Tag: ಬಾಲಕಿ

  • ಅಪ್ರಾಪ್ತ ಸಹೋದರರಿಂದ 2 ವರ್ಷದ ಬಾಲಕಿಯ ಮೇಲೆ ರೇಪ್!

    ಅಪ್ರಾಪ್ತ ಸಹೋದರರಿಂದ 2 ವರ್ಷದ ಬಾಲಕಿಯ ಮೇಲೆ ರೇಪ್!

    ಮುಂಬೈ: ಎರಡು ವರ್ಷದ ಬಾಲಕಿಯ ಮೇಲೆ ಇಬ್ಬರು ಅಪ್ರಾಪ್ತ ಸಹೋದರರು ಅತ್ಯಾಚಾರ ಮಾಡಿರುವ ಘಟನೆ ಮುಂಬೈನ ಪಲ್ಘರ್ ಎಂಬಲ್ಲಿ ಶನಿವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರೂ ಅಪ್ರಾಪ್ತರನ್ನು ಪೊಲೀಸರು ಬಂಧಿಸಿದ್ದಾರೆ.

    ಘಟನೆ ವಿವರ:
    2 ವರ್ಷದ ಪುಟ್ಟ ಬಾಲಕಿ ಮನೆ ಹೊರಗಡೆ ಆಟವಾಡುತ್ತಿದ್ದಳು. ಬಾಲಕಿಯ ತಂದೆ ದಿನಗೂಲಿ ಕಾರ್ಮಿಕರಾಗಿದ್ದು, ಕೆಲಸದಲ್ಲಿ ತೊಡಗಿದ್ದರು. ಇತ್ತ ತಾಯಿ ಕೂಡ ಅಡುಗೆ ಮನೆಯಲ್ಲಿ ಬ್ಯುಸಿಯಾಗಿದ್ದರು. ಈ ವೇಳೆ ಬಂದ 14 ಮತ್ತು 15 ವರ್ಷದ ಸಹೋದರರಿಬ್ಬರು, ಬಾಲಕಿ ಜೊತೆ ಆಟವಾಡುತ್ತಾ ಮನೆಯಿಂದ ಸ್ವಲ್ಪ ದೂರಲ್ಲಿದ್ದ ಕೊಠಡಿಗೆ ಬರುವಂತೆ ಹೇಳಿದ್ದಾರೆ. ಅವರ ಮಾತನ್ನು ನಂಬಿದ ಪುಟ್ಟ ಬಾಲಕಿ, ಬಾಲಕರ ಹಿಂದೆ ಹೆಜ್ಜೆ ಹಾಕಿದ್ದಾಳೆ. ಕೂಡಲೇ ಅಪ್ರಾಪ್ತರಿಬ್ಬರೂ ಬಾಲಕಿಯನ್ನು ಕೋಣೆಯೊಳಗೆ ಬರಮಾಡಿಕೊಂಡು ಬಾಗಿಲು ಹಾಕಿದ್ದಾರೆ. ನಂತರ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ.

    ಬಾಲಕರಿಬ್ಬರೂ ಪೋಷಕರೂ ಕೂಡ ದಿನಗೂಲಿ ಕೆಲಸಗಾರರಾಗಿದ್ದು, ಘಟನೆ ನಡೆದ ಸಂದರ್ಭದಲ್ಲಿ ಅವರೂ ಕೆಲಸಕ್ಕೆ ತೆರಳಿದ್ದರು. ಇತ್ತ ಕೋಣೆಯೊಳಗೆ ಬಾಲಕಿ ಅಳುತ್ತಿರುವುದನ್ನು ಕೇಳಿಸಿಕೊಂಡ ನೆರೆಹೊರೆಯವರು ಆಕೆಯ ಪೋಷಕರಿಗೆ ಈ ಬಗ್ಗೆ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೋಷಕರು ಹಾಗೂ ಸ್ಥಳೀಯರು ಕೊಠಡಿಯ ಬಾಗಿಲು ಬಡಿದಿದ್ದಾರೆ. ಬಾಗಿಲು ತೆಗೆದಾಗ ಇಬ್ಬರು ಬಾಲಕರೊಂದಿಗೆ ಬಾಲಕಿ ಕೋಣೆಯೊಳಗಿದ್ದು. ಅಳುತ್ತಿದ್ದಳು. ಇದನ್ನು ಕಂಡ ಬಾಲಕಿಯ ಪೋಷಕರು ಹಾಗೂ ಸ್ಥಳೀಯರು ಗಾಬರಿಗೊಂಡಿದ್ದಾರೆ.

    ಕೂಡಲೇ ಬಾಲಕರಿಬ್ಬರನ್ನೂ ಹಿಡಿದುಕೊಂಡ ಸ್ಥಳೀಯರು ಅವರಿಗೆ ಚೆನ್ನಾಗಿ ಥಳಿಸಿದ್ದಾರೆ. ನಂತರ ತಾರಪುರ ಪೊಲೀಸರಿಗೆ ಒಪ್ಪಿಸಿದ್ದಾರೆ. ಇತ್ತ ಅಳುತ್ತಿದ್ದ ಬಾಲಕಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ವೈದ್ಯಕೀಯ ಪರೀಕ್ಷೆ ನಡೆಸಿದ್ದಾರೆ. ಸದ್ಯ ಬಾಲಕಿ ಆರಾಮಾಗಿದ್ದಾಳೆ ಅಂತ ವರದಿಯಾಗಿದೆ.

