Tag: ಬಾಬಾ

  • ಡಿ.12ಕ್ಕೆ ರಜನೀಕಾಂತ್ ಅಭಿಮಾನಿಗಳಿಗೆ ಗುಡ್ ನ್ಯೂಸ್

    ಡಿ.12ಕ್ಕೆ ರಜನೀಕಾಂತ್ ಅಭಿಮಾನಿಗಳಿಗೆ ಗುಡ್ ನ್ಯೂಸ್

    ಜನೀಕಾಂತ್ (Rajanikanth) ಅಭಿಮಾನಿಗಳಿಗೆ ನಿಜಕ್ಕೂ ಇದು ಸಿಹಿ ಸುದ್ದಿ. ತಲೈವಾ ನಟನೆಯ `ಬಾಬಾ’ (Baba) ಸಿನಿಮಾ ಮತ್ತೆ ತೆರೆ ಬರಲು ಸಿದ್ಧವಾಗಿದೆ. ಚಿತ್ರವನ್ನು ಅಪ್‌ಗ್ರೇಡ್ ಮಾಡಿ, ತೆರೆಗೆ ತರಲಾಗುತ್ತಿದೆ. ಸದ್ಯ ಈ ಚಿತ್ರದ ಟ್ರೈಲರ್ ಹಂಚಿಕೊಂಡು, ಚಿತ್ರದ ಬಗ್ಗೆ ರಜನೀಕಾಂತ್ ಮೇಜರ್ ಅಪ್‌ಡೇಟ್ ಕೊಟ್ಟಿದ್ದಾರೆ.

    ತಲೈವಾ, ಮನಿಷಾ ಕೊಯಿರಾಲ ನಟನೆಯ `ಬಾಬಾ’ ಡಿಸೆಂಬರ್ 12ಕ್ಕೆ ತೆರೆಗೆ ಅಪ್ಪಳಿಸಲಿದೆ. ರಜನೀಕಾಂತ್ ಹುಟ್ಟುಹಬ್ಬದಂದೇ ಈ ಸಿನಿಮಾ ರಿಲೀಸ್ ಮಾಡಲಾಗುತ್ತಿದೆ. ಚಿತ್ರದ ಅಪ್‌ಡೇಟ್ ವರ್ಷನ್ ಮೂಲಕ ಮತ್ತೆ ತೆರೆಯ ಮೇಲೆ ಕಮಾಲ್ ಮಾಡಲು ರಜನೀಕಾಂತ್ ಸಜ್ಜಾಗಿದ್ದಾರೆ. ಸದ್ಯ ಸಿನಿಮಾ ಟ್ರೈಲರ್ ಹಂಚಿಕೊಂಡು, ನನ್ನ ಮನಸ್ಸಿಗೆ ಹತ್ತಿರವಾದ ಸಿನಿಮಾ `ಬಾಬಾ’ ಎಂದು ಟ್ವೀಟ್ಟರ್‌ನಲ್ಲಿ ನಟ ಬರೆದುಕೊಂಡಿದ್ದಾರೆ. ಇದನ್ನೂ ಓದಿ: Kantara ಸಂಘರ್ಷಕ್ಕೆ ತೆರೆ: `ವರಾಹರೂಪಂ’ ಹಾಡಿಗಿದ್ದ ಅಡಚಣೆ ನಿವಾರಣೆ

    ಇಪ್ಪತ್ತು ವರ್ಷಗಳ ಹಿಂದೆ ತೆರೆಗೆ ಮೇಲೆ ಕಮಾಲ್ ಮಾಡೋದರಲ್ಲಿ ಬಾಬಾ ಸಿನಿಮಾ ಸೋತಿತ್ತು. ಈಗ `ಕಾಂತಾರ’ (Kantara Film) ಚಿತ್ರದ ಯಶಸ್ಸು ಚಿತ್ರದಲ್ಲಿನ ದೈವ ಶಕ್ತಿ ನೋಡಿ, `ಬಾಬಾ’ ಚಿತ್ರದ ರಿಲೀಸ್‌ಗೆ ತಲೈವಾ ಮನಸ್ಸು ಮಾಡಿದ್ದಾರೆ. `ಬಾಬಾ’ ಚಿತ್ರದ ದೈವ ಶಕ್ತಿಯ ಒಳಗೊಂಡ ಚಿತ್ರವಾಗಿದ್ದು, ಡಿ.12ರಂದು ತಮಿಳುನಾಡು ಸೇರಿದಂತೆ ರಾಜ್ಯದ ಎಲ್ಲೆಡೆ ಸಿನಿಮಾ ರಿಲೀಸ್ ಆಗುತ್ತಿದೆ.

