Tag: ಬಹುಕೃತಂ ವೇಷಂ

  • ಈ ವಾರ 10 ಚಿತ್ರಗಳು ರಿಲೀಸ್ : ಯಾವುದು ನೋಡ್ಬೇಕು, ಯಾವುದು ಬಿಡ್ಬೇಕು?

    ಈ ವಾರ 10 ಚಿತ್ರಗಳು ರಿಲೀಸ್ : ಯಾವುದು ನೋಡ್ಬೇಕು, ಯಾವುದು ಬಿಡ್ಬೇಕು?

    ಕೊರೋನಾ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಚಿತ್ರಗಳು ಬಿಡುಗಡೆ ಆಗದೇ ಉಳಿದಿದ್ದವು. ಸರಕಾರದ ನಿಯಮ, ದೊಡ್ಡ ಚಿತ್ರಗಳ ಹಾವಳಿ, ಪರಭಾಷಾ ಚಿತ್ರಗಳ ಬಿಡುಗಡೆಯಿಂದಾಗಿ ಸಣ್ಣ ಬಜೆಟ್ ಚಿತ್ರಗಳು ಥಿಯೇಟರ್ ಸಿಕ್ಕಿರಲಿಲ್ಲ. ಈಗ ಕೋವಿಡ್ ನಿಯಮಗಳು ಸಡಿಲವಾಗಿವೆ. ಭಾರೀ ಬಜೆಟ್ ಚಿತ್ರಗಳ ಬಿಡುಗಡೆ ಮುಂದಕ್ಕೆ ಹೋಗಿರುವ ಕಾರಣದಿಂದಾಗಿ ಈ ವಾರ ಸ್ಯಾಂಡಲ್ ವುಡ್ ನಲ್ಲಿ ಬರೋಬ್ಬರಿ 11 ಚಿತ್ರಗಳು ಬಿಡುಗಡೆ ಆಗುತ್ತಿವೆ. ಇದನ್ನೂ ಓದಿ : ಭಟ್ಟರ ಸಿನಿಮಾದಿಂದ ರಚಿತಾ ರಾಮ್ ಹೊರ ನಡೆದ ಅಸಲಿ ಕಾರಣ?


    ಕೋವಿಡ್ ನಂತರ ಸಾಕಷ್ಟು ಚಿತ್ರಮಂದಿರಗಳು ಮುಚ್ಚಿವೆ. ಪ್ರೇಕ್ಷಕರ ಕೊರತೆಯ ಕಾರಣದಿಂದಾಗಿ ಅನೇಕ ಚಿತ್ರಮಂದಿರಗಳನ್ನೂ ಈಗಲ ಮಾಲೀಕರ ತೆರೆದಿಲ್ಲ. 11 ಚಿತ್ರಗಳಿಗೆ ಥಿಯೇಟರ್ ಸಿಗುತ್ತಾ ಎನ್ನುವ ಗೊಂದಲ ಕೂಡ ಮೂಡಿದೆ. ಇದನ್ನೂ ಓದಿ: ಜ್ಯೂ.ಎನ್‍ಟಿಆರ್ ಜೊತೆ ನಟಿಸಲು ಇಷ್ಟ ಎಂದ ಪದ್ಮಾವತಿ


    ‘ಭಾವಚಿತ್ರ’, ‘ಬಹುಕೃತ ವೇಷಂ’, ‘ಬೈ ಟು ಲವ್’, ‘ಧೋಖಾ ದೋಸ್ತಿ’, ‘ಫ್ಯಾಮಿಲಿ ಪ್ಯಾಕ್’, ‘ಗರುಡಾಕ್ಷ’, ‘ಗಿಲ್ಕಿ’, ‘ಮಹಾ ರುದ್ರಂ’, ‘ವರದ’ ಹಾಗೂ ತುಳುವಿನ ‘ಭೋಜರಾಜ ಎಂಬಿಬಿಎಸ್’ ಈ ವಾರ ಬಿಡುಗಡೆ ಆಗುತ್ತಿರುವ ಚಿತ್ರಗಳು. ಇಷ್ಟು ಸಿನಿಮಾಗಳಲ್ಲಿ ‘ಫ್ಯಾಮಿಲಿ ಪ್ಯಾಕ್’ ಓಟಿಟಿ ವೇದಿಕೆಯಲ್ಲಿ ರಿಲೀಸ್ ಆದರೆ, ಉಳಿದವುಗಳು ನೇರವಾಗಿ ಚಿತ್ರಮಂದಿರಗಳಲ್ಲೇ ತೆರೆ ಕಾಣುತ್ತಿವೆ.  ಇದನ್ನೂ ಓದಿ : ರಮ್ಯಾಗಾಗಿ ಕಾದ ದಿಲ್ ಕಾ ರಾಜಾ


    ಈ ಸಿನಿಮಾಗಳಲ್ಲಿ ಸ್ಟಾರ್ ಸಿನಿಮಾಗಳು ಇರದೇ ಹೋದರು, ನಿರೀಕ್ಷಿತ ಚಿತ್ರಗಳಂತೂ ಇವೆ. ಅವುಗಳನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೋ ಕಾದು ನೋಡಬೇಕಿದೆ.


    ಒಂದು ಅಂದಾಜಿನ ಪ್ರಕಾರ ಈಗಾಗಲೇ ಸೆನ್ಸಾರ್ ಆಗಿ ಬಿಡುಗಡೆಗೆ ಕಾದಿರುವ ಚಿತ್ರಗಳ ಸಂಖ್ಯೆ 400ಕ್ಕೂ ಹೆಚ್ಚು. ಕಳೆದ ವರ್ಷ ರೆಡಿಯಾದ ಚಿತ್ರಗಳ ಪಟ್ಟಿಯೂ ಮತ್ತೊಂದಿದೆ. ಈ ನಡುವೆ ಪುನೀತ್ ನಟನೆಯ ‘ಜೇಮ್ಸ್’, ಸುದೀಪ್ ನಟನೆಯ ‘ವಿಕ್ರಾಂತ್ ರೋಣ, ಯಶ್ ನಟನೆಯ ‘ಕೆಜಿಎಫ್ 2’, ತೆಲುಗಿನ ‘ಆರ್.ಆರ್.ಆರ್’ ಸೇರಿದಂತೆ ಭಾರೀ ಬಜೆಟ್ ಚಿತ್ರಗಳು ಮುಂದಿನ ದಿನಗಳಲ್ಲಿ ರಿಲೀಸ್ ಆಗಲಿವೆ. ಹಾಗಾಗಿ ಸಿಕ್ಕಿರುವ ಸಮಯದಲ್ಲೇ ಸಾಕಷ್ಟು ಚಿತ್ರಗಳನ್ನು ಬಿಡುಗಡೆ ಮಾಡಲು ನಿರ್ಮಾಪಕರು ಮುಂದಾಗಿದ್ದಾರೆ.

  • ಕಿರುತೆರೆ ಖಡಕ್ ಖಳನಟ ಈಗ ಬೆಳ್ಳಿತೆರೆಯ ನಾಯಕನಟ – ‘ಬಹುಕೃತಂ ವೇಷಂ’ನಲ್ಲಿ ಶಶಿಕಾಂತ್ ಹೊಸ ಅವತಾರ

    ಕಿರುತೆರೆ ಖಡಕ್ ಖಳನಟ ಈಗ ಬೆಳ್ಳಿತೆರೆಯ ನಾಯಕನಟ – ‘ಬಹುಕೃತಂ ವೇಷಂ’ನಲ್ಲಿ ಶಶಿಕಾಂತ್ ಹೊಸ ಅವತಾರ

    ಬೆಂಗಳೂರು: ಕಿರುತೆರೆಯ ನಟ-ನಟಿಯರು ಚಂದನವನದತ್ತ ಮುಖ ಮಾಡೋದು ಕಾಮನ್. ಆದರೆ ಇತ್ತೀಚಿನ ದಿನಗಳಲ್ಲಿ ಇದರ ಸಂಖ್ಯೆ ಬಹುಪಾಲು ಹೆಚ್ಚಾಗಿದೆ. ಕಿರುತೆರೆಯಲ್ಲಿ ಜನರ ಮನೆ ಮನಸ್ಸುಗಳಲ್ಲಿ ಬೇರೂರುವ ಮೂಲಕ ಬೆಳ್ಳಿ ಪರೆದೆ ಮೇಲೆ ಪ್ರಯೋಗಕ್ಕೆ ಮುಂದಾಗಿಗುತ್ತಿದ್ದಾರೆ. ಆ ಸಾಲಿಗೆ ಮತ್ತೊಬ್ಬ ನಟ ಸೇಪರ್ಡೆಯಾಗಿದ್ದಾರೆ. ಅವರೇ ಕುಲವಧು ಧಾರಾವಾಹಿ ಖ್ಯಾತಿಯ ಖಳನಟ ಶಶಿಕಾಂತ್.

    ‘ಬಹುಕೃತ ವೇಷಂ’ ಸಿನಿಮಾ ಮೂಲಕ ನಾಯಕ ನಟನಾಗಿ ಸಿಲ್ವರ್ ಸ್ಕ್ರೀನ್ ಮೇಲೆ ಮಿಂಚಲು ಸಜ್ಜಾಗಿದ್ದಾರೆ. ಕಿರುತೆರೆಯ ಖಡಕ್ ಖಳನಟ ಶಶಿಕಾಂತ್. ಖಾಸಗಿ ವಾಹಿನಿಯ ಕುಲವಧು ಧಾರಾವಾಹಿಯಲ್ಲಿ ವಿಲನ್ ರೋಲ್ ನಲ್ಲಿ ಜನಮನ್ನಣೆ ಪಡೆದ ಶಶಿಕಾಂತ್ ನಾಯಕನಟನಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಹಾಗಂತ ಇದೇನು ಇವರ ಮೊದಲ ಸಿನಿಮಾವಲ್ಲ. ಇದಕ್ಕೂ ಮುನ್ನ ರಣರಣಕ, ಗೌಡ್ರು ಸೈಕಲ್ ಸಿನಿಮಾಗಳಲ್ಲಿ ನಟನಾಗಿ ಭರವಸೆ ಮೂಡಿಸಿದ್ದಾರೆ. ಇದೀಗ ‘ಬಹುಕೃತ ವೇಷಂ’ ಸಿನಿಮಾ ಮೂಲಕ ಮತ್ತೊಮ್ಮೆ ಸೌಂಡ್ ಮಾಡಲು ಸಜ್ಜಾಗಿದ್ದಾರೆ. ಈಗಾಗಲೇ ಚಿತ್ರದ ಫಸ್ಟ್ ಲುಕ್, ಟೀಸರ್ ಹಾಗೂ ಒಂದು ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿ ಗಮನ ಸೆಳೆಯುತ್ತಿದೆ. ಬಿಡುಗಡೆಯ ಅಂಚಿನಲ್ಲಿರುವ ಈ ಚಿತ್ರ ಸೆನ್ಸಾರ್ ಅಂಗಳದಲ್ಲಿದೆ.

    ಎಲ್ಲರೂ ಜೀವನದಲ್ಲಿ ಒಂದಲ್ಲ ಒಂದು ಕಾರಣಕ್ಕೆ ಮುಖವಾಡ ಹಾಕುತ್ತಾರೆ. ಹಾಗೆಯೇ ಪ್ರೀತಿಯನ್ನು ಪಡೆಯಲು ಮುಖವಾಡ ಹಾಕಬೇಕಾಗುತ್ತೆ. ಇದನ್ನೇ ಚಿತ್ರದ ಎಳೆಯಾಗಿಟ್ಟುಕೊಂಡು ಚೆಂದದ ಪ್ರೇಮ್ ಕಹಾನಿ ಹೆಣೆದಿದ್ದಾರೆ ಅಧ್ಯಾಯ್ ತೇಜ್. ಚಿತ್ರಕಥೆ ಕೂಡ ಇವರದ್ದೇ. ಕ್ಯೂಟ್ ಲವ್ ಸ್ಟೋರಿ ಜೊತೆಗೆ ಸೈಕಲಾಜಿಕಲ್ ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡ ಈ ಚಿತ್ರಕ್ಕೆ ಪ್ರಶಾಂತ್ ಯಲ್ಲಂಪಳ್ಳಿ ಆಕ್ಷನ್ ಕಟ್ ಹೇಳಿದ್ದಾರೆ. ನಾಯಕ ನಟಿಯಾಗಿ ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ ನಟಿಸಿದ್ದಾರೆ. ಇದನ್ನೂ ಓದಿ: ಮದುವೆಗೆ ಸ್ಥಳ ಹುಡುಕುತ್ತ ಜೈಪುರಗೆ ಬಂದ್ರು ಲವ್ ಬರ್ಡ್ಸ್