    ಘಟನೆಗೆ ಸಂಬಂಧಿಸಿದಂತೆ ಬಾಲಕರ ವಿರುದ್ಧ ಐಪಿಸಿ ಸೆಕ್ಷನ್ 376(2) ಗ್ಯಾಂಗ್ ರೇಪ್ ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಲ್ಲದೇ ಇಬ್ಬರನ್ನೂ ಭಿವಾಂಡಿಯಲ್ಲಿರುವ ರಿಮಾಂಡ್ ಹೋಮ್ ಗೆ ಇಂದು ಕಳುಹಿಸಲು ಪೊಲೀಸರು ಮುಂದಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಚಿಕಿತ್ಸೆಯ ನೆಪದಲ್ಲಿ ಅಪ್ರಾಪ್ತ ಬಾಲಕಿಯನ್ನು ಕೂಡಿಹಾಕಿ ವೈದ್ಯನಿಂದಲೇ ರೇಪ್!

    ಚಿಕಿತ್ಸೆಯ ನೆಪದಲ್ಲಿ ಅಪ್ರಾಪ್ತ ಬಾಲಕಿಯನ್ನು ಕೂಡಿಹಾಕಿ ವೈದ್ಯನಿಂದಲೇ ರೇಪ್!

    ಲಕ್ನೋ: ಉತ್ತರ ಪ್ರದೇಶದ ಶಹಜಹಾನ್‍ಪುರದ ವೈದ್ಯನೊಬ್ಬ ಅಪ್ರಾಪ್ತ ಬಾಲಕಿಯನ್ನು ಕೂಡಿಹಾಕಿ ಆಕೆ ಮೇಲೆ ನಿರಂತರ ಅತ್ಯಾಚಾರ ಎಸಗಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.

    ಆರೋಪಿಯನ್ನು ವಿನೋದ್ ಕುಮಾರ್ ಎಂದು ಗುರುತಿಸಲಾಗಿದ್ದು, ವೃತ್ತಿಯಲ್ಲಿ ಆತ ವೈದ್ಯನಾಗಿದ್ದಾನೆ. ಆರೋಪಿಯು ಬಾಲಕಿಗೆ ಚಿಕಿತ್ಸೆ ಹಾಗೂ ಕೆಲಸ ಕೊಡಿಸುವುದಾಗಿ ನಂಬಿಸಿ ಕರೆದೊಯ್ದು, ಸಣ್ಣ ಕೋಣೆಯೊಂದರಲ್ಲಿ ಕೂಡಿಹಾಕಿದ್ದ. ಅಲ್ಲದೇ ಹಲವು ದಿನಗಳಿಂದ ನಿರಂತರವಾಗಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಈ ಘಟನೆಯ ಕುರಿತು ಬಾಲಕಿ ವೈದ್ಯನಿಂದ ತಪ್ಪಿಸಿಕೊಂಡು ಬಂದ ಮೇಲೆ ಪೋಷಕರಿಗೆ ತಿಳಿಸಿದ್ದಾಳೆ.

    ವಿಷಯ ತಿಳಿದ ಬಳಿಕ ಬಾಲಕಿಯ ಹೆತ್ತವರು ಆರೋಪಿ ಮೇಲೆ ದೂರು ದಾಖಲಿಸಲು ಸ್ಥಳೀಯ ಪೊಲೀಸ್ ಠಾಣೆಗೆ ಹೋದಾಗ, ಪೊಲೀಸರು ದೂರು ಪಡೆಯಲು ನಿರಾಕರಿಸಿ ಆರೋಪವನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದಾರೆ.

    ನಂತರ ಹಿರಿಯ ಪೊಲೀಸ್ ಅಧಿಕಾರಿಗಳ ಬಳಿ ತೆರಳಿ, ವಿನೋದ್ ಕುಮಾರ್ ಬಳಿ ನಮ್ಮ ಮಗಳಿಗೆ ಚಿಕಿತ್ಸೆ ಕೊಡಿಸುತ್ತಿದ್ದೆವು. ಚಿಕಿತ್ಸೆ ನೆಪದಲ್ಲಿ ಅವಳನ್ನು ಫಾರುಖಾಬಾದ್‍ಗೆ ಕರೆದೊಯ್ದು ಆಕೆಯ ಮೇಲೆ ವೈದ್ಯ ಅತ್ಯಾಚಾರ ಎಸಗಿದ್ದಾನೆ ಬಾಲಕಿಯ ಪೋಷಕರು ದೂರು ನೀಡಿದ್ದಾರೆ.

    ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದ್ದು ಬಾಲಕಿಗೆ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • 3 ವರ್ಷದ ಬಾಲಕಿಯ ಬಾಯಿಯಲ್ಲಿ ಪಟಾಕಿ ಸಿಡಿಸಿದ ಪಾಪಿ!

    3 ವರ್ಷದ ಬಾಲಕಿಯ ಬಾಯಿಯಲ್ಲಿ ಪಟಾಕಿ ಸಿಡಿಸಿದ ಪಾಪಿ!

    ಲಕ್ನೋ: ಉತ್ತರ ಪ್ರದೇಶದ ಮೀರತ್‍ನಲ್ಲಿ ಯುವಕನೊಬ್ಬ ಮೂರು ವರ್ಷದ ಬಾಲಕಿಯ ಬಾಯಿಯಲ್ಲಿ ಪಟಾಕಿ ಸಿಡಿಸಿ ವಿಕೃತಿ ಮೆರೆದಿದ್ದಾನೆ.

    ಬಾಲಕಿಯು ತನ್ನ ಮನೆಯ ಮುಂದೆ ಆಟವಾಡುತ್ತಿದ್ದಾಗ ಅದೇ ಗ್ರಾಮದ ಯುವಕನೊಬ್ಬ ಆಕೆಯ ಬಾಯಿಗೆ ಪಟಾಕಿಯನ್ನ ಇಟ್ಟು ಬೆಂಕಿ ಹಚ್ಚಿದ್ದಾನೆ. ಪರಿಣಾಮ ಬಾಲಕಿಯ ಬಾಯಿಯಲ್ಲಿ ಪಟಾಕಿ ಸ್ಫೋಟಗೊಂಡಿದೆ.

    ಈ ಘಟನೆಯಿಂದ ಬಾಲಕಿಯು ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಆಕೆಯನ್ನ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಬಾಲಕಿಯ ತಂದೆ ಶಶಿ ಕುಮಾರ್ ಹೇಳಿದ್ದಾರೆ.