     

    View this post on Instagram

     

    A post shared by Rishab Shetty (@rishabshettyofficial)

    ಸಿನಿಮಾಗೆ ಹೊಸ ರೀತಿಯ ಕಲರ್ ಗ್ರೇಡಿಂಗ್, ಮತ್ತೊಮ್ಮೆ ರಜನೀಕಾಂತ್ ವಾಯ್ಸ್ ಡಬ್ಬಿಂಗ್ ಮಾಡಿ, ಭಿನ್ನವಾಗಿ ಅಭಿಮಾನಿಗಳ ಮನ ತಲುಪಲು ರೆಡಿಯಾಗಿದ್ದಾರೆ. 20 ವರ್ಷಗಳ ಹಿಂದೆ ಸೋತಿದ್ದ ಬಾಬಾ ಸಿನಿಮಾ ಇದೀಗ ಗೆಲ್ಲುತ್ತಾ, ಕಾಂತಾರ ಚಿತ್ರದ ಸ್ಪೂರ್ತಿ ಪಡೆದು ಮುನ್ನುಗ್ಗುತ್ತಿರುವ ತಲೈವಾ ಸಕ್ಸಸ್ ಸಿಗುತ್ತಾ ಎಂದು ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • 3 ದಿನ ಆಶ್ರಮದಲ್ಲಿ ಅಪ್ರಾಪ್ತೆಯರಿಬ್ಬರ ಮೇಲೆ ಬಾಬಾ ಅತ್ಯಾಚಾರ

    3 ದಿನ ಆಶ್ರಮದಲ್ಲಿ ಅಪ್ರಾಪ್ತೆಯರಿಬ್ಬರ ಮೇಲೆ ಬಾಬಾ ಅತ್ಯಾಚಾರ

    – ಕೇಸ್ ದಾಖಲಾಗ್ತಿದ್ದಂತೆ ಬಾಬಾ ಎಸ್ಕೇಪ್

    ಚಂಡೀಗಢ: ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಾಬಾನ ವಿರುದ್ಧ ಹರಿಯಾಣ ಪೊಲೀಸರು ಕೇಸ್ ಬುಕ್ ಮಾಡಿದ್ದಾರೆ.

    ಆರೋಪಿ ಬಾಬಾನನ್ನು ಸ್ವಾಮಿ ಲಕ್ಷಾನಂದ್ ಎಂದು ಗುರುತಿಸಲಾಗಿದೆ. ಈತ ಪಂಚಕುಲ ಜಿಲ್ಲೆಯ ಚೋಟಾ ತ್ರಿಲೋಕ್‍ಪುರದಲ್ಲಿ ಆಶ್ರಮ ನಡೆಸುತ್ತಿದ್ದನು. ಸ್ವಾಮಿ ಲಕ್ಷಾನಂದ್ 14 ಮತ್ತು 15 ವರ್ಷದ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

    ಇಬ್ಬರು ಅಪ್ರಾಪ್ತ ಬಾಲಕಿಯರು ಸೇವೆ ಮಾಡಲು ಆಶ್ರಮಕ್ಕೆ ಹೋಗಿದ್ದರು. ಈ ವೇಳೆ ಅವರಿಬ್ಬರನ್ನು ಬಂಧನದಲ್ಲಿಟ್ಟು ಮೂರು ದಿನಗಳ ಕಾಲ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಪ್ರಾಪ್ತ ಬಾಲಕಿಯರು ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯವರಾಗಿದ್ದು, ನಡೆದ ಘಟನೆಯನ್ನು ತಾಯಿಯ ಬಳಿ ಹೇಳಿದಾಗ ಈ ವಿಚಾರ ಬೆಳಕಿಗೆ ಬಂದಿದೆ ಎಂದು ಮಹಿಳಾ ಪೊಲೀಸ್ ಅಧಿಕಾರಿ ನೇಹಾ ಚೌಹಾನ್ ತಿಳಿಸಿದ್ದಾರೆ.

