Tag: ಫೋಟೋ ಶೂಟ್

  • ಗಂಡು ಮಗುವಿನ ತಾಯಿಯಾದ ಮಯೂರಿ

    ಗಂಡು ಮಗುವಿನ ತಾಯಿಯಾದ ಮಯೂರಿ

    ಬೆಂಗಳೂರು: ಸ್ಯಾಂಡಲ್‍ವುಟ್ ನಟಿ ಮಯೂರಿ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂತೋಷದ ವಿಚಾರವನ್ನು ಅವರನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

     

    ನಿನ್ನೆ ನನಗೆ ಗಂಡು ಮಗುವಾಗಿದೆ. ಮದುವೆ ನಂತರ ಮತ್ತೊಂದು ಬ್ಯೂಟಿಫುಲ್ ಜರ್ನಿ ಶುರು ಮಾಡುತ್ತಿದ್ದೇನೆ. ಈ ಸುಂದರ ಭಾವನೆಯನ್ನು ವ್ಯಕ್ತಪಡಿಸಲು ಪದಗಳೆ ಸಿಗುತ್ತಿಲ್ಲ. ನಿಮ್ಮೆಲ್ಲರ ಪ್ರೀತಿ ಆಶೀರ್ವಾದ ನಮ್ಮ ಮಗುವಿನ ಮೇಲೆ ಇರಲಿ ಎಂದು ಬರೆದುಕೊಂಡು ಮಗನ ಕೈ ಹಿಡಿದಿರುವ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

     

    View this post on Instagram

     

    A post shared by mayuri (@mayurikyatari)

    ಅಭಿಮಾನಿಗಳು ಮಯೂರಿಯ ಮುದ್ದು ಮಗನಿಗೆ ಆಶೀರ್ವಾದ ಜೊತೆಯೆಲ್ಲಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಮಯೂರಿ ಗಂಡು ಮಗುವಾಗಿರುವ ಖುಷಿಯನ್ನು ಅಭಿಮಾನಿಗಳೊ0ದಿಗೆ ಕೆಲವು ಭಾವನಾತ್ಮಕ ಸಾಲುಗಳಿಂದ ಹಂಚಿಕೊಂಡಿದ್ದಾರೆ. ಗಂಡು ಮಗುನಿನ ತಾಯಿ ಆಗಿರುವ ಮಯೂರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

     

    View this post on Instagram

     

    A post shared by mayuri (@mayurikyatari)

    ಕಳೆದ ವರ್ಷ ಜೂನ್ 12 ರಂದು ತಮ್ಮ ಬಹುಕಾದ ಗೆಳೆಯ ಅರುಣ್ ಜೊತೆಗೆ ಮಯೂರಿ ದಾಂಪತ್ಯಜೀವನಕ್ಕೆ ಕಾಲಿಟ್ಟಿದ್ದರು. ನಂತರ ತಾಯಿ ಆಗುತ್ತಿರುವ ವಿಚಾರ, ಸಿಮಂತ ಫೋಟೋಗಳು ಹಾಗೂ ಬೇಬಿ ಬಂಪ್ ಫೋಟೋಗಳನ್ನು ಮಯೂರಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

     

    View this post on Instagram

     

    A post shared by mayuri (@mayurikyatari)

    ಕೆಲವು ದಿನಗಳ ಹಿಂದೆ ಬೇಬಿ ಬಂಪ್ ತೋರಿಸುತ್ತಾ ಹಾಟ್ ಫೋಟೋಶೂಟ್‍ಗೆ ಪೋಸ್ ಕೊಟ್ಟ ಫೋಟೋಗಳನ್ನು ಹಂಚಿಕೊಂಡಿದ್ದರು. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದವು. ಸಖತ್ ಮಾಡರ್ನ್ ಹಾಗೂ ಬೋಲ್ಡ್ ಆಗಿ ಫೋಟೋಶೂಟ್‍ಗೆ ಪತಿಯೊಂದಿಗೆ ನಿಂತು ಪೋಸ್ ಕೊಟ್ಟಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ಮಯೂರಿ ಪ್ರತಿಯೊಂದು ಸಂತೋಷದ ವಿಚಾರವನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.

  • ಹಾಟ್ ಫೋಟೋ ಶೂಟ್‍ಗೆ ಪೋಸ್ ಕೊಟ್ಟ ಮಯೂರಿ

    ಹಾಟ್ ಫೋಟೋ ಶೂಟ್‍ಗೆ ಪೋಸ್ ಕೊಟ್ಟ ಮಯೂರಿ

    ಬೆಂಗಳೂರು: ಬೇಬಿ ಬಂಪ್ ತೋರಿಸುತ್ತಾ ಹಾಟ್ ಫೋಟೋ ಶೂಟ್‍ಗೆ ಪೋಸ್ ಕೊಟ್ಟ ತುಂಬು ಗರ್ಭಿಣಿ ನಟಿ ಮಯೂರಿ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ.

    ನಟಿ ಮಯೂರಿ ಈಗ ತುಂಬು ಗರ್ಭಿಣಿ. ಮಯೂರಿ ಇನ್ನೇನು ಕೆಲವೇ ದಿನಗಳಲ್ಲಿ ಹೊಸ ಅತಿಥಿಯನ್ನು ಬರ ಮಾಡಿಕೊಳ್ಳಲಿದ್ದಾರೆ. ಹೀಗಿರುವಾಗಲೇ ಮಯೂರಿ ಸಖತ್ ಹಾಟ್ ಫೋಟೋ ಗಳಿಗೆ ಪೋಸ್ ಕೊಟ್ಟಿದ್ದಾರೆ.

     

    View this post on Instagram

     

    A post shared by mayuri (@mayurikyatari)

    ಇದು ತುಂಬಾ ವಿಶೇಷವಾಗಿದೆ. ಬೇಬಿ ಶೀಘ್ರದಲ್ಲೇ ಆಗಮಿಸಲಿದೆ ಎಂಮು ಬರೆದುಕೊಂಡು ಬೇಬಿ ಬಂಪ್ ಹಾಟ್ ಫೋಟೋಗಳನ್ನು ಮಯೂರಿ ತಮ್ಮ ಇನ್‍ಸ್ಟಾಗ್ರಾಮ್‍ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳನ್ನು ನೋಡಿದ ನೆಟ್ಟಿಗರು ಕಮೆಂಟ್‍ಗಳ ಸುರಿಮಳೆ ಗೈದಿದ್ದಾರೆ.