    ಸಿಡಿದ ಪರಿಣಾಮ ಬಾಲಕಿಯ ಗಂಟಲಿಗೆ ಸೋಂಕಾಗಿದ್ದು, ಆಕೆಯ ಬಾಯಿಗೆ 50 ಕ್ಕೂ ಹೆಚ್ಚು ಹೊಲಿಗೆಗಳನ್ನ ಹಾಕಲಾಗಿದ್ದು, ಆಕೆಯ ಸದ್ಯದ ಪರಿಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಸಂಬಂಧ ಬಾಲಕಿಯ ತಂದೆ ಶಶಿ ಕುಮಾರ್ ಪೊಲೀಸರಿಗೆ ದೂರು ನೀಡಿದ್ದು, ಅದೇ ಗ್ರಾಮದವನಾದ ಹರ್ಪಾಲ್ ಎಂಬಾತನು ಈ ಕೃತ್ಯವನ್ನ ಎಸಗಿದ್ದಾನೆ ಎಂದು ದೂರಿದ್ದಾರೆ. ಪೊಲೀಸರು ಆರೋಪಿ ಹರ್ಪಾಲ್ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡಿದ್ದು, ಆತನ ಪತ್ತೆಗಾಗಿ ಬಲೆ ಬೀಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪದ್ಮಾವತಿಗೆ ಪುಟಾಣಿ ಹುಡ್ಗಿಯಿಂದ ಫುಲ್ ಕ್ಲಾಸ್- ವಿಡಿಯೋ ನೋಡಿ

    ಪದ್ಮಾವತಿಗೆ ಪುಟಾಣಿ ಹುಡ್ಗಿಯಿಂದ ಫುಲ್ ಕ್ಲಾಸ್- ವಿಡಿಯೋ ನೋಡಿ

    ಬೆಂಗಳೂರು: ಪದೇ ಪದೇ ಮೋದಿ ಕಾಲೆಳೆದು ವಿವಾದಕ್ಕೀಡಾಗುತ್ತಿರೋ ಮಾಜಿ ಸಂಸದೆ ರಮ್ಯಾ ಅವರಿಗೆ ಪುಟ್ಟ ಹುಡುಗಿಯೊಬ್ಬಳು ಸಖತ್ ಕ್ಲಾಸ್ ತೆಗೆದುಕೊಂಡಿದ್ದಾಳೆ.

    ವಿಡಿಯೋ ಮೂಲಕ ರಮ್ಯಾ ಅವರಿಗೆ ಕ್ಲಾಸ್ ಮಾಡಿದ ಬಾಲಕಿ ಹಾರಿಕ ಮಂಜುನಾಥ್ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    https://twitter.com/divyaspandana/status/1057842482975817728

    ವಿಡಿಯೋದಲ್ಲೇನಿದೆ?:
    ಅಲ್ಲ ರಮ್ಯಾಕ್ಕ ಯಾವ ಸ್ಟ್ಯಾಚ್ಯು ಆಫ್ ಯೂನಿಟಿ ಎಂಬ ಎತ್ತರವಾದ ಪ್ರತಿಮೆಯನ್ನ ಕಟ್ಟಿಸಿದಂತಹ ವ್ಯಕ್ತಿಯೇ ಆ ಪ್ರತಿಮೆಯ ಕೆಳಗಡೆ ನಿಂತುಕೊಂಡಾಗ ಒಂದು ಹಕ್ಕಿಯ ಹಿಕ್ಕೆಯ ರೀತಿಯಲ್ಲಿ ನಿಮಗೆ ಕಾಣಿಸೋದಾದ್ರೆ ಆ ಪ್ರತಿಮೆ ಇನ್ನಷ್ಟು ಎತ್ತರವಾಗಿದೆ ಎಂಬುದನ್ನು ನೀವು ಯೋಚಿಸಬೇಕಾಗುತ್ತದೆ. ಅದು ಬಿಡಿ ಆ ಪ್ರತಿಮೆಯನ್ನು ಕಟ್ಟಿಸಿದಂತಹ ವ್ಯಕ್ತಿಯ ವ್ಯಕ್ತಿತ್ವ ಇನ್ನಷ್ಟು ಎತ್ತರವಾದುದಂತ ನೀವೇ ಯೋಚಿಸಬೇಕಾಗಿದೆ ಅಕ್ಕ.

    ಆ ವ್ಯಕ್ತಿ ಕಟ್ಟಿರೋದು ತನ್ನ ತಂದೆ ಅಥವಾ ತಾಯಿಯ ಪ್ರತಿಮೆ ಅಲ್ಲ. ಸ್ವತಃ ನಿಮ್ಮ ಕಾಂಗ್ರೆಸ್ ನ ಹಿರಿಯ ನಾಯಕರಾದಂತಹ ಸರ್ದಾರ್ ವಲ್ಲಭಭಾಯ್ ಅವರ ಪ್ರತಿಮೆಯನ್ನು ಅವರು ಕಟ್ಟಿಸಿರೋದು. ಮತ್ತೊಮ್ಮೆ ಹೇಳ್ತಾ ಇದ್ದೀನಿ ನೆನಪಿಟ್ಟಿಕೊಳ್ಳಿ, ಅಂಡರ್ ಲೈನ್ ಮಾಡಿಕೊಳ್ಳಿ, ಕಾಂಗ್ರೆಸ್ ಹಿರಿಯ ನಾಯಕ ಸರ್ದಾರ್ ವಲಭಭಾಯ್ ಪಟೇಲರ್ ಪ್ರತಿಮೆಯನ್ನು ನರೇಂದ್ರ ಮೋದಿಯವರು ಕಟ್ಟಿಸಿದ್ದಾರೆ. ಅಲ್ಲಕ್ಕ ನಿಮ್ಮ ಕಾಂಗ್ರೆಸ್ ಪಕ್ಷಕಂತೂ ಆ ವ್ಯಕ್ತಿಗೆ ಸಲ್ಲಿಸಬೇಕಾದಂತಹ ನ್ಯಾಯಯುತ ಗೌರವವನ್ನು ಸಲ್ಲಿಸಿಲ್ಲ. ಅದು ಬಿಟ್ಟು ಬೇರೆ ಪಕ್ಷದವರು ಅವರಿಗೆ ಗೌರವ ಸಲ್ಲಿಸುತ್ತಿದ್ದಾರೆ ಅಂದ್ರೆ ಅದನ್ನು ನೋಡಿ ಆನಂದಿಸಿ ಅಕ್ಕಾ. ಸಂತೋಷಪಡಿ ಅಂತ ಹೇಳಿದ್ದಾರೆ.

