Tag: ಬಾಡಿಗಾರ್ಡ್

  • ಬದುಕಿದ್ದು ಸತ್ತಂತೆ ಇದ್ದೇವೆ, ನಾವು ಬದುಕಿರೋವರೆಗೆ ಅಪ್ಪು ನೆನಪಲ್ಲೇ ಇರ್ತೇವೆ: ಛಲಪತಿ

    ಬದುಕಿದ್ದು ಸತ್ತಂತೆ ಇದ್ದೇವೆ, ನಾವು ಬದುಕಿರೋವರೆಗೆ ಅಪ್ಪು ನೆನಪಲ್ಲೇ ಇರ್ತೇವೆ: ಛಲಪತಿ

    ಬೆಂಗಳೂರು: ನಮ್ಮ ಯಜಮಾನ್ರು ಇಲ್ಲದನ್ನು ಅರಗಿಸಿಕೊಳ್ಳೋಕೆ ಆಗುತ್ತಿಲ್ಲ. ಬದುಕಿದ್ದು ಸತ್ತಂತೆ ಇದ್ದೇವೆ, ನಾವು ಬದುಕಿರೋವರೆಗೆ ಯಜಮಾನರ ನೆನಪಲ್ಲೇ ಇರುತ್ತೇವೆ ಎಂದು ನಟ ಪುನೀತ್ ರಾಜ್‍ಕುಮಾರ್ ಅವರ ಬಗ್ಗೆ ಅವರ ಬಾಡಿಗಾರ್ಡ್ ಆಗಿದ್ದ ಛಲಪತಿ ದುಃಖದಿಂದ ಹೇಳಿಕೊಂಡಿದ್ದಾರೆ.

    ಪುನೀತ್ ಅಗಲಿ ಇಂದಿಗೆ ಮೂರು ತಿಂಗಳಾಗಿದೆ. ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ತಮ್ಮ ನೋವನ್ನು ಹಂಚಿಕೊಂಡ ಅವರು, ಮೂರು ತಿಂಗಳು ಸತ್ತು ಬದುಕಿರುವಂತಿದೆ. ನಾವು ಇರಬೇಕು ಇದ್ದೀವಿ ಹಾಗೆ ಇದ್ದೇವೆ. ಯಜಮಾನರು ಇಲ್ಲದೆ ಯಾವುದು ನಡೀತಿಲ್ಲ. ಯಾವುದೇ ಊರುಗಳಿಗೆ ಹೋದರೂ ಯಜಮಾನರನ್ನು ನೋಡುತ್ತಿದ್ದೇನೆ ಅಭಿಮಾನಿಗಳ ಪ್ರೀತಿ ಕಾಣುತ್ತಿದ್ದೇನೆ. ನಾನು ಇನ್ನೂ ಅವರ ನೆನಪಿನಲ್ಲೇ ಇದ್ದೇನೆ ಎಂದು ಕಣ್ಣೀರಿಟ್ಟರು. ಇದನ್ನೂ ಓದಿ: ಪುನೀತ್ ಅಗಲಿ ಇಂದಿಗೆ 3 ತಿಂಗಳು – ಅಪ್ಪು ನೆನಪಲ್ಲಿ ಅಶ್ವಿನಿಯಿಂದ 500 ಗಿಡಗಳ ದಾನ

    ಯಜಮಾನರ ಜೊತೆ ಎಲ್ಲೇ ಹೊದ್ರು ಅವರ ಮಾತು ಹೊಸತು ಅನಿಸುತ್ತಿತ್ತು. ಪುನೀತ್ ರಾಜ್‍ಕುಮಾರ್ ಅವರನ್ನು ಮಾತನಾಡಿಸಬೇಕು, ಮುಟ್ಟಬೇಕೆಂದು ಅಭಿಮಾನಿಗಳು ಕಾಯುತ್ತಿದ್ದರು. ಆದರೆ ನನಗೆ ಯಜಮಾನರ ಸೇವೆ ಮಾಡೋಕೆ ಅವಕಾಶ ಸಿಕ್ಕಿದ್ದೆ ಅದೃಷ್ಟ ಅಷ್ಟೇ ದುರಾದೃಷ್ಟ ಇಷ್ಟು ಬೇಗ ಕಳೆದುಕೊಂಡಿದ್ದೇವೆ. ಅವರೊಂದಿಗಿದ್ದ ಪ್ರೀತಿ ನೆನಪು ಯಾವತ್ತು ಅಮರ ಎಂದರು. ಇದನ್ನೂ ಓದಿ: ಸಲಾಂ ಸೋಲ್ಜರ್, ದೇಶಕ್ಕೆ ನೀನೇ ಪವರ್ – ಪುನೀತ್ ಖದರ್

