Tag: ಬಾಂದ್ರಾ

  • ಜನಪ್ರಿಯ ಬಾಲಿವುಡ್ ನಟ ದಲೀಪ್ ಗೆ ಜೈಲು ಶಿಕ್ಷೆ

    ಜನಪ್ರಿಯ ಬಾಲಿವುಡ್ ನಟ ದಲೀಪ್ ಗೆ ಜೈಲು ಶಿಕ್ಷೆ

    ಬಾಗ್ ಮಿಲ್ಕಾ ಬಾಗ್, ಬಾಜಿಗರ್, ರಾ.ಒನ್ ಸೇರಿದಂತೆ ಸಾಕಷ್ಟು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿರುವ ಬಾಲಿವುಡ್ (Bollywood) ನಟ ದಲೀಪ್ ತಾಹೀಲ್‍ (Dalip Taheel) ಗೆ ಮಹಾರಾಷ್ಟ್ರದ ಬಾಂದ್ರಾದ ಅಡಿಷನಲ್ ಚೀಫ್‍ ಮೆಟ್ರೋಪಾಲಿಟಿನ್ ಮ್ಯಾಜಿಸ್ಟ್ರೇಟ್ ಜೈಲು ಶಿಕ್ಷೆಯ ಜೊತೆಗೆ ದಂಡವನ್ನೂ ಪ್ರಕಟಿಸಿದೆ. ಈ ಕುರಿತಂತೆ ಕೋರ್ಟ್ ತೀರ್ಪನ್ನು ಪ್ರಶ್ನೆ ಮಾಡುವುದಾಗಿ ನಟ ತಿಳಿಸಿದ್ದಾರೆ.

    2018ರಲ್ಲಿ ನಡೆದ ಡ್ರಂಕ್ ಅಂಡ್ ಟ್ರೈಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದಲೀಪ್ ಅವರಿಗೆ ಎರಡು ತಿಂಗಳು ಜೈಲು ಮತ್ತು ಐದು ನೂರು ರೂಪಾಯಿ ದಂಡ ವಿಧಿಸಿದ್ದು, ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆಗೆ ಐದು ಸಾವಿರ ರೂಪಾಯಿ ಪರಿಹಾರ ನೀಡುವಂತೆ ಸೂಚಿಸಿದೆ.

     

    ದಲೀಪ್ ವಿರುದ್ಧ 2018ರಲ್ಲಿ ಹಿಟ್ ಅಂಡ್ ರನ್ ಕೇಸು ದಾಖಲಾಗಿತ್ತು. ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿದ್ದ ನಟ ಆಟೋವೊಂದಕ್ಕೆ ಗುದ್ದಿದ್ದಾರೆ ಎಂದು ದೂರು ದಾಖಲಾಗಿತ್ತು. ನಟ ಮದ್ಯ ಸೇವೆ ಮಾಡಿರೋದು ಸಾಬೀತಾಗಿತ್ತು. ಇದೆಲ್ಲವನ್ನೂ ಪರಿಶೀಲಿಸಿದ ಮಾನ್ಯ ನ್ಯಾಯಾಲಯ ತೀರ್ಪು ಪ್ರಕಟ ಮಾಡಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೆಫೆ ಮುಂದೆ ಕ್ಯಾಮೆರಾಗೆ ಹಾಟ್ ಪೋಸ್ ನೀಡಿದ ಮೌನಿ ರಾಯ್

