Tag: ಬಾಡಿಗೆದಾರ

  • Bengaluru | ಪಿಎಸ್‌ಐ ಹೊಡೆತಕ್ಕೆ ಶಾಶ್ವತ ಕಿವುಡನಾದ ವ್ಯಕ್ತಿ

    Bengaluru | ಪಿಎಸ್‌ಐ ಹೊಡೆತಕ್ಕೆ ಶಾಶ್ವತ ಕಿವುಡನಾದ ವ್ಯಕ್ತಿ

    ಬೆಂಗಳೂರು: ಪಿಎಸ್‌ಐ (PSI) ಹೊಡೆದ ಹೊಡೆತಕ್ಕೆ ಬಾಡಿಗೆದಾರನೊಬ್ಬ ಶಾಶ್ವತ ಕಿವುಡನಾಗಿರೋ ಘಟನೆ ಬೆಂಗಳೂರಿನ ಬೇಗೂರಿನಲ್ಲಿ (Begur) ನಡೆದಿದೆ.

    ಬಾಡಿಗೆದಾರ ಉದಯ್ ಕುಮಾರ್ ಎಂಬವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಬೇಗೂರು ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಪುನೀತ್ ವಿರುದ್ಧ ಗಂಭೀರ ಆರೋಪ ಮಾಡಲಾಗಿದೆ. ಪಿಎಸ್‌ಐ ಪುನೀತ್ ಹೊಡೆದ ಹೊಡೆತಕ್ಕೆ ಕಿವುಡನಾಗಿರೋ ಉದಯ್ ಬೇಗೂರು ನಿವಾಸಿಯಾಗಿದ್ದು, ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಮನೆ ಖಾಲಿ ಮಾಡುವ ವಿಚಾರಕ್ಕೆ ಬಾಡಿಗೆ ಇದ್ದ ಉದಯ್‌ಗೆ ಬೇಗೂರು ಸಬ್ ಇನ್ಸ್‌ಪೆಕ್ಟರ್ ಪುನೀತ್, ನಿನ್ನ ಮೇಲೆ ದೂರು ಕೊಡಲಾಗಿದೆ, ಠಾಣೆಗೆ ಬಾ ಎಂದು ಕರೆದು ಹಲ್ಲೆ ಮಾಡಿದ್ದಾನೆಂದು ಆರೋಪಿಸಲಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ 10 ವರ್ಷ ಸಿಎಂ ಆಗ್ಬಿಟ್ರೆ ತಾಯಿ ಚಾಮುಂಡಿಗಿಂತ ದೊಡ್ಡವರಾಗಿಬಿಡ್ತಾರೆ: ಪ್ರತಾಪ್‌ ಸಿಂಹ ಕಿಡಿ

    ಪಿಎಸ್‌ಐ ಕೊಟ್ಟ ಹೊಡೆತಕ್ಕೆ ಉದಯ್‌ಗೆ ಕಿವಿ ಕೇಳಿಸದೆ ಶ್ರವಣ ದೋಷವಾಗಿದೆ. ಮೆಡಿಕಲ್ ರಿಪೋರ್ಟ್‌ನಲ್ಲಿ ಕಿವಿ ಕಿವುಡಾಗಿರೋದು ದೃಢವಾಗಿದೆ. ಹಲ್ಲೆಯ ಬಗ್ಗೆ ಕೋರ್ಟ್‌ನಲ್ಲಿ ಹೇಳಿದರೆ ರೌಡಿಶೀಟರ್ ಪಟ್ಟಿ ತೆರೆಯೋದಾಗಿ ಉದಯ್‌ಗೆ ಪಿಎಸ್‌ಐ ಬೆದರಿಸಿದ್ದಾನೆಂದು ಉದಯ್ ಆರೋಪಿಸಿದ್ದಾರೆ. ಕಿವುಡನಾಗಿರೋ ಉದಯ್ ಪರ ಘಟನೆ ಬಗ್ಗೆ ನಗರ ಪೊಲೀಸ್ ಆಯುಕ್ತರಿಗೆ ವಕೀಲರು ದೂರು ನೀಡಿದ್ದಾರೆ. ಸಿವಿಲ್ ವ್ಯಾಜ್ಯದಲ್ಲಿ ಪೊಲೀಸರ ಮದ್ಯಪ್ರವೇಶ ಮಾಡಿ ಉದಯ್‌ಗೆ ಅನಾವಶ್ಯಕವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಆರೋಪದಡಿ ದೂರು ಕೊಡಲಾಗಿದೆ. ಇದನ್ನೂ ಓದಿ: ಶಿವಮೊಗ್ಗ To ಮುಂಬೈ – ಮೆದುಳು ಜ್ವರದಿಂದ ಬಳಲುತ್ತಿದ್ದ ಯುವತಿಯ ಏರ್‌ಲಿಫ್ಟ್

    ವೈದ್ಯಕೀಯ ಪರೀಕ್ಷೆ ವೇಳೆ ಎಡಕಿವಿ ಸಂಪೂರ್ಣ ಶ್ರವಣ ದೋಷವಾಗಿರುವ ವರದಿ ಕೂಡ ದೂರಿನ ಜೊತೆ ಸಲ್ಲಿಸಲಾಗಿದೆ. ಹಿರಿಯ ಅಧಿಕಾರಿಗಳಿಗೆ ದೂರು ನೀಡಿದರೂ ಪಿಎಸ್‌ಐ ಮೇಲೆ ಕ್ರಮ ಆಗದ ಕಾರಣ ಉದಯ್ ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲೇರಲು ಮುಂದಾಗಿದ್ದಾರೆ. ಇದನ್ನೂ ಓದಿ: Kolar | ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ ಆರೋಪ – ಅಪ್ರಾಪ್ತ ವಶಕ್ಕೆ

  • ಮನೆ ಓನರ್‌ ಹೆಂಡ್ತಿ ಜೊತೆಗೇ ಕಳ್ಳಸಂಬಂಧ – ಬಾಡಿಗೆದಾರನನ್ನ 7 ಅಡಿ ಗುಂಡಿಯಲ್ಲಿ ಜೀವಂತವಾಗಿ ಹೂತುಹಾಕಿದ ಪತಿ!