    ಜೇಮ್ಸ್ ಪೋಸ್ಟರ್ ನೋಡಿ ತುಂಬಾ ಖುಷಿ ಆಯ್ತು. ಜೇಮ್ಸ್ ಸಿನಿಮಾದಲ್ಲಿ ಯಜಮಾನರ ಜೊತೆ ನಟಿಸಿದ್ದೇನೆ. ನಾನು ಯಜಮಾನರ ಜೊತೆ ಕಾಶ್ಮೀರಕ್ಕೆ ಈ ಚಿತ್ರದ ಶೂಟಿಂಗ್ ಹೋಗಿದ್ದೆ. ಅದೀಗ ನೆನಪು. ಎಲ್ಲಾ ಕಡೆ ಮೌನ ಆವರಿಸಿದೆ. ಅವರಿದ್ದರೆ ಎಲ್ಲ ಮುಂದೆ ಗೊತ್ತಿಲ್ಲ ಎಂದು ಗದ್ಗದಿತರಾದರು.

  • ಸಂಕ್ರಾಂತಿ ಹಬ್ಬಕ್ಕೆ ಅಂಗರಕ್ಷಕಗೆ ಭರ್ಜರಿ ಗಿಫ್ಟ್ ನೀಡಿದ ಕಿಚ್ಚ

    ಸಂಕ್ರಾಂತಿ ಹಬ್ಬಕ್ಕೆ ಅಂಗರಕ್ಷಕಗೆ ಭರ್ಜರಿ ಗಿಫ್ಟ್ ನೀಡಿದ ಕಿಚ್ಚ

    ಬೆಂಗಳೂರು: ಕಿಚ್ಚ ಸುದೀಪ್ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ವ್ಯಕ್ತಿ ಎಂಬುದು ತಿಳಿದ ವಿಚಾರ. ಅಲ್ಲದೆ ಈಗಾಗಲೇ ಅವರು ಹಲವರಿಗೆ ವಿವಿಧ ರೀತಿಯ ಸಹಾಯವನ್ನು ಮಾಡಿದ್ದಾರೆ. ಅಲ್ಲದೆ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸುತ್ತಿದ್ದಾರೆ ಸಹ. ಇದೀಗ ತಮ್ಮ ಅಂಗರಕ್ಷಕ (ಬಾಡಿಗಾರ್ಡ್)ಗೆ ವಿಶೇಷ ಉಡುಗೊರೆ ನೀಡಿದ್ದಾರೆ.

    ಹೌದು ಕುಟುಂಬ, ಸ್ನೇಹಿತರು ಹಾಗೂ ಸಂಬಂಧಗಳಿಗೆ ಹೆಚ್ಚು ಬೆಲೆ ಕೊಡುವ ಸುದೀಪ್, ತಮ್ಮ ಬಾಡಿಗಾರ್ಡ್‍ಗೆ ಗಿಫ್ಟ್ ನೀಡಿ ಗಮನಸೆಳೆದಿದ್ದಾರೆ. ಕುಟಂಬದವರೊಂದಿಗೆ ಹೆಚ್ಚು ಕಾಲ ಕಳೆಯುವ ಕಿಚ್ಚ, ತಮ್ಮ ಸಿಬ್ಬಂದಿಯನ್ನೂ ಅಷ್ಟೇ ಪ್ರೀತಿಸುತ್ತಾರೆ. ಹಲವು ವರ್ಷಗಳಿಂದ ತಮ್ಮ ಜೊತೆ ಕೆಲಸ ಮಾಡುತ್ತಿರುವ ಬಾಡಿಗಾರ್ಡ್ ಸಾಯಿ ಕಿರಣ್‍ಗೆ ಸಂಕ್ರಾಂತಿ ಹಬ್ಬದ ಉಡುಗೊರೆಯಾಗಿ ಬುಲೆಟ್ ಬೈಕ್ ಗಿಫ್ಟ್ ನೀಡಿದ್ದಾರೆ.

