Tag: ಫಿರೋಜ್ ಖಾನ್

  • ‘ತಂದೆ ಮಗನ ಜೊತೆ ಮಲಗಿದ್ದ ನಟಿ’ ವಿವಾದ: 3 ಸಾವಿರ ಕೇಸ್ ದಾಖಲಿಸಿದ ಸೆಲಿನಾ

    ‘ತಂದೆ ಮಗನ ಜೊತೆ ಮಲಗಿದ್ದ ನಟಿ’ ವಿವಾದ: 3 ಸಾವಿರ ಕೇಸ್ ದಾಖಲಿಸಿದ ಸೆಲಿನಾ

    ವಿವಾದಿತ ಬಾಲಿವುಡ್ ಸಿನಿಮಾ ವಿಮರ್ಶಕ ಉಮೈರ ಸಂಧು (Umaira Sandhu) ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದಾರೆ ಬಾಲಿವುಡ್ ಖ್ಯಾತ ನಟ ಸೆಲಿನಾ ಜೇಟ್ಲಿ(Celina Jaitley). ಕೇವಲ ಸಂಧು ವಿರುದ್ಧ ಮಾತ್ರವಲ್ಲ, ತಮ್ಮ ಬಗ್ಗೆ ಅಶ್ಲೀಲವಾಗಿ ಕಾಮೆಂಟ್ ಮಾಡಿದವರ ವಿರುದ್ಧವೂ ಅವರು ದೂರು ದಾಖಲಿಸಿದ್ದಾರೆ. ಮೂರು ಸಾವಿರಕ್ಕೂ ಹೆಚ್ಚು ದೂರು ದಾಖಲಿಸಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.

    ಜನಶೀನ್ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿರುವ ಸೆಲಿನಾ ಜೇಟ್ಲಿ ದಶಕಗಳಿಂದಲೂ ಚಿತ್ರರಂಗದಲ್ಲಿ ಸಕ್ರೀಯರಾಗಿದ್ದಾರೆ. ಸಾಕಷ್ಟು ಚಿತ್ರಗಳನ್ನೂ ಇವರು ಮಾಡಿದ್ದಾರೆ. ಈ ನಟಿಯು ತಂದೆ ಮಗನ ಜೊತೆ ಮಲಗಿದ್ದರು ಎಂದು ಉಮೈರ್ ಟ್ವೀಟ್ ಮಾಡುವ ಮೂಲಕ ಬಾಲಿವುಡ್ ನಲ್ಲಿ ಬಿರುಗಾಳಿ ಎಬ್ಬಿಸಿದ್ದರು.

    ಜನಶೀನ್ ಬಾಲಿವುಡ್ ದಿಗ್ಗಜ ಫಿರೋಜ್ ಖಾನ್ (Feroze Khan) ನಿರ್ದೇಶನದಲ್ಲಿ ಮೂಡಿ ಬಂದ ಚಿತ್ರ. ಈ ಸಿನಿಮಾವನ್ನು ತಮ್ಮ ಪುತ್ರ ಫರ್ದಿನ್ ಖಾನ್ (Fardeen Khan) ಗಾಗಿ ಮಾಡಿದ್ದರು ಎನ್ನುವ ಮಾತು ಇದೆ. ಈ ಸಿನಿಮಾ ಮೂಲಕವೇ ಸೆಲಿನಾ ಚಿತ್ರರಂಗ ಪ್ರವೇಶ ಮಾಡಿದ್ದರು. ಈ ಅವಕಾಶಕ್ಕಾಗಿ ಅವರು ತಂದೆ ಮಗನ ಜೊತೆ ಮಲಗಿದ್ದರು ಎಂದು ಉಮೈರ್ ಟ್ವೀಟ್ ಮಾಡಿದ್ದ, ಈ ಟ್ವೀಟ್ ವೈರಲ್ ಕೂಡ ಆಗಿತ್ತು. ಇದನ್ನೂ ಓದಿ:ಕನ್ನಡದ ನಟಿ ವಿಶಾಖ ಸಿಂಗ್‌ಗೆ ಅನಾರೋಗ್ಯ- ಆಸ್ಪತ್ರೆಗೆ ದಾಖಲು

