Tag: ಬನ್ನಿ ಪೂಜೆ

  • ಬನ್ನಿ ಪೂಜೆಯ ಪೌರಾಣಿಕ ಮಹತ್ವವೇನು?

    ಬನ್ನಿ ಪೂಜೆಯ ಪೌರಾಣಿಕ ಮಹತ್ವವೇನು?

    ನವರಾತ್ರಿಯ ಕೊನೆಯ ದಿನ ಬನ್ನಿ ಪೂಜೆಯನ್ನು ಮಾಡಲಾಗುತ್ತದೆ. ಬನ್ನಿ ಕೊಡುವ ಸಂಪ್ರದಾಯದೊಂದಿಗೆ ಈ ದಸರಾ ಹಬ್ಬವನ್ನು ಆಚರಿಸುತ್ತೇವೆ. ಬನ್ನಿಯ ಮಹತ್ವವೇನು? ಯಾಕೆ ಬನ್ನಿ ಕೊಡುವ ಸಂಪ್ರದಾಯವಿದೆ ಎನ್ನುವ ಕುರಿತು ಮಾಹಿತಿ ಇಲ್ಲಿದೆ.

    ವಿಜಯದಶಮಿ ಹೆಸರೇ ಹೇಳುವಂತೆ ವಿಜಯದ ಸಂಕೇತವಾಗಿರುವ ವಿಜಯ ದಶಮಿಯ ದಿನ ಬನ್ನಿ ವೃಕ್ಷವನ್ನು ಪೂಜಿಸಲಾಗುತ್ತದೆ. ಬನ್ನಿ ವೃಕ್ಷದ ಪೂಜೆ ಮಾಡುವುದು ಸಾಮಾನ್ಯ. ಆದರೆ ಪ್ರತಿಯೊಂದು ತನ್ನ ಒಳ ಕಥೆಯನ್ನು ಹೊಂದಿರುತ್ತದೆ. ಬನ್ನಿಯ ಹಿಂದೆ ಒಂದು ಪೌರಾಣಿಕ ಕಥೆಯಿದೆ.

    ಹಿಂದೂ ಸಂಸ್ಕೃತಿಯ ಪ್ರತಿಯೊಂದು ವೈದಿಕ ಆಚಾರ-ವಿಚಾರಗಳೂ ತನ್ನದೇ ಆದ ವೈಶಿಷ್ಟ್ಯಗಳಿಂದ ಕೂಡಿರುತ್ತದೆ. ಹಿಂದಿನ ಕಾಲದಲ್ಲಿ ಸೂರ್ಯವಂಶಸ್ಥ ರಘು ಮಹಾರಾಜ ಎಂಬ ರಾಜ ಭರತಖಂಡವನ್ನು ಆಳುತ್ತಿದ್ದ. ಈ ಸಮಯದಲ್ಲಿ ಕೌಸ್ಥೇಯನೆಂಬ ಬಡ ಬ್ರಾಹ್ಮಣ ಬಾಲಕನೊಬ್ಬ ವಿದ್ಯಾರ್ಜನೆಗೋಸ್ಕರ ಅರುಣಿ ಮಹರ್ಷಿಗಳೆಂಬ ಗುರುಗಳ ಗುರುಕುಲಕ್ಕೆ ಬಂದಿದ್ದ. ಆ ಮುನಿಗಳ ಆಶ್ರಯದಲ್ಲಿ ಶಿಕ್ಷಣವನ್ನು ಪೂರ್ಣಗೊಳಿಸಿದ ಕೌಸ್ಥೇಯ ಗುರುಗಳಿಗೆ ವಿನಮ್ರಪೂರ್ವಕವಾಗಿ ಕೈ ಮುಗಿದು ತಾನು ಗುರುದಕ್ಷಿಣೆಯಾಗಿ ಏನು ಕೊಡಬೇಕೆಂದು ಕೇಳುತ್ತಾನೆ. ಅರುಣೀ ಮುನಿಗಳು ಕೌಸ್ಥೇಯನು ಬಡವನಾದ್ದರಿಂದ ಯಾವುದೇ ಗುರುದಕ್ಷಿಣೆಯನ್ನು ಅಪೇಕ್ಷಿಸದೆ ಗುರುಕುಲವನ್ನು ಬಿಡುವ ಆಜ್ಞೆ ನೀಡುತ್ತಾರೆ. ಆದರೆ ಕೌಸ್ಥೇಯನು ಗುರುದಕ್ಷಿಣೆಯಾಗಿ ಏನನ್ನಾದರೂ ಆಜ್ಞಾಪಿಸಬೇಕೆಂದು ಆಗ್ರಹ ಪೂರ್ವಕವಾಗಿ ಪ್ರಾರ್ಥಿಸುತ್ತಾನೆ. ಇದರಿಂದ ಕುಪಿತಗೊಂಡ ಅರುಣಿ ಮಹರ್ಷಿಗಳು “ಗುರುದಕ್ಷಿಣೆ” ಕೊಡುವುದೇ ಇದ್ದರೆ “ಹತ್ತು ಲಕ್ಷ ಸುವರ್ಣ ನಾಣ್ಯಗಳನ್ನು ಕೊಡು” ಎದು ಬಡ ಕೌಸ್ಥೇಯನಿಗೆ ಅಸಾಧ್ಯವಾದ ಗುರುದಕ್ಷಿಣೆಯನ್ನು ಕೇಳಿಕೊಳ್ಳುತ್ತಾರೆ.