    ಮಾತು ಮುಂದುವರಿಸಿದ ಬಾಲಕಿ, ಅಲ್ಲಕ್ಕ ಇಷ್ಟು ಎತ್ತರವಾದ ಪ್ರತಿಮೆಯನ್ನು ನೋಡಿದ್ರೆನೇ ನೀವು ಈ ರೀತಿ ಕಮೆಂಟ್ ಮಾಡ್ತಿರಂತಾದ್ರೆ ಇನ್ನು ಅದಕ್ಕಿಂತ ಎತ್ತರವಾದ ಶಿವಾಜಿ ಮಹಾರಾಜರ ಪ್ರತಿಮೆ ನಿರ್ಮಾಣಗೊಳ್ಳುತ್ತಿದೆ ಅಲ್ವ ಅದಕ್ಕೆ ನೀವು ಯಾವ ರೀತಿ ಕಮೆಂಟ್ ಮಾಡ್ತೀರೋ ಅನ್ನೋದನ್ನ ನನಗೆ ಊಹಿಸಲೂ ಸಾಧ್ಯವಿಲ್ಲ ಅಂತ ರಮ್ಯಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ.

    ರಮ್ಯಾ ಟೀಕಿಸಿದ್ದೇನು?:
    ಬುಧವಾರ ಗುಜರಾತಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸರ್ದಾರ್ ವಲ್ಲಭಭಾಯಿ ಪಟೇಲರ 182 ಅಡಿ ಎತ್ತರದ ಏಕತಾ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿದ್ದರು. ನರೇಂದ್ರ ಮೋದಿಯವರು ಪ್ರತಿಮೆ ಕಾಲ ಬಳಿ ನಿಂತು ತೆಗೆಸಿಕೊಂಡಿದ್ದ ಫೋಟೋವನ್ನು ನಟಿ ರಮ್ಯಾ ತಮ್ಮ ಟ್ವಿಟ್ಟರ್ ನಲ್ಲಿ ಹಾಕಿ ಕಾಲೆಳೆದಿದ್ದರು. ರಮ್ಯಾ ಟ್ವಿಟ್ಟರ್ ನಲ್ಲಿ, ಪುತ್ಥಳಿಯ ಬಳಿ ಮೋದಿ ನಿಂತಿರುವ ಚಿತ್ರವನ್ನು ಹಾಕಿ, ಹಕ್ಕಿ ಗಲೀಜು ಮಾಡಿದೆಯೇ? ಎಂಬ ಅಡಿಬರಹವನ್ನು ಹಾಕಿ ಪ್ರಶ್ನಿಸಿದ್ದರು.

    ಟ್ವೀಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ರಮ್ಯಾರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಕಾಂಗ್ರೆಸ್‍ನಲ್ಲಿರುವ ಎಲ್ಲಾ ನಾಯಕರ ಸಂಸ್ಕೃತಿಯು ಹೀಗೆಯೇ? ರಾಹುಲ್ ಗಾಂಧಿ ಹೀಗೆ ಮಾಡಿ ಎಂದು ನಿಮಗೆ ಸಲಹೆ ಕೊಟ್ಟಿದ್ದಾರಾ ಎಂದು ಪ್ರಶ್ನಿಸಿದ್ದರು.

    https://www.youtube.com/watch?v=P_L1Zb-WCss&feature=youtu.be

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗೆಳೆಯನ ಜೊತೆಗಿದ್ದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಯುವಕರು

    ಗೆಳೆಯನ ಜೊತೆಗಿದ್ದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಯುವಕರು

    -ಗೆಳತಿಯನ್ನು ಬಿಟ್ಟು ಕಾಲ್ಕಿತ್ತ ಗೆಳೆಯ

    ದಿಸ್ಪುರ್: ತನ್ನ ಮುಸ್ಲಿಂ ಪ್ರಿಯಕರನೊಂದಿಗೆ ಪಾರ್ಕ್ ನಲ್ಲಿ ಕುಳಿತಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಯುವಕರ ಗುಂಪೊಂದು ದೌರ್ಜನ್ಯ ನಡೆಸಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ.

    ಬಾಲಕಿ ಪಾರ್ಕ್ ನಲ್ಲಿ ಪ್ರಿಯಕರನ ಜೊತೆ ಕುಳಿತುಕೊಂಡಿದ್ದಳು. ಬಾಲಕಿ ಮತ್ತು ಯುವಕ ಸಾರ್ವಜನಿಕವಾಗಿ ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಯುವಕರ ಗುಂಪೊಂದು ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ. ಯುವಕರ ಗುಂಪು ಹಲ್ಲೆಗೆ ಮುಂದಾಗುತ್ತಿದ್ದಂತೆ ಭಯಬೀತನಾದ ಪ್ರಿಯಕರ ಬಾಲಕಿಯನ್ನು ಬಿಟ್ಟು ಓಡಿ ಹೋಗಿದ್ದಾನೆ.

