Tag: ಫೈಟ್

  • BBK-10: ವಿನಯ್ ನಂತರ ಕಾರ್ತಿಕ್ ಜೊತೆ ಫೈಟ್ ಮಾಡಿದ ಸಂಗೀತಾ

    BBK-10: ವಿನಯ್ ನಂತರ ಕಾರ್ತಿಕ್ ಜೊತೆ ಫೈಟ್ ಮಾಡಿದ ಸಂಗೀತಾ

    ವಿನಯ್ ಮತ್ತು ಸಂಗೀತಾ ನಡುವಿನ ಫೈಟ್‌ (Fight) ಈ ಸಲದ ಬಿಗ್‌ಬಾಸ್‌ (Bigg Boss Kannada) ಮನೆಯಲ್ಲಿ ಸಾಕಷ್ಟು ಏರುಪೇರುಗಳನ್ನು ಸೃಷ್ಟಿಸುತ್ತಿದೆ. ಪ್ರತಿಯೊಂದು ಹಂತದಲ್ಲಿಯೂ ಒಬ್ಬರು ಇನ್ನೊಬ್ಬರನ್ನು ಕೆಣಕುವುದು, ಮಾತಿನ ಚಕಮಕಿ ಮೊದಲಿನಿಂದಲೂ ನಡೆದೇ ಇತ್ತು. ಆಗೆಲ್ಲ ಸಂಗಿತಾಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಬೆಂಬಲಕ್ಕೆ ನಿಂತವರು ಕಾರ್ತಿಕ್. ಆದರೆ ಈಗ ವಿನಯ್‌ ಮತ್ತು ಸಂಗೀತಾ ರಾಜಿಯಾಗಿದ್ದಾರೆ.

    ಸಂಗೀತಾ (Sangeetha) ತಾವು ಆಡಿದ ‘ಥ್ರೆಟನಿಂಗ್’ ಎಂಬ ಪದವನ್ನು ಹಿಂಪಡೆದು ಕ್ಷಮೆ ಕೇಳಿದ್ದಾರೆ. ಹಾಗೆಯೇ ವಿನಯ್ ಕೂಡ, ತಮಗೆ ನಿಮ್ಮನ್ನು ಹರ್ಟ್‌ ಮಾಡುವ ಉದ್ದೇಶ ಇಲ್ಲ. ನಿಮ್ಮ ಬಗ್ಗೆ ಇನ್ನು ಎಂದಿಗೂ ಕೆಟ್ಟದಾಗಿ ಮಾತಾಡಲ್ಲ. ಹರ್ಟ್‌ ಮಾಡಲ್ಲ ಎಂದು ಹೇಳಿ ಕ್ಷಮೆ ಕೋರಿದ್ದಾರೆ. ಅಲ್ಲಿಗೆ ಅವರಿಬ್ಬರೂ ಹಗ್‌ ಮಾಡಿಕೊಳ್ಳುವುದರ ಮೂಲಕ, ಬಿಗ್‌ಬಾಸ್‌ ಮನೆಯೊಳಗಿನ ಬಹುದೊಡ್ಡ ಜಗಳವೊಂದು ಸುಖಾಂತ್ಯ ಕಂಡಿದೆ.

    ಆದರೆ ಇದುವರೆಗೆ ಬೆಸ್ಟ್‌ ಫ್ರೆಂಡ್ಸ್ ಆಗಿ ಸದಾ ಜೊತೆಗೇ ಕಾಣಿಸಿಕೊಳ್ಳುತ್ತಿದ್ದ ಕಾರ್ತಿಕ್ (Karthik) ಮತ್ತು ಸಂಗೀತಾ ನಡುವೆ ಫೈಟ್‌ ಶುರುವಾಗಿದೆ. ಇದುವರೆಗೆ ಪರಸ್ಪರ ಕಾಂಪ್ಲಿಮೆಂಟರಿಯಾಗಿಯೇ ಒದಗಿಬರುತ್ತಿದ್ದ ಅವರ ನಡುವೆ ಫೈಟ್ ಹುಟ್ಟಿಕೊಂಡಿದ್ದ ಹೇಗೆ, ಅದಕ್ಕೆ ಕಾರಣವೇನು, ಹಾಗಾದ್ರೆ ಹೊಸದೊಂದು ಜಗಳಕ್ಕೆ ಬಿಗ್‌ಬಾಸ್‌ ಮನೆ ಸಾಕ್ಷಿಯಾಗುತ್ತಿದೆಯೇ? ಹೀಗೆಲ್ಲ ಪ್ರಶ್ನೆಗಳು ಮೂಡುವುದು ಸಹಜ. ಕಾರ್ತಿಕ್ ಮತ್ತು ಸಂಗೀತಾ ನಡುವೆ ಫೈಟ್‌ ಸಿಕ್ವೆನ್ಸ್‌ ನಡೆದಿದ್ದು ನಿಜ. ಆದರದು ಕೋಪದಿಂದ ಹುಟ್ಟಿಕೊಂಡ ಫೈಟ್ ಅಲ್ಲ, ಸ್ನೇಹದಿಂದ, ಸಲಿಗೆಯಿಂದ ಹುಟ್ಟಿಕೊಂಡ ತಮಾಷೆಯ ಫೈಟ್‌.

    ಬಿಗ್‌ಬಾಸ್ ಮನೆಯ ಹಾಲ್‌ನಲ್ಲಿ ಕಾರ್ತಿಕ್ ಮತ್ತು ಸಂಗೀತಾ ಇಬ್ಬರೂ ನಿಂತಿದ್ದಾರೆ. ಸಂಗೀತಾ, ‘ಸೋಲೊ ಪರ್ಫಾರ್ಮೆನ್ಸ್‌ ನಡೀತಿದ್ಯಾ?’ ಎಂದು ಕೇಳುತ್ತಾರೆ. ಕಾರ್ತಿಕ್, ‘ಸೋಲೊ ಎಲ್ಲ ಇಲ್ಲ’ ಎಂದು ಉತ್ತರಿಸುತ್ತಾರೆ. ಹಾಗೆಯೇ, ‘ಸ್ಕಿಟ್‌ ಸೌಂಡ್ ಅದು. ಅಲ್ನೋಡು’ ಎಂದು ಸಂಗೀತಾ ಗಮನವನ್ನು ಬೇರೆ ಕಡೆಗೆ ಸೆಳೆಯುತ್ತಾರೆ. ಸಂಗೀತಾ ಅತ್ತ ನೋಡುತ್ತಿದ್ದ ಹಾಗೆಯೇ ಅವರಿಗೆ ಒಂದು ಒದೆ ಕೊಟ್ಟು ಓಡಿಹೋಗುತ್ತಾರೆ ಕಾರ್ತಿಕ್.

