Tag: ಬಂಗಾರ

  • ಕಳ್ಳ ಅರೆಸ್ಟ್ 13 ಲಕ್ಷ ಮೌಲ್ಯದ ಚಿನ್ನ ವಶಕ್ಕೆ

    ಕಳ್ಳ ಅರೆಸ್ಟ್ 13 ಲಕ್ಷ ಮೌಲ್ಯದ ಚಿನ್ನ ವಶಕ್ಕೆ

    ಬೆಂಗಳೂರು/ಆನೇಕಲ್: ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಮನೆಕಳ್ಳನನ್ನು ಬಂಧಿಸಿದ್ದಾರೆ.

    ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿ ಆತನಿಂದ ಸುಮಾರು 13 ಲಕ್ಷ ಮೌಲ್ಯದ 150 ಗ್ರಾಂ ಚಿನ್ನ ಮತ್ತು 3 ಕೆಜಿ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ: ನಾನೂ ಕೂಡು ಒಕ್ಕಲಿಗ ಪಂಗಡದವನು, ಆದರೆ ನಾವು ಲಿಂಗಾಯತರು: ಎಂ.ಬಿ.ಪಾಟೀಲ್

    ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಮಹದೇವ್ ಜೋಷಿ, ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗ ಎಸಿಪಿ ಪವನ್ ಕುಮಾರ್ ರವರ ಮಾರ್ಗದಶನದಲ್ಲಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಸಂದೀಪ್, ಸಬ್ ಇನ್ಸ್ ಪೆಕ್ಟರ್ ಪಿ.ಮಂಜುನಾಥ್, ಅಪರಾಧ ಸಿಬ್ಬಂದಿ ಪ್ರಕರಣವನ್ನು ಬೇಧಿಸಿದ್ದು ಪರಪ್ಪನ ಅಗ್ರಹಾರ ಪೊಲೀಸರ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

  • ಬಂಗಾರದ ಆಸೆ ತೋರಿಸಿ ಹಣ ದೋಚಿದವರು ಅರೆಸ್ಟ್ – 19 ಲಕ್ಷ ನಗದು ವಶ

    ಬಂಗಾರದ ಆಸೆ ತೋರಿಸಿ ಹಣ ದೋಚಿದವರು ಅರೆಸ್ಟ್ – 19 ಲಕ್ಷ ನಗದು ವಶ

    ಕಾರವಾರ: ಜಿಲ್ಲೆಯ ಮುಂಡಗೋಡಿನಲ್ಲಿ ಕಡಿಮೆ ಬೆಲೆಗೆ ಬಂಗಾರ ಕೊಡುವುದಾಗಿ ನಂಬಿಸಿ ವಂಚಿಸುತ್ತಿದ್ದ, ಶಿವಮೊಗ್ಗ ಜಿಲ್ಲೆಯ ಆರು ಜನರನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ವಾಹನವೂ ಸೇರಿ 19 ಲಕ್ಷ ನಗದನ್ನು ಮುಂಡಗೋಡು ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಸಾಂದರ್ಭಿಕ ಚಿತ್ರ

    ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ವಿರೇಶ್ ತೀರ್ಥಪ್ಪ, ವೆಂಕಟೇಶ್ ಸಣ್ಣವೀರಪ್ಪ, ಕುಮಾರ್ ಗದಿಗಪ್ಪ, ತೀರ್ಥಪ್ಪ ಹಸಿಗಪ್ಪ, ವಿದ್ಯಾದರ, ಸಾಗರದ ಸುಭಾಷ್ ನಗರದ ಪ್ರಶಾಂತ್ ವಿರೇಶ್ ಬಂಧಿತ ಆರೋಪಿಗಳು. ಬಂಧಿತರು ಜೂ.16 ರಂದು ಮುಂಡಗೋಡು ತಾಲೂಕಿನ ಮಳಗಿ ಗ್ರಾಮದ ಧರ್ಮ ಜಲಾಶಯದ ಬಳಿ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಶಿವನಗೌಡ ಮಾದೇಗೌಡ ಪಾಟೀಲ್ ಎಂಬವರಿಗೆ ನಕಲಿ ಬಂಗಾರ ತೋರಿಸಿ ಅವರಿಂದ ಹಣ ಪಡೆದು ಪರಾರಿಯಾಗಿದ್ದರು. ಇದನ್ನೂ ಓದಿ: ಮಾತನಾಡುವುದಾಗಿ ವಂಚಿಸಿ ಮೊಬೈಲ್ ಜೊತೆ ಎಸ್ಕೇಪ್ ಆಗಿದ್ದವನಿಗೆ ಬಿತ್ತು ಗೂಸಾ

    ಈ ಬಗ್ಗೆ ಮುಂಡಗೊಡು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಡಿವೈಎಸ್‍ಪಿ ರವಿ ನಾಯ್ಕ ನೇತೃತ್ವದಲ್ಲಿ, ಸಿಪಿಐ ಪ್ರಭುಗೌಡ, ಪಿಎಸ್‍ಐ ಬಸವರಾಜ್ ಸಿಬ್ಬಂದಿ ವಿನೋದ್, ಶರತ್ ಧರ್ಮರಾಜ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಇದನ್ನೂ ಓದಿ: ಆತ್ಮಾಹುತಿ ಬಾಂಬ್ ದಾಳಿ- ಮೂವರು ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