    ಬಾಲಕಿಯ ಮೇಲೆ ಮುಗಿಬಿದ್ದ ಯುವಕರ ಗುಂಪು ಆಕೆಯೊಂದಿಗೆ ಅಸಭ್ಯಬಾಗಿ ವರ್ತಿಸುವ ಮೂಲಕ ಲೈಂಗಿಕ ಕಿರುಕುಳ ನೀಡಿದ್ದಾರೆ. ಬಾಲಕಿ ಎಷ್ಟೇ ಮನವಿ ಮಾಡಿಕೊಂಡರು ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಎಲ್ಲ ದೃಶ್ಯಗಳು ಕೆಲ ಯುವಕರ ಮೊಬೈಲಿನಲ್ಲಿ ಸೆರೆಯಾಗಿವೆ. ಸದ್ಯ ಈ ವಿಡಿಯೋ ಅಸ್ಸಾಂನಲ್ಲಿ ವೈರಲ್ ಆಗಿದ್ದು, ಘಟನೆ ನಡೆದ ಸ್ಥಳದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

    ಕೆಲವು ತಿಂಗಳ ಹಿಂದೆ ಎಂಟು ಮಂದಿ ಯುವತಿಯೊಬ್ಬಳಿಗೆ ಕಿರುಕುಳವನ್ನು ನೀಡಿದ್ದ ಘಟನೆ ಬಿಹಾರದ ಯೆಹಾನಾಬಾದನಲ್ಲಿ ನಡೆದಿತ್ತು. ಕಿರುಕುಳವನ್ನು ನೀಡಿದ್ದಲ್ಲದೇ ವೀಡಿಯೊವನ್ನು ಸಾಮಾಜಿಕ ಜಾಲಾತಾಣಗಳಲ್ಲಿ ಅಪ್ಲೋಡ್ ಮಾಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಾಲಕಿಯ ಕೊಲೆಗೈದು ಟ್ರೋಲಿ ಬ್ಯಾಗ್‍ನಲ್ಲಿ ತುಂಬಿ ಬೀದಿಗೆ ಬಿಸಾಕಿದ್ರು!

    ಬಾಲಕಿಯ ಕೊಲೆಗೈದು ಟ್ರೋಲಿ ಬ್ಯಾಗ್‍ನಲ್ಲಿ ತುಂಬಿ ಬೀದಿಗೆ ಬಿಸಾಕಿದ್ರು!

    ನವದೆಹಲಿ: ದುಷ್ಕರ್ಮಿಗಳು ಬಾಲಕಿಯನ್ನು ಕೊಲೆಗೈದು, ಟ್ರೋಲಿ ಬ್ಯಾಗ್‍ನಲ್ಲಿ ತುಂಬಿ ಬೀದಿಯಲ್ಲಿ ಬಿಟ್ಟು ಹೋದ ಅಮಾನವೀಯ ಘಟನೆ ನವದೆಹಲಿಯಲ್ಲಿ ನಡೆದಿದೆ.

    ನವದೆಹಲಿಯ ಯಮುನಾ ಜೀವವೈವಿದ್ಯ ಉದ್ಯಾನ ಸಮೀಪದಲ್ಲಿ ಇಂದು ಬೆಳಗ್ಗೆ ಟ್ರೋಲಿ ಬ್ಯಾಗ್ ಪತ್ತೆಯಾಗಿದ್ದು, ಮೃತ ದೇಹ ಕೊಳೆತ ವಾಸನೆ ಬಂದಿದೆ. ಇದನ್ನು ನೋಡಿ, ಶಂಕೆ ವ್ಯಕ್ತಪಡಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಬ್ಯಾಗ್ ತೆರೆದು ನೋಡಿದಾಗ ಸುಮಾರು 8ರಿಂದ 9 ವರ್ಷದ ಬಾಲಕಿ ಮೃತದೇಹ ಪತ್ತೆಯಾಗಿದೆ.

    ಮೃತ ಬಾಕಿಯ ದೇಹವು ಕೊಳೆತಿದ್ದು, ಕತ್ತಿನ ಮೇಲೆ ಮಾರ್ಕ್ ಇರುವುದು ಕಂಡುಬಂದಿದೆ. ಮರಣೋತ್ತರ ಪರೀಕ್ಷೆಗೆ ಬಾಲಕಿಯ ದೇಹವನ್ನು ಅರುಣಾ ಅಶ್ರಫ್ ಅಲಿ ಆಸ್ಪತ್ರಗೆ ಸಾಗಿಸಲಾಗಿದೆ. ಈ ಹಿಂದೆ ನಾಪತ್ತೆ ಆಗಿದ್ದ ಬಾಲಕಿಯ ಲಿಸ್ಟ್ ತೆಗೆದು, ಪೊಲೀಸರು ಮೃತಳ ಮಾಹಿತಿ ಕಲೆಹಾಕುತ್ತಿದ್ದಾರೆ. ಈ ಕುರಿತು ತನಿಖೆ ಚುರುಕುಗೊಳಿಸಿದ್ದಾರೆ ಎಂದು ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೂರೂವರೆ ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಶಾಲಾ ಬಸ್ ಚಾಲಕ!

    ಮೂರೂವರೆ ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಶಾಲಾ ಬಸ್ ಚಾಲಕ!

    ಲಕ್ನೋ: ಮೂರೂವರೆ ವರ್ಷದ ವಿದ್ಯಾರ್ಥಿನಿಯ ಮೇಲೆ ಶಾಲೆಯ ಬಸ್ ಚಾಲಕನೊಬ್ಬ ಅತ್ಯಾಚಾರ ಎಸಗಿದ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. ಚಾಲಕನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಶಾಲೆಯ ಆಡಳಿತ ಮಂಡಳಿ ಅಮಾನವೀಯತೆ ಮೆರೆದಿದೆ.