     

    View this post on Instagram

     

    A post shared by mayuri (@mayurikyatari)

    ಮಯೂರಿ ಗರ್ಭಿಣಿಯಾದಾಗಿನಿಂದ ರಿಯಾಲಿಟಿ ಶೋ ಹಾಗೂ ಫೋಟೋ ಶೂಟ್‍ಗಳಲ್ಲಿ ಸಖತ್ ಬ್ಯುಸಿಯಾಗಿ ಆ್ಯಕ್ಟಿವ್‍ಆಗಿದ್ದಾರೆ. ಸಖತ್ ಮಾಡರ್ನ್ ಹಾಗೂ ಬೋಲ್ಡ್ ಆಗಿ ಫೋಟೋ ಶೂಟ್‍ಗೆ ಪತಿಯೊಂದಿಗೆ ನಿಂತು ಪೋಸ್ ಕೊಟ್ಟಿದ್ದಾರೆ.

     

    View this post on Instagram

     

    A post shared by mayuri (@mayurikyatari)

    ದಂಪತಿ ಮುದ್ದು ಮುದ್ದಾದ ಈ ಫೋಟೋ ಗಳು ಸಖತ್ ವೈರಲ್ ಆಗುತ್ತಿವೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ ಮಯೂರಿ ಹಾಗೂ ಅರುಣ್ ಅವರಿಗೆ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ.

     

    View this post on Instagram

     

    A post shared by mayuri (@mayurikyatari)

    ಈ ಹಿಂದೆ ಸ್ನೇಹಿತರೆಲ್ಲ ಒಂದೆಡೆ ಸೇರಿ ಪಾರ್ಟಿ ಮಾಡಿ ತಂದೆ-ತಾಯಿ ಆಗುತ್ತಿರುವ ಮಯೂರಿಗೆ ಸ್ನೇಹಿತರು ಶುಭಕೋರಿ ಸಂಭ್ರಮಿಸಿದ್ದಾರೆ. ಈ ವೇಳೆ ತೆಗೆದಿರುವ ಕೆಲವು ಫೋಟೋಗಳನ್ನು ಮಯೂರಿ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ತುಂಬಾ ವಿಶೇಷವಾಗಿದೆ ಎಂದು ಬರೆದುಕೊಂಡು ಹಂಚಿಕೊಂಡಿದ್ದರು.

  • ರಾಜಕುಮಾರ ಬೆಡಗಿಯ ದುಡ್ಡಿನ ಗಮ್ಮತ್ತು- ನೋಟಿನ ಹಾರ ಹಾಕ್ಕೊಂಡು ಫೋಟೋ ಶೂಟ್

    ರಾಜಕುಮಾರ ಬೆಡಗಿಯ ದುಡ್ಡಿನ ಗಮ್ಮತ್ತು- ನೋಟಿನ ಹಾರ ಹಾಕ್ಕೊಂಡು ಫೋಟೋ ಶೂಟ್

    ಬೆಂಗಳೂರು: ನಟ, ನಟಿಯರಿಗೆ ಫೋಟೋ ಶೂಟ್ ಎಂದರೆ ಹಬ್ಬವಿದ್ದಂತೆ. ಹಲವರು ವಿವಿಧ ರೀತಿಯ, ಇನ್ನೂ ಹಲವರು ಅಚ್ಚರಿ ಪಡುವ ರೀತಿ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಾರೆ. ಇದೀಗ ರಾಜಕುಮಾರ ಸಿನಿಮಾ ಮೂಲಕ ಪರಿಚಿತರಾಗಿರುವ ತಮಿಳು ನಟಿ ಪ್ರಿಯಾ ಆನಂದ್ ಫೋಟೋ ತಮ್ಮ ವಿಭಿನ್ನ ಫೋಟೋ ಶೂಟ್ ಮೂಲಕ ಸುದ್ದಿಯಾಗಿದ್ದಾರೆ.

     

    View this post on Instagram

     

    A post shared by Priya Anand (@priyawajanand)

    ರಾಜಕುಮಾರ ಸಿನಿಮಾ ಬಳಿಕ ಜೇಮ್ಸ್ ಸಿನಿಮಾ ಮೂಲಕ ಪುನೀತ್ ರಾಜ್‍ಕುಮಾರ್ ಜೊತೆಗೆ ಪ್ರಿಯಾ ಆನಂದ್ ರೊಮ್ಯಾನ್ಸ್ ಮಾಡುತ್ತಿದ್ದಾರೆ. ಜೇಮ್ಸ್ ಚಿತ್ರೀಕರಣ ಭರದಿಂದ ಸಾಗಿದ್ದು, ಅಪ್ಪು, ಅನುಪ್ರಭಾಕರ್, ಪ್ರಿಯಾ ಆನಂದ್ ಸೇರಿದಂತೆ ಚಿತ್ರತಂಡ ಶೂಟಿಂಗ್‍ನಲ್ಲಿ ಫುಲ್ ಬ್ಯುಸಿಯಾಗಿದೆ. ಇತ್ತೀಚೆಗೆ ಬಳ್ಳಾರಿಯ ವಿವಿಧ ಭಾಗಗಳಲ್ಲಿ ಚಿತ್ರೀಕರಣ ನಡೆಪಸಿದ್ದಾರೆ.

     

    View this post on Instagram

     

    A post shared by Priya Anand (@priyawajanand)

    ಜೇಮ್ಸ್ ಮಾತ್ರವಲ್ಲದೆ ಪ್ರಿಯಾ ಆನಂದ್ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಆರೆಂಜ್ ಸಿನಿಮಾದಲ್ಲಿ ಸಹ ನಟಿಸಿದ್ದಾರೆ. ಮಾತ್ರವಲ್ಲದೆ ಶಿವರಾಜ್‍ಕುಮಾರ್ ಅವರ ಆರ್‍ಡಿಎಕ್ಸ್ ಸಿನಿಮಾಗೆ ಸಹ ಆಯ್ಕೆಯಾಗಿದ್ದಾರೆ.

    ಇದೀಗ ಎರಡು ಸಾವಿರ ರೂ.ಗಳ ಗರಿ ಗರಿ ನೋಟುಗಳ ಹಾರವನ್ನು ಕುತ್ತಿಗೆಗೆ ಹಾಕಿಕೊಂಡು ಪೋಸ್ ನೀಡಿದ್ದಾರೆ. ಈ ಫೋಟೋಗಳು ಸಖತ್ ವೈರಲ್ ಆಗಿವೆ. ಅಂದಹಾಗೆ ಈ ಫೋಟೋಗಳನ್ನು ಲಾಕ್‍ಡೌನ್ ವೇಳೆ ಹಿಂದಿಯ ‘ಎ ಸಿಂಪಲ್ ಮರ್ಡರ್ ‘ ವೆಬ್ ಸಿರೀಸ್ ಚಿತ್ರೀಕರಣದ ವೇಳೆ ತೆಗೆಯಲಾಗಿದೆ ಎನ್ನಲಾಗಿದೆ.

