Tag: ಬಾಟಲ್

  • ಸೋನು ಶ್ರೀನಿವಾಸ್ ಗೌಡಗೆ ಫೀಡಿಂಗ್ ಬಾಟಲ್ ಕೊಟ್ಟು ‘ಬಾಯಲ್ಲಿ ಇಟ್ಕೋ ಶಾಂತವಾಗ್ತಿಯಾ’ ಎಂದು ಬುದ್ದಿ ಹೇಳಿದ ಅಕ್ಷತಾ

    ಸೋನು ಶ್ರೀನಿವಾಸ್ ಗೌಡಗೆ ಫೀಡಿಂಗ್ ಬಾಟಲ್ ಕೊಟ್ಟು ‘ಬಾಯಲ್ಲಿ ಇಟ್ಕೋ ಶಾಂತವಾಗ್ತಿಯಾ’ ಎಂದು ಬುದ್ದಿ ಹೇಳಿದ ಅಕ್ಷತಾ

    ಇಂದು ಬಿಗ್ ಬಾಸ್ ಮನೆಯಲ್ಲಿ ಇಷ್ಟಕಷ್ಟ ಎನ್ನುವ ಆಟವೊಂದನ್ನು ಏರ್ಪಡಿಸಲಾಗಿತ್ತು. ಈ ಆಟಕ್ಕಾಗಿಯೇ ಹಲವು ವಸ್ತುಗಳನ್ನು ಬಾಕ್ಸ್ ನಲ್ಲಿ ತಂದಿರಿಸಲಾಗಿತ್ತು. ಆ ಬಾಕ್ಸ್ ನಲ್ಲಿ ಗೊಂಬೆ, ಹಾರ್ಟ್, ಫೀಡಿಂಗ್ ಬಾಟಲ್ ಸೇರಿದಂತೆ ಹಲವು ವಸ್ತುಗಳು ಇದ್ದವು. ಆ ವಸ್ತುಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು, ತಮಗಿಷ್ಟ ಪಟ್ಟವರಿಗೆ ಅದನ್ನು ಕೊಡುವುದು ಈ ಆಟದ ಉದ್ದೇಶವಾಗಿತ್ತು. ಅಲ್ಲದೇ, ಅದನ್ನು ಯಾಕೆ ಆಯ್ಕೆ ಮಾಡಿಕೊಂಡರು ಮತ್ತು ಅದನ್ನು ಇಷ್ಟದವರಿಗೆ ಕೊಡುವುದಕ್ಕೆ ಕಾರಣವನ್ನೂ ಹೇಳಬೇಕಿತ್ತು.

    ಇತ್ತೀಚಿನ ದಿನಗಳಲ್ಲಿ ಬಿಗ್ ಬಾಸ್ ಮನೆಯಲ್ಲಿ ಸೋನು ಶ್ರೀನಿವಾಸ್ ಗೌಡ ಅವರದ್ದೇ ಮಾತು. ಅತೀ ಹೆಚ್ಚು ಮಾತನಾಡುವ ಸ್ಪರ್ಧಿ ಎಂದು ಕೆಲವರು ಮನೆಯಲ್ಲೇ ಬೇಸರ ಮಾಡಿಕೊಂಡಿದ್ದಾರೆ. ಫಿಲ್ಟರ್ ಇಲ್ಲದೇ ಮಾತನಾಡುತ್ತಾರೆ ಎನ್ನುವ ಕಾರಣಕ್ಕಾಗಿ ಸುದೀಪ್ ಅವರಿಂದಲೂ ಸೋನು ಬುದ್ದಿ ಹೇಳಿಕೊಂಡಿದ್ದಾರೆ. ಅಂತಹ ಸೋನುಗೆ ಫೀಡಿಂಗ್ ಬಾಟಲು ಕೊಟ್ಟು ಅಚ್ಚರಿ ಮೂಡಿಸಿದ್ದಾರೆ ಅಕ್ಷತಾ. ಈ ಮನೆಯಲ್ಲಿ ಸೋನು ಮಾತಾಡೋ ಮಾತುಗಳು ಎಫೆಕ್ಟ್ ಆಗ್ತಾವು. ಮಾತಾಡ್ಬೇಕು ಅನಿಸ್ತಾಗ ಈ ಬಾಟ್ಲು ಬಾಯಲ್ಲಿ ಇಟ್ಕೋ ಶಾಂತಾಗ್ತಿಯಾ ಎಂದು ಬುದ್ದಿ ಹೇಳಿದ್ದಾರೆ. ಇದನ್ನೂ ಓದಿ:ತಮಿಳು ಮತ್ತು ತೆಲುಗಿಗೆ ರಿಮೇಕ್ ಆಗಲಿದೆ ಶಶಾಂಕ್ ನಿರ್ದೇಶನದ ‘ಲವ್ 360’ ಸಿನಿಮಾ

    ಸೋನು ಶ್ರೀನಿವಾಸ್ ಗೌಡ ಆ ಮಾತನ್ನು ಅನುಮೋದಿಸಿದ್ದೇನೆ ಎನ್ನುವಂತೆ ಬಾಟಲು ಪಡೆದುಕೊಂಡಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ಏನು ಕೊಟ್ಟಿದ್ದಾರೆ ಎನ್ನುವುದು ವಿಶೇಷ. ಸದ್ಯ ಅಪ್ ಲೋಡ್ ಆಗಿರುವ ವಿಡಿಯೋದಲ್ಲಿ ಅಕ್ಷತಾ ಬಾಟಲ್ ಎತ್ತಿಕೊಳ್ಳುವ ಮತ್ತು ಅದನ್ನು ಸೋನುಗೆ ಕೊಡುವ ದೃಶ್ಯ ಮಾತ್ರ ರಿಲೀಸ್ ಆಗಿದ್ದು, ಸೋನು ಗೌಡ ಅದಕ್ಕೆ ಕೊಟ್ಟ ಉತ್ತರ ಏನು ಅನ್ನುವುದನ್ನು ಕಾದು ನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಯುವಕ ಸಾವನ್ನಪ್ಪಿಲ್ಲ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ: ಶ್ರೀ ಶೈಲ ಸ್ವಾಮೀಜಿ