    ಇಷ್ಟು ದೊಡ್ಡ ಗುರುದಕ್ಷಿಣೆ ಕೇಳುತ್ತಾರೆಂಬ ಕಲ್ಪನೆ ಕೂಡ ಕೌಸ್ಥೇಯ ಹತ್ತು ಲಕ್ಷ ಸುವರ್ಣ ನಾಣ್ಯಗಳನ್ನು ಹೇಗೆ ಸ0ಪಾದಿಸುವುದೆಂಬ ಗಾಢ ಚಿಂತೆಗೆ ತೊಡಗುತ್ತಾನೆ. ಹೀಗೇ ರಘು ಮಹಾರಾಜನ ಆಸ್ಥಾನಕ್ಕೆ ಕೌಸ್ಥೇಯ ಬಂದು ತಲುಪುತ್ತಾನೆ. ರಘು ಮಹಾರಾಜ ಪ್ರತಿ ಹನ್ನೆರಡು ವರ್ಷಕ್ಕೊಮ್ಮೆ ತನ್ನ ಪತ್ನಿ ಸಮೇತ ತನ್ನ ರಾಜಭಂಡಾರದ ಸಮಸ್ತ ಧನವನ್ನು ಪ್ರಜೆಗಳಿಗೆ ದಾನವಾಗಿ ಕೊಡುವ ಪರಿಪಾಠವಿಟ್ಟುಕೊಂಡಿರುತ್ತಾನೆ. ಆ ರೀತಿ ದಾನ ನೀಡಿ ಕೆಲವೇ ದಿನಗಳು ಕಳೆದಿರುತ್ತವೆ. ರಾಜ ಭಂಡಾರ ಬರಿದಾಗಿರುತ್ತದೆ. ರಘು ಮಹಾರಾಜನ ತಪಃಶಕ್ತಿಯ ಫಲವಾಗಿ ಕೆಲವೇ ವರ್ಷಗಳಲ್ಲಿ ರಾಜಕೋಶವು ಮತ್ತೆ ತುಂಬುತ್ತಿರುತ್ತದೆ. ರಾಜನು ಒಮ್ಮೆ ಕೌಸ್ಥೇಯನಿಗೆ ನಿತ್ಯ ಆಸ್ಥಾನಕ್ಕೆ ಬರುವ ಕಾರಣವೇನೆಂದು ಕೇಳುತ್ತಾನೆ. ಕೌಸ್ಥೇಯ ತನ್ನ ಸಮಸ್ಯೆಯನ್ನು ಮಹಾರಾಜನಲ್ಲಿ ಹೇಳಿಕೊಳ್ಳುತ್ತಾನೆ.

