Tag: ಪ್ರೊಫೆಸರ್

  • ನೆರೆ ನಂತ್ರ ಬರಗಾಲದ ಭಯದಲ್ಲಿ ಉಡುಪಿ ಜನತೆ

    ನೆರೆ ನಂತ್ರ ಬರಗಾಲದ ಭಯದಲ್ಲಿ ಉಡುಪಿ ಜನತೆ

    – ಪರೀಕ ಗ್ರಾಮದಲ್ಲಿ ಪ್ರಾಕೃತಿಕ ವಿಸ್ಮಯ
    – ಕಾಡಿನ ನಡುವೆ ಹೂ ಬಿಟ್ಟಿದೆ ಶ್ರೀತಾಳೆ ಮರ

    ಉಡುಪಿ: ಕಳೆದ ಮಳೆಗಾಲದಲ್ಲಿ ನೆರೆ ಬಂದು ರಾಜ್ಯದ ಬಹುಭಾಗಗಳು ಕೊಚ್ಚಿಕೊಂಡು ಹೋಗಿದೆ. ಆ ನಂತರ ಕರಾವಳಿಯಲ್ಲಿ ಬೀಸಿದ ಮೂರು ಚಂಡಮಾರುತಗಳು ಸಾಕಷ್ಟು ಸಮಸ್ಯೆ ತಂದೊಡ್ಡಿತು. ಗಾಯದ ಮೇಲೆ ಬರೆ ಎಳೆದಂತೆ ಬರಗಾಲ ಎದುರಾಗುತ್ತಾ ಎನ್ನುವ ಭಯ ಉಡುಪಿ ಜನರಲ್ಲಿ ಶುರುವಾಗಿದೆ. ಇದಕ್ಕೆ ಕಾರಣ ಕಾಡಿನ ನಡುವೆ ಹೂ ಬಿಟ್ಟಿರುವ ಶ್ರೀತಾಳೆ ಮರ.

    ಉಡುಪಿ ಜಿಲ್ಲೆಯ ಪರೀಕದಲ್ಲಿ ಪ್ರಾಕೃತಿಕ ವಿಸ್ಮಯವೊಂದು ನಡೆದಿದೆ. ಈ ವಿಸ್ಮಯ ಏನೆಂದರೆ ಖಾಲಿ ಜಾಗದಲ್ಲಿ ಆಗಸದತ್ತ ಬೆಳೆದಿರುವ ಶ್ರೀತಾಳೆ ಮರ ಹೂವು ಬಿಟ್ಟಿರುವುದು. ಶ್ರೀತಾಳೆ ಮರ ಭಾರತದಲ್ಲಿ ಕಾಣಸಿಗುವುದು ಬಲು ಅಪರೂಪ, ಅದರಲ್ಲೂ 62 ವರ್ಷದ ಮರ ಹೂವು ಬಿಟ್ಟಿರುವುದು ಇನ್ನೂ ವಿಶೇಷ. ಶ್ರೀತಾಳೆ ಮರ ಹೂವು ಬಿಡುವುದು ಬರಗಾಲದ ಸಮಯದಲ್ಲಿ ಎಂಬ ನಂಬಿಕೆಯಿದೆ. ಶ್ರೀತಾಳೆ ಹೂವು ಬಿಟ್ಟಾಗ ಬರಗಾಲವಿತ್ತೋ ಎಂಬ ಜಿಜ್ಞಾಸೆ ಜನರಲ್ಲಿದೆ. ಹಾಗಾಗಿ ಶ್ರೀತಾಳೆ ಮರ ಮೂಢನಂಬಿಕೆಗೆ ತುತ್ತಾಗಿ ಸರ್ವನಾಶವಾಗಿದೆ.