    ಪೊಲೀಸರು ಸ್ವಾಮಿ ಲಕ್ಷಾನಂದ್ ವಿರುದ್ಧ ದೂರು ದಾಖಲಿಸಿದ ನಂತರ ಆರೋಪಿ ಪರಾರಿಯಾಗಿದ್ದಾನೆ. ಸದ್ಯಕ್ಕೆ ಸ್ವಾಮಿ ಲಕ್ಷಾನಂದ್ ವಿರುದ್ಧ ದಾಖಲಾದ ದೂರಿನ ಆಧಾರದ ಮೇಲೆ ನಾವು ಪ್ರಕರಣ ದಾಖಲಿಸಿದ್ದೇವೆ. ಇಬ್ಬರು ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ವೈದ್ಯಕೀಯ ವರದಿಗಾಗಿ ಕಾಯುತ್ತಿದ್ದೇವೆ. ಆಶ್ರಮದಲ್ಲಿ ಮೂರು ದಿನಗಳ ಕಾಲ ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸದ್ಯಕ್ಕೆ ಪೊಲೀಸರು ಆರೋಪಿ ಬಾಬಾನಿಗೆ ಶೋಧಕಾರ್ಯ ನಡೆಸುತ್ತಿದ್ದಾರೆ. ಶೀಘ್ರದಲ್ಲೇ ಆರೋಪಿ ಸ್ವಾಮಿ ಲಕ್ಷಾನಂದ್‍ನನ್ನು ಬಂಧಿಸಲಾಗುವುದು ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.

  • ಮಗನ ಕ್ಯಾನ್ಸರ್ ಗುಣಮಾಡ್ತೀನೆಂದು ಬಾಬಾನಿಂದ ಅತ್ಯಾಚಾರ

    ಮಗನ ಕ್ಯಾನ್ಸರ್ ಗುಣಮಾಡ್ತೀನೆಂದು ಬಾಬಾನಿಂದ ಅತ್ಯಾಚಾರ

    – ಆಚರಣೆಯ ಒಂದು ಭಾಗ ಎಂದ
    – ಬಾಬಾನ ಮಾತಿಗೆ ಮೋಸ ಹೋದ ಮಹಿಳೆ

    ಮುಂಬೈ: ಮಗನ ಕ್ಯಾನ್ಸರ್ ಗುಣಪಡಿಸುತ್ತೇನೆ ಎಂದು ಹೇಳಿ 41 ವರ್ಷದ ಮಹಿಳೆ ಮೇಲೆ ಉಜ್ಜಯಿನಿ ಮೂಲದ ಡೋಂಗಿ ಬಾಬಾನೊಬ್ಬ ಅತ್ಯಾಚಾರ ಎಸಗಿರುವ ಘಟನೆ ನಗರದಲ್ಲಿ ನಡೆದಿದೆ.

    ಡೋಂಗಿ ಬಾಬಾನ ವಿರುದ್ಧ ದೂರು ದಾಖಲಾಗಿದ್ದು, ಆತನನ್ನು ಟ್ರಾಂಬೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಅತ್ಯಾಚಾರ ಎಸಗಿದ್ದಲ್ಲದೆ ಬಾಬಾ ಮಗನ ಕ್ಯಾನ್ಸರ್ ಕಾಯಿಲೆಯನ್ನು ಗುಣಪಡಿಸುವುದಕ್ಕೆ ಪೂಜೆ ಮಾಡಬೇಕೆಂದು ಸಂತ್ರಸ್ತೆಯಿಂದ ಬರೋಬ್ಬರಿ 3.5ಲಕ್ಷ ರೂ. ಹಣವನ್ನು ದೋಚಿದ್ದಾನೆ ಎಂದು ಪತಿ ಈಗ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾದಗೇ ಮಗ ಮೃತಪಟ್ಟಿದ್ದಾನೆ.