    ಸಂಗೀತಾ ಹುಸಿಮುನಿಸಿಂದ, ‘ಕಾರ್ತಿಕ್…  ನೋ.. ನೋ..’ ಎನ್ನುತ್ತಾರೆ. ಕಾರ್ತಿಕ್ ಮತ್ತ ಸಂಗೀತಾ ಹತ್ತಿರ ಬಂದು, ‘ಯೆಸ್‌ ಯೆಸ್‌’ ಎಂದು ಮತ್ತೆ ಒದೆಯಲು ಯತ್ನಿಸುತ್ತಾರೆ. ಆಗ ಸಂಗೀತಾ, ಕಾರ್ತಿಕ್ ಕೈ ಹಿಡಿದುಕೊಂಡು ತಾವೂ ತಿರುಗಿ ಒದೆಯುತ್ತ, ‘ಎಲ್ಲಿಗೆ ಹೊಡಿತೀನಿ ಗೊತ್ತಿಲ್ಲ’ ಎನ್ನುತ್ತಾರೆ. ಕಾರ್ತಿಕ್ ಫೈಟ್‌ ಮಾಡುವವರ ಹಾಗೆ ಹಾವಭಾವ ಮಾಡುತ್ತ ಅವರ ಎದುರಿಗೆ ನಿಲ್ಲುತ್ತಾರೆ. ಸಂಗೀತಾ ಅತ್ತ ಹೋಗುತ್ತಿದ್ದ ಹಾಗೆಯೇ, ‘ಬೇಜಾರಾಯ್ತಾ?’ ಎಂದು ಹೆಗಲ ಮೇಲೆ ಕೈ ಹಾಕಲು ಹೋಗುತ್ತಾರೆ. ಆಗ ಸಂಗೀತಾ, ‘ಅಫ್‌ಕೋರ್ಸ್‌’ ಎನ್ನುತ್ತ ಕಾರ್ತಿಕ್‌ಗೆ ಇನ್ನಷ್ಟು ಹೊಡೆಯುತ್ತಾರೆ. ಆ ರಭಸಕ್ಕೆ ಅವರ ಕಾಲಲ್ಲಿನ ಚಪ್ಪಲಿ ಬಿದ್ದು ಹೋಗುತ್ತದೆ. ಕಾರ್ತಿಕ್ ಚಪ್ಪಲಿಯನ್ನು ಒದ್ದುಕೊಂಡು ಹೋಗುತ್ತಾರೆ.

     

    ಹೀಗೆ ಪರಸ್ಪರ ತಮಾಷೆಯಾಗಿ, ಮಾಕ್‌ ಫೈಟ್ ಮಾಡುತ್ತ ಕಳೆದ ಚಂದದ ಕ್ಷಣಗಳು ಈ ವಿಡಿಯೊದಲ್ಲಿ ಸೆರೆಯಾಗಿವೆ. ಈ ಫೈಟ್‌ ಸಂಗೀತಾ ಮತ್ತು ಕಾರ್ತಿಕ್ ಮಧ್ಯೆ ಬಿರುಕು ಮೂಡಿಸುವುದಲ್ಲ, ಅವರ ಸ್ನೇಹಸಂಬಂಧವನ್ನು ಇನ್ನಷ್ಟು ಗಟ್ಟಿಕೊಳಿಸುವಂತೆ ಕಾಣಿಸುತ್ತದೆ. ಈ ಎಲ್ಲ ಕ್ಷಣಗಳನ್ನು ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರದಲ್ಲಿ JioCinema ಬಿತ್ತರಿಸಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅನ್ ಲಾಕ್ ರಾಘವನ ವಿಭಿನ್ನ ಪ್ರಯತ್ನ : ಹಾಡಿನಲ್ಲೇ ಫೈಟ್ ಮಿಕ್ಸ್

    ಅನ್ ಲಾಕ್ ರಾಘವನ ವಿಭಿನ್ನ ಪ್ರಯತ್ನ : ಹಾಡಿನಲ್ಲೇ ಫೈಟ್ ಮಿಕ್ಸ್

    ಚಿತ್ರೀಕರಣ ಶುರುವಾದಾಗಿನಿಂದಲೂ, ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಸಿರುವ ಚಂದನವನದ ಚಿತ್ರಗಳಲ್ಲಿ ಒಂದು ‘ಅನ್‌ಲಾಕ್ ರಾಘವ’ (Unlock Raghava). ಈಗಾಗಲೇ ಡಬ್ಬಿಂಗ್ ಮುಗಿಸಿರುವ ಅನ್‌ಲಾಕ್ ರಾಘವ ಚಿತ್ರದ ಪೋಸ್ಟ್ ಪ್ರೊಡಕ್ಷನ್‌ ಕಾರ್ಯ ಭರದಿಂದ ಸಾಗಿದೆ. ವಿಶೇಷವೆಂದರೆ ಈ ಸಿನಿಮಾದ ಫೈಟ್‌ಗಳು (Fights) ಈಗಾಗಲೇ ಎಲ್ಲರ ಗಮನ ಸೆಳೆದಿದೆ.