    ಯುವಕ ಸಾವನ್ನಪ್ಪಿಲ್ಲ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ: ಶ್ರೀ ಶೈಲ ಸ್ವಾಮೀಜಿ

    ಅಮರಾವತಿ: ಯುವಕನು ಸುರಕ್ಷಿತವಾಗಿದ್ದು, ತಲೆಗೆ ಸ್ವಲ್ಪ ಪೆಟ್ಟಾಗಿರುವುದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾನೆ ಎಂದು ಶ್ರೀಮದ್ ಶ್ರೀಶೈಲ ಪೀಠ ಜಗದ್ಗುರು ಚನ್ನಸಿದ್ದರಾಮ ಶಿವಾಚರ್ಯರು ತಿಳಿಸಿದ್ದಾರೆ.

    ಆಂಧ್ರಪ್ರದೇಶದ ಶ್ರೀಶೈಲದ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ನೀರಿನ ಬಾಟಲ್‍ಗಾಗಿ ನಡೆದ ಗಲಾಟೆಯಲ್ಲಿ ಕನ್ನಡಿಗ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿತ್ತು. ಇದನ್ನೂ ಓದಿ: ಕೇಜ್ರಿವಾಲ್ ಮನೆ ಮೇಲೆ ದಾಳಿ- 8 ಮಂದಿ ಬಂಧನ

    ಘಟನೆಯ ಕುರಿತು ಶ್ರೀಶೈಲ ಶ್ರೀಗಳು ಪ್ರತಿಕ್ರಿಯಿಸಿದ್ದು, ಯುವಕನು ಮರಣ ಹೊಂದಿಲ್ಲ. ಅವನು ಸುರಕ್ಷಿತವಾಗಿದ್ದಾನೆ. ತಲೆಗೆ ಸ್ವಲ್ಪ ಪೆಟ್ಟಾಗಿರುವುದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ನಾವು ನಿನ್ನೆ ರಾತ್ರಿಯೇ ಸ್ವತಃ ಶ್ರೀ ಶೈಲದ ಸಮೀಪದಲ್ಲಿರುವ ಸುನ್ನಿ ಪೇಟೆ ಆಸ್ಪತ್ರೆಗೆ ಹೋಗಿ ಅವನ ಆರೋಗ್ಯವನ್ನು ವಿಚಾರಿಸಿಕೊಂಡು ಬಂದಿದ್ದೇವೆ ಎಂದು ತಿಳಿಸಿದರು.

    ಹೆಚ್ಚಿನ ಚಿಕಿತ್ಸೆ ಕೊಡಲಿಕ್ಕೆ ಮೆದುಳಿನಲ್ಲಿ ಸ್ವಲ್ಪ ರಕ್ತಸ್ರಾವವಾಗಿರುವುದರಿಂದ ವೈದ್ಯರು ಸ್ಕ್ಯಾನ್ ಮಾಡಬೇಕು. ಆದರೆ ಅಲ್ಲಿ ಸ್ಕ್ಯಾನಿಂಗ್ ವ್ಯವಸ್ಥೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಹೀಗಾಗಿ ಅವನನ್ನು ತಕ್ಷಣ ಒಂದು ಉತ್ತಮ ಆಸ್ಪತ್ರೆಗೆ ಸೇರಿಸಬೇಕಿದೆ ಎಂದು ಹೇಳಿದರು.

    ಆಂಧ್ರಪ್ರದೇಶದ ಶ್ರೀಶೈಲ ಗಲಭೆ ಸದ್ಯ ಶಾಂತವಾಗಿದೆ ಕನ್ನಡಿಗರು ಸುರಕ್ಷಿತವಾಗಿದ್ದಾರೆ ಭಯಪಡುವ ಅಗತ್ಯವಿಲ್ಲ ಎಂದರು.

    ಆಂಧ್ರದ ಶ್ರೀಶೈಲ ಹೊಟೇಲ್ ಸಿಬ್ಬಂದಿ ಕನ್ನಡಿಗರ ಮೇಲೆ ಹಲ್ಲೆ ನಡೆದಿದ್ದು ಹಲ್ಲೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಎಲ್ಲವೂ ಸುಭಿಕ್ಷವಾಗಿದೆ ಯಾರು ಆತಂಕ ಒಳಗಾಗಬಾರದು ಎಂದು ತಿಳಿಸಿದರು.

    ನಡೆದಿದ್ದು ಏನು?
    ದೇವಸ್ಥಾನದ ಆವರಣದಲ್ಲಿ ನೀರಿನ ಬಾಟಲ್‍ಗಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿಯಾಗಿದೆ. ಆಂಧ್ರ ಮೂಲದ ವ್ಯಾಪಾರಸ್ಥರು ಹಾಗೂ ಸ್ಥಳೀಯರಿಂದ ಕರ್ನಾಟಕ ಭಕ್ತರ ಮೇಲೆ ಹಲ್ಲೆ ನಡೆದಿದೆ. ಲಾಠಿ ಹಾಗೂ ಮಾರಕಾಸ್ತ್ರದಿಂದ ಹಿಡಿದು ಹೊಡೆದಾಡುತ್ತಿರುವ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇದನ್ನೂ ಓದಿ: ನೀರಿನ ಬಾಟಲ್‌ ವಿಚಾರಕ್ಕೆ ಆಂಧ್ರ ವ್ಯಾಪಾರಸ್ಥರಿಂದ ಗಲಾಟೆ- ಕರ್ನಾಟಕದ ಯುವಕ ಗಂಭೀರ

    ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಪಾದಯಾತ್ರೆ ಮಾಡಿದ್ದರು. ರಾತ್ರಿ ವೇಳೆ ಕ್ಷುಲ್ಲಕ ಕಾರಣಕ್ಕೆ ಭಕ್ತರು ಹಾಗೂ ವ್ಯಾಪಾರಿಗಳ ನಡುವೆ ಜಗಳ ನಡೆದಿದೆ. ಜಗಳ ತಾರಕಕ್ಕೇರಿ ಸ್ಥಳೀಯರಿಂದ ಭಕ್ತರ ಜೊತೆ ಹೊಡೆದಾಟವಾಗಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದರು.