    ಜೇಮ್ಸ್ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿರುವ ಕುರಿತು ಈ ಹಿಂದೆ ರಾಜಕುಮಾರ ಬೆಡಗಿ ಟ್ವಿಟ್ಟರ್‍ನಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಈ ಮೂಲಕ ಅಪ್ಪು ಜೊತೆ ಎರಡನೇ ಸಿನಿಮಾದಲ್ಲಿ ನಟಿಸುತ್ತಿರುವುದನ್ನು ಖಚಿತಪಡಿಸಿದ್ದರು. ಈ ಮೂಲಕ ಕನ್ನಡದಲ್ಲಿ ನಾಲ್ಕನೇ ಸಿನಿಮಾದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಭರ್ಜರಿ ಖ್ಯಾತಿಯ ಚೇತನ್ ಕುಮಾರ್ ಜೇಮ್ಸ್ ಚಿತ್ರ ನಿರ್ದೇಶಿಸುತ್ತಿದ್ದು, ಅನು ಪ್ರಭಾಕರ್, ತೆಲುಗು ನಟ ಆದಿತ್ಯ ಮೆನನ್ ಜೇಮ್ಸ್ ಚಿತ್ರ ತಂಡವನ್ನು ಸೇರಿರುವುದು ಕುತೂಹಲ ಕೆರಳಿಸಿದೆ. ಯಾವ ರೀತಿ ಪಾತ್ರ ನಿರ್ವಹಿಸಲಿದ್ದಾರೆ, ಚಿತ್ರ ಯಾವ ರೀತಿ ಮೂಡಿ ಬರಲಿದೆ ಎಂಬುದು ಅಭಿಮಾನಿಗಳ ಪ್ರಶ್ನೆಯಾಗಿದೆ.

  • ಕರಾವಳಿಯ ಪ್ರಸಿದ್ಧ ದೇವರಗುಂಡಿ ಜಲಪಾತದಲ್ಲಿ ಮಾಡೆಲ್‍ಗಳ ಅರೆಬೆತ್ತಲೆ ಫೋಟೋ ಶೂಟ್

    ಕರಾವಳಿಯ ಪ್ರಸಿದ್ಧ ದೇವರಗುಂಡಿ ಜಲಪಾತದಲ್ಲಿ ಮಾಡೆಲ್‍ಗಳ ಅರೆಬೆತ್ತಲೆ ಫೋಟೋ ಶೂಟ್

    – ವಿವಾದಕ್ಕೆ ಸಿಲುಕಿದ ಮಾಡೆಲ್ ಬೃಂದಾ ಅರಸ್

    ಮಂಗಳೂರು: ಬೆಂಗಳೂರಿನ ಇಬ್ಬರು ಮಾಡೆಲ್ ಗಳು ಕರಾವಳಿಯ ಪುಣ್ಯಕ್ಷೇತ್ರದ ಬಳಿ ಇರುವ ದೇವರ ಜಲಪಾತದ ಎದುರು ಅರೆಬೆತ್ತಲೆಯಾಗಿ ಫೋಟೋ ಶೂಟ್ ಮಾಡಿದ್ದು, ಇದೀಗ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.

    ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ತೊಡಿಕಾನ ಗ್ರಾಮದಲ್ಲಿ 13 ಶತಮಾನದ ಇತಿಹಾಸವಿರುವ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನವಿದೆ. ಇಲ್ಲಿ ನೆಲೆಸಿರೋ ಪರಮಾತ್ಮ ಇಲ್ಲಿಂದ 2 ಕಿಲೋಮೀಟರ್ ದೂರದಲ್ಲಿರುವ ಈ ಜಲಪಾತದಲ್ಲಿ ಸ್ನಾನ ಮಾಡುತ್ತಿದ್ದ ಎಂಬ ಐತಿಹ್ಯ ಇದೆ. ಹೀಗಾಗಿ ಇದಕ್ಕೆ ದೇವರಗುಂಡಿ ಎಂದು ಜನ ಕರೆಯುತ್ತಾರೆ. ವಿಶೇಷ ದಿನಗಳಲ್ಲಿ ವರ್ಷಕ್ಕೆ ಏಳೆಂಟು ಬಾರಿ ದೇವರಹೊಂಡದಿಂದ ತೀರ್ಥವನ್ನು ದೇವಸ್ಥಾನಕ್ಕೆ ತೆಗೆದುಕೊಂಡು ಹೋಗುತ್ತಾರೆ.

    ಈ ಸ್ಥಳದಲ್ಲಿ ಸ್ಥಳಿಯರು ನೀರಿಗೆ ಇಳಿಯುವುದಿಲ್ಲ. ಅಷ್ಟು ಪವಿತ್ರ ಭಾವನೆಯಿಂದ ಇಲ್ಲಿನ ಪರಿಶುದ್ಧತೆಯನ್ನು ಕಾಪಾಡಿಕೊಂಡು ಬಂದಿದ್ದಾರೆ. ಆದರೆ ಬೆಂಗಳೂರಿನ ಮಾಡೆಲ್ ಗಳಾದ ಬೃಂದಾ ಅರಸ್ ಮತ್ತು ಆಕೆಯೊಂದಿಗೆ ಮತ್ತೊಬ್ಬಳು ಮಾಡೆಲ್ ಸೇರಿಕೊಂಡು ಬಿಕಿನಿಯಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಇದು ಸ್ಥಳೀಯರ ವಿರೋಧಕ್ಕೆ ಕಾರಣವಾಗಿದೆ.

