ರೂಣವನ್ನು ತೆಗೆಸಲು ಪೋಕ್ಸೋ ಕೋರ್ಟ್ ಶನಿವಾರ ಅನುಮತಿ ನೀಡಿದೆ.

    ಆಕೆ ಹಲವು ಬಾರಿ ತಂದೆಯಿಂದ ಅತ್ಯಾಚಾರಕ್ಕೆ ಒಳಗಾಗಿದ್ದಳು. ಬಾಲಕಿಯ ತಾಯಿ ದೂರು ನೀಡಿದ ಆಧಾರದ ಮೇಲೆ ಆಗಸ್ಟ್ 8 ರಂದು ತಂದೆಯ ವಿರುದ್ಧ ಎಫ್‍ಐ ಆರ್ ದಾಖಲಿಸಿಕೊಂಡು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

    ಮಧ್ಯಂತರ ತೀರ್ಪಿನಲ್ಲಿ ನ್ಯಾಯಾಧೀಶರಾದ ವಿವೇಕಾನಂದ್ ಸರನ್ ತ್ರಿಪಾಠಿ ಈ ಪ್ರಕರಣದ ಬಗ್ಗೆ ತನಿಖೆ ನಡೆಸಬೇಕೆಂದು ಆರೋಗ್ಯ ಅಧಿಕಾರಿಗಳಿಗೆ ತಿಳಿಸಿದ್ದು ಹಾಗೂ ಡಿಎನ್‍ಎ ಮಾದರಿಯನ್ನು ಮತ್ತು ಭ್ರೂಣವನ್ನು ಸಂರಕ್ಷಿಸಬೇಕೆಂದು ಆದೇಶಿಸಿದ್ದಾರೆ.

    ಅಷ್ಟೇ ಅಲ್ಲದೇ ಮಥುರಾ ಜಿಲ್ಲಾ ನ್ಯಾಯಾಲಯ 1 ತಿಂಗಳೊಳಗೆ ನೊಂದ ಅಪ್ರಾಪ್ತ ಬಾಲಕಿಯ ಕುಟುಂಬಕ್ಕೆ 2 ಲಕ್ಷ ರೂ. ಹಣ ನೀಡಬೇಕೆಂದು ತನ್ನ ಮಧ್ಯಂತರ ಆದೇಶದಲ್ಲಿ ಕೋರ್ಟ್ ಸೂಚಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 11ರ ಬಾಲಕಿಯನ್ನು ರೇಪ್ ಮಾಡಿ ಫೋಟೋ ತೆಗ್ದು, ಬ್ಲಾಕ್ ಮೇಲ್ ಮಾಡಿದ್ರು!

    11ರ ಬಾಲಕಿಯನ್ನು ರೇಪ್ ಮಾಡಿ ಫೋಟೋ ತೆಗ್ದು, ಬ್ಲಾಕ್ ಮೇಲ್ ಮಾಡಿದ್ರು!

    ಲಕ್ನೋ: ಮದರಸಾದ ಮ್ಯಾನೇಜರ್ ಹಾಗೂ 5 ಮಂದಿ ಸೇರಿ 11 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಪ್ರಕರಣವೊಂದು ಉತ್ತರಪ್ರದೇಶದ ಘೋಸಿ ಪ್ರದೇಶದಲ್ಲಿ ನಡೆದಿರುವ ಬಗ್ಗೆ ತಡವಾಗಿ ಬೆಳಕಿಗೆ ಬಂದಿದೆ.

    ಆಗಸ್ಟ್ 4ರಂದು ಮದರಸಾದ ಮ್ಯಾನಜರ್ ಹಾಗೂ 4 ಮಂದಿ ಸೇರಿ ಅಪ್ರಾಪ್ತ ಬಾಲಕಿಯನ್ನು ಒಂದು ಕೋಣೆಯೊಳಗೆ ಕೂಡಿ ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯ ಬಂಧನವಾಗಿದೆ. ಉಳಿದ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರುಗಳ ಪತ್ತೆಗೆ ಬಲೆ ಬೀಸಲಾಗಿದೆ ಅಂತ ಸಂತ್ರಸ್ತೆಯ ತಾಯಿ ಹೇಳಿದ್ದಾರೆ.

    ಅತ್ಯಾಚಾರವೆಸಗಿದ ಬಳಿಕ ಆರೋಪಿಗಳು ಈ ಕುರಿತು ಪೊಲೀಸರಿಗೆ ದೂರು ಕೊಡದಂತೆ ಬೆದರಿಕೆ ಹಾಕಿದ್ದಾರೆ. ಅಲ್ಲದೇ ಅವರು ಬಾಲಕಿಯ ಅಸಭ್ಯ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಬ್ಲಾಕ್ ಮೇಲ್ ಮಾಡಿದ್ದಾರೆ ಅಂತ ವಿವರಿಸಿದ್ದಾರೆ.

    ಸಂತ್ರಸ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮದರಸಾ ಮ್ಯಾನೇಜರ್ ಹಾಗೂ 5 ಮಂದಿ ಕೋಣೆಯೊಳಗೆ ಅತ್ಯಾಚಾರವೆಸಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾಳೆ. ಸದ್ಯ ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಅದರ ವರದಿ ಇನ್ನಷ್ಟೇ ಬರಬೇಕಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ ಅಂತ ಎಎಸ್‍ಪಿ ಶೈಲೇಂದ್ರ ಶ್ರೀವತ್ಸವ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಾಲಕಿಯ ಅಪಹರಣಕ್ಕೆ ಯತ್ನ!

