Tag: ಬಂಪರ್

  • ಬಂಪರ್ ಗೂ ಮೊದಲು ‘ಬೈ2ಲವ್’ – ರೊಮ್ಯಾಂಟಿಕ್ ಹೀರೋ ಆದ ನಟ ಧನ್ವೀರ್

    ಬಂಪರ್ ಗೂ ಮೊದಲು ‘ಬೈ2ಲವ್’ – ರೊಮ್ಯಾಂಟಿಕ್ ಹೀರೋ ಆದ ನಟ ಧನ್ವೀರ್

    ಜಾರ್ ಸಿನಿಮಾ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟ ನಟ ಧನ್ವೀರ್ ಮೊದಲ ಸಿನಿಮಾದಲ್ಲಿಯೇ ಭರವಸೆಯ ನಟ ಎನಿಸಿಕೊಂಡಿದ್ದರು. ಬಜಾರ್ ನಲ್ಲಿ ಮಾಸ್ ಪ್ರೇಕ್ಷಕ ಬಳಗವನ್ನು ರಂಜಿಸಿದ್ದ ಧನ್ವೀರ್ ಮಾಸ್ ಹೀರೋ ಆಗಿ ಹೊರಹೊಮ್ಮಿದ್ರು. ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿರುವ ಈ ನಟ ಬಂಪರ್ ಸಿನಿಮಾ ಮೂಲಕ ಆಕ್ಷನ್ ಹೀರೋ ಆಗಿ ಮಿಂಚಲು ಸಕಲ ತಯಾರಿ ಕೂಡ ನಡೆಸಿದ್ದರು. ಈಗ ಆಕ್ಷನ್ ಸಿನಿಮಾಗೂ ಮುನ್ನ ರೊಮ್ಯಾಂಟಿಕ್ ಹೀರೋ ಆಗಿ ತೆರೆ ಮೇಲೆ ಬರಲು ಸಜ್ಜಾಗುತ್ತಿದ್ದಾರೆ ಧನ್ವೀರ್.

    ಹೌದು, ಬಂಪರ್ ಸಿನಿಮಾ ನಿರ್ದೇಶಕ ಹರಿ ಸಂತೋಷ್ ಧನ್ವೀರ್ ರನ್ನು ರೊಮ್ಯಾಂಟಿಕ್ ಹೀರೋ ಆಗಿ ತೆರೆ ಮೇಲೆ ತರಲು ಹೊರಟಿದ್ದು, ತಾವೇ ಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ‘ಬೈ2ಲವ್’ ಎಂದು ಟೈಟಲ್ ಫಿಕ್ಸ್ ಮಾಡಿದ್ದಾರೆ. ಆದ್ದರಿಂದ ಬಂಪರ್ ಸಿನಿಮಾಗೂ ಮೊದಲು ಧನ್ವೀರ್ ಬೈ 2 ಲವ್ ಪ್ರೇಮ್ ಕಹಾನಿ ಹೇಳಲು ತೆರೆ ಮೇಲೆ ಬರೋದು ಕನ್ಪರ್ಮ್ ಆಗಿದೆ.

    ಚಿತ್ರದಲ್ಲಿ ಧನ್ವೀರ್ ಜೊತೆ ಕಿಸ್ ಸಿನಿಮಾ ಖ್ಯಾತಿಯ ನಟಿ ಶ್ರೀಲೀಲಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಭರಾಟೆ ಚಿತ್ರದಲ್ಲಿ ಶ್ರೀಮುರಳಿ ಜೊತೆ ನಾಯಕಿಯಾಗಿ ನಟಿಸಿದ್ದ ಮುದ್ದು ಮುಖದ ಚೆಲುವೆ ಆಕ್ಷನ್ ಫ್ರಿನ್ಸ್ ಧ್ರುವ ಸರ್ಜಾ ಹೊಸ ಚಿತ್ರ ದುಬಾರಿಗೂ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈಗ ‘ಬೈ2ಲವ್’ ಸಿನಿಮಾದಲ್ಲಿ ಧನ್ವೀರ್ ಗೆ ಜೊತೆಯಾಗಲಿದ್ದಾರೆ.