    ಏನಿದು ಪ್ರಕರಣ?:
    ಸಂತ್ರಸ್ತ ಬಾಲಕಿ ನೋಯಿಡಾದ ಖಾಸಗಿ ಶಿಶುವಿಹಾರಕ್ಕೆ ಬಸ್‍ನಲ್ಲಿ ಹೋಗುತ್ತಿದ್ದಳು. ಎಂದಿನಂತೆ ಅಕ್ಟೋಬರ್ 9ರಂದು ಬಾಲಕಿ ಬಸ್‍ನಲ್ಲಿ ಮನೆಗೆ ಮರಳುತ್ತಿದ್ದಾಗ ಚಾಲಕ ಅತ್ಯಾಚಾರ ಎಸಗಿದ್ದಾನೆ. ಇದರಿಂದ ಗಾಬರಿಗೊಂಡಿದ್ದ ಬಾಲಕಿ ಬಸ್‍ನಿಂದ ಇಳಿದು, ಅಳುತ್ತಲೇ ತಂದೆಯನ್ನು ಸೇರಿಕೊಂಡಿದ್ದಾಳೆ ಎಂದು ಸಂತ್ರಸ್ತ ಬಾಲಕಿ ತಾಯಿ ಹೇಳಿದ್ದಾರೆ.

    ಮಗಳನ್ನು ಸಂತೈಸಿ ಕೇಳಿದಾಗ, ಚಾಲಕ ಎಸಗಿದ ಕೃತ್ಯ ವಿವರಿಸಿದ್ದಾಳೆ. ಅಷ್ಟೇ ಅಲ್ಲದೆ ಆತನು ವಿಡಿಯೋ ಮಾಡಿಕೊಂಡು, ಯಾರಿಗೂ ಹೇಳಬೇಡ ಅಂತಾ ಎಚ್ಚರಿಕೆ ನೀಡಿ, ಹಲ್ಲೆ ಮಾಡಿದ್ದಾನೆಂದು ಮಗಳು ಕಣ್ಣಿರಿಟ್ಟಿದ್ದಾಳೆ ಎಂದು ಸಂತ್ರಸ್ತ ಬಾಲಕಿ ಪೋಷಕರು ದೂರಿದ್ದಾರೆ.

    ಈ ಸಂಬಂಧ ಚಾಲಕನ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಶಾಲೆಯ ಆಡಳಿತ ಮಂಡಳಿಗೆ ದೂರು ದಾಖಲಾಗಿತ್ತು. ಆದರೆ ಅವರು ಇಲ್ಲಿಯವರೆಗೂ ಯಾವುದೇ ಕ್ರಮಕೈಗೊಳ್ಳಲಿಲ್ಲ. ಹೀಗಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಂತ್ರಸ್ತ ಬಾಲಕಿ ಕುಟುಂಬಸ್ಥರು ಗುರುವಾರ ದೂರು ನೀಡಿದ್ದಾರೆ ಎಂದು ಗೌತಮ್ ಬುದ್ಧನಗರ ಗ್ರಾಮಾಂತರ ಪೊಲೀಸ್ ಅಧೀಕ್ಷಕ ವಿನೀತ್ ಜೈಸ್ವಾಲ್ ತಿಳಿಸಿದ್ದಾರೆ.

    ಈ ಸಂಬಂಧ ಚಾಲಕನ ವಿರುದ್ಧ ಪೊಕ್ಸೋ ಕಾಯ್ದೆ ಅಡಿ ಸುರಜ್‍ಪುರ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಬಾಲಕಿಯನ್ನು ಶುಕ್ರವಾರ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಇತ್ತ ಆರೋಪಿ ಚಾಲಕನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ ಎಂದು ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೊಬೈಲ್ ಕದ್ಲು ಅಂತಾ 14ರ ಬಾಲೆಯನ್ನ ಮರಕ್ಕೆ ಕಟ್ಟಿ ಲೈಂಗಿಕ ಕಿರುಕುಳ ಕೊಟ್ರು!

    ಮೊಬೈಲ್ ಕದ್ಲು ಅಂತಾ 14ರ ಬಾಲೆಯನ್ನ ಮರಕ್ಕೆ ಕಟ್ಟಿ ಲೈಂಗಿಕ ಕಿರುಕುಳ ಕೊಟ್ರು!

    ಚೆನ್ನೈ: ಮೊಬೈಲ್ ಕಳ್ಳತನ ಮಾಡಿದಳು ಅಂತಾ ಅಪ್ರಾಪ್ತ ಬಾಲಕಿಯನ್ನು ಮರಕ್ಕೆ ಕಟ್ಟಿ, ಲೈಂಗಿಕ ಕಿರುಕುಳ ನೀಡಿ ಕಬ್ಬಿಣ ರಾಡ್‍ನಿಂದ ಬರೆ ಹಾಕಿದ ಅಮಾನವೀಯ ಘಟನೆ ತಮಿಳುನಾಡಿನ ತಿರುವೈಯರು ಜಿಲ್ಲೆಯಲ್ಲಿ ನಡೆದಿದೆ.

    ಹಲ್ಲೆಗೆ ಒಳಗಾದ ಬಾಲಕಿ 14 ವರ್ಷದವಳಾಗಿದ್ದು, ಅರ್ಧಕ್ಕೆ ವ್ಯಾಸಂಗ ನಿಲ್ಲಿಸಿದ್ದಳು. 16 ವರ್ಷದ ಬಾಲಕ ಸೇರಿದಂತೆ ಒಟ್ಟು 5 ಜನರು ಕೃತ್ಯ ಎಸಗಿದ್ದು, ಕುಡಿತಂಗಿ ನಿವಾಸಿ ಬಾಲಕ ಲೈಂಗಿಕ ಕಿರುಕುಳ ಕೊಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ನಡೆದದ್ದು ಏನು?:
    ಎಂ.ಕನ್ನಾ ಹಾಗೂ ಎಂ.ಮಹೇಂದ್ರನ್ ಸಹೋದರರ ಮನೆಯಲ್ಲಿ ಸಂತ್ರಸ್ತ ಬಾಲಕಿ ಮೊಬೈಲ್ ಕಳ್ಳತನ ಮಾಡಿದ್ದಾಳೆ. ಹೀಗಾಗಿ ಬಾಲಕಿಯನ್ನು ಹಿಡಿದು ಮರಕ್ಕೆ ಕಟ್ಟಿ ಹಾಕಿ, ಆಕೆಯ ಮೇಲೆ ಸಹೋದರರು ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಕನ್ನಾ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ.