    ರಾಜ್ಯಕೋಶ ಬರಿದಾದ ಮಹಾರಾಜ ಕೌಸ್ಥೇಯನಿಗೆ ಶೀಘ್ರವಾಗಿ ಸಹಾಯ ಮಾಡಬೇಕೆoಬ ಸದುದ್ದೇಶದಿಂದ ಧನಾಧಿಪತಿಯಾದ ಕುಬೇರನ ಮೇಲೆ ಯುದ್ಧವನ್ನು ಮಾಡಿ ಕೌಸ್ಥೇಯನ ಮನೋಭಿಲಾಷೆಯನ್ನು ಪೂರ್ಣಗೊಳಿಸುವುದೆ಼ದು ಸoಕಲ್ಪ ಮಾಡುತ್ತಾನೆ. ತನ್ನ ಚತುರಂಗ ಬಲ ಸಮೇತ ಕುಬೇರನ ಮೇಲೆ ಯುದ್ಧಕ್ಕೆ ಪ್ರಸ್ಥಾನ ಮಾಡುವಾಗ ಮಾರ್ಗ ಮಧ್ಯೆ ರಾತ್ರಿಯಾದ ಕಾರಣ ಒoದು ವನದಲ್ಲಿ ರಾಜ ಬಿಡಾರ ಹಾಕುತ್ತಾನೆ. ಅದು ಶಮೀವೃಕ್ಷಗಳಿ0ದ ತುಂಬಿದ ವನ. ಇದೇ ಸಂದರ್ಭದಲ್ಲಿ ಕುಬೇರನಿಗೆ ರಘು ಮಹಾರಾಜ ವಿದ್ಯಾರ್ಥಿಯೊಬ್ಬನ ಗುರುದಕ್ಷಿಣೆಯಾಗಿ ಹತ್ತು ಲಕ್ಷ ಸುವರ್ಣ ನಾಣ್ಯಗಳನ್ನು ಕೂಡಿಸುವ ಸದುದ್ದೇಶದಿ0ದ ತನ್ನ ಮೇಲೆ ಯುದ್ಧಕ್ಕೆ ಬರುತ್ತಿರುವ ವಿಷಯ ತಿಳಿಯುತ್ತದೆ. ರಾಜನ ಸದುದ್ದೇಶ ಕೇಳಿ ಸುಪ್ರೀತನಾದ ಕುಬೇರ, ತನ್ನ ಮಾಯಾ ಶಕ್ತಿಯಿಂದ ರಘು ಮಹಾರಾಜ ಬಿಡಾರ ಹೂಡಿದ್ದ ಶಮೀವೃಕ್ಷದ ಪ್ರತಿಯೊ0ದು ಎಲೆಯೂ ಸುವರ್ಣ ನಾಣ್ಯವಾಗುವಂತೆ ಮಾಡುತ್ತಾನೆ.

    ಸೂರ್ಯೋದಯವಾಗುತ್ತಿದ್ದಂತೆಯೇ ಶಮೀವೃಕ್ಷದ ಎಲೆಗಳೆಲ್ಲಾ ಸುವರ್ಣ ನಾಣ್ಯಗಳಾಗಿ ಪರಿವರ್ತನೆಗೊಳ್ಳುತ್ತವೆ. ರಾಜ ಇದನ್ನು ದೈವೀಕೃಪೆ ಎoದು ಭಾವಿಸಿ ಕುಬೇರನ ಮೇಲೆ ತಾನು ಹೂಡಬೇಕಿದ್ದ ಯುದ್ಧವನ್ನು ತ್ಯಜಿಸುತ್ತಾನೆ. ಬಳಿಕ ಶಮೀವನಕ್ಕೆ ಕೌಸ್ಥೇಯನನ್ನು ಕರೆಯಿಸುತ್ತಾನೆ ಹಾಗೂ ಹತ್ತು ಲಕ್ಷ ಸುವರ್ಣ ನಾಣ್ಯಗಳನ್ನು ತೆಗೆದುಕೊಂಡು ಅರುಣೀ ಮಹರ್ಶಿಗಳ ಗುರುದಕ್ಷಿಣೆಯ ಋಣವನ್ನು ತೀರಿಸಲು ಹೇಳುತ್ತಾನೆ.

    ರಾಜನ ಭಂಡಾರ ಮತ್ತೆ ಸುವರ್ಣ ನಾಣ್ಯಗಳಿoದ ತುಂಬಿ ತುಳುಕುತ್ತದೆ. ಈ ಅಸಾಧ್ಯವೆನಿಸಿದ ಗುರುದಕ್ಷಿಣೆಯನ್ನು ಸ್ವೀಕರಿಸಿದ ಅರುಣೀ ಮಹರ್ಷಿಗಳು ಕೌಸ್ಥೇಯನ ಗುರುಭಕ್ತಿಯನ್ನೂ, ರಘು ಮಹಾರಾಜನ ಸಹಾಯಕ ಗುಣ ಮತ್ತು ದಾನದ ಗುಣವನ್ನು ಕಂಡು ಮನಃಪೂರ್ವಕವಾಗಿ ಹರಸುತ್ತಾರೆ. ಶಮೀವೃಕ್ಷದ ಎಲೆಗಳು ಸ್ವರ್ಣ ಮುದ್ರೆಗಳಾಗಿ ಪರಿವರ್ತನೆಯಾದ ದಿನವೇ ಅಶ್ವಯುಜ ಮಾಸ, ಶುಕ್ಲ ಪಕ್ಷ ದಶಮಿ ಅಥವಾ ಶರನ್ನವರಾತ್ರಿಯ ವಿಜಯದಶಮಿ. ಈ ಪುಣ್ಯತೋಮಯ ದಿನದಂದು ಶಮೀವೃಕ್ಷಕ್ಕೆ ಭಕ್ತಿಯಿ0ದ ಪೂಜೆ ಮಾಡಿ, ಶಮೀಪತ್ರೆಗಳನ್ನು ಮನೆಗೆ ತಂದು ತಿಜೋರಿ, ಗಲ್ಲ, ಆಭರಣದ ಪೆಟ್ಟಿಗೆ ಇತ್ಯಾದಿಗಳಲ್ಲಿ ಇಡುವುದರಿಂದ ಧನ-ಧಾನ್ಯ ಸಮೃದ್ಧಿಯಾಗುವುದೆಂಬ ನ0ಬಿಕೆಯಿದೆ.