    ಸಾಯಿ ಕಿರಣ್ ಅವರು ಕಿಚ್ಚ ಕಿರಣ್ ಎಂದೇ ಪ್ರಸಿದ್ಧರು. ಇದೀಗ ಅವರಿಗೆ ಇಷ್ಟವಾದ ಕಪ್ಪು ಬಣ್ಣದ ರಾಯಲ್ ಎನ್‍ಫೀಲ್ಡ್ ಬೈಕ್‍ನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದರಿಂದ ಸಾಯಿ ಕಿರಣ್ ಫುಲ್ ಖುಷಿಯಾಗಿದ್ದಾರೆ.

    ಈ ಕುರಿತು ಮಾಧ್ಯಮದವರೊಂದಿಗೆ ಸಂತಸ ಹಂಚಿಕೊಂಡಿರುವ ಸಾಯಿ ಕಿರಣ್, ಕಿಚ್ಚ ಸುದೀಪ್ ಅವರು ಬುಲೆಟ್ ಬೈಕ್ ಗಿಫ್ಟ್ ಮಾಡುವ ಮೂಲಕ ಸರ್ಪ್ರೈಸ್ ನೀಡಿದ್ದಾರೆ. ಇದರಿಂದ ಖುಷಿ ಹಾಗೂ ಆಶ್ಚರ್ಯವಾಗಿದೆ. ಮೊದಲು ಕಿಚ್ಚ ಸುದೀಪ್ ಅವರನ್ನೇ ಹತ್ತಿಸಿಕೊಂಡು ಹೋಗುತ್ತೇನೆ. ಸುದೀಪ್ ಮೊದಲ ಸಿನಿಮಾ ಸ್ಪರ್ಷದಿಂದಲೂ ಅವರ ದೊಡ್ಡ ಅಭಿಮಾನಿ, ಕಳೆದ ಆರು ವರ್ಷಗಳಿಂದ ಸುದೀಪ್ ಅವರ ಬಳಿ ಕೆಲಸ ಮಾಡುತ್ತಿದ್ದೇನೆ. ಅವರಿಗೆ ಹಾಗೂ ಅವರ ಕುಟುಂಬಕ್ಕೆ ಚಿರಋಣಿಯಾಗಿದ್ದೇನೆ ಎಂದು ತಮ್ಮ ಮನದಾಳವನ್ನು ಹಂಚಿಕೊಂಡಿದ್ದಾರೆ.

    ಕಿಚ್ಚ ಸುದೀಪ್ ಹಲವು ರೀತಿಯ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದು, ಇತ್ತೀಚೆಗಷ್ಟೇ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದಾಗ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದ ಅವರ ಅಭಿಮಾನಿಯ ಸ್ಥಿತಿ ಕಂಡು ಕೃತಕ ಕಾಲು ಜೋಡಣೆಗೆ ಸ್ಥಳದಲ್ಲೇ ಸಹಾಯ ಮಾಡಿದ್ದರು. ಈ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದರು. ಕೇವಲ ಇದು ಮಾತ್ರವಲ್ಲ ನೆರೆ ಪರಿಹಾರ, ಶಾಲಾ ಶುಲ್ಕ, ವಿವಾಹ ಹಾಗೂ ಸರ್ಕಾರಿ ಶಾಲೆ ದತ್ತು ಪಡೆಯುವುದು ಸೇರಿದಂತೆ ಹತ್ತು ಹಲವು ರೀತಿಯ ಸಹಾಯಗಳನ್ನು ಕೋಟಿಗೊಬ್ಬ ಮಾಡುತ್ತಿದ್ದಾರೆ.

    ಸುದೀಪ್ ಅವರ ಫ್ಯಾಂಟಮ್ ಸಿನಿಮಾದ ಚಿತ್ರೀಕರಣ ಅಂತಿಮ ಹಂತ ತಲುಪಿದ್ದು, ಕೊನೇ ಭಾಗದ ಚಿತ್ರೀಕರಣವನ್ನು ಕೇರಳದಲ್ಲಿ ನಡೆಸಲಾಗುತ್ತಿದೆ. ಅಲ್ಲದೆ ಇದರ ಮಧ್ಯೆ ರಿಯಲ್ ಸ್ಟಾರ್ ಉಪೇಂದ್ರ ಅವರ ಕಬ್ಜ ಸಿನಿಮಾದಲ್ಲಿ ಸಹ ನಟಿಸುತ್ತಿದ್ದಾರೆ.