    ಈ ಚಿತ್ರದಲ್ಲಿ ನಾಲ್ಕೂವರೆ ಫೈಟ್ ಗಳಿವೆ. ಈ ಅರ್ಧ ಫೈಟ್ ಒಂದು ಹಾಡಿನ ನಡುವೆ ಬರುತ್ತದೆ. ಚಿತ್ರಕತೆಯ ಹಂತದಲ್ಲಿ ಈ ಹಾಡನ್ನು ನಾವು ಸೇರಿಸಿರಲಿಲ್ಲ. ಬಳಿಕ, ಆ ಸೀಕ್ವೆನ್ಸ್ ನಲ್ಲಿ ಒಂದು ಹಾಡಿದ್ದರೆ ಹೇಗೆ ಎಂಬ ಆಲೋಚನೆ ಬಂತು. ಅದನ್ನು ಇನ್ ಕಾರ್ಪೋರೇಟ್ ಮಾಡಿದಾಗ ಈ ಸೀಕ್ವೆನ್ಸ್ ತುಂಬಾ ಬ್ಯೂಟಿಫುಲ್ ಆಗಿ ಮೂಡಿಬಂದಿದೆ. ನಮ್ಮ ಚಿತ್ರದಲ್ಲಿ ಅಭಿನಯಿಸಿರುವ ಎಲ್ಲಾ ಕಲಾವಿದರು ಡಬ್ಬಿಂಗ್ ಸಮಯದಲ್ಲಿ ಆ ಹಾಡನ್ನು ನೋಡಿ, ಬಹಳ ಮೆಚ್ಚಿದ್ದಾರೆ. ಜೊತೆಗೆ ಆ ಹಾಡು, ಸಿನಿಮಾದ ಟ್ರಂಪ್ ಕಾರ್ಡ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದಿದ್ದಾರೆ. ಈ ಆಲೋಚನೆಗೆ ಸಾಥ್ ಕೊಟ್ಟ ನಿರ್ಮಾಪಕರಾದ ಮಂಜುನಾಥ ಡಿ ಅವರು, ಸಂಗೀತ ನಿರ್ದೇಶಕರಾದ ಅನೂಪ್ ಸೀಳಿನ್, ಡಿಒಪಿ ಲವಿತ್,  ಸಾಹಸ ನಿರ್ದೇಶಕರಾದ ಅರ್ಜುನ್ ಮಾಸ್ಟರ್,  ನೃತ್ಯ ನಿರ್ದೇಶಕರಾದ ಮುರುಳಿ ಮಾಸ್ಟರ್, ಎಡಿಟರ್ ಅಜಯ್ ಎಲ್ಲರಿಗೂ ತುಂಬಾ ಥ್ಯಾಂಕ್ಸ್. ಕಾಂತಾರ ಸಿನಿಮಾದ ವರಾಹ ರೂಪಂ ಹಾಡನ್ನು ಹಾಡಿರುವ ಸಾಯಿ ವಿಘ್ನೇಶ್ ಈ ಹಾಡನ್ನು ಹಾಡಿರುವುದು ಮತ್ತೊಂದು ವಿಶೇಷ ಎಂದಿದ್ದಾರೆ ಚಿತ್ರದ ನಿರ್ದೇಶಕರಾದ ದೀಪಕ್ ಮಧುವನಹಳ್ಳಿ.

    ಎಡಿಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್‌ಗೆ ಹೋಗುವ ಮುನ್ನ ಅನ್‌ಲಾಕ್ ರಾಘವ ಸಿನಿಮಾವನ್ನು ನೋಡಿರುವ ಚಲನಚಿತ್ರ ನಿರ್ಮಾಪಕರು ಹಾಗೂ ಚಿತ್ರ ತಂಡ ಸಂತೋಷ ಪಟ್ಟಿದ್ದಾರೆ. ಈ ವರ್ಷದ ನಿರೀಕ್ಷಿತ ಚಲನಚಿತ್ರಗಳಲ್ಲಿ,  ನಮ್ಮ ಅನ್‌ಲಾಕ್ ರಾಘವ ಸಿನಿಮಾ ಸೇರುವುದರಲ್ಲಿ ಯಾವುದೇ ಅನುಮಾನವೇ ಇಲ್ಲ ಎಂದು ನಿರ್ಮಾಪಕರು ಹರ್ಷ ವ್ಯಕ್ತಪಡಿಸಿದ್ದಾರೆ.

    ಇಡೀ ಸಿನಿಮಾದಲ್ಲಿ ನಾಯಕರಾದ ಮಿಲಿಂದ್ ಗೌತಮ್ ಅವರು ತುಂಬಾ ಹ್ಯಾಂಡ್ಸಮ್ ಆಗಿ ಮಿಂಚಿದ್ದಾರೆ. ಬಹಳ ಮುಖ್ಯವಾಗಿ ಸಾಹಸ ಸೀಕ್ವೆನ್ಸ್ ಗಳನ್ನು ನೋಡಿದಾಗ ನಮ್ಮ ಕನ್ನಡಕ್ಕೆ ಪ್ರಾಮಿಸಿಂಗ್ ಕಮರ್ಷಿಯಲ್ ಹೀರೋ ಆಗುವುದರಲ್ಲಿ ಅನುಮಾನವೇ ಇಲ್ಲ. ಜೊತೆಗೆ ಬ್ಯೂಟಿಫುಲ್ ಆಗಿರೋ ನಾಯಕಿ ರೇಚಲ್ ಡೇವಿಡ್ ಅವರೊಂದಿಗಿನ ಎಲ್ಲಾ ಸೀನ್‌ಗಳು ಮ್ಯಾಜಿಕಲ್ ಆಗಿ ಮೂಡಿಬಂದಿವೆ ಎನ್ನುತ್ತಿದೆ ಚಿತ್ರ ತಂಡ.

    ಇಲ್ಲಿಯವರೆಗೂ ನಮಗೆ ಸಿಕ್ಕಿರುವ ಮಾಹಿತಿಯಂತೆ ಅನ್‌ಲಾಕ್ ರಾಘವ ಚಿತ್ರ ಕಲರ್‌ಫುಲ್ ಆಗಿದ್ದು, ಹ್ಯೂಮರಸ್ ಮಜವನ್ನು ಉಣ ಬಡಿಸೋ ಕಮರ್ಷಿಯಲ್ ಸಿನಿಮಾ ಆಗಿದೆ.  ಈಗಾಗಲೇ ಎಡಿಟಿಂಗ್ ಮುಗಿಸಿ, ಪೋಸ್ಟ್ ಪ್ರೊಡಕ್ಷನ್‌ ನ ಉಳಿದ ಹಂತಗಳಲ್ಲಿ ತೊಡಗಿಸಿಕೊಂಡಿರುವ ಅನ್‌ಲಾಕ್ ರಾಘವ ಬೇಗನೇ ತೆರೆಗಪ್ಪಳಿಸಿ,    ಚಿತ್ರಪ್ರೇಮಿಗಳಿಗೆ ಮನರಂಜನೆ ಉಣಬಡಿಸಲಿದ್ದಾನೆ ಎಂಬ ಕಾತುರದಲ್ಲಿ ಸಿನಿಪ್ರೇಮಿಗಳಿದ್ದಾರೆ.