    ಶ್ರೀತಾಳೆ ಮರ ಹೂವು ಬಿಟ್ಟ ಸುದ್ದಿ ಕೇಳಿ ಪ್ರಾಚ್ಯವಸ್ತು ಸಂಶೋಧಕ ಪ್ರೊಫೆಸರ್ ಕೃಷ್ಣಯ್ಯ ಸ್ಥಳಕ್ಕೆ ದೌಡಾಯಿಸಿದ್ದಾರೆ. ಶ್ರೀತಾಳೆ ಮರದ ಬಗ್ಗೆ ಈಗಾಗಲೇ 40 ವರ್ಷಗಳಿಂದ ಅಧ್ಯಯನ ಮಾಡಿರುವ ಕೃಷ್ಣಯ್ಯ, ಮರದ ರಕ್ಷಣೆಗೆ ಮುಂದಾಗಿದ್ದಾರೆ. ಶ್ರೀ ತಾಳೆಮರದ ಗರಿ, ಓಲೆಗಳು ಅದರ ಇತಿಹಾಸವನ್ನೆಲ್ಲಾ ಸುತ್ತಮುತ್ತಲಿನ ಜನರಲ್ಲಿ ಮಾಹಿತಿ ತುಂಬಿಸುತ್ತಿದ್ದಾರೆ. ಮರ ಇರುವ ಜಮೀನಿನ ಮಾಲಕ ಜಗಜ್ಜೀವನ್ ಕುಟುಂಬದ ಮನವೊಲಿಸಿ ಮರ ಕಡಿಯದಂತೆ ವಿನಂತಿಸಿದ್ದಾರೆ. ಹೂವು ಕಾಯಿಯಾಗಲು ಎಂಟು ತಿಂಗಳು ಕಾಯಬೇಕು. 30 ಸಾವಿರದಿಂದ 3 ಲಕ್ಷದವರೆಗೂ ಈ ಮರ ಕಾಯಿಗಳನ್ನು ಉದುರಿಸುತ್ತದೆ. ಇದನ್ನು ಸಂಗ್ರಹಿಸಿ ದೇಶಾದ್ಯಂತ ಶ್ರೀತಾಳೆ ಮರ ನೆಟ್ಟು ಕಾರ್ಗಿಲ್ ಕಾಡು ಮಾಡುವ ಯೋಜನೆ ಹಾಕಿಕೊಂಡಿದ್ದಾರೆ. ಸ್ಥಳದಲ್ಲೇ ಮಾಹಿತಿ ಕಣಜ ನಿರ್ಮಾಣ ಮಾಡುವ ಆಲೋಚನೆಯೂ ಹಾಕಲಾಗಿದೆ.

    ಈ ಬಗ್ಗೆ ಮಾತನಾಡಿದ ಕೃಷ್ಣಯ್ಯ ಅವರು, ಹಸಿರು, ಹಸಿವು ಅಕ್ಷರ ಪ್ರತೀಕ ಈ ಮರ. ಬೆಟ್ಟ-ಗುಡ್ಡಗಳು ಜಾರದಂತೆ ಈ ಮರಗಳು ಇರುತ್ತಿದ್ದವು. ಆದರೆ ಈಗ ಈ ಮರಗಳು ನಾಶವಾಗಿರುವುದರಿಂದ ಬೆಟ್ಟ-ಗುಡ್ಡಗಳು ಜಾರುತ್ತಿದೆ. ಇದು ಔಷಧಿಯ ಮರ. ಶ್ರೀರಾಮ ಚಂದ್ರ ತನ್ನ ವನವಾಸದ ಕಾಲದಲ್ಲಿ ಈ ಮರದ ಕೆಳಗೆ ವಾಸಿಸುತ್ತಿದ್ದರು ಎಂದು ಪ್ರತಿಕ್ರಿಯಿಸಿದರು.

