Tag: ಫ್ರಿಡ್ಜ್

  • ಅಫ್ತಾಬ್‍ನನ್ನು ನೇಣಿಗೆ ಹಾಕಿ: ಲವ್ ಜಿಹಾದ್ ಶಂಕೆ ವ್ಯಕ್ತಪಡಿಸಿದ ಶ್ರದ್ಧಾಳ ತಂದೆ

    ಅಫ್ತಾಬ್‍ನನ್ನು ನೇಣಿಗೆ ಹಾಕಿ: ಲವ್ ಜಿಹಾದ್ ಶಂಕೆ ವ್ಯಕ್ತಪಡಿಸಿದ ಶ್ರದ್ಧಾಳ ತಂದೆ

    ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಲೀವ್ ಇನ್ ರಿಲೇಷನ್ ಶಿಪ್‍ನಲ್ಲಿದ್ದ ((Live in relationship) ತನ್ನ ಗೆಳೆಯನಿಂದ ಬರ್ಬರವಾಗಿ ಹತ್ಯೆಯಾಗಿದ್ದ ಶ್ರದ್ಧಾಳ (Shraddha) ಕೊಲೆ ಪ್ರಕರಣ ಇದೀಗ ಬೇರೆ ರೀತಿಯ ತಿರುವು ಪಡೆದುಕೊಳ್ಳುತ್ತಿದೆ. ಈ ಬಗ್ಗೆ ಶ್ರದ್ಧಾಳ ತಂದೆ (Father) ಮಾತನಾಡಿ, ಘಟನೆ ಹಿಂದೆ ಲವ್ ಜಿಹಾದ್ ಇದೆ ಎಂದು ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ಮಾತನಾಡಿರುವ ಅವರು, ದೆಹಲಿ ಪೊಲೀಸರು ಸರಿಯಾದ ರೀತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದು ನಾವು ನಂಬಿದ್ದೇವೆ. ಶ್ರದ್ಧಾ ಆಕೆಯ ಚಿಕ್ಕಪ್ಪನ ಸಂಪರ್ಕದಲ್ಲಿ ಹೆಚ್ಚಿದ್ದಳು. ನನ್ನನೊಂದಿಗೆ ಹೆಚ್ಚು ಮಾತನಾಡುತ್ತಿರಲಿಲ್ಲ. ಇದರಿಂದಾಗಿ ನಾನು ಅಫ್ತಾಬ್‍ನೊಂದಿಗೆ ಎಂದಿಗೂ ಸಂಪರ್ಕದಲ್ಲಿರಲಿಲ್ಲ ಎಂದ ಅವರು, ತನ್ನ ಮಗಳನ್ನು ಬರ್ಬರವಾಗಿ ಹತ್ಯೆ ಮಾಡಿದ ಆರೋಪಿ ಅಫ್ತಾಬ್‍ಗೆ ಮರಣ ದಂಡನೆ ವಿಧಿಸಬೇಕು ಜೊತೆಗೆ ಲವ್ ಜಿಹಾದ್ ಕೋನದಲ್ಲೂ ಶಂಕೆ ವ್ಯಕ್ತವಾಗುತ್ತಿದೆ ಎಂದರು.

    ಘಟನೆಗೆ ಸಂಬಂಧಿಸಿ ನಾನು ಮೊದಲು ಮುಂಬೈನ ವಸಾಯಿಯಲ್ಲಿ ದೂರು ದಾಖಲಿಸಿದ್ದೆ. ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿಸಿದರು.

    ಘಟನೆಯೇನು?: ಆರೋಪಿ ಅಫ್ತಾಬ್ ಪೂನಾವಾಲಾ ರಾಷ್ಟ್ರ ರಾಜಧಾನಿಯ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಜೊತೆಗೆ ಆತ ಫುಡ್ ಬ್ಲಾಗರ್ ಕೂಡಾ ಆಗಿದ್ದ. ಅಫ್ತಾಬ್ ಹಾಗೂ ಶ್ರದ್ಧಾ ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾಗಿದ್ದರು. ಅದಾದ ಬಳಿಕ ಮನೆಯವರ ವಿರೋಧದ ನಡುವೆಯೂ ಶ್ರದ್ಧಾ ಅಫ್ತಾಬ್‍ನೊಂದಿಗೆ ಲಿವ್ ಇನ್ ರಿಲೇಶನ್‍ಶಿಪ್‍ನಲ್ಲಿದ್ದಳು. ಇದರಿಂದಾಗಿ ಶ್ರದ್ಧಾ ಪೋಷಕರ ಮಾತನಾಡುವುದನ್ನು ನಿಲ್ಲಿಸಿದ್ದಳು.

    ಪೊಲೀಸ್ ಮೂಲಗಳ ಪ್ರಕಾರ, 2009ರಿಂದ ಸಂಬಂಧ ಹೊಂದಿದ್ದ ಈ ಜೋಡಿ 2022ರಲ್ಲಿ ದೆಹಲಿಗೆ ಸ್ಥಳಾಂತರಗೊಂಡಿದ್ದರು. ಅವರು ಮಾರ್ಚ್-ಏಪ್ರಿಲ್‍ನಲ್ಲಿ ಬೇರೆ ಬೇರೆ ಪ್ರದೇಶಗಳಿಗೂ ಭೇಟಿ ನೀಡಿದ್ದರು. ಅದಾದ ಬಳಿಕ ದೆಹಲಿಯ ಛತ್ತರ್‍ಪುರ ಪ್ರದೇಶದಲ್ಲಿ ಫ್ಲಾಟ್ ಅನ್ನು ಬಾಡಿಗೆಗೆ ಪಡೆದು ವಾಸಿಸಲು ಪ್ರಾರಂಭಿಸಿದ್ದರು.

    ಈ ವೇಳೆ ಮದುವೆ ವಿಷಯಕ್ಕೆ ಇಬ್ಬರ ಮಧ್ಯೆ ಜಗಳವಾಗಿದ್ದು, ಶ್ರದ್ಧಾಳನ್ನು ಅಫ್ತಾಬ್ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಅದಾದ ಬಳಿಕ ಯಾರಿಗೂ ಅನುಮಾನ ಬಾರದಿರಲಿ ಎಂದು ಶ್ರದ್ಧಾ ಸಾಮಾಜಿಕ ಜಾಲತಾಣದ ಖಾತೆಯನ್ನು ಬಳಸಿ ಬೇರೆಯವರಿಗೆ ಆಕೆ ಸಕ್ರಿಯವಾಗಿದ್ದಾಳೆ ಎಂಬಂತೆ ತೋರಿಸಿದ್ದಾನೆ.