    ಸದ್ಯ ಪ್ರಿಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ಬ್ಯುಸಿಯಾಗಿದ್ದು, ಜನವರಿ ಮೊದಲ ವಾರದಲ್ಲಿ ಚಿತ್ರೀಕರಣಕ್ಕೆ ಹೊರಡಲಿದೆ `ಬೈ2ಲವ್’ ಟೀಂ. ಕೆವಿಎನ್ ಪ್ರೊಡಕ್ಷನ್ ಬೈ2ಲವ್ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಅಜನೀಶ್ ಲೋಕನಾಥ್ ಸಂಗೀತ, ಮಹೇಂದ್ರ ಸಿಂಹ ಛಾಯಾಗ್ರಹಣ ಈ ರೊಮ್ಯಾಂಟಿಕ್ ಲವ್ ಸಬ್ಜೆಕ್ಟ್ ಸಿನಿಮಾಗಿದೆ.

  • ಧನ್ವೀರ್ ಬರ್ತ್‍ಡೇಗೆ ಹೊಸ ರಂಗು ತುಂಬಿತು ಬಂಪರ್ ಟೀಸರ್!

    ಧನ್ವೀರ್ ಬರ್ತ್‍ಡೇಗೆ ಹೊಸ ರಂಗು ತುಂಬಿತು ಬಂಪರ್ ಟೀಸರ್!

    ಗಂಟೆ ಕಳೆಯೋದರೊಳಗೆ ದಾಖಲೆಯ ವೀಕ್ಷಣೆ!

    ಬಜಾರ್ ಖ್ಯಾತಿಯ ಧನ್ವೀರ್ ನಟನೆಯ ಬಂಪರ್ ಚಿತ್ರ ವರ್ಷದ ಹಿಂದೆಯೇ ಸಾಕಷ್ಟು ಸದ್ದು ಮಾಡಿದೆ. ಮೊದಲ ಚಿತ್ರದಲ್ಲಿಯೇ ಮಾಸ್ ಲುಕ್ಕಲ್ಲಿ ಮಿಂಚಿದ್ದ ಧನ್ವೀರ್ ಬಂಪರ್ ಮೂಲಕ ಮತ್ತೊಂದು ಭರ್ಜರಿ ಗೆಟಪ್ಪಿನಲ್ಲಿ ಎಂಟ್ರಿ ಕೊಡುತ್ತಿರೋ ವಿಚಾರವೂ ಈ ಟೈಟಲ್ ಮೂಲಕವೇ ಸ್ಪಷ್ಟವಾಗಿತ್ತು. ಖ್ಯಾತ ಯುವ ನಿರ್ಮಾಪಕ ಸುಪ್ರೀತ್ ನಿರ್ಮಾಣ ಮಾಡಿರೋ ಈ ಚಿತ್ರದ ಮತ್ತಷ್ಟು ಚಿತ್ರಣವೀಗ ಜಾಹೀರುಗೊಂಡಿದೆ. ನಾಯಕ ಧನ್ವೀರ್ ಹುಟ್ಟುಹಬ್ಬಕ್ಕೆ ಗಿಫ್ಟ್ ಎಂಬಂತೆ ಚಿತ್ರತಂಡ ಪರಿಣಾಮಕಾರಿಯಾದ ಟೀಸರ್ ಒಂದನ್ನು ಲಾಂಚ್ ಮಾಡಿದೆ. ಈ ಮೂಲಕ ಹೆಸರಿಗೆ ತಕ್ಕುದಾದ ಕಂಟೆಂಟಿನ ಸಿನಿಮಾ ನೋಡೋ ಭಾಗ್ಯ ಪ್ರೇಕ್ಷಕರಿಗೆ ಸಿಗಲಿರೋದು ಪಕ್ಕಾ ಆಗಿದೆ.

