Tag: ಬಾಲಕಿಯರು

  • ಆಶ್ರಯ ತಾಣದಿಂದ ನಾಲ್ವರು ಅಪ್ತಾಪ್ತೆಯರು ಪರಾರಿ

    ಆಶ್ರಯ ತಾಣದಿಂದ ನಾಲ್ವರು ಅಪ್ತಾಪ್ತೆಯರು ಪರಾರಿ

    ಪಾಟ್ನಾ: ನಾಲ್ವರು ಅಪ್ರಾಪ್ತ ಬಾಲಕಿಯರು ದುಪ್ಪಟ್ಟಾ ಬಳಸಿ ಬಾಲಕಿಯರ ಆಶ್ರಯ ತಾಣಗಳಿಂದ ಪರಾರಿಯಾಗಿರುವ ಘಟನೆ ಬಿಹಾರದಲ್ಲಿ ನಡೆದಿದೆ.

    ನಾಲ್ವರು ಬಾಲಕಿಯರು ರಾಜ್ಯದ ಪಾಟಲೀಪುತ್ರ ಕಾಲನಿಯಲ್ಲಿರುವ ಸರ್ಕಾರಿ ಅನುದಾನಿತ ಆಶಾ ಕಿರಣ ಬಾಲಕಿಯರ ನಿಲಯದಿಂದ ಭಾನುವಾರ ಎಸ್ಕೇಪ್ ಆಗಿದ್ದಾರೆ. ಅವರಲ್ಲಿ 16 ವರ್ಷದ ಮೂವರು ಬಾಲಕಿಯರು ಮತ್ತು 12 ವರ್ಷದ ಒಬ್ಬ ಬಾಲಕಿ ಇದ್ದಳು. ಇವರು ನಿಲಯ ಕಟ್ಟಡದ ಎರಡನೇ ಮಹಡಿಯಿಂದ ದುಪ್ಪಟ್ಟಾದಿಂದ ಕೆಳಗಿಳಿದು ಪರಾರಿಯಾಗಿದ್ದಾರೆ ಎಂದು  ಪೊಲೀಸ್ ಅಧಿಕಾರಿ ತರ್ಕೇಶ್ವರ್ ನಾಥ್ ತಿವಾರಿ ಹೇಳಿದ್ದಾರೆ.

    ಬಾಲಕಿಯರು ಕಳೆದ ತಿಂಗಳಷ್ಟೇ ಆಶ್ರಯ ತಾಣಕ್ಕೆ ಬಂದಿದ್ದರು. ಆದರೆ ನಾಲ್ವರು ಏಕಕಾಲಕ್ಕೆ ಪರಾರಿಯಾಗಿದ್ದು, ಇದರಿಂದ ಅನೇಕ ಅನುಮಾನಗಳು ಮೂಡುತ್ತಿವೆ. ಸದ್ಯಕ್ಕೆ ಬಾಲಕಿಯರು ತಪ್ಪಿಸಿಕೊಂಡು ಹೋಗಲು ನಿಖರ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ತಿವಾರಿ ಹೇಳಿದರು.

    ಬಾಲಕಿಯರು ತಪ್ಪಿಸಿಕೊಂಡು ಹೋಗುವಾಗ ಆಶ್ರಯ ತಾಣದ ಭದ್ರತಾ ಸಿಬ್ಬಂದಿ ಕಟ್ಟಡದ ಒಳಗೆ ಇದ್ದರು ಎಂದು ತಿಳಿದು ಬಂದಿದೆ. ಆಶ್ರಯ ತಾಣದ ಅಧಿಕಾರಿಗಳು ಈ ಬಗ್ಗೆ ಎಫ್‍ಐಆರ್ ದಾಖಲಿಸಿದ್ದಾರೆ. ಪೊಲೀಸರು ದೂರು ದಾಖಲಿಸಿಕೊಂಡು ಈ ಬಗ್ಗೆ ತನಿಖೆಯನ್ನು ಆರಂಭಿಸಿದ್ದಾರೆ.