    ಬಿಕಿನಿ ಶೂಟಿಂಗ್ ನಡೆದ ಸ್ಥಳದಲ್ಲಿ ಸುತ್ತಾಮುತ್ತ ಮನೆಗಳಿವೆ. ಆದರೂ ಹೀಗೆ ಅರೆಬೆತ್ತಲಾಗಿ ಓಡಾಡಿ ಸ್ಥಳೀಯರಿಗೆ ಮುಜುಗರವನ್ನುಂಟು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಇಂದು ಸ್ಥಳೀಯರು ಈ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿಗೆ ದೂರು ಕೂಡ ನೀಡಿದ್ದಾರೆ. ಈ ವಿಚಾರ ದೇವಸ್ಥಾನದ ಆಡಳಿತ ಮಂಡಳಿಗೂ ಕೂಡ ಗೊತ್ತಿಲ್ಲವಂತೆ. ಈ ದೇವರ ಗುಂಡಿ ಜಲಪಾತ ಇರುವುದು ದೇವಸ್ಥಾನದಿಂದ 2 ಕಿಲೋಮೀಟರ್ ದೂರದಲ್ಲಿ. ಅಲ್ಲಿ ಶೂಟ್ ಮಾಡುವ ಬಗ್ಗೆ ನಮ್ಮ ಗಮನಕ್ಕೆ ತಂದಿಲ್ಲ ಎಂದು ಆಡಳಿತ ಮಂಡಳಿಯವರು ಹೇಳಿದ್ದಾರೆ.

    ಈ ಬಗ್ಗೆ ಆಡಳಿತ ಮಂಡಳಿ ಸುಳ್ಯ ತಹಶಿಲ್ದಾರ್ ಗೆ ಮತ್ತು ಅರಣ್ಯ ಇಲಾಖೆಗೆ ದೂರು ನೀಡುವ ನಿರ್ಧಾರ ಮಾಡಿದೆ. ಹೇಳಿ ಕೇಳಿ ಇದು ಅರಣ್ಯ ಪ್ರದೇಶ. ಹೀಗೆ ನಿರ್ಜನ ಪ್ರದೇಶದಲ್ಲಿ ಎರಡ್ಮೂರು ಜನರು ಅರೆಬೆತ್ತಾಲಾಗಿದ್ದರೆ ಅವರಿಗೂ ಕೂಡ ಅಪಾಯ ಎದುರಾಗುವ ಸಾಧ್ಯತೆ ಇರುತ್ತೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

  • ಲಾಲ್‍ಬಾಗ್‍ನಲ್ಲಿ ಫೋಟೋಶೂಟ್ ನಿಷೇಧ- ತಪ್ಪಿದ್ರೆ ಠಾಣೆ ಮೆಟ್ಟಿಲು ಹತ್ಲೇಬೇಕು

    ಲಾಲ್‍ಬಾಗ್‍ನಲ್ಲಿ ಫೋಟೋಶೂಟ್ ನಿಷೇಧ- ತಪ್ಪಿದ್ರೆ ಠಾಣೆ ಮೆಟ್ಟಿಲು ಹತ್ಲೇಬೇಕು

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಲಾಲ್‍ಬಾಗ್‍ನಲ್ಲಿ ಕಳ್ಳಾಟ ಬಲು ಜೋರಾಗಿದೆ. ಬೇಡ ಬೇಡ ಅಂತ ಹೇಳಿದರೂ ಕದ್ದು ಮುಚ್ಚಿ ಮಾಡ್ತಾನೆ ಇರುತ್ತಾರೆ. ಲಾಲ್‍ಬಾಗ್‍ನಲ್ಲಿ ನಿಷೇಧ ಗೊತ್ತಿದ್ದರೂ ಫೋಟೋಶೂಟ್ ಮಾಡಿಸಿಕೊಳ್ಳುವವರು ಯಾವುದೇ ಕಾರಣಕ್ಕೆ ಸುಮ್ಮನೆ ಇರಲ್ಲ.

    ಹೌದು. ಲಾಲ್‍ಬಾಗ್‍ನಲ್ಲಿ ಕಳೆದ 6 ತಿಂಗಳಿಂದ ಚಿತ್ರೀಕರಣವನ್ನ ನಿಷೇಧಿಸಲಾಗಿದೆ. ಪ್ರಿ ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ಫೊಟೋಶೂಟ್ ಬ್ಯಾನ್ ಮಾಡಲಾಗಿದೆ. ಅದರಲ್ಲೂ ಜನರು ಮಾತ್ರ ಬಿಡಲ್ಲ. ಕದ್ದು ಮುಚ್ಚಿ ನೀ ಹಿಂಗೆ ನಿಂತ್ಕೋ, ಈ ಜಾಗದಲ್ಲಿ ಈ ಫೋಟೋ ಓಕೆ, ಮತ್ತೆ ಬ್ಯಾಗ್ರೌಂಡ್‍ಗೆ ತಕ್ಕಂತೆ ಡ್ರೆಸ್ ಚೇಂಜ್ ಮಾಡು ಅಂತ ಫೋಟೋಶೂಟ್ ಕಳ್ಳಾಟ ನಿತ್ಯ ನಡೆಯುತ್ತಿದೆ. ಇದು ತೋಟಗಾರಿಕೆ ಇಲಾಖೆ ಪ್ರಕಾರ ನಿಯಮ ಬಾಹಿರವಾಗಿದೆ.

    ಸ್ಲೋ ಲೈಫು ಬೋರ್ ಆಗಿದೆ ಅನ್ನುವಂತೆ ಎಲ್ಲರೂ ಸಿನಿಮೀಯ ಮಾದರಿಗೆ ಮೊರೆ ಹೋಗ್ತಾ ಇದ್ದಾರೆ. ಮಕ್ಕಳನ್ನ ಮರದ ಮೇಲೆ ಹತ್ತಿಸುವುದು. ಮತ್ತೆ ಅಪ್ಪ-ಅಮ್ಮನ ಮೇಲೆ ಪ್ರೀತಿಯಿಂದ ಎಗರುವುದು. ಹೀಗೆ ಮಂಗಾಟದ ಫೋಟೋ ಶೂಟ್‍ಗೆ ಮುಗಿ ಬೀಳ್ತಾ ಇದ್ದಾರೆ. ಈ ಹಿಂದೆ 2016ರಲ್ಲಿ 6 ವರ್ಷದ ವಿಕ್ರಮ್ ಎಂಬ ಬಾಲಕ ಸೆಲ್ಫಿ ತೆಗೆಸಿಕೊಳ್ಳುವಾಗ ಕಲ್ಲು ಬಿದ್ದು ಸಾವನ್ನಪ್ಪಿದ ಪ್ರಕರಣ ಈಗಲೂ ಪೋಷಕರ ಎದೆನಡುಗಿಸುತ್ತದೆ. ಈ ಹಿನ್ನೆಲೆಯಲ್ಲಿ ಕೆಲ ಕಡೆ ಸೆಲ್ಫಿ ನಿಷೇಧವಿದೆ. ಅದಕ್ಕೂ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ.