    ಹೀಗಾಗಿ ದಸರಾ ಸಂದರ್ಭದಲ್ಲಿ ಬನ್ನೀ ವೃಕ್ಷವನ್ನು ಅತ್ಯಂತ ವಿಶೇಷವಾಗಿ ಪೂಜಿಸಲಾಗುತ್ತದೆ. ಇದೇ ಬನ್ನಿ ವೃಕ್ಷದಲ್ಲಿ ಪಾಂಡವರು ತಮ್ಮ ಆಯುಧಗಳನ್ನು ಬಚ್ಟಿಟ್ಟು, ವಿಜಯದಶಮಿಯಂದು ಹೊರತೆಗೆದಿದ್ದರು ಎಂಬ ಪ್ರತೀತಿ ಕೂಡ ಇದೆ.

  • ಬನ್ನಿ ಪೂಜೆಯ ಪೌರಾಣಿಕ ಮಹತ್ವವೇನು..?

    ಬನ್ನಿ ಪೂಜೆಯ ಪೌರಾಣಿಕ ಮಹತ್ವವೇನು..?

    ನವರಾತ್ರಿಯ ಕೊನೆಯ ದಿನ ಬನ್ನಿ ಪೂಜೆಯನ್ನು ಮಾಡಲಾಗುತ್ತದೆ. ಬನ್ನಿ ಕೊಡುವ ಸಂಪ್ರದಾಯದೊಂದಿಗೆ ಈ ದಸರಾ ಹಬ್ಬವನ್ನು ಆಚರಿಸುತ್ತೇವೆ. ಬನ್ನಿಯ ಮಹತ್ವವೇನು? ಯಾಕೆ ಬನ್ನಿ ಕೊಡುವ ಸಂಪ್ರದಾಯವಿದೆ ಎನ್ನುವ ಕುರಿತು ಮಾಹಿತಿ ಇಲ್ಲಿದೆ.

    ವಿಜಯದಶಮಿ ಹೆಸರೇ ಹೇಳುವಂತೆ ವಿಜಯದ ಸಂಕೇತವಾಗಿರುವ ವಿಜಯ ದಶಮಿಯ ದಿನ ಬನ್ನಿ ವೃಕ್ಷವನ್ನು ಪೂಜಿಸಲಾಗುತ್ತದೆ. ಬನ್ನಿ ವೃಕ್ಷದ ಪೂಜೆ ಮಾಡುವುದು ಸಾಮಾನ್ಯ. ಆದರೆ ಪ್ರತಿಯೊಂದು ತನ್ನ ಒಳ ಕಥೆಯನ್ನು ಹೊಂದಿರುತ್ತದೆ. ಬನ್ನಿಯ ಹಿಂದೆ ಒಂದು ಪೌರಾಣಿಕ ಕಥೆಯಿದೆ.

