Tag: ಬಂಡಾರು ದತ್ತಾತ್ರೇಯ

  • ಹೈವೇಯಿಂದ ಜಾರಿದ ಕಾರು – ಪ್ರಾಣಾಪಾಯದಿಂದ ರಾಜ್ಯಪಾಲ ಬಂಡಾರು ಪಾರು

    ಹೈವೇಯಿಂದ ಜಾರಿದ ಕಾರು – ಪ್ರಾಣಾಪಾಯದಿಂದ ರಾಜ್ಯಪಾಲ ಬಂಡಾರು ಪಾರು

    ಹೈದರಾಬಾದ್: ಹಿಮಾಚಲ ಪ್ರದೇಶ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರು ಪ್ರಯಾಣಿಸುತ್ತಿದ್ದ ಕಾರು ತೆಲಂಗಾಣದಲ್ಲಿ ಅಪಘಾತಕ್ಕಿಡಾಗಿದೆ. ತೆಲಂಗಾಣದ ಯಾದದ್ರಿ ಭುವನಗಿರಿ ಜಿಲ್ಲೆಯ ಚೌತುಪ್ಪಲ್ ಪಟ್ಟಣದ ಬಳಿ ಈ ಅಪಘಾತ ಸಂಭವಿಸಿದೆ.

    ಬಂಡಾರು ದತ್ತಾತ್ರೇಯ ಅವರು ಚೌತುಪ್ಪಲ್ ಬ್ಲಾಕ್‍ನ ಕೈತಪುರಂ ಗ್ರಾಮದಲ್ಲಿ ನಲ್‍ಗೊಂಡ ಜಿಲ್ಲೆಯ ಕಾರ್ಯಕ್ರಮವೊಂದಕ್ಕಾಗಿ ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆಯ ನಂತರ ರಾಜ್ಯಪಾಲರು ತಮ್ಮ ವಾಹನವನ್ನು ಬದಲಾಯಿಸಿ ನಲ್ಗೊಂಡ ಜಿಲ್ಲೆಯತ್ತ ಹೊರಟಿದ್ದಾರೆ.

    ಪ್ರಾಥಮಿಕ ವರದಿಗಳ ಪ್ರಕಾರ ಮರ್ಸಿಡಿಸ್ ಬೆಂಜ್ ಕಾರಿನ (ಎಪಿ 9-ಎಎಸ್ -6666) ಸ್ಟೇರಿಂಗ್ ಇದ್ದಕ್ಕಿದ್ದಂತೆ ಲಾಕ್ ಆಗಿದೆ. ಇದರ ಪರಿಣಾಮವಾಗಿ ಚಾಲಕನು ಕಾರಿನ ಮೇಲಿನ ನಿಯಂತ್ರಣವನ್ನು ಕಳೆದುಕೊಂಂಡು ಅಪಘಾತ ಸಂಭವಿಸಿದೆ. ಬೆಂಗಾವಲಿನಲ್ಲಿ ಇತರ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದ ಭದ್ರತಾ ಸಿಬ್ಬಂದಿ ಕಾರಿನತ್ತ ಧಾವಿಸಿ ದತ್ತಾತ್ರೇಯ ಅವರನ್ನು ರಕ್ಷಿಸಿದ್ದಾರೆ.

    ಅದೃಷ್ಟವಶಾತ್ ವಾಹನವು ಪಲ್ಟಿಯಾಗಲಿಲ್ಲ ಮತ್ತು ಯಾರಿಗೂ ಗಾಯವಾಗಲಿಲ್ಲ. ಕಾರು ಭಾಗಶಃ ಹಾನಿಗೊಳಗಾಗಿದೆ. ಅಪಘಾತಕ್ಕೆ ಕಾರಣವನ್ನು ನಾವು ಪರಿಶೀಲಿಸುತ್ತಿದ್ದೇವೆ ಎಂದು ಡಿಸಿಪಿ ಭೋಂಗೀರ್ ಕೆ ನಾರಾಯಣ ರೆಡ್ಡಿ ತಿಳಿಸಿದ್ದಾರೆ.