  • ದಾರಿಯಲ್ಲಿ ಸಿಕ್ಕಿದ್ದ ಚಿನ್ನವನ್ನು ಪೊಲೀಸರಿಗೆ ಒಪ್ಪಿಸಿದ ಗ್ರಾ.ಪಂ ಸದಸ್ಯ

    ದಾರಿಯಲ್ಲಿ ಸಿಕ್ಕಿದ್ದ ಚಿನ್ನವನ್ನು ಪೊಲೀಸರಿಗೆ ಒಪ್ಪಿಸಿದ ಗ್ರಾ.ಪಂ ಸದಸ್ಯ

    ತುಮಕೂರು: ಮಧುಗಿರಿ-ಕೊರಟಗೆರೆಯ ಕೆಶಿಪ್ ರಸ್ತೆಯಲ್ಲಿ ಬಿದ್ದಿದ್ದ ಬ್ಯಾಗ್‍ನಲ್ಲಿದ್ದ ಅಂದಾಜು ನಲವತ್ತೈದು ಗ್ರಾಂ ಚಿನ್ನಾಭರಣಗಳನ್ನು ಗ್ರಾಮ ಪಂಚಾಯಿತಿ ಸದಸ್ಯ ರೊಬ್ಬರು ನೋಡಿ ನಂತರ ಮಧುಗಿರಿ ಪೊಲೀಸರಿಗೆ ಒಪ್ಪಿಸಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ.

    ಕಾಟಗಾನಹಟ್ಟಿ ಗ್ರಾಮ ಪಂಚಾಯಿತಿ ಸದಸ್ಯ ಶಿವಾನಂದರವರು ಬೆಳಿಗ್ಗೆ 7:30 ರ ಸಮಯದಲ್ಲಿ ತಮ್ಮ ದ್ವಿಚಕ್ರ ವಾಹನ ಪಂಕ್ಚರ್ ಅದ ಕಾರಣ ದಾಸರಹಳ್ಳಿಯಲ್ಲಿ ಹೋಗುತ್ತಿದ್ದಾಗ ದತ್ತಾತ್ರಯ ಆಶ್ರಮದ ಬಳಿ ಎರ್ ಬ್ಯಾಗ್ ಬಿದ್ದಿರುವುದನ್ನು ಕಂಡಿದ್ದಾರೆ. ಬ್ಯಾಗ್‍ನ್ನು ತೆಗೆದು ನೋಡಿದಾಗ ಬಟ್ಟೆಗಳು ಕಂಡು ಬಂದು ಬ್ಯಾಗನ್ನು ಅಲ್ಲೇ ಬಿಟ್ಟು ಹೋಗಿದ್ದಾರೆ. ಇದನ್ನೂ ಓದಿ: ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಲಿಂಗಸುಗೂರಿನ ಶಿಕ್ಷಕ ಚಂದ್ರು ಆಯ್ಕೆ

    ಅನುಮಾನಗೊಂಡು ಹಿಂದಿರುಗಿ ಪರಿಶೀಲಿಸಿದಾಗ ಬ್ಯಾಗ್‍ನಲ್ಲಿದ್ದ ಚಿನ್ನಾಭರಣ ಕಂಡು ಅದನ್ನು ತೆಗೆದುಕೊಂಡು ದಾಸರಹಳ್ಳಿಗೆ ಹೋಗಿದ್ದಾರೆ. ದಾಸರಹಳ್ಳಿಯಿಂದ ಹಿಂದಿರುಗಿದಾಗ ಮಳೆ ಇದ್ದ ಕಾರಣ ನಿಧಾನವಾಗಿ ಬಂದಿದ್ದಾರೆ. ಆದರೆ ಬ್ಯಾಗು ಅಲ್ಲಿರಲಿಲ್ಲ ನಂತರ ಚಿನ್ನಾಭರಣಗಳನ್ನು ಸುರಕ್ಷಿತವಾಗಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಒಡವೆಯಿದ್ದ ಪ್ಯಾಕನ್ನು ಮಧುಗಿರಿ ಸಿಪಿಐ ಎಂ. ಎಸ್. ಸರ್ದಾರ್ ಅವರಿಗೆ ಗ್ರಾಮ ಪಂಚಾಯಿತಿ ಸದಸ್ಯ ಶಿವಾನಂದ ನೀಡಿದ್ದಾರೆ. ಆದರೆ ಚಿನ್ನಾಭರಣದ ವಾರಸುದಾರರು ಯಾರೆಂದು ಪತ್ತೆಯಾಗಿಲ್ಲ.

  • ದರೋಡೆ ಮಾಡಿ ಮನೆ ಮಾಲೀಕರಿಗೆ ಖರ್ಚಿಗೆ ಹಣ ಕೊಟ್ರು

    ದರೋಡೆ ಮಾಡಿ ಮನೆ ಮಾಲೀಕರಿಗೆ ಖರ್ಚಿಗೆ ಹಣ ಕೊಟ್ರು

    – ದರೋಡೆ ಬಳಿಕ ಮನೆಯವರ ಕಾಲಿಗೆ ಬಿದ್ರು

    ಲಕ್ನೋ: ದರೋಡೆ ಮಾಡಲು ಹೋದ ಮನೆಯಿಂದ ಹೊರಡುವ ಮುನ್ನ ಆ ಮನೆಯ ಹಿರಿಯರ ಕಾಲಿಗೆ ನಮಸ್ಕಾರ ಮಾಡಿ, ಇನ್ನು 6 ತಿಂಗಳೊಳಗೆ ನಿಮ್ಮ ಹಣವನ್ನು ವಾಪಾಸ್ ನೀಡುತ್ತೇವೆ ಎಂದು ಭರವಸೆ ನೀಡಿ ಹೋಗಿರುವ ಘಟನೆ ಉತ್ತರ ಪ್ರದೇಶದ ಘಜಿಯಾಬಾದ್‍ನಲ್ಲಿ ನಡೆದಿದೆ.

