Tag: ಬನ್ನೇರುಘಟ್ಟ ಜಯರಾಮ್‌

  • ಬನ್ನೇರುಘಟ್ಟದ ಬಿಜೆಪಿ ಮುಖಂಡ ಜಯರಾಮ್ ಕಾಂಗ್ರೆಸ್ ಸೇರ್ಪಡೆ

    ಬನ್ನೇರುಘಟ್ಟದ ಬಿಜೆಪಿ ಮುಖಂಡ ಜಯರಾಮ್ ಕಾಂಗ್ರೆಸ್ ಸೇರ್ಪಡೆ

    ಆನೇಕಲ್:‌ ಸಂಸದ ಡಿಕೆ ಸುರೇಶ್‌ ಅವರು ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿಗೆ (BJP) ಶಾಕ್ ನೀಡಿದ್ದಾರೆ. ಬನ್ನೇರುಘಟ್ಟದ (BannerGhatta)  ಬಿಜೆಪಿ ಮುಖಂಡ ಜಯರಾಮ್ (Jayaram) ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.

    ಬನ್ನೇರುಘಟ್ಟ ಜಯರಾಮ್ ಅವರು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಎಂ ಕೃಷ್ಣಪ್ಪ ಅವರ ಆಪ್ತರಾಗಿ ಗುರುತಿಸಿಕೊಂಡಿದ್ದಾರೆ. ದಿಢೀರ್‌ ಬೆಳವಣಿಗೆಯಂತೆ ಭಾನುವಾರ ರಾತ್ರಿ ಜಯರಾಮ್ ಹಾಗೂ ಬೆಂಬಲಿಗರು ಕಾಂಗ್ರೆಸ್ ಪಕ್ಷವನ್ನು ಸೇರಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ ಸುರೇಶ್‌ ಸಮ್ಮುಖದಲ್ಲಿ ಸೇರ್ಪಡೆಯಾದರು.

    ಬನ್ನೇರುಘಟ್ಟ ಜಯರಾಮ್ ಈ ಹಿಂದೆಯೂ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ (Congress) ಸೇರ್ಪಡೆಯಾಗಿದ್ದರು. ಬಳಿಕ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಬಿಜೆಪಿಗೆ ವಾಪಸ್ ಆಗಿದ್ದರು. ಈಗ ಮತ್ತೆ ಕಾಂಗ್ರೆಸ್‌ಗೆ ಸೇರಿಕೊಳ್ಳುವ ಮೂಲಕ ಬಿಜೆಪಿ ಅಭ್ಯರ್ಥಿ ಡಾ. ಮಂಜುನಾಥ್ ಗೆ ಶಾಕ್ ನೀಡಿದ್ದಾರೆ. ಇದನ್ನೂ ಓದಿ: ಲೋಕಸಭಾ ಚುನಾವಣಾ ಪ್ರಚಾರದಿಂದ ಹಿಂದೆ ಸರಿದ ಖುಷ್ಬು