    ನಾನು ಕಾಡಿಗೆ ಹೋಗಿದ್ದೆ, ಟ್ರಕ್ಕಿಂಗ್ ಮಾಡಿದ್ದೆ. ಹೀಗೆ ಬಡಾಯಿ ಕೊಚ್ಚಿಕೊಳ್ಳಲು ಕೆಲ ಪಡ್ಡೆ ಯುವಪಡೆ ತಂಡ ಲಾಲ್‍ಬಾಗ್‍ಗೆ ಬಂದು ಬಿಡುತ್ತೆ. ಕಾಡಿನ ಸೀನ್‍ಗೆ ಮ್ಯಾಚ್ ಆಗುವಂತೆ ಇಲ್ಲೂ ಮರಗಳ ರೆಂಬೆಗಳ ಮೇಲೆ ಹತ್ತಿ ಫೋಟೋ ಕ್ಲಿಕ್ಕಿಸಿಕೊಳ್ತಾ ಇದ್ದಾರೆ. 250 ಎಕರೆಯ ಲಾಲ್‍ಬಾಗ್‍ನಲ್ಲಿ ನೂರಾರು ಕುರ್ಚಿಗಳಿವೆ. ಅದರಲ್ಲಿ ಕುಳಿತುಕೊಳ್ಳುವ ಬದಲು ಜನರು ಹುಲ್ಲಿನ ಕುಳಿತುಕೊಳ್ತಾರೆ. ಇದರಿಂದ ಸುತ್ತಮುತ್ತಲಿನವರೆಗೆ ಮುಜುಗರ. ಅದರಲ್ಲಿ ಫೋಟೋಶೂಟ್ ಬೇರೆ ಮಾಡ್ತಾರೆ. ಇದೆಲ್ಲ ತಪ್ಪು ಅಂತ ಭದ್ರತಾ ಸಿಬ್ಬಂದಿ ವಾರ್ನಿಂಗ್ ಕೊಟ್ಟರೂ ಡೋಂಟ್ ಕೇರ್ ಅಂತಾರೆ.

    ಲಾಲ್‍ಬಾಗ್‍ ಜನರ ಆರ್ಕಷಣೆ ಮಾಡುವ ಕೇಂದ್ರವಾಗಿದ್ದು, ಲಕ್ಷಾಂತರ, ಸಾವಿರಾರು ಜನರು ಭೇಟಿ ಕೊಡುತ್ತಾ ಇರುವ ಜಾಗವಾಗಿದೆ. ಹೀಗಿರೊವಾಗ ಲಾಲ್‍ಬಾಗ್‍ನಲ್ಲಿ ಈ ಫೋಟೋಶೂಟ್ ಅದಕ್ಕಾಗಿ ಬಟ್ಟೆ ಬದಲಾಯಿಸುವುದು ಸಾಕಷ್ಟು ಮುಜುಗರ ತಂದಿದೆ. ಹೀಗಾಗಿ ಸಂಪೂರ್ಣವಾಗಿ ಲಾಲ್‍ಬಾಗ್‍ನಲ್ಲಿ ಫೋಟೋಶೂಟ್ ಬ್ಯಾನ್ ಮಾಡಿದ್ದಾರೆ. ಆದರೂ ಕಳ್ಳಾಟ ಮಾಡಿ ಫೋಟೋ ಕ್ಲಿಕ್ಕಿಸೋರ ಸಂಖ್ಯೆನೇ ಜಾಸ್ತಿ. ಫೋಟೋಶೂಟ್ ನಿಷೇಧದ ನಡುವೆ ಫೋಟೋ ತೆಗೆದ್ರೆ, ಡೇಂಜರ್ ಅಂತ ಬರೆದಿರುವ ಕಡೆ ಫೋಟೊ ತೆಗೆಯುವುದು, ಅಶ್ಲೀಲವಾಗಿ ಕೂತು ಫೋಟೋ ತೆಗೆಯೋದು ಮಾಡಿದರೆ ಭದ್ರತೆ ಸಿಬ್ಬಂದಿ ವಾರ್ನಿಂಗ್ ಕೊಡ್ತಾರೆ. ಬಗ್ಗದಿದ್ರೆ ಠಾಣೆ ಮೆಟ್ಟಿಲು ಹತ್ತಬೇಕಾಗುತ್ತದೆ ಎಂದು ತೋಟಗಾರಿಕೆ ಇಲಾಖೆ ಜಂಟಿ ಆಯುಕ್ತ ಜಗದೀಶ್ ಎಚ್ಚರಿಕೆ ನೀಡಿದ್ದಾರೆ.

  • ವಿಭಿನ್ನ ಫೋಟೋ ಶೂಟ್ ಮೂಲಕ ನವದಂಪತಿ ಹೋರಾಟ

    ವಿಭಿನ್ನ ಫೋಟೋ ಶೂಟ್ ಮೂಲಕ ನವದಂಪತಿ ಹೋರಾಟ

    ರಾಯಚೂರು: ಮದುವೆ ಫೋಟೋ ಶೂಟ್ ನಲ್ಲಿ ಹಲವರು ವಿಭಿನ್ನತೆ ಮೆರೆಯುವುದನ್ನು ನೋಡಿದ್ದೇವೆ. ಆದರೆ ರಾಯಚೂರಿನ ಈ ಜೋಡಿ ವಿಭಿನ್ನತೆಯಲ್ಲೇ ಸಾಮಾಜಿಕ ಕಾಳಜಿ ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ.