    ಇದು ಹರಿ ಸಂತೋಷ್ ನಿರ್ದೇಶನದಲ್ಲಿ ಮೂಡಿ ಬರುತ್ತಿರೋ ಚಿತ್ರ. ಇದರ ಟೀಸರ್ ಬಿಡುಗಡೆಗೊಂಡು ಅತ್ಯಂತ ಕಡಿಮೆ ಅವಧಿಯಲ್ಲಿಯೇ ಪಡೆದುಕೊಂಡಿರೋ ವೀಕ್ಷಣೆ, ಅದರೊಂದಿಗೆ ಸೃಷ್ಟಿಯಾಗಿರೋ ಕ್ರೇಜ್, ಸಿಕ್ಕಿರೋ ಅಪಾರ ಪ್ರಮಾಣದ ಪ್ರತಿಕ್ರಿಯೆಗಳೆಲ್ಲವೂ ಧನ್ವೀರ್ ಪಾಲಿಗೆ ಈ ಹುಟ್ಟುಹಬ್ಬದ ಸಂಭ್ರಮವನ್ನ ಇಮ್ಮಡಿಸಿದೆ. ಅದರಾಚೆ ನಿಂತು ನೋಡಿದರೂ ಬಂಪರ್ ಟೀಸರ್‍ನದ್ದು ಭರವಸೆ ಮೂಡಿಸುವಂಥಾ ಖದರ್. ಧನ್ವೀರ್ ಮೇಲೆ ಮೊದಲ ಚಿತ್ರದಲ್ಲಿ ಎಂಥಾ ನಿರೀಕ್ಷೆ ಮೊಳೆತುಕೊಂಡಿತ್ತೋ ಅದನ್ನು ಮೀರಿಸುವಂಥ ರಗಡ್ ಕಥಾನಕದ ಹೊಳಹು ಸಲೀಸಾಗಿ ಸಿಕ್ಕಂತಾಗಿದೆ.

    ಧನ್ವೀರ್ ಮೊದಲ ಸಿನಿಮಾದಲ್ಲಿಯೇ ಮಾಸ್ ಹೀರೋ ಆಗಿ ಅವತರಿಸಿದ್ದವರು. ನಟನೆ ಸೇರಿದಂತೆ ಎಲ್ಲದರಲ್ಲಿಯೂ ಪಳಗಿಕೊಂಡಿದ್ದ ಧನ್ವೀರ್‍ಗೆ ಒಂದೇ ಒಂದು ಸಿನಿಮಾ ಮೂಲಕ ಕುದುರಿಕೊಂಡಿರೋ ಅಭಿಮಾನಿ ಬಳಗ ನಿಜಕ್ಕೂ ಬೆರಗಾಗುವಂತಿದೆ. ಅಂಥಾ ಅಭಿಮಾನಿಗಳೆಲ್ಲ ಧನ್ವೀರ್ ಅವರನ್ನು ಮತ್ತಷ್ಟು ರಿಗಡ್ ಲುಕ್ಕಿನಲ್ಲಿ ನೋಡಲು ಕಾತರಿಸಿದ್ದರು. ಅದನ್ನು ಸಂಪೂರ್ಣವಾಗಿ ತಣಿಸುವಂಥ ಗೆಟಪ್ಪಿನಲ್ಲಿ ಧನ್ವೀರ್ ಕಂಗೊಳಿಸಿದ್ದಾರೆ. ಮಾಸ್ ಮಾತ್ರವಲ್ಲದೆ ಸಖತ್ ಸ್ಟೈಲಿಶ್ ಆಗಿಯೂ ಅವರು ಕಾಣಿಸಿಕೊಂಡಿದ್ದಾರೆ.