  • 21ಕ್ಕೆ ಹೃದಯಾಘಾತ: ಮಾಜಿ ಕೇಂದ್ರ ಸಚಿವ ಬಂಡಾರು ದತ್ತಾತ್ರೇಯಗೆ ಪುತ್ರ ವಿಯೋಗ

    21ಕ್ಕೆ ಹೃದಯಾಘಾತ: ಮಾಜಿ ಕೇಂದ್ರ ಸಚಿವ ಬಂಡಾರು ದತ್ತಾತ್ರೇಯಗೆ ಪುತ್ರ ವಿಯೋಗ

    ಹೈದರಾಬಾದ್: ಮಾಜಿ ಕೇಂದ್ರ ಸಚಿವ, ಹಾಲಿ ಬಿಜೆಪಿಯ ಸಂಸದ ಬಂಡಾರು ದತ್ತಾತ್ರೇಯ ಅವರ ಪುತ್ರ ಮಂಗಳವಾರ ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

    ತೃತೀಯ ವರ್ಷದ ವೈದ್ಯಕೀಯ ವಿದ್ರ್ಯಾಥಿಯಾಗಿದ್ದ ಬಂಡಾರು ವೈಷ್ಣವ್(21) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮಂಗಳವಾರ ರಾತ್ರಿ ಹೈದರಾಬಾದಿನ ರಾಮನಗರದಲ್ಲಿರುವ ತಮ್ಮ ನಿವಾಸದಲ್ಲಿ ಕುಟುಂಬದವರೊಂದಿಗೆ ಊಟ ಮಾಡುತ್ತಿದ್ದಾಗ ವೈಷ್ಣವ್ ಹೃದಯಾಘಾತವಾಗಿ ಕುಸಿದು ಬಿದ್ದಿದ್ದರು.

    ಕೂಡಲೇ ವೈಷ್ಣವ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು 12.30ರ ನಸುಕಿನ ವೇಳೆ ಮೃತಪಟ್ಟಿದ್ದಾರೆ.

    ಮಾಧ್ಯಮಗಳಲ್ಲಿ ವೈಷ್ಣವ್ ಸಾವಿನ ಬಗ್ಗೆ ತಿಳಿದ ಅರ್ಧ ಗಂಟೆಯಲ್ಲಿ ಹೈದರಾಬಾದ್ ಮೇಯರ್ ಬಾನ್ತು ರಾಮಮೋಹನ್ ಆಸ್ಪತ್ರೆಗೆ ತೆರಳಿದ್ದರು. ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಲಕ್ಷ್ಮಣ್ ಮತ್ತು ಅನೇಕ ಬಿಜೆಪಿ ನಾಯಕರು ಸುಮಾರು ಮುಂಜಾನೆ 3 ಗಂಟೆಗೆ ಆಸ್ಪತ್ರೆಗೆ ಹೋಗಿದ್ದರು.

    ಬಂಡಾರು ದತ್ತಾತ್ರೇಯ ಅವರು ಹೃದಯ ಸಂಬಂಧಿ ರೋಗದಿಂದ ಬಳಲುತ್ತಿರುವ ಕಾರಣ ಇಂದು ಬೆಳಗ್ಗೆ ಮಗ ಮೃತಪಟ್ಟ ವಿಚಾರವನ್ನು ತಿಳಿಸಲಾಗಿದೆ. ಇತ್ತ ವೈಷ್ಣವ್ ಕಳೆದುಕೊಂಡ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ.

    ಬಂಡಾರು ದತ್ತಾತ್ರೇಯ ಅವರು 2014ರ ನವೆಂಬರ್ ನಿಂದ 2017ರ ಸೆಪ್ಟೆಂಬರ್ ವರಗೆ ಕಾರ್ಮಿಕ ಮತ್ತು ಉದ್ಯೋಗ ಖಾತೆಯ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.