    ಬಾಲಕಿಯ ಅಪಹರಣಕ್ಕೆ ಯತ್ನ!

    ಬಾಗಲಕೋಟೆ: ಬಿಸ್ಕೇಟ್‍ನಲ್ಲಿ ಮದ್ದು ಬರಿಸಿ ಬಾಲಕಿ ಅಪಹರಣಕ್ಕೆ ಯತ್ನಿಸಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

    ಗದಗದಲ್ಲಿ ಮೂವರಿಂದ ಬಾಲಕಿ ಅಪಹರಣ ಮಾಡಲಾಗಿದೆ. ಚಾಕುವಿನಿಂದ ಹಲ್ಲೆ ಮಾಡೋದಾಗಿ ಹೇಳಿ ಬಾಲಕಿ ಬೆದರಿಸಿ, ಬಾಯಿಗೆ ಬಟ್ಟೆ ಕಟ್ಟಿ ರೈಲ್ವೆಯಲ್ಲಿ ಕರೆದುಕೊಂಡು ಬಂದಿದ್ದಾರೆ. ಗದಗದಿಂದ ಸೋಲಾಪೂರ ಕಡೆಗೆ ಹೋಗುವ ಮಾರ್ಗ ಮಧ್ಯೆ ಅದೃಷ್ಟವಶಾತ್ ಆ ಬಾಲಕಿ ಬಾಗಲಕೋಟೆ ರೈಲ್ವೆ ಪೊಲೀಸರ ಬಳಿ ಬಂದು ನಡೆದ ಘಟನೆ ಎಲ್ಲವನ್ನು ತಿಳಿಸಿದ್ದಾಳೆ.

    ಗದಗ ಮೂಲದ 11 ವಷ9ದ ಬಾಲಕಿ ಶಿವಪ್ಪ ಮತ್ತು ಶಾರದಾ ಎಂಬ ದಂಪತಿಗಳ ಪುತ್ರಿಯಾಗಿದ್ದು, ತನ್ನ ಅಜ್ಜಿಯೊಂದಿಗೆ ಗದಗನಲ್ಲಿ ವಾಸವಾಗಿದ್ದಳು. ರಾತ್ರಿ 11:30ರ ವೇಳೆಗೆ ಮನೆಯ ಬಾಗಿಲು ತೆಗೆದು ತನ್ನ ಬಾಯಿಗೆ ಬಟ್ಟೆ ಕಟ್ಟಿ ಅಪರಿಚಿತರು ಕರೆದುಕೊಂಡು ಬಂದಿದ್ದಾರೆ. ನಂತರ ಬಾಗಲಕೋಟೆ ಬರುತ್ತಿದ್ದಂತೆ ನನಗೆ ಮದ್ದು ಬೆರಸಿರುವ ಬಿಸ್ಕೇಟ್ ನೀಡಿದರು. ಕೊನೆಗೆ ನಿಲ್ದಾಣ ಬರುತ್ತಿದ್ದಂತೆ ನಾನು ಎಲ್ಲರಿಂದಲೂ ತಪ್ಪಿಸಿಕೊಂಡು ಬಂದಿದ್ದೇನೆ ಎಂದು ಬಾಲಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.

    ಬಾಲಕಿ ಕ್ಷಣ ಕ್ಷಣಕ್ಕೂ ತನ್ನ ಹೇಳಿಕೆಗಳನ್ನು ಬದಲಾಯಿಸುತ್ತಿದ್ದಾಳೆ. ಬಾಲಕಿಯೇ ಮನೆಯಿಂದ ಹೊರ ಬಂದಳಾ? ಆಕೆಯನ್ನು ಅಪಹರಿಸಿದವರು ಯಾರು? ಎಂಬ ಹಲವು ಪ್ರಶ್ನೆಗಳು ಪೊಲೀಸರನ್ನು ಕಾಡುತ್ತಿವೆ. ಸದ್ಯ ಪೊಲೀಸರ ರಕ್ಷಣೆಯಲ್ಲಿದ್ದ ಬಾಲಕಿಯನ್ನು ಆಕೆಯ ಪೋಷಕರ ವಶಕ್ಕೆ ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಾಲಕಿಯ ಗೊಂದಲಮಯ ಹೇಳಿಕೆಗಳನ್ನಾಧರಿಸಿ ತನಿಖೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಅಪ್ರಾಪ್ತ ಬಾಲಕಿಯರನ್ನು ಅಪಹರಿಸಿ ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ಮೂವರ ಬಂಧನ

    ಅಪ್ರಾಪ್ತ ಬಾಲಕಿಯರನ್ನು ಅಪಹರಿಸಿ ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ಮೂವರ ಬಂಧನ

    ದಾವಣಗೆರೆ: ಅಪ್ರಾಪ್ತ ಬಾಲಕಿಯರನ್ನು ಅಪಹರಿಸಿ ವೇಶ್ಯಾವಾಟಿಕೆ ತಳ್ಳುತ್ತಿದ್ದ ಜಾಲವನ್ನು ದಾವಣಗೆರೆಯ ಡಿಸಿಬಿ ಪೆÇಲೀಸರು ಪತ್ತೆ ಹಚ್ಚಿದ್ದು, ಓರ್ವ ಬಾಲಕಿಯನ್ನು ರಕ್ಷಿಸಿ, ಮೂವರು ಮಹಿಳೆಯರನ್ನು ಬಂಧಿಸಿದ್ದಾರೆ.