  • ಸಲ್ಮಾನ್ ಖಾನ್ ಮಾಜಿ ಭದ್ರತಾ ಸಿಬ್ಬಂದಿಯನ್ನು ಹಗ್ಗದಿಂದ ಕಟ್ಟಿ ಎಳೆದೊಯ್ದ ಪೊಲೀಸರು

    ಸಲ್ಮಾನ್ ಖಾನ್ ಮಾಜಿ ಭದ್ರತಾ ಸಿಬ್ಬಂದಿಯನ್ನು ಹಗ್ಗದಿಂದ ಕಟ್ಟಿ ಎಳೆದೊಯ್ದ ಪೊಲೀಸರು

    ಮುಂಬೈ: ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಮಾಜಿ ಬಾಡಿಗಾರ್ಡ್ ಓರ್ವನನ್ನು ಹಗ್ಗದಿಂದ ಕಟ್ಟಿ ಪೊಲೀಸರು ಕರೆದುಕೊಂಡು ಹೋಗಿದ್ದಾರೆ.

    ಉತ್ತರ ಪ್ರದೇಶದ ಮುರದಾಬಾದ್ ಪೊಲೀಸರು ಅನಸ್ ಕುರೇಶಿಯನ್ನು ಬಂಧಿಸಿದ್ದಾರೆ. ಬಂಧಿತ ಅನಸ್ ಈ ಹಿಂದೆ ಸಲ್ಮಾನ್ ಖಾನ್ ಬಾಡಿಗಾರ್ಡ್ ಆಗಿ ಕೆಲಸ ಮಾಡುತ್ತಿದ್ದನು. ಸ್ಟೆರಾಯ್ಡ್ ನಶೆಯಲ್ಲಿದ್ದ ಅನಸ್ ರಸ್ತೆಯಲ್ಲಿ ಗಲಾಟೆ ಮಾಡುತ್ತಿದ್ದನು. ಓವರ್ ಡೋಸ್ ಸ್ಟೆರಾಯ್ಡ್ ಸೇವನೆಯಿಂದ ತನ್ನ ಸ್ಥಿಮಿತ ಕಳೆದುಕೊಂಡಿದ್ದ ಅನಸ್ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದನು.

    ನಶೆಯಲ್ಲಿ ಸಾರ್ವಜನಿಕರ ಮೇಲೆ ಹಲ್ಲೆ ನಡೆಸುತ್ತಿದ್ದನು. ಹಾಗೆ ರಾಡ್ ನಿಂದ ವಾಹನಗಳನ್ನು ಜಖಂಗೊಳಿಸುತ್ತಿದ್ದನು. ಎದುರಿಗೆ ಬರುತ್ತಿದ್ದ ಎಲ್ಲ ವಾಹನಗಳನ್ನು ಜಖಂಗೊಳಿಸುತ್ತಿದ್ದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಬಲಿಷ್ಠನಾಗಿದ್ದ ಅನಸ್ ಯಾರ ನಿಯಂತ್ರಣಕ್ಕೂ ಸಿಗುತ್ತಿರಲಿಲ್ಲ. ಕೊನೆಗೆ ಪೊಲೀಸರು ಸ್ಥಳೀಯರ ಸಹಾಯದೊಂದಿಗೆ ಹಗ್ಗದಿಂದ ಆತನ ಕೈ, ಕಾಲುಗಳನ್ನು ಕಟ್ಟಿ ಬಂಧಿಸಿದ್ದಾರೆ. ಓವರ್ ಡೋಸ್ ಸ್ಟೆರಾಯ್ಡ್ ನಿಂದಾಗಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ ಅನಸ್ ನನ್ನು ಪೊಲೀಸರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಮೆಂಟಲ್ ಆಸ್ಪತ್ರೆಗೆ ರವಾನಿಸಲಾಗಿದೆ.