    ಇನ್ನೂ ಆಕೆಯನ್ನು ಮಿನಿ ಗರಗಸದ ಮೂಲಕ 35 ತುಂಡುಗಳನ್ನು ಮಾಡಿ ಕ್ರೂರತೆ ಮೆರೆದಿದ್ದಾನೆ. ಅಷ್ಟಕ್ಕೆ ನಿಲ್ಲಿಸದ ಅಫ್ತಾಬ್ ಆಕೆಯ ದೇಹದ ಭಾಗಗಳನ್ನಿಡಲೆಂದು ಅದನ್ನಿಡಲೆಂದು ಒಂದು ಹೊಸ ಫ್ರಿಡ್ಜ್‌ನ್ನು ತೆಗೆದುಕೊಂಡು ಬಂದಿದ್ದಾನೆ. ನಂತರ ಕೊಳೆತ ವಾಸನೆ ಬಾರದಿರಲಿ ಎಂದು ಪ್ರತಿನಿತ್ಯ ಅಗರ ಬತ್ತಿ ಹಚ್ಚುತ್ತಿದ್ದ. ಅದಾದ ಬಳಿಕ ಪ್ರತಿನಿತ್ಯ ಶ್ರದ್ಧಾಳ ದೇಹದ ಒಂದೊಂದೆ ಭಾಗಗನ್ನು ದೆಹಲಿ ಕಾಡುಗಳಿಗೆ ತೆಗೆದುಕೊಂಡು ಹೋಗಿ ಹೂತುಹಾಕಿ ವಿಕೃತಿ ಮೆರೆದಿದ್ದ. ಇದನ್ನೂ ಓದಿ: ಮನೆಯಲ್ಲಿ ಶ್ರದ್ಧಾಳ ದೇಹದ ಪೀಸ್‍ಗಳಿದ್ರೂ ಬೇರೆ ಯುವತಿಯನ್ನು ಮನೆಗೆ ಕರೆದು ಸೆಕ್ಸ್ ಮಾಡ್ತಿದ್ದ!

    ಇತ್ತ ಶ್ರದ್ಧಾಳ ಸ್ನೇಹಿತರು ಶ್ರದ್ಧಾಳ ಮೊಬೈಲ್ ಸ್ವಿಚ್ಛ್ ಆಫ್ ಆಗಿರುವುದನ್ನು ಕಂಡು ಕಂಗಾಲಾಗಿದ್ದಾರೆ. ಕೆಲ ಸಮಯ ಅವಳಿಗಾಗಿ ಹುಡುಕಲು ಪ್ರಾರಂಭಿಸಿದ್ದಾರೆ. ಆದರೂ ಆಕೆಯ ಸುಳಿವೇ ಸಿಗದಿದ್ದರಿಂದ ಶ್ರದ್ಧಾಳ ಪೋಷಕರಿಗೆ ತಿಳಿಸಿದ್ದಾರೆ. ವಿಷಯ ಗೊತ್ತಾಗುತ್ತಿದ್ದಂತೆ ಶ್ರದ್ಧಾಳ ತಂದೆ ಮುಂಬೈ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ಈ ವೇಳೆ ಕೆಲ ಭಯಾನಕ ವಿಷಯ ತಿಳಿದಿದ್ದು, ಆರೋಪಿ ಅಫ್ತಾಬ್‍ನನ್ನು ಬಂಧಿಸಿದ್ದಾರೆ. ಇದನ್ನೂ ಓದಿ:  ನನ್ನನ್ನು ರಕ್ಷಿಸು, ಇಲ್ಲದಿದ್ರೆ ಆತ ಕೊಂದು ಬಿಡ್ತಾನೆ- ಸ್ನೇಹಿತನಿಗೆ ಮೊದಲೇ ತಿಳಿಸಿದ್ದ ಶ್ರದ್ಧಾ!

    Live Tv
    [brid partner=56869869 player=32851 video=960834 autoplay=true]

  • ಮನೆಯಲ್ಲಿ ಶ್ರದ್ಧಾಳ ದೇಹದ ಪೀಸ್‍ಗಳಿದ್ರೂ ಬೇರೆ ಯುವತಿಯನ್ನು ಮನೆಗೆ ಕರೆದು ಸೆಕ್ಸ್ ಮಾಡ್ತಿದ್ದ!

    ಮನೆಯಲ್ಲಿ ಶ್ರದ್ಧಾಳ ದೇಹದ ಪೀಸ್‍ಗಳಿದ್ರೂ ಬೇರೆ ಯುವತಿಯನ್ನು ಮನೆಗೆ ಕರೆದು ಸೆಕ್ಸ್ ಮಾಡ್ತಿದ್ದ!

    ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ತನ್ನೊಂದಿಗೆ ಲಿವ್ ಇನ್ ರಿಲೇಶನ್‍ಶಿಪ್‍ನಲ್ಲಿದ್ದ  (Live in relationship) ಗೆಳತಿಯ (Girlfriend) ಹತ್ಯೆ ಮಾಡಿ, ದೇಹವನ್ನು 35 ತುಂಡುಗಳನ್ನಾಗಿ ಮಾಡಿ, ಅದನ್ನು ಫ್ರಿಡ್ಜ್‌ನಲ್ಲಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಅನೇಕ ಭಯಾನಕ ಸಂಗತಿಗಳು ಬಯಲಾಗುತ್ತಿವೆ. ಕೊಲೆಗಾರ ಅಫ್ತಾಬ್, ಶ್ರದ್ಧಾಳನ್ನು (Shraddha) ಕೊಲೆ ಮಾಡಿ ಕೆಲ ದಿನಗಳ ನಂತರ ಮತ್ತೊಬ್ಬ ಮಹಿಳೆಯನ್ನು ತನ್ನ ಅಪಾರ್ಟ್‍ಮೆಂಟ್‍ಗೆ ಕರೆದು ಸೆಕ್ಸ್ ಮಾಡ್ತಿದ್ದ ಎಂಬ ವಿಷಯ ಬೆಳಕಿಗೆ ಬಂದಿದೆ.

    ಅಫ್ತಾಬ್(28) ಹಾಗೂ ಶ್ರದ್ಧಾ (27) ಇಬ್ಬರು ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾಗಿದ್ದರು. 3 ವರ್ಷದ ಹಿಂದೆ ಮುಂಬೈನಲ್ಲಿ ಭೇಟಿಯಾಗಿದ್ದರು. ಅವರು ಅದಾದ ಬಳಿಕ ದೆಹಲಿಗೆ ಬಂದು ಅಲ್ಲೂ  ಲಿವಿಂಗ್ ಇನ್ ರಿಲೆಷನ್‍ಶಿಪ್‍ನಲ್ಲಿದ್ದರು. ಅದಾದ ಬಳಿಕ ಇಬ್ಬರ ಮಧ್ಯೆ ಮದುವೆ ವಿಚಾರವಾಗಿ ಆಗಾಗ ಜಗಳವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಶ್ರದ್ಧಾಳನ್ನು ಅಫ್ತಾಬ್ ಕೊಲೆ ಮಾಡಿ ಆಕೆಯ ದೇಹವನ್ನು 35 ತುಂಡುಗಳನ್ನಾಗಿ ಮಾಡಿ, ಅದನ್ನು ಫ್ರಿಡ್ಜ್‌ನಲ್ಲಿಟ್ಟಿದ್ದ. ಅದಾದ ಬಳಿಕ ಶ್ರದ್ಧಾಳ ದೇಹದ ಭಾಗಗಳನ್ನು ದೆಹಲಿ ಕಾಡಿನಲ್ಲಿ ವಿಲೇವಾರಿ ಮಾಡಿದ್ದ.