    ಹಿಂದೂ ಸಂಸ್ಕೃತಿಯ ಪ್ರತಿಯೊಂದು ವೈದಿಕ ಆಚಾರ-ವಿಚಾರಗಳೂ ತನ್ನದೇ ಆದ ವೈಶಿಷ್ಟ್ಯಗಳಿಂದ ಕೂಡಿರುತ್ತದೆ. ಹಿಂದಿನ ಕಾಲದಲ್ಲಿ ಸೂರ್ಯವಂಶಸ್ಥ ರಘು ಮಹಾರಾಜ ಎಂಬ ರಾಜ ಭರತಖಂಡವನ್ನು ಆಳುತ್ತಿದ್ದ. ಈ ಸಮಯದಲ್ಲಿ ಕೌಸ್ಥೇಯನೆಂಬ ಬಡ ಬ್ರಾಹ್ಮಣ ಬಾಲಕನೊಬ್ಬ ವಿದ್ಯಾರ್ಜನೆಗೋಸ್ಕರ ಅರುಣಿ ಮಹರ್ಷಿಗಳೆಂಬ ಗುರುಗಳ ಗುರುಕುಲಕ್ಕೆ ಬಂದಿದ್ದ. ಆ ಮುನಿಗಳ ಆಶ್ರಯದಲ್ಲಿ ಶಿಕ್ಷಣವನ್ನು ಪೂರ್ಣಗೊಳಿಸಿದ ಕೌಸ್ಥೇಯ ಗುರುಗಳಿಗೆ ವಿನಮ್ರಪೂರ್ವಕವಾಗಿ ಕೈ ಮುಗಿದು ತಾನು ಗುರುದಕ್ಷಿಣೆಯಾಗಿ ಏನು ಕೊಡಬೇಕೆಂದು ಕೇಳುತ್ತಾನೆ. ಅರುಣೀ ಮುನಿಗಳು ಕೌಸ್ಥೇಯನು ಬಡವನಾದ್ದರಿಂದ ಯಾವುದೇ ಗುರುದಕ್ಷಿಣೆಯನ್ನು ಅಪೇಕ್ಷಿಸದೆ ಗುರುಕುಲವನ್ನು ಬಿಡುವ ಆಜ್ಞೆ ನೀಡುತ್ತಾರೆ. ಆದರೆ ಕೌಸ್ಥೇಯನು ಗುರುದಕ್ಷಿಣೆಯಾಗಿ ಏನನ್ನಾದರೂ ಆಜ್ಞಾಪಿಸಬೇಕೆಂದು ಆಗ್ರಹ ಪೂರ್ವಕವಾಗಿ ಪ್ರಾರ್ಥಿಸುತ್ತಾನೆ. ಇದರಿಂದ ಕುಪಿತಗೊಂಡ ಅರುಣಿ ಮಹರ್ಷಿಗಳು “ಗುರುದಕ್ಷಿಣೆ” ಕೊಡುವುದೇ ಇದ್ದರೆ “ಹತ್ತು ಲಕ್ಷ ಸುವರ್ಣ ನಾಣ್ಯಗಳನ್ನು ಕೊಡು” ಎದು ಬಡ ಕೌಸ್ಥೇಯನಿಗೆ ಅಸಾಧ್ಯವಾದ ಗುರುದಕ್ಷಿಣೆಯನ್ನು ಕೇಳಿಕೊಳ್ಳುತ್ತಾರೆ.

    ಇಷ್ಟು ದೊಡ್ಡ ಗುರುದಕ್ಷಿಣೆ ಕೇಳುತ್ತಾರೆಂಬ ಕಲ್ಪನೆ ಕೂಡ ಕೌಸ್ಥೇಯ ಹತ್ತು ಲಕ್ಷ ಸುವರ್ಣ ನಾಣ್ಯಗಳನ್ನು ಹೇಗೆ ಸ0ಪಾದಿಸುವುದೆಂಬ ಗಾಢ ಚಿಂತೆಗೆ ತೊಡಗುತ್ತಾನೆ. ಹೀಗೇ ರಘು ಮಹಾರಾಜನ ಆಸ್ಥಾನಕ್ಕೆ ಕೌಸ್ಥೇಯ ಬಂದು ತಲುಪುತ್ತಾನೆ. ರಘು ಮಹಾರಾಜ ಪ್ರತಿ ಹನ್ನೆರಡು ವರ್ಷಕ್ಕೊಮ್ಮೆ ತನ್ನ ಪತ್ನಿ ಸಮೇತ ತನ್ನ ರಾಜಭಂಡಾರದ ಸಮಸ್ತ ಧನವನ್ನು ಪ್ರಜೆಗಳಿಗೆ ದಾನವಾಗಿ ಕೊಡುವ ಪರಿಪಾಠವಿಟ್ಟುಕೊಂಡಿರುತ್ತಾನೆ. ಆ ರೀತಿ ದಾನ ನೀಡಿ ಕೆಲವೇ ದಿನಗಳು ಕಳೆದಿರುತ್ತವೆ. ರಾಜ ಭಂಡಾರ ಬರಿದಾಗಿರುತ್ತದೆ. ರಘು ಮಹಾರಾಜನ ತಪಃಶಕ್ತಿಯ ಫಲವಾಗಿ ಕೆಲವೇ ವರ್ಷಗಳಲ್ಲಿ ರಾಜಕೋಶವು ಮತ್ತೆ ತುಂಬುತ್ತಿರುತ್ತದೆ. ರಾಜನು ಒಮ್ಮೆ ಕೌಸ್ಥೇಯನಿಗೆ ನಿತ್ಯ ಆಸ್ಥಾನಕ್ಕೆ ಬರುವ ಕಾರಣವೇನೆಂದು ಕೇಳುತ್ತಾನೆ. ಕೌಸ್ಥೇಯ ತನ್ನ ಸಮಸ್ಯೆಯನ್ನು ಮಹಾರಾಜನಲ್ಲಿ ಹೇಳಿಕೊಳ್ಳುತ್ತಾನೆ.