    ಅನಸ್ ಹತ್ತು ದಿನಗಳ ಹಿಂದೆ ಮುರದಾಬಾದ್ ನಲ್ಲಿ ನಡೆದ ಪವರ್ ಲಿಫ್ಟಿಂಗ್ ಸ್ಫರ್ಧೆಗೆ ಭಾಗವಹಿಸಲು ಬಂದಿದ್ದನು. ಮಿಸ್ಟರ್ ಮುರದಾಬಾದ್ ಪಟ್ಟ ಪಡೆದುಕೊಳ್ಳಲು ಮುಂದಾಗಿದ್ದ ಅನಸ್ ಎರಡನೇ ಸ್ಥಾನ ಪಡೆದಿದ್ದನು. ಇದರಿಂದ ಕುಗ್ಗಿದ್ದ ಅನಸ್ ಓವರ್ ಡೋಸ್ ಸ್ಟೆರಾಯ್ಡ್ ತೆಗೆದುಕೊಂಡಿದ್ದನು. ಈ ಹಿಂದೆ ಎರಡು ವರ್ಷಗಳ ಕಾಲ ಸಲ್ಮಾನ್ ಖಾನ್ ಬಾಡಿಗಾರ್ಡ್ ಆಗಿ ಕೆಲಸ ಮಾಡಿದ್ದ ಅನಸ್, ಸದ್ಯ ಮಹಾರಾಷ್ಟ್ರದ ಸಚಿವರ ಬಾಡಿಗಾರ್ಡ್ ಆಗಿ ಕೆಲಸ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ.

  • ಅಂಗರಕ್ಷಕಿಯನ್ನ ಮದುವೆಯಾಗಿ ಮಹಾರಾಣಿಯನ್ನಾಗಿ ಮಾಡಿದ ರಾಜ!

    ಅಂಗರಕ್ಷಕಿಯನ್ನ ಮದುವೆಯಾಗಿ ಮಹಾರಾಣಿಯನ್ನಾಗಿ ಮಾಡಿದ ರಾಜ!

    ಬ್ಯಾಂಕಾಕ್: ಥೈಲ್ಯಾಂಡ್ ಮಹಾರಾಜ ವಜಿರಲೊಂಗ್ ಕಾರ್ನ್ ತಮ್ಮ ಅಂಗರಕ್ಷಕಿ ಯನ್ನೇ ಮದುವೆಯಾಗಿ ಅಚ್ಚರಿ ಮೂಡಿಸಿದ್ದಾರೆ.

    66 ವರ್ಷದ ವಜಿರಲೊಂಗ್ ಕಾರ್ನ್ 40 ವರ್ಷದ ಸುಥಿದಾ ತಿಜಯ್‍ರನ್ನು ಮದುವೆಯಾಗಿದ್ದಾರೆ. ಈ ಬಗ್ಗೆ ರಾಜಭವನ ಅಧಿಕೃತವಾಗಿ ಮಾಹಿತಿಯನ್ನು ನೀಡಿದೆ. ಅಲ್ಲದೇ ಮದುವೆ ಸಂಬಂಧದ ವಿಡಿಯೋವನ್ನು ಬಿಡುಗಡೆ ಮಾಡಿದೆ.

    ಥೈಲ್ಯಾಂಡ್ ರಾಜರಾಗಿ 70 ವರ್ಷ ಆಳ್ವಿಕೆ ನಡೆಸಿದ್ದ ವಜಿರಲೊಂಗ್ ಕಾರ್ನ್ ಅವರ ತಂದೆ 2016ರಲ್ಲಿ ಸಾವನ್ನಪ್ಪಿದ್ದರು. ಆ ಬಳಿಕ ಇವರನ್ನು ರಾಜರನ್ನಾಗಿ ಘೋಷಣೆ ಮಾಡಲಾಗಿತ್ತು. ಸದ್ಯ ಅಧಿಕೃತವಾಗಿ ವಜಿರಲೊಂಗ್ ಕಾರ್ನ್ ಅಧಿಕಾರ ವಹಿಸಿಕೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಮದುವೆಯಾಗಿದ್ದಾರೆ ಎನ್ನಲಾಗಿದೆ.