    ಈ ಮಧ್ಯ ಅಂದರೆ ಶ್ರದ್ಧಾಳನ್ನು ಕೊಂದ 15-20 ದಿನಗಳ ನಂತರ ಅಫ್ತಾಬ್ ಅದೇ ಡೆಟಿಂಗ್ ಆ್ಯಪ್ ಮೂಲಕ ಮತ್ತೊಬ್ಬ ಯುವತಿಯನ್ನು ಭೇಟಿಯಾಗಿ ಡೇಟ್ ಮಾಡಲು ಪ್ರಾರಂಭಿಸಿದ್ದಾನೆ. ಅಷ್ಟೇ ಅಲ್ಲದೇ ಅಫ್ತಾಬ್ ಆ ಯುವತಿಯನ್ನು ಆಗಾಗ ಮನೆಗೂ ಕರೆ ತಂದು ಸೆಕ್ಸ್‌ ಮಾಡುತ್ತಿದ್ದ. ಆದರೆ ಆ ಮಹಿಳೆಯನ್ನು ಕರೆತರುವ ವೇಳೆ ಶ್ರದ್ಧಾಳ ದೇಹದ ಭಾಗಗಳನ್ನು ಫ್ರಿಡ್ಜ್‌ನಿಂದ ತೆಗೆದು ಕಬೋರ್ಡ್‍ನಲ್ಲಿ ಇಡುತ್ತಿದ್ದ ಎಂಬ ವಿಷಯ ಇದೀಗ ಬಯಲಾಗಿದೆ. ಇದನ್ನೂ ಓದಿ: ನನ್ನನ್ನು ರಕ್ಷಿಸು, ಇಲ್ಲದಿದ್ರೆ ಆತ ಕೊಂದು ಬಿಡ್ತಾನೆ- ಸ್ನೇಹಿತನಿಗೆ ಮೊದಲೇ ತಿಳಿಸಿದ್ದ ಶ್ರದ್ಧಾ!

    ಅಫ್ತಾಬ್ ಪೂನಾವಾಲಾ ಮತ್ತು ಶ್ರದ್ಧಾ ವಾಕರ್ ಏಪ್ರಿಲ್‍ನಲ್ಲಿ ದೆಹಲಿಗೆ ತೆರಳಿದರು. ಅವರಿಬ್ಬರ ಮಧ್ಯೆ ಒಂದು ಜಗಳ ಉಲ್ಬಣಗೊಂಡಿದ್ದು, ಆ ವೇಳೆ ಅಂದರೆ ಮೇ 18ರಂದು ಶ್ರದ್ಧಾಳನ್ನು ಕತ್ತು ಹಿಸುಕಿ ಅಫ್ತಾಬ್ ಕೊಲೆ ಮಾಡಿದ್ದ. ಬಾಣಸಿಗನ ತರಬೇತಿ ಪಡೆದಿದ್ದ ಅಫ್ತಾಬ್, ಶ್ರದ್ಧಾಳ ದೇಹವನ್ನು ಕತ್ತರಿಸುವ ಮೊದಲು ರಕ್ತದ ಕಲೆಗಳನ್ನು ಅನ್ನು ಹೇಗೆ ಸ್ವಚ್ಛಗೊಳಿಸಬಹುದು ಎಂದು ಗೂಗಲ್ ಮಾಡಿದ್ದನು. ಇದನ್ನೂ ಓದಿ: ದೆಹಲಿಯ ಭಯಾನಕ ಕೃತ್ಯಕ್ಕೆ ಅಮೆರಿಕದ ಥ್ರಿಲ್ಲರ್ `ಡೆಕ್ಸ್ಟರ್‌’ ಸ್ಫೂರ್ತಿ – ರೋಚಕ ಸತ್ಯ ಬಯಲು

    ಅಷ್ಟೇ ಅಲ್ಲದೇ ಶ್ರದ್ಧಾ ಕೊಲೆಯನ್ನು ಮುಚ್ಚಿಹಾಕಲು, ಅಫ್ತಾಬ್ ತನ್ನ ಸ್ನೇಹಿತರ ಜೊತೆ ಸಂಪರ್ಕದಲ್ಲಿರಲು ಆಕೆಯ ಸಾಮಾಜಿಕ ಜಾಲತಾಣದ ಖಾತೆಯನ್ನು ಬಳಸುತ್ತಿದ್ದನು. ಆದರೂ ಎರಡು ತಿಂಗಳಿಗೂ ಹೆಚ್ಚು ಕಾಲ ಆಕೆಯ ಫೋನ್ ಸ್ವಿಚ್ ಆಫ್ ಆಗಿದ್ದಾಗ ಆಕೆಯ ಸ್ನೇಹಿತರು ಅನುಮಾನಗೊಂಡು ಶ್ರದ್ಧಾಳ ಪೋಷಕರಿಗೆ ತಿಳಿಸಿದ್ದರು. ಅದಾದ ಬಳಿಕ ಆಕೆ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.

    ಘಟನೆಯೇನು?: ತನ್ನೊಂದಿಗೆ ಲಿವ್ ಇನ್ ರಿಲೇಶನ್‍ಶಿಪ್‍ನಲ್ಲಿದ್ದ ಗೆಳತಿಯ ಹತ್ಯೆ ನಡೆಸಿ, ದೇಹವನ್ನು 35 ತುಂಡುಗಳನ್ನಾಗಿ ಮಾಡಿ, ಅದನ್ನು ಫ್ರಿಡ್ಜ್‌ನಲ್ಲಿಟ್ಟಿದ್ದ. ಆನಂತರ ಬೇರೆ ಬೇರೆ ಪ್ರದೇಶಗಳಲ್ಲಿ ದೇಹದ ಭಾಗಗಳನ್ನು ಹೂತು ಹಾಕಿರುವ ಭಯಾನಕ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಈ ಅಮಾನುಷ ಕೃತ್ಯ ಎಸಗಿದ 5 ತಿಂಗಳ ಬಳಿಕ ಕೊಲೆಗಡುಕನನ್ನು ಪೊಲೀಸರು ಬಂಧಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನನ್ನನ್ನು ರಕ್ಷಿಸು, ಇಲ್ಲದಿದ್ರೆ ಆತ ಕೊಂದು ಬಿಡ್ತಾನೆ- ಸ್ನೇಹಿತನಿಗೆ ಮೊದಲೇ ತಿಳಿಸಿದ್ದ ಶ್ರದ್ಧಾ!

    ನನ್ನನ್ನು ರಕ್ಷಿಸು, ಇಲ್ಲದಿದ್ರೆ ಆತ ಕೊಂದು ಬಿಡ್ತಾನೆ- ಸ್ನೇಹಿತನಿಗೆ ಮೊದಲೇ ತಿಳಿಸಿದ್ದ ಶ್ರದ್ಧಾ!

    ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ತನ್ನ ಗೆಳೆಯನಿಂದ ಭೀಕರವಾಗಿ ಕೊಲೆಯಾಗಿದ್ದ ಶ್ರದ್ಧಾ ವಾಕರ್‌ಳ ಪರಿಸ್ಥಿತಿ ಬಗ್ಗೆ ಆಕೆಯ ಸ್ನೇಹಿತ (Friend) ತಿಳಿಸಿದ್ದಾನೆ.

