Tag: ಬದುಕು

  • ಭಾರತದಲ್ಲಿರೋದು ಬ್ರಿಟಿಷರ ಗುಲಾಮಗಿರಿ ಎಜುಕೇಶನ್ ಸಿಸ್ಟಮ್: ರಿಷಬ್ ಶೆಟ್ಟಿ ಆಕ್ರೋಶ

    ಭಾರತದಲ್ಲಿರೋದು ಬ್ರಿಟಿಷರ ಗುಲಾಮಗಿರಿ ಎಜುಕೇಶನ್ ಸಿಸ್ಟಮ್: ರಿಷಬ್ ಶೆಟ್ಟಿ ಆಕ್ರೋಶ

    ಉಡುಪಿ: ಬ್ರಿಟಿಷರು ಸೆಟಪ್ ಮಾಡಿರುವ ಎಜುಕೇಶನ್ ಸಿಸ್ಟಂನ್ನು ನಾವು ಫಾಲೋ ಮಾಡುತ್ತಿದ್ದೇವೆ. ಈ ವ್ಯವಸ್ಥೆ ನಮಗೆ ಜೀವನ ಪ್ರೀತಿ, ಬದುಕುವುದನ್ನು ಕಲಿಸಿಕೊಡುತ್ತಿಲ್ಲ. ಗುಲಾಮಗಿರಿಯನ್ನು ಮುಂದುವರಿಸುತ್ತಿದೆ ಎಂದು ನಟ, ಸ್ಯಾಡಲ್‍ವುಡ್ ಸಿನಿಮಾ ನಿರ್ದೇಶಕ ರಿಷಬ್ ಶೆಟ್ಟಿ ಟೀಕಿಸಿದ್ದಾರೆ.

    ಗುಲಾಮ ಪದ್ಧತಿಗಾಗಿ ಈ ಎಜುಕೇಶನ್ ಸಿಸ್ಟಂ ಜಾರಿಗೆ ತಂದರು. ಅದನ್ನು ನಾವು ಮುಂದುವರಿಸುತ್ತಿದ್ದೇವೆ. ಗುರುಕುಲ ಪದ್ಧತಿಯ ಎಲ್ಲಾ ಕ್ರಮವನ್ನು ಮಕ್ಕಳಿಗೆ ಕಲಿಸುವ ಅವಶ್ಯಕತೆ ಇದೆ. ಶಾಲೆಗಳಲ್ಲಿ ಜೀವನ ಸಂಸ್ಕೃತಿಯ ಪಾಠ ಶುರುವಾಗಬೇಕಾಗಿದೆ ಎಂದು ಉಡುಪಿಯಲ್ಲಿ ಹೇಳಿದರು. ಉಡುಪಿಯ ನೇಜಾರ್ ನಲ್ಲಿ ಕೇದಾರೋತ್ಥಾನ ಟ್ರಸ್ಟ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತಮಾಡಿದರು.

    ಇನ್ಮುಂದೆ ಸಿನಿಮಾ ಸೆಟ್‍ನಲ್ಲಿ ಕುಚ್ಚಿಗೆ ಗಂಜಿ ಉಪ್ಪಿನಕಾಯಿ, ಚಟ್ನಿ:
    ಯುವಕರು ಸಾಮಾಜಿಕ ಜಾಲತಾಣದಲ್ಲಿ ಟೈಂ ಪಾಸ್ ಮಾಡುವ ಬದಲು ಕೃಷಿ ಮಾಡಿ ಎಂದ ರಿಷಬ್ ಶೆಟ್ಟಿ, ಹಡಿಲು ಭೂಮಿ ಅಭಿಯಾನ ಇಡೀ ದೇಶಕ್ಕೆ ಮಾದರಿ. ಕರಾವಳಿಯಲ್ಲಿ ಹಡಿಲು ಭೂಮಿಯಿಂದ ಬಂದ ಅಕ್ಕಿ, ನಮ್ಮದೇ ಕುಚ್ಚಿಗೆ ಅಕ್ಕಿಯ ಬ್ರ್ಯಾಂಡ್ ಆಗಲಿ. ನಮ್ಮ ಸಿನಿಮಾ ಸೆಟ್ ನಲ್ಲಿ ಕುಚ್ಚಿಗೆ ಅಕ್ಕಿ ಗಂಜಿ ಚಟ್ನಿ ಉಪ್ಪಿನ ಕಾಯಿಯನ್ನು ಪ್ರಚಾರ ಮಾಡುತ್ತೇವೆ. ನನ್ನ ಮೂವಿ ಸೆಟ್ ನಲ್ಲಿ ಕುಚ್ಚಿಗೆ ಅಕ್ಕಿಯ ಗಂಜಿಯೇ ಕೊಡುತ್ತೇವೆ. ಗಂಜಿ ಉಂಡರೆ ತೃಪ್ತಿ ಮತ್ತು ಆರೋಗ್ಯ ಸಿಗುತ್ತದೆ. ಎಲ್ಲರಿಗೂ ಇದು ಸಿಗಲಿ.