    ಅನ್‌ಲಾಕ್ ರಾಘವ ಚಿತ್ರವನ್ನು ಮಯೂರ ಮೋಷನ್ ಪಿಕ್ಚರ್ಸ್ ಬ್ಯಾನರ್‌ ನಡಿ ಮಂಜುನಾಥ ಡಿ ಹಾಗೂ ಗಿರೀಶ್ ಕುಮಾರ್ ಜಂಟಿಯಾಗಿ ನಿರ್ಮಿಸುತ್ತಿದ್ದು, ದೀಪಕ್ ಮಧುವನಹಳ್ಳಿ (Deepak Madhuvanahalli) ಅವರು ನಿರ್ದೇಶಕರ ಕ್ಯಾಪ್ ತೊಟ್ಟಿದ್ದಾರೆ. ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸತ್ಯಪ್ರಕಾಶ್ ಕಥೆ-ಚಿತ್ರಕಥೆ-ಸಂಭಾಷಣೆ ಬರೆದಿದ್ದು, ಲವಿತ್ ಛಾಯಾಗ್ರಾಹಣ, ಅನೂಪ್ ಸೀಳಿನ್ ಸಂಗೀತ, ಅಜಯ್ ಕುಮಾರ್ ಸಂಕಲನ ಚಿತ್ರಕ್ಕಿದೆ. ಮುರಳಿ ಮಾಸ್ಟರ್ ಹಾಗೂ ಧನಂಜಯ್ ಮಾಸ್ಟರ್ ನೃತ್ಯ ನಿರ್ದೇಶನದಲ್ಲಿ ಹಾಡುಗಳು ಮೂಡಿಬಂದಿದ್ದು, ವಿನೋದ್ ಮಾಸ್ಟರ್ ಮತ್ತು ಅರ್ಜುನ್ ಮಾಸ್ಟರ್ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದಾರೆ.

    ಮಿಲಿಂದ್ ಗೌತಮ್ (Milind Gautham)ನಾಯಕನಾಗಿ ಹಾಗೂ ರೇಚಲ್ ಡೇವಿಡ್ (Rachel David) ಚಿತ್ರದ ನಾಯಕಿಯಾಗಿ ಅಭಿನಯಿಸಿದ್ದಾರೆ. ಸಾಧುಕೋಕಿಲ, ಅವಿನಾಶ್, ಶೋಭರಾಜ್, ರಮೇಶ್ ಭಟ್, ವೀಣಾ ಸುಂದರ್, ಸುಂದರ್, ಧರ್ಮಣ್ಣ ಕಡೂರು, ಸಾಯಿ ಕುಡ್ಲ, ಭೂಮಿ ಶೆಟ್ಟಿ, ಮೂಗು ಸುರೇಶ್, ಅಥರ್ವ ಪ್ರಕಾಶ್, ಶ್ರೀದತ್ತ, ಬೃಂದಾ ವಿಕ್ರಮ್ ಮೊದಲಾದವರು ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನೀನಾ, ನಾನಾ ಅಂತ ಕಾಳಗಕ್ಕಿಳಿದ ಹಾವು, ನಾಯಿ – ಸಾವಿನಲ್ಲಿ ಅಂತ್ಯ

    ನೀನಾ, ನಾನಾ ಅಂತ ಕಾಳಗಕ್ಕಿಳಿದ ಹಾವು, ನಾಯಿ – ಸಾವಿನಲ್ಲಿ ಅಂತ್ಯ

    ಗದಗ: ಸಾಮಾನ್ಯವಾಗಿ ಹಾವು, ಮುಂಗುಸಿ ಕಾದಾಟ ನಡೆಸುವುದನ್ನು ನೋಡಿರುತ್ತೀರಾ. ಅಷ್ಟೇ ಯಾಕೆ ಹದ್ದು ಮತ್ತು ಹಾವು ಜಗಳ ಆಡಿರುವುದನ್ನು ನೋಡಿರುತ್ತೀರಾ. ಆದರೆ ಹಾವು ಹಾಗೂ ನಾಯಿ ನೀನಾ, ನಾನಾ ಎಂದು ಪರಸ್ಪರ ಜಗಳ ಆಡಿರುವುದನ್ನು ಎಲ್ಲಾದರೂ ನೋಡಿದ್ದೀರಾ? ಹಾಗದರೆ ಈ ಸ್ಟೋರಿ ಓದಿ..

    ಹೌದು, ಗದಗ ಜಿಲ್ಲೆ ನರಗುಂದ ತಾಲೂಕಿನ ಹದಲಿ ಗ್ರಾಮದಲ್ಲಿ ಹಾವು ಮತ್ತು ನಾಯಿ ಪರಸ್ಪರ ಕಿತ್ತಾಟ ನಡೆಸಿದೆ. ಗ್ರಾಮದ ಜಮೀನಿ ಹಾವು ನೋಡಿದ ನಾಯಿ ಕಾಳಗಕ್ಕಿಳಿದಿದೆ. ಈ ವೇಳೆ ನಾಯಿಯನ್ನು ನೋಡಿ ಹಾವು ಬುಸುಗುಡುತ್ತಿದ್ದರೆ, ಕೊಂಚವು ಹಿಂದೆ ಸರಿಯದೇ ನಾಯಿ ನಾನು ನೀನಗೇನು ಕಡಿಮೆ ಎಂಬಂತೆ ಗುರ್ ಗುರ್ ಎಂದು ರೊಚ್ಚಿಗೆದಿದೆ. ಇನ್ನೂ ಈ ದೃಶ್ಯ ನೋಡಿ ಗ್ರಾಮಸ್ಥರು ಕೂಡ ಭಯಭೀತರಾಗಿ ಶಾಕ್ ಆಗಿದ್ದಾರೆ. ಇದನ್ನೂ ಓದಿ: ದಾವೂದ್ ಇಬ್ರಾಹಿಂ ಸಹೋದರನ ಕಡೆಯಿಂದ ಸಾಧ್ವಿ ಪ್ರಜ್ಞಾ ಠಾಕೂರ್‌ಗೆ ಕೊಲೆ ಬೆದರಿಕೆ