    ಕಳೆದ ವರ್ಷವೇ ಧನ್ವೀರ್ ಹುಟ್ಟುಹಬ್ಬದಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಂಪರ್ ಚಿತ್ರದ ಫಸ್ಟ್ ಲುಕ್ ಬಿಡುಗಡೆಗೊಳಿಸಿದ್ದರು. ಆ ದೆಸೆಯಿಂದಲೇ ಭಾರೀ ಸೌಂಡು ಮಾಡಿದ್ದ ಬಂಪರ್ ಕೊರೊನಾ ಕಾಟ ಇಲ್ಲದೇ ಹೋಗಿದ್ದರೆ ಈ ಹೊತ್ತಿಗೆಲ್ಲ ಬಿಡುಗಡೆಯಾಗಿರುತ್ತಿತ್ತೇನೋ. ಆದರೆ, ಕೊರೊನಾದಿಂದ ಕೊಂಚ ಹಿನ್ನಡೆಯಾದರೂ ಬಂಪರ್ ಅನ್ನು ಮಜಬೂತಾಗಿಯೇ ಸಿದ್ಧಗೊಳಿಸಲಾಗಿದೆ. ಅದಕ್ಕೆ ಲಕ್ಷ ಲಕ್ಷ ವೀಕ್ಷಣೆ ಪಡೆದುಕೊಂಡು ಮುನ್ನುಗ್ಗುತ್ತಿರೋ ಈ ಟೀಸರ್‍ಗಿಂತಲೂ ಬೇರೆ ಸಾಕ್ಷಿ ಬೇಕಿಲ್ಲ.

  • ‘ಬಂಪರ್’ಗೆ ಕೆಜಿಎಫ್ ಖ್ಯಾತಿಯ ಗರುಡ ರಾಮ್ ವಿಲನ್!

    ‘ಬಂಪರ್’ಗೆ ಕೆಜಿಎಫ್ ಖ್ಯಾತಿಯ ಗರುಡ ರಾಮ್ ವಿಲನ್!

    ಸಿಂಪಲ್ ಸುನಿ ನಿರ್ದೇಶನದ ಬಜಾರ್ ಚಿತ್ರದ ಮೂಲಕ ನಾಯಕ ನಟನಾಗಿ ಸ್ಯಾಂಡಲ್‍ವುಡ್‍ಗೆ ಎಂಟ್ರಿಕೊಟ್ಟ ಭರವಸೆಯ ನಟ ಧನ್ವೀರ್. ಮೊದಲ ಸಿನಿಮಾದಲ್ಲೇ ಮಾಸ್ ಪ್ರೇಕ್ಷಕರ ಮನ ಗೆದ್ದ ಧನ್ವೀರ್ ಈಗ ಎರಡನೇ ಚಿತ್ರ ‘ಬಂಪರ್’ಗೆ ಸಿದ್ಧರಾಗುತ್ತಿದ್ದಾರೆ. ಹರಿ ಸಂತೋಷ್ ನಿರ್ದೇಶನದ ಬಂಪರ್ ಚಿತ್ರದಲ್ಲಿ ಧನ್ವೀರ್ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.

    ಇದೀಗ ಬಂಪರ್ ಚಿತ್ರತಂಡದಿಂದ ‘ಬಂಪರ್’ ಸುದ್ದಿಯೊಂದು ಹೊರ ಬಿದ್ದಿದೆ. ಕೆಜಿಎಫ್ ಚಿತ್ರದಲ್ಲಿ ಗರುಡನಾಗಿ ಮಿಂಚಿದ್ದ ರಾಮ್ ಬಂಪರ್ ಚಿತ್ರದಲ್ಲಿ ವಿಲನ್ ಆಗಿ ಧನ್ವೀರ್ ಎದುರು ಸೆಣಸಾಡೋದು ಕನ್ಫರ್ಮ್ ಆಗಿದೆ.

    ಹೌದು, ಕೆಜಿಎಫ್ ಚಿತ್ರದಲ್ಲಿ ಗರುಡ ಪಾತ್ರದಲ್ಲಿ ಖಡಕ್ ವಿಲನ್ ಆಗಿ ಬಣ್ಣ ಹಚ್ಚಿದ್ದ ರಾಮ್ ಸಖತ್ ಫೇಮಸ್ ಆಗಿದ್ರು. ಮೊದಲ ಚಿತ್ರದಲ್ಲೇ ರಾಮ್ ಗ್ರ್ಯಾಂಡ್ ಓಪನಿಂಗ್ ಪಡೆದುಕೊಂಡು ಜನಪ್ರಿಯತೆ ಗಳಿಸಿಕೊಂಡ್ರು. ಟಾಲಿವುಡ್, ಕಾಲಿವುಡ್ ಅಂಗಳದಿಂದಲೂ ರಾಮ್‍ಗೆ ವಿಲನ್ ಆಗಿ ನಟಿಸಲು ಆಫರ್ ಬರತೊಡಗಿತ್ತು. ಇದೀಗ ಹರಿ ಸಂತೋಷ್ ನಿರ್ದೇಶನದ ಬಂಪರ್ ಚಿತ್ರಕ್ಕೆ ರಾಮ್ ವಿಲನ್ ಆಗಿ ಆಯ್ಕೆ ಆಗಿದ್ದು, ಚಿತ್ರದ ಮೇಲಿನ ನಿರೀಕ್ಷೆ ಇನ್ನಷ್ಟು ಹೆಚ್ಚಾಗಿದೆ.

    ‘ಬಂಪರ್’ ಚಿತ್ರ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಭರಾಟೆ ಖ್ಯಾತಿಯ ನಿರ್ಮಾಪಕ ಸುಪ್ರಿತ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಫ್ಯಾಮಿಲಿ ಎಂಟರ್ ಟೈನ್ಮೆಂಟ್ ಚಿತ್ರವಾಗಿರೋ ಬಂಪರ್ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನವಿದೆ.

  • ಬಜಾರ್ ಹುಡುಗನ ಎರಡನೇ ಇನ್ನಿಂಗ್ಸ್- ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ಲ್ಯಾಪ್

    ಬಜಾರ್ ಹುಡುಗನ ಎರಡನೇ ಇನ್ನಿಂಗ್ಸ್- ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ಲ್ಯಾಪ್

    ಸಿಂಪಲ್ ಸುನಿ ನಿರ್ದೇಶನದ ಬಜಾರ್ ಚಿತ್ರದ ಮೂಲಕ ಸ್ಯಾಂಡಲ್‍ವುಡ್ ಅಂಗಳಕ್ಕೆ ಎಂಟ್ರಿಕೊಟ್ಟ ಮಾಸ್ ಹೀರೋ ಧನ್ವೀರ್ ‘ಬಂಪರ್’ ಚಿತ್ರದ ಮೂಲಕ ತಮ್ಮ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ಮೊದಲ ಚಿತ್ರದಲ್ಲಿ ಸಾಕಷ್ಟು ಅಭಿಮಾನಿ ಬಳಗ ಸಂಪಾದಿಸಿದ ಬಜಾರ್ ಹುಡ್ಗ ಇದೀಗ ಬಂಪರ್ ನಲ್ಲೂ ಮಾಸ್ ಆಗಿ ಮನರಂಜನೆ ನೀಡೋಕೆ ಸಿದ್ಧವಾಗ್ತಿದ್ದಾರೆ.

    ಜನವರಿ 15ಕ್ಕೆ ಚಿತ್ರದ ಮುಹೂರ್ತ ಸಮಾರಂಭವನ್ನು ಚಿತ್ರತಂಡ ಹಮ್ಮಿಕೊಂಡಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಂಪರ್ ಚಿತ್ರಕ್ಕೆ ಕ್ಲ್ಯಾಪ್ ಮಾಡಲಿದ್ದಾರೆ.

    ಈಗಾಗಲೇ ಫಸ್ಟ್ ಲುಕ್ ಮೂಲಕ ಗಮನ ಸೆಳೆದಿರುವ ಬಂಪರ್ ಚಿತ್ರಕ್ಕೆ ಹರಿ ಸಂತೋಷ್ ಆಕ್ಷನ್ ಕಟ್ ಹೇಳ್ತಿದ್ದಾರೆ. ಫ್ಯಾಮಿಲಿ ಎಂಟಟೈನ್ಮೆಂಟ್ ಚಿತ್ರವಾಗಿದ್ದು ಕಮರ್ಶಿಯಲ್ ಎಳೆಯಲ್ಲಿ ವಿಭಿನ್ನವಾಗಿ ಚಿತ್ರವನ್ನು ತೆರೆಮೇಲೆ ತರಲು ಪ್ಲಾನ್ ಮಾಡಿಕೊಂಡಿದ್ದಾರೆ ನಿರ್ದೇಶಕ ಹರಿ ಸಂತೋಷ್.