    ಶಾಸನಗಳು, ಪುರಾಣ- ಪಾಡ್ದನಗಳು ಎಲ್ಲವೂ ಇದೇ ಮರದ ಗರಿಯಲ್ಲಿ ಸಂಗ್ರಹಿಸಲ್ಪಟ್ಟಿರುತ್ತದೆ. ಶ್ರೀರಾಮಚಂದ್ರ ಪರ್ಣಕುಟೀರ ಮಾಡಿದ್ದು ಈ ಮರದ ಎಲೆಗಳಿಂದಲೇ. ಈ ಮರದ ತಿರುಳಿನಲ್ಲಿ ಅತೀ ಹೆಚ್ಚು ಪ್ರೊಟೀನ್ ಇದೆ. ಶ್ರೀಲಂಕಾದ ರಾಷ್ಟ್ರೀಯ ಮರವನ್ನು ಭಾರತದ ಉದ್ದಗಲಕ್ಕೂ ಸಂರಕ್ಷಿಸಿ- ಹೊಸ ಗಿಡಗಳನ್ನು ಬೆಳೆಸುವ ಅಗತ್ಯತೆಯಿದೆ. ಬರಗಾಲದ ಹೆಸರಲ್ಲಿ ಶ್ರೀತಾಳೆ ಮರದ ಮಾರಣಹೋಮ ನಿಲ್ಲಿಸಬೇಕಾಗಿದೆ.

  • ಮಹಾರಾಷ್ಟ್ರ ರಾಜಕೀಯ ಡ್ರಾಮಾ ನೋಡಿ ಅನಾರೋಗ್ಯಕ್ಕೀಡಾದ ಪ್ರೊಫೆಸರ್ – ರಜಾ ಅರ್ಜಿ ವೈರಲ್

    ಮಹಾರಾಷ್ಟ್ರ ರಾಜಕೀಯ ಡ್ರಾಮಾ ನೋಡಿ ಅನಾರೋಗ್ಯಕ್ಕೀಡಾದ ಪ್ರೊಫೆಸರ್ – ರಜಾ ಅರ್ಜಿ ವೈರಲ್

    ಮುಂಬೈ: ಮಹಾರಾಷ್ಟ್ರ ರಾಜಕೀಯದಲ್ಲಿ ಆದ ಹೈಡ್ರಾಮಾ ನೋಡಿ ಅನಾರೋಗ್ಯಕ್ಕೀಡಾಗಿದ್ದೇನೆ, ಶಾಕ್‍ಗೆ ಒಳಗಾಗಿದ್ದೇನೆ ಎಂದು ಪ್ರೊಫೆಸರ್‌ರೊಬ್ಬರು ಬರೆದ ರಜಾ ಅರ್ಜಿ ಈಗ ಎಲ್ಲೆಡೆ ಸಖತ್ ವೈರಲ್ ಆಗಿದೆ.

    ಚಂದ್ರಪುರದಿಂದ ಸುಮಾರು 43 ಕಿ.ಮೀ ದೂರವಿರುವ ಗಡ್ಚಂದೂರ್ ಕಾಲೇಜಿನ ಇಂಗ್ಲಿಷ್ ಪ್ರೊಫೆಸರ್ ಝಹೀರ್ ಸಯ್ಯದ್ ಅವರು ಈ ರೀತಿ ರಜಾ ಅರ್ಜಿ ಬರೆದಿದ್ದಾರೆ. ಶನಿವಾರ ಬೆಳಗ್ಗೆ ಟಿವಿ ನೋಡುತ್ತಿದ್ದಾಗ ಮಹಾರಾಷ್ಟ್ರ ರಾಜಕೀಯದಲ್ಲಿ ನಡೆದ ಹೈಡ್ರಾಮಾದ ಸುದ್ದಿ ಪ್ರಸಾರವಾಗಿತ್ತು. ಇದನ್ನು ನೋಡಿ ನನಗೆ ಶಾಕ್ ಆಯ್ತು. ಇದರಿಂದ ನಾನು ಅನಾರೋಗ್ಯಕ್ಕೀಡಾದೆ. ಹೀಗಾಗಿ ನನಗೆ ಕಾಲೇಜಿಗೆ ಬರಲು ಆಗುತ್ತಿಲ್ಲ ರಜಾ ನೀಡಿ ಎಂದು ಪ್ರಾಂಶುಪಾಲರಿಗೆ ಪ್ರೊಫೆಸರ್ ಅರ್ಜಿ ಬರೆದಿದ್ದರು. ಇದನ್ನೂ ಓದಿ:ಫಡ್ನವಿಸ್, ಅಜಿತ್ ಪವಾರ್ ಪದಗ್ರಹಣಕ್ಕೆ ಬಂದಿದ್ದ ಎನ್‍ಸಿಪಿ ಶಾಸಕ ನಾಪತ್ತೆ