    ಹೌದು.. ಕೊಲೆ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾನ ಕ್ರೂರತೆಯನ್ನು ಮೊದಲೇ ಶ್ರದ್ಧಾ(27) ತನ್ನ ಸ್ನೇಹಿತ ಲಕ್ಷ್ಮಣ್ ನಾಡಾರ್ ಜೊತೆ ಹೇಳಿಕೊಂಡಿದ್ದಳಂತೆ. ಈ ಬಗ್ಗೆ ಮಾತನಾಡಿರುವ ಲಕ್ಷ್ಮಣ್, ಶ್ರದ್ಧಾ ಹಾಗೂ ಅಫ್ತಾಬ್ ನಡುವೆ ಆಗಾಗ ಅನೇಕ ಜಗಳಗಳು ಹಾಗೂ ವಾದಗಳು ನಡೆಯುತ್ತಿದ್ದವು. ಒಮ್ಮೆ ಆಕೆ ನನ್ನನ್ನು ವಾಟ್ಸಪ್ ಮೂಲಕ ಸಂಪರ್ಕಿಸಿದ್ದಳು. ಅಷ್ಟೇ ಅಲ್ಲದೇ ಆಕೆ ಆ ರಾತ್ರಿ ಅವನೊಂದಿಗೆ ತಾನು ಇಲ್ಲೇ ಉಳಿದುಕೊಂಡರೆ ಆತ ತನ್ನನ್ನು ಕೊಲ್ಲುತ್ತಾನೆ. ದಯವಿಟ್ಟು ತನ್ನನ್ನು ಅವನ ನಿವಾಸದಿಂದ ರಕ್ಷಿಸುವಂತೆ ಬೇಡಿಕೊಂಡಿದ್ದಳು ಎಂದು ಮಾಹಿತಿ ನೀಡಿದರು.

    ಅದಾದ ಬಳಿಕ ಸ್ನೇಹಿತರೊಂದಿಗೆ ಸೇರಿ ಶ್ರದ್ಧಾಳನ್ನು ಛತ್ತರ್‍ಪುರದ ಆತನ ನಿವಾಸದಿಂದ ರಕ್ಷಿಸಿದ್ದೆವು. ಅಷ್ಟೇ ಅಲ್ಲದೇ ಘಟನೆಗೆ ಸಂಬಂಧಿಸಿ ಪೊಲೀಸರನ್ನು ಸಂಪರ್ಕಿಸುವುದಾಗಿ ಎಚ್ಚರಿಕೆಯನ್ನು ನೀಡಿದ್ದೆವು. ಆದರೆ ಶ್ರದ್ಧಾ ಆಫಾಬ್‍ನನ್ನು ಪ್ರೀತಿಸುತ್ತಿದ್ದರಿಂದ ಪೊಲೀಸರಿಗೆ ತಿಳಿಸಿರಲಿಲ್ಲ ಎಂದರು.

    ಅದಾದ ಬಳಿಕ 2 ತಿಂಗಳು ಕಾಲ ಶ್ರದ್ಧಾ ಸಂಪರ್ಕಿಸುವುದನ್ನು ನಿಲ್ಲಿಸಿದ್ದಳು. ಅಷ್ಟೇ ಅಲ್ಲದೇ ನಾವು ಯಾವುದೇ ಕರೆ, ಮೆಸೆಜ್ ಮಾಡಿದ್ದರೂ ಆಕೆಯಿಂದ ಯಾವುದೇ ಪ್ರತಿಕ್ರಿಯೆ ಬರುತ್ತಿರಲಿಲ್ಲ. ಇದರಿಂದ ನಮಗೆಲ್ಲ ಚಿಂತೆ ಆರಂಭವಾಗಿತ್ತು. ಅಷ್ಟೇ ಅಲ್ಲದೇ ನಾವು ಆಕೆಯನ್ನು ಹುಡುಕಲು ಅನೇಕ ಪ್ರಯತ್ನವನ್ನು ಪಟ್ಟೆವು. ಆದರೆ ಆಕೆ ಎಲ್ಲಿದ್ದಾಳೆ ಎನ್ನುವುದನ್ನು ನಮಗೆ ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ. ಇದರಿಂದಾಗಿ ನಾವೂ ಬೇರೆ ದಾರಿ ಸಿಗದೇ ಆಕೆಯ ಸಹೋದರಿನಿಗೆ ವಿಷಯವನ್ನು ತಿಳಿಸಿದೆವು ಎಂದು ಹೇಳಿದರು.

    ಈ ವೇಳೆ ಇದನ್ನು ತಿಳಿದ ಶ್ರದ್ಧಾ ತಂದೆ ವಿಕಾಸ್ ವಾಕರ್ ಮುಂಬೈ ಪೊಲೀಸರಿಗೆ ದೂರು ನೀಡಿದರು. ಅದಾದ ಬಳಿಕ ತನಿಖೆಯನ್ನು ಪೊಲೀಸರು ಅನೇಕ ಭಯಾನಕ ವಿಷಯವನ್ನು ತಿಳಿಸಿದ್ದಾರೆ. ಕೆಲವು ತಿಂಗಳ ಹಿಂದೆ ಅಫ್ತಾಬ್ ಬಳಿ ಶ್ರದ್ಧಾ ತನ್ನನ್ನು ಮದುವೆಯಾಗುವಂತೆ ಕೇಳಿಕೊಂಡಿದ್ದಳು. ಅದಾದ ನಂತರ ಇಬ್ಬರ ಸಂಬಂಧವು ಹದಗೆಟ್ಟಿತ್ತು. ಈ ಹಿನ್ನೆಲೆಯಲ್ಲಿ ಕೋಪಗೊಂಡ ಆಫ್ತಾಬ್, ಅಂತಿಮವಾಗಿ ಅವಳನ್ನು ಕೊಂದನು ಎಂದು ತಿಳಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಗೆಳತಿಯ ದೇಹವನ್ನು 35 ಪೀಸ್ ಮಾಡಿ, ದೆಹಲಿಯಾದ್ಯಂತ ಕಾಡುಗಳಲ್ಲಿ ಹೂತು ಹಾಕಿದ!

    ಘಟನೆಯೇನು?: ತನ್ನೊಂದಿಗೆ ಲಿವ್ ಇನ್ ರಿಲೇಶನ್‍ಶಿಪ್‍ನಲ್ಲಿದ್ದ (Live in relationship) ಗೆಳತಿಯ (Girlfriend)  ಹತ್ಯೆ ನಡೆಸಿ, ದೇಹವನ್ನು 35 ತುಂಡುಗಳನ್ನಾಗಿ ಮಾಡಿ, ಅದನ್ನು ಫ್ರಿಡ್ಜ್‍ನಲ್ಲಿಟ್ಟಿದ್ದ. ಆನಂತರ ಬೇರೆ ಬೇರೆ ಪ್ರದೇಶಗಳಲ್ಲಿ ದೇಹದ ಭಾಗಗಳನ್ನು ಹೂತು ಹಾಕಿರುವ ಭಯಾನಕ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಈ ಅಮಾನುಷ ಕೃತ್ಯ ಎಸಗಿದ 5 ತಿಂಗಳ ಬಳಿಕ ಕೊಲೆಗಡುಕನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ದೆಹಲಿಯ ಭಯಾನಕ ಕೃತ್ಯಕ್ಕೆ ಅಮೆರಿಕದ ಥ್ರಿಲ್ಲರ್ `ಡೆಕ್ಸ್ಟರ್‌’ ಸ್ಫೂರ್ತಿ – ರೋಚಕ ಸತ್ಯ ಬಯಲು