    ಕಿರುತೆರೆಯಿಂದ ಹಿರಿತೆರೆಗೆ ಕಾಲಿಟ್ಟಿರುವ ಶಶಿಕಾಂತ್ ಬೆಳ್ಳಿಪರದೆ ಮೇಲೆ ತಮ್ಮದೇ ಛಾಪನ್ನು ಒತ್ತಬೇಕೆಂಬ ಮಹದಾಸೆಯನ್ನು ಹೊಂದಿದ್ದಾರೆ. ಹಾಗಂತ ಇಲ್ಲಿವರೆಗೆ ನಡೆದುಬಂದ ಸುಲಭದಲ್ಲ. ಮೂಲತಃ ಮಂಡ್ಯದವರಾದ ಶಶಿಕಾಂತ್ ರೈತ ಕುಟುಂಬದವರು. ಬಿಎಸ್ಸಿ ಓದಿಕೊಂಡಿರುವ ಶಶಿಕಾಂತ್ ಗೆ ಕಾಲೇಜು ದಿನಗಳಿಂದ ರಂಗಭೂಮಿ ನಂಟು. ಆಗಲೇ ನಟನಾಗಬೇಕು ಎಂದು ಕನಸು ಕಂಡವರು. ಬಿಎಸ್‍ಸಿ ಮುಗಿಯುತ್ತಿದ್ದಂತೆ ಉದ್ಯೋಗ ಅರಸಿ ಬಂದ ಶಶಿಕಾಂತ್ ಪ್ರೊಫೇಶನ್ ಬಿಟ್ಟು ಆಯ್ಕೆ ಮಾಡಿಕೊಂಡಿದ್ದು ಫ್ಯಾಶನ್. ಬೆಂಗಳೂರಿಗೆ ಬಂದವರೇ ಸೀದಾ ರಂಗಭೂಮಿ ತಂಡ ಸೇರಿ ನಟನೆಗೆ ಬೇಕಾದ ಕಸರತ್ತುಗಳನ್ನು ಕಲಿತುಕೊಂಡ್ರು. ಬಣ್ಣದ ಲೋಕದಲ್ಲಿ ಅವಕಾಶ ಪಡೆಯಲು ಅಲೆದಾಟ ನಡೆಸುತ್ತಿರುವಾಗ ಸಿಕ್ಕಿದ್ದು ಕಿರುತೆರೆಯ ಅವಕಾಶ. ಮೀರಾ ಮಾಧವ, ಖುಷಿ, ಮಿಸ್ಟರ್ ಅಂಡ್ ಮಿಸಸ್ ರಂಗೇಗೌಡ, ಕುಲವಧು ಮುಂತಾದ ಧಾರಾವಾಹಿಗಳಲ್ಲಿ ಶಶಿಕಾಂತ್ ನಟಿಸಿದ್ದಾರೆ. ಇದನ್ನೂ ಓದಿ: ನಾಗಚೈತನ್ಯ ‘ಲವ್ ಸ್ಟೋರಿ’ ಲೀಕ್ ಆಯ್ತು

    ನಟಿಸಿದ ಎಲ್ಲಾ ಧಾರಾವಾಹಿಗಳಲ್ಲಿ ರಗಡ್ ವಿಲನ್ ಪಾತ್ರಗಳಲ್ಲೇ ಮಿಂಚಿದ ಶಶಿಕಾಂತ್ ರಣರಣಕ ಚಿತ್ರದ ಮೂಲಕ ನಾಯಕ ನಟನಾಗಿ ಸ್ಯಾಂಡಲ್‍ವುಡ್ ಅಂಗಳಕ್ಕೆ ಪಾದಾರ್ಪಣೆ ಮಾಡಿದ್ರು. ಇದೀಗ ಬಣ್ಣದ ಲೋಕದಲ್ಲೇ ಬದುಕುಕಟ್ಟಿಕೊಳ್ಳಲು ಮುಂದಾಗಿರುವ ಶಶಿಕಾಂತ್ ಗೆ ಹಲವು ಸಿನಿಮಾ ಆಫರ್ ಗಳು ಒಲಿದು ಬರುತ್ತಿದೆ. ಇದನ್ನೂ ಓದಿ: ಒಳ ಉಡುಪು ಜಾಹೀರಾತಿನಲ್ಲಿ ಅಭಿನಯ – ಟ್ರೋಲ್ ಕೆಂಗಣ್ಣಿಗೆ ಗುರಿಯಾದ ರಶ್ಮಿಕಾ ಮಂದಣ್ಣ