    ಮನೆ ಓನರ್‌ ಹೆಂಡ್ತಿ ಜೊತೆಗೇ ಕಳ್ಳಸಂಬಂಧ – ಬಾಡಿಗೆದಾರನನ್ನ 7 ಅಡಿ ಗುಂಡಿಯಲ್ಲಿ ಜೀವಂತವಾಗಿ ಹೂತುಹಾಕಿದ ಪತಿ!

    ಚಂಡೀಗಢ: ತನ್ನ ಪತ್ನಿಯೊಂದಿಗೆ ಕಳ್ಳ ಸಂಬಂಧ (Affair) ಹೊಂದಿದ್ದ ವ್ಯಕ್ತಿಯನ್ನ ಪತ್ತೆಹಚ್ಚಿ, ಸ್ನೇಹಿತರ ಸಹಾಯದಿಂದ ಅಪಹರಿಸಿ ಬಳಿಕ ಹೊಲದಲ್ಲಿ 7 ಅಡಿ ಆಳದ ಗುಂಡಿಯಲ್ಲಿ ಜೀವಂತವಾಗಿ ಹೂತುಹಾಕಿದ ಘಟನೆ ಹರಿಯಾಣದ ರೋಹ್ಟಕ್‌ನಲ್ಲಿ (Haryana’s Rohtak) ನಡೆದಿದೆ.

    ಹೌದು. ಚಂಡೀಗಢ ಮೂಲದ ವ್ಯಕ್ತಿ ತನ್ನ ಮನೆಯ ಬಾಡಿಗೆದಾರನು (Tenant) ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿರುವುದನ್ನು ಪತ್ತೆಹಚ್ಚಿದ ಬಳಿಕ 7 ಅಡಿ ಗುಂಡಿ ತೆಗೆದು ಆತನನ್ನ ಸಜೀವವಾಗಿ ಹೂತುಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಹತ್ಯೆ ಮಾಡಿದ ವ್ಯಕ್ತಿ ಓರ್ವ ಯೋಗ ಶಿಕ್ಷಕನಾಗಿದ್ದಾನೆ. ಇದನ್ನೂ ಓದಿ: ವಿಜಯೇಂದ್ರ, ಯತ್ನಾಳ್ ಟೀಂಗೆ ‘ಹೈ’ ಶಾಕ್ – ಐವರು ನಾಯಕರಿಗೆ ಶಿಸ್ತು ಸಮಿತಿಯಿಂದ ಶೋಕಾಸ್ ನೋಟಿಸ್

    ಕಳೆದ ವರ್ಷ ಡಿಸೆಂಬರ್‌ನಲ್ಲಿ ಘಟನೆ ನಡೆದಿತ್ತು. ಪೊಲೀಸರು ಸುದೀರ್ಘ ತನಿಖೆ ಬಳಿಕ ಆರೋಪಿಯನ್ನ ಬಂಧಿಸಿದ್ದು, ಇದೀಗ ಶವವನ್ನ ಹೊರ ತೆಗೆದಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ದೇಶ ಭ್ರಷ್ಟ ವಜ್ರೋದ್ಯಮಿ ಮೆಹುಲ್ ಚೋಕ್ಸಿ ಬೆಲ್ಜಿಯಂನಲ್ಲಿರುವುದು ದೃಢ

    ಏನಿದು ಕೇಸ್‌?
    ರೋಹ್ಟಕ್‌ನ ಬಾಬಾ ಮಸ್ತನಾಥ್ ವಿಶ್ವವಿದ್ಯಾನಿಲಯದಲ್ಲಿ ಯೋಗ ಕಲಿಸುತ್ತಿದ್ದ ಜಗದೀಪ್ ತನ್ನ ಮನೆಯ ಒಂದು ಭಾಗವನ್ನು ಹರ್ದೀಪ್ ಎಂಬಾತನಿಗೆ ಬಾಡಿಗೆ ನೀಡಿದ್ದ. ಆದ್ರೆ ಬಾಡಿಗೆ ಮನೆಯಲ್ಲಿದ್ದ ಹರ್ದೀಪ್‌ ಆತನ ಹೆಂಡತಿಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ಇದನ್ನು ಪತ್ತೆಹಚ್ಚಿದ ಜಗದೀಪ್‌, ತನ್ನ ಸ್ನೇಹಿತರ ಸಹಾಯ ಪಡೆದು ಕೊಲೆ ಮಾಡುವ ಸ್ಕೆಚ್‌ ಹಾಕಿದ್ದಾನೆ. ಚರ್ಖಿ ದಾದ್ರಿಯ ಪಂತವಾಸ್ ಗ್ರಾಮದಲ್ಲಿ 7 ಅಡಿ ಆಳದ ಗುಂಡಿ ತೆಗೆಸಿದ್ದಾನೆ. ಗುಂಡಿ ತೆಗೆಯುವವರು ಮೊದಲು ಕಾರಣ ಕೇಳಿದಾಗ ಇದು ಬೋರ್‌ವೆಲ್‌ಗೆ ಅಂದಿದ್ದಾನೆ. ಬಳಿಕ ಸ್ನೇಹಿತರ ಸಹಾಯದಿಂದ ಹರ್ದೀಪ್‌ನ ಕೈಕಾಲುಗಳನ್ನು ಕಟ್ಟಿಹಾಕಿ, ಬಾಯಿಗೆ ಟೇಪ್‌ ತುರುಕಿ ಜೀವಂತವಾಗಿ ಹೂತುಹಾಕಿದ್ದಾನೆ.