    ರೈತ ಶೇಖಪ್ಪ ಚಲವಾದಿ ತನ್ನ ನಾಯಿಯೊಂದಿಗೆ ಜಮೀನಿಗೆ ಬಂದ ಸಂದರ್ಭ ನಾಗರಹಾವು ಕಾಣಿಸಿಕೊಂಡಿದ್ದು, ನಾಯಿ ಹಾವಿನ ಜೊತೆ ಸೆಣಸಾಡಿದೆ. ನಾಯಿ ಹಾವಿನ ಬಾಲ ಕಚ್ಚಿ ಗಾಯಗೊಳಿಸಿದರೆ, ಹಾವು ಕೂಡ ನಾಯಿಯ ಮೇಲೆ ನಿರಂತರವಾಗಿ ಅಟ್ಯಾಕ್ ಮಾಡಿ ಎಲ್ಲೆಂದರಲ್ಲಿ ಕಚ್ಚಿ ಗಾಯಗೊಳಿಸಿದೆ. ಈ ಎರಡು ಉಭಯ ಪ್ರಾಣಿಗಳನ್ನು ಬಿಡಿಸಲು ಎಷ್ಟೇ ಪ್ರಯತ್ನಿಸಿದರೂ ಯಾರಿಗೂ ಅಂಜದೇ ಎರಡು ಪ್ರಾಣಿ ಜಿದ್ದಾ-ಜಿದ್ದಿ ನಡೆಸಿದೆ. ಕೊನೆಗೆ ಸೋಲು ಅನುಭವಿಸಲು ಇಷ್ಟಪಡದ ಎರಡು ಪ್ರಾಣಿಗಳ ಕಾದಾಟ ಸಾವಿನಲ್ಲಿ ಅಂತ್ಯ ಕಂಡಿದೆ.

    ಕೂಡಲೇ ರೈತ ಶೇಖಪ್ಪ ಚಲವಾದಿ ಜಮೀನಿಗೆ ಪಶು ವೈದ್ಯರನ್ನು ಕರೆಯಿಸಿ ತನ್ನ ಸಾಕು ನಾಯಿಯ ಜೀವ ಉಳಿಸಲು ಪ್ರಯತ್ನಿಸಿದರೂ ಅಷ್ಟೊತ್ತಿಗಾಗಲೇ ನಾಯಿ ಸಾವನ್ನಪ್ಪಿದೆ. ಕಣ್ಣ ಮುಂದೆಯೇ ತಮ್ಮ ಪ್ರೀತಿಯ ನಾಯಿ ಮೃತಪಟ್ಟಿದ್ದು, ಶೇಖಪ್ಪರಿಗೆ ಭಾರೀ ಆಘಾತವಾಗಿದೆ. ಇದನ್ನೂ ಓದಿ: WWE ಸಿಇಒ ಸ್ಥಾನದಿಂದ ಹೊರನಡೆದ ವಿನ್ಸ್ ಮೆಕ್ ಮಹೊನ್

    Live Tv

  • ಅಪ್ಪಿಕೊಂಡು ಕಾಂಗರೂಗಳ ಫೈಟ್ – ವೀಡಿಯೋ ನೋಡಿ ಕನ್ಫೂಸ್ ಆದ ನೆಟ್ಟಿಗರು

    ಅಪ್ಪಿಕೊಂಡು ಕಾಂಗರೂಗಳ ಫೈಟ್ – ವೀಡಿಯೋ ನೋಡಿ ಕನ್ಫೂಸ್ ಆದ ನೆಟ್ಟಿಗರು

    ಕಾಂಗರೂಗಳ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ವೀಡಿಯೋ ನೋಡಿ ನೆಟ್ಟಿಗರು ಫುಲ್ ಕನ್ಫ್ಯೂಷನ್ ಆಗಿದ್ದಾರೆ.

    ಹೌದು ವೀಡಿಯೋದಲ್ಲಿ ಎರಡು ಕಾಂಗರೂಗಳು ಒಂದಕ್ಕೊಂದು ಹಿಡಿದುಕೊಂಡು ಗಟ್ಟಿಯಾಗಿ ತಬ್ಬಿಕೊಂಡಿರುತ್ತದೆ. ಆದರೆ ಇದಕ್ಕಿದ್ದಂತೆ ಆದ್ಯಾಕೋ ಎರಡು ಕಾಂಗರೂ ತಮ್ಮ ಕಾಲುಗಳಲ್ಲಿ ಒದೆಯುವ ಮೂಲಕ ಜಗಳವಾಡಲು ಆರಂಭಿಸುತ್ತದೆ. ಈ ಜಗಳ ನೋಡಲು ಅಷ್ಟೇನೂ ಗಂಭೀರವಾಗಿ ಕಾಣಿಸದಿದ್ದರೂ, ಇಬ್ಬರೂ ಒಡಹುಟ್ಟಿದವರು ಹೇಗೆ ಕಿತ್ತಾಡುತ್ತಾರೋ ಆ ರೀತಿ ಜಗಳವಾಡುತ್ತದೆ.

    ಈ ವೇಳೆ ಎರಡು ಕಾಂಗರೂಗಳ ಕಾಲಿನಲ್ಲಿ ಒಂದಕ್ಕೊಂದು ಒದೆಯಲು ಪ್ರಯತ್ನಸುತ್ತಿರುವುದನ್ನು ಕಂಡು ಗೊಂದಲಗೊಂಡ ಮೂರನೇ ಕಾಂಗರೂ ಅವರಿಬ್ಬರ ಮಧ್ಯೆ ಪ್ರವೇಶಿಸುತ್ತದೆ. ವೀಡಿಯೋದಲ್ಲಿ ಮೂರನೇ ಕಾಂಗರೂ ಅವರಿಬ್ಬರನ್ನು ಬಿಡಿಸುತ್ತಾ ಮತ್ತೊಂದು ಕಾಂಗರೂಗೆ ಚುಂಬಿಸಲು ಪ್ರಯತ್ನಿಸುತ್ತಿರುವಂತೆ ಕಾಣಿಸುತ್ತದೆ.

    15 ಸೆಕೆಂಡ್ ಇರುವ ಈ ವೀಡಿಯೋವನ್ನು ನೇಚರ್ ಆ್ಯಂಡ್ ಅನಿಮಲ್ಸ್ ಎಂಬ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದ್ದು, ಈವರೆಗೂ ಸುಮಾರು 36 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, ಹಲವಾರು ಕಾಮೆಂಟ್‍ಗಳ ಸುರಿಮಳೆ ಹರಿದು ಬರುತ್ತಿದೆ.

  • ಬಸ್‍ಗಾಗಿ ಸಿನಿಮಾ ಶೈಲಿಯಲ್ಲಿ ಬಡಿದಾಡಿದ ವಿದ್ಯಾರ್ಥಿಗಳು

    ಬಸ್‍ಗಾಗಿ ಸಿನಿಮಾ ಶೈಲಿಯಲ್ಲಿ ಬಡಿದಾಡಿದ ವಿದ್ಯಾರ್ಥಿಗಳು

    ಯಾದಗಿರಿ: ಬಸ್‍ಗಾಗಿ ವಿದ್ಯಾರ್ಥಿಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಪುರ ತಾಲೂಕಿನ ಗುಂಡ್ಲಾಪುರದಲ್ಲಿ ನಡೆದಿದೆ.