    ಬಿಹಾರದಲ್ಲಿ ಈ ಮೊದಲು ಏಪ್ರಿಲ್ ನಲ್ಲಿ ಮುಜಾಫರ್ ಪುರ್ ಆಶ್ರಯ ನಿಲಯದಲ್ಲಿ 34 ಬಾಲಕಿಯರ ಮೇಲೆ ಅತ್ಯಾಚಾರ ನಡೆದಿತ್ತು. ಈ ಸುದ್ದಿ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಇನ್ನೂ ಸೆಪ್ಟಂಬರ್ 24ರಂದು ಪಾಟ್ನಾದ ಆಶ್ರಯ ನಿಲಯದಿಂದ ಮಹಿಳೆಯೊಬ್ಬರು ಪರಾರಿಯಾಗಿದ್ದರು.

    ಅಕ್ಟೋಬರ್ 29 ರಂದು ಖಗಾರಿಯಾ ಜಿಲ್ಲೆಯ ಆಶ್ರಯ ತಾಣದಲ್ಲಿದ್ದ ಇಬ್ಬರು ಬಾಲಕಿಯರು ಎಸ್ಕೇಪ್ ಆಗಿದ್ದರು. ಪಾಟ್ನಾ ಆಶ್ರಯ ನಿಲಯದಿಂದ ಪರಾರಿಯಾಗಿದ್ದ ಮಹಿಳೆ ನಂತರ ಪತ್ತೆಯಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಸಹಪಾಠಿಗಳನ್ನೇ ಕೊಂದು ರಕ್ತ ಕುಡಿಯಲು ಸಂಚು ರೂಪಿಸಿದ್ದ ವಿದ್ಯಾರ್ಥಿನಿಯರು ಅರೆಸ್ಟ್

    ಸಹಪಾಠಿಗಳನ್ನೇ ಕೊಂದು ರಕ್ತ ಕುಡಿಯಲು ಸಂಚು ರೂಪಿಸಿದ್ದ ವಿದ್ಯಾರ್ಥಿನಿಯರು ಅರೆಸ್ಟ್

    ಫ್ಲೋರಿಡಾ: ನರಕ ಲೋಕದ ಸೈತಾನನ ಜೊತೆ ಇರಲು ತನ್ನ ಸಹಪಾಠಿಗಳನ್ನೇ ಕೊಲ್ಲಲು ಸಂಚು ರೂಪಿಸಿದ್ದ ಇಬ್ಬರು ವಿದ್ಯಾರ್ಥಿನಿಯರನ್ನು ಪೊಲೀಸರು ಬಂಧಿಸಿರುವ ಘಟನೆ ಅಮೆರಿಕದ ಬಾರ್ಟೊನಲ್ಲಿ ನಡೆದಿದೆ.

    ಬಾರ್ಟೊ ಮಿಡಿಲ್ ಸ್ಕೂಲ್‍ನ ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದ 11 ಮತ್ತು 12 ವರ್ಷದ ವಿದ್ಯಾರ್ಥಿನಿಯರು ತಮ್ಮ ಸ್ನೇಹಿತರನ್ನೇ ಕೊಂದು ಅವರ ರಕ್ತವನ್ನ ಕುಡಿಯಲು ಸಂಚು ರೂಪಿಸಿದ್ದರು.

    ಮಂಗಳವಾರ ಶಾಲೆಗೆ ಹರಿತವಾದ ಚಾಕುಗಳನ್ನ ತಂದಿದ್ದ ವಿದ್ಯಾರ್ಥಿನಿಯರು, ತರಗತಿಗೆ ಹಾಜರಾಗದ ಕಾರಣ ಶಾಲೆಯ ನಿರ್ವಾಹಕರು ಅವರನ್ನ ಹುಡುಕಲು ಹೊರಟಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಈ ಸಮಯದಲ್ಲಿ ಶಾಲೆಯ ಮಕ್ಕಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ಬಾರ್ಟೊ ಪೊಲೀಸರು ತಿಳಿಸಿದ್ದಾರೆ.

    ವಿಷಯ ತಿಳಿದ ನಿರ್ವಾಹಕರು ಕೂಡಲೇ ಪೊಲೀಸರಿಗೆ ಕರೆ ಮಾಡಿ, ಬಾಲಕಿಯರನ್ನ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದಾರೆ. ಕೊಲೆಗೆ ಸಂಚು ಮತ್ತು ಅಪಾಯಕಾರಿ ಆಯುಧವನ್ನ ತಂದಿರುವ ಅಡಿಯಲ್ಲಿ ಅವರನ್ನ ಪೊಲೀಸರು ಬಂಧಿಸಿದ್ದಾರೆ.

