Tag: ಬಸವೇಶ್ವರ ನಗರ ಪೊಲೀಸ್ ಠಾಣೆ

  • ನನ್ನದೇ ಸರಿ ಅಂತಿದ್ದ ಅಮೂಲ್ಯ ತಣ್ಣಗೆ-ಪೊಲೀಸರ ಮುಂದೆ ಕನಸು ತೆರದಿಟ್ಟ ಪಾಕ್ ಪ್ರೇಮಿ

    ನನ್ನದೇ ಸರಿ ಅಂತಿದ್ದ ಅಮೂಲ್ಯ ತಣ್ಣಗೆ-ಪೊಲೀಸರ ಮುಂದೆ ಕನಸು ತೆರದಿಟ್ಟ ಪಾಕ್ ಪ್ರೇಮಿ

    ಬೆಂಗಳೂರು: ನನ್ನದೇ ಸರಿ ಎಂದು ವಾದಿಸುತ್ತಿದ್ದ ಪಾಕ್ ಪ್ರೇಮಿ ಅಮೂಲ್ಯ ಲಿಯೋನ ತಣ್ಣಗಾಗಿದ್ದಾಳೆ. ಪೊಲೀಸ್ ಕಸ್ಟಡಿಯಲ್ಲಿರೋ ಅಮೂಲ್ಯ ತನ್ನ ಐಎಎಸ್ ಕನಸನ್ನು ತೆರದಿಟ್ಟಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ.

    ಅಮೂಲ್ಯ ಪೊಲೀಸರ ಮುಂದೆ ಯುಪಿಎಸ್‍ಸಿ ಕನಸು ಹೇಳಿಕೊಂಡಿದ್ದಾಳೆ. ಐಎಎಸ್ ಮಾಡಬೇಕು ಅನ್ಕೊಂಡಿದ್ದೆ, ಈಗ ಹೇಗೆ ಮಾಡೋದು ಎಂದು ಅಮೂಲ್ಯಗೆ ಪಶ್ಚಾತ್ತಾಪವಾಗಿದೆ. ವಿಚಾರಣೆ ಆರಂಭದಲಿ ತನಗೆ ಚಿಕನ್ ಪಾಪ್ ಕಾರ್ನ್ ಬೇಕು, ಇಲ್ಲಾಂದ್ರೆ ಊಟ ಮಾಡಲ್ಲ ಎಂದು ಹಠ ಹಿಡಿಯುತ್ತಿದ್ದ ಅಮೂಲ್ಯ ಬದಲಾಗಿದ್ದಾಳೆ. ಜೋಷ್ ನಲ್ಲಿ ಮಾತನಾಡಿ ಇಕ್ಕಟ್ಟಿಗೆ ಸಿಲುಕಿದೆ ಎಂದು ಅಮೂಲ್ಯ ಪೊಲೀಸರ ಮುಂದೆ ಹೇಳಿದ್ದಾಳೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ:ಹಿಂದೂ ಧರ್ಮದ ವಿರುದ್ಧ ಅವಹೇಳನಕಾರಿ ಪೋಸ್ಟರ್ – ಪಾಕ್ ಪ್ರೇಮಿ ಅಮೂಲ್ಯ ಕೈವಾಡದ ಶಂಕೆ

    ಮೊದಲಿಗೆ ತನ್ನನ್ನು ಸಮರ್ಥಿಸಿಕೊಳ್ಳುತ್ತಿದ್ದ ಅಮೂಲ್ಯ, ಈಗ ಪೊಲೀಸರ ಮಾತಿಗೆ ತಲೆದೂಗಿ ಮೌನವಾಗಿದ್ದಾಳೆ. ಬಂಧನವಾದಾಗ ಇದ್ದ ಅಮೂಲ್ಯಳಿಗೂ ಈಗಿನ ಅಮೂಲ್ಯಳಲ್ಲಿ ಸಾಕಷ್ಟು ವ್ಯತ್ಯಾಸ ಕಾಣುಬರುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ.

  • ಅಮೂಲ್ಯ ಲಿಯೋನ ವಿಚಾರಣೆ-ಸಾರ್ವಜನಿಕರೇ ನಾಳೆ ಬನ್ನಿ

    ಅಮೂಲ್ಯ ಲಿಯೋನ ವಿಚಾರಣೆ-ಸಾರ್ವಜನಿಕರೇ ನಾಳೆ ಬನ್ನಿ

    -ಪೊಲೀಸ್ ಠಾಣೆಗೆ ದೂರುದಾರರಿಗಿಲ್ಲ ಎಂಟ್ರಿ

    ಬೆಂಗಳೂರು: ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪಾಕ್ ಪರ ಘೋಷಣೆ ಕೂಗಿದ ಅಮೂಲ್ಯ ಲಿಯೋನಳ ವಿಚಾರಣೆ ನಡೆಯುತ್ತಿದೆ. ಹೀಗಾಗಿ ಪೊಲೀಸ್ ಠಾಣೆಗೆ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ಇನ್ನೂ ಠಾಣೆಗೆ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಿಲ್ಲ. ದೂರುದಾರರಿಗೂ ಪೊಲೀಸರು ನಾಳೆ ಬನ್ನಿ ಎಂದು ಹೇಳಿ ಕಳುಹಿಸುತ್ತಿದ್ದಾರೆ.

    ಮೊಬೈಲ್, ಬೈಕ್ ಕಳ್ಳತನ ಕೌಟುಂಬಿಕ ಕಲಹ ವಿಚಾರಗಳ ಬಗ್ಗೆ ದೂರು ತೆಗೆದುಕೊಳ್ಳುಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ಠಾಣೆಯ ಗೇಟ್ ಮುಂದೆಯೇ ಪೊಲೀಸರು ನಿಂತು ಸಿಬ್ಬಂದಿಗೆ ಮಾತ್ರ ಪ್ರವೇಶ ಕಲ್ಪಿಸಿದ್ದಾರೆ. ಠಾಣೆಯ ಮುಂಭಾಗವೇ ಕುಳಿತಿರುವ ಸಿಬ್ಬಂದಿ, ದಾಖಲೆಗಳು ಇದ್ರೆ ತೋರಿಸಿ. ಇಲ್ಲವಾದ್ರೆ ವಾಪಸ್ ಹೋಗಿ ಎಂದು ಹೇಳುತ್ತಿದ್ದಾರೆ. ದಾಖಲೆಗಳ ಸಮೇತ ಬಂದ ದೂರುದಾರರ ದೂರನ್ನು ಠಾಣೆಯ ಮುಂದೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

    ಬುಧವಾರ ಮಧ್ಯಾಹ್ನ ಅಮೂಲ್ಯಳಿಗೆ ಊಟಕ್ಕೆ ಚಪಾತಿ, ಅನ್ನ ಸಾಂಬಾರ್ ನೀಡಲಾಗಿತ್ತು. ಆದರೆ ಊಟ ನೋಡಿದ ಅಮೂಲ್ಯ, ನನಗೆ ಇದೆಲ್ಲಾ ಬೇಡ ಚಿಕನ್ ಪಾಪ್ ಕಾರ್ನೇ ಬೇಕು ಹಠ ಹಿಡಿದಿದ್ದಾಳೆ. ನೀವು ತಂದು ಕೊಡ್ತಿರೋ ಇಲ್ಲ ಮಮ್ಮಿಗೆ ಹೇಳಿ ನಾನೇ ತರಿಸಿಕೊಳ್ಳೋಲೊ ಅಂತ ಹೇಳಿದ್ದಾಳೆ. ಕೊನೆಗೆ ಪೊಲೀಸರು ಅನಿವಾರ್ಯವಾಗಿ ಚಿಕನ್ ಪಾಪ್ ಕಾರ್ನ್ ತಂದು ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.