    ವಜಿರಲೊಂಗ್ ಕಾರ್ನ್ ಅವರಿಗೆ ಈಗಾಗಲೇ 3 ಮದುವೆಯಾಗಿದ್ದು, 7 ಜನ ಮಕ್ಕಳಿದ್ದಾರೆ. ಆದರೆ ಮೂವರು ಪತ್ನಿಯರಿಗೂ ವಜಿರಲೊಂಗ್ ಕಾರ್ನ್ ಅವರಿಗೆ ವಿಚ್ಛೇದನ ನೀಡಿದ್ದು, 4ನೇ ಪತ್ನಿಯಾಗಿ ಅಂಗರಕ್ಷಕಿಯನ್ನು ಮದುವೆಯಾಗಿದ್ದಾರೆ.

    2014 ರಲ್ಲಿ ಸುಥಿದಾ ಅವರು ರಾಜರ ಭದ್ರತಾ ಕಾರ್ಯಕ್ಕೆ ಅಧಿಕಾರಿಯಾಗಿ ಆಯ್ಕೆ ಆಗಿದ್ದರು. ಆ ಬಳಿಕ ಹಲವು ಭಾರೀ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರೂ ಈ ಬಗ್ಗೆ ಎಲ್ಲಿಯೂ ಮಾಹಿತಿ ಬಹಿರಂಗವಾಗಿರಲಿಲ್ಲ. ಉಳಿದಂತೆ ಶನಿವಾರ ಬ್ಯಾಂಕಾಕ್ ನಲ್ಲಿ ಬೌದ್ಧ, ಬ್ರಾಹ್ಮಣ ಸಂಪ್ರದಾಯದ ಅನ್ವಯ ವಜಿರಲೊಂಗ್ ಕಾರ್ನ್ ಕಿಂಗ್ ರಾಮಘಿ ಹೆಸರಿನಲ್ಲಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಬಳಿಕ ಅವರನ್ನು ರಾಜನಾಗಿ ಬೃಹತ್ ಮೆರವಣಿಗೆ ಮಾಡಲಾಗುತ್ತದೆ.

  • ಸಲ್ಮಾನ್ ಖಾನ್ ತನ್ನ 20 ಬಾಡಿಗಾರ್ಡ್‍ಗಳನ್ನ ಒಮ್ಮೆಲೆ ಕೆಲಸದಿಂದ ತೆಗೆದಿದ್ದರ ಹಿಂದಿನ ಕಾರಣ ಇಲ್ಲಿದೆ

    ಸಲ್ಮಾನ್ ಖಾನ್ ತನ್ನ 20 ಬಾಡಿಗಾರ್ಡ್‍ಗಳನ್ನ ಒಮ್ಮೆಲೆ ಕೆಲಸದಿಂದ ತೆಗೆದಿದ್ದರ ಹಿಂದಿನ ಕಾರಣ ಇಲ್ಲಿದೆ

    ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ತನ್ನ ಕೆಲವು ಬಾಡಿಗಾರ್ಡ್‍ಗಳನ್ನ ಕೆಲಸದಿಂದ ಕಿತ್ತು ಹಾಕಿದ ಬಗ್ಗೆ ಇತ್ತೀಚೆಗೆ ಸುದ್ದಿಯಾಗಿತ್ತು. ನಟ ಸಲ್ಮಾನ್ ಎಲ್ಲಿದ್ದಾರೆ ಎಂಬ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡುತ್ತಿದ್ದ ಕಾರಣ ಅವರನ್ನು ಕೆಲಸದಿಂದ ತೆಗೆಯಲಾಗಿದೆ ಎಂದು ಹೇಳಲಾಗಿತ್ತು. ಆದ್ರೆ ಇದರ ಹಿಂದಿನ ನಿಜವಾದ ಕಾರಣ ಈಗ ಬಯಲಾಗಿದೆ.