  • ಬಾಟಲ್‍ನಿಂದ ಇರಿದು ಕಾಲಿನ ನರವೇ ಕಟ್ ಮಾಡಿದ್ರು-  ಬೆಂಗ್ಳೂರಲ್ಲಿ ವ್ಯಕ್ತಿಯ ಬರ್ಬರ ಹತ್ಯೆ

    ಬಾಟಲ್‍ನಿಂದ ಇರಿದು ಕಾಲಿನ ನರವೇ ಕಟ್ ಮಾಡಿದ್ರು- ಬೆಂಗ್ಳೂರಲ್ಲಿ ವ್ಯಕ್ತಿಯ ಬರ್ಬರ ಹತ್ಯೆ

    ಬೆಂಗಳೂರು: ವ್ಯಕ್ತಿಯೊಬ್ಬನನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಸಿಲಿಕಾನ್ ಸಿಟಿಯ ಜೆಪಿ ನಗರ ಮೊದಲನೆ ಹಂತದಲ್ಲಿ ನಡೆದಿದೆ.

    ಸುನಿಲ್ ಕುಮಾರ್ (33) ಕೊಲೆಯಾದ ವ್ಯಕ್ತಿ. ಇವರು ಶನಿವಾರ ತಡರಾತ್ರಿ ಕೆಲ ಮುಗಿಸಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಬಾಟಲ್ ನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

    ಸುನಿಲ್ ಪಂಪ್ ಹೌಸ್ ಪಬ್ ನಲ್ಲಿ ಕೆಲಸ ಮಾಡುತ್ತಿದ್ದರು. ಹೀಗೆ ಕೆಲಸ ಮಾಡಿ ತಡರಾತ್ರಿ ತನ್ನ ಮನೆಗೆ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ದಾರಿಯಲ್ಲಿ ಇಬ್ಬರು ಅಡ್ಡಗಟ್ಟಿದ್ದಾರೆ. ಅಲ್ಲದೆ ಸುನಿಲ್ ಮೇಲೆ ಬಾಟಲಿನಿಂದ ಹಲ್ಲೆ ಮಾಡಿದ್ದಾರೆ. ಬಳಿಕ ಸುನಿಲ್ ಬಲಗಾಲಿನ 4 ಜಾಗದಲ್ಲಿ ಅನೇಕ ಬಾರಿ ಬಾಟಲಿನಿಂದ ಇರಿದಿದ್ದಾರೆ.

    ಬಾಟಲ್‍ನಿಂದ ಇರಿದ ರಭಸಕ್ಕೆ ಸುನಿಲ್ ಕಾಲಿನ ನರವೇ ಕಟ್ ಆಗಿದೆ. ಆ ನಂತರ ಕೊಲೆಗಡುಕರು ಸ್ಥಳದಿಂದ ಪರಾರಿಯಾಗಿದ್ದಾರೆ. ಇತ್ತ ಸುನಿಲ್ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ಅವರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದಾರೆ. ಆದರೆ ಮಾರ್ಗ ಮಧ್ಯೆ ಅವರು ಮೃತಪಟ್ಟಿದ್ದಾರೆ.

    ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗುತ್ತಿದೆ. ಘಟನೆ ಸಂಬಂಧ ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಿರಿಂಡಾ ಕುಡಿದು ದಾರಿ ಕಾಣದೆ ರಸ್ತೆಯಲ್ಲೇ ಹೊರಳಾಡಿದ ಹಾವು!

    ಮಿರಿಂಡಾ ಕುಡಿದು ದಾರಿ ಕಾಣದೆ ರಸ್ತೆಯಲ್ಲೇ ಹೊರಳಾಡಿದ ಹಾವು!

    ಚಿಕ್ಕಮಗಳೂರು: ಪ್ರವಾಸಿಗರು ಕುಡಿದು ಬಿಸಾಡಿದ ಬಾಟಲಿಯಲ್ಲಿದ್ದ ಮಿರಿಂಡಾ ಕುಡಿಯಲು ಹೋಗಿ ತಲೆಸಿಕ್ಕಿ ಹಾಕಿಕೊಂಡು ಹಾವು ದಾರಿ ಕಾಣದೆ ಕಂಗಾಲಾದ ಘಟನೆ ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಗ್ರಾಮದಲ್ಲಿ ನಡೆದಿದೆ.

    ರಸ್ತೆ ಬದಿಯಲ್ಲಿದ್ದ ಬಾಟಲಿಗೆ ತಲೆಹಾಕಿದ ಕೆರೆಹಾವು ತಲೆಯನ್ನ ಹೊರತೆಗೆಯಲಾಗದೆ ಸುಮಾರು ಅರ್ಧ ಗಂಟೆಗಳ ಕಾಲ ರಸ್ತೆ ಬದಿಯಲ್ಲೇ ಹೋರಾಟ ನಡೆಸಿದೆ. ಆದರೆ ಹಾವಿಗೆ ತಲೆ ಹೊರತೆಗೆಯಲು ಸಾಧ್ಯವಾಗಿಲ್ಲ. ರಸ್ತೆಯಲ್ಲಿ ಬಿದ್ದು, ಹೊರಳಾಡಿ ಏನೇ ಹರಸಾಹಸ ಪಟ್ಟರೂ, ಹಾವಿಗೆ ತಲೆಯನ್ನ ಬಾಟಲಿನಿಂದ ತೆಗೆಯಲು ಸಾಧ್ಯವಾಗಿಲ್ಲ.