    ಹಾರರ್ ಸಿನಿಮಾದಿಂದ ಪ್ರೇರಿತರಾದ ಬಾಲಕಿಯರು, ಶಾಲೆಯ ವಾಶ್‍ರೂಂನಲ್ಲಿ ಚಿಕ್ಕ ಮಕ್ಕಳನ್ನ ಕೊಂದು, ಅವರ ರಕ್ತವನ್ನ ಕುಡಿದು, ಮಾಂಸವನ್ನ ತಿನ್ನೋದಕ್ಕೆ ಪ್ಲಾನ್ ಮಾಡಿದ್ದರು ಎಂದು ವಿಚಾರಣೆ ನಡೆಸಿದ ಅಧಿಕಾರಿಗಳು ತಿಳಿಸಿದ್ದಾರೆ.

    ಸುಮಾರು 15-25 ವಿದ್ಯಾರ್ಥಿಗಳನ್ನ ಹತ್ಯೆ ಮಾಡುವ ಉದ್ದೇಶ ನಮ್ಮದಾಗಿತ್ತು. ಎಲ್ಲರನ್ನ ಕೊಂದ ನಂತರ ಕೊನೆಯಲ್ಲಿ ನಾವು ಆತ್ಮಹತ್ಯೆ ಮಾಡಿಕೊಂಡು ನರಕ ಲೋಕಕ್ಕೆ ಹೋಗಿ, ಅಲ್ಲಿ ಸೈತಾನನ ಜೊತೆ ಇರಲು ಮುಂದಾಗಿದ್ದೇವು ಎಂದು ಬಾಲಕಿಯರು ತಮ್ಮ ಕೃತ್ಯದ ಬಗ್ಗೆ ತಿಳಿಸಿದ್ದಾರೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.

    ಈ ಘಟನೆಯಿಲ್ಲಿ ಶಾಲೆಯ ಯಾವ ಮಕ್ಕಳಿಗೂ ಹಾನಿಯಾಗಿಲ್ಲ ಮತ್ತು ಮಕ್ಕಳಿಗೆ ಇಂತಹ ವಿಷಯದ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಹೆಚ್ಚುವರಿ ಪೊಲೀಸ್ ಅಧಿಕಾರಿಗಳನ್ನ ಮತ್ತು ಕೌನ್ಸಿಲರ್ ಗಳನ್ನು ನೇಮಕಗೊಳಿಸುತ್ತೇವೆ ಎಂದು ಶಾಲೆಯ ಅಧಿಕಾರಿಗಳು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೂದಲಿನ ಸೌಂದರ್ಯಕ್ಕೆ ಮಾರು ಹೋಗಿ ಕಣ್ಣಿಗೆ ಕುತ್ತು ತಂದುಕೊಂಡ ಬಾಲಕಿಯರು

    ಕೂದಲಿನ ಸೌಂದರ್ಯಕ್ಕೆ ಮಾರು ಹೋಗಿ ಕಣ್ಣಿಗೆ ಕುತ್ತು ತಂದುಕೊಂಡ ಬಾಲಕಿಯರು

    ಕೊಪ್ಪಳ: ಕೂದಲಿನ ಸೌಂದರ್ಯಕ್ಕೆ ಮಾರು ಹೋಗಿ ಬಾಲಕಿ ಹಾಗೂ ಯುವತಿ ಕಣ್ಣಿಗೆ ಕುತ್ತು ತಂದುಕೊಂಡ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಗಂಗಾವತಿ ತಾಲೂಕಿನ ಜಂಗಮರ ಕಲ್ಗುಡಿ ಹಾಗೂ ಹಣವಾಳ ಗ್ರಾಮದಲ್ಲಿ ಪ್ರತ್ಯೇಕವಾಗಿ ಇಂತಹ ಘಟನೆ ನಡೆದಿದೆ. ಹಣವಾಳ ಗ್ರಾಮದ ಅನಿತಾ, ಜಂಗಮರ ಕಲ್ಗುಡಿ ಗ್ರಾಮದ ಚಾತುರ್ಯ ಕಣ್ಣಿಗೆ ಕುತ್ತು ತಂದುಕೊಂಡವರಾಗಿದ್ದು, ಇದೀಗ ಗಂಗಾವತಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಅನಿತಾ ಹಾಗೂ ಚಾತುರ್ಯನ ಅಮ್ಮಂದಿರು ನಮ್ಮ ಮಕ್ಕಳ ಕೂದಲು ಕಪ್ಪಾಗಿ ಆಗುತ್ತವೆ ಅಲ್ಲದೇ ತಲೆಯಲ್ಲಿ ಹೇನಿನ ಸಮಸ್ಯೆ ಇರಲ್ಲ ಎಂದು ಸೀತಾಫಲ ಹಣ್ಣಿನ ಬೀಜವನ್ನು ಮಿಕ್ಸಿಯಲ್ಲಿ ಹಾಕಿ ಅದನ್ನು ಪೇಸ್ಟ್ ಮಾಡಿ ರಾತ್ರಿ ತಲೆಗೆ ಹಚ್ಚಿದ್ದಾರೆ. ಆದರೆ ಆ ಬೀಜದ ವಿಷಭರಿತ ರಾಸಾಯನಿಕವು ಕಣ್ಣಿನ ಒಳಗೆ ಹೋಗಿ ಕಣ್ಣುಗಳು ಮಂಜು ಮಂಜಾಗಿ ಕಂಡಿವೆ.