    ಕೆಲಸದಿಂದ ತೆಗೆಯಲಾದ ಸೆಕ್ಯೂರಿಟಿ ಗಾರ್ಡ್‍ವೊಬ್ಬರು ಪತ್ರಿಕೆಯೊಂದಿಗೆ ಮಾತನಾಡಿ ಸತ್ಯಾಂಶವನ್ನ ಬಿಚ್ಚಿಟ್ಟಿದ್ದಾರೆ. ಸಲ್ಮಾನ್ ಖಾನ್ ತುಂಬಾ ಮೂಡಿ. ಇತ್ತೀಚೆಗೆ ಅವರು ಕೋಪದಲ್ಲಿ ಒಬ್ಬರಲ್ಲ, 20 ಗಾರ್ಡ್‍ಗಳನ್ನು ಕಾರಣವಿಲ್ಲದೆ ಕೆಲಸದಿಂದ ತೆಗೆದರು ಎಂದು ಹೇಳಿದ್ದಾರೆ.

    ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರ ವೇಳೆ, ಸಲ್ಮಾನ್ ಖಾನ್ ಅವರ ಮುಂಬೈ ಅತಿಥಿಗಳ ಭದ್ರತೆಗೆ ಹಲವು ಗಾರ್ಡ್‍ಗಳನ್ನ ನಿಯೋಜಿಸಲಾಗಿತ್ತು. ಅವರಲ್ಲಿ ಒಬ್ಬ ಅತಿಥಿ ತನಗೆ ಸರಿಯಾಗಿ ಸ್ವಾಗತ ಮಾಡಲಿಲ್ಲ ಎಂದು ಗಾರ್ಡ್‍ವೊಬ್ಬನ ಜೊತೆ ವಾದಕ್ಕಿಳಿದರು. ಈ ವೇಳೆ ಗಾರ್ಡ್, ನಾನು ಸೆಕ್ಯೂರಿಟಿ ಗಾರ್ಡ್ ಆಗಿ ನನ್ನ ಕರ್ತವ್ಯವನ್ನ ಸರಿಯಾಗಿ ಮಾಡಿದ್ದೇನೆ ಎಂದಾಗ ಆ ಅತಿಥಿ ಕೋಪಗೊಂಡು ಕೆನ್ನೆಗೆ ಬಾರಿಸಿದ್ರು. ಗಾರ್ಡ್ ಕೂಡ ತಿರುಗಿಸಿ ಅವರ ಕೆನ್ನೆಗೆ ಬಾರಿಸಿದ ಎಂದು ಹೇಳಿದ್ದಾರೆ.

    ಈ ಘಟನೆಯ ಮರುದಿನ ನಿರೀಕ್ಷೆಯಂತೆ ಸಲ್ಮಾನ್ ಖಾನ್ ಎಲ್ಲಾ ಬಾಡಿಗಾರ್ಡ್‍ಗಳನ್ನ ಕರೆಸಿದ್ರು. ಒಂದೇ ಬಾರಿಗೆ ಎಲ್ಲಾ 20 ಬಾಡಿಗಾರ್ಡ್‍ಗಳನ್ನು ಕೆಲಸದಿಂದ ತೆಗೆಯಲು ನಿರ್ಧರಿಸಿದ್ರು ಎಂದಿದ್ದಾರೆ.

    ಕೆಲಸದಿಂದ ತೆಗೆಯಲ್ಪಟ್ಟ ಮತ್ತೊಬ್ಬ ಸೆಕ್ಯೂರಿಟಿ ಗಾರ್ಡ್ ಕೂಡ ಈ ಬಗ್ಗೆ ಹೇಳಿಕೆ ನೀಡಿದ್ದು, ಹೌದು, ಇದು ನಿಜ. ತಪ್ಪು ಮಾಡಿದ ಗಾರ್ಡ್‍ನನ್ನು ಬೇಕಾದ್ರೆ ತೆಗೆಯಲಿ. ಆದ್ರೆ ಅವನಿಂದ ಬೇರೆ ಎಲ್ಲರೂ ಯಾಕೆ ಕೆಲಸ ಕಳೆದುಕೊಳ್ಬೇಕು ಎಂದು ನಮ್ಮಲ್ಲಿ ಒಬ್ಬರು ಭಾಯ್‍ಗೆ ಹೇಳುವ ಧೈರ್ಯ ತೋರಿದ್ದಕ್ಕೆ ಅವರು “ನೀನು ಜಾಸ್ತಿ ಮಾತಾಡ್ತಿದ್ದೀಯಾ” ಎಂದು ಹೇಳಿದ್ದಾಗಿ ತಿಳಿಸಿದ್ದಾರೆ.