    ಇದೇ ವೇಳೆ ಚಿಕ್ಕಮಗಳೂರಿನಿಂದ ಮಲ್ಲಂದೂರಿಗೆ ಹೋಗುತ್ತಿದ್ದ ವೈಲ್ಡ್ ಕ್ಯಾಟ್ ಸಿ ಮುಖ್ಯಸ್ಥ ಶ್ರೀದೇವ್ ಹಾವನ್ನ ಕಂಡು ಪತ್ನಿಯ ಜೊತೆಗೂಡಿ ಹಾವಿನ ತಲೆಯನ್ನ ಬಾಟಲಿಯಿಂದ ಹೊರತೆಗೆದಿದ್ದಾರೆ. ಶ್ರೀದೇವ್ ಅವರ ಪತ್ನಿ ಉದ್ದವಾದ ಕೋಲಿನಿಂದ ಹಾವಿನ ತಲೆ ಮೇಲಿದ್ದ ಬಾಟಲಿಗೆ ಒತ್ತಿ ಹಿಡಿದಿದ್ದಾರೆ. ಇದೇ ವೇಳೆ ಶ್ರೀದೇವ್ ಹಾವಿನ ಬಾಲ ಹಿಡಿದು ಎಳೆದಿದ್ದು, ಈ ಮೂಲಕ ಬಾಟಲಿಯಿಂದ ಹಾವನ್ನು ರಕ್ಷಿಸಿದ್ದಾರೆ.

  • ಎಣ್ಣೆ ಬಾಟಲ್‍ಗಾಗಿ ವ್ಯಕ್ತಿಯ ಬರ್ಬರ ಕೊಲೆ: ಮೂವರು ಅರೆಸ್ಟ್

    ಎಣ್ಣೆ ಬಾಟಲ್‍ಗಾಗಿ ವ್ಯಕ್ತಿಯ ಬರ್ಬರ ಕೊಲೆ: ಮೂವರು ಅರೆಸ್ಟ್

    ಬೆಂಗಳೂರು: ಮದ್ಯ ಇರುವ ಬಾಟಲ್‍ಗಾಗಿ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಕೊಲೆ ಮಾಡಿದ್ದ ಮೂವರು ಯುವಕರನ್ನು ಪುಲಿಕೇಶಿನಗರ ಪೊಲೀಸರು ಇಂದು ಬಂಧಿಸಿದ್ದಾರೆ.

    ಪುಲಿಕೇಶಿನಗರ ಸತ್ಯಶೀಲನ್ ಕೊಲೆಯಾಗಿದ್ದ ವ್ಯಕ್ತಿ. ಸೆಲ್ವರಾಜ್ ತುಳಸಿರಾಮ (18), ಲೋಕೇಶ್ (20) ಹಾಗೂ ಸುನೀಲ್ ಕುಮಾರ್ (24) ಬಂಧಿತ ಯುವಕರು. ಈ ಘಟನೆಯು ನಗರದ ಬಾಣಸವಾಡಿಯ ಹೋಟೆಲ್ ಬಳಿ ಮಾರ್ಚ್ 25ರಂದು ನಡೆದಿತ್ತು.

    ಆಗಿದ್ದೇನು?:
    ನಗರದ ಬಾಣಸವಾಡಿಯ ಹೋಟೆಲ್ ಬಳಿ ಮಾರ್ಚ್ 25ರಂದು ರಾತ್ರಿ ಸತ್ಯಶೀಲನ್ ಕೈಯಲ್ಲಿ ಮದ್ಯದ ಬಾಟಲ್ ಹಿಡಿದುಕೊಂಡು ಹೋಗುತ್ತಿದ್ದ. ಈ ವೇಳೆ ಲೋಕೇಶ್, ಸೆಲ್ವರಾಜ್ ಹಾಗೂ ಸುನೀಲ್ ಮದ್ಯ ಹುಡುಕಾಡುತ್ತಿದ್ದರು. ಸತ್ಯಶೀಲನ್ ಕೈಯಲ್ಲಿದ್ದ ಮದ್ಯದ ಬಾಟಲ್ ನೋಡಿದ ಯುವಕರು, ಮೊದಲಿಗೆ ಮದ್ಯ ಕೊಡುವಂತೆ ಕೇಳಿದ್ದಾರೆ. ಆದರೆ ಸತ್ಯಶೀಲನ್ ಮದ್ಯ ಬಾಟಲ್ ಕೊಡಲು ನಿರಾಕರಿಸಿದ್ದಾನೆ. ಇದರಿಂದ ಕೋಪಗೊಂಡ ಯುವಕರು ಚಾಕುವಿನಿಂದ ಇರಿದು, ಬಾಟಲ್ ಕಿತ್ತುಕೊಂಡು ಪರಾರಿಯಾಗಿದ್ದರು.