    ಕೆಫೆ ಮುಂದೆ ಕ್ಯಾಮೆರಾಗೆ ಹಾಟ್ ಪೋಸ್ ನೀಡಿದ ಮೌನಿ ರಾಯ್

    ಮುಂಬೈ: ಬಾಲಿವುಡ್ ನಟಿ ಮೌನಿ ರಾಯ್ ತಮ್ಮ ಗೆಳತಿ ಜೊತೆ ಮುಂಬೈ ಬಾಂದ್ರಾದಲ್ಲಿರುವ ಕೆಫೆಯೊಂದರ ಬಳಿ ಕಾಣಿಸಿಕೊಂಡಿದ್ದಾರೆ. ಕಾರಿನಿಂದ ಬಂದ ಮೌನಿ ರಾಯ್ ವೈಟ್ ಕಲರ್ ಶಾರ್ಟ್ ಸ್ಲೀವ್ಸ್ ಲೆಸ್ ಟಾಪ್, ಕ್ರೀಮ್ ಕಲರ್ ಪ್ಯಾಂಟ್, ಸಿಂಪಲ್ ಚೈನ್, ಹಾಗೂ ಬ್ಲಾಕ್ ಕಲರ್ ಗೋಗಾಲ್ ಧರಿಸಿದ್ದರು.

    Mouni Roy

    ಕಾರಿನಿಂದ ಕೆಳಗಿಳಿದು ಕೂಡಲೇ ಡೋರ್ ಹಾಕಿ ಮುಂಗುರುಳು ಸರಿಪಡಿಸಿಕೊಳ್ಳುತ್ತಾ ಹೇರ್ ಫ್ರೀ ಹೇರ್ ಬಿಟ್ಟಿದ್ದ ಮೌನಿ ರಾಯ್ ಬಹಳ ಮುದ್ದು ಮುದ್ದಾಗಿ ಕಾಣುತ್ತಿದ್ದರು. ಇದನ್ನೂ ಓದಿ: ಇಷ್ಟಾರ್ಥ ನೆರವೇರಿಸಿದ ಕೊರಗಜ್ಜನಿಗೆ ಹರಕೆ ಸಲ್ಲಿಸಿದ ಕ್ರೇಜಿ ಕ್ವೀನ್ ದಂಪತಿ

    Mouni Roy

    ಈ ಎಲ್ಲದರ ಮಧ್ಯೆ ಮೌನಿ ರಾಯ್ ಬ್ಲಾಕ್ ಕಲರ್ ಮಾಸ್ಕ್ ತೊಟ್ಟು ಕೊರೊನಾ ನಿಯಮವನ್ನು ಕೂಡ ಪಾಲಿಸಿದರು. ಇದನ್ನೂ ಓದಿ: ಸಲ್ವಾರ್‌ನಲ್ಲಿ ಕ್ಯಾಮೆರಾ ಕಣ್ಣಿಗೆ ಬಿದ್ದ ಕೆಜಿಎಫ್ ಬೆಡಗಿ ಮೌನಿ ರಾಯ್

    Mouni Roy

    ನಂತರ ಗೆಳತಿ ಕೈ ಹಿಡಿದುಕೊಂಡು ಮುಂದೆ ಸಾಗಿದ ಮೌನಿ ರಾಯ್ ಕೆಫೆ ಮುಂಭಾಗ ಕ್ಯಾಮೆರಾಗೆ ಸಖತ್ ಹಾಟ್ ಆಗಿ ಪೋಸ್ ನೀಡಿದ್ದಾರೆ. ಇದೇ ವೇಳೆ ಕೆಫೆ ಒಳಗೆ ಸಂಕೋಚದಿಂದ ಹೋಗುತ್ತಿದ್ದ ಗೆಳತಿಯನ್ನು ತಡೆದು ಪ್ರೀತಿಯ ಸ್ನೇಹಿತೆ ಜೊತೆ ಕ್ಯಾಮೆರಾಗೆ ಹಾಟ್ ಆಗಿ ಪೋಸ್ ನೀಡಿದ್ದಾರೆ. ಇದನ್ನೂ ಓದಿ: ಕೆಜಿಎಫ್ ಬೆಡಗಿ ಮೌನಿರಾಯ್‍ಗೆ ಮದುವೆ