    ದಾವಣಗೆರೆ ಜಿಲ್ಲೆ ಮೂಲದ ಗೀತಕ್ಕ (33), ಅನಿತಾ ಅಲಿಯಾಸ್ ಕಾವ್ಯಾ (34) ಹಾಗೂ ರೂಪಾ (28) ಬಂಧಿತ ಮಹಿಳೆಯರು. ಪ್ರಮುಖ ಆರೋಪಿ ಶಿವು ಹಾಗೂ ಆತನ ಇಬ್ಬರು ಸಹಚರರು ಪರಾರಿಯಾಗಿದ್ದು, ಅವರ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

    ಬಂಧಿತ ಮಹಿಳೆಯರು ದಾವಣಗೆರೆ, ಗದಗ ಸೇರಿದಂತೆ ಬಹುತೇಕ ಕಡೆ ವೇಶ್ಯಾವಾಟಿಕೆ ನಡೆಸುತ್ತಿದ್ದು, ಅಪ್ರಾಪ್ತ ಬಾಲಕಿಯರಿಗೆ ಹಣದ ಆಸೆ ತೋರಿಸಿ ವೇಶ್ಯಾವಾಟಿಕೆ ತಳ್ಳುತ್ತಿದ್ದರು. ಬಸ್ ಹಾಗೂ ರೈಲ್ವೇ ನಿಲ್ದಾಣದಲ್ಲಿ ಬಾಲಕಿಯರನ್ನು ಅಪಹರಿಸಿ, ಬಳಿಕ ಅವರನ್ನು ಬೇರೆ ಬೇರೆ ಜಾಗಗಳಿಗೆ ಸಾಗಿಸುತ್ತಿದ್ದರು.

    ಜಾಲ ಪತ್ತೆಯಾಗಿದ್ದು ಹೇಗೆ:
    ಬಂಧಿತ ಮೂವರು ಮಹಿಳೆಯರು ದಾವಣಗೆರೆಯ ಮನೆಯೊಂದರಲ್ಲಿ ವಾಸವಾಗಿದ್ದರು. ಜೊತೆಗೆ 16 ವರ್ಷದ ಬಾಲಕಿಯನ್ನು ಇರಿಸಿಕೊಂಡಿದ್ದರು. ಇತ್ತೀಚೆಗೆ ಮೈತ್ರಿ ಉಜ್ವಲ ಸಂಸ್ಥೆ ಸದಸ್ಯರು ಬಾಲಕಿಯ ಕುರಿತಾಗಿ ಅನುಮಾನ ವ್ಯಕ್ತಪಡಿಸಿ, ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು. ಆಗ ಬಾಲಕಿಗೆ ಹೆಚ್‍ಐವಿ ಇರುವುದು ಖಚಿತವಾಗಿದ್ದು, ಆಕೆಯನ್ನು ವಿಚಾರಿಸಿದಾಗ, ಮೂವರು ಮಹಿಳೆಯರು ಉದ್ಯೋಗ ಹಾಗೂ ಹಣದ ಆಮಿಷವೊಡ್ಡಿ ಕರೆದುಕೊಂಡು ಬಂದು ಮನೆಯಲ್ಲಿ ವೇಶ್ಯಾವಾಟಿಕೆ ಮಾಡಿಸುತ್ತಿದ್ದಾರೆ ಎನ್ನುವ ಸತ್ಯ ಬಯಲಾಗಿದೆ.

    ತಕ್ಷಣವೇ ಮೈತ್ರಿ ಉಜ್ವಲ ಸಂಸ್ಥೆಯು ಪೊಲೀಸರಿಗೆ ಮಾಹಿತಿ ನೀಡಿದ್ದು, ಮನೆಯ ಮೇಲೆ ದಾಳಿ ಮಾಡಿದಾಗ ಮೂವರು ಮಹಿಳೆಯರು ಸಿಕ್ಕಿಬಿದ್ದಿದ್ದಾರೆ. ಆದರೆ ಪೊಲೀಸ್ ದಾಳಿಯ ವಿಷಯ ತಿಳಿಯುತ್ತಿದ್ದಂತೆ ಪ್ರಮುಖ ಆರೋಪಿ ಶಿವು ಹಾಗೂ ಆತನ ಇಬ್ಬರು ಸಹಚರರು ಪರಾರಿಯಾಗಿದ್ದಾರೆ. ಬಾಲಕಿಯನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಒಪ್ಪಿಸಿ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಎಸ್‍ಪಿ ಆರ್ ಚೇತನ್ ಹೇಳಿದರು.

    ಬಂಧಿತ ಮಹಿಳೆಯರು ಈ ಹಿಂದೆಯೂ ಬಾಲಕಿಯರನ್ನು ಅಪಹರಿಸಿದ ಪ್ರಕರಣದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಆದರೆ ಈಗ ಜಾಮೀನು ಮೇಲೆ ಹೊರ ಬಂದು ಅದೇ ದಂಧೆ ಶುರು ಮಾಡಿದ್ದಾರೆ.