    ರಾಜ್ಯಕೋಶ ಬರಿದಾದ ಮಹಾರಾಜ ಕೌಸ್ಥೇಯನಿಗೆ ಶೀಘ್ರವಾಗಿ ಸಹಾಯ ಮಾಡಬೇಕೆoಬ ಸದುದ್ದೇಶದಿಂದ ಧನಾಧಿಪತಿಯಾದ ಕುಬೇರನ ಮೇಲೆ ಯುದ್ಧವನ್ನು ಮಾಡಿ ಕೌಸ್ಥೇಯನ ಮನೋಭಿಲಾಷೆಯನ್ನು ಪೂರ್ಣಗೊಳಿಸುವುದೆ಼ದು ಸoಕಲ್ಪ ಮಾಡುತ್ತಾನೆ. ತನ್ನ ಚತುರಂಗ ಬಲ ಸಮೇತ ಕುಬೇರನ ಮೇಲೆ ಯುದ್ಧಕ್ಕೆ ಪ್ರಸ್ಥಾನ ಮಾಡುವಾಗ ಮಾರ್ಗ ಮಧ್ಯೆ ರಾತ್ರಿಯಾದ ಕಾರಣ ಒoದು ವನದಲ್ಲಿ ರಾಜ ಬಿಡಾರ ಹಾಕುತ್ತಾನೆ. ಅದು ಶಮೀವೃಕ್ಷಗಳಿ0ದ ತುಂಬಿದ ವನ. ಇದೇ ಸಂದರ್ಭದಲ್ಲಿ ಕುಬೇರನಿಗೆ ರಘು ಮಹಾರಾಜ ವಿದ್ಯಾರ್ಥಿಯೊಬ್ಬನ ಗುರುದಕ್ಷಿಣೆಯಾಗಿ ಹತ್ತು ಲಕ್ಷ ಸುವರ್ಣ ನಾಣ್ಯಗಳನ್ನು ಕೂಡಿಸುವ ಸದುದ್ದೇಶದಿ0ದ ತನ್ನ ಮೇಲೆ ಯುದ್ಧಕ್ಕೆ ಬರುತ್ತಿರುವ ವಿಷಯ ತಿಳಿಯುತ್ತದೆ. ರಾಜನ ಸದುದ್ದೇಶ ಕೇಳಿ ಸುಪ್ರೀತನಾದ ಕುಬೇರ, ತನ್ನ ಮಾಯಾ ಶಕ್ತಿಯಿಂದ ರಘು ಮಹಾರಾಜ ಬಿಡಾರ ಹೂಡಿದ್ದ ಶಮೀವೃಕ್ಷದ ಪ್ರತಿಯೊ0ದು ಎಲೆಯೂ ಸುವರ್ಣ ನಾಣ್ಯವಾಗುವಂತೆ ಮಾಡುತ್ತಾನೆ.

    ಸೂರ್ಯೋದಯವಾಗುತ್ತಿದ್ದಂತೆಯೇ ಶಮೀವೃಕ್ಷದ ಎಲೆಗಳೆಲ್ಲಾ ಸುವರ್ಣ ನಾಣ್ಯಗಳಾಗಿ ಪರಿವರ್ತನೆಗೊಳ್ಳುತ್ತವೆ. ರಾಜ ಇದನ್ನು ದೈವೀಕೃಪೆ ಎoದು ಭಾವಿಸಿ ಕುಬೇರನ ಮೇಲೆ ತಾನು ಹೂಡಬೇಕಿದ್ದ ಯುದ್ಧವನ್ನು ತ್ಯಜಿಸುತ್ತಾನೆ. ಬಳಿಕ ಶಮೀವನಕ್ಕೆ ಕೌಸ್ಥೇಯನನ್ನು ಕರೆಯಿಸುತ್ತಾನೆ ಹಾಗೂ ಹತ್ತು ಲಕ್ಷ ಸುವರ್ಣ ನಾಣ್ಯಗಳನ್ನು ತೆಗೆದುಕೊಂಡು ಅರುಣೀ ಮಹರ್ಶಿಗಳ ಗುರುದಕ್ಷಿಣೆಯ ಋಣವನ್ನು ತೀರಿಸಲು ಹೇಳುತ್ತಾನೆ.