    ಈ ಕುರಿತು ಪುಲಿಕೇಶಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದರು. ಆರೋಪಿಗಳನ್ನು ಇಂದು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

  • ಮಿನಿ ಲಾರಿ ಉರುಳಿ 18 ಲಕ್ಷ ರೂ. ಮೌಲ್ಯದ ಮದ್ಯ ರಸ್ತೆ ಪಾಲು

    ಮಿನಿ ಲಾರಿ ಉರುಳಿ 18 ಲಕ್ಷ ರೂ. ಮೌಲ್ಯದ ಮದ್ಯ ರಸ್ತೆ ಪಾಲು

    -ಪುಕ್ಕಟೆಯಾಗಿ ಸಿಕ್ವು ವಿಧದ ಬ್ರ್ಯಾಂಡ್ ಬಾಟಲ್

    ರಾಯಚೂರು: ಚಾಲಕನ ನಿಯಂತ್ರಣ ತಪ್ಪಿ ಲಿಕ್ಕರ್ ಬಾಟಲ್‍ಗಳನ್ನು ಸಾಗಿಸುತ್ತಿದ್ದ ಮಿನಿ ಲಾರಿಯೊಂದು ಲಿಂಗಸುಗೂರು ಬೈಪಾಸ್ ರಸ್ತೆಯಲ್ಲಿ ಬಿದ್ದಿದ್ದು, ಕೆಲ ಮದ್ಯ ಪ್ರಿಯರು ಬಾಟಲ್‍ಗಳನ್ನು ಎತ್ತಿಕೊಂಡು ಹೋಗಿದ್ದಾರೆ.

    ಮದ್ಯ ಬಾಟಲ್‍ಗಳನ್ನು ತುಂಬಿಕೊಂಡು ಸಿಂಧನೂರು ಎಂಎಸ್‍ಐಎಲ್ ಘಟಕದಿಂದ ರಾಷ್ಟ್ರೀಯ ಹೆದ್ದಾರಿ 150ರಲ್ಲಿ ಮಾರ್ಗವಾಗಿ ಲಿಂಗಸೂಗುರು ಮಳಿಗೆಗೆ ಹೊರಟಿತ್ತು. ಚಾಲಕ ವೇಗವಾಗಿ ಚಾಲನೆ ಮಾಡುತ್ತಿದ್ದ ಪರಿಣಾಮ ಆತನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದು ರಸ್ತೆ ಬದಿಗೆ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆ ಸಂಭವಿಸುತ್ತಿದ್ದಂತೆ ಚಾಲಕ ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾನೆ.

    ಮಿನಿ ಲಾರಿಯಲ್ಲಿ 18 ಲಕ್ಷ ರೂ. ಅಧಿಕ ಬೆಲೆ ಬಾಳುವ ಬೀಯರ್ ಸೇರಿದಂತೆ ವಿವಿಧ ಬ್ರ್ಯಾಂಡ್‍ನ ಮದ್ಯದ ಬಾಟಲ್‍ಗಳು ಇದ್ದವು. ರಸ್ತೆ ಬದಿಗೆ ಬಾಟಲ್‍ಗಳು ಬಿಳ್ಳುತ್ತಿದ್ದಂತೆ ಹೆದ್ದಾರಿ ಮಾರ್ಗವಾಗಿ ಹೋಗುತ್ತಿದ್ದ ಪ್ರಯಾಣಿಕರು, ಮದ್ಯ ಪ್ರಿಯರು ಬಾಟಲ್‍ಗಳನ್ನು ಎತ್ತಿಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ ಕೆಲವು ಬಾಟಲ್‍ಗಳು ಒಡೆದು ಹೋಗಿದ್ದು, ಮದ್ಯದ ಹೊಳೆಯೇ ಹರಿದಿದೆ.

    ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಲಿಂಗಸುಗೂರು ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು, ಸಂಚಾರ ಅಸ್ತವ್ಯಸ್ತವಾಗದಂತೆ ಎಚ್ಚರವಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಟ್ರಕ್‍ನಿಂದ ಕೆಳಗೆ ಬಿದ್ದವು ರಾಶಿ ರಾಶಿ ಬಿಯರ್ ಬಾಟಲ್‍ಗಳು- ವಿಡಿಯೋ ನೋಡಿ

    ಟ್ರಕ್‍ನಿಂದ ಕೆಳಗೆ ಬಿದ್ದವು ರಾಶಿ ರಾಶಿ ಬಿಯರ್ ಬಾಟಲ್‍ಗಳು- ವಿಡಿಯೋ ನೋಡಿ

    ಜೈಪುರ್: ಟೋಲ್ ಗೇಟ್ ಕೌಂಟರ್ ಬಳಿಯ ರೋಡ್ ಡಿವೈಡರ್ ಗೆ ಟ್ರಕ್‍ವೊಂದು ಡಿಕ್ಕಿ ಹೊಡೆದ ಪರಿಣಾಮ ಅದರಲ್ಲಿದ್ದ ಬಿಯರ್ ಬಾಟಲ್‍ಗಳು ರಾಶಿ ರಾಶಿಯಾಗಿ ಕೆಳಗೆ ಬಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ರಾಜಸ್ಥಾನದ ಜೈಪುರ್-ಅಜ್ಮಿರ್ ರಾಷ್ಟ್ರೀಯ ಹೆದ್ದಾರಿಯ ಕಿಶನ್‍ಗಂಜ್ ಟೋಲ್ ಗೇಟ್‍ನಲ್ಲಿ ಶುಕ್ರವಾರ ಘಟನೆ ನಡೆದಿದೆ. ಬಿಯರ್ ಬಾಟಲ್‍ಗಳು ಬಿದ್ದ ಪರಿಣಾಮ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಎಲ್ಲ ದೃಶ್ಯ ಸ್ಥಳದಲ್ಲಿಯೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ವಿಡಿಯೋದಲ್ಲಿ ಏನಿದೆ?
    ವೇಗವಾಗಿ ಬಂದ ಟ್ರಕ್ ಕಿಶನ್‍ಗಂಜ್ ಟೋಲ್ ಗೇಟ್ ಕೌಂಟರ್ ಸಮೀಪದ ರೋಡ್ ಡಿವೈಡರ್ ಗೆ ಡಿಕ್ಕಿ ಹೊಡೆದಿದ್ದು, ರಭಸಕ್ಕೆ ಟ್ರಕ್‍ನಲ್ಲಿದ್ದ ಬಿಯರ್ ಬಾಟಲ್‍ಗಳು ಮುಂದೆ ಇದ್ದ ಕೌಂಟರ್, ಕಾರು ಸೇರಿದಂತೆ ಕೆಲ ವಾಹಗಳ ಮೇಲೆ ಬಿದ್ದಿವೆ. ಬಾಟಲ್‍ಗಳು ಗೋಡೆ ಹಾಗೂ ವಾಹಗಳಿಗೆ ತಾಕಿ ಒಡೆದಿದ್ದು, ಬಿಯರ್ ಹೊಳೆಯೇ ಹರಿದಿದೆ. ಟ್ರಕ್ ಮುಂದಿದ್ದ ಕಾರು ಹಾಗೂ ಜೀಪ್‍ಗಳ ಗಾಜು ಒಡೆದಿವೆ. ಕಾರಿನಲ್ಲಿದ್ದ ಅದರಲ್ಲಿದ್ದ ಚಾಲಕನಿಗೆ ಗಾಜಿನ ಚೂರುಗಳು ಚುಚ್ಚಿ ಗಂಭೀರವಾಗಿ ಗಾಯಗೊಂಡಿದ್ದಾನೆ.