  • ಸಂಪಿಗೆ ಬಿದ್ದ ಗೆಳತಿಯನ್ನು ರಕ್ಷಿಸಿದ 6 ವರ್ಷದ ಬಾಲಕರು

    ಸಂಪಿಗೆ ಬಿದ್ದ ಗೆಳತಿಯನ್ನು ರಕ್ಷಿಸಿದ 6 ವರ್ಷದ ಬಾಲಕರು

    ಚಿಕ್ಕಬಳ್ಳಾಪುರ: ಆಕಸ್ಮಿಕವಾಗಿ ಸಂಪ್ ಗೆ ಬಿದ್ದಿದ್ದ 5 ವರ್ಷದ ಬಾಲಕಿಯನ್ನ 6 ವರ್ಷದ ಇಬ್ಬರು ಬಾಲಕರು ಸೇರಿ ರಕ್ಷಣೆ ಮಾಡಿರುವ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ರವಿಪ್ರಸಾದ್ ಅನಿತಾ ದಂಪತಿಯ ಪುತ್ರಿ ಪೂರ್ವಿಕಾ ಆಕಸ್ಮಿಕ ಸಂಪಿಗೆ ಬಿದ್ದಿದ್ದಳು. ಈ ವೇಳೆ 6 ವರ್ಷದ ಸಾತ್ವಿಕ್ ಹಾಗೂ ದೀಪಕ್ ಸಂಪಿನಿಂದ ಆಕೆಯನ್ನು ಮೇಲೆ ಎಳೆದು ರಕ್ಷಣೆ ಮಾಡಿದ್ದಾರೆ. ಗಣೇಶಪ್ಪ ಅವರಿಗೆ ಸೇರಿದ ನಿರ್ಮಾಣ ಹಂತದ ಕಟ್ಟಡದ ಬಳಿ ಮೂವರು ಕೂಡ ಆಟ ಆಡಲು ಕಾಲು ದಾರಿ ಮೂಲಕ ಜೊತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಪೂರ್ವಿಕಾ ಕಾಲು ಜಾರಿ ಆಕಸ್ಮಿಕ ಸಂಪಿಗೆ ಬಿದ್ದಿದ್ದಳು. ತಕ್ಷಣ ದೀಪಕ್ ಕಿರುಚಿಕೊಂಡು ಅಕ್ಕ ಪಕ್ಕದವರನ್ನ ಕೂಗಿದ್ದಾನೆ. ಅಷ್ಟರಲ್ಲೇ ಸಾತ್ವಿಕ್ ಪೂರ್ವಿಕಾಳ ಕೈ ಹಿಡಿದು ಮೇಲೆಳಿದಿದ್ದಾನೆ.

    ಈ ಬಗ್ಗೆ ಪ್ರತ್ಯಕ್ಷದರ್ಶಿಗಳು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದು, ಘಟನೆ ಬುಧವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆಯಲ್ಲಿ ಸಂಪಿನಲ್ಲಿದ್ದ ಗಲೀಜು ನೀರು ಕುಡಿದು ಅರೆ ಪ್ರಜ್ಞಾವಸ್ಥೆಗೆ ಜಾರಿದ್ದ ಪೂರ್ವಿಕಾ ಕೂಡ ಸದ್ಯ ಚೇತರಿಸಿಕೊಂಡಿದ್ದಾಳೆ. ಈ ಸಂಬಂಧ ಸಂಪು ಮುಚ್ಚುವಂತೆ ಪಂಚಾಯತಿಗೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

  • ಬಾಲಕಿ ಕೈಮೇಲೆ ಬಿದ್ದ ಬೆಂಚ್- ಬಲಗೈನ 3 ಬೆರಳುಗಳು ಕಟ್!

    ಬಾಲಕಿ ಕೈಮೇಲೆ ಬಿದ್ದ ಬೆಂಚ್- ಬಲಗೈನ 3 ಬೆರಳುಗಳು ಕಟ್!

    ಚಿತ್ರದುರ್ಗ: ಶಾಲಾ ಕೊಠಡಿಯಲ್ಲಿ ಬಾಲಕಿ ಕೈ ಮೇಲೆ ಬೆಂಚ್ ಬಿದ್ದು ಕೈ ಬೆರಳುಗಳು ಅರ್ಧಕ್ಕೆ ಕಟ್ ಆಗರೋ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಗುಡಿಹಳ್ಳಿಯಲ್ಲಿ ನಡೆದಿದೆ.

