Tag: ಪ್ರೊ. ನಿಸ್ಸಾರ್ ಅಹಮದ್

  • ನಿತ್ಯೋತ್ಸವ ಕವಿ ಪುತ್ರನ ಚಿಕಿತ್ಸೆಗೆ 10 ಲಕ್ಷ ರೂ. ನೀಡಿದ ಬಿಬಿಎಂಪಿ

    ನಿತ್ಯೋತ್ಸವ ಕವಿ ಪುತ್ರನ ಚಿಕಿತ್ಸೆಗೆ 10 ಲಕ್ಷ ರೂ. ನೀಡಿದ ಬಿಬಿಎಂಪಿ

    ಬೆಂಗಳೂರು: ನಿತ್ಯೋತ್ಸವ ಕವಿ ಪ್ರೊ. ನಿಸ್ಸಾರ್ ಅಹಮದ್ ಅವರ ಪುತ್ರನ ಚಿಕಿತ್ಸೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವತಿಯಿಂದ 10 ಲಕ್ಷ ರೂ. ಚೆಕ್ ನೀಡಲಾಗಿದೆ.

    ಪ್ರೊ. ನಿಸ್ಸಾರ್ ಅಹಮದ್ ಅವರ ಪುತ್ರ ನವೀದ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಕಳೆದ 15 ದಿನಗಳಿಂದ ಬನ್ನೇರಘಟ್ಟ ಮುಖ್ಯರಸ್ತೆಯಲ್ಲಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನವೀದ್ ಅವರ ಅನಾರೋಗ್ಯದ ಬಗ್ಗೆ ತಿಳಿದು ಬಿಬಿಎಂಪಿ ಅವರ ಚಿಕಿತ್ಸೆಗಾಗಿ 10 ಲಕ್ಷ ರೂ. ಚೆಕ್ ನೀಡಿದೆ. ಜೊತೆಗೆ ಶೀಘ್ರವೇ ಇನ್ನೂ 10 ಲಕ್ಷ ರೂ. ಬಿಬಿಎಂಪಿ ವತಿಯಿಂದ ನವೀದ್ ಚಿಕಿತ್ಸೆಗೆ ನೀಡಲಾಗುತ್ತದೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.

    ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಅವರು ಪಾಲಿಕೆ ವತಿಯಿಂದ 10 ಲಕ್ಷ ರೂ. ಚೆಕ್ ಅನ್ನು ಅಪೋಲೋ ಆಸ್ಪತ್ರೆಯಲ್ಲಿಯೇ ನವೀದ್ ಅವರಿಗೆ ವಿತರಣೆ ಮಾಡಿದರು. ಈ ವೇಳೆ ಉಪಮೇಯರ್ ರಾಮ ಮೋಹನ ರಾಜು, ಮಾಜಿ ಉಪಮೇಯರ್ ಎಲ್. ಶ್ರೀನಿವಾಸ್ ಉಪಸ್ಥಿತರಿದ್ದರು.