    ಕೊಲೆಯಾದ 10 ದಿನಗಳ ಬಳಿಕ ಜ.3ರಂದು ಶಿವಾಜಿ ಕಾಲೋನಿ ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಈ ಸಂಬಂದ ತನಿಖೆ ಕೈಗೊಂಡಿದ್ದ ಪೊಲೀಸರು ಜದೀಪ್‌ ದೂರವಾಣಿ ಕರೆಗಳನ್ನು ಪರಿಶೀಲಿಸಿದ ಬಳಿಕ ನಿಜಾಂಶ ಬಯಲಾಗಿದೆ. ಬಳಿಕ ಜಗದೀಪ್‌ನನ್ನ ಕೋರ್ಟ್‌ಗೆ ಹಾಜರುಪಡಿಸಿ ಕಸ್ಟಡಿಗೆ ಪಡೆದಿದ್ದಾರೆ. ಸದ್ಯ ಪ್ರಕರಣದ ತನಿಖೆ ಮುಂದುವರಿಸಿರುವ ಪೊಲೀಸರು, ಕೊಲೆಗೆ ಸಹಕಾರ ನೀಡಿದ ಉಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ ಎಂದು ಅಪರಾಧ ತನಿಖಾ ಘಟಕದ ಉಸ್ತುವಾರಿ ಕುಲದೀಪ್ ಸಿಂಗ್ ಹೇಳಿದ್ದಾರೆ.

  • ನನ್ನ ಮಕ್ಕಳನ್ನು ದತ್ತು ಪಡೆಯಿರಿ- ನನಗೆ, ಪತ್ನಿಗೆ ದಯಾಮರಣ ನೀಡಿ ಎಂದು ಬಾಡಿಗೆದಾರನಿಂದ ಅರ್ಜಿ

    ನನ್ನ ಮಕ್ಕಳನ್ನು ದತ್ತು ಪಡೆಯಿರಿ- ನನಗೆ, ಪತ್ನಿಗೆ ದಯಾಮರಣ ನೀಡಿ ಎಂದು ಬಾಡಿಗೆದಾರನಿಂದ ಅರ್ಜಿ

    ತುಮಕೂರು: ನನ್ನ ಇಬ್ಬರು ಮಕ್ಕಳನ್ನು (Children) ದತ್ತು ತೆಗೆದುಕೊಳ್ಳಿ. ನನಗೂ, ನನ್ನ ಪತ್ನಿಗೆ (Wife) ದಯಾಮರಣ ಕೊಡಿ ಎಂದು ತುಮಕೂರು (Tumkur) ಜಿಲ್ಲಾಧಿಕಾರಿ (District Collector) ಕಚೇರಿ ಎಂದು ನೊಂದ ಬಾಡಿಗೆದಾರ ಅಳಲು ತೋಡಿಕೊಂಡರು.

    ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ಮಕ್ಕಳೊಂದಿಗೆ ಹಾಗೂ ಸಂಬಂಧಿಕರ ಜೊತೆ ಬಂದ ನೊಂದ ಬಾಡಿಗೆದಾರ ಅಂತರಾಜು ಹಾಗೂ ಪತ್ನಿ ತೇಜಸ್ವಿನಿ ದಯಾಮರಣದ ಅರ್ಜಿಯನ್ನು ಮಾಧ್ಯಮದವರಿಗೆ ಪ್ರದರ್ಶಿಸಿ ನಂತರ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್‍ಗೆ ಸಲ್ಲಿಸಿದರು.

    ನಂತರ ಮಾಧ್ಯಮದವರ ಜೊತೆ ಮಾತನಾಡಿದ ಬಾಡಿಗೆದಾರ ಅಂತರಾಜು, ದೇಶದಲ್ಲಿ ನ್ಯಾಯಕ್ಕೆ ಬೆಲೆ ಇಲ್ಲ. ನೊಂದವರಿಗೆ ನ್ಯಾಯ ಕೊಡಿಸುವುದಕ್ಕೆ ಆಗಲ್ಲ. ನನ್ನ ಇಬ್ಬರು ಮಕ್ಕಳನ್ನು ದತ್ತು ತೆಗೆದುಕೊಳ್ಳಿ. ಅಷ್ಟಾದರೂ ಮಾಡಿ. ನನಗೆ ಹಾಗೂ ನನ್ನ ಪತ್ನಿ ತೇಜಸ್ವಿಗೆ ದಯಾಮರಣಕ್ಕೆ ಅವಕಾಶ ಕೊಡಿ ಎಂದು ಮನವಿ ಮಾಡಿದರು.

    ನಮಗೆ ಹೋಟೆಲ್‌ ಬಾಡಿಗೆ ಕೊಟ್ಟಂತಹ ಮಾಲೀಕರು ಎಷ್ಟು ಪ್ರಭಾವಶಾಲಿಯಾಗಿದ್ದಾರೆ ಅಂದ್ರೆ, ಸ್ಥಳೀಯ ಶಾಸಕರು, ಸಚಿವರು ಬರಲಿಲ್ಲ. ಜಿಲ್ಲಾಧಿಕಾರಿ, ಎಸ್ಪಿ ಕೂಡ ಬರಲಿಲ್ಲ. ಕೊನೆಗೆ ಒಬ್ಬ ಕಾರ್ಪೋರೇಟರ್ ಕೂಡ ಪ್ರತಿಭಟನೆಯ ಸ್ಥಳಕ್ಕೆ ಸುಳಿಯದಂತೆ ನೋಡಿಕೊಂಡಿದ್ದಾರೆ. 

    ಮಾಜಿ ಸಿಎಂ ಸಿದ್ದರಾಮಯ್ಯರ ಆಪ್ತನೆಂದುಕೊಂಡು ವೈ.ಸಿ. ಸಿದ್ದರಾಮಯ್ಯ ಹೋಟೆಲ್ ಬಾಡಿಗೆ ಕೊಟ್ಟು ಸುಮಾರು 2 ಕೋಟಿ ರೂ. ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಭವಾನಿ ಅಕ್ಕ, ಪ್ರಜ್ವಲ್ ರೇವಣ್ಣ ನಶೆಯಲ್ಲಿರ್ತಾರೆ; ಥರ್ಟಿ, ಸಿಕ್ಸ್ಟಿ ಅಲ್ಲ 2 ಬಾಟ್ಲಿ ಕುಡಿತಾರೆ – ಪ್ರೀತಂ ಗೌಡ