    ಏನಿದು ಪ್ರಕರಣ?
    ಈ ದಂಪತಿಗೆ ಒಬ್ಬನೇ ಮಗನಿದ್ದನು. ಆದರೆ 2017ರಿಂದ ಮಗ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿದ್ದನು. ನಂತರ ಮಗನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಯಾವುದೇ ಚಿಕಿತ್ಸೆ ನೀಡಿದರೂ ಕ್ಯಾನ್ಸರ್ ಗುಣವಾಗಿರಲಿಲ್ಲ. ಬಳಿಕ ಅದೇ ವರ್ಷದ ಮೇ ತಿಂಗಳಲ್ಲಿ ಸಂತ್ರಸ್ತೆ ದೇವಸ್ಥಾನದಲ್ಲಿ ಡೋಂಗಿ ಬಾಬಾನನ್ನು ಭೇಟಿಯಾಗಿದ್ದು, ಆತನ ಬಳಿ ತನ್ನ ಕಷ್ಟವನ್ನು ಹೇಳಿಕೊಂಡಿದ್ದಾರೆ. ಆಗ ಬಾಬಾ ಕೆಲವೊಂದು ಆಚರಣೆ-ಪೂಜೆ ಮಾಡಿದರೆ ಮಗನಿಗಿರುವ ಕಾಯಿಲೆ ವಾಸಿಯಾಗುವುದು ಎಂದು ಭರವಸೆ ನೀಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಬಾಬಾ ಸಂತ್ರಸ್ತೆಯ ಜೊತೆ ಮನೆಗೆ ಬಂದು ಕೆಲವೊಂದು ಯಜ್ಞ ನಡೆಸಿದ್ದಾನೆ. ಈ ವೇಳೆ ಬಾಬಾ ಮಹಿಳೆ ಮತ್ತು ಬರುವ ಯಜ್ಞದ ಭಸ್ಮವನ್ನು ಕೊಟ್ಟಿದ್ದಾನೆ. ಅದನ್ನು ಸೇವಿಸಿದ ತಕ್ಷಣ ಸಂತ್ರಸ್ತೆ ಪ್ರಜ್ಞೆಹೀನರಾಗಿ ಬಿದ್ದಿದ್ದಾರೆ. ತಕ್ಷಣ ಬಾಬಾ ಮನೆಯಲ್ಲಿದ್ದ 60 ಸಾವಿರ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾನೆ. ಇದಾದ ಬಳಿಕ ಬಾಬಾ ಸಂತ್ರಸ್ತೆಯನ್ನು ತನ್ನ ಫ್ಲ್ಯಾಟ್ ಗೆ ಬರುವಂತೆ ಹೇಳಿ ಕರೆಸಿಕೊಂಡಿದ್ದಾನೆ. ಅಲ್ಲಿ ಆಕೆಯನ್ನು ಅತ್ಯಾಚಾರ ಮಾಡಿದ್ದು, ಇದು ಪೂಜೆಯ ಒಂದು ವಿಧಾನ ಎಂದು ಸಂತ್ರಸ್ತೆಯನ್ನು ನಂಬಿಸಿದ್ದಾನೆ. ಅಷ್ಟೇ ಅಲ್ಲದೇ ಅತ್ಯಾಚಾರದ ಫೋಟೋವನ್ನು ತನ್ನ ಮೊಬೈಲಿನಲ್ಲಿ ತೆಗೆದುಕೊಂಡಿದ್ದಾನೆ ಎಂದು ಎಫ್‍ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.

    ಡೋಂಗಿ ಬಾಬಾ ಆ ಫೋಟೋ ಇಟ್ಟುಕೊಂಡು ಹಣಕ್ಕಾಗಿ ಸಂತ್ರಸ್ತೆಯನ್ನು ಬ್ಲ್ಯಾಕ್‍ಮೇಲ್ ಮಾಡಲು ಶುರು ಮಾಡಿದ್ದಾನೆ. ಒಂದು ವೇಳೆ ಹಣ ಕೊಡಲಿಲ್ಲ ಎಂದರೆ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾನೆ. ಈ ಬಗ್ಗೆ ಪತ್ನಿ ನನಗೆ ತಿಳಿಸಿರಲಿಲ್ಲ. ಮಗನ ಕಾಯಿಲೆ ವಾಸಿ ಮಾಡುವುದಾಗಿ ಬಾಬಾ ಪೂಜೆಗಾಗಿ ಸುಮಾರು 2.98 ಲಕ್ಷ ಹಣವನ್ನು ಪಡೆದುಕೊಂಡಿದ್ದು, ಬಾಬಾ ಪರಾರಿಯಾಗಿದ್ದಾನೆ ಎಂದು ಸಂತ್ರಸ್ತೆಯ ಪತಿ ದೂರಿನಲ್ಲಿ ತಿಳಿಸಿದ್ದಾರೆ.