    ಸದ್ಯ ಇದರಿಂದ ಆತಂಕಗೊಂಡ ಪೋಷಕರು ಗಂಗಾವತಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇಬ್ಬರಿಗೆ ಕಣ್ಣಿನ ಚಿಕಿತ್ಸೆ ಮಾಡಿದ ವೈದ್ಯರು, ಯುವತಿ ಮತ್ತು ಬಾಲಕಿಯನ್ನು ಕಣ್ಣಿನ ದೋಷದಿಂದ ಪಾರು ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಒಂದೇ ಒಂದು ಟ್ವೀಟ್‍ನಿಂದ 26 ಅಪ್ರಾಪ್ತ ಬಾಲಕಿಯರ ರಕ್ಷಣೆ!

    ಒಂದೇ ಒಂದು ಟ್ವೀಟ್‍ನಿಂದ 26 ಅಪ್ರಾಪ್ತ ಬಾಲಕಿಯರ ರಕ್ಷಣೆ!

    ಲಖ್ನೋ: ಒಂದೇ ಒಂದು ಟ್ವೀಟ್‍ನಿಂದಾಗಿ 26 ಅಪ್ರಾಪ್ತ ಬಾಲಕಿಯರನ್ನು ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್​ಪಿ) ಮತ್ತು ರೈಲ್ವೆ ರಕ್ಷಣಾ ದಳ (ಆರ್​ಪಿಎಫ್) ರಕ್ಷಣೆ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಜುಲೈ 5ರಂದು 26 ಬಾಲಕಿಯರನ್ನು ಮುಜಾಫರ್ ಪುರ-ಬಾಂದ್ರಾ ಔದ್ ಎಕ್ಸ್ ಪ್ರೆಸ್ ರೈಲಿನಲ್ಲಿ ಸಾಗಿಸಲಾಗುತ್ತಿತ್ತು. ಈ ವೇಳೆ ಬಾಲಕಿಯರು ಅಳುತ್ತಿರವುದನ್ನು ಕೇಳಿಸಿಕೊಂಡಿದ್ದ ಪ್ರಯಾಣಿಕರೊಬ್ಬರು ಅಪಹರಣ ಶಂಕೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. ಇದನ್ನು ನೋಡಿದ ರೈಲ್ವೆ ಅಧಿಕಾರಿಗಳು, ಕಳ್ಳ ಸಾಗಾಣಿಕೆ ಪತ್ತೆ ಘಟಕಕ್ಕೆ ಬಾಲಕಿಯರನ್ನು ಪತ್ತೆ ಹಚ್ಚುವಂತೆ ಸೂಚಿಸಿದ್ದರು. ತಕ್ಷಣವೇ ಜಾಗೃತರಾದ ಇಬ್ಬರು ಪೊಲೀಸರು ಕಪತ್ ಗಂಜ್‍ನಿಂದ ಗೋರಖಪುರವರೆ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದರು.

    ಗೋರಕ್‍ಪುರಗೆ ರೈಲು ಬರುತ್ತಿದ್ದಂತೆ ಜಿಆರ್​ಪಿ ಮತ್ತು ಆರ್​ಪಿಎಫ್ ಪೊಲೀಸರು ಬಾಲಕಿಯರನ್ನು ರಕ್ಷಣೆ ಮಾಡಿದ್ದು, ಅವರನ್ನು ಕರೆದೊಯ್ಯುತ್ತಿದ್ದ 22 ವರ್ಷದ ಯುವಕ ಹಾಗೂ 55 ವರ್ಷದ ವ್ಯಕ್ತಿಯನ್ನು ವಶಕ್ಕೆ ಪಡಿದಿದ್ದಾರೆ.