    ರೈತ ದೇಶದ ಬೆನ್ನೆಲುಬು. ಈಗ ರೈತರಿಗೆ ಬೆನ್ನು ನೋವು ಶುರುವಾಗಿದೆ. ಕೃಷಿ ಭೂಮಿ ಹಡಿಲು ಬಿಡೋದು ಸರಿಯಲ್ಲ. ಕಳೆ ಜಾಸ್ತಿ ಕೊಳೆ ಜಾಸ್ತಿಯಾದ ಭೂಮಿಯನ್ನು ಫಸಲುಗೊಳಿಸುವುದು ನಮ್ಮ ಕರ್ತವ್ಯ. ಜನಪ್ರತಿನಿಧಿಯೊಬ್ಬರು ರಾಜಕೀಯ ಮಾಡುವ ಜೊತೆಗೆ ಸಾರ್ಥಕ ಕೆಲಸ ಮಾಡಿದ್ದಾರೆ. ವೋಟ್ ಬ್ಯಾಂಕ್, ಜನರ ಮನಸ್ಸು ಹಾಳು ಮಾಡುವ ಕೆಲಸ ಮಾಡುವವರ ನಡುವೆ ಶಾಸಕ ಭಟ್ ಉತ್ತಮ ಕೆಲಸ ಮಾಡಿದ್ದಾರೆ ಎಂದು ರಿಷಬ್ ಹೇಳಿದರು. ಇದನ್ನೂ ಓದಿ: ಶಾಲೆಗಳ ಆರಂಭ ಬಗ್ಗೆ ತಜ್ಞರ ಸಲಹೆಯಂತೆ ಮುಂದುವರಿಯುತ್ತೇವೆ: ಬಿ.ಸಿ.ನಾಗೇಶ್

    ಕೃಷಿ ಉದ್ಯೋಗ ಅಲ್ಲ, ಅದು ಸಂಸ್ಕೃತಿ
    ಅಂತರ್ಜಲ ವೃದ್ಧಿಗೆ ಹಡಲುಭೂಮಿ ಕೃಷಿ ಯೋಜನೆ ಬಹಳ ಸಹಕಾರಿ. ಕೃಷಿ ಹೊಟ್ಟೆಪಾಡಿಗೆ, ಹಣಕ್ಕಾಗಿ ಉದ್ಯೋಗಕ್ಕಾಗಿ ಕೃಷಿ ಅಲ್ಲ. ಅದೊಂದು ಹಬ್ಬ, ಕೃಷಿಯನ್ನು ಸಂಭ್ರಮಿಸುತ್ತಾ ಕೆಲಸ ಮಾಡಿದರೆ ಖುಷಿಖುಷಿಯಾಗಿ ಮಾಡಬೇಕು. ಭತ್ತದ ಜೊತೆಗೆ ಸಮಗ್ರ ಕೃಷಿ ಮಾಡಬೇಕು. ಕೃಷಿಯಿಂದ ನೆಮ್ಮದಿ ಶಾಂತಿ ತೃಪ್ತಿ ಸಿಗುತ್ತದೆ. ಮೆಡಿಕಲ್ ಎಂಜಿನಿಯರಿಂಗ್ ತರ ಕೃಷಿ ಕೂಡಾ ವಿಶ್ವದಾದ್ಯಂತ ಭೂಮ್ ಗೆ ಬಂದಿದೆ. ಇದು ನಿಲ್ಲಲ್ಲ, ಈಗ ಶುರು ಆಗಿದೆ. ನಮ್ಮ ಕೃಷಿಗೆ, ದೇಶದ ಕಲೆಗೆ ವಿಶ್ವ ಮಟ್ಟದಲ್ಲಿ ಬೆಲೆ ಸಿಗಲಿದೆ ಎಂದರು. ಇದನ್ನೂ ಓದಿ: ಭತ್ತದ ಗದ್ದೆಯಲ್ಲಿ ಬೇಸಾಯ ಮಾಡಿದ ನಟ ನಿರ್ದೇಶಕ ರಿಷಬ್ ಶೆಟ್ಟಿ