    ಈಗ ಡೋಂಗಿಬಾಬಾನ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಶೋಧ ಕಾರ್ಯ ನಡೆಸುತ್ತಿದ್ದಾರೆ. ಐಪಿಸಿ ಸೆಕ್ಷನ್ 374 (ಅತ್ಯಾಚಾರ), 354 (ಎ) (ಲೈಂಗಿಕ ಕಿರುಕುಳ), 384 (ಸುಲಿಗೆ) ಮತ್ತು 506 (ಕ್ರಿಮಿನಲ್ ಬೆದರಿಕೆ) ವಿಭಾಗಗಳಲ್ಲಿ ಮತ್ತು ಮೂಢ ನಂಬಿಕೆ ಕಾಯ್ದೆಯಡಿ ನಾವು ಪ್ರಕರಣ ದಾಖಲಿಸಿದ್ದೇವೆ ಎಂದು ಇನ್ಸ್ ಪೆಕ್ಟರ್ ಪಿ. ಸಾಲ್ವಿ ತಿಳಿಸಿದ್ದಾರೆ.

  • ಬಾಬಾ-ಹನಿಪ್ರೀತ್ ಮಧ್ಯೆ ಅನೈತಿಕ ಸಂಬಂಧವಿತ್ತು, ಬಿಗ್ ಬಾಸ್ ರೀತಿ ಗೇಮ್ ಆಡಿಸ್ತಿದ್ದ: ಮಾಜಿ ಪತಿ ಹೇಳಿಕೆ

    ಬಾಬಾ-ಹನಿಪ್ರೀತ್ ಮಧ್ಯೆ ಅನೈತಿಕ ಸಂಬಂಧವಿತ್ತು, ಬಿಗ್ ಬಾಸ್ ರೀತಿ ಗೇಮ್ ಆಡಿಸ್ತಿದ್ದ: ಮಾಜಿ ಪತಿ ಹೇಳಿಕೆ

    ಚಂಡೀಘಢ: ಅತ್ಯಾಚಾರಿ ಬಾಬಾ ಮತ್ತು ದತ್ತು ಪುತ್ರಿ ಹನಿಪ್ರೀತ್ ನಡುವಿನ ಸಂಬಂಧದ ಹಿಂದಿನ ರಹಸ್ಯವನ್ನ ಹನಿಪ್ರೀತ್‍ನ ಮಾಜಿ ಪತಿ ವಿಶ್ವಾಸ್ ಗುಪ್ತಾ ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾರೆ.

    ಶುಕ್ರವಾರದಂದು ಮಾಧ್ಯಮಗಳೊಂದಿಗೆ ಮಾತನಾಡಿದ ಗುಪ್ತಾ, ಬಾಬಾ ಮತ್ತು ಹನಿಪ್ರೀತ್ ಅನೈತಿಕ ಸಂಬಂಧವನ್ನು ಹೊಂದಿದ್ದರು. ಅನುಯಾಯಿಗಳು ಮತ್ತು ಇತರರನ್ನು ಮರುಳು ಮಾಡಲು ತಂದೆ-ಮಗಳು ಎಂದು ಹೇಳಿಕೊಂಡಿದ್ದರು. ಯಾವ ತಂದೆ ತಾನೇ ಮಗಳನ್ನ ಹಾಸಿಗೆ ಮೇಲೆ ಮಲಗಿಸಿಕೊಳ್ಳುತ್ತಾರೆ? ಅವಳು ಯಾವಾಗ್ಲೂ ಬಾಬಾ ಜೊತೆ ಇರುತ್ತಿದ್ದಳು ಎಂದು ಹೇಳಿದ್ದಾರೆ.