    ವೇಗವಾಗಿ ರೋಡ್ ಡಿವೈಡರ್ ಗೆ ಡಿಕ್ಕಿ ಹೊಡೆದಿದ್ದ ಟ್ರಕ್ ಕೂಡಾ ಜಖಂಗೊಂಡಿದ್ದು, ರಸ್ತೆ ಹಾಗೂ ಟೋಲ್ ಗೇಟ್ ಹಣ ಪಡೆಯುವ ಕೌಂಟರ್ ನಲ್ಲಿ ಬೀಯಲ್ ಹೊಳೆ ಹರೆದಿದೆ. ಮಾಹಿತಿ ಪಡೆಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ ಎಂದು ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಮದ್ವೆ ಸಮಾರಂಭಕ್ಕೆ ತಂದಿದ್ದ ಮಿನರಲ್ ವಾಟರ್ ಬಾಟಲಿಯಲ್ಲಿ ಕಸಕಡ್ಡಿ, ಹುಳು

    ಮದ್ವೆ ಸಮಾರಂಭಕ್ಕೆ ತಂದಿದ್ದ ಮಿನರಲ್ ವಾಟರ್ ಬಾಟಲಿಯಲ್ಲಿ ಕಸಕಡ್ಡಿ, ಹುಳು

    ತುಮಕೂರು: ಮದುವೆ ಸಮಾರಂಭಕ್ಕೆ ತಂದಿದ್ದ ಮಿನರಲ್ ವಾಟರ್ ಬಾಟಲಿಯಲ್ಲಿ ಕಸಕಡ್ಡಿ, ಹುಳು ಕಂಡು ಬಂದಿದ್ದರಿಂದ ಮದುವೆ ಬಂದ ಅತಿಥಿಗಳು ಹೌಹಾರಿದ ಘಟನೆ ನಡೆದಿದೆ.

    ತುಮಕೂರು ನಗರದ ತಿರುಮಲ ಕಲ್ಯಾಣ ಮಂಟಪದಲ್ಲಿ ಮದುವೆ ಸಮಾರಂಭ ನಡೆಯುತಿತ್ತು. ಇಲ್ಲಿ ಬ್ಲೂ ಬ್ರೀಜ್ ಹೆಸರಿನ ನೀರಿನ ಬಾಟಲನ್ನು ತರಿಸಲಾಗಿತ್ತು. ಅದರಲ್ಲಿ 7 ಬಾಕ್ಸನಲ್ಲಿರುವ ಬಾಟಲ್ ಗಳಲ್ಲಿ ಕಸಕಡ್ಡಿಗಳು ಕಂಡು ಬಂದಿದೆ.

    ನೂರಾರು ಅಥಿತಿಗಳು ಅರಿವಿಗೆ ಬಾರದೇ ಈ ನೀರನ್ನು ಕುಡಿದಿದ್ದು ಕಾಯಿಲೆ ಬರುವ ಆತಂಕದಲ್ಲಿದ್ದಾರೆ. ಶೈಲಾ ಇಂಡಸ್ಟ್ರೀಸ್ ಗೆ ಸೇರಿದ ನೀರಿನ ಬಾಟಲ್ ಇದಾಗಿದ್ದು ತುಮಕೂರಿನ ರಂಗಾಪುರ ಕೈಗಾರಿಕಾ ಪ್ರದೇಶದಲ್ಲಿ ತಯಾರು ಮಾಡಲಾಗುತ್ತಿದೆ. ತಯಾರಿಕಾ ಘಟಕದಲ್ಲಿ ಮುಂಜಾಗೃತೆ ವಹಿಸದೇ ಜನರ ಆರೋಗ್ಯದ ಜೊತೆ ಚೆಲ್ಲಾಟ ಆಡುತ್ತಿರುವ ಕಂಪೆನಿ ವಿರುದ್ಧ ದೂರು ನೀಡಲು ಗ್ರಾಹಕರು ಮುಂದಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗ್ರಾಹಕನಿಗೆ ಮೂತ್ರ ತುಂಬಿದ ಬಾಟಲ್ ಕಳುಹಿಸಿದ ಅಮೆಜಾನ್

    ಗ್ರಾಹಕನಿಗೆ ಮೂತ್ರ ತುಂಬಿದ ಬಾಟಲ್ ಕಳುಹಿಸಿದ ಅಮೆಜಾನ್

    ಲಂಡನ್: ಆನ್‍ಲೈನ್ ಮಾರುಕಟ್ಟೆಯಲ್ಲಿ ಅಮೆಜಾನ್ ತನ್ನದೇ ಆದ ಚಾಪನ್ನು ವಿಶ್ವದಾದ್ಯಂತ ಮೂಡಿಸಿದೆ. ಆದ್ರೂ ಕೆಲವೊಂದು ಬಾರಿ ಎಡವಟ್ಟುಗಳು ಆಗುತ್ತಿರುತ್ತವೆ. ಇತ್ತೀಚೆಗೆ ಗ್ರಾಹಕರೊಬ್ಬರಿಗೆ ಅಮೇಜಾನ್ ಮೂತ್ರ ತುಂಬಿದ ಬಾಟಲ್ ಕಳುಹಿಸಿದೆ.

    30 ವರ್ಷದ ಗ್ರಾಹಕರೊಬ್ಬರು ಅಮೇಜಾನ್ ನಲ್ಲಿ 65 ಪೌಂಡ್ (5,875 ರೂ.ಬೆಲೆಯ) ವಸ್ತುವೊಂದನ್ನು ಆನ್‍ಲೈನ್ ನಲ್ಲಿ ಬುಕ್ ಮಾಡಿದ್ರು. ಆದ್ರೆ ಮನೆಗೆ ಡ್ಯಾಮೇಜ್ ಆಗಿರುವ ಬಾಕ್ಸ್ ನಲ್ಲಿ ಮೂತ್ರ ತುಂಬಿದ ಬಾಟಲ್ ಕಳುಹಿಸಲಾಗಿದೆ. ನನಗೆ ಬಂದ ಬಾಕ್ಸ್ ತೆರೆದು ನೋಡಿದಾಗ ಬಾಟಲ್ ಇತ್ತು. ಬಾಟಲ್ ನಲ್ಲಿ ಏನಿದೆ ನೋಡಿದಾಗ ಅದರಲ್ಲಿ ಮೂತ್ರವನ್ನು ತುಂಬಲಾಗಿತ್ತು. ತುಂಬಾ ಕೆಟ್ಟ ವಾಸನೆಯನ್ನು ಹೊಂದಿದ್ದು, ನಾನು ಪದೇ ಪದೇ ನನ್ನ ಕೈಗೊಳನ್ನು ಶುಚಿ ಮಾಡಿಕೊಂಡಿದ್ದೇನೆ ಎಂದು ಗ್ರಾಹಕ ಹೇಳುತ್ತಾರೆ.

    ಈ ಬಗ್ಗೆ ಗ್ರಾಹಕ ಅಮೆಜಾನ್ ಗೆ ಫೇಸ್‍ಬುಕ್ ನಲ್ಲಿ ದೂರು ಸಲ್ಲಿಸಿದ್ದಾರೆ. ಗ್ರಾಹಕರಿಗೆ ವಸ್ತು ಖರೀದಿಸಿದ ಹಣದ ಜೊತೆಗೆ 150 ಪೌಂಡ್ (13,600 ರೂ.) ಬೆಲೆಯ ವೋಚರ್ ಸಹ ನೀಡಲಾಗಿದೆ. ಈ ವಿಚಾರ ಗಂಭೀರವಾದದ್ದು, ಇದರ ಕುರಿತು ತನಿಖೆ ನಡೆಸಲಾಗುವುದು. ದೂರು ನೀಡುವ ಮೂಲಕ ನಮ್ಮನ್ನು ಎಚ್ಚರಿಸಿದಕ್ಕೆ ಧನ್ಯವಾದಗಳು ಎಂದು ಅಮೆಜಾನ್ ತಿಳಿಸಿದೆ.

    ಡಿಸೆಂಬರ್ ನಲ್ಲಿ ಅಮೆಜಾನ್ ನಲ್ಲಿ ಕಾರ್ಯ ನಿರ್ವಹಿಸುವ ಚಾಲಕರು ಸಮಯದ ಅಭಾವದಿಂದಾಗಿ ಪ್ಲಾಸ್ಟಿಕ್ ಬಾಟಲ್ ಗಳಲ್ಲಿ ವಿಸರ್ಜನೆ ಮಾಡ್ತಾರೆ ಎಂಬ ವಿಷಯ ಬೆಳಕಿಗೆ ಬಂದಿತ್ತು. ಇಂಗ್ಲೆಂಡ್ ನಲ್ಲಿ ವಾಹನ ಚಾಲಕರು 11 ಗಂಟೆಗಿಂತಲೂ ಹೆಚ್ಚಿಗೆ ಕೆಲಸ ಮಾಡಬಾರದು ಎಂಬ ಕಾನೂನು ಇದ್ರೂ ಅಮೆಜಾನ್ ನೌಕರರು ಹೆಚ್ಚು ಅವಧಿ ಕೆಲಸ ಮಾಡ್ತಾರೆ ಎಂದು ವರದಿಯಾಗಿದೆ.

  • ಅನುಚಿತ ವರ್ತನೆ ತೋರಿದ್ದ ವ್ಯಕ್ತಿಯನ್ನು ತಳ್ಳಿದ್ದಕ್ಕೆ 19ರ ಯುವತಿಗೆ ಗಾಜಿನ ಬಾಟಲಿಯಿಂದ ಹೊಡ್ದ!

    ಅನುಚಿತ ವರ್ತನೆ ತೋರಿದ್ದ ವ್ಯಕ್ತಿಯನ್ನು ತಳ್ಳಿದ್ದಕ್ಕೆ 19ರ ಯುವತಿಗೆ ಗಾಜಿನ ಬಾಟಲಿಯಿಂದ ಹೊಡ್ದ!

    ಸ್ವೀಡನ್: ನೈಟ್ ಕ್ಲಬ್‍ನಲ್ಲಿ ಯುವತಿಯೊಬ್ಬಳು ಅನುಚಿತವಾಗಿ ವರ್ತನೆ ತೋರಿದ ವ್ಯಕ್ತಿಯನ್ನು ತಳ್ಳಿದ್ದಕ್ಕೆ ಬಾಟಲಿನಿಂದ ಹೊಡೆದು ಹಲ್ಲೆ ಮಾಡಿದ ಘಟನೆ ಸ್ವೀಡನ್ ನ ಮಾಲ್ಮೋದಲ್ಲಿ ನಡೆದಿದೆ.

    ಸೋಫಿ ಜೋಹನ್‍ಸನ್ ಹಲ್ಲೆಗೊಳ್ಳಗಾದ ಯುವತಿ. ಜನವರಿ 24ರಂದು ಸೋಫಿ ತನ್ನ ಸ್ನೇಹಿತರ ಜೊತೆ ನೈಟ್‍ಕ್ಲಬ್ ಹೋಗಿದ್ದಾಳೆ. ಅಲ್ಲಿ ಡ್ಯಾನ್ಸ್ ಮಾಡುವಾಗ ಅಪರಿಚಿತ ವ್ಯಕ್ತಿ ಆಕೆ ಹತ್ತಿರ ಅನುಚಿತವಾಗಿ ವರ್ತಿಸಿದ್ದಾನೆ. ಆಗ ಸೋಫಿ ವ್ಯಕ್ತಿಯನ್ನು ತಳ್ಳಿದ್ದಾಳೆ. ಇದ್ದರಿಂದ ಕೋಪಗೊಂಡ ವ್ಯಕ್ತಿ ತನ್ನ ಮುಷ್ಟಿಯನ್ನು ಮುಚ್ಚಿ ಆಕೆಯ ಮುಖದ ಮೇಲೆ ಹೊಡೆದಿದ್ದಾನೆ. ನಂತರ ಸೋಫಿ ಅಲ್ಲಿಂದ ಹೋಗಲು ನಿರ್ಧರಿಸುತ್ತಾಳೆ. ಆಗ ಆ ವ್ಯಕ್ತಿ ಗಾಜಿನ ಬಾಟಲಿಯನ್ನು ಆಕೆಯ ತಲೆಗೆ ಹೊಡೆದಿದ್ದಾನೆ. ಬಾಟಲ್ ಮುರಿದು ಹೋಗಿ ಸೋಫಿ ತೀವ್ರವಾಗಿ ಗಾಯಗೊಂಡಿದ್ದಾಳೆ.

    ನನಗೆ ಆತ ಹೊಡೆದಿದ್ದು, ಅನುಭವವಾಯಿತ್ತು. ಆದರೆ ಯಾವುದೇ ನೋವಾಗಲಿಲ್ಲ. ಬಾಟಲಿಯಿಂದ ಹೊಡೆದಿದ್ದಾನೆಂಬುದು ಆ ಶಬ್ಧದಿಂದ ತಿಳಿಯಿತು. ಬಾಟಲಿಯಿಂದ ಹೊಡೆದಿದ್ದಕ್ಕೆ ಅದರಲ್ಲಿದ್ದ ನೀರು ತಲೆಯ ಬೀಳುತ್ತಿದೆ ಎಂದುಕೊಂಡೆ. ಆದರೆ ಅದು ರಕ್ತ ಎಂದು ನನ್ನ ಸ್ನೇಹಿತೆ ನನಗೆ ತಿಳಿಸಿದ್ದಳು. ನನಗೆ ಆಘಾತವಾಯಿತ್ತು. ಆಗ ನನ್ನ ಮುಖ ತುಂಬಾನೇ ಕೆಟ್ಟದಾಗಿ ಕಾಣುತ್ತಿತ್ತು. ನಾನು ಆಗ ಗಾರ್ಡ್ ಬಳಿ ಹೋದೆ ಎಂದು ಸೋಫಿ ಅಲ್ಲಿನ ಮಾಧ್ಯಮವೊಂದಕ್ಕೆ ತಿಳಿಸಿದ್ದಾಳೆ.

    ನನಗೆ ಆ ವ್ಯಕ್ತಿ ಯಾರೆಂಬುದು ಸರಿಯಾಗಿ ತಿಳಿದಿಲ್ಲ. ಆದರೆ ಆತ ಹೇಗಿದ್ದಾನೆ ಎಂಬುದು ನನಗೆ ಗೊತ್ತು. ಆತ 5.10 ಅಡಿ ಎತ್ತರವಿದ್ದನು. ಡಾರ್ಕ್ ಕೂದಲನ್ನು ಹೊಂದಿದ್ದನು. ಉದ್ದನೆಯ ತೋಳಿನ ಶರ್ಟ್ ಧರಿಸಿದ್ದನು ಎಂದು ಸೋಫಿ ಹೇಳಿದ್ದಾಳೆ.

    ತೀವ್ರವಾಗಿ ಗಾಯಗೊಂಡಿದ್ದ ಸೋಫಿಯನ್ನು ಆಸ್ಪತ್ರೆಗೆ ಕಡೆದುಕೊಂಡು ಹೋಗಲಾಗಿತ್ತು. ತಲೆಯ ಮೇಲೆ ಆಗಿದ್ದ ಗಾಯಕ್ಕೆ ಹಲವು ಹೊಲಿಗೆಗಳು ಬಿದ್ದಿವೆ. ಸೋಫಿ ಒಂದು ರಾತ್ರಿ ಆಸ್ಪತ್ರೆಯಲ್ಲೇ ಕಳೆದಿದ್ದಾಳೆ ಎಂದು ಹೇಳಲಾಗಿದೆ.