    ರಾಜನ ಭಂಡಾರ ಮತ್ತೆ ಸುವರ್ಣ ನಾಣ್ಯಗಳಿoದ ತುಂಬಿ ತುಳುಕುತ್ತದೆ. ಈ ಅಸಾಧ್ಯವೆನಿಸಿದ ಗುರುದಕ್ಷಿಣೆಯನ್ನು ಸ್ವೀಕರಿಸಿದ ಅರುಣೀ ಮಹರ್ಷಿಗಳು ಕೌಸ್ಥೇಯನ ಗುರುಭಕ್ತಿಯನ್ನೂ, ರಘು ಮಹಾರಾಜನ ಸಹಾಯಕ ಗುಣ ಮತ್ತು ದಾನದ ಗುಣವನ್ನು ಕಂಡು ಮನಃಪೂರ್ವಕವಾಗಿ ಹರಸುತ್ತಾರೆ. ಶಮೀವೃಕ್ಷದ ಎಲೆಗಳು ಸ್ವರ್ಣ ಮುದ್ರೆಗಳಾಗಿ ಪರಿವರ್ತನೆಯಾದ ದಿನವೇ ಅಶ್ವಯುಜ ಮಾಸ, ಶುಕ್ಲ ಪಕ್ಷ ದಶಮಿ ಅಥವಾ ಶರನ್ನವರಾತ್ರಿಯ ವಿಜಯದಶಮಿ. ಈ ಪುಣ್ಯತೋಮಯ ದಿನದಂದು ಶಮೀವೃಕ್ಷಕ್ಕೆ ಭಕ್ತಿಯಿ0ದ ಪೂಜೆ ಮಾಡಿ, ಶಮೀಪತ್ರೆಗಳನ್ನು ಮನೆಗೆ ತಂದು ತಿಜೋರಿ, ಗಲ್ಲ, ಆಭರಣದ ಪೆಟ್ಟಿಗೆ ಇತ್ಯಾದಿಗಳಲ್ಲಿ ಇಡುವುದರಿಂದ ಧನ-ಧಾನ್ಯ ಸಮೃದ್ಧಿಯಾಗುವುದೆಂಬ ನ0ಬಿಕೆಯಿದೆ.

    ಹೀಗಾಗಿ ದಸರಾ ಸಂದರ್ಭದಲ್ಲಿ ಬನ್ನೀ ವೃಕ್ಷವನ್ನು ಅತ್ಯಂತ ವಿಶೇಷವಾಗಿ ಪೂಜಿಸಲಾಗುತ್ತದೆ. ಇದೇ ಬನ್ನಿ ವೃಕ್ಷದಲ್ಲಿ ಪಾಂಡವರು ತಮ್ಮ ಆಯುಧಗಳನ್ನು ಬಚ್ಟಿಟ್ಟು, ವಿಜಯದಶಮಿಯಂದು ಹೊರತೆಗೆದಿದ್ದರು ಎಂಬ ಪ್ರತೀತಿ ಕೂಡ ಇದೆ.

  • ಉತ್ತರ ಕರ್ನಾಟಕ ದಸರಾದ ಸಿಹಿ ‘ತರಗ’ ಮಾಡುವ ವಿಧಾನ

    ಉತ್ತರ ಕರ್ನಾಟಕ ದಸರಾದ ಸಿಹಿ ‘ತರಗ’ ಮಾಡುವ ವಿಧಾನ

    ಹಬ್ಬ ಬಂತೆಂದರೆ ಸಾಕು ಮೊದಲು ನೆನಪಾಗುವುದೇ ಸಿಹಿ, ರುಚಿಕರವಾದ ಅಡುಗೆ ಹಾಗೂ ಇನ್ನಿತರ ಖಾದ್ಯಗಳು.

    ಯಾವುದೇ ಹಬ್ಬ ಇರಲಿ, ಸಿಹಿಯಾದ ಅಡುಗೆ ಮಾಡುವುದು ಒಂದು ರೀತಿಯ ಸಂಪ್ರದಾಯವೇ ಹೌದು. ಸಾಮಾನ್ಯವಾಗಿ ನಮಗೆಲ್ಲರಿಗೂ ತಿಳಿದಿರುವ ಹಾಗೆ ಹೋಳಿಗೆ, ಪಾಯಸ ಹೀಗೆ ವಿಭಿನ್ನವಾದ ಸಿಹಿ ಪದಾರ್ಥಗಳನ್ನು ಹಬ್ಬದ ಸಂದರ್ಭದಲ್ಲಿ ಮಾಡಲಾಗುತ್ತದೆ.

    ದಸರಾ ಹಬ್ಬವನ್ನು ರಾಜ್ಯದಲ್ಲಿ ಬೇರೆ ಬೇರೆ ಕಡೆ ವಿಭಿನ್ನವಾಗಿ ಆಚರಿಸಲಾಗುತ್ತದೆ. ದೇವಿಯ ಪೂಜೆ, 9 ದಿನ ಉಪವಾಸ, ಜಂಬೂಸವಾರಿ, ಹೀಗೆ ವಿಭಿನ್ನ ವಿಚಾರಗಳನ್ನು ಒಳಗೊಂಡು ದಸರಾ ಆಚರಿಸಲಾಗುತ್ತದೆ.