    ಎಸ್.ಶಿವಕುಮಾರ್, ಒಬ್ಬ ಬಾಲಕ ಹಾಗೂ ಸ್ಥಳೀಯ ಮಹಿಳೆ ವಿದ್ಯಾ ಎಂಬವರು ಕನ್ನಾ ಸಹೋದರರ ಜೊತೆಗೂಡಿದ್ದಾರೆ. ಬಳಿಕ ಮರಕ್ಕೆ ಕಟ್ಟಿಹಾಕಿದ್ದ ಬಾಲಕಿಗೆ ಕಬ್ಬಿಣದ ರಾಡ್‍ನಿಂದ ಬರೆ ಹಾಕಿದ್ದಾರೆ. ದುಷ್ಕರ್ಮಿಗಳ ಹಿಂಸೆ ತಾಳಲಾರದೇ ಬಾಲಕಿ ಅಲ್ಲಿಂದ ತಪ್ಪಿಸಿಕೊಂಡು ಬಾಳೆ ತೋಟದಲ್ಲಿ ಬಚ್ಚಿಕೊಂಡಿದ್ದಾಳೆ. ಕೆಲಹೊತ್ತು ಕಾಲ ಕಳೆದು, ಬಳಿಕ ಮನೆ ಸೇರಿದ್ದಾಳೆ.

    ತನ್ನ ಮೇಲಾದ ಹಲ್ಲೆ ಹಾಗೂ ಲೈಂಗಿಕ ಕಿರುಕುಳ ಕುರಿತು ಬಾಲಕಿ ತನ್ನ ತಂದೆ ಮುಂದೆ ಹೇಳಿಕೊಂಡಿದ್ದಾಳೆ. ಅಸ್ವಸ್ಥಗೊಂಡಿದ್ದ ಸಂತ್ರಸ್ತ ಬಾಲಕಿಯನ್ನು ಪೋಷಕರು ಆಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ಕೊಡಿಸುತ್ತಿದ್ದಾರೆ. ಈ ಕುರಿತು ಬಾಲಕಿಯ ತಂದೆ ತಿರುವೈಯರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

    ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದ ಪೊಲೀಸರು, ಸೋಮವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರ ವಿರುದ್ಧ ಪೋಕ್ಸೋ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚುಡಾಯಿಸಿ ಬಾಲಕಿಯ ತಲೆ ಕತ್ತರಿಸಿ ರೋಡ್‍ನಲ್ಲಿ ಬಿಸಾಡ್ದ!

    ಚುಡಾಯಿಸಿ ಬಾಲಕಿಯ ತಲೆ ಕತ್ತರಿಸಿ ರೋಡ್‍ನಲ್ಲಿ ಬಿಸಾಡ್ದ!

    ಚೆನ್ನೈ: 13 ವರ್ಷದ ಬಾಲಕಿಯ ತಲೆಯನ್ನು ಕತ್ತರಿಸಿ ಬೀದಿಯಲ್ಲಿ ಎಸೆದ 27 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

    ಸೋಮವಾರ ಈ ಘಟನೆ ನಡೆದಿದ್ದು, ರಾಜಲಕ್ಷ್ಮೀ(13) ಕಾಮುಕನಿಗೆ ಬಲಿಯಾದ ಬಾಲಕಿ. ದಿನೇಶ್ ಕುಮಾರ್ ಬಾಲಕಿಗೆ ಕಿರುಕುಳವನ್ನು ನೀಡಿದ ಆರೋಪಿ. ತಲವಾಯಪಟ್ಟಿ ನಿವಾಸಿಯಾದ ರಾಜಲಕ್ಷ್ಮೀ 8 ನೇ ತರಗತಿ ಓದುತ್ತಿದ್ದಳು. ಪ್ರತಿನಿತ್ಯ ಬಾಲಕಿ ರಾಜಲಕ್ಷ್ಮೀಗೆ ದಿನೇಶ್ ಚುಡಾಯಿಸುತ್ತಿದ್ದ. ಇದೇ ವೇಳೆ ಸೋಮವಾರ ರಾಜಲಕ್ಷ್ಮೀ ಮನೆಯಲ್ಲಿ ಯಾರೂ ಇಲ್ಲದ್ದನ್ನು ಕಂಡು ಮನೆಯೊಳಗೆ ನುಗ್ಗಿ ಅವಳನ್ನು ಮತ್ತಷ್ಟು ಚುಡಾಯಿಸಿದ್ದಾನೆ ಎಂದು ಅತ್ತೆರ್ ಪೊಲೀಸರು ಹೇಳಿದ್ದಾರೆ.

    ಇದೇ ವೇಳೆ ದಿನೇಶ್ ಮನೆಯೊಳಗೆ ನುಗ್ಗಿದಾಗ ರಾಜಲಕ್ಷ್ಮೀ ಕಿರುಚಿಕೊಂಡಿದ್ದಾಳೆ. ರಾಜಲಕ್ಷ್ಮೀಯ ಕಿರುಚಾಟವನ್ನು ಕೇಳಿಸಿಕೊಂಡು ತಾಯಿ ಸ್ಥಳಕ್ಕೆ ಆಗಮಿಸುತ್ತಿದ್ದರು. ಇದನ್ನು ಕಂಡ ಕಾಮುಕ ಬಾಲಕಿ ಮೇಲೆ ಹಲ್ಲೆ ಮಾಡಿ ಆಕೆಯ ತಲೆಯನ್ನು ಕತ್ತರಿಸಿ ಬೀದಿಯಲ್ಲಿ ಎಸೆದು ಹೋಗಿದ್ದಾರೆ.