    ಕಿರಿಕ್ ಪಾರ್ಟಿ ಖ್ಯಾತಿಯ ಅಜನೀಶ್ ಲೋಕನಾಥ್ ಬಂಪರ್ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡ್ತಿದ್ದಾರೆ. ‘ಭರಾಟೆ’ ನಿರ್ಮಾಪಕ ಸುಪ್ರಿತ್ ‘ಬಂಪರ್’ ಚಿತ್ರಕ್ಕೆ ಬಂಡವಾಳ ಹೂಡಿದ್ಧಾರೆ. ಚಿತ್ರಕ್ಕಾಗಿ ನಾಯಕಿಯ ಹುಡುಕಾಟದಲ್ಲಿರುವ ನಿರ್ದೇಶಕರು ಚಿತ್ರದ ಇನ್ನಷ್ಟು ಮಾಹಿತಿ ಹಾಗೂ ತಾರಾಬಳಗದ ಬಗ್ಗೆ ಸದ್ಯದಲ್ಲೇ ಹೆಚ್ಚಿನ ಮಾಹಿತಿ ನೀಡಲಿದ್ದಾರೆ.

  • ಶಿಷ್ಯನ ಬಂಪರ್ ಕನಸಿಗೆ ಕ್ಲಾಪ್ ಮಾಡಲಿದ್ದಾರೆ ಒಡೆಯ!

    ಶಿಷ್ಯನ ಬಂಪರ್ ಕನಸಿಗೆ ಕ್ಲಾಪ್ ಮಾಡಲಿದ್ದಾರೆ ಒಡೆಯ!

    ಸಿಂಪಲ್ ಸುನಿ ನಿರ್ದೇಶನದ ಬಜಾರ್ ಚಿತ್ರದ ಮೂಲಕ ನಾಯಕನಾಗಿ ಎಂಟ್ರಿ ಕೊಟ್ಟಿದ್ದವರು ಧನ್ವೀರ್. ಅದರಲ್ಲಿ ಶೋಕ್ದಾರ್ ಪಾತ್ರ ನಿರ್ವಹಿಸಿ ಅದರ ಮೂಲಕವೇ ಒಂದಷ್ಟು ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡು ಇದೀಗ ಬಂಪರ್ ಚಿತ್ರಕ್ಕೆ ಅಣಿಯಾಗುತ್ತಿದ್ದಾರೆ. ಧನ್ವೀರ್ ಎರಡನೇ ಸಿನಿಮಾ ಬಂಪರ್ ಟೈಟಲ್ ಅನೌನ್ಸ್ ಆದ ಕ್ಷಣದಿಂದಲೇ ಸದ್ದು ಮಾಡಲಾರಂಭಿಸಿತ್ತು. ಆ ನಂತರದಲ್ಲಿ ದೀಪಾವಳಿ ಸ್ಪೆಷಲ್ ಎಂಬಂತೆ ಪೋಸ್ಟರ್ ಲಾಂಚ್ ಮಾಡಿದ ನಂತರವಂತೂ ಪ್ರೇಕ್ಷಕರ ನಡುವೆ ‘ಬಂಪರ್’ ಚರ್ಚೆ ಆರಂಭವಾಗಿತ್ತು. ಆ ನಂತರದಲ್ಲಿ ಇದರ ಬಗ್ಗೆ ಯಾವ ಮಾಹಿತಿಗಳೂ ಹೊರ ಬಿದ್ದಿರಲಿಲ್ಲ. ಆದರೀಗ ಇದೇ ತಿಂಗಳ 12ರಂದು ಬಂಪರ್ ಮುಹೂರ್ತ ನಡೆಸಲು ಚಿತ್ರತಂಡ ಮುಂದಾಗಿದೆ. ವಿಶೇಷವೆಂದರೆ, ಈ ಸಂದರ್ಭದಲ್ಲಿ ಒಡೆಯ ದರ್ಶನ್ ಹಾಜರಿದ್ದು ತಮ್ಮ ಶಿಷ್ಯನ ಚಿತ್ರಕ್ಕೆ ಕ್ಲಾಪ್ ಮಾಡೋ ಮೂಲಕ ಚಾಲನೆ ನೀಡಲಿದ್ದಾರೆ.

    ಹೊಸ ಹುಡುಗರಿಗೆ ಸದಾ ಸಹಕಾರ, ಬೆಂಬಲ ನೀಡುತ್ತಾ ಬಂದಿರುವವರು ಚಾಲೆಂಜಿಂಗ್ ಸ್ಟಾರ್ ದರ್ಶನ್. ಈ ಹಿಂದೆ ಸಿಂಪಲ್ ಸುನಿ ನಿರ್ದೇಶನದ ಬಜಾರ್ ಚಿತ್ರದ ಸಂದರ್ಭದಲ್ಲಿಯೂ ಅವರು ಧನ್ವೀರ್ ಗೆ ಸಾಥ್ ನೀಡಿದ್ದರು. ಇದೀಗ ಬಂಪರ್ ಗಂತೂ ದರ್ಶನ್ ಅಭೂತಪೂರ್ವವಾದ ಬೆಂಬಲವನ್ನೇ ನೀಡುತ್ತಿದ್ದಾರೆ. ಇದೇ ತಿಂಗಳ ಹನ್ನೆರಡನೇ ತಾರೀಕಿನಂದು ಬಂಡಿ ಮಹಾಕಾಳಿ ದೇವಸ್ಥಾನದಲ್ಲಿ ನಡೆಯಲಿರೋ ಮುಹೂರ್ತ ಸಮಾರಂಬದಲ್ಲಿ ಅತಿಥಿಯಾಗಿ ಹಾಜರಿರಲಿರುವ ದರ್ಶನ್ ತಮ್ಮ ಮೆಚ್ಚಿನ ಶಿಷ್ಯನ ಚಿತ್ರಕ್ಕೆ ಕ್ಲ್ಯಾಪ್ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ.

    ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಿರುವ ಒಡೆಯ ಚಿತ್ರ ಕೂಡಾ ಡಿಸೆಂಬರ್ ಹನ್ನೆರಡರಂದು ಬಿಡುಗಡೆಯಾಗುತ್ತಿದೆ. ಆ ದಿನವೇ ಧನ್ವೀರ್ ನಾಯಕನಾಗಿ ನಟಿಸಲಿರೋ ಬಂಪರ್ ಚಿತ್ರಕ್ಕೆ ಅದ್ದೂರಿಯಾಗಿಯೇ ಮುಹೂರ್ತ ಸಮಾರಂಭ ನೆರವೇರೋ ಮೂಲಕ ಸೆಟ್ಟೇರಲಿದೆ. ಧನ್ವೀರ್ ಆರಂಭ ಕಾಲದಿಂದಲೂ ದರ್ಶನ್ ಅವರ ಅಭಿಮಾನಿಯಾಗಿದ್ದವರು. ದರ್ಶನ್ ಸಾಗಿ ಬಂದಿರೋ ಕಷ್ಟದ ಹಾದಿಯನ್ನು ಅರಿತುಕೊಂಡು ಅದರಿಂದ ಸ್ಫೂರ್ತಿ ಪಡೆದುಕೊಂಡಿರುವ ಧನ್ವೀರ್ ಅಂಥಾ ಕಷ್ಟದ ಹಾದಿಯಲ್ಲಿಯೇ ಮುಂದುವರೆದು ಬಂದಿದ್ದಾರೆ. ದರ್ಶನ್ ಅವರ ಸ್ಫೂರ್ತಿಯಿಂದಲೇ ನಾಯಕನಾಗಿ ಅವತರಿಸಿರೋ ಧನ್ವೀರ್ ಇದೀಗ ತನ್ನ ಆರಾಧ್ಯ ದೈವದಂತಿರೋ ದರ್ಶನ್ ಅವರ ಸಮ್ಮುಖದಲ್ಲಿಯೇ ಎರಡನೇ ಚಿತ್ರದ ಯಾನವನ್ನು ಆರಂಭಿಸುತ್ತಿದ್ದಾರೆ.