    Live Tv
    [brid partner=56869869 player=32851 video=960834 autoplay=true]

  • ಮನೆಯಲ್ಲಿದ್ದ ಫ್ರಿಡ್ಜ್ ಬ್ಲಾಸ್ಟ್ – ಮೂವರು ಸಾವು, ಇಬ್ಬರಿಗೆ ಗಾಯ

    ಮನೆಯಲ್ಲಿದ್ದ ಫ್ರಿಡ್ಜ್ ಬ್ಲಾಸ್ಟ್ – ಮೂವರು ಸಾವು, ಇಬ್ಬರಿಗೆ ಗಾಯ

    ಚೆನ್ನೈ: ಮನೆಯಲ್ಲಿದ್ದ ಫ್ರಿಡ್ಜ್ (Fridge) ಸ್ಫೋಟಗೊಂಡ ಪರಿಣಾಮ ಮೂವರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಚೆಂಗಲ್ಪಟ್ಟು ಜಿಲ್ಲೆಯ ಗುಡುವಂಚೇರಿ ಪಟ್ಟಣದಲ್ಲಿ (Guduvancheri town) ನಡೆದಿದೆ.

    ನವೆಂಬರ್ 4ರ ಶುಕ್ರವಾರ ಮುಂಜಾನೆ ಈ ಘಟನೆ ನಡೆದಿದೆ. ವರ್ಷದ ಹಿಂದೆಯಷ್ಟೇ ಗುಡುವಂಚೇರಿಯಲ್ಲಿರುವ ಆರ್‌ಆರ್ ಬೃಂದಾವನ ಅಪಾರ್ಟ್‍ಮೆಂಟ್‍ನಲ್ಲಿ ವೆಂಕಟರಾಮನ್ ಅವರು ನಿಧನರಾಗಿದ್ದರು. ಹೀಗಾಗಿ ಅವರ ಪತ್ನಿ ಗಿರೀಜಾ (63) ದುಬೈನಲ್ಲಿ (Dubai) ನೆಲೆಸಿದ್ದರು. ಆದರೀಗ ವೆಂಕಟರಾಮನ್ ಅವರ ವಾರ್ಷಿಕ ವಿಧಿಗಳನ್ನು (ಶ್ರಾದ್ಧ) ಪಾವತಿಸಲು ಗುಡುವಂಚೇರಿ ಮನೆಗೆ ಮರಳಿದ್ದರು. ಈ ವೇಳೆ ಘಟನೆ ಸಂಭವಿಸಿದೆ. ಇದನ್ನೂ ಓದಿ: ಇರಾನ್‌ನಲ್ಲಿ ಹಿಜಬ್‌ ವಿರೋಧಿಸಿ ಪ್ರತಿಭಟನೆ – 6 ವಾರಗಳಲ್ಲಿ 14,000 ಮಂದಿ ಬಂಧನ

    ಶುಕ್ರವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಫ್ರಿಡ್ಜ್ ಬ್ಲಾಸ್ಟ್ ಆದಾಗ ಮನೆಯಲ್ಲಿ ಗಿರಿಜಾ, ಅವರ ಸಹೋದರಿ ರಾಧಾ (55), ಅವರ ಸಹೋದರ ರಾಜ್‍ಕುಮಾರ್ (47), ರಾಜ್‍ಕುಮಾರ್ ಅವರ ಪತ್ನಿ ಭಾರ್ಗವಿ (35) ಮತ್ತು ಅವರ ಪುತ್ರಿ ಆರಾಧನಾ (6) ಇದ್ದರು. ಫ್ರಿಡ್ಜ್ ಬ್ಲಾಸ್ಟ್ ಆದಾಗ ಮನೆಯ ತುಂಬಾ ಹೊಗೆ ಆವರಿಸಿತ್ತು. ಇದನ್ನೂ ಓದಿ: ಸ್ಥಳೀಯ ಪೊಲೀಸರನ್ನು ಟೆಸ್ಟ್ ಮಾಡಲು ಸಂತ್ರಸ್ತೆ ವೇಷ ತೊಟ್ಟ ಐಪಿಎಸ್ ಅಧಿಕಾರಿ – ನೆಟ್ಟಿಗರಿಂದ ಮೆಚ್ಚುಗೆ

    ಫ್ರಿಡ್ಜ್ ಸ್ಫೋಟಗೊಂಡ ಶಬ್ದ ಕೇಳಿ ಅಪಾರ್ಟ್‍ಮೆಂಟ್‍ನಲ್ಲಿದ್ದ ಅಕ್ಕಪಕ್ಕದವರು ಅಲ್ಲಿಗೆ ಧಾವಿಸಿ ಬಾಗಿಲು ಒಡೆದು ಹಾಕಲು ಯತ್ನಿಸಿದ್ದಾರೆ. ಆದರೆ ದುರದೃಷ್ಟವಶಾತ್ ಸ್ಫೋಟದ ಹೊಗೆಯಿಂದ ಉಸಿರುಗಟ್ಟಿ ಗಿರಿಜಾ, ರಾಧಾ ಮತ್ತು ರಾಜ್‍ಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದೀಗ ಭಾರ್ಗವಿ ಮತ್ತು ಆರಾಧನಾ ಅವರನ್ನು ಕ್ರೋಂಪೇಟೆ ಸರ್ಕಾರಿ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಒಳಗಡೆ ಇರೋ ವಸ್ತುಗಳನ್ನು ನೋಡಿ ರೆಸಿಪಿ ವಿವರ ನೀಡಲಿದೆ ಅಮೆಜಾನ್‌ ಸ್ಮಾರ್ಟ್‌ ಫ್ರಿಡ್ಜ್‌

    ಒಳಗಡೆ ಇರೋ ವಸ್ತುಗಳನ್ನು ನೋಡಿ ರೆಸಿಪಿ ವಿವರ ನೀಡಲಿದೆ ಅಮೆಜಾನ್‌ ಸ್ಮಾರ್ಟ್‌ ಫ್ರಿಡ್ಜ್‌

    ವಾಷಿಂಗ್ಟನ್‌: ಫ್ರಿಡ್ಜ್ ಒಳಗಡೆ ವಸ್ತುಗಳು ಕೆಲವೊಮ್ಮೆ ಖಾಲಿಯಾಗುತ್ತಿದ್ದರೂ ಅದು ನಮ್ಮ ಗಮನಕ್ಕೆ ಬರುವುದಿಲ್ಲ. ಹೀಗೆ ವಸ್ತುಗಳು ಖಾಲಿಯಾಗುತ್ತಿದ್ದಂತೆ “ವಸ್ತುಗಳು ಕಡಿಮೆ ಆಗುತ್ತಿದೆ. ಖರೀದಿಸುವುದು ಒಳ್ಳೆಯದು” ಎಂಬ ಸಂದೇಶ ಬರಬೇಕು ಎಂದು ನೀವು ಕಲ್ಪನೆ ಮಾಡುತ್ತಿದ್ದರೆ ನಿಮ್ಮ ಕಲ್ಪನೆ ಮುಂದಿನ ದಿನಗಳಲ್ಲಿ ನಿಜವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

    ಆನ್‌ಲೈನ್‌ ಶಾಪಿಂಗ್‌ ದೈತ್ಯ ಅಮೆಜಾನ್‌ ಈಗ ʼಸ್ಮಾರ್ಟ್‌ ಫ್ರಿಡ್ಜ್‌ʼ ನಿರ್ಮಾಣಕ್ಕೆ ಕೈ ಹಾಕಿದೆ. ಫ್ರಿಡ್ಜ್‌ನಲ್ಲಿರುವ ವಸ್ತುಗಳು ಖಾಲಿಯಾದರೆ ಅಥವಾ ಕಡಿಮೆ ಆಗುತ್ತಿದ್ದರೆ ನೋಟಿಫಿಕೇಶನ್‌ ಬರುವಂತೆ ಅಭಿವೃದ್ಧಿ ಪಡಿಸಲಾಗುತ್ತಿದೆ.