    ಈ ಘಟನೆಯ ವೇಳೆ ಆರೋಪಿ ದಿನೇಶ್ ಮದ್ಯಪಾನ ಸೇವನೆ ಮಾಡಿದ್ದು, ಮಾನಸಿಕ ಸ್ಥಿಮಿತ ಕಳೆದುಕೊಂಡ ವ್ಯಕ್ತಿಯಂತೆ ವರ್ತಿಸುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನೀರಿನಲ್ಲಿ ಕೊಚ್ಚಿ ಹೋಗ್ತಿದ್ದ ಬಾಲಕಿಯನ್ನ ರಕ್ಷಿಸಿದ ಯುವಕ-ವಿಡಿಯೋ ನೋಡಿ

    ನೀರಿನಲ್ಲಿ ಕೊಚ್ಚಿ ಹೋಗ್ತಿದ್ದ ಬಾಲಕಿಯನ್ನ ರಕ್ಷಿಸಿದ ಯುವಕ-ವಿಡಿಯೋ ನೋಡಿ

    ಬೀಜಿಂಗ್: ನದಿಯಲ್ಲಿ ಮುಳುಗುತ್ತಿದ್ದ 6 ವರ್ಷದ ಬಾಲಕಿಯನ್ನು ಡೆಲಿವೆರಿ ಬಾಯ್ ರಕ್ಷಿಸಿದ್ದು, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿದ ಜನರು ಯುವಕ ಸಾಹಸಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

    ಅಕ್ಟೋಬರ್ 13ರಂದು ಚೀನಾದ ಝೀಜಾಂಗ್ ಪ್ರಾಂತ್ಯದ ಶೌಕ್ಷಿಂಗ್ ನಗರದಲ್ಲಿ ನಡೆದಿದೆ. ಈ ವಿಡಿಯೋವನ್ನು ಸ್ಥಳೀಯ ಮಾಧ್ಯಮ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ವಿಶ್ವದಾದ್ಯಂತ ವೈರಲ್ ಆಗಿದೆ.

    ಇಬ್ಬರು ಮಕ್ಕಳು ನದಿಯ ದಡದಲ್ಲಿ ನಿಂತಿದ್ದು, ಅದರಲ್ಲಿ 6 ವರ್ಷದ ಬಾಲಕಿ ಮೆಟ್ಟಿಲು ಇಳಿದು ನದಿ ಬಳಿ ತೆರಳಿದ್ದಾಳೆ. ನೋಡ ನೋಡುತ್ತಿದ್ದಂತೆ ನೀರಿನ ರಭಸಕ್ಕೆ ಬಾಲಕಿ ಮುಳಗಲು ಆರಂಭಿಸಿದ್ದಾಳೆ. ಇದೇ ವೇಳೆ ಅದೇ ಮಾರ್ಗದಲ್ಲಿ ಸಾಗುತ್ತಿದ್ದ ಯುವಕ ಬಾಲಕಿ ಧ್ವನಿ ಕೇಳಿ ಬೈಕ್ ನಿಲ್ಲಿಸಿ ನೀರಿಗೆ ಧುಮುಕಿದ್ದಾನೆ. ಬಾಲಕಿಯನ್ನು ರಕ್ಷಿಸಿ ದಡಕ್ಕೆ ತಂದು ಮತ್ತು ಕೊಚ್ಚಿ ಹೋಗುತ್ತಿದ್ದ ಆಕೆ ಶೂ ಸಹವನ್ನು ಎತ್ತಿಕೊಂಡು ಬಂದಿದ್ದಾನೆ. ಇದನ್ನೂ ಓದಿ: ಕಟ್ಟಡದ ಬಾಲ್ಕನಿಯಲ್ಲಿ ನೇತಾಡ್ತಿದ್ದ ಕಂದನ ರಕ್ಷಣೆ-ವಿಡಿಯೋ ನೋಡಿ

    ಯುವಕನನ್ನು 23 ವರ್ಷದ ಲಿನ್‍ಫಿಂಗ್ ಎಂದು ಗುರುತಿಸಲಾಗಿದೆ. ಚೀನಾದ ಮಾಧ್ಯಮಗಳಲ್ಲಿ ವಿಡಿಯೋ ಪ್ರಸಾರವಾದ ಬಳಿಕ ಯುವಕನ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಕೆಲವರು ಯುವಕನನ್ನು ಸೂಪರ್ ಹೀರೋ ಅಂದರೆ, ಹಲವರು ಆತ ಬಾಲಕಿಗೆ ದೇವರ ರೂಪದಲ್ಲಿ ಬಂದ ವ್ಯಕ್ತಿ ಎಂದು ಕಮೆಂಟ್ ಮೂಲಕ ತಿಳಿಸಿದ್ದಾರೆ. ಇದನ್ನೂ ಓದಿ: 4ನೇ ಅಂತಸ್ತಿನ ಕಿಟಕಿಯಲ್ಲಿ ನೇತಾಡ್ತಿದ್ದ ಬಾಲಕಿಯನ್ನು ರಕ್ಷಿಸಿದ್ರು ಸೂಪರ್ ಹೀರೋಗಳು

    ಲಿನ್ ಸಾಹಸಕ್ಕೆ ಮೆಚ್ಚುಗೆ ಸೂಚಿಸಿದ ಆತನ ಕಂಪನಿ ‘ಮಾಡೆಲ್ ಡ್ರೈವರ್’ ಎಂಬ ಪ್ರಶಸ್ತಿ ನೀಡಿ ಗೌರವಿಸಿದೆ. ಪ್ರಶಸ್ತಿ ಜೊತೆ ನಗದು ಬಹುಮಾನವನ್ನು ನೀಡಿದೆ ಎಂದು ಮಾಧ್ಯಮ ವರದಿ ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv