Tag: ಬಬಲಾದಿ ಮಠ

  • “ಆಂಧ್ರ-ತೆಲಗು ರಾಜ್ಯಕ್ಕೆ ಕೇಡು” – ಮತ್ತೆ ನಿಜವಾಯ್ತು ಬಬಲಾದಿ ಮಠದ ಭವಿಷ್ಯ

    “ಆಂಧ್ರ-ತೆಲಗು ರಾಜ್ಯಕ್ಕೆ ಕೇಡು” – ಮತ್ತೆ ನಿಜವಾಯ್ತು ಬಬಲಾದಿ ಮಠದ ಭವಿಷ್ಯ

    ವಿಜಯಪುರ: ವಿಜಯಪುರ ಜಿಲ್ಲೆಯ ಬಬಲಾದಿ ಮಠದ ಸದಾಶಿವ ಅಜ್ಜ ನುಡಿದಿದ್ದ ಭವಿಷ್ಯ ಇದೀಗ ನಿಜವಾಗಿದೆ ಎಂದು ಭಕ್ತರು ಮಾತನಾಡಿಕೊಳ್ಳುತ್ತಿದ್ದಾರೆ.

    2021ರಲ್ಲಿ ತೆಲಗು ಮಾತನಾಡುವ ರಾಜ್ಯಕ್ಕೆ ಜಲಕಂಟಕ ಅಂದರೆ “ಆಂಧ್ರ ಪ್ರದೇಶ ರಾಜ್ಯಕ್ಕೆ ಕೇಡು” ಎಂದು ಸಿದ್ದು ಮುತ್ಯಾ ಅವರು ಹೇಳಿದ್ದರು. ಹೀಗಾಗಿ ವಾಯುಭಾರ ಕುಸಿತದಿಂದ ತಿರುಪತಿಯಲ್ಲಿ ಜಲಪ್ರಳಯ, ಸೃಷ್ಟಿಯಾಗಿದ್ದು ಬಬಲಾದಿ ಮಠದ ಶ್ರೀಗಳ ಭವಿಷ್ಯ ಸತ್ಯವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

    ಅದೇ ರೀತಿ ರಾಜ್ಯದಲ್ಲಿ ಭೂಮಿ ಕಂಪಿಸಲಿದೆ ಎಂದು ಶ್ರೀಗಳು ತಿಳಿಸಿದ್ದರು. ಅದರಂತೆ ಕಳೆದ ಎರಡು ತಿಂಗಳಿಂದ ಜಿಲ್ಲೆಯಲ್ಲಿ ಭೂಮಿ ಕಂಪಿಸುತ್ತಿದೆ. ಈ ಮೂಲಕ ಬಬಲಾದಿ ಮಠದ ಸದಾಶಿವ ಅಜ್ಜನ ಭವಿಷ್ಯ ನಿಜವಾಯ್ತು ಎನ್ನಲಾಗುತ್ತಿದೆ. ಸದ್ಯ 2021ರ ಶಿವರಾತ್ರಿಯ ದಿನ ಸಿದ್ದು ಮುತ್ಯಾ ನುಡಿದ ಭವಿಷ್ಯದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಭಾರತ-ಮ್ಯಾನ್ಮಾರ್ ಗಡಿಯಲ್ಲಿ 6.1 ತೀವ್ರತೆಯ ಭೂಕಂಪ

    500 ವರ್ಷಗಳ ಹಿಂದೆ ಚಿಕ್ಕಯ್ಯಪ್ಪನವರು ಬರೆದಿಟ್ಟಿರುವ ಕಾಲಜ್ಞಾನವನ್ನು ಪ್ರತಿ ವರ್ಷ ಶಿವರಾತ್ರಿಯಂದು ಓದಲಾಗುತ್ತದೆ. ರಾಜ್ಯದಲ್ಲೇ ಬಬಲಾದಿ ಮಠ ಅತ್ಯಂತ ವಿಶಿಷ್ಟವಾಗಿದ್ದು, ಇಲ್ಲಿಗೆ ಬರುವ ಭಕ್ತರಿಗೆ ಮದ್ಯವನ್ನು ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ ಮತ್ತು ಭಕ್ತರು ಸಹ ಮದ್ಯವನ್ನೇ ನೈವೇದ್ಯಕ್ಕಾಗಿ ತರುತ್ತಾರೆ. ಇದನ್ನೂ ಓದಿ:  ಭಾರತದಲ್ಲಿ ಜನಸಂಖ್ಯಾ ಪ್ರಮಾಣ ಕುಸಿತ – ಗಂಡು ಮಕ್ಕಳಿಗಿಂತ ಹೆಣ್ಮಕ್ಕಳ ಜನನ ಅಧಿಕ

  • ಬಬಲಾದಿ ಮಠದ ಶ್ರೀಗಳ ನುಡಿ ಎಂದಿಗೂ ಸುಳ್ಳಾಗಲ್ಲ: ಬಾಲಚಂದ್ರ ಜಾರಕಿಹೊಳಿ

    ಬಬಲಾದಿ ಮಠದ ಶ್ರೀಗಳ ನುಡಿ ಎಂದಿಗೂ ಸುಳ್ಳಾಗಲ್ಲ: ಬಾಲಚಂದ್ರ ಜಾರಕಿಹೊಳಿ

    ಬೆಳಗಾವಿ: ಬಬಲಾದಿ ಮಠವು ಇತಿಹಾಸ ಪ್ರಸಿದ್ಧವಾಗಿದ್ದು, ಈ ಮಠದ ನುಡಿಗಳು ಎಂದಿಗೂ ಸುಳ್ಳಾಗುವುದಿಲ್ಲ. ಪೀಠಾಧಿಪತಿಯಾಗಿರುವ ಶಿವಯ್ಯ ಮಹಾಸ್ವಾಮಿಗಳು ಪವಾಡ ಪುರುಷರಾಗಿದ್ದಾರೆಂದು ಕರ್ನಾಟಕ ಹಾಲು ಮಹಾಮಂಡಳಿ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.

    ಬೆಳಗಾವಿ ಸಮೀಪದ ಅರಭಾವಿ ಮತ್ತು ಶಿಂಧಿಕುರಬೇಟ ಗ್ರಾಮಗಳ ಗುಡ್ಡದ ಮಧ್ಯದಲ್ಲಿರುವ ಬಬಲಾದಿ ಮಠದ ಜಾತ್ರಾ ಮಹೋತ್ಸವದಲ್ಲಿ ಬಾಲಚಂದ್ರ ಜಾರಕಿಹೊಳಿ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಅವರು ಬಬಲಾದಿ ಮಠ ನಮ್ಮ ಅರಭಾವಿ ಕ್ಷೇತ್ರದಲ್ಲಿ ಇರುವುದರಿಂದ ನಾವೆಲ್ಲರೂ ಪಾವನರಾಗಿದ್ದೇವೆಂದು ಹೇಳಿದರು.

    ಬಬಲಾದಿ ಮಠದ ಪೂಜ್ಯರು ನುಡಿಯುವ ಮಾತುಗಳು ಸತ್ಯದ ಪ್ರತೀಕವಾಗಿವೆ. ಮಠದ ಇತಿಹಾಸ ಹಾಗೂ ಸಂಸ್ಕೃತಿ ಬಹಳ ದೊಡ್ಡದಿದೆ. ಅದರಲ್ಲೂ ನಮ್ಮ ಬಬಲಾದಿ ಮಠದ ಶಿವಯ್ಯ ಸ್ವಾಮಿಗಳು ಸಾಕಷ್ಟು ಪವಾಡಗಳನ್ನು ಮಾಡಿದ್ದಾರೆ. ಲಕ್ಷಾಂತರ ಭಕ್ತರನ್ನು ಸಂಪಾದಿಸಿದ್ದಾರೆ. ಇಲ್ಲಿ ಪ್ರತಿವರ್ಷ ಬನದ ಹುಣ್ಣಿಮೆಗೆ ನಡೆಯುವ ಜಾತ್ರೆಗೆ ಸಾಕಷ್ಟು ಜನರು ಆಗಮಿಸಿ ಶ್ರೀಗಳ ದರ್ಶನ ಪಡೆಯುತ್ತಾರೆ. ಧಾರ್ಮಿಕತೆಗೆ ಮತ್ತೊಂದು ಹೆಸರೇ ಬಬಲಾದಿ ಮಠ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

    ಬಬಲಾದಿ ಮಠದ ಶಿವಯ್ಯ ಮಹಾಸ್ವಾಮಿಗಳು ಇದೇ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಸತ್ಕರಿಸಿ, ಆಶೀರ್ವದಿಸಿದರು.

    ಜಾತ್ರೆಯಲ್ಲಿ ಗಮನ ಸೆಳೆದ ಕುಸ್ತಿ:
    ಜಾತ್ರೆ ಹಿನ್ನೆಲೆ ಮಠದಲ್ಲಿ ಅಂತರಾಷ್ಟ್ರೀಯ ಜಂಗಿ ನಿಖಾಲಿ ಕುಸ್ತಿಗಳು ಜರುಗಿ ಕ್ರೀಡಾ ಪ್ರೇಮಿಗಳನ್ನು ಆಕರ್ಷಿಸಿದವು. ಅದರಲ್ಲೂ ಅಂತರಾಷ್ಟ್ರೀಯ ಕುಸ್ತಿ ಪಟುಗಳಾದ ಹರ್ಯಾಣದ ಭಾರತ್ ಕೇಸರಿ ಮಂಜೀತ್ ಸಿಂಗ್ ಖತ್ರಿ ಹಾಗೂ ಇರಾನ್ ದೇಶದ ಸೈಯ್ಯದ್ ಮಹ್ಮದ್ ಪೈಲ್ವಾನ್ ಕುಸ್ತಿ ರೋಚಕತೆಯಿಂದ ಕೂಡಿತ್ತು.

    ಸತತ ಮೂರನೇ ಬಾರಿಗೆ ಜಮಖಂಡಿ ತಾಲೂಕಿನ ಕಂಕಣವಾಡಿಯ ಶಿವಯ್ಯ ಪೂಜೇರಿ ಬೆಳ್ಳಿ ಗಧೆ ಪಡೆದುಕೊಂಡರು. ಕರ್ನಾಟಕ ಕೇಸರಿ ದಾವಣಗೆರೆಯ ಕಾರ್ತಿಕ್ ಕಾಟೆ ಅವರ ಕುಸ್ತಿಯಂತೂ ಕ್ರೀಡಾ ಪ್ರೇಮಿಗಳಿಗೆ ಹಬ್ಬವಾಗಿ ಪರಿಣಮಿಸಿತು.