    ಬಾಲಕಿಯರು 10 ರಿಂದ 14 ವರ್ಷದವರಾಗಿದ್ದು, ಬಿಹಾರದ ಪಶ್ಚಿಮ ಚಂಪಾರಣ್ ಪ್ರದೇಶದವರು. ಅವರನ್ನು ನರಕ್ತಿಯಾಗಂಜ್ ನಿಂದ ಇದ್ಗಾಕ್ಕೆ ಕರೆದೊಯ್ಯಲಾಗುತ್ತಿತ್ತು. ಈ ಕುರಿತು ಸದ್ಯ ಬಾಲಕಿರ ಪೋಷಕರಿಗೆ ಮಾಹಿತಿ ನೀಡಲಾಗಿದೆ ಎಂದು ಆರ್‍ಪಿಎಫ್ ಅಧಿಕಾರಿಗಳು ತಿಳಿಸಿದ್ದಾರೆ.

  • 88 ಹುಡುಗಿಯರಿಗೆ ಬಟ್ಟೆ ಬಿಚ್ಚುವಂತೆ ಶಿಕ್ಷೆ ನೀಡಿದ ಶಿಕ್ಷಕರು

    88 ಹುಡುಗಿಯರಿಗೆ ಬಟ್ಟೆ ಬಿಚ್ಚುವಂತೆ ಶಿಕ್ಷೆ ನೀಡಿದ ಶಿಕ್ಷಕರು

    ಇಟಾನಗರ್: ಅರುಣಾಚಲಪ್ರದೇಶದ ಬಾಲಕಿಯರ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯರಿಗೆ ಬಟ್ಟೆ ಬಿಚ್ಚುವಂತೆ ಮೂವರು ಶಿಕ್ಷಕರು ಶಿಕ್ಷೆ ನೀಡಿರುವ ಬಗ್ಗೆ ವರದಿಯಾಗಿದೆ.

    ನವೆಂಬರ್ 23ರಂದು ಪಾಪುಮ್ ಪರೆ ಜಿಲ್ಲೆಯ ತಾನಿ ಹಪ್ಪಾದಲ್ಲಿರುವ ಕಸ್ತೂರಬಾ ಬಾಲಿಕಾ ವಿದ್ಯಾಲಯದಲ್ಲಿ 6 ಮತ್ತು 7ನೇ ತರಗತಿಯ ಸುಮಾರು 88 ವಿದ್ಯಾರ್ಥಿನಿಯರಿಗೆ ಈ ರೀತಿ ಅವಮಾನಕರವಾಗಿ ಶಿಕ್ಷೆ ನೀಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಮುಖ್ಯ ಶಿಕ್ಷಕರ ಬಗ್ಗೆ ಕೆಟ್ಟ ಶಬ್ದಗಳನ್ನ ಬರೆದಿದ್ದರಿಂದ ಈ ರೀತಿ ಶಿಕ್ಷಿಸಲಾಗಿದೆ.

    ನವೆಂಬರ್ 27ರಂದು ವಿದ್ಯಾರ್ಥಿನಿಯರು ಆಲ್ ಸಗಾಲೀ ಸ್ಟೂಡೆಂಟ್ಸ್ ಯೂನಿಯನ್(ಎಎಸ್‍ಎಸ್‍ಯು) ಮೊರೆ ಹೋಗಿದ್ದು, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ.

    ದೂರಿನ ಪ್ರಕಾರ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ವಿದ್ಯಾರ್ಥಿನಿಯೊಬ್ಬಳ ಬಗ್ಗೆ ಕೆಟ್ಟ ಶಬ್ದಗಳನ್ನ ಬರೆಯಲಾಗಿದ್ದ ಪೇಪರ್ ಸಿಕ್ಕ ನಂತರ ಇಬ್ಬರು ಸಹಾಯಕ ಶಿಕ್ಷಕರು ಹಾಗೂ ಒಬ್ಬರು ಜೂನಿಯರ್ ಶಿಕ್ಷಕರು 88 ವಿದ್ಯಾಥಿಗಳಿಗೆ ಇತರೆ ವಿದ್ಯಾರ್ಥಿನಿಯರ ಮುಂದೆ ಬಟ್ಟೆ ಬಿಚ್ಚುವಂತೆ ಶಿಕ್ಷಿಸಿದ್ದಾರೆ.