    Mouni Roy

    ಸ್ಯಾಂಡಲ್‍ವುಡ್ ಸೂಪರ್ ಹಿಟ್ ಸಿನಿಮಾ ಕೆಜಿಎಫ್ ಹಿಂದಿ ವರ್ಶನ್‍ನಲ್ಲಿ ಗಲಿ ಗಲಿ ಎಂಬ ಐಟಂ ಸಾಂಗ್‍ಗೆ ಮೌನಿ ರಾಯ್ ನಟ ರಾಕಿಂಗ್ ಸ್ಡಾರ್ ಯಶ್ ಜೊತೆ ಹೆಜ್ಜೆ ಹಾಕಿದ್ದರು. ಇನ್ನೂ ಈ ಹಾಡು ಹಿಂದಿಯಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಇದನ್ನೂ ಓದಿ: ಕೆಜಿಎಫ್ ನಟಿ ಮೌನಿ ರಾಯ್ ಹಾಟ್ ಲುಕ್‍ಗೆ ನೆಟ್ಟಿಗರು ಫಿದಾ

    Mouni Roy

    ಇತ್ತೀಚೆಗಷ್ಟೇ ಮೌನಿ ರಾಯ್ ಅವರು ದುಬೈ ಮೂಲದ ಉದ್ಯಮಿ ಸೂರಜ್ ನಂಬಿಯಾರ್ ಜೊತೆ ರಿಲೇಶನ್‍ಶಿಪ್‍ನಲ್ಲಿದ್ದಾರೆ. ಈ ಕುರಿತಂತೆ ಸೋಶಿಯಲ್ ಮೀಡಿಯಾದಲ್ಲಾಗಲಿ ಅಥವಾ ಮಾಧ್ಯಮದ ಎದುರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಅವರು ಹೇಳಿಕೊಂಡಿಲ್ಲ. ಆದರೆ ಅವರ ಪ್ರೇಮ ವಿಚಾರ ಬಿಟೌನ್‍ನಲ್ಲಿ ಹರಿದಾಡುತ್ತಿದ್ದು, ಜನವರಿಯಲ್ಲಿ ಮೌನಿ ಅವರು ವಿವಾಹವಾಗಲಿದ್ದಾರೆ ಎನ್ನುವ ಸುದ್ದಿ ಜೋರಾಗಿದೆ.

    https://www.youtube.com/watch?v=i2abGi7yQBw

  • ಫೇಸ್ಬುಕ್ ಲೈವ್‍ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳೋದು ಹೇಗೆ ತೋರಿಸ್ತೀನೆಂದು 19ನೇ ಮಹಡಿಯಿಂದ ಜಿಗಿದ!

    ಫೇಸ್ಬುಕ್ ಲೈವ್‍ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳೋದು ಹೇಗೆ ತೋರಿಸ್ತೀನೆಂದು 19ನೇ ಮಹಡಿಯಿಂದ ಜಿಗಿದ!

    – ಮುಂಬೈ ಖಾಸಗಿ ಹೋಟೆಲ್‍ನಲ್ಲಿ ಬೆಂಗಳೂರು ಮೂಲದ ವಿದ್ಯಾರ್ಥಿ ಆತ್ಮಹತ್ಯೆ

    ಮುಂಬೈ: ಇಲ್ಲಿನ ಬಾಂದ್ರಾದಲ್ಲಿರೋ ತಾಜ್ ಹೋಟೆಲ್‍ನ 19 ನೇ ಮಹಡಿಯ ಕಿಟಿಕಿಯಿಂದ ಹಾರಿ ಬೆಂಗಳೂರು ಮೂಲದ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾದ ಘಟನೆ ಸೋಮವಾರ ಸಂಜೆ ನಡೆದಿದೆ.

    ಆತ್ಮಹತ್ಯೆಗೈದಾತನನ್ನು 24 ವರ್ಷದ ಅರ್ಜುನ್ ಭಾರದ್ವಾಜ್ ಎನ್ನಲಾಗಿದ್ದು, ಈತ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದಾನೆ. ಭಾರದ್ವಾಜ್ ಆತ್ಮಹತ್ಯೆಗೂ ಮುನ್ನ ಸಾಮಾಜಿಕ ಜಾಲತಾಣ ಫೇಸ್ಬುಕ್‍ನಲ್ಲಿ ಲೈವ್ ವೀಡಿಯೋ ಅಪ್‍ಲೋಡ್ ಮಾಡಿದ್ದಾನೆ. ವೀಡಿಯೋದಲ್ಲಿ `ಇದು ಆತ್ಮಹತ್ಯೆ ಮಾಡಿಕೊಳ್ಳುವುದು ಹೇಗೆ ಎನ್ನುವ ಬಗ್ಗೆ ಟ್ಯುಟೋರಿಯಲ್’ ಅಂತಾ ಹೇಳಿದ್ದಾನೆ.