    ಬಸವರಾಜ್ ಎಂಬವರ ತ್ರಿಸ್ಟಾರ್ ಹೋಟೆಲ್‍ನ್ನು ಅಂತರಾಜ್ ಬಾಡಿಗೆಗೆ ತಗೊಂಡು ನಡೆಸುತ್ತಿದ್ದರು. ಹೊಟೇಲ್ ಇಂಟಿರಿಯರ್ ಮತ್ತು ಪೀಠೋಪಕರಣಕ್ಕಾಗಿ ಅಂತರಾಜ್ 1 ಕೋಟಿ ರೂ. ಖರ್ಚು ಮಾಡಿದ್ದರು. ಜೊತೆಗೆ 50 ಲಕ್ಷ ರೂ. ಮುಂಗಡ ಹಣವನ್ನೂ ನೀಡಿದ್ದರೂ ಎನ್ನಲಾಗಿದೆ. ಆದರೆ ಹೊಟೇಲ್ ಆರಂಭವಾಗುತ್ತಿದ್ದಂತೆ ಅಂತರಾಜ್ ಜೊತೆ ಹೊಟೇಲ್ ಮಾಲೀಕ ಬಸವರಾಜ್ ಹಾಗೂ ವೈ.ಸಿ.ಸಿದ್ದರಾಮಯ್ಯ ಕ್ಯಾತೆ ತೆಗೆದಿದ್ದಾರೆ. ನಂತರ ಅಂತರಾಜ್‍ರನ್ನು ಹೋಟೆಲ್‍ನಿಂದಲೇ ಹೊರಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಅಂತರಾಜ್‌ ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಸ್ನೇಹ ನಂಬಿ ಕೋಟಿ ಕೋಟಿ ಸುರಿದ- ಹಣ ಆಗ್ತಿದ್ದಂತೆ ಉಲ್ಟಾ ಹೊಡೆದ ಮಿತ್ರದ್ರೋಹಿ

    Live Tv
    [brid partner=56869869 player=32851 video=960834 autoplay=true]

  • 8ರ ಬಾಲಕಿ ಮೇಲೆ ಬಾಡಿಗೆದಾರನಿಂದ ಅತ್ಯಾಚಾರ

    8ರ ಬಾಲಕಿ ಮೇಲೆ ಬಾಡಿಗೆದಾರನಿಂದ ಅತ್ಯಾಚಾರ

    ಲಕ್ನೋ: 8 ವರ್ಷದ ಬಾಲಕಿಯ (Girl) ಮೇಲೆ ಆಕೆಯ ಮನೆಯಲ್ಲಿ ಬಾಡಿಗೆಗೆ ಇದ್ದ ವ್ಯಕ್ತಿಯೇ ಅತ್ಯಾಚಾರವೆಸಗಿದ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ (Lucknow) ನಡೆದಿದೆ.

    ಆರೋಪಿಯನ್ನು ವಿನೋದ್(24) ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಲಕ್ನೋದ ಗುಡಂಬಾ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿ ಈತನನ್ನು ಬಂಧಿಸಿ, (Arrest) ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

    ಬಾಡಿಗೆದಾರನು ಬಾಲಕಿಯ ಮೇಲೆ ಅತ್ಯಾಚಾರವೆಸಗಿದ 2 ದಿನಗಳ ಬಳಿಕ ಆಕೆ ತನ್ನ ಪೋಷಕರಿಗೆ ಖಾಸಗಿ ಅಂಗಗಳಲ್ಲಿ ನೋವಿನ ಕುರಿತು ತಿಳಿಸಿದ್ದಳು. ಈ ಹಿನ್ನೆಲೆಯಲ್ಲಿ ಪೋಷಕರು ವೈದ್ಯರ ಬಳಿ ಕರೆದೊಯ್ದಿದ್ದಾರೆ. ಈ ವೇಳೆ ಬಾಲಕಿಯ ಮೇಲೆ ಅತ್ಯಾಚಾರದ ಕುರಿತು ತಿಳಿದಿದೆ. ಇದನ್ನೂ ಓದಿ: ಶಿವಮೊಗ್ಗದಲ್ಲಿ ಇಬ್ಬರು ಶಂಕಿತ ಉಗ್ರರ ಬಂಧನ- ಟ್ರಯಲ್ ಬ್ಲಾಸ್ಟ್ ನಡೆಸುತ್ತಿದ್ದ ಸ್ಥಳ ಮಹಜರು

    POLICE JEEP

    ಕುಟುಂಬದವರು ಬಾಲಕಿಯ ಹೇಳಿಕೆ ಆಧಾರದ ಮೇರೆಗೆ ಘಟನೆಗೆ ಸಂಬಂಧಿಸಿ ದೂರು ನೀಡಿದ್ದಾರೆ. ಬಾಲಕಿಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ. ಇದನ್ನೂ ಓದಿ: ದಲಿತ ಬಾಲಕ ದೇವರ ಮೂರ್ತಿ ಮುಟ್ಟಿದ್ದಕ್ಕೆ 60 ಸಾವಿರ ರೂ. ದಂಡ ಹಾಕಿದ ಗ್ರಾಮಸ್ಥರು

    Live Tv
    [brid partner=56869869 player=32851 video=960834 autoplay=true]

  • ಬೀಗದ ಕೈ ಸಂಬಂಧ ಗಲಾಟೆ- ಮನೆ ಮಾಲೀಕನನ್ನೇ ಕೊಂದ ಬಾಡಿಗೆದಾರ

    ಬೀಗದ ಕೈ ಸಂಬಂಧ ಗಲಾಟೆ- ಮನೆ ಮಾಲೀಕನನ್ನೇ ಕೊಂದ ಬಾಡಿಗೆದಾರ

    ಚಿಕ್ಕಬಳ್ಳಾಪುರ: ಮನೆಯ ಮಾಲೀಕ ಹಾಗೂ ಬಾಡಿಗೆದಾರನ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಮನೆ ಮಾಲೀಕ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದಿದೆ.

