Tag: ಬನ್ನೂರು

  • ಮೈಸೂರು| ಬೈಕ್, ಕಾರು ಮುಖಾಮುಖಿ ಡಿಕ್ಕಿ – ಗುದ್ದಿದ ರಭಸಕ್ಕೆ ನದಿಗೆ ಬಿದ್ದ ತಾಯಿ, ಮಗ ಸಾವು

    ಮೈಸೂರು| ಬೈಕ್, ಕಾರು ಮುಖಾಮುಖಿ ಡಿಕ್ಕಿ – ಗುದ್ದಿದ ರಭಸಕ್ಕೆ ನದಿಗೆ ಬಿದ್ದ ತಾಯಿ, ಮಗ ಸಾವು

    ಮೈಸೂರು: ಬೈಕ್ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಮಗ ಸ್ಥಳದಲ್ಲೇ ಸಾವನ್ನಪ್ಪಿದ್ದು, ತಾಯಿ ನದಿಪಾಲಾಗಿರುವ ಘಟನೆ ಮೈಸೂರು (Mysuru) ಜಿಲ್ಲೆಯ ತಿ.ನರಸೀಪುರ (T Narasipura) ತಾಲ್ಲೂಕಿನ ಬನ್ನೂರು ಸೇತುವೆ ಮೇಲೆ ನಡೆದಿದೆ.

    ಮೈಸೂರಿನ (Mysuru) ಬಿಎಂಶ್ರೀ ನಗರದ ನಿವಾಸಿಯಾಗಿರುವ ಮೃತ ಮಗನನ್ನು ಶಂಕರ್ (21) ಹಾಗೂ ನಾಪತ್ತೆಯಾಗಿರುವ ತಾಯಿಯನ್ನು ಪಾರ್ವತಿ (48) ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಪತ್ನಿಯನ್ನು ಕೊಲೆಗೈದು 20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮಾಜಿ ಸೈನಿಕ ಅರೆಸ್ಟ್‌

    ಮನೆ ದೇವರಿಗೆ ಹೋಗಿ ವಾಪಸ್ ಬರುವಾಗ ಈ ಅಪಘಾತ ಸಂಭವಿಸಿದೆ. ಬೈಕ್‌ನಲ್ಲಿ ತಾಯಿ ಮತ್ತು ಮಗ ತೆರಳುತ್ತಿದ್ದಾಗ ಎದುರಿಗೆ ಬಂದ ಕಾರು ಡಿಕ್ಕಿ ಹೊಡೆದಿದ್ದು, ಪರಿಣಾಮ ಮಗ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೂ ಕಾರು ಗುದ್ದಿದ ರಭಸಕ್ಕೆ ಹಿಂಬದಿಯಲ್ಲಿ ಕುಳಿತಿದ್ದ ತಾಯಿ ನದಿಪಾಲಾಗಿದ್ದಾರೆ.

    ಸದ್ಯ ತಾಯಿಗಾಗಿ ನದಿಯಲ್ಲಿ ಹುಡುಕಾಟ ನಡೆಸಿದ್ದು, ಸ್ಥಳಕ್ಕೆ ಬನ್ನೂರು (Bannuru) ಪೋಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.ಇದನ್ನೂ ಓದಿ: ಕೇವಲ 26 ರನ್‌ ಗಳಿಸಿದರೂ, ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಧೋನಿ

  • ಮರ್ಮಾಂಗಕ್ಕೆ ಹೊಡೆದು ವ್ಯಕ್ತಿ ಕೊಲೆ ಪ್ರಕರಣ: ಆರೋಪಿ ಬಂಧನ

    ಮರ್ಮಾಂಗಕ್ಕೆ ಹೊಡೆದು ವ್ಯಕ್ತಿ ಕೊಲೆ ಪ್ರಕರಣ: ಆರೋಪಿ ಬಂಧನ

    ಮೈಸೂರು: ಮರ್ಮಾಂಗಕ್ಕೆ ಹೊಡೆದು ವ್ಯಕ್ತಿಯೊಬ್ಬನ ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶ್ವಸಿಯಾಗಿದ್ದಾರೆ.

    23 ವರ್ಷದ ನಂದೀಶ್ ಬಂಧಿತ ಆರೋಪಿ. ಬುಧವಾರ ನಂದೀಶ್ ಬನ್ನೂರಿನ ಬೇವಿಮನಹಳ್ಳಿ ಗ್ರಾಮದಲ್ಲಿ ಕೃಷ್ಣ ಎಂಬವರ ಮರ್ಮಾಂಗಕ್ಕೆ ಹಲ್ಲೆ ಮಾಡಿ ಕೊಲೆ ಮಾಡಿದ್ದನು. ಹಣಕಾಸಿನ ವಿಚಾರಕ್ಕೆ ಸಂಬಂಧಪಟ್ಟಂತೆ ಕೃಷ್ಣ ಮತ್ತು ನಂದೀಶ್ ನಡುವೆ ಗಲಾಟೆಯಾಗಿತ್ತು.

    ಬುಧವಾರ ಕೃಷ್ಣರಿಗೆ ಫೋನ್ ಮಾಡಿದ್ದ ನಂದೀಶ್ ಹಣ ನೀಡುವುದ್ದಾಗಿ ಹೇಳಿ ಕರೆಸಿಕೊಂಡು ಕೊಲೆ ಮಾಡಿದ್ದನು. ಕೊಲೆಯ ನಂತರ ನಂದೀಶ್ ನಾಪತ್ತೆಯಾಗಿದ್ದನು. ಈ ಸಂಬಂಧ ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.