    ಸರ್ಕಾರಿ ಶಾಲೆಯ ಶಿಕ್ಷಕರ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದ್ದು, ಸರದಿಯಂತೆ ನಿತ್ಯವೂ ಇಬ್ಬರು ವಿದ್ಯಾರ್ಥಿಗಳು ಸರ್ಕಾರಿ ಶಾಲೆ ಕೊಠಡಿಗಳ ಕಸ ಗುಡಿಸುತ್ತಿದ್ದರು. ಹೀಗಾಗಿ 7 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯೋರ್ವಳು ಶಾಲಾ ಕೊಠಡಿಯ ಕಸಗುಡಿಸುವ ವೇಳೆ ಬೆಂಚ್ ಎತ್ತಿಡುವಾಗ ತನ್ನ ಕೈ ಮೇಲೆ ಹಾಕಿಕೊಂಡಿದ್ದಾಳೆ. ಪರಿಣಾಮ ಆಕೆಯ ಬಲಗೈನ ಮೂರು ಬೆರಳುಗಳು ಅರ್ಧಕ್ಕೆ ತುಂಡಾಗಿದ್ದು, ತೀವ್ರ ರಕ್ತಸ್ರಾವವಾಗಿ ಆಕೆ ಮೂರ್ಛೆ ಹೋಗಿದ್ದಳು. ತಕ್ಷಣ ಆಕೆಯನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಕರೆತಂದು ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

    ಘಟನೆಯಿಂದಾಗಿ ಗ್ರಾಮಸ್ಥರು ಹಾಗೂ ಪೋಷಕರು, ಶಿಕ್ಷಕರ ವಿರುದ್ಧ ತೀವ್ರ ಆಕ್ರೋಶಕ್ಕೊಳಗಾಗಿದ್ದು, ಈ ಘಟನೆ ಶಿಕ್ಷಕರ ನಿರ್ಲಕ್ಷ್ಯದಿಂದಾಗಿದೆ ಎಂದು ಆರೋಪಿಸಿದ್ದಾರೆ. ಆದ್ರೆ ಅದೃಷ್ಟವಶಾತ್ ಬಾಲಕಿಯ ಜೀವಕ್ಕೆ ಯಾವುದೇ ತೊಂದರೆಯಾಗಿಲ್ಲ. ಹೀಗಾಗಿ ಅಗತ್ಯ ಚಿಕಿತ್ಸೆ ನೀಡಿರೋ ಜಿಲ್ಲಾಸ್ಪತ್ರೆ ವೈದ್ಯರು ಆಕೆಯ ಬೆರಳುಗಳನ್ನು ಪ್ಲಾಸ್ಟಿಕ್ ಸರ್ಜರಿ ಮೂಲಕ ಸರಿಪಡಿಸಬಹುದೆಂಬ ಭರವಸೆಯನ್ನ ನೀಡಿದ್ದಾರೆ.

    ಘಟನೆ ಸಂಬಂಧ ಈವರೆಗೆ ಯಾವುದೇ ದೂರು ದಾಖಲಾಗಿಲ್ಲ.

  • 2 ವರ್ಷದ ಹಿಂದೆ ರೈಲು ಹತ್ತಿ ಹೋಗಿದ್ದ ಯುವತಿ ತವರಿಗೆ ವಾಪಸ್!

    2 ವರ್ಷದ ಹಿಂದೆ ರೈಲು ಹತ್ತಿ ಹೋಗಿದ್ದ ಯುವತಿ ತವರಿಗೆ ವಾಪಸ್!

    – ಶಿಮ್ಲಾದಲ್ಲಿದ್ದ ಯುವತಿಯನ್ನ ರಕ್ಷಿಸಿದ ಎನ್ ಜಿಓ

    ಮೈಸೂರು: ನಗರದಿಂದ ಬೇರೆ ರಾಜ್ಯಕ್ಕೆ ಹೋಗಿದ್ದ ಮಾನಸಿಕ ಅಸ್ವಸ್ಥೆಯೊಬ್ಬಳನ್ನು ಸಿನಿಮೀಯ ರೀತಿಯಲ್ಲಿ ಎರಡು ವರ್ಷದ ಬಳಿಕ ರಕ್ಷಿಸಿ ಪೋಷಕರಿಗೆ ಒಪ್ಪಿಸುವಲ್ಲಿ ಎನ್.ಜಿ.ಓ ಒಂದು ಶ್ರಮಿಸಿದೆ.

    ಪಿರಿಯಾಪಟ್ಟಣ ನಿವಾಸಿಯಾಗಿರೋ ಮಾನಸಿಕ ಅಸ್ವಸ್ಥೆ  ಎರಡು ವರ್ಷದ ಹಿಂದೆ ಮೈಸೂರಿನಿಂದ ರೈಲು ಹತ್ತಿ ಹೋಗಿದ್ದಳು. ಆದರೆ ಎಲ್ಲಿಗೆ ಹೋಗಿದ್ದಾಳೆ? ಎಲ್ಲಿ ಇದ್ದಾಳೆ? ಎನ್ನುವುದು ಪೋಷಕರನ್ನು ಕಾಡಿತ್ತು. ಕೊನೆಗೆ ಈಕೆ ಶಿಮ್ಲಾದಲ್ಲಿ ಕನ್ನಡ ಮಾತನಾಡುವುದನ್ನು ಗಮನಿಸಿದ ಎನ್‍ಜಿಓ ಒಂದು, ಕರ್ನಾಟಕಕ್ಕೆ ಸಂಪರ್ಕ ಸಾಧಿಸಿತ್ತು.