    ನಗರದ ಎನ್.ಆರ್.ಬಡಾವಣೆಯ ನಿವೃತ್ತ ಇಂಜನಿಯರ್ 61 ವರ್ಷದ ಶಂಕರಾಚಾರಿ ಮೃತ ಮನೆ ಮಾಲೀಕ. ನಾರಾಯಣಸ್ವಾಮಿ ಕೊಲೆ ಮಾಡಿದ ಬಾಡಿಗೆದಾರ.

    ಮೃತ ಶಂಕರಾಚಾರಿಯವರದ್ದು ಒಂದು ಅಂತಸ್ತಿನ ಮನೆ ಇದ್ದು, ಕೆಳಭಾಗದ ಮನೆಯನ್ನು ನಾರಾಯಣಸ್ವಾಮಿ ಹಾಗೂ ಅರುಣಾ ದಂಪತಿಗೆ ಭೋಗ್ಯಕ್ಕೆ ನೀಡಿದ್ದರು. ಮನೆ ಮಾಲೀಕ ಶಂಕರಾಚಾರಿ ಮೊದಲ ಅಂತಸ್ತಿನ ಮನೆಯಲ್ಲಿ ವಾಸವಾಗಿದ್ದರು. ಆದರೆ ಮನೆ ಮಾಲೀಕ ಶಂಕರಾಚಾರಿ ಹಾಗೂ ನಾರಾಯಣಸ್ವಾಮಿ ಕುಟುಂಬಗಳ ನಡುವಿನ ಕ್ಷುಲ್ಲಕ ಕಾರಣಗಳಿಗೆ ವೈಮನಸ್ಸು ಮೂಡಿ ಸಣ್ಣ ಪುಟ್ಟ ವಿಚಾರಗಳಿಗೂ ಗಲಾಟೆ ಮಾಡಿಕೊಳ್ಳುತ್ತಿದ್ದರು. ಈ ವಿಚಾರ ಪೊಲೀಸ್ ಠಾಣೆ ಮೆಟ್ಟಿಲು ಸಹ ಏರಿ ಭೋಗ್ಯದ ಅವಧಿ ಮುಗಿದ ಕೂಡಲೇ ಮನೆ ಖಾಲಿ ಮಾಡುವುದಾಗಿ ತಿಳಿಸಿದ್ದರಂತೆ.

    ಬೀಗದ ಕೈ ಸಂಬಂಧ ಕಲಾಟೆ
    ಮನೆಯ ಪಕ್ಕದಲ್ಲಿ ವಾಹನಗಳ ನಿಲುಗಡೆ ಶೆಡ್ ಇದ್ದು ಶೆಡ್ ನ ಬೀಗದ ಕೈ ಮನೆ ಮಾಲೀಕರ ಬಳಿ ಇತ್ತು. ಬೆಳಗ್ಗೆ ಎಷ್ಟು ಹೊತ್ತಾದರೂ ಶೆಡ್ ಬೀಗ ತೆಗೆಯಲ್ಲ ಬೀಗದ ಕೀ ಕೊಡುವಂತೆ ಶಂಕರಾಚಾರಿ ಜೊತೆ ನಾರಾಯಣಸ್ವಾಮಿ ಗಲಾಟೆ ಮಾಡಿಕೊಂಡಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆರು ಕೀ ಕೊಡಲ್ಲ ಅಂದಾಗ ಬಲವಂತವಾಗಿ ಕೀ ಕಸಿದುಕೊಳ್ಳಲು ಅರುಣಾ ಮುಂದಾಗಿದ್ದಾರೆ. ಈ ವೇಳೆ ಮನೆ ಮಾಲೀಕ ಶಂಕರಾಚಾರಿ ಕೆಳಗೆ ಬಿದ್ದು, ತಲೆಗೆ ಗಾಯವಾಗಿದೆ.

    ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಹೊಸಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶಂಕರಾಚಾರಿ ಮೃತಪಟ್ಟಿದ್ದಾರೆ. ಸದ್ಯ ಮನೆಯ ಬಾಡಿಗೆದಾರರಾದ ನಾರಾಯಣಸ್ವಾಮಿ ಹಾಗೂ ಅರುಣಾರನ್ನು ಕೊಲೆ ಪ್ರಕರಣದಡಿ ಚಿಂತಾಮಣಿ ನಗರ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಗದಗದಲ್ಲಿ ಬೆಳ್ಳಂಬೆಳಗ್ಗೆ ಜೆಸಿಬಿಗಳ ಘರ್ಜನೆ

    ಗದಗದಲ್ಲಿ ಬೆಳ್ಳಂಬೆಳಗ್ಗೆ ಜೆಸಿಬಿಗಳ ಘರ್ಜನೆ

    ಗದಗ: ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ಜೆಸಿಬಿಗಳ ಘರ್ಜನೆ ಜೋರಾಗಿದೆ. ಕಾರಣ ಗದಗ-ಬೆಟಗೇರಿ ನಗರ ಸಭೆಯ ವ್ಯಾಪ್ತಿಯ ಆಸ್ತಿಯನ್ನು ಖಾಸಗಿ ಭೂ ಬಾಡಿಗೆದಾರರಿಂದ ಜಪ್ತಿ ಮಾಡಲಾಗುತ್ತಿದೆ. ಗದಗ ನಗರಸಭೆಗೆ ಸೇರಿದ ಕೋಟ್ಯಂತರ ಮೌಲ್ಯದ 54 ವಕಾರಸಾಲು (ಗೋಡೌನ್) ಗಳನ್ನು ವಾಪಸ್ ಪಡೆಯಲು ನಗರಸಭೆ ಬೆಳಗ್ಗೆ ತೆರವು ಕಾರ್ಯಾಚರಣೆ ನಡೆಸಿದೆ.