    ದರೋಡೆ ಮಾಡಲೆಂದು  ಆ ಮನೆಗೆ ಬಂದಿದ್ದರು. ಆ ಮನೆಯಲ್ಲಿ ವಾಸವಾಗಿದ್ದ ಅಜ್ಜ-ಅಜ್ಜಿಯ ಎದುರು ಮಚ್ಚು, ಪಿಸ್ತೂಲ್ ಹಿಡಿದು ಮನೆಯಲ್ಲಿದ್ದ ವಸ್ತುವನ್ನೆಲ್ಲ ದೋಚಿಕೊಂಡ ಅವರು ಮನೆಯಿಂದ ಹೊರಡುವ ಮುನ್ನ ಅವರಿಬ್ಬರ ಕಾಲಿಗೂ ಬಿದ್ದು ಆಶೀರ್ವಾದ ಮಾಡುವಂತೆ ಕೇಳಿಕೊಂಡಿದ್ದಾರೆ. ಅಲ್ಲದೆ ಇನ್ನು 6 ತಿಂಗಳೊಳಗೆ ದೋಚಿದ ಹಣ, ಆಭರಣವನ್ನು ವಾಪಾಸ್ ತಂದುಕೊಡುವುದಾಗಿಯೂ ಹೇಳಿ ಹೋಗಿದ್ದಾರೆ. ಹಾಗೆ ಹೋಗುವ ಮುನ್ನ ಅಜ್ಜ-ಅಜ್ಜಿಗೆ ಖರ್ಚಿಗೆಂದು 500 ರೂ. ಕೂಡ ನೀಡಿ ಹೋಗಿದ್ದಾರೆ.

    ಹಿರಿಯ ಉದ್ಯಮಿಗಳಾದ ಸುರೇಂದ್ರ ವರ್ಮ ಮತ್ತು ಅವರ ಪತ್ನಿ ಇಬ್ಬರೇ ಮನೆಯಲ್ಲಿದ್ದಾಗ ದರೋಡೆಕೋರರು ಮನೆಯೊಳಗೆ ನುಗ್ಗಿದ್ದಾರೆ. ಸೋಮವಾರ ರಾತ್ರಿ ಗಾಢ ನಿದ್ರೆಯಲ್ಲಿದ್ದ ಸುರೇಂದ್ರ ವರ್ಮ ದಂಪತಿ ಮನೆಗೆ ದರೋಡೆಕೋರರು ಬಂದಿದ್ದರು. ಬೆಳಗಿನ ಜಾವ 3.30ಕ್ಕೆ ಬಂದ ದರೋಡೆಕೋರರು ಮಾಸ್ಕ್ ಧರಿಸಿದ್ದರು. ಮನೆಯ ಕಿಟಕಿಯನ್ನು ಕಟ್ ಮಾಡಿ ಒಳಗೆ ಬಂದ ಅವರು ಸುರೇಂದ್ರ ವರ್ಮ ಅವರನ್ನು ಹೆದರಿಸಿ, ರೂಮಿನಲ್ಲಿ ಕೂಡಿ ಹಾಕಿದರು. ಅವರಲ್ಲೊಬ್ಬ ಪಿಸ್ತೂಲ್, ಮಚ್ಚು ಹಿಡಿದು ವರ್ಮ ಅವರನ್ನು ಹೆದರಿಸಿದ. ಬಳಿಕ ಉಳಿದವರು ಆ ಮನೆಯಲ್ಲಿದ್ದ 1.5 ಲಕ್ಷ ರೂ. ಹಣ, 4 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ದೋಚಿಕೊಂಡರು.

    ದರೋಡೆಕೋರರು ಮನೆಯಿಂದ ವಾಪಾಸ್ ಹೋಗುವಾಗ ಸುರೇಂದ್ರ ವರ್ಮ ದಂಪತಿಯ ಕಾಲಿಗೆ ನಮಸ್ಕಾರ ಮಾಡಿ, ನಾವು ಅನಿವಾರ್ಯವಾಗಿ ಈ ದರೋಡೆ ಮಾಡಬೇಕಾಯಿತು. ಬಲವಂತವಾಗಿ ನಮ್ಮಿಂದ ಈ ಕೆಲಸ ಮಾಡಿಸಲಾಗುತ್ತಿದೆ. 6 ತಿಂಗಳೊಳಗೆ ನಿಮ್ಮ ಹಣ, ಚಿನ್ನಾಭರಣವನ್ನು ವಾಪಾಸ್ ತಲುಪಿಸುತ್ತೇವೆ ಎಂದು ಹೇಳಿ ಸುರೇಂದ್ರ ವರ್ಮ ಅವರ ಖರ್ಚಿಗೆ 500 ರೂ. ನೀಡಿದರು. ಇದನ್ನು ನೋಡಿದ ಸುರೇಂದ್ರ ವರ್ಮ ದಂಪತಿಗೆ ಅಚ್ಚರಿಯಾಯಿತು.