    ಈ ಹಿನ್ನೆಲೆಯಲ್ಲಿ ಎಎಸ್‍ಎಸ್‍ಯು ಎಫ್‍ಐಆರ್ ದಾಖಲಿಸಿರುವುದನ್ನು ಪಾಪುಮ್ ಪರೇ ಪೊಲೀಸ್ ವರಿಷ್ಠಾಧಿಕಾರಿ ಟಮ್ಮಿ ಆಮೋ ಖಚಿತಪಡಿಸಿದ್ದಾರೆ. ಕೇಸ್ ದಾಖಲಿಸಿಕೊಳ್ಳುವುದಕ್ಕೂ ಮುನ್ನ ವಿದ್ಯಾರ್ಥಿನಿಯರು, ಅವರ ಪೋಷಕರು ಹಾಗೂ ಶಿಕ್ಷಕರನ್ನು ವಿಚಾರಣೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

    ಅರುಣಾಚಲಪ್ರದೇಶ ಕಾಂಗ್ರೆಸ್ ಕಮಿಟಿ ಈ ಘಟನೆಯನ್ನು ಖಂಡಿಸಿದ್ದು, ಶಿಕ್ಷಕರ ಈ ರೀತಿಯ ಕೃತ್ಯದಿಂದ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದೆ. ಮಕ್ಕಳ ಘನತೆಗೆ ಧಕ್ಕೆ ತರುವುದು ಕಾನೂನು ಹಾಗೂ ಸಂವಿಧಾನಕ್ಕೆ ವಿರುದ್ಧ ಎಂದು ಹೇಳಿಕೆಯಲ್ಲಿ ತಿಳಿಸಿದೆ.

  • ಯಾದಗಿರಿ: ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಬಾಲಕಿಯರ ದುರ್ಮರಣ

    ಯಾದಗಿರಿ: ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಬಾಲಕಿಯರ ದುರ್ಮರಣ

    ಯಾದಗಿರಿ: ಜಿಲ್ಲೆಯ ಶಹಾಪುರ ತಾಲೂಕಿನ ಬಿರನಕಲ್ ಗ್ರಾಮದಲ್ಲಿ ನೀರು ಕುಡಿಯಲು ಹೋದ ಬಾಲಕಿಯರಿಬ್ಬರು ಸಾವನಪ್ಪಿದ ದಾರುಣ ಘಟನೆ ನಡೆದಿದೆ.

    ಶರಣಮ್ಮ (10) ಹಾಗೂ ನಾಗಮ್ಮ (11) ಮೃತ ದುರ್ದೈವಿ ಬಾಲಕಿಯರು. ಬಿರನಕಲ್ ಗ್ರಾಮದ ಹೊರ ಭಾಗದಲ್ಲಿ ಬಾಲಕಿಯರು ನೀರು ಕುಡಿಯಲು ಹೊಲದಲ್ಲಿನ ಕೃಷಿ ಹೊಂಡಕ್ಕಿಳಿದಾಗ ಕಾಲು ಜಾರಿ ಬಿದ್ದು ಈ ಅವಘಡ ಸಂಭವಿಸಿದೆ. ಈ ಬಗ್ಗೆ ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಇತ್ತ ಬಾಗಲಕೋಟೆಯ ಮುಧೋಳ ನಗರದ ಹೌಸಿಂಗ್ ಕಾಲೋನಿಯಲ್ಲಿ ಜೆಸಿಬಿ ಹರಿದು 1 ವರ್ಷ 4 ತಿಂಗಳ ಕೀರ್ತಿ ಎಂಬಾಕೆ ಸಾವನ್ನಪ್ಪಿದ್ದಾಳೆ. ಈಕೆ ನಗರದ ಪರಮಾನಂದ್ ಸೈದಾಪುರ ಅವರ ಪುತ್ರಿ. ಬಿಸಿಲಿನ ಝಳಕ್ಕೆ ಮರದ ಕೆಳಗೆ ಮಲಗಿಸಿದ್ದ ಸಂದರ್ಭದಲ್ಲಿ ಮಗುವಿನ ಮೇಲೆ ಜೆಸಿಬಿ ಹರಿದು ಈ ಅವಘಡ ಸಂಭವಿಸಿದೆ. ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.