    ಪ್ರೊಫೆಸರ್ ರಜಾ ಅರ್ಜಿ ನೋಡಿದ ಪ್ರಾಂಶುಪಾಲರು, ಅರ್ಜಿಯಲ್ಲಿದ್ದ ಕಾರಣವನ್ನು ಒಪ್ಪದೆ ರಜೆ ನೀಡಲು ತಿರಸ್ಕರಿಸಿದ್ದಾರೆ. ಆದರೆ ಈ ರಜಾ ಅರ್ಜಿ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಓರ್ವ ವ್ಯಕ್ತಿ ಅನಾರೋಗ್ಯಕ್ಕೀಡಾಗುವ ರೀತಿ ಮಹಾರಾಷ್ಟ್ರ ರಾಜಕೀಯದಲ್ಲಿ ಹೈಡ್ರಾಮಾ ನಡೆಯುತ್ತಿದೆ. ಇದ್ದಕ್ಕಿದ್ದ ಹಾಗೆ ಬಿಜೆಪಿ ಎನ್‍ಸಿಪಿ ಜೊತೆಗೂಡಿ ಸರ್ಕಾರ ರಚನೆ ಮಾಡುತ್ತಿರುವುದು ಅನೇಕರಿಗೆ ಅಚ್ಚರಿಗೊಳಿಸಿದೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಇದನ್ನೂ ಓದಿ:ಕಂಡು ಕೇಳರಿಯದ `ಮಹಾ’ ನಾಟಕದ ಸೂತ್ರಧಾರಿ ಯಾರು?

    ಶನಿವಾರ ಮಹಾರಾಷ್ಟ್ರ ಸಿಎಂ ಆಗಿ ಎರಡನೇ ಬಾರಿಗೆ ದೇವೆಂದ್ರ ಫಡ್ನವಿಸ್ ಪ್ರಮಾಣವಚನ ಸ್ವೀಕರಿಸಿದ್ದರು. ಅವರ ಜೊತೆಗೆ ಎನ್‍ಸಿಪಿ ನಾಯಕ ಅಜಿತ್ ಪವಾರ್ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಈ ವಿಚಾರ ಕೇಳಿ ಸ್ವತಃ ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರೇ ಶಾಕ್ ಪಟ್ಟು, ವಿರೋಧಿಸಿದ್ದರು. ಅಲ್ಲದೆ ಶಿವಸೇನೆ ಜೊತೆಗೂಡಿ ಸುದ್ದಿಗೋಷ್ಠಿಯನ್ನೂ ನಡೆಸಿ, ಬಿಜೆಪಿ ಬೆಂಬಲ ನೀಡುತ್ತಿರುವುದು ಅಜಿತ್ ಪವಾರ್ ಅವರ ವೈಯಕ್ತಿಕ ವಿಚಾರವೇ ಹೊರೆತು ಎನ್‍ಸಿಪಿದಲ್ಲ ಎಂದು ಶರದ್ ಪವಾರ್ ಹೇಳಿದ್ದರು.