    ಜಿಲ್ಲೆಯ ಮಸ್ಕಿ ತಾಲೂಕಿನ ಹಂಚಿನಾಳ (ಯು) ಗ್ರಾಮದ ಶಶಿ ಹಿರೇಮಠ ಹಾಗೂ ವಿಜಯಲಕ್ಷ್ಮಿ ದಂಪತಿ ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಊರಿನ ಹದೆಗೆಟ್ಟ ರಸ್ತೆ ಮೇಲೆ ಹರಿಯುತ್ತಿದ್ದ ಚರಂಡಿ ನೀರು, ಡಾಂಬರ್ ಕಿತ್ತು ಹೋಗಿರುವ ರಸ್ತೆಯ ಮಧ್ಯೆ ನಿಂತು ಮದುವೆಯ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ರಸ್ತೆ ಡಾಂಬರೀಕರಣ ಮಾಡಿ ಎರಡೇ ತಿಂಗಳಲ್ಲಿ ಹದಗೆಟ್ಟಿರುವುದು ಈ ಜೋಡಿಯ ಆಕ್ರೋಶಕ್ಕೆ ಕಾರಣವಾಗಿದೆ. ಮೆರನಾಳ ಗ್ರಾಮದಿಂದ ಹಂಚಿನಾಳ (ಯು) ತನಕ ನಿರ್ಮಿಸಿರುವ ರಸ್ತೆಯನ್ನು ಸರಿಪಡಿಸಲು ಈ ಜೋಡಿ ಫೋಟೋ ಶೂಟ್ ಮೂಲಕ ಆಗ್ರಹಿಸಿದೆ. ಇದನ್ನು ಓದಿ: ಇನ್ನಾದ್ರೂ ರಸ್ತೆ ಸರಿ ಮಾಡ್ರಪ್ಪ – ಹದಗೆಟ್ಟ ರಸ್ತೆ ದುಸ್ಥಿತಿ ಬಗ್ಗೆ ದಂಪತಿ, ಮಗನ ಫೋಟೋಶೂಟ್

    ಹಂಚಿನಾಳ ಮುಖ್ಯ ರಸ್ತೆಯನ್ನು 2008 ರಲ್ಲಿ ನಿರ್ಮಾಣ ಮಾಡಲಾಗಿದ್ದು, ರಸ್ತೆ ಸಂಪೂರ್ಣ ಹದೆಗೆಟ್ಟು ಚರಂಡಿ ನೀರೆಲ್ಲ ರಸ್ತೆ ಮೇಲೆ ಹರಿದು ರಸ್ತೆಯೇ ಚರಂಡಿಯಾಗಿ ಮಾರ್ಪಟ್ಟಿದೆ. ಈ ಬಗ್ಗೆ ಎಷ್ಟೇ ಬಾರಿ ಜನ ಪ್ರತಿನಿಧಿಗಳ ಗಮನಕ್ಕೆ ತಂದರೂ ಏನೂ ಪ್ರಯೋಜನವಾಗಿಲ್ಲ. ಆದ್ದರಿಂದ ಈ ಬಗ್ಗೆ ಜನ ಪ್ರತಿನಿಧಿಗಳು ಅಧಿಕಾರಿಗಳ ಗಮನ ಸೆಳೆಯಲು ನವ ಜೋಡಿ ಈ ರೀತಿ ವಿಶೇಷ ಫೋಟೋ ಶೂಟ್ ಮಾಡಿಸಿಕೊಂಡಿದೆ. ಮದುವೆ ಫೋಟೋ ಶೂಟ್ ನ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಆದರೆ ಇದು ಇಲ್ಲಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕಣ್ ತೆರೆಸಬೇಕಿದೆ.

  • ಕಬ್ಬನ್ ಪಾರ್ಕಿನಲ್ಲಿ ಫೋಟೋ ಶೂಟ್ ಮಾಡಿದ್ರೆ ಕ್ಯಾಮೆರಾ ಸೀಜ್

    ಕಬ್ಬನ್ ಪಾರ್ಕಿನಲ್ಲಿ ಫೋಟೋ ಶೂಟ್ ಮಾಡಿದ್ರೆ ಕ್ಯಾಮೆರಾ ಸೀಜ್

    ಬೆಂಗಳೂರು: ಕಬ್ಬನ್ ಪಾರ್ಕ್‍ನಲ್ಲಿ ಫೋಟೋ ಶೂಟ್‍ಗೆ ಕ್ಯಾಮೆರಾ ತಂದರೆ ಲಕ್ಷಾಂತರ ರೂಪಾಯಿ ಕ್ಯಾಮೆರಾ ಸೀಜ್ ಆಗಲಿದೆ. ಅಲ್ಲದೇ ಜೊತೆಗೆ ಫೋಟೋ ಶೂಟ್ ಮಾಡಿದರೆ ದಂಡ ಕೂಡ ಹಾಕುವ ಹೊಸ ಕಾಯ್ದೆಯನ್ನು ಜಾರಿಗೆ ತರಲು ತೋಟಗಾರಿಕಾ ಇಲಾಖೆ ನಿರ್ಧಾರ ಮಾಡಿದೆ.

    ಈಗಾಗಲೇ ಕಬ್ಬನ್ ಪಾರ್ಕ್ ಮತ್ತು ಲಾಲ್ ಬಾಗ್ ನಲ್ಲಿ ಫೋಟೋ ಶೂಟ್ ನಿಷೇಧಗೊಂಡಿದೆ. ಆದರೂ ಈ ಆದೇಶಕ್ಕೆ ಕ್ಯಾರೇ ಅನ್ನದ ಜನರು, ಪ್ರಿವೆಡ್ಡಿಂಗ್ ಫೋಟೋ ಶೂಟ್ ನಡೆಸುವಾಗ ಎಲ್ಲೆಂದರಲ್ಲಿ ಬಟ್ಟೆ ಬದಲಾಯಿಸುತ್ತಾರೆ. ಇದರಿಂದ ವಾಯುವಿಹಾರಕ್ಕೆ ಬಂದವರಿಗೆ ಇರಿಸುಮುರಿಸು ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ಸಾಕಷ್ಟು ಜನರು ಈ ವಿಚಾರವಾಗಿ ಇಲಾಖೆಗೆ ದೂರು ಕೂಡ ನೀಡಿದ್ದಾರೆ. ಜೊತೆಗೆ ಹೈ ರೆಸ್ಯೂಲಷನ್ ಇರುವ ಕ್ಯಾಮೆರಾ ಬಳಕೆಯಿಂದ ಕಬ್ಬನ್ ಪಾರ್ಕಿನ ಪಕ್ಷಿ ಸಂಕುಲಕ್ಕೂ ತೊಂದರೆಯಾಗಲಿದೆ ಎಂದು ಇಲಾಖೆ ಈ ನಿರ್ಧಾರಕ್ಕೆ ಬಂದಿದೆ.

    ಸದ್ಯವೇ ಫೋಟೋ ಶೂಟ್ ಗೆ ಬಳಸುವ ಕ್ಯಾಮೆರಾಗಳನ್ನು ಸೀಜ್ ಮಾಡಿ ದಂಡ ಕಟ್ಟಿಸಿಕೊಳ್ಳುವ ಕಾಯ್ದೆಯನ್ನು ಪ್ರಯೋಗಿಸಲು ತೋಟಗಾರಿಕಾ ಇಲಾಖೆ ಸಿದ್ಧತೆ ನಡೆಸಿದೆ.