    ಬಳಿಕ ಆಕೆ ಮೈಸೂರಿನ ಪಿರಿಯಾಪಟ್ಟಣದ ನಿವಾಸಿ ಎಂದು ಅರಿತು ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಿದ್ದರು. ಕರ್ನಾಕಟದಿಂದ ಶಿಮ್ಲಾಗೆ ಹೋದ ಅಧಿಕಾರಿಗಳ ತಂಡ ಯುವತಿಯನ್ನು ಸುರಕ್ಷಿತವಾಗಿ ಗುರುವಾರ ರಾತ್ರಿ ಬೆಂಗಳೂರಿಗೆ ಕರೆತಂದಿದ್ದರು. ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಬಳಿಕ ಮೈಸೂರಿಗೆ ಬಂದಿದ್ದ ಯುವತಿಯ ಕಣ್ಣಲ್ಲಿ ಸಂತಸ ತುಂಬಿತ್ತು.

    ನಂತರ ಮೈಸೂರಿನ ವಿಜಯನಗರದ ಸ್ತ್ರೀ ಸೇವಾನಿಕೇತನ ಮಹಿಳಾನಿಲಯದಲ್ಲಿ ಉಳಿದುಕೊಂಡಿದ್ದು, ಪೋಷಕರು ಬಂದು ತಮ್ಮ ಮನೆಗೆ ಕರೆದೊಯ್ದಿದ್ದಾರೆ.

  • ಕೊಳವೆ ಬಾವಿಯೊಳಗೆ ಬಿದ್ದ 3 ವರ್ಷದ ಬಾಲಕಿ ಸಾವು ಗೆದ್ದಳು!

    ಕೊಳವೆ ಬಾವಿಯೊಳಗೆ ಬಿದ್ದ 3 ವರ್ಷದ ಬಾಲಕಿ ಸಾವು ಗೆದ್ದಳು!

    – 30 ಗಂಟೆಗಳ ಕಾರ್ಯಾಚರಣೆ ಯಶಸ್ವಿ

    ಪಾಟ್ನಾ: ಮನೆಯ ಬಳಿ ಆಟವಾಡುತ್ತಾ 110 ಅಡಿ ಆಳದ ತೆರೆದ ಕೊಳವೆ ಬಾವಿಗೆ ಬಿದ್ದಿದ್ದ ಮೂರು ವರ್ಷದ ಬಾಲಕಿಯನ್ನು ಯಶಸ್ವಿ ಕಾರ್ಯಾಚರಣೆ ನಡೆಸಿ ರಕ್ಷಿಸಿರುವ ಘಟನೆ ಬಿಹಾರ್‍ನ ಮುಂಗೇರಾ ಜಿಲ್ಲೆಯಲ್ಲಿ ನಡೆದಿದೆ.

    ಮೂರು ವರ್ಷದ ಸನ್ನೊ ಮಂಗಳವಾರ ಸಂಜೆ 4 ಗಂಟೆ ವೇಳೆ ಮನೆಯ ಬಳಿ ಇದ್ದ ತೆರೆದ ಕೊಳವೆ ಬಾವಿಗೆ ಬಿದ್ದಿದ್ದಳು. ವಿಷಯ ತಿಳಿದ ಪೋಷಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ರಾಷ್ಟ್ರಿಯ ವಿಪತ್ತು ನಿರ್ವಹಣಾ ತಂಡ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯವನ್ನು ಆರಂಭಿಸಿತ್ತು. ಸತತ 30 ಗಂಟೆಗಳ ಕಾರ್ಯಾಚರಣೆ ಬಳಿಕ ಬಾಲಕಿಯನ್ನು ರಕ್ಷಣೆ ಮಾಡಲಾಗಿದೆ.

    ಕೊಳವೆ ಬಾವಿಯಿಂದ ಸನ್ನೋಳನ್ನು ರಕ್ಷಿಸಿದ ಬಳಿಕ ತಜ್ಞ ವೈದ್ಯರು ಬಾಲಕಿಯ ಆರೋಗ್ಯ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಬಾಲಕಿಯ ಆರೋಗ್ಯ ಉತ್ತಮವಾಗಿದ್ದು, ಬಳಿಕ ಸನ್ನೋಳನ್ನು ಪೋಷಕರ ವಶಕ್ಕೆ ನೀಡಿದ್ದಾರೆ.

    ಕಾರ್ಯಾಚರಣೆ ವೇಳೆ ರಕ್ಷಣಾ ತಂಡ ಬಾಲಕಿ ಉಸಿರಾಟಕ್ಕೆ ಆಮ್ಲಜನಕವನ್ನು ಪೂರೈಸಿತ್ತು. ಅಲ್ಲದೇ ಬಾಲಕಿಯು ಇನ್ನೂ ಕೆಳಗೆ ಕುಸಿಯದಂತೆ ಮುಂಜಾಗ್ರತೆ ವಹಿಸಿದ್ದರು. ಬಳಿಕ ಕೊಳವೆಬಾವಿಯ ಪಕ್ಕದಲ್ಲಿ ಜೆಸಿಬಿ ಯಂತ್ರಗಳ ಸಹಾಯದಿಂದ ಬೃಹತ್ ಹೊಂಡ ನಿರ್ಮಿಸಿ ಬಾಲಕಿಯನ್ನು ಆದಷ್ಟು ಬೇಗ ರಕ್ಷಿಸುವ ಕಾರ್ಯ ನಡೆಸಿದ್ದರು.