    ಹೋಟೆಲ್‍ನ 1925 ರೂಮ್ ನಂಬರಿನಲ್ಲಿ 9 ಸಣ್ಣ ಚೀಟಿಗಳಲ್ಲಿ ಆತ್ಮಹತ್ಯೆಗೂ ಮುನ್ನ ಬರೆದ ಡೆತ್ ನೋಟ್ ಗಳು ದೊರಕಿವೆ. ಅದರಲ್ಲಿ ನನ್ನ ಸಾವಿಗೆ ನಾನೇ ಕಾರಣ. ಅಪ್ಪ-ಅಮ್ಮ ನನ್ನ ಕ್ಷಮಿಸಿಬಿಡಿ ಎಂದು ಬರೆದಿದ್ದಾನೆ.

    ಅರ್ಜುನ್ ಭಾರದ್ವಾಜ್ ಖಿನ್ನತೆಗೆ ಒಳಗಾಗಿದ್ದು, ಮಾದಕ ವ್ಯಸನಿಯಾಗಿದ್ದ. ಆದ್ದರಿಂದ ಈ ಆತ್ಮಹತ್ಯೆಯ ನಿರ್ಧಾರ ತೆಗೆದುಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಭಾರದ್ವಾಜ್ ಸೋಮವಾರ ಮುಂಜನೆ 3 ಗಂಟೆ ಸುಮಾರಿಗೆ ಹೋಟೆಲ್‍ಗೆ ಆಗಮಿಸಿ ರೂಮ್ ಕಾದಿರಿಸಿದ್ದಾನೆ. ಇಡೀ ದಿನ ರೂಂನಲ್ಲೇ ಇದ್ದ ಭಾರದ್ವಾಜ್ ವೀಡಿಯೋದಲ್ಲಿ ತೋರಿಸಿದಂತೆ ಆತ್ಮಹತ್ಯೆಗೆ ಮುನ್ನ ಮದ್ಯಪಾನ ಹಾಗೂ ಧೂಮಪಾನ ಮಾಡಿದ್ದಾನೆ. ಬಳಿಕ ಕಿಟಕಿಯ ಗಾಜು ಒಡೆದು ಕಟ್ಟಡದಿಂದ ಕೆಳಕ್ಕೆ ಜಿಗಿದಿದ್ದಾನೆ ಅಂತಾ ಬಾಂದ್ರಾದ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಭಾರದ್ವಾಜ್ ಮಹಡಿಯಿಂದ ಜಿಗಿದಾಗ ಆದ ಭಾರೀ ಶಬ್ದ ಹೊಟೇಲ್‍ನ ಭದ್ರತಾ ಸಿಬ್ಬಂದಿಗೆ ಕೇಳಿಸಿದೆ. ಕೂಡಲೇ ಅವರು ಸ್ಥಳಕ್ಕೆ ದೌಡಾಯಿಸಿದಾಗ ಭಾರದ್ವಾಜ್ ರಕ್ತದ ಮಡುವಿನಲ್ಲಿ ಬಿದ್ದಿದ್ದ. ತಕ್ಷಣ ಆತನನ್ನು ನಗರದ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಯಿತಾದ್ರೂ ಅದಾಗಲೇ ಆತ ಸಾವನಪ್ಪಿದ್ದಾನೆ ಅಂತಾ ವೈದ್ಯರು ಘೋಷಿಸಿದ್ದಾರೆ.

    https://www.youtube.com/watch?v=Rx6u2MtFT4w