  • ‘ಪತ್ನಿ ಮನೆಯಲಿಲ್ಲ, ಬಂದು ಅಡುಗೆ ಮಾಡು’- ನಡುರಾತ್ರಿ ವಿದ್ಯಾರ್ಥಿನಿಗೆ ಪ್ರೊಫೆಸರ್ ಮೆಸೇಜ್

    ‘ಪತ್ನಿ ಮನೆಯಲಿಲ್ಲ, ಬಂದು ಅಡುಗೆ ಮಾಡು’- ನಡುರಾತ್ರಿ ವಿದ್ಯಾರ್ಥಿನಿಗೆ ಪ್ರೊಫೆಸರ್ ಮೆಸೇಜ್

    ಡೆಹ್ರಾಡೂನ್: ವಿದ್ಯಾರ್ಥಿನಿಗೆ ನಡುರಾತ್ರಿ ಸಂದೇಶ ರವಾನೆ ಮಾಡಿದ್ದ ಪ್ರೊಫೆಸರ್, ತನ್ನ ಪತ್ನಿ ಮನೆಯಲ್ಲಿ ಇಲ್ಲ. ಬಂದು ಅಡುಗೆ ಮಾಡಿಕೊಡು ಎಂದು ಮೆಸೇಜ್ ಮಾಡಿ ಕಿರುಕುಳ ನೀಡಿರುವ ಘಟನೆ ಉತ್ತರಖಂಡ್ ಪಂತ್ ವಿಶ್ವವಿದ್ಯಾಲಯದಲ್ಲಿ ನಡೆದಿದೆ.

    ಪ್ರೊಫೆಸರ್ ಕೆಟ್ಟ ಸಂದೇಶದ ಕುರಿತು ವಿದ್ಯಾರ್ಥಿನಿ ವಿಶ್ವವಿದ್ಯಾಲಯದ ವಿಸಿ ಅವರಿಗೆ ದೂರು ನೀಡಿದ್ದು, ಮಹಿಳಾ ವಿದ್ಯಾರ್ಥಿಗಳ ಹಾಸ್ಟೆಲ್ ವಾರ್ಡನ್ ಆಗಿ ಜವಾಬ್ದಾರಿ ವಹಿಸಿಕೊಂಡಿದ್ದ ಪ್ರೊಫೆಸರ್ ವಿರುದ್ಧ ಕ್ರಮಕ್ಕೆ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

    ಘಟನೆ ಸಂಬಂಧ ವಿದ್ಯಾರ್ಥಿನಿ ವಿಸಿ ಅವರಿಗೆ ಸಂದೇಶದ ಫೋಟೋವನ್ನು ಸಾಕ್ಷಿಯಾಗಿ ನೀಡಿದ್ದು, ವಿಶ್ವವಿದ್ಯಾಲಯ ಕಮಿಟಿ ಪ್ರೊಫೆಸರ್ ನನ್ನು ಹಾಸ್ಟೆಲ್ ವಾರ್ಡನ್ ಹುದ್ದೆಯಿಂದ ತೆರವು ಮಾಡಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಆದರೆ ಪ್ರೊಫೆಸರ್ ವಿರುದ್ಧ ಪೊಲೀಸ್ ದೂರು ದಾಖಲಾಗಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಪ್ರಕರಣದ ಸಂಬಂಧ ಮಾಹಿತಿ ಪಡೆದಿರುವ ರಾಜ್ಯಪಾಲರು ಪ್ರೊಫೆಸರ್ ವಿರುದ್ಧ ಕ್ರಮಕೈಗೊಳ್ಳಲು ಸೂಚನೆ ನೀಡಿದ್ದಾರೆ. ಅಲ್ಲದೇ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿಯರಿಗೆ ಸೂಕ್ತ ರಕ್ಷಣೆ ನೀಡುವಂತೆ ತಿಳಿಸಿದ್ದಾರೆ. ಪ್ರಕರಣದ ಕುರಿತಂತೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ವಿಶ್ವವಿದ್ಯಾಲಯ ರಿಜಿಸ್ಟ್ರಾರ್ ಎಪಿ ಶರ್ಮಾ, ರಾಜ್ಯಪಾಲರ ನಿರ್ದೇಶನದಂತೆ ವಾರ್ಡನ್ ಹುದ್ದೆಯಿಂದ ತೆಗೆದು ಹಾಕಲಾಗಿದ್ದು, ಹೆಚ್ಚಿನ ವಿಚಾರಣೆಯನ್ನು ನಡೆಸುತ್ತಿದ್ದೇವೆ. ವಿಶ್ವವಿದ್ಯಾಲಯದಲ್ಲಿರುವ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆ ಎದುರಾಗಂತೆ ಕ್ರಮಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