    ದರೋಡೆಕೋರರು ಮನೆಯಿಂದ ಹೋದ ಬಳಿಕ ಆ ದಂಪತಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಮನೆಗೆ ಬಂದ ಪೊಲೀಸರು ಏನಾದರೂ ಸುಳಿವು ಸಿಗುತ್ತದಾ ಎಂದು ಹುಡುಕಾಡಿದ್ದಾರೆ. ಆದರೆ, ಯಾವ ಸುಳಿವೂ ಸಿಕ್ಕಿಲ್ಲ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ತನಿಖೆ ನಡೆಸುತ್ತಿದ್ದಾರೆ.

  • ಜೀನ್ಸ್ ಪ್ಯಾಂಟ್‍ಗೆ ಪೇಂಟ್ ನಂತೆ ಚಿನ್ನದ ಲೇಪನ- ಕಳ್ಳನ ಮಾಸ್ಟರ್ ಪ್ಲ್ಯಾನ್

    ಜೀನ್ಸ್ ಪ್ಯಾಂಟ್‍ಗೆ ಪೇಂಟ್ ನಂತೆ ಚಿನ್ನದ ಲೇಪನ- ಕಳ್ಳನ ಮಾಸ್ಟರ್ ಪ್ಲ್ಯಾನ್

    ತಿರುವನಂತಪುರಂ: ಜೀನ್ಸ್ ಪ್ಯಾಂಟ್ ಮೇಲೆ ಪೇಂಟ್ ಅಂತೆ ಚಿನ್ನದ ಲೇಪನ ಮಾಡಿಕೊಂಡು ಚಿನ್ನ ಸಾಗಣೆ ಮಾಡುತ್ತಿದ್ದ ವ್ಯಕ್ತಿಯ ತಂತ್ರ ಇದೀಗ ಕೇರಳದಲ್ಲಿ ಬಯಲಾಗಿದೆ.  

    ಕೇರಳದ ಕಣ್ಣೂರು ಏರ್​ಪೋರ್ಟ್​ನಲ್ಲಿ ಪ್ರಯಾಣಿಕನಿಂದ 302 ಗ್ರಾಂ ಚಿನ್ನವನ್ನು ಅಧಿಕಾರಿಗಳು ಇಂದು ವಶಪಡಿಸಿಕೊಂಡಿದ್ದಾರೆ. ಏರ್ ಇಂಟೆಲಿಜೆನ್ಸ್ ಯುನಿಟ್ ಮತ್ತು ಕಸ್ಟಮ್ ಅಧಿಕಾರಿಗಳು ಪ್ರಯಾಣಿಕನಿಂದ ಸುಮಾರು 14 ಲಕ್ಷ ರೂಪಾಯಿ ಬೆಲೆ ಬಾಳುವ ಚಿನ್ನ ಪ್ರಯಾಣಿಕನಿಂದ ವಶವಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಭತ್ತದ ಗದ್ದೆಯಲ್ಲಿ ಬೇಸಾಯ ಮಾಡಿದ ನಟ ನಿರ್ದೇಶಕ ರಿಷಬ್ ಶೆಟ್ಟಿ

    ಚಿನ್ನವನ್ನು ಪೇಸ್ಟ್ ರೂಪದಲ್ಲಿ ಜೀನ್ಸ್ ಪ್ಯಾಂಟ್‍ಗೆ ಹಚ್ಚಲಾಗಿತ್ತು. ನೋಡಲು ಹಳದಿ ಬಣ್ಣದ ಪೇಂಟ್‍ನಂತೆ ಗೋಚರವಾಗುತ್ತಿತ್ತು. ಎರಡು ಲೇಯರ್ ಹೊಂದಿರುವ ಜೀನ್ಸ್ ಪ್ಯಾಂಟ್ ಧರಿಸಿದ ಪ್ರಯಾಣಿಕ ಚಿನ್ನದ ಪೇಸ್ಟ್‌ನ್ನು ಹಚ್ಚಿಕೊಂಡಿದ್ದನು ಎಂಬುದು ತಿಳಿದು ಬಂದಿದೆ. ಜೀನ್ಸ್ ಪ್ಯಾಂಟ್‍ನ ಫೋಟೋ ಇದೀಗ ಫುಲ್ ವೈರಲ್ ಆಗಿದೆ.

    ಡಬಲ್ ಲೇಯರ್ ಪ್ಯಾಂಟ್‍ನಲ್ಲಿ ಚಿನ್ನದ ಪೇಸ್ಟ್‌ನ್ನು ತೆಳುವಾಗಿ ಹಚ್ಚಲಾಗಿದೆ ಎಂದು ಏರ್ ಇಂಟಲಿಜೆನ್ಸ್ ಯೂನಿಟ್ಸ್ ಅಧಿಕಾರಿಯೋರ್ವರು ಮಾಹಿತಿ ಹಂಚಿಕೊಂಡಿದ್ದಾರೆ. ಇದು 302 ಗ್ರಾಂ ಗೋಲ್ಡ್, ತೆಳುವಾದ ಪೇಸ್ಟ್ ತಯಾರಿಸಿ ಪೇಂಟ್‍ನಂತೆ ಹಚ್ಚಲಾಗಿದೆ ಎಂದು ಹೇಳಿದ್ದಾರೆ.

  • ಗುದನಾಳದಲ್ಲಿ 4 ಬಂಡಲ್‍ಗಳಷ್ಟು ಗೋಲ್ಡ್ ಪೇಸ್ಟ್ – ವ್ಯಕ್ತಿ ಅರೆಸ್ಟ್

    ಗುದನಾಳದಲ್ಲಿ 4 ಬಂಡಲ್‍ಗಳಷ್ಟು ಗೋಲ್ಡ್ ಪೇಸ್ಟ್ – ವ್ಯಕ್ತಿ ಅರೆಸ್ಟ್

    ಚೆನ್ನೈ:  ದುಬೈನಿಂದ ಚೆನ್ನೈಗೆ ಬಂದಿದ್ದ ವ್ಯಕ್ತಿಯೊಬ್ಬ ತನ್ನ ಗುದನಾಳದಲ್ಲಿ 40 ಲಕ್ಷ ರೂ. ಮೌಲ್ಯದ 810 ಗ್ರಾಂ ಚಿನ್ನವನ್ನು ಸಾಗಿಸಲು ಪ್ರಯತ್ನಿಸಿ ಏರ್​ಪೋರ್ಟ್​ನ ಕಸ್ಟಮ್ ಅಧಿಕಾರಿಗಳ ಬಳಿ ಸಿಕ್ಕಿಬಿದ್ದಿದ್ದಾನೆ.

    ದುಬೈನಿಂದ ಚೆನ್ನೈಗೆ ಪ್ರಯಾಣ ಮಾಡುತ್ತಿರುವ ವ್ಯಕ್ತಿಯೊಬ್ಬ ಚಿನ್ನವನ್ನು ಸ್ಮಗ್ಲಿಂಗ್ ಮಾಡುತ್ತಿದ್ದಾನೆ ಎಂದು ಕೇಂದ್ರೀಯ ಕಂದಾಯ ತನಿಖಾ ವಿಭಾಗಕ್ಕೆ ಮಾಹಿತಿ ಬಂದಿತ್ತು. ಹಾಗಾಗಿ ಚೆನ್ನೈ ಏರ್​ಪೋರ್ಟ್​ನಲ್ಲಿ ಅಧಿಕಾರಿಗಳು ಪ್ರತಿಯೊಬ್ಬ ಪ್ರಯಾಣಿಕನನ್ನು ತಪಾಸಣೆಗೆ ಒಡ್ಡುತ್ತಿದ್ದರು. ಈ ವೇಳೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.

    ಈತನ ಗುದನಾಳದಲ್ಲಿ ಕೊಂಡೊಯ್ಯುತ್ತಿದ್ದ 24 ಕ್ಯಾರೆಟ್ ಚಿನ್ನದ ಬೆಲೆ 40.35 ಲಕ್ಷ ಎಂದು ಏರ್​ಪೋರ್ಟ್​ ಅಧಿಕಾರಿಗಳು ಮಾಹಿತಿ ನೀಡಿದ್ದು, ಸದ್ಯ ಆತ ಬಂಧಿತನಾಗಿದ್ದಾನೆ. ಇವನ ಗುದನಾಳದಿಂದ ಒಟ್ಟು 948 ಗ್ರಾಂ.ತೂಕದ 4 ಬಂಡಲ್‍ಗಳಷ್ಟು ಗೋಲ್ಡ್ ಪೇಸ್ಟ್​ನ್ನು ಹೊರತೆಗೆಯಲಾಗಿದ್ದು, ಅದರಲ್ಲಿ 810 ಗ್ರಾಂ. 24 ಕ್ಯಾರೆಟ್ ಚಿನ್ನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ನೀವು ಇಲ್ಲದೇ ನನ್ನ ಬದುಕಿನಲ್ಲಿ ಖಾಲಿತನ ಉಂಟಾಗಿದೆ: ಸೋನು ಸೂದ್

    ಗುದನಾಳದಲ್ಲಿ ಚಿನ್ನ ಇಟ್ಟು ಸ್ಮಗ್ಲಿಂಗ್ ಮಾಡುವ ಪ್ರಕರಣಗಳು ಇತ್ತೀಚೆಗೆ ತುಂಬ ಹೆಚ್ಚಾಗುತ್ತಿದೆ. ಡಿಸೆಂಬರ್‌ನಲ್ಲಿ ದುಬೈನಿಂದ ಬಂದ ಇಬ್ಬರು ಹೀಗೆ ಗುದನಾಳದಲ್ಲಿ ಚಿನ್ನದ ಪೇಸ್ಟ್ ತಂದಿದ್ದರು. ಅವರಿಂದ 35.5 ಲಕ್ಷ ರೂ.ಮೌಲ್ಯದ 706 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿತ್ತು.

  • ಎಂಟು ಮಂದಿ ಕಳ್ಳರ ಬಂಧನ- 19 ಲಕ್ಷ ಮೌಲ್ಯದ ವಸ್ತುಗಳು ವಶ

    ಎಂಟು ಮಂದಿ ಕಳ್ಳರ ಬಂಧನ- 19 ಲಕ್ಷ ಮೌಲ್ಯದ ವಸ್ತುಗಳು ವಶ

    ಕಾರವಾರ: ಲಾಕ್‍ಡೌನ್ ಸುಮಯದಲ್ಲಿ ಕಾರವಾರ, ಅಂಕೋಲಾ, ಗೋಕರ್ಣ ಸುತ್ತಮುತ್ತಲಿನ ಪರಿಸರದಲ್ಲಿ ನಡೆದ ಮನೆ ಕಳ್ಳತನ, ಶಾಲೆ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ 8 ಜನ ಆರೋಪಿಗಳನ್ನು ಗೋಕರ್ಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಲಕ್ಷಾಂತರ ರೂ. ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

    ಅಂಕೋಲಾ ತಾಲೂಕಿನ ಬೊಬ್ರವಾಡ ಗ್ರಾಮದ ನಿವಾಸಿ ಪ್ರಶಾಂತ್ ಕಿಶೋರ ನಾಯ್ಕ (23), ತೆಂಕಣಕೇರಿ ನಿವಾಸಿ ಹರ್ಷ ನಾಗೇಂದ್ರ ನಾಯ್ಕ (22), ಕೇಣಿ ನಿವಾಸಿ ರಾಹುಲ್ ಕೃಷ್ಣಾನಂದ ಬಂಟ (22), ಶಿರಕುಳಿ ನಿವಾಸಿ ಗಣೇಶ್ ಮಾರುತಿ ನಾಯ್ಕ (24), ಶಿರಸಿ ಕಸ್ತೂರ್ಬಾ ನಗರ ನಿವಾಸಿ ಶ್ರೀಕಾಂತ್ ಗಣಪತಿ ದೇವಾಡಿಗ (27), ನಿಹಾಲ ಗೋಪಾಲಕೃಷ್ಣ ದೇವಳಿ (26), ಸಂದೀಪ್ ಹನುಮಂತ ಮರಾಠಿ (25) ಮತ್ತು ಬಂಗಾರದ ಆಭರಣಗಳನ್ನು ಖರೀದಿಸುತ್ತಿದ್ದ ಶಿರಸಿ ಬನವಾಸಿ ರಸ್ತೆಯ ಅಶೋಕ್ ರಾಯ್ಕರ್ (40) ಬಂಧಿತ ಆರೋಪಿಗಳಾಗಿದ್ದಾರೆ. ಇದನ್ನೂ ಓದಿ:  ಕನ್ನಡ ಹೆಸರಿನ ಗ್ರಾಮಗಳಿಗೆ ಮರುನಾಮಕರಣ ಮಾಡ್ಬೇಡಿ- ಕೇರಳ ಸಿಎಂಗೆ ಹೆಚ್‍ಡಿಕೆ ಪತ್ರ

    ಬಂಧಿತರು ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 5, ಅಂಕೋಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 11 ಹಾಗೂ ಕಾರವಾರ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2 ಪ್ರಕರಣಗಳು ಸೇರಿದಂತೆ ಒಟ್ಟು 18 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಬಂಧಿತ ಆರೋಪಿಗಳಿಂದ 351 ಗ್ರಾಂ ಬಂಗಾರದ ಆಭರಣ, 1 ಕೆ.ಜಿ ಬೆಳ್ಳಿ ಆಭರಣ, 5 ಗ್ಯಾಸ್ ಸಿಲೆಂಡರ್, 8 ಮೊಬೈಲ್ ಫೋನ್, 3 ಬೈಕ್, 1 ಏರ್‍ಗನ್ ಸೇರಿದಂತೆ 19 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಗಳನ್ನು ವಶಪಡಿಸಿಕೊಳ್ಳಲಾಗಿದೆ.


    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬದರಿನಾಥ್, ಭಟ್ಕಳ ಡಿ.ವೈ.ಎಸ್. ಪಿ ಬೆಳ್ಳಿಯಪ್ಪ ಅವರ ಮಾರ್ಗದರ್ಶನದಲ್ಲಿ ಕುಮಟಾ ಸಿ.ಪಿ.ಐ ಶಿವಪ್ರಕಾಶ್ ನಾಯ್ಕ, ಗೋಕರ್ಣ ಪಿ.ಎಸ್.ಐ ನವೀನ್ ನಾಯ್ಕ, ಅಂಕೋಲಾ ಪಿ.ಎಸ್. ಐ ಪ್ರವಿಣಕುಮಾರ್ ಮತ್ತು ಗೋಕರ್ಣ, ಅಂಕೋಲಾ ಪೊಲೀಸ್ ಠಾಣೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಇದನ್ನೂ ಓದಿ:  ಕಾಂಗ್ರೆಸ್, ಜೆಡಿಎಸ್ ನಾಯಕರ ಸೆಲ್ಫ್ ಕ್ವಾರಂಟೈನ್ ಮುಗಿದಿಲ್ವಾ?: ಬೊಮ್ಮಾಯಿ ಲೇವಡಿ

    ಇತ್ತೀಚಿನ ದಿನಗಳಲ್ಲಿ ಹೆಚ್ಚಿರುವ ಕಳ್ಳತನದ ಪ್ರಕರಣಗಳ ಆರೋಪಿಗಳನ್ನು ಪತ್ತೆ ಹೆಚ್ಚಿಸುವಲ್ಲಿ ಕೊರೊನಾ ಸಂಬಂಧಿಸಿದ ಸೇವೆಗಳ ನಡುವೆಯೂ ನಮ್ಮ ಪೊಲೀಸ್ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಆರೋಪಿಗಳೆಲ್ಲ ಯುವಕರೇ ಆಗಿದ್ದು, ಅಪರಾಧ ಮಾಡಿದವರು ಯಾರೂ ಹೆಚ್ಚಿನ ಕಾಲ ಕಾನೂನಿನ ಕೈಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದು ಎಲ್ಲರಿಗೂ ಪಾಠವಾಗಬೇಕು. ಪೊಲೀಸ್ ಸಿಬ್ಬಂದಿ ಕಾರ್ಯ ಅಭಿನಂದನಾರ್ಹವಾಗಿದ್ದು ಸೂಕ್ತ ಬಹುಮಾನ ಘೋಷಿಸುತ್ತಿದ್ದೇವೆ ಎಂದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಹೇಳಿದ್ದಾರೆ.

  • ವೃದ್ಧೆಯ ಚಿನ್ನದ ಸರ ದೋಚಿದ್ದ ಖದೀಮರು- ಮೂವರ ಬಂಧನ

    ವೃದ್ಧೆಯ ಚಿನ್ನದ ಸರ ದೋಚಿದ್ದ ಖದೀಮರು- ಮೂವರ ಬಂಧನ

    ಶಿವಮೊಗ್ಗ: ವೃದ್ಧೆಯೊಬ್ಬರ ಚಿನ್ನದ ಸರ ದೋಚಿದ್ದ ಮೂವರು ಖದೀಮರನ್ನು ಭದ್ರಾವತಿ ಪೊಲೀಸರು ಬಂಧಿಸಿದ್ದಾರೆ.

    ಪವನ (19), ವಿಷ್ಣು (19) ಹಾಗೂ ಮಹೇಶ (19) ಬಂಧಿತ ಆರೋಪಿಗಳಾಗಿದ್ದಾರೆ. ಇದೇ ತಿಂಗಳ 19 ರಂದು  ವೃದ್ಧೆ ಲಕ್ಷ್ಮಮ್ಮ (85) ನಗರದ ಅಂಚೆ ಕಚೇರಿ ಬಳಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಬೈಕ್ ನಲ್ಲಿ ಹಿಂಬದಿಯಿಂದ ಬಂದ ಮೂವರು ಅಪರಿಚಿತ ಯುವಕರು ವೃದ್ಧೆಯ ಬಂಗಾರದ ಸರವನ್ನು ಅಪಹರಿಸಿದ್ದರು.

    ಈ ಬಗ್ಗೆ ವೃದ್ಧೆ ಲಕ್ಷ್ಮಮ್ಮ ಪೇಪರ್ ಟೌನ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ ಪೊಲೀಸರು ಒಂದೇ ದಿನದಲ್ಲಿ ಮೂವರು ಖದೀಮರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳ ವಿರುದ್ದ ಈ ಹಿಂದೆ ಪೇಪರ್ ಟೌನ್ ಠಾಣೆಯಲ್ಲಿ ಎರಡು ಕಳ್ಳತನ ಪ್ರಕರಣ ಹಾಗೂ ನ್ಯೂ ಟೌನ್ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿತ್ತು. ಬಂಧಿತರಿಂದ 4 ಲಕ್ಷದ 63 ಸಾವಿರ ರೂ ಮೌಲ್ಯದ 103 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ 2 ಬೈಕ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

  • ಮತ್ತೆ ಕೋಟಿ ಒಡೆಯನಾದ ಮುದ್ದು ಮಾದಪ್ಪ-1.48 ಕೋಟಿ ರೂ. ಸಂಗ್ರಹ

    ಮತ್ತೆ ಕೋಟಿ ಒಡೆಯನಾದ ಮುದ್ದು ಮಾದಪ್ಪ-1.48 ಕೋಟಿ ರೂ. ಸಂಗ್ರಹ

    – ಹುಂಡಿಯಲ್ಲಿ 44 ವಿದೇಶಿ ನೋಟುಗಳು ಪತ್ತೆ

    ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಇತಿಹಾಸ ಪ್ರಸಿದ್ಧ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಹುಂಡಿಯಲ್ಲಿ ಈ ಬಾರಿಯೂ ಕೂಡ 1.48 ಕೋಟಿ ರೂಪಾಯಿ(ರೂ1,48,73,233) ನಗದು ಹಣ ಸಂಗ್ರಹವಾಗಿದೆ.

    ನಿನ್ನೆ ಬೆಳಗ್ಗೆಯಿಂದ ಆರಂಭವಾಗಿದ್ದ ಹುಂಡಿ ಎಣಿಕೆ ಕಾರ್ಯ ತಡರಾತ್ರಿವರೆಗೆ ನಡೆದಿದೆ. ನಗದು ಹಣದ ಜೊತೆಗೆ ದೇಗುಲಕ್ಕೆ 31 ಗ್ರಾಂ ಚಿನ್ನ ಹಾಗೂ 2.82 ಕೆ.ಜಿ.ಬೆಳ್ಳಿ ಕಾಣಿಕೆಯಾಗಿ ಬಂದಿದೆ.

    ಹುಂಡಿಯಲ್ಲಿ 44 ವಿದೇಶಿ ನೋಟುಗಳು ಪತ್ತೆಯಾಗಿವೆ. 9 ಅಮೆರಿಕನ್ ಡಾಲರ್ ನೋಟುಗಳು, 15 ಇಂಗ್ಲೆಂಡ್ ಪೌಂಡ್ಸ್, ಹಾಗೂ ಮಲೇಶಿಯಾದ 20 ರಿಂಗ್ ಗಿಟ್ ನೋಟುಗಳನ್ನು ಭಕ್ತರು ಅರ್ಪಿಸಿದ್ದಾರೆ. ಕೋವಿಡ್ ಆರ್ಥಿಕ ಸಂಕಷ್ಟದ ನಡುವೆಯೂ ಭಕ್ತರು ಧಾರಳವಾಗಿ ಕಾಣಿಕೆ ಅರ್ಪಿಸಿದ್ದಾರೆ. ಕಳೆದ ಬಾರಿ ಜನವರಿ 28 ರಂದು ಹುಂಡಿ ಎಣಿಕೆ ಕಾರ್ಯ ನಡೆದಿತ್ತು. 2 ಕೋಟಿ 21 ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹವಾಗಿತ್ತು. ಈಗ ಒಂದು ತಿಂಗಳು ಪೂರ್ಣವಾಗುವ ಮುಂಚೆಯೇ ಮತ್ತೆ ಹುಂಡಿ ಎಣಿಕೆ ಮಾಡಲಾಗಿದ್ದು, 1.48 ಕೋಟಿ ರೂಪಾಯಿ ಹಣ ಸಂಗ್ರಹಣೆಯಾಗಿದೆ.

  • ಮಚ್ಚು, ಲಾಂಗು ಹಿಡಿದು ಓಡಾಡ್ತಿದ್ದ ದರೋಡೆಕೋರರ ಗುಂಪಿನಿಂದ ಮೂರು ಮನೆ ಕಳ್ಳತನ

    ಮಚ್ಚು, ಲಾಂಗು ಹಿಡಿದು ಓಡಾಡ್ತಿದ್ದ ದರೋಡೆಕೋರರ ಗುಂಪಿನಿಂದ ಮೂರು ಮನೆ ಕಳ್ಳತನ

    ಧಾರವಾಡ: ಮಚ್ಚು ಲಾಂಗು ಹಿಡಿದು ಬಡಾವಣೆಯಲ್ಲಿ ಓಡಾಡುತ್ತಿರುವ ದರೋಡೆಕೋರರ ಗುಂಪು ಮೂರು ಮನೆಗಳನ್ನು ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಧಾರವಾಡ ನಗರದ ಮದಿಹಾಳದ ಗಣೇಶನಗರದಲ್ಲಿ ನಡೆದಿದೆ.

    ಮಚ್ಚು ಲಾಂಗು ಹಿಡಿದುಕೊಂಡ ದರೋಡೆಕೋರರು ಕಳೆದ ರಾತ್ರಿ ಧಾರವಾಡ ನಗರದ ಮದಿಹಾಳದ ಗಣೇಶನಗರಲ್ಲಿ 10 ಮಂದಿ ಕಳ್ಳರು ಇರುವ ಗುಂಪು ಇದೇ ಬಡಾವಣೆಯ 3 ಮನೆಗಳನ್ನು ಕಳ್ಳತನ ಮಾಡಿದೆ.

    ಕಳ್ಳರ ಗ್ಯಾಂಗ್ ಓಡಾಡುತಿರುವ ದೃಶ್ಯ ಬಡಾವಣೆಯಲ್ಲಿರುವ ಸಿಸಿ ಟಿವಿಯೊಂದರಲ್ಲಿ ಸೆರೆಯಾಗಿದೆ. ಗಣೇಶನಗರದ ಅಸ್ಲಂ ಮುಲ್ಲಾ, ಗಂಗವ್ವ ಮುದಕಣ್ಣವರ ಮತ್ತು ಆರ್ಯರ ಮನೆಯಲ್ಲಿರುವ ಅಪಾರ ಪ್ರಮಾಣದ ಚಿನ್ನ ಹಾಗೂ ಹಣ ಕದ್ದು ಸ್ಥಳದಿಂದ ಪರಾರಿಯಾಗಿದ್ದಾರೆ.

    ಕಳೆದ 8 ದಿನಗಳಿಂದ ಈ ಕಳ್ಳರ ಗುಂಪು ನಗರ ಹಲವು ಕಡೆ ಓಡಾಡುತಿತ್ತು. ಕೆಲ ಮನೆ ಬಾಗಿಲನ್ನು ಬಡಿದು ಕಳ್ಳತನಕ್ಕೆ ಯತ್ನ ಮಾಡುತ್ತಿದ್ದರು. ಆದರೆ ಕಳೆದ ರಾತ್ರಿ ಮನೆಯಲ್ಲಿ ಯಾರೂ ಇಲ್ಲದ್ದನ್ನು ನೋಡಿದ ಈ ದರೋಡೆಕೋರರ ಗುಂಪು ಕಳ್ಳತನ ಮಾಡಿ ಪರಾರಿಯಾಗಿದೆ.

    ಈ ಸಂಬಂಧ ಶಹರ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ತನಿಖೆ ಕೈಗೊಂಡಿದ್ದಾರೆ.