    ಬಸ್‍ಗಾಗಿ ನಗನೂರು ಮತ್ತು ಗುಂಡ್ಲಾಪುರ ಗ್ರಾಮದ ಕಾಲೇಜು ವಿದ್ಯಾರ್ಥಿಗಳು ಸಿನಿಮಾ ಶೈಲಿಯಲ್ಲಿ ಪರಸ್ಪರ ಒಬ್ಬರಿಗೊಬ್ಬರು ಬಡಿದಾಡಿಕೊಂಡಿದ್ದಾರೆ.

    ನಗನೂರ ಮತ್ತು ಗುಂಡ್ಲಾಪುರ ಮಾರ್ಗದಲ್ಲಿ ಬರುವ ವಿದ್ಯಾರ್ಥಿಗಳಿಗೆ ಬಸ್ ಸಮಸ್ಯೆಯಿದೆ. ಹೀಗಾಗಿ ಗುಂಡ್ಲಾಪುರ ಗ್ರಾಮದ ವಿದ್ಯಾರ್ಥಿಗಳಿಗೆ ಬೆಳಗ್ಗೆ 7:30ಕ್ಕೆ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ಹೀಗಿದ್ದರೂ ವಿಶೇಷ ಬಸ್‍ನಲ್ಲಿ ತೆರಳದ ಗುಂಡ್ಲಾಪುರ ವಿದ್ಯಾರ್ಥಿಗಳು 8 ಗಂಟೆಗೆ ನಗನೂರಿಂದ ಬರುವ ಬಸ್‍ನಲ್ಲಿ ಬರಲು ಮುಂದಾಗುತ್ತಿದ್ದಾರೆ.

    ಇದರಿಂದಾಗಿ ಬಸ್ ಸಂಪೂರ್ಣ ಭರ್ತಿಯಾಗಿ ನಗನೂರಿನ ವಿದ್ಯಾರ್ಥಿಗಳಿಗೆ ತೀವ್ರ ಸಮಸ್ಯೆಯಾಗುತ್ತಿದೆ. ಈ ವಿಚಾರಕ್ಕೆ ಇಂದು ಗುಂಡ್ಲಾಪುರ ಬಳಿ ಎರಡು ಗ್ರಾಮದ ವಿದ್ಯಾರ್ಥಿಗಳು ಸಿನಿಮಾ ಶೈಲಿಯಲ್ಲಿ ಬಡಿದಾಡಿಕೊಂಡಿದ್ದಾರೆ. ಈ ಘಟನೆಯು ಗೂಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಮಂಗಳೂರಿನಲ್ಲಿ ಗೋಡೆ ಬರಹ – ಬಿಜೆಪಿ, ಕಾಂಗ್ರೆಸ್ ನಡ್ವೆ ಪಾಲಿಕೆಯಲ್ಲಿ ಫೈಟ್

    ಮಂಗಳೂರಿನಲ್ಲಿ ಗೋಡೆ ಬರಹ – ಬಿಜೆಪಿ, ಕಾಂಗ್ರೆಸ್ ನಡ್ವೆ ಪಾಲಿಕೆಯಲ್ಲಿ ಫೈಟ್

    ಮಂಗಳೂರು: ನಗರದಲ್ಲಿನ ಗೋಡೆ ಬರಹ ವಿಚಾರ ಇಂದು ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಬಿಜೆಪಿಯ ಮಧ್ಯೆ ಕೈ-ಕೈ ಮಿಲಾಯಿಸುವ ಹಂತಕ್ಕೆ ಜಗಳವಾಗಿದೆ.

    ಕೆಲದಿನದ ಹಿಂದೆ ಉಗ್ರರ ಪರವಾಗಿ ಹಾಗೂ ಮುಸ್ಲಿಂ ಧರ್ಮದ ಪರವಾಗಿ ಎರಡು ಕಡೆಗಳಲ್ಲಿ ಗೋಡೆ ಬರಹ ಪತ್ತೆಯಾಗಿತ್ತು. ಈ ಘಟನೆ ನಡೆದು ಒಂದು ವಾರವಾದರೂ ಇನ್ನೂ ಆರೋಪಿಗಳ ಪತ್ತೆಯಾಗಿಲ್ಲ. ಈ ವಿಚಾರ ಇಂದು ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಬಂದಿದ್ದು, ಆಡಳಿತ ಪಕ್ಷ ಬಿಜೆಪಿ ಹಾಗೂ ವಿರೋಧ ಪಕ್ಷ ಕಾಂಗ್ರೆಸ್‍ನ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

     

    ಈ ಘಟನೆಗೆ ರಾಜ್ಯ ಸರ್ಕಾರದ ಹಾಗೂ ಪೊಲೀಸ್ ಇಲಾಖೆಯ ವೈಫಲ್ಯವೇ ಕಾರಣ ಎಂದು ಕಾಂಗ್ರೆಸ್ ಸದಸ್ಯರು ಗದ್ದಲ ಆರಂಭಿಸಿದ್ದರು. ಬಳಿಕ ಇದಕ್ಕೆ ಉತ್ತರ ನೀಡುವ ವಿಚಾರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆದು ಕೈ ಕೈಮಿಲಾಯಿಸುವ ಹಂತಕ್ಕೂ ತಲುಪಿತು. ಬಳಿಕ ಪಾಲಿಕೆ ಆಯುಕ್ತರು ಎಲ್ಲಾ ಸದಸ್ಯರನ್ನು ಸಮಾಧಾನ ಪಡಿಸಿ ಸಭೆಯನ್ನು ಮುಂದೂಡಿದರು.

  • ನಡು ರಸ್ತೆಯಲ್ಲೇ ಸಿನಿಮೀಯ ರೀತಿ ನಟಿಯ ಫೈಟ್

    ನಡು ರಸ್ತೆಯಲ್ಲೇ ಸಿನಿಮೀಯ ರೀತಿ ನಟಿಯ ಫೈಟ್

    ಮಂಗಳೂರು: ಸಿನಿಮಾಗಳಲ್ಲಿ ಹೀರೋಗಳಂತೆಯೇ ಇತ್ತೀಚೆಗೆ ಹೀರೋಯಿನ್‍ಗಳೂ ಫೈಟ್ ಮಾಡೋದನ್ನು ಎಲ್ಲರೂ ನೋಡಿದ್ದಾರೆ. ಆದರೆ ವಿಟ್ಲ ಸಮೀಪ ಸಿನಿಮಾ ನಟಿಯೊಬ್ಬರು ನಡು ರಸ್ತೆಯಲ್ಲೇ ರಿಯಲ್ ಫೈಟ್ ನಡೆಸಿ ಸುದ್ದಿಯಾಗಿದ್ದಾರೆ.