    ನ್ಯಾಯಾಲಯದ ಆದೇಶದಂತೆ ಸ್ಥಳ ತೆರವು ಮಾಡುವಂತೆ ಈಗಾಗಲೇ ವಕಾರಸಾಲುಗಳ ನಿವಾಸಿಗಳಿಗೆ ನೋಟಿಸ್ ನೀಡಲಾಗಿತ್ತು. ನಗರದ ಹೃದಯಭಾಗದಲ್ಲಿರುವ ಈ ವಕಾರಸಾಲುಗಳನ್ನು ಹತ್ತಿ, ಅರಳಿ, ಶೇಂಗಾ, ಮೆಣಸಿನಕಾಯಿ ವ್ಯಾಪಾರ ಮಾಡುವ ಸಲುವಾಗಿ 1889 ರಲ್ಲಿ ನೂರು ವರ್ಷಗಳ ಒಪ್ಪಂದದ ಮೇರೆಗೆ ವರ್ತಕರಿಗೆ ಬಾಡಿಗೆಗೆ ನೀಡಲಾಗಿತ್ತು.

    ಲೀಜ್ ಅವಧಿ ಪೂರ್ಣಗೊಂಡು 25 ವರ್ಷ ಕಳೆದಿದ್ದರೂ ಬಾಡಿಗೆದಾರರು ಆಸ್ತಿಯನ್ನು ನಗರಸಭೆಗೆ ವಾಪಸ್ ನೀಡಿರಲಿಲ್ಲ. ಈ ವಿಷಯವಾಗಿ ನಗರಸಭೆ ಮತ್ತು ಬಾಡಿಗೆದಾರರ ನಡುವೆ ದಶಕಗಳಿಂದ ಹಗ್ಗ ಜಗ್ಗಾಟ ಮುಂದುವರಿದಿತ್ತು. ಇಂದಿನಿಂದ 2 ದಿನಗಳ ಕಾಲ ಕಾರ್ಯಾಚರಣೆ ನಡೆಯಲಿದೆ.

    ಕಾರ್ಯಾಚರಣೆ ಹಿನ್ನೆಲೆಯಲ್ಲಿ ನಗರದ ಎಪಿಎಂಸಿಯಿಂದ ಕೆ.ಎಚ್ ಪಾಟೀಲ ವೃತ್ತ, ಗಾಂಧಿ ವೃತ್ತದಿಂದ ಹಳೆಯ ಜಿಲ್ಲಾಧಿಕಾರಿ ಕಚೇರಿ ವೃತ್ತದವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಭದ್ರತೆಗೆ 500 ಪೊಲೀಸರು, 400 ಜನ ಪೌರಕಾರ್ಮಿಕರ ನೆರವು ಪಡೆಯಲಾಗಿದೆ. ಸುಮಾರು 40 ಜೆಸಿಬಿ, 5 ಇಟಾಚಿ, 70ಕ್ಕೂ ಅಧಿಕ ಟ್ರ್ಯಾಕ್ಟರ್ ಗಳನ್ನು ಬಳಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಮ್. ಜಿ ಹಿರೇಮಠ ಹೇಳಿದರು.

  • ಹೆಂಡತಿಯೊಂದಿಗೆ ಅಕ್ರಮ ಸಂಬಂಧವಿದೆ ಎಂದು ಶಂಕಿಸಿ ಬಾಡಿಗೆದಾರನನ್ನ ಹೆಲ್ಮೆಟ್‍ನಿಂದ ಹೊಡೆದು ಕೊಂದೇಬಿಟ್ಟ

    ಹೆಂಡತಿಯೊಂದಿಗೆ ಅಕ್ರಮ ಸಂಬಂಧವಿದೆ ಎಂದು ಶಂಕಿಸಿ ಬಾಡಿಗೆದಾರನನ್ನ ಹೆಲ್ಮೆಟ್‍ನಿಂದ ಹೊಡೆದು ಕೊಂದೇಬಿಟ್ಟ

    ಹೈದರಾಬಾದ್: ತನ್ನ ಹೆಂಡತಿಯೊಂದಿಗೆ ಅಕ್ರಮ ಸಂಬಂಧವಿದೆ ಎಂದು ಶಂಕಿಸಿ ಬಾಡಿಗೆದಾರನನ್ನು ಕೊಂದ ವ್ಯಕ್ತಿಯನ್ನು ಹೈದರಾಬಾದ್‍ನಲ್ಲಿ ಪೊಲೀಸರು ಬಂಧಿಸಿದ್ದಾರೆ.

    ಓಮನ್ ನಲ್ಲಿ ಸಿಸಿಟಿವಿ ತಂತ್ರಜ್ಞನಾಗಿ ಕೆಲಸ ಮಾಡುತ್ತಿದ್ದ 32 ವರ್ಷದ ಕನ್ಹೈಯ್ಯ ಗುಪ್ತಾ ಬಂಧಿತ ಆರೋಪಿ. ಈತ ಪೂರ್ವ ಕಂಡಿವಲಿಯ ಅಪ್ಪಾ ಪಾಡಾ ನಿವಾಸಿಯಾಗಿದ್ದ. ತನ್ನ ಹೆಂಡತಿಯೊಂದಿಗೆ ಬಾಡಿಗೆದಾರ ರಮೇಶ್ ಚೆನಾರಾ ಅಕ್ರಮ ಸಂಬಂಧ ಹೊಂದಿದ್ದಾನೆಂದು ಕನ್ಹೈಯ್ಯ ಅನುಮಾನಿಸಿದ್ದ. ಇಬ್ಬರನ್ನೂ ಬೇರ್ಪಡಿಸುವ ಸಲುವಾಗಿ ಕಳೆದ ವರ್ಷ ತನ್ನ ಹೆಂಡತಿಗೆ ಏನೋ ಸುಳ್ಳು ಹೇಳಿ ಆಕೆಯನ್ನ ಬಿಹಾರದ ತವರುಮನೆಗೆ ಕಳಿಸಿ, ತಾನು ಕೆಲಸ ಮಾಡುತ್ತಿದ್ದ ಓಮನ್‍ಗೆ ಹಿಂದಿರುಗಿದ್ದ.