    ಬಾಲಕಿ ಮಂಗಳವಾರ ತನ್ನ ಪೋಷಕರೊಂದಿಗೆ ಮುಂಗೇರಾದ ಮುರ್ಗಿಚಕ್ ಎಂಬಲ್ಲಿರುವ ಅಜ್ಜನ ಮನೆಗೆ ಬಂದಿದ್ದಳು. ಈ ವೇಳೆ ಮನೆಯ ಹತ್ತಿರ ಆಟವಾಡುತ್ತಿರುವಾಗ ಕೊಳವೆ ಬಾವಿಗೆ ಬಿದ್ದಿದ್ದಳು. ಕೊಳವೆಬಾವಿಯಲ್ಲಿ ಬಾಲಕಿಯು ಅಳುತ್ತಿರುವ ಧ್ವನಿ ಕೇಳಿದ ಬಳಿಕ ಬಾಲಕಿ ಜೀವಂತವಾಗಿದ್ದು ಖಚಿತವಾಗಿತ್ತು. ಕೂಡಲೇ ಎಚ್ಚೆತ್ತ ರಕ್ಷಣಾ ಪಡೆಯ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದರು.

  • ಆಟವಾಡುತ್ತಾ 110 ಅಡಿ ಆಳದ ಕೊಳವೆಬಾವಿಗೆ ಬಿದ್ದ ಬಾಲಕಿ

    ಆಟವಾಡುತ್ತಾ 110 ಅಡಿ ಆಳದ ಕೊಳವೆಬಾವಿಗೆ ಬಿದ್ದ ಬಾಲಕಿ

    ಪಾಟ್ನಾ: ಆಟವಾಡುತ್ತಾ ಮೂರು ವರ್ಷದ ಬಾಲಕಿಯು 110 ಅಡಿ ಆಳದ ಬೋರ್‍ವೆಲ್‍ಗೆ ಬಿದ್ದ ಘಟನೆ ಬಿಹಾರ್‍ನ ಮುಂಗೇರಾ ಜಿಲ್ಲೆಯಲ್ಲಿ ನಡೆದಿದೆ.

    ಮೂರು ವರ್ಷದ ಸನ್ನೊ ಕೊಳವೆಬಾವಿಗೆ ಬಿದ್ದ ಬಾಲಕಿ. ಮಂಗಳವಾರ ತನ್ನ ಪೋಷಕರೊಂದಿಗೆ ಸನ್ನೊ ಅಜ್ಜನಾದ ಉಮೇಶ್ ನಂದನ್ ರವರನ್ನು ನೋಡಲು ಮುಂಗೇರಾದ ಮುರ್ಗಿಚಕ್ ಏರಿಯಾಕ್ಕೆ ಬಂದಿದ್ದಳು. ಈ ವೇಳೆ ಮನೆಯ ಹತ್ತಿರ ಆಟವಾಡುತ್ತಿರುವಾಗ ಸಂಜೆ 4ರ ಸುಮಾರಿಗೆ ಮನೆಯ ಬಳಿಯಿದ್ದ ಸುಮಾರು 110 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದಾಳೆ.

    ವಿಷಯ ತಿಳಿದ ಪೋಷಕರು ಕೂಡಲೇ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ರಕ್ಷಣಾ ತಂಡಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, ಕೊಳವೆಬಾವಿಯಲ್ಲಿ ಬಾಲಕಿಯು ಅಳುತ್ತಿರುವ ಧ್ವನಿ ಕೇಳಿದೆ. ಕೂಡಲೇ ಎಚ್ಚೆತ್ತ ರಕ್ಷಣಾ ಪಡೆಯ ಅಧಿಕಾರಿಗಳು ಕೊಳವೆಬಾವಿಯ ಸುತ್ತ ಬಿಗಿಭದ್ರತೆ ಕೈಗೊಂಡಿದ್ದಾರೆ.

    ಘಟನೆ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿದ ರಾಜ್ಯ ವಿಪತ್ತು ನಿರ್ವಹಣ ತಂಡದ ಅಧಿಕಾರಿಯಾದ ಸಂಜೀವ್ ಕುಮಾರ್ ರವರು, ಬಾಲಕಿಗೆ ಈಗಾಗಲೇ ಆಮ್ಲಜನಕವನ್ನು ಪೂರೈಕೆ ಮಾಡಿದ್ದು, ಬಾಲಕಿಯು ಇನ್ನೂ ಕೆಳಗೆ ಕುಸಿಯದಂತೆ ಮುಂಜಾಗ್ರತೆ ವಹಿಸಿದ್ದೇವೆ. ಅಲ್ಲದೇ ಕೂಡಲೇ ಆಕೆಯನ್ನು ಕೊಳವೆಬಾವಿಯಿಂದ ಹೊರತೆಗೆಯುತ್ತೇವೆ ಎಂದು ಹೇಳಿದ್ದಾರೆ.

    ರಾಜ್ಯ ವಿಪತ್ತು ನಿರ್ವಹಣಾ ತಂಡ ಈಗಾಗಲೇ ಕೊಳವೆಬಾವಿಯ ಪಕ್ಕದಲ್ಲಿ ಜೆಸಿಬಿ ಯಂತ್ರಗಳ ಸಹಾಯದಿಂದ 40 ಅಡಿಗೂ ಹೆಚ್ಚಿನ ಬೃಹತ್ ಹೊಂಡ ನಿರ್ಮಿಸಿದ್ದು, ಬಾಲಕಿಯನ್ನು ಆದಷ್ಟು ಬೇಗ ರಕ್ಷಿಸುವುದಾಗಿ ತಿಳಿಸಿವೆ.

    ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ವರಿಷ್ಠಾಧಿಕಾರಿಯಾದ ಹರಿಶಂಕರ್ ಕುಮಾರ್ ರವರು, ಈಗಾಗಲೇ ಘಟನಾ ಸ್ಥಳದಲ್ಲಿ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದ್ದು, 2 ಪೊಲೀಸ್ ತಂಡಗಳನ್ನು ಸ್ಥಳದಲ್ಲಿ ನಿಯೋಜಿಸಿದ್ದೇವೆ. ರಕ್ಷಣಾ ಕಾರ್ಯಚರಣೆಗೆ ಪೊಲೀಸ್ ಇಲಾಖೆಯಿಂದ ಬೇಕಾಗುವ ಸಹಾಯವನ್ನು ಮಾಡಲಾಗುತ್ತದೆ ಎಂದು ಹೇಳಿದರು.

  • ಕಾರಿನಡಿ ಸಿಲುಕಿದರೂ, ಪ್ರಾಣಾಪಾಯದಿಂದ ಪಾರಾದ ಬಾಲಕಿ: ವಿಡಿಯೋ ನೋಡಿ

    ಕಾರಿನಡಿ ಸಿಲುಕಿದರೂ, ಪ್ರಾಣಾಪಾಯದಿಂದ ಪಾರಾದ ಬಾಲಕಿ: ವಿಡಿಯೋ ನೋಡಿ

    ಹಾಸನ: ನಗರದ ಕುವೆಂಪು ಬಡಾವಣೆಯಲ್ಲಿ ಚಾಲಕನೊಬ್ಬ ಕಾರನ್ನು ಹಿಂತೆಗೆದುಕೊಳ್ಳುವ ಭರದಲ್ಲಿ ಬಾಲಕಿ ಮೇಲೆಯೇ ಕಾರನ್ನು ಹರಿಸಿ ಹೋದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಅಮೃತವರ್ಷಿಣಿ (14) ಪ್ರಾಣಾಪಾಯದಿಂದ ಪಾರಾದ ಬಾಲಕಿ. ಭಾನುವಾರ ಮಧ್ಯಾಹ್ನ 12 ಗಂಟೆಗೆ ಕುವೆಂಪು ನಗರದಲ್ಲಿರುವ ಮನೆಯ ಮುಂದೆ ಬಾಲಕಿಯು ನಿಂತಿರುವಾಗ, ಏಕಾಏಕಿ ಮಾರುತಿ ಕಂಪೆನಿಯ ಆಲ್ಟೋ ಕಾರೊಂದು ಹಿಂಬದಿಯಿಂದ ಆಕೆಯ ಮೇಲೆ ಹರಿದು ಹೋಗಿದೆ. ಕಾರ್ ಹರಿದ ಪರಿಣಾಮ ಬಾಲಕಿ ಅದೃಷ್ಟವಶಾತ್ ಯಾವುದೇ ಗಂಭೀರ ಗಾಯಗಳಾಗದೇ ಅಪಾಯದಿಂದ ಪಾರಾಗಿದ್ದಾಳೆ. ಬಾಲಕಿ ಬಿದ್ದಿದ್ದನ್ನು ಗಮನಿಸಿದ ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಘಟನೆ ಸಂಬಂಧ ಸ್ಥಳೀಯರು ಹತ್ತಿರದ ಎಂಬ್ರಾಯಿಡರಿ ಸೆಂಟರ್‍ನ ಸಿಸಿಟಿವಿಯನ್ನು ಪರಿಶೀಲಿಸಿದಾಗ ಬಾಲಕಿಯ ಮೇಲೆ ಕಾರ್ ಹರಿದಿರುವ ಘಟನೆ ಬೆಳಕಿಗೆ ಬಂದಿದೆ. ಸದ್ಯ ಬಾಲಕಿಗೆ ಯಾವುದೇ ಗಂಭೀರವಾದ ಗಾಯಗಳಾಗಿಲ್ಲ. ಬಾಲಕಿ ಹುಟ್ಟಿನಿಂದಲೂ ಕೊಂಚ ಬುದ್ದಿಮಾಂದ್ಯಳಾಗಿರುವ ಹಿನ್ನೆಲೆಯಲ್ಲಿ ಘಟನೆ ಬಗ್ಗೆ ಹೇಳಿಕೊಳ್ಳಲು ಆಗುತ್ತಿಲ್ಲ. ಬೇಜವಾಬ್ದಾರಿ ರೀತಿಯಲ್ಲಿ ಕಾರ್ ಚಲಾಯಿಸಿ ಮಗಳ ಮೇಲೆ ಹರಿಸಿರುವ ಕಾರು ಚಾಲಕನನ್ನು ಕಂಡು ಹಿಡಿದು, ನ್ಯಾಯ ದೊರಕಿಸಿ ಎಂದು ಪೋಷಕರು ಆಗ್ರಹಿಸಿದ್ದಾರೆ.

    https://www.youtube.com/watch?v=1spHMGbVDZo