  • ಅಮ್ಮನಾಗುತ್ತಿರುವ ಸಂತಸ ರಿವೀಲ್ ಮಾಡಿದ ಶ್ವೇತಾ ಚಂಗಪ್ಪ

    ಅಮ್ಮನಾಗುತ್ತಿರುವ ಸಂತಸ ರಿವೀಲ್ ಮಾಡಿದ ಶ್ವೇತಾ ಚಂಗಪ್ಪ

    ಬೆಂಗಳೂರು: ಮಜಾ ಟಾಕೀಸ್ ಖ್ಯಾತಿಯ ಶ್ವೇತಾ ಚಂಗಪ್ಪ ಅವರು ಅಮ್ಮ ಆಗುತ್ತಿರುವ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಪತಿಯೊಂದಿಗೆ ಬೇಬಿ ಬಂಪ್ ಫೋಟೋವನ್ನು ಹಂಚಿಕೊಂಡಿರುವ ಅವರು ಅಭಿಮಾನಿಗಳೊಂದಿಗೆ ಸಂತಸ ಹಂಚಿಕೊಂಡಿದ್ದಾರೆ.

    ಕಿರುತೆರೆಯಲ್ಲಿ ಸಾಕಷ್ಟು ಹೆಸರು ಪಡೆದಿರುವ ಶ್ವೇತಾ ಚಂಗಪ್ಪ ‘ಮಜಾ ಟಾಕೀಸ್’ ಕಾರ್ಯಕ್ರಮದ ರಾಣಿ ಪಾತ್ರದ ಮೂಲಕ ಮನೆ ಮಾತಾಗಿದ್ದಾರೆ. ಸದ್ಯ ಶೋದಿಂದ ಬ್ರೇಕ್ ಪಡೆದಿರುವ ಶ್ವೇತಾ ಅಮ್ಮನಾಗುತ್ತಿರುವ ಹರ್ಷದಲ್ಲಿದ್ದಾರೆ. ಇಂದು ಶ್ವೇತಾ ಚಂಗಪ್ಪ ಅವರ ಪತಿಯ ಹುಟ್ಟುಹಬ್ಬದ ವಿಶೇಷವಾಗಿ ಅಭಿಮಾನಿಗಳಿಗೆ ತಾವು ತಾಯಿಯಾಗುತ್ತಿರುವ ಮಾಹಿತಿ ನೀಡಿ ಆರ್ಶೀವಾದ ಕೇಳಿದ್ದಾರೆ. ಇದೇ ಸಂದರ್ಭದಲ್ಲಿ ಅಮ್ಮನಾಗುತ್ತಿರುವ ಸಂತಸದ ಬೇಬಿ ಬಂಪ್‍ನ ಫೋಟೋ ಶೂಟ್ ನಡೆಸಿದ್ದಾರೆ.

    ಮೂಲತಃ ಕೊಡಗಿನವರಾದ ಶ್ವೇತಾ ಅವರು ಕಿರಣ್ ಅಪ್ಪಚ್ಚು ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ನಿರ್ದೇಶಕ ಎಸ್. ನಾರಾಯಣ್ ಅವರ ‘ಸುಮತಿ’ ಧಾರಾವಾಹಿ ಮೂಲಕ ಕಿರುತೆರೆಗೆ ಪಾರ್ದಾಪಣೆ ಮಾಡಿದ ಅವರು, ಯಾರಿಗುಂಟು ಯಾರಿಗಿಲ್ಲ ಎಂಬ ಕಾರ್ಯಕ್ರಮದ ನಿರೂಪನೆಯನ್ನು ಮಾಡಿದ್ದಾರೆ. ಅಲ್ಲದೇ ಬಿಗ್ ಬಾಸ್ ಸೀಸನ್ 2ರಲ್ಲೂ ಭಾಗವಹಿಸಿದ್ದರು. ವರ್ಷ, ತಂಗಿಗಾಗಿ ಸಿನಿಮಾಗಳಲ್ಲೂ ನಟಿಸಿದ್ದಾರೆ. ಇವರಿಗೆ 2013ರ ಕರ್ನಾಟಕ ಸರ್ಕಾರ ನೀಡುವ ಮಾಧ್ಯಮ ಸನ್ಮಾನ ಪ್ರಶಸ್ತಿಯೂ ಲಭಿಸಿದೆ.

     

    View this post on Instagram

     

    Hi my dear friends ❣️I’m very greatful to all your LOVE and BLESSINGS showered on me all these years, for the work I have been doing and the PERSON I am♥️….. U all have known me for more than a decade????. U guys have LIKED ME, LOVED ME,n BLESSED ME for the kind of roles I have been doing in the television & cinemas???????? on this SPECIAL DAY being my HUSBAND’S @kiranappachu BIRTHDAY I want to tell you all a very SPECIAL NEWS. Happy to Announce that in my REAL life I will be portraying a Role of A “MOTHER”???? With the BLESSINGS of GOD, Me and My Hubby are gonna welcome our BUNDLE OF JOY very soon???? Need all your BEST WISHES and BLESSINGS to us and our family???? like u guys have always shown????????. LOVE YOU All????????. Photography-@aashish__photography ography. thank u soo much aashish for the beautiful pics.im happy that my first ever maternity shoot is done by u???? Makeup and hair- @karishmauthappa_makeup p. Karishma u rock girl…. amazing job. Love u???? Outfit- @paramparika_vastra . U guys are too good. And made my outfit look really cute and beautiful on pics ???? Tiyara- @sscreations719 ons719 thank u guys for the lovely tiyara which is adding it’s magic for these pics????. Love u all guys????. #happy #goodnews @bangalore_times #maternity #journey #godsgift #blessed????. #lovemylife #loveuzindagi,????

    A post shared by Swetha Changappa (@swethachangappa) on

  • ಪತಿಯಿಂದ ವಿಚ್ಛೇದನ ಪಡೆದು ಗ್ರ್ಯಾಂಡ್ ಫೋಟೋ ಶೂಟ್ ಮಾಡಿಸಿಕೊಂಡ ಮಹಿಳೆ

    ಪತಿಯಿಂದ ವಿಚ್ಛೇದನ ಪಡೆದು ಗ್ರ್ಯಾಂಡ್ ಫೋಟೋ ಶೂಟ್ ಮಾಡಿಸಿಕೊಂಡ ಮಹಿಳೆ

    – ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್

    ನವದೆಹಲಿ: ಪತಿಯಿಂದ ವಿಚ್ಛೇದನ ಪಡೆದುಕೊಂಡಿದ್ದ ಖುಷಿಯಲ್ಲಿ 47 ವರ್ಷದ ಮಹಿಳೆಯೊಬ್ಬರು ಗ್ರ್ಯಾಂಡ್ ಆಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ.