    ಈ ಟ್ವೀಟ್ ಅನ್ನು ಗಮನಿಸಿರುವ ಸೆಲಿನಾ, ಖಾರವಾಗಿಯೇ ತಮ್ಮ ಪ್ರತಿಕ್ರಿಯೆಯನ್ನು ದಾಖಲಿಸಿದ್ದಾರೆ. ಅಕ್ಷರಗಳ ಮೂಲಕವೇ ಉಮೈರ್ ಗೆ ಚಳಿ ಬಿಡಿಸಿದ್ದಾರೆ. ಉಮೈರ್ ಬರೆದ ಟ್ವೀಟ್ ಗೆ ಉತ್ತರ ನೀಡಿರುವ ಅವರು, ‘ಡಿಯರ್ ಸಂಧು, ನಿನಗಿರುವ ಲೈಂಗಿಕ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಲು ನಾನಾ ಮಾರ್ಗಗಳಿವೆ. ಅದಕ್ಕಾಗಿ ಬಿಡುವು ಮಾಡಿಕೊಂಡು ವೈದ್ಯರನ್ನು ಸಂಪರ್ಕಿಸು’ ಎಂದು ಮರುತ್ತರ ಕೊಟ್ಟಿದ್ದರು.

    ವಿದೇಶಗಳಲ್ಲಿ ರಿಲೀಸ್ ಮಾಡುವ ಸಿನಿಮಾಗಳ ಸೆನ್ಸಾರ್ ಬೋರ್ಡ್ ಸದಸ್ಯನೆಂದು ಹೇಳಿಕೊಳ್ಳುವ ಉಮೈರ್, ಸಿನಿಮಾ ರಿಲೀಸ್ ಗೂ ಮುನ್ನ ಆ ಚಿತ್ರದ ಬಗ್ಗೆ ಬರೆಯುತ್ತಾರೆ. ಕೆಲವೇ ಸಲ ಅವರ ವಿಮರ್ಶೆಗಳು ಪಾಸಿಟಿವ್ ಆಗಿರುತ್ತವೆ. ನೆಗೆಟಿವ್ ವಿಮರ್ಶೆ ಕೊಟ್ಟ ಚಿತ್ರಗಳು ಹಿಟ್ ಕೂಡ ಆಗಿವೆ. ಹಾಗಾಗಿ ತಲೆನೋವಿನ ಉಮೈರ್ ಎಂದೇ ಬಾಲಿವುಡ್ ಈತನನ್ನು ಕರೆಯುತ್ತದೆ.

  • ತಂದೆ-ಮಗನ ಜೊತೆ ಮಲಗಿದ್ದ ಏಕೈಕ ನಟಿ ಸೆಲಿನಾ ಜೇಟ್ಲಿ : ವಿಮರ್ಶಕನ ವಿರುದ್ಧ ನಟಿ ಗರಂ

    ತಂದೆ-ಮಗನ ಜೊತೆ ಮಲಗಿದ್ದ ಏಕೈಕ ನಟಿ ಸೆಲಿನಾ ಜೇಟ್ಲಿ : ವಿಮರ್ಶಕನ ವಿರುದ್ಧ ನಟಿ ಗರಂ

    ಭಾರತೀಯ ಸಿನಿಮಾ ರಂಗ ಕಂಡ ಅತ್ಯಂತ ವಿವಾದಿತ (Controversy) ಸಿನಿಮಾ ವಿಮರ್ಶಕ ಬಾಲಿವುಡ್ ನ ಉಮೈರ್ ಸಂಧು (Umair Sandhu) ಮಾಡಿರುವ ಟ್ವೀಟ್, ಇದೀಗ ಬಿಟೌನ್ ನಲ್ಲಿ ಭಾರೀ ಆವಾಂತರ ಸೃಷ್ಟಿ ಮಾಡಿದೆ. ತಮ್ಮ ವಿಮರ್ಶೆಗಳಿಂದ ನೋಡುಗರನ್ನು ಸದಾ ದಿಕ್ಕು ತಪ್ಪಿಸುವ ಉಮೈರ್ , ಈ ಬಾರಿ ಹೆಸರಾಂತ ನಟಿ ಸೆಲಿನಾ ಜೇಟ್ಲಿಯನ್ನು (Celina Jaitly) ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿ ಸಿಕ್ಕಿಹಾಕಿಕೊಂಡಿದ್ದಾರೆ.