  • ತೆರೆಯ ಮೇಲೆ ಬರಲಿದೆ ಪ್ರಧಾನಿ ಮೋದಿ ಬದುಕು, ಚಿಂತನೆ

    ತೆರೆಯ ಮೇಲೆ ಬರಲಿದೆ ಪ್ರಧಾನಿ ಮೋದಿ ಬದುಕು, ಚಿಂತನೆ

    ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜೀವನ ಮತ್ತು ಚಿಂತನೆ ಆಧಾರಿತ ಸಿನಿಮಾವೊಂದು ತಯಾರಿಯಾಗುತ್ತಿದೆ. ಈ ಸಿನಿಮಾಗೆ ನಿರ್ದೇಶಕ ಮಿಲನ್ ಭೌಮಿಕ್ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಚಿತ್ರದ ಪ್ರಮುಖ ಪಾತ್ರದಲ್ಲಿ ಮಹಾಭಾರತ ಸಿರಿಯಲ್‍ನಲ್ಲಿ ಅಭಿನಯಿಸಿ ಖ್ಯಾತಿ ಪಡೆದ ಗಜೇಂದ್ರ ಚೌಹಣ್ ಬಣ್ಣ ಹಚ್ಚಲಿದ್ದಾರೆ.

    ರಾಜಕೀಯ ರಂಗದಲ್ಲಿ ಹೊಸ ಅಲೆ ಮೂಡಿಸಿ ಎರಡು ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ಮೂಲಕ ನರೇಂದ್ರ ಮೋದಿಯವರು ಭಾರತ ಪ್ರಧಾನಿ ಹುದ್ದೆ ಅಲಂಕರಿಸಿದ್ದಾರೆ. ಅಷ್ಟೇ ಅಲ್ಲದೇ ವಿದೇಶಿ ನಾಯಕರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಶಿವನ ಪರಮ ಭಕ್ತ ಎಂದೇ ಹೇಳುವ ನರೇಂದ್ರ ಮೋದಿಯವರ ಜೀವನ ಆಧಾರಿತ ಸಿನಿಮಾ ತೆರೆಯಲು ನಿರ್ದೇಶಕ ಮಿಲನ್ ಭೌಮಿಕ್ ಮುಂದಾಗಿದ್ದಾರೆ.


    ಸಿನಿಮಾ ಕುರಿಂತೆ ಮಾತನಾಡಿದ ನಿರ್ದೇಶಕ ಭೌಮಿಕ್, ಚಿತ್ರಕ್ಕೆ ಏಕ್ ಔರ್ ನರೇನ್ ಎಂಬ ಶೀರ್ಷಿಕೆ ಇಡಲಾಗಿದ್ದು, ಸಿನಿಮಾದಲ್ಲಿ ಎರಡು ಕಥಾ ಹಂದರವಿರಲಿದೆ. ಅಲ್ಲದೆ ಸಿನಿಮಾ ಎರಡು ರೀತಿಯ ವ್ಯಕ್ತಿತ್ವವನ್ನು ಹೊಂದಿರುವ ಕಥೆ ಆಧಾರಿಸಿರುತ್ತದೆ. ಒಂದು ಸ್ವಾಮಿ ವಿವೇಕಾನಂದರವರ ಜೀವನ ಸಾಧನೆ ಹೊಂದಿದ್ದರೆ ಮತ್ತೊಂದು ಮೋದಿಯವರ ಚಿಂತನೆ ಕುರಿತ ಕಥೆಯನ್ನು ಹೊಂದಿರುತ್ತದೆ ಎಂದಿದ್ದಾರೆ.

    ಮಾರ್ಚ್ 12 ರಿಂದ ಸಿನಿಮಾದ ಚಿತ್ರೀಕರಣ ಆರಂಭವಾಗಲಿದ್ದು. ಕೋಲ್ಕತ್ತಾ ಮತ್ತು ಗುಜರಾತ್‍ನಲ್ಲಿ ಚಿತ್ರೀಕರಿಸಲಾಗುತ್ತದೆ. ಏಪ್ರಿಲ್ ತಿಂಗಳಷ್ಟರಲ್ಲಿ ಸಿನಿಮಾ ಶೂಟಿಂಗ್ ಮುಕ್ತಾಯಗೊಳಿಸಿ, ಸೆಪ್ಟೆಂಬರ್ 17ರಂದು ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಸಿನಿಮಾವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದರು.

  • ಎಂಜಿನಿಯರಿಂಗ್ ಓದಿದ್ರೂ ಕಬ್ಬಿನ ಹಾಲು ಮಾರಾಟ: ಕೆಲ್ಸ ಸಿಗದಿದ್ರೂ ಹಮ್ಮು, ಬಿಮ್ಮಿಲ್ಲದ ಸರದಾರ!

    ಎಂಜಿನಿಯರಿಂಗ್ ಓದಿದ್ರೂ ಕಬ್ಬಿನ ಹಾಲು ಮಾರಾಟ: ಕೆಲ್ಸ ಸಿಗದಿದ್ರೂ ಹಮ್ಮು, ಬಿಮ್ಮಿಲ್ಲದ ಸರದಾರ!