    ಕರ್ನಾಟಕದಲ್ಲಿ ಮೈಸೂರು ದಸರಾ, ಮಡಿಕೇರಿ ದಸರಾ, ಮಂಗಳೂರು ದಸರಾ ಹೀಗೆ ವಿಭಿನ್ನ ರೀತಿಯಲ್ಲಿ ಆಚರಿಸುತ್ತಾರೆ. ಹಾಗೆ ಉತ್ತರ ಕರ್ನಾಟಕದಲ್ಲಿ ದಸರಾ ಆಚರಿಸುವ ರೀತಿ ವಿಭಿನ್ನವಾಗಿದೆ. ನವರಾತ್ರಿಯ ಮೊದಲನೇ ದಿನ ದೇವರ ಮನೆಯಲ್ಲಿ ಘಟಸ್ಥಾಪನೆ ಮಾಡಲಾಗುತ್ತದೆ. ಈ ದಿನವನ್ನು ಘಟಸ್ಥಾಪನೆಯೆಂದೇ ಕರೆಯಲಾಗುತ್ತದೆ. ಈ ಘಟಸ್ಥಾಪನೆ ವೇಳೆ 9 ರೀತಿಯ ದ್ವಿದಳ ಧಾನ್ಯಗಳನ್ನ ಮಣ್ಣಿನಲ್ಲಿ ಹಾಕಿ, ಒಂಬತ್ತು ದಿನಗಳ ಕಾಲ ದೇವರ ಮನೆಯಲ್ಲಿ ಇಡಲಾಗುತ್ತದೆ. ನವರಾತ್ರಿಯ ಕೊನೆಯ ದಿನ ಬನ್ನಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ವೇಳೆ ತರಗ (ಸಿಹಿ ಪೂರಿ) ಎಂಬ ಸಿಹಿ ಪದಾರ್ಥವನ್ನು ಮಾಡಲಾಗುತ್ತದೆ. ಈ ತರಗವನ್ನು ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಗ್ರಿಗಳು:
    ಮೈದಾ ಹಿಟ್ಟು
    ಸಕ್ಕರೆ ಅಥವಾ ಬೆಲ್ಲ
    ಅರಿಶಿಣ ಪುಡಿ

    ಮಾಡುವ ವಿಧಾನ:
    ಮೈದಾ ಹಿಟ್ಟಿನಲ್ಲಿ ಸಕ್ಕರೆ ಅಥವಾ ಬೆಲ್ಲವನ್ನು ಸೇರಿಸಿ, ಅದಕ್ಕೆ ಅರಿಶಿನವನ್ನು ಹಾಕಿ ಪೂರಿ ಮಾಡುವ ಹಿಟ್ಟಿನ ಹದಕ್ಕೆ ತರಲಾಗುತ್ತದೆ. ಬಳಿಕ ಇದನ್ನು ದಿನನಿತ್ಯ ಪೂರಿ ತಯಾರಿಸಿದಂತೆ ಮಾಡಲಾಗುತ್ತದೆ.

    ಕೊನೆಯ ದಿನ ತರಗವನ್ನು ತಯಾರಿಸಿ, ದೇವರ ಮನೆಯಲ್ಲಿ ಕಟ್ಟಿಗೆಯ ʻಪೂಲಾರಿಗೆʼ ಎಂಬುವುದಕ್ಕೆ ತರಗವನ್ನು ಕಟ್ಟಲಾಗುತ್ತದೆ. ಪೂಲಾರಿಗೆ ಎಂದರೆ 3*3 ಎಂಬಂತೆ 9 ಚೌಕಗಳು ಸಿದ್ಧವಾಗುವಂತೆ  ಕಟ್ಟಿಗೆಯಿಂದ ತಯಾರಿಸಲಾಗುತ್ತದೆ. ಅದನ್ನು ದೇವರ ಮನೆಯಲ್ಲಿ ಮೇಲೆ ಕಟ್ಟಲಾಗುತ್ತದೆ. ಅದಕ್ಕೆ ತಯಾರಿಸಿರುವ ತರಗವನ್ನು ದಾರದ ಸಹಾಯದಿಂದ ಕಟ್ಟಲಾಗುತ್ತದೆ. ಅದರ ಜೊತೆಗೆ ತೋರಣವನ್ನು ಕಟ್ಟಲಾಗುತ್ತದೆ. ಈ ತರಗವನ್ನು ಬನ್ನಿ ಕೊಟ್ಟು ಬಳಿಕ ದೇವರ ಮನೆಯಲ್ಲಿ ಕಟ್ಟಲಾದ ಪೂಲಾರಿಗೆಯಿಂದ ಕಿತ್ತು ತೆಗೆದುಕೊಳ್ಳಲಾಗುತ್ತದೆ. ದೇವರಿಗೆ ಬನ್ನಿ ಅರ್ಪಿಸಿ ಇದನ್ನೂ ತಿನ್ನುವ ಸಂಪ್ರದಾಯವಿದೆ.