    ಕಾರಿಗೆ ಸೈಡ್ ಕೊಡುವ ವಿಚಾರಕ್ಕೆ ನಟಿ ಹಾಗೂ ಇನ್ನೊಂದು ಕಾರಿನಲ್ಲಿದ್ದ ಪ್ರಯಾಣಿಕರ ನಡುವೆ ರಸ್ತೆಯಲ್ಲಿ ಸಿನಿಮೀಯ ರೀತಿ ಹೊಡೆದಾಟ ನಡೆದಿದ್ದು, ಹೊಡೆದಾಟದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರುವಾಯಿ ಬಳಿ ಘಟನೆ ನಡೆದಿದೆ.

    ಕಾರಿನಲ್ಲಿ ನಟಿ ಶೋಭಿತಾ ಮತ್ತು ಇನ್ನೊಂದು ಕಾರಿನವರ ನಡುವೆ ಸೈಡ್ ಕೊಡುವ ವಿಚಾರದಲ್ಲಿ ವಾಗ್ವಾದ ನಡೆದಿದ್ದು ಮಿತಿಮೀರಿ ಸಾರ್ವಜನಿಕರ ಎದುರೇ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಫೆಬ್ರವರಿ 10ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹೊಡೆದಾಟದ ದೃಶ್ಯಗಳು ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿವೆ. ಎದುರು ಕಾರಿನವರು ನಟಿ ಮೇಲೆ ಕೈ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದನ್ನು ಗಮನಿಸಿದ ಸ್ಥಳೀಯರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

  • ಡಿಕೆಶಿ ಬರುತ್ತಿದ್ದಂತೆ ಬಳ್ಳಾರಿ ತೊರೆದ ರಮೇಶ್ ಜಾರಕಿಹೊಳಿ

    ಡಿಕೆಶಿ ಬರುತ್ತಿದ್ದಂತೆ ಬಳ್ಳಾರಿ ತೊರೆದ ರಮೇಶ್ ಜಾರಕಿಹೊಳಿ

    ಬಳ್ಳಾರಿ: ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿಕೆ ಶಿವಕುಮಾರ್ ಪ್ರಚಾರಕ್ಕೆ ಬರುತ್ತಿದ್ದಂತೆ ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಜಿಲ್ಲೆಯಿಂದ ಹೊರಗೆ ತೆರಳುವ ಮೂಲಕ ತಮ್ಮ ಗುದ್ದಾಟವನ್ನು ಬಳ್ಳಾರಿಯಲ್ಲೂ ಮುಂದುವರಿಸಿದ್ದಾರೆ.

    ಹೌದು, ಡಿಕೆಶಿ ಬಳ್ಳಾರಿಗೆ ಬರುತ್ತಿದ್ದಂತೆ, ಜಿಲ್ಲೆಯಿಂದ ರಮೇಶ್ ಜಾರಕಿಹೋಳಿ ಹೊರ ನಡೆದಿದ್ದಾರೆ. ರಮೇಶ್ ರವರ ಅನುಪಸ್ಥಿತಿಯಲ್ಲೂ ಅವರ ಉಸ್ತುವಾರಿ ಕ್ಷೇತ್ರದಲ್ಲಿ ಡಿಕೆಶಿ ಪ್ರಚಾರ ನಡೆಸುತ್ತಿದ್ದಾರೆ.

    ಬಳ್ಳಾರಿಯ ಉಪ ಚುನಾವಣೆಯಲ್ಲಿ ಸಚಿವ ರಮೇಶ್ ಜಾರಕಿಹೋಳಿಗೆ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ನೀಡಲಾಗಿತ್ತು. ಅಲ್ಲದೇ ಅವರು ಎರಡು ದಿನದ ಹಿಂದೆಯೇ ಬಂದು ಕಾಂಗ್ರೆಸ್ ನಾಯಕರ ಸಭೆ ನಡೆಸಿದ್ದರು. ಇಂದು ಸಂಜೆ ಕೂಡ ಕೂಡ್ಲಿಗಿಯ ಸಂತೆ ಮೈದಾನದಲ್ಲಿ ಬಹಿರಂಗ ಸಭೆಯನ್ನು ಹಮ್ಮಿಕೊಂಡಿದ್ದರು. ಯಾವಾಗ ಶಿವಕುಮಾರ್ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದರೋ, ರಮೇಶ್ ಬಳ್ಳಾರಿ ತೊರೆದಿದ್ದಾರೆ. ಇಂದು ಬೆಳಗ್ಗೆ ಕೂಡ್ಲಿಗಿ ಮುಖಂಡರಿಗೆ ಕರೆ ಮಾಡಿ, ಇನ್ನೂ ಎರಡು ದಿನ ಬಿಟ್ಟು ಪ್ರಚಾರಕ್ಕೆ ಬರುತ್ತೇನೆ ಎಂದು ಹೇಳಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

    ಇಂದು ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಕೂಡ್ಲಿಗಿ ಕ್ಷೇತ್ರದಲ್ಲಿ ಏಕಾಂಗಿಯಾಗಿ ಪ್ರಚಾರ ಆರಂಭಿಸಿದ್ದರು. ಅಲ್ಲದೇ ರಮೇಶ್ ಜಾರಕಿಹೊಳಿ ಕರೆದಿದ್ದ ಸಭೆಗೆ ಹಿನ್ನಡೆಯಾಗದಂತೆ ನೋಡಿಕೊಳ್ಳಲು ಡಿಕೆಶಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ರನ್ನು ಆಹ್ವಾನಿಸಿ ಪರೋಕ್ಷವಾಗಿ ರಮೇಶ್ ಗೆ ಟಕ್ಕರ್ ನೀಡಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