    ಕಳೆದ 2 ವರ್ಷಗಳಿಂದ ಕಂಪನಿ ಈ ಫ್ರಿಡ್ಜ್‌ ಅಭಿವೃದ್ಧಿ ಪಡಿಸುತ್ತಿದೆ ಎಂದು ವರದಿಯಾಗಿದೆ. ಒಟ್ಟು ಈ ಸ್ಮಾರ್ಟ್‌ ಫ್ರಿಡ್ಜ್‌ ಯೋಜನೆಗೆ 50 ದಶಲಕ್ಷ ಡಾಲರ್‌(ಅಂದಾಜು 374 ಕೋಟಿ ರೂ.) ಹೂಡಿಕೆ ಮಾಡಿದೆ. ಇದನ್ನೂ ಓದಿ: ವಿಶ್ವದಲ್ಲೇ ಅತಿ ಹೆಚ್ಚು ವಿಚ್ಛೇದನ ಜೀವನಾಂಶ ಪಡೆದ ಅಮೆಜಾನ್ ಸಂಸ್ಥಾಪಕನ ಪತ್ನಿ

    ಗ್ರಾಹಕ ಏನು ಖರೀದಿಸಿದ್ದಾನೆ? ಖರೀದಿಸಿದ ವಸ್ತುಗಳು ಎಷ್ಟು ಪ್ರಮಾಣದಲ್ಲಿ ಖಾಲಿಯಾಗಿದೆ? ನೀವು ಆಗಾಗ ಖರೀದಿಸುವ ಯಾವುದಾದರೂ ವಸ್ತು ಕಡಿಮೆ ಖರೀದಿಸಿದರೆ ಸೂಚನೆ ನೀಡುತ್ತದೆ. ವಸ್ತುವಿನ ಅವಧಿ ಮುಕ್ತಾಯಗೊಳ್ಳುತ್ತಿದ್ದರೂ ಗ್ರಾಹಕರಿಗೆ ಆ ಮಾಹಿತಿಯನ್ನು ಸಹ ನೀಡಲಿದೆ.

    ಈ ಫ್ರಿಡ್ಜ್‌ಗೆ ವಾಯ್ಸ್‌ ಅಸಿಸ್ಟೆಂಟ್‌ ಸಹ ಇರಲಿದೆ. ಫ್ರಿಡ್ಜ್‌ ಒಳಗಡೆ ಇರುವ ವಸ್ತುಗಳನ್ನು ನೋಡಿ ಯಾವ ಆಡುಗೆ ಮಾಡಬಹುದು ಎಂಬುದರ ಬಗ್ಗೆ ಮಾಹಿತಿಯನ್ನು ಸಹ ನೀಡಲಿದೆ.

    ತನ್ನ ಕಿರಾಣಿ ವ್ಯಾಪಾರ ಹೆಚ್ಚಿಸಲು ಅಮೆಜಾನ್‌ ಈ ಸಾಹಸಕ್ಕೆ ಕೈ ಹಾಕಿದೆ. ಈ ಫ್ರಿಡ್ಜ್‌ ಬಿಡುಗಡೆಯಾದರೆ ಬೆಲೆ ಬಹಳ ದುಬಾರಿ ಇರಲಿದೆ. ಹೀಗಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡುವುದರ ಬಗ್ಗೆ ಅನುಮಾನವಿದೆ ಎಂದು ವರದಿಯಾಗಿದೆ.

  • ಫ್ರಿಡ್ಜ್ ಒಳಗಡೆ ವ್ಯಕ್ತಿ – ನೆಟ್ಟಿಗರಿಂದ ಫೋಟೋಗೆ ಲೈಕ್ಸ್‌ಗಳ ಸುರಿಮಳೆ

    ಫ್ರಿಡ್ಜ್ ಒಳಗಡೆ ವ್ಯಕ್ತಿ – ನೆಟ್ಟಿಗರಿಂದ ಫೋಟೋಗೆ ಲೈಕ್ಸ್‌ಗಳ ಸುರಿಮಳೆ

    ರಮಲ್ಲಾ: ಫ್ರಿಡ್ಜ್ ಒಳಗಡೆ ಇರುವ ವ್ಯಕ್ತಿ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಬೇಸರವನ್ನು ಕಳೆಯಲು ಸಯೀದ್ ಎಂಬ ಪ್ಯಾಲೇಸ್ಟಿನಿಯನ್ ವ್ಯಕ್ತಿ, ಬಿಡುವಿನ ಸಮಯದಲ್ಲಿ ರೆಫ್ರಿಜರೇಟರ್ ಬಾಗಿಲುಗಳ ಮೇಲೆ ಫೋಟೋಶಾಪ್ ಮಾಡಿ ಫೋಟೋಗಳನ್ನು ಅಂಟಿಸಿದ್ದಾರೆ, ಈ ಫೋಟೋಗಳನ್ನು ನೋಡಿದರೆ ಆತ ರೆಫ್ರಿಜರೇಟರ್ ಒಳಗಡೆ ಇದ್ದಂತೆ ಕಾಣಿಸುತ್ತದೆ.

    ಈ ವಿಚಾರವಾಗಿ ಸಯೀದ್, ನನಗೆ ಬೇಸರವಾದಾಗ ನಾನು ಫ್ರಿಡ್ಜ್ ಮೇಲೆ ಮಾಡಿರುವ ಫೋಟೋಶಾಪ್‍ಗಳನ್ನು ನೋಡುತ್ತೇನೆ. ಆಗ ನಾನು ಫ್ರಿಡ್ಜ್  ಮೇಲೆಯೇ ಇರುವಂತೆ ಕಾಣಿಸುತ್ತದೆ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ. ಅಲ್ಲದೆ ಶೇರ್ ಮಾಡಿರುವ ಈ ಎರಡು ಫೋಟೋಗಳಲ್ಲಿ, ಒಂದು ಕ್ಯಾಮೆರಾದಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳುವಂತೆ ಕಾಣಿಸುತ್ತಿದ್ದರೆ, ಮತ್ತೊಂದರಲ್ಲಿ ಸಯೀದ್ ಕೆಲವು ವಸ್ತುಗಳ ಮೇಲೆ ಕುಳಿತುಕೊಂಡಿರುವಂತೆ ಕಾಣಿಸುತ್ತದೆ.

    https://twitter.com/SaeedDiCaprio/status/1369690655795126283

    ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಈವರೆಗೂ 7,29,600 ಲೈಕ್ಸ್ ಮತ್ತು 73,700 ಕಮೆಂಟ್ಸ್ ಬಂದಿದೆ.