    ಆರೋಪಿ ತನ್ನ ಕೆಲಸ ಮುಂದುವರೆಸಿ, ಮಾರ್ಚ್ 7ರಂದು ಮುಂಬೈಗೆ ವಾಪಸ್ಸಾಗಿದ್ದ. ಮುಂಬೈಗೆ ಬಂದ ಮೇಲೆ ರಮೇಶ್ ಜೊತೆ ಮನೆ ಭೋಗ್ಯದ ಒಪ್ಪಂದದ ಬಗ್ಗೆ ಮಾತನಾಡಬೇಕೆಂದು ಹೇಳಿ, ಆತನೊಂದಿಗೆ ಭೇಟಿ ಮಾಡಿಸುವಂತೆ ಅದೇ ಏರಿಯಾದಲ್ಲಿ ವಾಸವಿದ್ದ ತನ್ನ ಸಹೋದರ ಪ್ರಭು ಕುಮಾರ್ ಗೆ ಕೇಳಿದ್ದ. ಮಾರ್ಚ್ 9ರಂದು ರಮೇಶ್ ಮಲಾಡ್ ನಲ್ಲಿ ಕನ್ಹೈಯ್ಯ ನನ್ನು ಭೇಟಿ ಮಾಡಿದ್ದ. ಅಲ್ಲಿಂದ ಇಬ್ಬರೂ ಆಟೋದಲ್ಲಿ ಮೀರಾ ರೋಡ್‍ಗೆ ಹೋಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

    ಕೊಲೆಯಾದ ರಮೇಶ್

    ನಂತರ ಕನ್ಹೈಯ್ಯ ರಮೇಶ್‍ನನ್ನು ಕಾಶಿಮಿರಾದಲ್ಲಿ ಕಾಡಿನೊಳಗೆ ಕರೆದುಕೊಂಡು ಹೋಗಿದ್ದ. ತನ್ನ ಹೆಂಡತಿಯೊಂದಿಗೆ ಅಕ್ರಮ ಸಂಬಂಧವಿರುವ ಬಗ್ಗೆ ಕನ್ಹೈಯ್ಯ ರಮೇಶ್‍ನನ್ನು ಪ್ರಶ್ನಿಸಿದ್ದ. ಬಳಿಕ ಇಬ್ಬರ ಮಧ್ಯೆ ವಾಗ್ವಾದ ನಡೆದಿದ್ದು, ಜಗಳ ವಿಕೋಪಕ್ಕೇರಿ ಕನ್ಹೈಯ್ಯ ಕಾಡಿನಲ್ಲಿ ಬಿದ್ದಿದ್ದ ಹೆಲ್ಮೆಟ್ ತೆಗೆದುಕೊಂಡು ರಮೇಶ್ ತಲೆ ಮೇಲೆ ಹೊಡೆದಿದ್ದ. ಇದರಿಂದ ರಮೇಶ್ ಕುಸಿದು ಬಿದ್ದಿದ್ದು, ಆತ ಸಾಯುವವರೆಗೆ ಕನ್ಹೈಯ್ಯ ಪದೇ ಪದೇ ತಲೆ ಮೇಲೆ ಹೆಲ್ಮೆಟ್‍ನಿಂದ ಹೊಡೆದಿದ್ದ ಎಂದು ತನಿಖಾ ತಂಡದ ಭಾಗವಾಗಿರುವ ಕಾಶಿಮಿರಾ ಕ್ರೈಂ ಬ್ರಾಂಚ್‍ನ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಮಾರ್ಚ್ 12ರಂದು ಸ್ಥಳೀಯರು ರಮೇಶ್ ಮೃತದೇಹದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ನಂತರ ಪೊಲೀಸರು ತನಿಖೆ ಆರಂಭಿಸಿದ್ದು, ಮಾರ್ಚ್ 10ರಂದು ಕುರಾರ್ ಪೊಲೀಸ್ ಠಾಣೆಯಲ್ಲಿ ರಮೇಶ್ ಕಾಣೆಯಾಗಿದ್ದಾನೆಂದು ದೂರು ದಾಖಲಾಗಿರುವುದು ಗೊತ್ತಾಗಿತ್ತು. ನಂತರ ಪೊಲೀಸರು ಆತನ ಕಾಲ್ ರೆಕಾಡ್ರ್ಸ್ ಪರಿಶೀಲಿಸಿದ್ದು, ಕೊನೆಯದಾಗಿ ರಮೇಶ್‍ಗೆ ಪ್ರಭು ಗುಪ್ತಾನಿಂದ ಕರೆ ಬಂದಿರುವುದು ಗೊತ್ತಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಭು ಗುಪ್ತನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದರು. ನಂತರ ಪ್ರಭು ಕನ್ಹೈಯ್ಯ ಬಗ್ಗೆ ಪೊಲೀಸರಿಗೆ ತಿಳಿಸಿದ್ದ.

    ಪೊಲೀಸರು ಕನ್ಹೈಯ್ಯ ನ ಕಾಲ್ ರೆಕಾಡ್ರ್ಸ್ ಪರಿಶೀಲಿಸಿದಾಗ ಆತ ಹೈದರಾಬಾದ್‍ನಲ್ಲಿರುವುದು ಗೊತ್ತಾಗಿತ್ತು. ಬಳಿಕ ಪೊಲೀಸ್ ತಂಡ ಅಲ್ಲಿಗೆ ಹೋಗಿದ್ದು, ಕನ್ಹೈಯ್ಯ ಓಮನ್‍ಗೆ ಹೋಗಲು ವಿಮಾನವೇರುವ ಮುನ್ನವೇ ಆತನನ್ನು ವಶಕ್ಕೆ ಪಡೆದಿದ್ದಾರೆ.