    ರಾಮ್ ರಾಹೀಮ್ ಹಾಗೂ ಹನಿಪ್ರೀತ್ ಇಬ್ಬರೂ ಬಾಬಾನ ಗುಫಾ(ಕೊಠಡಿ)ಯಲ್ಲಿ ಒಟ್ಟಾಗಿ ಇದ್ದಿದ್ದನ್ನು ನಾನು ನೋಡಿದ್ದೆ. ಆಕೆ ನನ್ನ ಜೊತೆ ಯಾವತ್ತೂ ಮಲಗಿಲ್ಲ. ಪ್ರತಿ ರಾತ್ರಿ ರಾಮ್ ರಹೀಮ್ ಜೊತೆ ಇರುತ್ತಿದ್ದಳು. ಬಾಬಾ ನನ್ನನ್ನು ಬಂಧಿಯಾಗಿಸಿದ್ದ. ಆಕೆಗೆ ನನ್ನ ಬಳಿ ಬರಲು ಬಿಡುತ್ತಿರಲಿಲ್ಲ ಅಂತ ಮಾಧ್ಯಮಗಳಿಗೆ ಗುಪ್ತಾ ತಿಳಿಸಿದ್ದಾರೆ.

    ಬಾಬಾ ಹಾಗೂ ನನ್ನ ಮಾಜಿ ಪತ್ನಿ ಹನಿಪ್ರೀತ್ ನಡುವೆ ಅನೈತಿಕ ಸಂಬಂಧ ಇರುವುದು ನನಗೆ ತಿಳಿದ ಮೇಲೆ ಈ ವಿಷಯವನ್ನ ಎಲ್ಲೂ ಬಾಯಿಬಿಡದಂತೆ ಅವನು ನನಗೆ ಮತ್ತು ನನ್ನ ಕುಟುಂಬದವರಿಗೆ ಬೆದರಿಕೆ ಒಡ್ಡಿದ್ದ. ಅಷ್ಟೇ ಅಲ್ಲದೇ ನನ್ನನ್ನು ಕೊಲೆ ಮಾಡಲು ತನ್ನ ಚೇಲಾಗಳಿಗೆ ಹೇಳಿದ್ದ ಎಂದು ತಿಳಿಸಿದ್ದಾರೆ.

    ಇದಾದ ನಂತರ ಡೇರಾ ಬೆಂಬಲಿಗರು ನಮ್ಮನ್ನು ಹಿಂಬಾಲಿಸುತ್ತಿದ್ದರು. ಆದ್ದರಿಂದ ನಾನು ಹನಿಪ್ರೀತ್‍ನಿಂದ ವಿಚ್ಛೇದನ ಪಡೆದು ಡೇರಾವನ್ನು ಬಿಟ್ಟು ಜುಲೈ 2011 ರಲ್ಲಿ ಪಂಚಕುಲಕ್ಕೆ ಹೋದೆ. ನನ್ನ ತಂದೆ ಆಸ್ತಿಯನ್ನೆಲ್ಲಾ ಮಾರಾಟ ಮಾಡಿ ಡೇರಾದಲ್ಲಿ ಹೂಡಿಕೆ ಮಾಡಿದ್ದರು. ಬಾಬಾ ನನಗೆ ಮತ್ತು ನನ್ನ ಕುಟುಂಬದವರಿಗೆ ಸಾರ್ವಜನಿಕವಾಗಿ ಕ್ಷಮೆ ಕೇಳುವಂತೆ ಮಾಡಿದ್ದ ಎಂದು ಗುಪ್ತಾ ಹೇಳಿದ್ದಾರೆ.

    ಬಾಬಾ ತನ್ನ ರಹಸ್ಯ ಗುಹೆಯಲ್ಲಿ ಬಿಗ್ ಬಾಸ್ ರೀತಿಯ ಗೇಮ್ ಆಡಿಸುತ್ತಿದ್ದ. 6 ಜೋಡಿಗಳನ್ನು ಬಿಗ್‍ಬಾಸ್ ಮನೆಯಲ್ಲಿ 28 ದಿನಗಳ ಕಾಲ ಇಟ್ಟಿದ್ದ. ಈ ಆಟಕ್ಕೆ ಅವನೇ ಜಡ್ಜ್ ಆಗಿದ್ದ. ಇದರಲ್ಲಿ ನನ್ನ ಮಾಜಿ ಪತ್ನಿ ಕೂಡ ಭಾಗವಹಿದ್ದಳು. ಕೊನೆಯದಾಗಿ ಅವಳೇ ಗೆದ್ದಿದ್ದಳು ಎಂದು ಗುಪ್ತಾ ಹೇಳಿದ್ದಾರೆ.

    ಇಬ್ಬರು ಸಾದ್ವಿಯರ ಮೇಲೆ ಅತ್ಯಾಚಾರ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ರಾಮ್ ರಹೀಮ್‍ಗೆ 20 ವರ್ಷ ಜೈಲು ಶಿಕ್ಷೆ ನೀಡಲಾಗಿದೆ. ಸದ್ಯ ಹನಿಪ್ರೀತ್ ತಲೆಮರೆಸಿಕೊಂಡಿದ್ದು ಹರಿಯಾಣ ಪೊಲೀಸರ 43 ಮೋಸ್ಟ್ ವಾಂಟೆಡ್‍ಗಳ ಪಟ್ಟಿಯಲ್ಲಿ ಮೊದಲಿಗಳಾಗಿದ್ದಾಳೆ.

  • ಜೈಲಲ್ಲಿ ಬಾಬಾಗೆ ರಾಜಾತೀಥ್ಯ – ಮಿನರಲ್ ವಾಟರ್, ಜೊತೆಗೊಬ್ಬ ಅಸಿಸ್ಟೆಂಟ್

    ಜೈಲಲ್ಲಿ ಬಾಬಾಗೆ ರಾಜಾತೀಥ್ಯ – ಮಿನರಲ್ ವಾಟರ್, ಜೊತೆಗೊಬ್ಬ ಅಸಿಸ್ಟೆಂಟ್

    ನವದೆಹಲಿ: ನಿನ್ನೆಯವರೆಗೂ ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡ್ತಿದ್ದ ಸಾವಿರಾರು ಕೋಟಿ ಆಸ್ತಿಪಾಸ್ತಿಯ ಒಡೆಯ ಬಾಬಾ ಗುರ್ಮಿತ್ ರಾಮ್ ರಹೀಂ ಸಿಂಗ್‍ನ ಮೊದಲ ಜೈಲು ರಾತ್ರಿ ಕುರಿತಂತೆ ಇಂಟ್ರೆಸ್ಟಿಂಗ್ ಮಾಹಿತಿ ಲಭ್ಯವಾಗಿದೆ. ರೋಹ್ಟಕ್ ಜೈಲಿಗೆ ವಿಶೇಷ ಹೆಲಿಕಾಪ್ಟರ್‍ನಲ್ಲಿ ಬಿಗಿ ಭದ್ರತೆ ನಡುವೆ ಬಂದಿಳಿದ ಗುರ್ಮಿತ್ ಬಾಬಾ, ತೀರ್ಪಿನಿಂದ ಕಂಗಾಲಾಗಿದ್ದರು. ಯಾರೊಂದಿಗೂ ಮಾತನಾಡಲಿಲ್ಲ. ಆದ್ರೆ ಸಾಕಷ್ಟು ಪ್ರಭಾವ ಹೊಂದಿರುವ ಅತ್ಯಾಚಾರಿ ಬಾಬಾಗೆ ಜೈಲಿನಲ್ಲಿ ಸಕಲ ಸವಲತ್ತು ನೀಡಲಾಗಿದೆ.

    ಗುರ್ಮಿತ್ ಬಾಬಾಗೆ ಜೈಲಿನಲ್ಲಿ ವಿಶೇಷ ಸೆಲ್ ನೀಡಲಾಗಿದೆ. ಬಾಬಾ ಜೊತೆಗೆ ಸಹಾಯಕನೊಬ್ಬನಿಗೆ ಇರಲು ಅವಕಾಶ ನೀಡಲಾಗಿದೆ. ಹೊರಗಿನಿಂದ ತರಿಸಿದ ಊಟ ಹಾಗೂ ಕುಡಿಯಲು ಮಿನರಲ್ ವಾಟರ್ ವ್ಯವಸ್ಥೆ ಮಾಡಲಾಗಿದೆ. ಇಷ್ಟಿದ್ದರೂ ಬಾಬಾ ನಿದ್ದೆಯಿಲ್ಲದೆ ಜೈಲಿನಲ್ಲಿ ಮೊದಲ ರಾತ್ರಿ ಕಳೆದಿದ್ದಾರೆ. ಅಲ್ಲದೆ ಯಾರೊಂದಿಗೂ ಹೆಚ್ಚು ಮಾತನಾಡಿಲ್ಲ ಎಂದು ವರದಿಯಾಗಿದೆ.

    ಅತ್ಯಾಚಾರ ಪ್ರಕರಣದಲ್ಲಿ ಸ್ವಯಂಘೋಷಿತ ದೇವಮಾನವ ಬಾಬಾ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿವರೆಗೂ ಹೊತ್ತಿ ಉರಿದ ಹರಿಯಾಣದಲ್ಲಿ ಸದ್ಯ ಹಿಂಸಾಚಾರ ನಿಂತಿದೆ. ಆದ್ರೆ ಬೂದಿ ಮುಚ್ಚಿದ ಕೆಂಡದಂತಿದೆ ಪರಿಸ್ಥಿತಿ. ಹೀಗಾಗಿಯೇ ಸಿಎಂ ಕಟ್ಟರ್ ಸರ್ಕಾರ ಶಾಂತಿ ಭದ್ರತೆಗೆ ಕೇಂದ್ರದ ಮೊರೆ ಹೋಗಿದೆ. ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 32ಕ್ಕೆ ಏರಿಕೆಯಾಗಿದ್ದು, 350ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

    ಪಂಚಕುಲಾ, ಸಿರ್ಸಾದಲ್ಲಿ ಭಕ್ತರ ಸಿಟ್ಟಿಗೆ ನೂರಾರು ವಾಹನ ಸುಟ್ಟು ಕರಕಲಾಗಿವೆ. ಹಿಂಸಾಚಾರದಲ್ಲಿ ತೊಡಗಿದ್ದ ಸಾವಿರಾರು ಬಾಬಾ ಭಕ್ತರನ್ನು ಬಂಧಿಸಲಾಗಿದೆ. ಡೇರಾ ಸಚ್ಚಾ ಸೌಧಕ್ಕೆ ಸೇರಿದ 65 ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಾಬಾನ 6 ಮಂದಿ ಬಾಡಿ ಗಾರ್ಡ್‍ಗಳನ್ನು ಸಹ ಅರೆಸ್ಟ್ ಮಾಡಿದ್ದಾರೆ.  ಈ ನಡುವೆ ವಿದೇಶ ಪ್ರವಾಸ ಅರ್ಧಕ್ಕೆ ಮೊಟಕುಗೊಳಿಸಿ ದೆಹಲಿಗೆ ಬಂದ ಕೇಂದ್ರ ಗೃಹಸಚಿವ ರಾಜ್‍ನಾಥ್ ಸಿಂಗ್ ಇಂದು ತುರ್ತು ಸಭೆ ನಡೆಸಲಿದ್ದಾರೆ.

    ಕೇಂದ್ರ ಸರ್ಕಾರ ಗುರ್ಮಿತ್ ಬಾಬಾಗೆ ನೀಡಲಾಗಿದ್ದ ಝೆಡ್ ಕ್ಯಾಟಗರಿ ಭದ್ರತೆಯನ್ನ ವಾಪಸ್ ಪಡೆದಿದೆ.

    ಇದನ್ನೂ ಓದಿ: ಬಾಬಾ ಭಕ್ತರಿಂದ ಉಂಟಾದ ನಷ್ಟ ಭರಿಸಲು ಡೇರಾ ಆಸ್ತಿ ಮುಟ್ಟುಗೋಲಿಗೆ ಹೈಕೋರ್ಟ್ ಆದೇಶ- ಎಷ್ಟಿದೆ ಗೊತ್ತಾ ಈ ಬಾಬಾ ಆಸ್ತಿ?