  • ಮೈಸೂರಿನಲ್ಲಿ ಫ್ರಿಡ್ಜ್ ಸ್ಫೋಟಗೊಂಡು ಮೂವರಿಗೆ ಗಾಯ

    ಮೈಸೂರಿನಲ್ಲಿ ಫ್ರಿಡ್ಜ್ ಸ್ಫೋಟಗೊಂಡು ಮೂವರಿಗೆ ಗಾಯ

    ಮೈಸೂರು: ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಮನೆಯಲ್ಲಿದ ಫ್ರಿಡ್ಜ್ ಸ್ಫೋಟಗೊಂಡು ಮೂವರಿಗೆ ತೀವ್ರ ಗಾಯವಾಗಿರೋ ಘಟನೆ ಮೈಸೂರಿನ ಹುಣಸೂರು ಪಟ್ಟಣದ ಲಾಲ್ ಬಂದ್ ಬೀದಿಯಲ್ಲಿ ನಡೆದಿದೆ.

    ಆಟೋ ಚಾಲಕ ಚಂದ್ರುರಿಗೆ ಸೇರಿದ ಮನೆಯಲ್ಲಿ ಈ ಅವಘಡ ನಡೆದಿದೆ. ಅವಘಡಲ್ಲಿ ಲಕ್ಷಾಂತರ ಮೌಲ್ಯದ ಗೃಹೋಪಯೋಗಿ ವಸ್ತುಗಳು ಸುಟ್ಟು ಕರಕಲಾಗಿದೆ.

    ಅನಾಹುತ ತಪ್ಪಿಸಲು ತೆರಳಿದ ನೆರೆ ಮನೆ ನಿವಾಸಿ ಮೊಹಮ್ಮದ್ ಉರ್ ಘಟನೆಯಲ್ಲಿ ತೀವ್ರ ಗಾಯಗೊಂಡು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಗ್ನಿಶಾಮಕ ದಳದವರು ಸ್ಥಳಕ್ಕೆ ಬಂದು ಬೆಂಕಿ ನಂದಿಸಿದ್ದಾರೆ.

  • ಪತ್ನಿ ಶವ ಫ್ರಿಡ್ಜ್, ಮಕ್ಕಳ ಶವ ಕಪಾಟು, ಸೂಟ್‍ಕೇಸ್, ನೆಲದ ಮೇಲೆ – ಪತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

    ಪತ್ನಿ ಶವ ಫ್ರಿಡ್ಜ್, ಮಕ್ಕಳ ಶವ ಕಪಾಟು, ಸೂಟ್‍ಕೇಸ್, ನೆಲದ ಮೇಲೆ – ಪತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

    ಲಕ್ನೋ: ಮೂವರು ಮಕ್ಕಳು, ಪತ್ನಿಯನ್ನು ವ್ಯಕ್ತಿಯೊಬ್ಬ ಹತ್ಯೆ ಮಾಡಿ ಬಳಿಕ ತಾನೂ ನೇಣಿಗೆ ಶರಣಾಗಿದ್ದಾನೆ ಎನ್ನಲಾದ ಆಘಾತಕಾರಿ ಘಟನೆಯೊಂದು ಉತ್ತರಪ್ರದೇಶದ ಅಲಹಾಬಾದಿನಲ್ಲಿ ಬೆಳಕಿಗೆ ಬಂದಿದೆ.

    ಮನೋಜ್ ಕುಶ್ವಾಹ (35) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ವ್ಯಕ್ತಿ. ಪತ್ನಿ ಶ್ವೇತಾ (30) ಮೂವರು ಪುತ್ರಿಯರಾದ ಪ್ರೀತಿ (8), ಶಿವಾನಿ (6) ಮತ್ತು ಶ್ರೇಯಾ (3) ಮೃತ ದುರ್ದೈವಿಗಳು. ಈ ಘಟನೆ ಧೂಮಂಗಂಜ್ ಪೊಲೀಸ್ ಠಾಣೆ ಪ್ರದೇಶದ ಪೀಪಲ್ ಗಯಾನ್ ನಲ್ಲಿ ಮೃತ ಕುಟುಂಬದ ಮನೆಯಲ್ಲಿಯೇ ಶವ ಪತ್ತೆಯಾಗಿದೆ.

    ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
    ಮೃತ ಮನೋಜ್ ಕುಟುಂಬದವರು ಸೋಮವಾರ ಮನೆಯ ಬಾಗಿಲು ಹಾಕಿಕೊಂಡಿದ್ದು, ಸಂಜೆಯಾದರೂ ಬಾಗಿಲು ತೆಗೆದಿರಲಿಲ್ಲ. ಆದರೆ ಮನೆಯಲ್ಲಿ ಜೋರಾಗಿ ಟಿವಿ ಮತ್ತು ರೇಡಿಯೋ ಶಬ್ದ ಕೇಳಿ ಬರುತ್ತಿತ್ತು. ಬಳಿಕ ಸ್ಥಳೀಯರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಮನೋಜ್ ಮನೆ ಬಾಗಿಲು ಬಡಿದಿದ್ದಾರೆ. ಆದರೆ ಮನೆಯ ಒಳಗಡೆಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಕೊನೆಗೆ ಬಾಗಿಲು ಮುರಿದು ಪೊಲೀಸರು ಒಳಹೋಗಿದ್ದು, ಬಾಗಿಲು ತೆರೆಯುತ್ತಿದ್ದಂತೆ ಮನೋಜ್ ಸೀಲಿಂಗ್ ಫ್ಯಾನಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಬಳಿಕ ಉಳಿದವರನ್ನು ಹುಡುಕಾಡಿದಾಗ ಪತ್ನಿ ಶ್ವೇತಾ ಶವ ಫ್ರಿಡ್ಜ್ ನಲ್ಲಿ, ಒಬ್ಬ ಮಗಳ ಶವ ಕಪಾಟಿನಲ್ಲಿ, 2ನೇ ಮಗಳ ಶವ ಸೂಟ್ ಕೇಸ್ ನಲ್ಲಿ ಮತ್ತು ಕೊನೆಯ ಮಗಳ ಶವ ನೆಲದ ಮೇಲೆ ಬಿದ್ದಿದ್ದ ಸ್ಥಿತಿಯಲ್ಲಿ ಒಟ್ಟು ಐದು ಮೃತದೇಹಗಳು ಪತ್ತೆಯಾಗಿವೆ ಎಂದು ಪೊಲೀಸ್ ಅಧಿಕಾರಿ ನಿತಿನ್ ತಿವಾರಿ ಹೇಳಿದ್ದಾರೆ.

    ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ. ಸೋಮವಾರ ರಾತ್ರಿ ಮನೆಯಲ್ಲಿ ಟಿವಿ ಮತ್ತು ರೇಡಿಯೋ ಶಬ್ದ ಕೇಳಿ ಬರುತ್ತಿತ್ತು. ಜೊತೆಗೆ ಮಕ್ಕಳು ಜೋರಾಗಿ ಅಳುತ್ತಿದ್ದ ಶಬ್ದವು ಕೇಳಿಸುತ್ತಿತ್ತು ಎಂದು ಸಹೋದರನ ಪತ್ನಿ ಹೇಳಿದ್ದಾರೆ. ಮೃತ ಮನೋಜ್ ಪತ್ನಿ ಹಾಗೂ ಮೂವರು ಮಕ್ಕಳನ್ನು ಹತ್ಯೆ ಮಾಡಿ ನಂತರ ನೇಣಿಗೆ ಶರಣಾಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.

    ಮನೋಜ್ ಮತ್ತು ಪತ್ನಿ ಮಧ್ಯೆ ಇತ್ತೀಚೆಗೆ ಜಗಳ ನಡೆಯುತ್ತಿತ್ತು ಎಂದು ಸ್ಥಳೀಯರು ಹೇಳಿಕೆ ನೀಡಿದ್ದಾರೆ. ಸದ್ಯಕ್ಕೆ ಈ ಪ್ರಕರಣದ ಬಗ್ಗೆ ಗಂಭೀರವಾಗಿ ತನಿಖೆ ಮಾಡಲಾಗುತ್ತಿದೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ವರದಿ ಬಂದ ನಂತರ ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂದು ತಿಳಿದು ಬರುತ್ತದೆ. ವೈದ್ಯಕೀಯ ವರದಿಗಾಗಿ ಕಾಯುತ್ತಿದ್ದೇವೆ. ಈ ಕುರಿತು ಎಲ್ಲ ರೀತಿಯಲ್ಲೂ ತನಿಖೆ ಮಾಡಲಾಗುತ್ತಿದೆ. ಆದರೆ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಶವ ಪತ್ತೆಯಾದ ಸ್ಥಳದಲ್ಲಿ ಯಾವ ರೀತಿಯ ಡೆತ್ ನೋಟ್ ಪತ್ತೆಯಾಗಿಲ್ಲ ಎಂದು ನಿತಿನ್ ತಿವಾರಿ ಅವರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 50 ಸಾವಿರ ಪಿಂಚಣಿಗಾಗಿ ತಾಯಿಯ ಮೃತದೇಹವನ್ನು 3 ವರ್ಷ ಫ್ರಿಡ್ಜ್ ನಲ್ಲಿಟ್ಟ ಮಗ!

    50 ಸಾವಿರ ಪಿಂಚಣಿಗಾಗಿ ತಾಯಿಯ ಮೃತದೇಹವನ್ನು 3 ವರ್ಷ ಫ್ರಿಡ್ಜ್ ನಲ್ಲಿಟ್ಟ ಮಗ!

    ಕೋಲ್ಕತ್ತಾ: ಮಗನೊಬ್ಬ ತಾಯಿಯ ಪಿಂಚಣಿ ಪಡೆಯಲು ಆಕೆಯ ಮೃತದೇಹವನ್ನು 3 ವರ್ಷ ಫ್ರಿಡ್ಜ್ ನಲ್ಲಿಟ್ಟಿದ್ದ ಘಟನೆ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಡೆದಿದೆ.

    ಸುಬ್ರೂತ್ ಮಜುಮ್ಮ್ ದಾರ್ ಪೆನ್ಷನ್ ಗಾಗಿ ತಾಯಿಯ ಮೃತದೇಹವನ್ನು ಫ್ರಿಡ್ಜ್ ನಲ್ಲಿಟ್ಟ ಮಗ. ಮೃತ ಮಹಿಳೆ ಭಾರತ ಆಹಾರ ನಿಗಮ(ಎಫ್‍ಸಿಐ)ನಿವೃತ್ತ ಅಧಿಕಾರಿಯಾಗಿದ್ದು, ತಿಂಗಳಿಗೆ 50 ಸಾವಿರ ರೂ. ಪೆನ್ಷನ್ ಪಡೆಯುತ್ತಿದ್ದರು. ಮೃತ ತಾಯಿಯ ಮಗ ಪೆನ್ಷನ್‍ಗಾಗಿ ತನ್ನ ಆಕೆಯ ಮೃತದೇಹವನ್ನು 3 ವರ್ಷಗಳ ಕಾಲ ಫ್ರಿಡ್ಜ್ ನಲ್ಲಿಟ್ಟದ್ದನು. ನಂತರ ತಿಂಗಳು ತಿಂಗಳು ಪೆನ್ಷನ್‍ಗಾಗಿ ಆತ ತನ್ನ ತಾಯಿಯ ಹೆಬ್ಬೆಟ್ಟನ್ನು ಪಡೆಯುತ್ತಿದ್ದ ಎಂದು ಹೇಳಲಾಗಿದೆ.

    ಪ್ರತಿ ತಿಂಗಳು ತನ್ನ ತಾಯಿಗೆ ಸಿಗುತ್ತಿದ್ದ ಪೆನ್ಷನ್ ಹಣವನ್ನು ಮಗ ಬ್ಯಾಂಕಿನಿಂದ ತೆಗೆಯುತ್ತಿದ್ದನು. ಮಹಿಳೆ ಸಾವಿನ ಮೂರು ವರ್ಷಗಳ ಕಾಲ ಹೀಗೆ ನಡೆಯುತ್ತಿತ್ತು. ಮೂರು ವರ್ಷ ಮೃತದೇಹವನ್ನು ಹೇಗೆ ಕಾಪಾಡಿಕೊಳ್ಳುತ್ತಿದ್ದನು ಎಂದು ಪೊಲೀಸರು ತಿಳಿಯಲು ಪ್ರಯತ್ನಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಮೂರು ವರ್ಷದಿಂದ ಮಗ ಶವವನ್ನು ಫ್ರಿಡ್ಜ್ ನಲ್ಲಿಟ್ಟಿರುವುದು ನನಗೆ ತಿಳಿದಿತ್ತು ಎಂದು ಮಹಿಳೆಯ ಪತಿ ತಿಳಿಸಿದ್ದಾರೆ.

    ಇನ್ನೂ ಆರೋಪಿಗಳಿಬ್ಬರು ತಮ್ಮ ಜೊತೆ ಮಾತನಾಡುತ್ತಿರಲಿಲ್ಲ ಎಂದು ಅಕ್ಕಪಕ್ಕದ ಮನೆಯವರು ಮಾಧ್ಯಮದಲ್ಲಿ ತಿಳಿಸಿದ್ದಾರೆ. ಮಹಿಳೆ ಮೃತಪಟ್ಟ ವಿಷಯ ತಿಳಿದಿತ್ತು ಆದರೆ ಅಂತ್ಯಸಂಸ್ಕಾರ ಮಾಡಿದ್ದಾರೋ ಇಲ್ಲವೋ ಎಂಬುದು ತಿಳಿದಿಲ್ಲ ಎಂದು ಅಕ್ಕಪಕ್ಕದ ಮನೆಯವರು ಹೇಳಿದ್ದಾರೆ.

    ಕೃತ್ಯದ ಬಗ್ಗೆ ಮೂಲಗಳ ಖಚಿತ ಮಾಹಿತಿ ತಿಳಿದು ಸುಬ್ರೂತ್ ಮಜುಮ್ಮ್‍ದಾರ್ ಮನೆಗೆ ಪೊಲೀಸರು ದಾಳಿ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಮೃತದೇಹವನ್ನು ವಶಕ್ಕೆ ಪಡೆದು ಮಗ ಹಾಗೂ ಆತನ ತಂದೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.