    ಜನಶೀನ್ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿರುವ ಸೆಲಿನಾ ಜೇಟ್ಲಿ ದಶಕಗಳಿಂದಲೂ ಚಿತ್ರರಂಗದಲ್ಲಿ ಸಕ್ರೀಯರಾಗಿದ್ದಾರೆ. ಸಾಕಷ್ಟು ಚಿತ್ರಗಳನ್ನೂ ಇವರು ಮಾಡಿದ್ದಾರೆ. ಈ ನಟಿಯು ತಂದೆ ಮಗನ ಜೊತೆ ಮಲಗಿದ್ದರು ಎಂದು ಉಮೈರ್ ಟ್ವೀಟ್ ಮಾಡುವ ಮೂಲಕ ಬಾಲಿವುಡ್ ನಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ.

    ಜನಶೀನ್ ಬಾಲಿವುಡ್ ದಿಗ್ಗಜ ಫಿರೋಜ್ ಖಾನ್ (Feroze Khan) ನಿರ್ದೇಶನದಲ್ಲಿ ಮೂಡಿ ಬಂದ ಚಿತ್ರ. ಈ ಸಿನಿಮಾವನ್ನು ತಮ್ಮ ಪುತ್ರ ಫರ್ದಿನ್ ಖಾನ್ (Fardeen Khan) ಗಾಗಿ ಮಾಡಿದ್ದರು ಎನ್ನುವ ಮಾತು ಇದೆ. ಈ ಸಿನಿಮಾ ಮೂಲಕವೇ ಸೆಲಿನಾ ಚಿತ್ರರಂಗ ಪ್ರವೇಶ ಮಾಡಿದ್ದರು. ಈ ಅವಕಾಶಕ್ಕಾಗಿ ಅವರು ತಂದೆ ಮಗನ ಜೊತೆ ಮಲಗಿದ್ದರು ಎಂದು ಉಮೈರ್ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ವೈರಲ್ ಕೂಡ ಆಗಿದೆ.

    ಈ ಟ್ವೀಟ್ ಅನ್ನು ಗಮನಿಸಿರುವ ಸೆಲಿನಾ, ಖಾರವಾಗಿಯೇ ತಮ್ಮ ಪ್ರತಿಕ್ರಿಯೆಯನ್ನು ದಾಖಲಿಸಿದ್ದಾರೆ. ಅಕ್ಷರಗಳ ಮೂಲಕವೇ ಉಮೈರ್ ಗೆ ಚಳಿ ಬಿಡಿಸಿದ್ದಾರೆ. ಉಮೈರ್ ಬರೆದ ಟ್ವೀಟ್ ಗೆ ಉತ್ತರ ನೀಡಿರುವ ಅವರು, ‘ಡಿಯರ್ ಸಂಧು, ನಿನಗಿರುವ ಲೈಂಗಿಕ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಲು ನಾನಾ ಮಾರ್ಗಗಳಿವೆ. ಅದಕ್ಕಾಗಿ ಬಿಡುವು ಮಾಡಿಕೊಂಡು ವೈದ್ಯರನ್ನು ಸಂಪರ್ಕಿಸು’ ಎಂದು ಮರುತ್ತರ ಕೊಟ್ಟಿದ್ದಾರೆ.

    ವಿದೇಶಗಳಲ್ಲಿ ರಿಲೀಸ್ ಮಾಡುವ ಸಿನಿಮಾಗಳ ಸೆನ್ಸಾರ್ ಬೋರ್ಡ್ ಸದಸ್ಯನೆಂದು ಹೇಳಿಕೊಳ್ಳುವ ಉಮೈರ್, ಸಿನಿಮಾ ರಿಲೀಸ್ ಗೂ ಮುನ್ನ ಆ ಚಿತ್ರದ ಬಗ್ಗೆ ಬರೆಯುತ್ತಾರೆ. ಕೆಲವೇ ಸಲ ಅವರ ವಿಮರ್ಶೆಗಳು ಪಾಸಿಟಿವ್ ಆಗಿರುತ್ತವೆ. ನೆಗೆಟಿವ್ ವಿಮರ್ಶೆ ಕೊಟ್ಟ ಚಿತ್ರಗಳು ಹಿಟ್ ಕೂಡ ಆಗಿವೆ. ಹಾಗಾಗಿ ತಲೆನೋವಿನ ಉಮೈರ್ ಎಂದೇ ಬಾಲಿವುಡ್ ಈತನನ್ನು ಕರೆಯುತ್ತದೆ.

  • ‘ಯೂ ಆರ್ ಮೈ ಹೀರೋ’ ಅಂತಿದ್ದಾರೆ ನಾಯಕಿ ಸಂಹಿತಾ ವಿನ್ಯಾ

    ‘ಯೂ ಆರ್ ಮೈ ಹೀರೋ’ ಅಂತಿದ್ದಾರೆ ನಾಯಕಿ ಸಂಹಿತಾ ವಿನ್ಯಾ

    ನ್ನಡದಲ್ಲಿ ‘ಯಾಕೋ ಬೇಜಾರು’,  ‘ದಿ ಕೇಸ್‌ ಅಫ್‌ ಹಂಸ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಸಂಹಿತಾ ವಿನ್ಯಾ, ಇದೇ ಮೊದಲ ಬಾರಿಗೆ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸಿದ್ದಾರೆ. ಅಲ್ಲದೇ, ತಮಿಳಿನ ಸಿನಿಮಾವೊಂದಕ್ಕೂ ಸಹಿ ಮಾಡಿದ್ದಾರೆ. ಅದರ ಅರ್ಧ ಶೂಟಿಂಗ್‌ ಸಹ ಈಗಾಗಲೇ ಮುಗಿದಿದೆ. ಅಲ್ಲದೇ, ನಿರ್ದೇಶಕ ಶೇರ್‌ ಅವರ ಬಾಲಿವುಡ್‌ ಪ್ರಾಜೆಕ್ಟ್‌ನಲ್ಲಿಯೂ ಸಂಹಿತಾ ನಟಿಸಲಿದ್ದಾರೆ.

    ಮಾಡೆಲಿಂಗ್‌ನಿಂದ ಆರಂಭವಾದ ಸಂಹಿತಾ ವಿನ್ಯಾ ಅವರ ಜರ್ನಿ ಸಿನಿಮಾವರೆಗೂ ಬಂದು ನಿಂತಿದೆ. ಹಾಗಂತ ಮಾಡೆಲಿಂಗ್‌ ಅವರ ಕೈ ಬಿಟ್ಟಿಲ್ಲ. ಅವಕಾಶ ಎಲ್ಲೆಲ್ಲಿ ಸಿಗುತ್ತದೆಯೋ ಅಲ್ಲಿ ಪ್ರತಿಭೆಯ ಅನಾವರಣ ಮಾಡುತ್ತಿದ್ದಾರವರು. ಇದೀಗ ಇದೆಲ್ಲದಕ್ಕಿಂತ ಒಂದು ಹೆಜ್ಜೆ ಮೇಲೆಯೇ ಹೋಗಿದ್ದಾರೆ. ಅಂದರೆ, ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗಿರುವ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ ಸಿನಿಮಾದ ಹೆಸರು “ಯೂ ಆರ್‌ ಮೈ ಹೀರೋ”. ಮೂಲ ತೆಲುಗಿನಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ, ಹಿಂದಿಯಲ್ಲಿಯೂ ಏಕಕಾಲದಲ್ಲಿ ಚಿತ್ರೀಕರಣಗೊಂಡಿದೆ. ಇನ್ನುಳಿದಂತೆ ಕನ್ನಡ, ತಮಿಳು, ಮಲಯಾಳಂ ಭಾಷೆಗೆ ಡಬ್‌ ಆಗಿ ತೆರೆಗೆ ಬರಲಿದೆ. ಇದನ್ನೂ ಓದಿ: ಸರಕಾರಕ್ಕೆ ಟೀಸರ್ ಮೂಲಕ ಟಾಂಗ್ ಕೊಟ್ಟ ಟಾಲಿವುಡ್ ಬಾಲಕೃಷ್ಣ

    ಈ ಬಗ್ಗೆ ಹೇಳಿಕೊಳ್ಳುವ ಸಂಹಿತಾ ವಿನ್ಯಾ, “ಈವರೆಗೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದೇನೆ. ಆ ಎಲ್ಲ ಸಿನಿಮಾಗಳಿಗಿಂತ ಈ ಸಿನಿಮಾ ತುಂಬ ಡಿಫರಂಟ್.‌ ಏಕೆಂದರೆ, ಮೊದಲ ಬಾರಿಗೆ ಮುಖ್ಯಭೂಮಿಕೆಯಲ್ಲಿ ನಟಿಸಿರುವ ನನ್ನ ಸಿನಿಮಾ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ತೆರೆಗೆ ಬರುತ್ತಿದೆ. ಮೊದಲ ಸಲ ತೆಲುಗು ಟೀಮ್‌ ಜೊತೆಗೆ ಕೆಲಸ ಮಾಡಿದ್ದೇನೆ. ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದರೂ, ತೆಲುಗಿನಲ್ಲಿನ ವಾತಾರಣವೇ ಬೇರೆ ಇತ್ತು. ಚಿತ್ರದ ಬಹುತೇಕ ಶೂಟಿಂಗ್‌ ಹೈದರಾಬಾದ್‌ನಲ್ಲಿಯೇ ಮುಗಿದಿದೆ” ಎಂಬುದು ಅವರ ಮಾತು.

    ಅದೇ ರೀತಿ “ಯೂ ಆರ್‌ ಮೈ ಹೀರೋ” ಸಿನಿಮಾ ಬಗ್ಗೆಯೂ ಹೇಳಿಕೊಳ್ಳುವ ಅವರು, “ಇದೊಂದು ಹಾರರ್‌ ಸಿನಿಮಾ. ಯಾವುದೋ ಒಂದು ಕಾರಣಕ್ಕೆ ಮನೆಯೊಂದನ್ನು ಸೇರಿಕೊಳ್ಳುತ್ತೇನೆ. ಅಲ್ಲಿ ದೆವ್ವದ ಕಾಟ ಶುರುವಾಗುತ್ತದೆ. ನನಗೆ ಅದರ ಮೇಲೆ ನಂಬಿಕೆ ಇಲ್ಲದಿದ್ದರೂ, ಒಂದಷ್ಟು ಅನುಭವ ಆಗುತ್ತದೆ. ಅದರ ಕಾಟ ಹೇಗಿರುತ್ತದೆ? ಕೊನೆಗೆ ಅದರ ಆಟಕ್ಕೆ ಬ್ರೇಕ್‌ ಹಾಕುವುದು ಹೇಗೆ? ಹಾರರ್‌ ಟಚ್‌ ಜತೆಗೆ ಸಸ್ಪೆನ್ಸ್‌ ರೀತಿಯಲ್ಲಿ ಸಿನಿಮಾ ನೋಡಿಸಿಕೊಂಡು ಸಾಗಲಿದೆ ಎನ್ನುತ್ತಾರೆ. ಇದನ್ನೂ ಓದಿ: ಕೊನೆಗೂ ರಿವೀಲ್ ಆಯಿತು ನಯನತಾರಾ ಮತ್ತು ವಿಘ್ನೇಶ್ ಶಿವನ್ ಮದುವೆ ಫೋಟೋ

    ತೆಲುಗಿನ ಈ “ಯೂ ಆರ್‌ ಮೈ ಹೀರೋ” ಸಿನಿಮಾದಲ್ಲಿ ದೊಡ್ಡ ತಾರಾಬಳಗವೇ ಇದೆ. ಫಿರೋಜ್‌ ಖಾನ್‌, ಸನಾ ಖಾನ್, ಸಂಹಿತಾ ವಿನ್ಯಾ, ಐಶ್ವರ್ಯಾ, ಮಿಲಿಂದ್‌ ಗುನಾಜಿ, ಮೇಕಾ ರಾಮಕೃಷ್ಣ, ಆನಂದ್‌ ಸೇರಿ ಹಲವರು ನಟಿಸಿದ್ದಾರೆ. ಶೇರ್‌ ಎಂಬುವವರು ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಕೇವಲ ನಿರ್ದೇಶನ ಮಾತ್ರವಲ್ಲದೆ, ಸಂಗೀತ, ಕತೆ, ಚಿತ್ರಕಥೆ, ಸಂಭಾಷಣೆಯನ್ನೂ ಬರೆದಿದ್ದಾರೆ. ಮಿನ್ನಿ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಪ್ರವೀಣ್‌ ಕಾವೇಟಿ ಛಾಯಾಗ್ರಹಣ, ಡಿ ವೆಂಕಟ್‌ ಪ್ರಭು ಅವರ ಸಂಕಲನ, ಸಾಯಿರಾಜ್‌ ನೃತ್ಯ ನಿರ್ದೇಶನವಿದೆ.

  • ಗಾಂಧಿ ಪುತ್ಥಳಿ ಮುಂದೆ ಗಳಗಳನೆ ಅತ್ತ ಎಸ್‍ಪಿ ನಾಯಕ ಟ್ರೋಲ್- ವಿಡಿಯೋ ವೈರಲ್

    ಗಾಂಧಿ ಪುತ್ಥಳಿ ಮುಂದೆ ಗಳಗಳನೆ ಅತ್ತ ಎಸ್‍ಪಿ ನಾಯಕ ಟ್ರೋಲ್- ವಿಡಿಯೋ ವೈರಲ್

    ಲಕ್ನೋ: ಬುಧವಾರ ಸಮಾಜವಾದಿ ಪಕ್ಷದ ನಾಯಕ ಫಿರೋಜ್ ಖಾನ್ ಮಹಾತ್ಮ ಗಾಂಧೀಜಿಯನ್ನು ನೆನೆದು ಅವರ ಪುತ್ಥಳಿ ಮುಂದೆ ಗಳಗಳನೆ ಅತ್ತ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದ್ಭುತ ನಟನೆ ಅವರಿಗೆ ಆಸ್ಕರ್ ಕೊಡಿ ಎಂದು  ನೆಟ್ಟಿಗರು ಫಿರೋಜ್ ಖಾನ್ ಕಾಲೆಳೆದಿದ್ದಾರೆ.

    ಉತ್ತರಪ್ರದೇಶದ ಸಂಬಲ್ ನಗರದ ಫವಾರ ಚೌಕದಲ್ಲಿರುವ ಗಾಂಧೀಜಿ ಪ್ರತಿಮೆ ಬಳಿ ಫಿರೋಜ್ ಖಾನ್ ಕಣ್ಣೀರು ಹಾಕಿದ್ದಾರೆ. ಇತರೆ ಎಸ್‍ಪಿ ನಾಯಕರು ಅಲ್ಲಿ ಕ್ಯಾಮೆರಾ ಕಂಡ ಕೂಡಲೇ ಅಳಲು ಆರಂಭಿಸಿ ನಾಯಕನಿಗೆ ಸಾಥ್ ಕೊಟ್ಟರು. ಮಹಾತ್ಮ ಗಾಂಧೀಜಿಯ ಪುತ್ಥಳಿಗೆ ಪುಷ್ಪಾರ್ಚನೆ ಮಾಡಲು ಫಿರೋಜ್ ಖಾನ್ ಅವರನ್ನು ಆಹ್ವಾನಿಸಲಾಗಿತ್ತು. ಈ ವೇಳೆ ಫಿರೋಜ್ ಖಾನ್ ನಮ್ಮ ಸಮಾಜದ ವಾಸ್ತವ ಸ್ಥಿತಿಯನ್ನು ಗಾಂಧೀಜಿ ಪುತ್ಥಳಿ ಮುಂದೆ ಹೇಳುತ್ತ ಗಳಗಳನೆ ಕಣ್ಣೀರು ಹಾಕಿದ್ದರು. ಫಿರೋಜ್ ಖಾನ್ ಕಣ್ಣೀರು ಹಾಕುತ್ತಿದ್ದಂತೆ ಅವರ ಜೊತೆಗಿದ್ದ ಬೆಂಬಲಿಗರು ಕೂಡ ಅತ್ತು, ಗೋಗರಿದಿದ್ದಾರೆ.

    ಈ ದೇಶಕ್ಕೆ ನೀವು ಸ್ವಾತಂತ್ರ ತಂದುಕೊಟ್ಟು ನಮ್ಮನ್ನೆಲ್ಲ ಬಿಟ್ಟು ಬಾಪು ನಿವೇಕೆ ದೂರ ಹೋದಿರಿ? ನಮ್ಮನ್ನೆಲ್ಲಾ ಅನಾಥರಾಗಿ ಬಿಟ್ಟು ಹೋದಿರಿ. ನಿಮ್ಮ ಎಲ್ಲ ಆದರ್ಶಗಳು ಸಮಯ ಕಳೆದಂತೆ ಮರೆಯಾಗುತ್ತಿದೆ. ಇದನ್ನೆಲ್ಲ ನೋಡಲು ನಾವು ಇನ್ನೂ ಇರಬೇಕಾ ಎಂದು ಹೇಳಿದ ಫಿರೋಜ್ ಖಾನ್ ಜೋರಾಗಿ ಅಳಲು ಆರಂಭಿಸಿದರು. ಈ ವೇಳೆ ಅವರನ್ನು ನೋಡಿದ ಬೆಂಬಲಿಗರು ಕೂಡ ಬಿಕ್ಕಿ ಬಿಕ್ಕಿ ಅತ್ತರು.

    https://twitter.com/AsYouNtWish/status/1179437716221509632

    ಈ ದೃಶ್ಯವನ್ನು ಸ್ಥಳೀಯರು ವಿಡಿಯೋ ಮಾಡಿದ್ದು, ವಿಡಿಯೋ ನೋಡಿದ ನೆಟ್ಟಿಗರು ಫಿರೋಜ್ ಖಾನ್ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ಎಂಥ ಅಭಿನಯ, ಇವರಿಗೆ ಆಸ್ಕರ್ ಪ್ರಶಸ್ತಿ ಕೊಡಿ ಎಂದು ಕಮೆಂಟ್ ಮಾಡಿ ಟೀಕಿಸುತ್ತಿದ್ದಾರೆ.

    ಈ ಬಾರಿಯ ಆಸ್ಕರ್ ಪ್ರಶಸ್ತಿ ಫಿರೋಜ್ ಖಾನ್ ಅವರ ಕೈಸೇರುವುದರಲ್ಲಿ ಅನುಮಾನವೇ ಇಲ್ಲ. ಯಾವ ಸೀರಿಯಲ್ ನೋಡಿ ಬಂದು ಫಿರೋಜ್ ಖಾನ್ ಕಣ್ಣೀರು ಹಾಕಿದರೋ ಗೊತ್ತಿಲ್ಲ ಎಂದು ನೆಟ್ಟಿಗರು ಟೀಕಿಸಿದ್ದಾರೆ. ಕೆಲವರು ಈ ಬಾರಿ ಬಿಗ್ ಬಾಸ್ ಮನೆಗೆ ಹೋಗೋ ಪ್ಲಾನ್ ಇದ್ರೆ ಹೇಳಿ, ಸುಮ್ಮನೆ ನಾಟಕ ಯಾಕೆ ಮಾಡುತ್ತೀರಾ? ಎಂದು ಕಿಡಿಕಾರಿದ್ದರೆ, ಇನ್ನೂ ಕೆಲವರು ಕೊನೆಗೂ ನಮ್ಮ ದೇಶಕ್ಕೆ ಒಂದೊಳ್ಳೆ ಪ್ರತಿಭಾವಂತ ನಟ ಸಿಕ್ಕಿದನಲ್ಲ ಅಂತ ಖುಷಿಯಾಯ್ತು ಎಂದೆಲ್ಲ ಸಖತ್ ಟ್ರೋಲ್ ಮಾಡಿ ಗೇಲಿ ಮಾಡುತ್ತಿದ್ದಾರೆ.