    ಕನ್ಹೈಯ್ಯ ಓಮನ್‍ಗೆ ಹೋಗಲು ಟಿಕೆಟ್ ಗಾಗಿ ಕಾಯುತ್ತಾ ತನ್ನ ಸ್ನೇಹಿತನ ಮನೆಯಲ್ಲಿದ್ದ. ದೇಶವನ್ನ ಬಿಟ್ಟು ಹೋಗುವ ಮುನ್ನವೇ ಆರೋಪಿಯನ್ನ ಬಂಧಿಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

  • ಬಾಡಿಗೆದಾರರಿಗೆ ಎಲೆಕ್ಟ್ರಿಸಿಟಿ, ನೀರು ಕಟ್ ಮಾಡಿ ಅಪ್ಪ-ಮಗನಿಂದ ನಿತ್ಯ ಕಿರುಕುಳ

    ಬಾಡಿಗೆದಾರರಿಗೆ ಎಲೆಕ್ಟ್ರಿಸಿಟಿ, ನೀರು ಕಟ್ ಮಾಡಿ ಅಪ್ಪ-ಮಗನಿಂದ ನಿತ್ಯ ಕಿರುಕುಳ

    ಬೆಂಗಳೂರು: ಅಪ್ಪ-ಮಗ ಸೇರಿ ಬಾಡಿಗೆದಾರರಿಗೆ ಎಲೆಕ್ಟ್ರಿಸಿಟಿ, ನೀರು ಕಟ್ ಮಾಡಿ ನಿತ್ಯ ಕಿರುಕುಳ ನೀಡುತ್ತಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಬೆಂಗಳೂರಿನ ಹೊಸಕೆರೆಹಳ್ಳಿಯ ರವೀಶ್ ಕುಟುಂಬಕ್ಕೆ ದಿನನಿತ್ಯ ಕಾಟ ತಪ್ಪಿದ್ದಿಲ್ಲ. ಬಸವೇಗೌಡರ ಮನೆಯಲ್ಲಿ 10 ಲಕ್ಷ ರೂ. ಭೋಗ್ಯಕ್ಕೆ ರವೀಶ್ ಕುಟುಂಬ ವಾಸವಾಗಿದ್ದಾರೆ. ಈ ಹಿಂದೆ ಮನೆಗೆ ನುಗ್ಗಿ ಹೆಣ್ಮಕ್ಕಳ ಮೇಲೆ ಹಲ್ಲೆ ನಡೆಸಿ ಮನೆ ಸಾಮಾನುಗಳನ್ನು ಮಗ ಮಹೇಶ್ ಹೊರಗೆ ಹಾಕಿದ್ದನು. ಇಂದು ಬಸವೇಗೌಡ ಹೆಲ್ಮೆಟ್ ಹಾಕಿಕೊಂಡು ಬಂದು ನೀರಿನ ಮೋಟರ್ ತೆಗೆದುಕೊಂಡು ಹೋಗಿದ್ದಾನೆ.

    ಬಸವೇಗೌಡರ ಮಗ ಮಹೇಶ ಸೆ.3 ರಂದು 30 ರಿಂದ 40 ಜನರನ್ನು ಮನೆಗೆ ನುಗ್ಗಿಸಿ ಮನೆ ಖಾಲಿ ಮಾಡುವಂತೆ ದಾಂಧಲೆ ಎಬ್ಬಿಸಿದ್ದನು ಹಾಗೂ ರವೀಶ್‍ರ ಗರ್ಭಿಣಿ ಪತ್ನಿ ಲಕ್ಷ್ಮೀ ಹಾಗು ಅಜ್ಜಿ ಲಿಂಗಮ್ಮರಿಗೆ ಥಳಿಸಿ ಮನೆ ಸಾಮಾನುಗಳನ್ನು ಹೊರಗೆ ಹಾಕಿದ್ದನು.

    ನಮ್ಮ ಹಣ ಕೊಡಿ ನಾವು ಖಾಲಿ ಮಾಡುತ್ತೀವಿ ಎಂದರೆ ಹಣ ಕೊಡದೆ ಬಸವೇಗೌಡ ವಂಚಿಸುತ್ತಿದ್ದಾನೆ. ಪಬ್ಲಿಕ್ ಟಿವಿಯಲ್ಲಿ ಈ ಬಗ್ಗೆ ವರದಿಯಾದ ನಂತರ ಮಹೇಶನನ್ನು ಅರೆಸ್ಟ್ ಮಾಡಲಾಗಿತ್ತು. ತಲೆ ಮರೆಸಿಕೊಂಡಿದ್ದ ಬಸವೇಗೌಡ ನಿರೀಕ್ಷಣಾ ಜಾಮೀನು ಪಡೆದು, ಅಂದಿನಿಂದ ಒಂದಿಲ್ಲೊಂದು ಕಾಟ ಕೋಡುತ್ತಿದ್ದಾನೆ ಎನ್ನಲಾಗಿದೆ.

    ವಾರದ ಹಿಂದೆ ನೀರಿನ ಮೋಟರ್ ಫ್ಯೂಸ್ ಕಿತ್ತುಕೊಂಡು ಹೋಗಿದ್ದ. ಆದರೆ ಇಂದು ಬೆಳಗಿನ ಜಾವ ಹೆಲ್ಮೆಟ್ ಹಾಕಿಕೊಂಡು ಬಂದು ನೀರಿನ ಮೋಟರ್ ಕಿತ್ತುಕೊಂಡು ಹೋಗಿದ್ದಾನೆ. ಬಸವೇಗೌಡನ ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಬಸವೇಗೌಡ ಎಲೆಕ್ಟ್ರಿಸಿಟಿ ಹಾಗೂ ನೀರು ನೀಡದೆ ಬಾಡಿಗೆದಾರರಿಗೆ ಕಿರುಕುಳ ನೀಡ್ತಿದ್ದಾನೆ. ಈ ಮೂಲಕ ಭೋಗ್ಯಕ್ಕೆ ಕೊಟ್ಟಿರೋ ಹಣ ಹೊಡೆಯೊ ಪ್ಲಾನ್ ಮಾಡಿದ್ದಾನೆ. ಗಿರಿನಗರ ಪೊಲೀಸರು ಎಲ್ಲಾ ಗೊತ್ತಿದ್ದೂ ಕಣ್ಮುಚ್ಚಿ ಕುಳಿತು ಬಸವೇಗೌಡನಿಗೆ ಸಹಕಾರ ನೀಡುತ್ತಿದ್ದಾರೆ. ನಮ್ಮ ಹಣ ವಾಪಸ್ ಕೊಡಿಸಿ ಮನೆ ಖಾಲಿ ಮಾಡುತ್ತೀವಿ ಎಂದು ಹೇಳಿದರೂ ಪೊಲೀಸರು ಕ್ಯಾರೆ ಎನ್ನುತ್ತಿಲ್ಲ.