    ಈ ಕುರಿತು ಮಾಧ್ಯಮಗಳು ಡಿಕೆಶಿಯವರನ್ನು ಪ್ರಶ್ನಿಸಿದಾಗ, ಚುನಾವಣಾ ಜವಾಬ್ದಾರಿಯನ್ನ ಕೆಪಿಸಿಸಿ ಅಧ್ಯಕ್ಷರು ಹಂಚಿಕೆ ಮಾಡಿದ್ದಾರೆ. ಈ ಬಗ್ಗೆ ನೀವು ಅವರನ್ನೇ ಪ್ರಶ್ನೆ ಮಾಡಿ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೋಳಿ ಜಗಳಕ್ಕೆ ನಾಯಿ ಎಂಟ್ರಿ- ಫೈಟ್ ಬಿಡಿಸಲು ಸರ್ಕಸ್ ಮಾಡಿದ ಶ್ವಾನದ ವಿಡಿಯೋ ವೈರಲ್

    ಕೋಳಿ ಜಗಳಕ್ಕೆ ನಾಯಿ ಎಂಟ್ರಿ- ಫೈಟ್ ಬಿಡಿಸಲು ಸರ್ಕಸ್ ಮಾಡಿದ ಶ್ವಾನದ ವಿಡಿಯೋ ವೈರಲ್

    ಚೆನ್ನೈ: ನಾಯಿಗಳೆಂದರೆ ಹೆಚ್ಚಿನವರಿಗೆ ಬಲುಪ್ರೀತಿ. ಆದ್ರೆ ಕೆಲವರು ಇವುಗಳನ್ನು ದ್ವೇಷಿಸುತ್ತಾರೆ. ಯಾಕೆ ಅಂತ ಗೊತ್ತಿಲ್ಲ. ಆದ್ರೆ ನಾಯಿಗಳ ಆ ಮುಗ್ಧ ಮುಖವನ್ನು ಕಂಡಾಗ ಎಲ್ಲರ ಮುಖದಲ್ಲೂ ಒಂದು ಬಾರಿ ನಗು ಮೂಡುತ್ತೆ. ಕೆಲವೊಮ್ಮೆ ನಾಯಿಗಳು ಜನರಿಗೆ ಹಾನಿಯುಂಟು ಮಾಡುತ್ತವೆ. ಆದ್ರೆ ನಾಯಿಮರಿಗಳು ಏನೇ ಮಾಡಿದ್ರೂ ಚಂದವೇ. ನಾಯಿ ಮರಿಗಳ ತುಂಟಾಟದ ಸಾಕಷ್ಟು ವಿಡಿಯೋಗಳನ್ನು ನಾವು ನೋಡಿರುತ್ತೇವೆ. ಹಾಗೆಯೇ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ನಡೆದ ಕೋಳಿಗಳ ಜಗಳಕ್ಕೆ ನಾಯಿಮರಿಯೊಂದು ಎಂಟ್ರಿ ಕೊಟ್ಟಿದೆ.

    ಹೌದು. ಕೊಯಂಬತ್ತೂರು ಉದ್ಯಮಿ ಮುರಳೀಧರನ್ ಎಂಬವರ ಎರಡು ಹುಂಜಗಳು ಸಖತ್ ಫೈಟ್ ಮಾಡಿವೆ. ಈ ವೇಳೆ ಕಪ್ಪು ಬಣ್ಣದ ನಾಯಿ ಮರಿಯೊಂದು ಜಗಳ ಬಿಡಿಸಲು ಹರಸಾಹಸ ಪಟ್ಟಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ.

    ವಿಡಿಯೋದಲ್ಲೇನಿದೆ?
    2 ಹುಂಜಗಳ ಪರಸ್ಪರ ಸಖತ್ ಫೈಟ್ ಮಾಡುತ್ತಿರುತ್ತವೆ. ನಾಯಿಮರಿ ಇವುಗಳ ಜಗಳದ ಮಧ್ಯಸ್ಥಿಕೆ ವಹಿಸಲು ಬಂದಿದ್ದು, ಗಲಾಟೆ ಬಿಡಿಸಲು ಹರಸಾಹಸ ಪಡುತ್ತದೆ. ಕೋಳಿಗಳ ಕಾಲು ಹಾಗೂ ರೆಕ್ಕೆಯನ್ನು ಕಚ್ಚಿ ಎಳೆಯುತ್ತದೆ. ಆದ್ರೂ ಅವುಗಳ ಜಗಳ ನಿಲ್ಲಿಸಿಲ್ಲ.

    ಇದರಿಂದ ಕಂಗಾಲಾದ ನಾಯಿ ಮರಿ ಒಂದು ಹುಂಜದ ಪುಕ್ಕವನ್ನು ಮೆಲ್ಲಗೆ ಕಚ್ಚಿ ಅಷ್ಟು ದೂರ ಎಳೆದುಕೊಂಡು ಹೋಗುತ್ತದೆ. ಇದರಿಂದ ಕೋಪಗೊಂಡ ಇನ್ನೊಂದು ಹುಂಜ ಮತ್ತೆ ಜಗಳವಾಡಲು ಮುಂದಾಗುತ್ತಿದೆ. ವಿಶೇಷವೆಂದರೆ ಜಗಳ ಬಿಡಿಸಲು ಮಧ್ಯೆ ಬರುತ್ತಿರುವ ನಾಯಿ ಮರಿಗೆ ಹುಂಜಗಳು ಏನೂ ಮಾಡದೇ ತಮ್ಮ ಜಗಳ ಮುಂದುವರಿಸುತ್ತಿವೆ. ಆದ್ರೂ ಬಿಡದೇ ನಾಯಿ ಮರಿ ಹುಂಜಗಳನ್ನು ಬೇರೆ ಬೇರೆ ಮಾಡಲು ಯತ್ನಿಸಿದೆ. ಆದ್ರೆ ನಾಯಿಮರಿಯ ಪ್ರಯತ್ನ ಮಾತ್ರ ವಿಫಲವಾಗಿದೆ.

    ಒಟ್ಟಿನಲ್ಲಿ ಹುಂಜಗಳ ಜಗಳ ಬಿಡಿಸಲು ಹರಸಾಹಸ ಪಡುತ್ತಿರುವ ಮುದ್ದಾದ ನಾಯಿ ಮರಿಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕೊಯಂಬತ್ತೂರು ಉದ್ಯಮಿ ಮುರಳೀಧರನ್ ಎಂಬವರು ಜಗಳವಾಡುತ್ತಿರೋ ಕೊಳಿಗಳ ಮಾಲಕರಾಗಿದ್ದಾರೆ. ಪ್ರಾಣಿಪ್ರಿಯರಾಗಿರೋ ಇವರು, ಮೊಲ, ಬೆಕ್ಕು, ನಾಯಿ ಮೊದಲಾದವುಗಳನ್ನು ಸಾಕುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=MHHnNu40ml8