    ಬಳ್ಳಾರಿ: ಎಂಜಿನಿಯರಿಂಗ್ ಓದಿದವರು ಎಂಜಿನಿಯರೇ ಆಗ್ಬೇಕು ಅಂತಾ ಆಸೆ ಪಡ್ತಾರೆ. ಕೆಲಸ ಸಿಗದಿದ್ರೆ ಕೆಲವರು ಬೇಸರ ಮಾಡಿಕೊಂಡು, ಆತ್ಮಹತ್ಯೆ ಹಾದಿ ಹಿಡೀತಾರೆ. ಆದರೆ ಬಳ್ಳಾರಿಯ ಈ ನಮ್ಮ ಹೀರೋ ಕೆಲಸ ಸಿಗದಿದ್ರೂ ಪರವಾಗಿಲ್ಲ ಅಂತಾ ಕಬ್ಬಿನ ಹಾಲು ಮಾರಿ ಬದುಕು ಕಟ್ಟಿಕೊಂಡಿದ್ದಾರೆ.

    ಇವರ ಹೆಸರು ಗೋಪಾಲ ದಾಸರ. ಶ್ರೀಕೃಷ್ಣ ಪರಮಾತ್ಮನಿಗೆ ಹಾಲು, ಬೆಣ್ಣೆ ಅಂದ್ರೆ ಎಷ್ಟು ಇಷ್ಟವೋ ಇವರಿಗೂ ಸಹ ಕಬ್ಬಿನ ಹಾಲು ಅಂದ್ರೆ ಅಷ್ಟೇ ಇಷ್ಟ. ಅದಕ್ಕೆ ಕಬ್ಬಿನ ಹಾಲು ಮಾರಾಟ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ.

    ಬಳ್ಳಾರಿ ಜಿಲ್ಲೆ ಕಂಪ್ಲಿ ಪಟ್ಟಣದ ಗೋಪಾಲ ದಾಸರ ಡಿಪ್ಲೊಮೋ ಜೊತೆ ಸಿವಿಲ್ ಎಂಜಿನಿಯರಿಂಗ್ ಓದಿದ್ರೂ ಕೆಲಸ ಸಿಕ್ಕಿಲ್ಲ. ಹಾಗಂತ ಇವರು ಬೇಜಾರು ಮಾಡಿಕೊಳ್ಳಲಿಲ್ಲ. ಅಪ್ಪ, ಅಮ್ಮ ಶುರು ಮಾಡಿದ್ದ ಕಬ್ಬಿನ ಹಾಲಿನ ವ್ಯಾಪಾರವನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

    ಅಮ್ಮನ ಹೆಸರಿನಲ್ಲಿ 50 ಸಾವಿರ ರೂಪಾಯಿ ಸಾಲ ಮಾಡಿ ಹೊಸ ಯಂತ್ರ ಖರೀದಿ ಮಾಡಿದ್ದಾರೆ. ಈಗ ಕಾಂಕ್ರೀಟ್ ಟೆಕ್ನಾಲಜಿಯಲ್ಲಿ ಎಂಟೆಕ್ ಮಾಡಬೇಕೆಂಬ ಆಸೆಯಲ್ಲಿದ್ದಾರೆ. ಜೊತೆಗೆ ಕೆಎಎಸ್ ಅಥವಾ ಐಎಎಸ್ ಮಾಡುವ ಉತ್ಸಾಹ ಹೊಂದಿದ್ದಾರೆ.

    ಗೋಪಾಲ ತಾವಷ್ಟೇ ಅಲ್ಲ, ಬಿಕಾಂ ಓದಿರೋ ತನ್ನ ಸಹೋದರ ಶ್ರೀನಿವಾಸಗೂ ಕಬ್ಬಿನ ಹಾಲು ಮಾರಾಟ ಮಾಡೋದನ್ನ ಕಲಿಸಿಕೊಟ್ಟು ಜೀವನ ರೂಪಿಸಿದ್ದಾರೆ. ಇವರ ಈ ಸಾಧನೆ ನಿರುದ್ಯೋಗಿಗಳಿಗೆ ಮಾದರಿಯಾಗಿದೆ.

    ನಾನು ತುಂಬಾ ಓದಿದ್ದೀನಿ. ಸಣ್ಣ ಪುಟ್ಟ ಕೆಲಸ ಬೇಡ ಅನ್ನೋ ನೂರಾರು ಯುವಕರಿಗೆ ಗೋಪಾಲ ಮಾದರಿಯಾಗಿದ್ದಾರೆ. ಇಂಥ ಸ್ವಾವಲಂಬಿಗೆ ನಮ್ಮದೊಂದು ಸಲಾಂ.