    ಮೇರಿ ಲೋಲ್ಲಿಸ್ ತಮ್ಮ 13 ವರ್ಷಗಳ ವೈವಾಹಿಕ ಜೀವನದಿಂದ ಹೊರ ಬಂದಿದ್ದಾರೆ. ಅಷ್ಟೇ ಅಲ್ಲದೇ ವಿವಾಹದ ಫೋಟೋಗಳನ್ನು ಸುಟ್ಟುಹಾಕಿ ಪತಿಯ ಮೇಲಿನ ಕೋಪವನ್ನು ಹೊರಹಾಕಿದ್ದಾರೆ.

    ಫೋಟೋ ಶೂಟ್ ಹೇಗಿದೆ?:
    ಮೇರಿ ಲೋಲ್ಲಿಸ್ ವೈನ್ ಗ್ಲಾಸ್ ಹಿಡಿಕೊಂಡು, ಮರವನ್ನು ಹಿಡಿದು ನಿಂತ, ಮದುವೆಯ ದಾಖಲೆ ಇರುವ ಹಿಡಿದು, ನೀರಿನ ಸಮೀಪದಲ್ಲಿ ಕುಳಿತು, ಮದುವೆಯ ಫೋಟೋ ಸುಟ್ಟು ಹಾಕುತ್ತಿರುವ ದೃಶ್ಯಗಳನ್ನು ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.

    ಈ ಫೋಟೋಗಳನ್ನು ನೋಡಿದ ಸಾವಿರಾರು ಮಹಿಳೆಯರು, ತಮ್ಮ ಪತಿಯೊಂದಿಗೆ ವಿಚ್ಛೆದನ ಪಡೆದುಕೊಳ್ಳಲು ಈ ಐಡಿಯಾ ಸ್ಫೂರ್ತಿದಾಯಕ ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಮೇರಿ ಲೋಲ್ಲಿಸ್ ಅವರು, ಅತ್ಯಂತ ಕೆಟ್ಟ ಸಂಬಂಧದಿಂದ ಹೊರ ಬಂದ ಪ್ರಬಲ ಮಹಿಳೆಯರನ್ನು ನಾನು ಪ್ರತಿನಿಧಿಸುವ ಆಸೆ ಹೊಂದಿದ್ದೆ. ನಾನು ಮತ್ತೆ ಸಂತೋಷವಾಗಿರಲು ಇದು ಸರಿಯಾದ ನಿರ್ಧಾರವಾಗಿದೆ. ಜೀವನದಲ್ಲಿ ಕಳೆದು ಹೋದ ಅಧ್ಯಾಯವನ್ನು ಮರೆಯಲು ನನ್ನದೆಯಾದ ಮಾರ್ಗವನ್ನು ಅನುಸರಿಸಿದ್ದೇನೆ ಎಂದು ಫೋಟೋ ಶೂಟ್‍ಗೆ ಕಾರಣ ನೀಡಿದ್ದಾರೆ.

    ಪತಿಯಿಂದ ವಿಚ್ಛೇದನ ಪಡೆದ ಮಹಿಳೆಯರು ಖುಷಿಯಾಗಿ ಜೀವನ ನಡೆಸಬೇಕು ಎನ್ನುವ ಸಂದೇಶವನ್ನು ಸಮಾಜಕ್ಕೆ ನೀಡಬೇಕಿತ್ತು. ಸಂಭ್ರಮದೊಂದಿಗೆ ಹಳೆಯ ನೆನಪುಗಳಿಂದ ಮರೆಯಬೇಕಿತ್ತು ಎಂದು ಮೇರಿ ಲೋಲ್ಲಿಸ್ ತಿಳಿಸಿದ್ದಾರೆ.

    ನನ್ನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತವೆ ಎಂದು ಭಾವಿಸಿರಲಿಲ್ಲ. ಇದು ಪ್ರಬಲ ಮಹಿಳೆಯ ನಿರ್ಧಾರವಾಗಿದ್ದರಿಂದ ಫೋಟೋಗಳು ಇಷ್ಟೊಂದು ವೈರಲ್ ಆಗಿವೆ ಎಂದು ಹೇಳಿದ್ದಾರೆ.

  • ಮೈಸೂರಲ್ಲಿ ಫೋಟೋಶೂಟ್‍ಗೆ ವಿದ್ಯಾರ್ಥಿ ಬಲಿ

    ಮೈಸೂರಲ್ಲಿ ಫೋಟೋಶೂಟ್‍ಗೆ ವಿದ್ಯಾರ್ಥಿ ಬಲಿ

    ಮೈಸೂರು: ನಿಂತಿದ್ದ ರೈಲಿನಲ್ಲಿ ಫೋಟೋ ಶೂಟ್ ಮಾಡುವ ವೇಳೆ ನಡೆದ ಅವಘಡದಲ್ಲಿ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ನಗರದ ನಾಗನಹಳ್ಳಿ ರೈಲ್ವೇ ನಿಲ್ದಾಣದ ಬಳಿ ನಡೆದಿದೆ.

    ಪ್ರೀತಂ (15) ಸಾವನ್ನಪ್ಪಿದ ವಿದ್ಯಾರ್ಥಿಯಾಗಿದ್ದು, ಹವ್ಯಾಸಿ ಫೋಟೋ ಶೂಟ್ ಮಾಡುವ ವೇಳೆ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ್ದಾನೆ. ಅವಘಡ ಕುರಿತು ಮಾಹಿತಿ ಪಡೆದು ರೈಲ್ವೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

    ಮಧ್ಯಾಹ್ನ ವೇಳೆಗೆ ಘಟನೆ ನಡೆದಿದ್ದು, ಫೋಟೋಗೆ ಪೋಸ್ ನೀಡಲು ನಿಂತ ವೇಳೆ ರೈಲ್ವೇ ವಿದ್ಯುತ್ ತಂತಿಗೆ ವಿದ್ಯಾರ್ಥಿಯ ಕೈ ಸ್ಪರ್ಶಿಸಿದ ಕಾರಣ ಸ್ಥಳದಲ್ಲೇ ಪ್ರೀತಂ ಸಾವನ್ನಪ್ಪಿದ್ದಾನೆ ಎಂಬ ಮಾಹಿತಿ ಲಭಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv