Tag: ಫಿನ್‌ಟೆಕ್

  • ವಾಧ್ವಾನ್ ಪೋರ್ಟ್ ಪ್ರಾಜೆಕ್ಟ್ ಉದ್ಘಾಟನೆ, ಗ್ಲೋಬಲ್ ಫಿನ್‌ಟೆಕ್ ಫೆಸ್ಟ್‌ನಲ್ಲಿ ಭಾಗಿಯಾದ ಪ್ರಧಾನಿ ಮೋದಿ

    ವಾಧ್ವಾನ್ ಪೋರ್ಟ್ ಪ್ರಾಜೆಕ್ಟ್ ಉದ್ಘಾಟನೆ, ಗ್ಲೋಬಲ್ ಫಿನ್‌ಟೆಕ್ ಫೆಸ್ಟ್‌ನಲ್ಲಿ ಭಾಗಿಯಾದ ಪ್ರಧಾನಿ ಮೋದಿ

    ಮುಂಬೈ: ಫಿನ್‌ಟೆಕ್ (FinTech) ಸೆಕ್ಟರ್ ಭಾರತದ ಆರ್ಥಿಕ ಮಾರುಕಟ್ಟೆಯಲ್ಲಿ ಹೊಸತನ್ನು ಸೃಷ್ಟಿಸಿದೆ. ಅದರ ಕ್ರಾಂತಿ ದೇಶದೆಲ್ಲೆಡೆ ಹಬ್ಬಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ಮುಂಬೈನಲ್ಲಿ (Mumbai) ನಡೆದ 2024ರ ಜಾಗತಿಕ ಫಿನ್‌ಟೇಕ್ ಫೆಸ್ಟಿವಲ್‌ನಲ್ಲಿ (Global FinTech Festival 2024) ಹೇಳಿದರು.

    ಸಮಾರಂಭದಲ್ಲಿ ಮಾತನಾಡಿದ ಅವರು, ಒಂದು ಕಾಲದಲ್ಲಿ ಜನರು ಸಾಂಸ್ಕೃತಿಕ ವೈವಿಧ್ಯತೆಯದಿಂದಲೇ ಬೆರಗಾಗುತ್ತಿದ್ದರು. ಆದರೆ ಇದೀಗ ಫಿನ್‌ಟೆಕ್ ಭಾರತಕ್ಕೆ ಬಂದ ಮೇಲೆ ಜನರು ಇನ್ನಷ್ಟು ಅಚ್ಚರಿಗೊಂಡಿದ್ದಾರೆ ಎಂದರು.ಇದನ್ನೂ ಓದಿ: Paris Paralympics 2024 | ಭಾರತಕ್ಕೆ ಒಂದೇ ದಿನ 4 ಪದಕ – ಬೆಳ್ಳಿಗೆ ಮನೀಷ್ ನರ್ವಾಲ್‌ ಶೂಟ್‌

    ದೇಶದಲ್ಲಿ ಫಿನ್‌ಟೆಕ್ ಶಾಖೆಗಳಿಲ್ಲ, ಹಳ್ಳಿಗಳಲ್ಲಿ ಬ್ಯಾಂಕ್‌ಗಳಿಲ್ಲ, ಇಂಟರ್ನೆಟ್ ಸೇವೆ ಕೂಡ ಸರಿಯಾಗಿ ಲಭ್ಯವಿಲ್ಲ. ಹೀಗಿರುವಾಗ ಫಿನ್‌ಟೆಕ್ ಕ್ರಾಂತಿ ದೇಶದೆಲ್ಲೆಡೆ ಹಬ್ಬಿದೆ ಎಂದರೆ ಹೇಗೆಂದು ಪಾರ್ಲಿಮೆಂಟ್‌ನಲ್ಲಿ ಪ್ರಶ್ನಿಸುತ್ತಿದ್ದರು. ಆದರೆ ಕೇವಲ ಒಂದು ದಶಕದಲ್ಲಿಯೇ ಬ್ರಾಡ್‌ಬ್ಯಾಂಡ್ (Broadband) ಬಳಕೆದಾರರು 6 ಕೋಟಿಯಿಂದ 94 ಕೋಟಿಗೆ ಹೆಚ್ಚಾಗಿದ್ದಾರೆ ಎಂದು ಪ್ರಧಾನಿ ತಿಳಿಸಿದರು.

    ಕೋವಿಡ್‌ನಂತಹ ದೊಡ್ಡ ಸಾಂಕ್ರಾಮಿಕ ರೋಗ ಬಂದಾಗಲೂ ಭಾರತದಲ್ಲಿ ಬ್ಯಾಂಕಿಂಗ್ ಸೇವೆಗಳಲ್ಲಿ ಯಾವುದೇ ಸಮಸ್ಯೆಯಾಗಿರಲಿಲ್ಲ. ಜೊತೆಗೆ ಜನ್-ಧನ್ ಯೋಜನೆ ತನ್ನ 10 ವರ್ಷಗಳನ್ನು ಪೂರೈಸಿದ್ದು, ಈ ಯೋಜನೆಯಡಿಯಲ್ಲಿ ಮಹಿಳೆಯರಿಗಾಗಿ 29 ಕೋಟಿ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಇದು ಮಹಿಳಾ ಸಬಲೀಕರಣದ ಉತ್ತಮ ಮಾಧ್ಯಮವಾಗಿ ಹೊರಹೊಮ್ಮಿದೆ ಎಂದು ಹೇಳಿದರು.

    ಸೈಬರ್ ವಂಚನೆಗಳನ್ನು ತಡೆಯಲು, ಡಿಜಿಟಲ್ ಸಾಕ್ಷರತೆಯನ್ನು ಹೆಚ್ಚಿಸಲು ನಾವು ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಆ ಕಾರಣದಿಂದ ಸರ್ಕಾರವು ಏಂಜೆಲ್ ತೆರಿಗೆಯನ್ನು ರದ್ದುಗೊಳಿಸಿದೆ ಮತ್ತು ಫಿನ್‌ಟೆಕ್ ವಲಯಕ್ಕೆ ಸಹಾಯ ಮಾಡಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದರು.

    ಸರ್ಕಾರದ ನೂರಾರು ಯೋಜನೆಗಳ ಲಾಭವನ್ನು ಫಲಾನುಭವಿಗಳು ನೇರವಾಗಿ ಪಡೆದುಕೊಳ್ಳುತ್ತಿದ್ದಾರೆ. ಏಕೆಂದರೆ ಭಾರತವು ಡಿಜಿಟಲ್ ತಂತ್ರಜ್ಞಾನದ ಮೂಲಕ ಪಾರದರ್ಶಕತೆಯನ್ನು ತಂದಿದೆ. ಫಿನ್‌ಟೆಕ್‌ನಿಂದಾಗಿ ಭಾರತದಲ್ಲಿ ಆಗಿರುವ ಪರಿವರ್ತನೆಯು ಕೇವಲ ತಂತ್ರಜ್ಞಾನಕ್ಕೆ ಸೀಮಿತವಾಗಿಲ್ಲ, ಇದು ಹಳ್ಳಿಗಳು ಮತ್ತು ನಗರಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.ಇದನ್ನೂ ಓದಿ: ಛತ್ರಪತಿ ಶಿವಾಜಿ ಪ್ರತಿಮೆ ಕುಸಿತ – ಕ್ಷಮೆಯಾಚಿಸಿದ ಪ್ರಧಾನಿ ಮೋದಿ

    ಕಳೆದ 10 ವರ್ಷಗಳಲ್ಲಿ 31 ಶತಕೋಟಿ ಡಾಲರ್‌ಗಿಂತ ಹೆಚ್ಚು ಹೂಡಿಕೆಯಾಗಿದೆ. ಫಿನ್‌ಟೆಕ್ ಸ್ಟಾರ್ಟ್ಅಪ್‌ಗಳಲ್ಲಿ ಶೇ. 500ರಷ್ಟು ಹೆಚ್ಚಳವಾಗಿದೆ. ಅಗ್ಗದ ಮೊಬೈಲ್‌ಗಳು, ಡೇಟಾ ಮತ್ತು ಶೂನ್ಯ ಬ್ಯಾಲೆನ್ಸ್ ಖಾತೆ, ಜನ್-ಧನ್ ಯೋಜನೆ (PMJDY) ರಾಷ್ಟ್ರದಲ್ಲಿ ಅದ್ಭುತವನ್ನು ಸೃಷ್ಟಿ ಮಾಡಿದೆ ಎಂದು ಬಣ್ಣಿಸಿದರು.

    ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರು ‘ವಧ್ವನ್ ಪೋರ್ಟ್ ಪ್ರಾಜೆಕ್ಟ್’ (Vadhavan Port Project) ಉದ್ಘಾಟಿಸಿದರು. ಇದು ವಿಶೇಷವಾದ ಯೋಜನೆಯಾಗಿದ್ದು, ಭಾರತದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಮೋದಿ ಭರವಸೆ ವ್ಯಕ್ತಪಡಿಸಿದರು.ಇದನ್ನೂ ಓದಿ: ವಿದ್ಯಾರ್ಥಿ ಭವನ ಹೋಟೆಲ್‌ನಲ್ಲಿ ಮಸಾಲೆ ದೋಸೆ ಸವಿದ ಬ್ಯಾಡ್ಮಿಂಟನ್ ದಂತಕಥೆ ಪ್ರಕಾಶ್ ಪಡುಕೋಣೆ

  • ಇನ್ನು ಮುಂದೆ ಕಾರ್ಡ್ ಬೇಡ – UPI ಬಳಸಿ ATMನಿಂದ ಕ್ಯಾಶ್ ಪಡೆಯಬಹುದು

    ಇನ್ನು ಮುಂದೆ ಕಾರ್ಡ್ ಬೇಡ – UPI ಬಳಸಿ ATMನಿಂದ ಕ್ಯಾಶ್ ಪಡೆಯಬಹುದು

    ನವದೆಹಲಿ: ಮೊಬೈಲ್ ಸಾಧನಗಳ ಮೂಲಕ ತಕ್ಷಣವೇ ಹಣವನ್ನು ವರ್ಗಾವಣೆ ಮಾಡುವಲ್ಲಿ ಏಕೀಕೃತ ಪಾವತಿಗಳ ಇಂಟರ್‌ಫೇಸ್ (UPI) ದೇಶದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪಾವತಿ ವಿಧಾನವಾಗಿದೆ. ಇಲ್ಲಿಯವರೆಗೆ ಎಟಿಎಂ ಕಾರ್ಡ್‌ಗಳನ್ನು ಬಳಸಿ ಎಟಿಎಂನಿಂದ (ATM) ಹಣವನ್ನು ಪಡೆಯಬಹುದಿತ್ತು. ಇನ್ನು ಮುಂದೆ ಹಣ ವಿತ್‌ಡ್ರಾ ಮಾಡಲು ಡೆಬಿಟ್ ಕಾರ್ಡ್ ಅಗತ್ಯವಿರುವುದಿಲ್ಲ. ಕೇವಲ ಯುಪಿಐ ಬಳಸಿ ಎಟಿಎಂನ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರಾಯ್ತು. ತಕ್ಷಣವೇ ಕ್ಯಾಶ್ ನಿಮ್ಮ ಕೈ ಸೇರುತ್ತದೆ.

    ಮಂಗಳವಾರ ಮುಂಬೈನಲ್ಲಿ ನಡೆದ ಗ್ಲೋಬಲ್ ಫಿನ್‌ಟೆಕ್ (FinTech) ಫೆಸ್ಟ್‌ನಲ್ಲಿ ಈ ಕಾರ್ಡ್ ಬಳಕೆ ಮಾಡದೆ ಹಣವನ್ನು ತೆಗೆದುಕೊಳ್ಳುವ ‘ಯುಪಿಐ ಎಟಿಎಂ’ (UPI ATM) ಅನ್ನು ಮೊದಲ ಬಾರಿಗೆ ಪ್ರದರ್ಶಿಸಲಾಗಿದೆ. ಭಾರತದ ಮೊದಲ ಯುಪಿಐ ಎಟಿಎಂ ಇದಾಗಿದ್ದು, ಜನರು ಪ್ರತಿ ಬಾರಿ ಎಟಿಎಂ ಹೋದಾಗ ಕಾರ್ಡ್ ಅನ್ನು ಎತ್ತಿಕೊಂಡು ಹೋಗುವ ಅಗತ್ಯವನ್ನು ಕಡಿಮೆ ಮಾಡುತ್ತದೆ. ನೆಟ್ಟಿಗರು ಈ ಹೊಸ ಫೀಚರ್ ಅನ್ನು ‘ಗೇಮ್ ಚೇಂಜರ್’ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

    ಗುರುವಾರ ಕೇಂದ್ರ ಸಚಿವ ಪೀಯೂಷ್ ಗೋಯಲ್ ಮೈಕ್ರೋಬ್ಲಾಗಿಂಗ್ ಸೈಟ್ ಎಕ್ಸ್‌ನಲ್ಲಿ ಇದಕ್ಕೆ ಸಂಬಂಧಪಟ್ಟ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ಫಿನ್‌ಟೆಕ್‌ನ ಪ್ರಭಾವಿ ರವಿಸುತಂಜನಿ ಅವರು ಯುಪಿಐ ಬಳಸಿ ಎಟಿಎಂನಿಂದ ಹಣವನ್ನು ಹೇಗೆ ಪಡೆದರು ಎಂಬುದನ್ನು ತೋರಿಸಿದ್ದಾರೆ. ಇದನ್ನೂ ಓದಿ: ಜಿ20 ಶೃಂಗಸಭೆಯಲ್ಲಿ ಭಗವದ್ಗೀತೆಯ ನೀತಿಗಳನ್ನು ಹರಡಲಿರುವ ಗೀತಾ ಅಪ್ಲಿಕೇಷನ್!

    ವೀಡಿಯೋದಲ್ಲೇನಿದೆ?
    ಮೂಲತಃ ವೀಡಿಯೋವನ್ನು ಪೋಸ್ಟ್ ಮಾಡಿರುವ ರವಿಸುತಂಜನಿ ಮೊದಲು ಎಟಿಎಂ ಪರದೆ ಮೇಲೆ ತೋರಿಸುವ ಯುಪಿಐ ಕಾರ್ಡ್‌ಲೆಸ್ ಕ್ಯಾಶ್ ಆಯ್ಕೆಯ ಮೇಲೆ ಕ್ಲಿಕ್ ಮಾಡುತ್ತಾರೆ. ನಂತರ ತಾವು ಪಡೆಯಲು ಬಯಸುವ ಮೊತ್ತವನ್ನು ನಮೂದಿಸುತ್ತಾರೆ. ಈ ವೇಳೆ ಎಟಿಎಂ ಸ್ಕ್ರೀನ್‌ನಲ್ಲಿ ಕ್ಯೂಆರ್ ಕೋಡ್ ಗೋಚರಿಸುತ್ತದೆ. ಬಳಿಕ ಅವರು ಭೀಮ್ ಆ್ಯಪ್ ಅನ್ನು ಬಳಸಿಕೊಂಡು ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುತ್ತಾರೆ. ನಂತರ ತಮ್ಮ ಯುಪಿಐ ಪಿನ್ ಅನ್ನು ನಮೂದಿಸುತ್ತಾರೆ. ಇದಾದ ಬಳಿಕ ಅವರು ಹಣವನ್ನು ಸಂಗ್ರಹಿಸುತ್ತಾರೆ.

    ರವಿಸುತಂಜನಿ ಅವರ ವೀಡಿಯೋವನ್ನು ಹಂಚಿಕೊಂಡಿರುವ ಗೋಯಲ್ ‘ಯುಪಿಐ ಎಟಿಎಂ: ಫಿನ್‌ಟೆಕ್‌ನ ಭವಿಷ್ಯ ಇಲ್ಲಿದೆ!’ ಎಂದು ಬರೆದಿದ್ದಾರೆ. ಈ ವಿಶೇಷ ಎಟಿಎಂ ಅನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಅಭಿವೃದ್ಧಿಪಡಿಸಿದೆ. ಮತ್ತು ಎನ್‌ಸಿಆರ್ ಕಾರ್ಪೊರೇಷನ್ ನಡೆಸುತ್ತಿದೆ.

    ಯುಪಿಐ ಎಟಿಎಂ ಸಾಮಾನ್ಯ ಎಟಿಎಂನಂತೆಯೇ ಕಾರ್ಯನಿರ್ವಹಿಸುತ್ತದೆ. ಅನುಮತಿಸಲಾದ ಉಚಿತ ಬಳಕೆಯ ಮಿತಿಯನ್ನು ಮೀರಿ ಹಣ ಪಡೆದುಕೊಂಡರೆ ಶುಲ್ಕ ಅನ್ವಿಯಿಸಬಹುದು. ಇದು ಪ್ರಸ್ತುತ ಭೀಮ್ ಯುಪಿಐ ಅಪ್ಲಿಕೇಶನ್‌ನಲ್ಲಿ ಮಾತ್ರ ಲಭ್ಯವಿದೆ. ಶೀಘ್ರವೇ ಗೂಗಲ್ ಪೇ, ಫೋನ್ ಪೇ ಹಾಗೂ ಪೇಟಿಎಂನಂತಹ ಇತರ ಅಪ್ಲಿಕೇಶನ್‌ಗಳಲ್ಲಿ ಬಳಕೆಗೆ ಬರುವ ಸಾಧ್ಯತೆಯಿದೆ. ಈ ಸೇವೆ ಇನ್ನು ಕೂಡಾ ಸಾರ್ವಜನಿಕವಾಗಿ ನಿಯೋಜಿಸಲಾಗಿಲ್ಲ. ಮುಂದೆ ಹಂತ ಹಂತವಾಗಿ ಹೊರತರುವ ಸಾಧ್ಯತೆಯಿದೆ. ಇದನ್ನೂ ಓದಿ: ಸರ್ಕಾರಿ ಅಧಿಕಾರಿಗಳಿಗೆ ಐಫೋನ್ ನಿಷೇಧಿಸಿದ ಚೀನಾ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]