  • ಬಿರು ಬೇಸಿಗೆಯಲ್ಲೂ ಕರೆಂಟ್ ಇಲ್ಲದೆ ಮ್ಯಾನೇಜ್ ಮಾಡ್ತೀನಿ- ಮಹಿಳಾ ಪ್ರೊಫೆಸರ್

    ಬಿರು ಬೇಸಿಗೆಯಲ್ಲೂ ಕರೆಂಟ್ ಇಲ್ಲದೆ ಮ್ಯಾನೇಜ್ ಮಾಡ್ತೀನಿ- ಮಹಿಳಾ ಪ್ರೊಫೆಸರ್

    – ನೈಸರ್ಗಿಕ ಪರಿಸರವೇ ನನ್ನ ಆಸ್ತಿ

    ಪುಣೆ: ಈ ಬಾರಿ ಬಿಸಿಲು ಸುಡುತ್ತಿದ್ದು, ವಿದ್ಯುತ್ ಇಲ್ಲದೇ ಇದ್ದರೆ ಹೇಗಪ್ಪ ನಗರದಲ್ಲಿ ಬದುಕುವುದು ಎಂದು ಕೆಲ ವ್ಯಕ್ತಿಗಳು ಹೇಳಿರುವುದನ್ನು ನೀವು ಕೇಳಿರಬಹುದು. ಆದರೆ ಮಹಾರಾಷ್ಟ್ರದ ಪುಣೆಯಲ್ಲಿ 79 ವರ್ಷದ ಮಹಿಳಾ ಪ್ರೊಫೆಸರ್ ಒಬ್ಬರು ವಿದ್ಯುತ್ ಇಲ್ಲದೆ ಜೀವನ ನಡೆಸುತ್ತೇನೆ ಎಂದು ಹೇಳುತ್ತಿದ್ದಾರೆ.

    ಹೌದು ಡಾ. ಹೇಮಾ ಅವರು ಪುಣೆಯ ಬುಧ್ವಾರ್ ಪೆತ್ ಎಂಬಲ್ಲಿ ಸಣ್ಣ ಗುಡಿಸಲಿನಲ್ಲಿ ವಾಸವಾಗಿದ್ದು, ಹುಟ್ಟಿದಾಗಿನಿಂದಲೂ ವಿದ್ಯುತ್ ಉಪಯೋಗಿಸಿಲ್ಲ. ಇವರು ಪುಣೆಯ ಸಾವಿತ್ರಿಭಾಯ್ ಪುಲೆ ವಿಶ್ವವಿದ್ಯಾಲಯದಲ್ಲಿ ಪಿಎಚ್‍ಡಿ ಪದವಿ ಪಡೆದಿದ್ದು ಆ ಬಳಿಕ ಹಲವಾರು ವರ್ಷ ಪುಣೆಯ ಗರ್ವಾರೆ ಕಾಲೇಜಿನಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸಿದ್ದರು.

    ಆಹಾರ, ಆಶ್ರಯ ಹಾಗೂ ಬಟ್ಟೆ ಮನುಷ್ಯನಿಗೆ ಬೇಕಾದ ಮೂಲಭೂತ ಅಗತ್ಯತೆಗಳು. ಒಂದು ಕಾಲದಲ್ಲಿ ವಿದ್ಯುತ್ ಇರಲೇ ಇಲ್ಲ. ನಾನು ಹುಟ್ಟಿ ಹಲವು ವರ್ಷಗಳ ಬಳಿಕ ವಿದ್ಯುತ್ ಬಂದಿದ್ದು, ಹೀಗಾಗಿ ಇದೀಗ ವಿದ್ಯುತ್ ಇಲ್ಲದೇ ಜೀವನ ನಡೆಸಬಲ್ಲೆನು ಎಂದು ಧೈರ್ಯವಾಗಿ ಹೇಳುತ್ತಿದ್ದಾರೆ.

    ವಿದ್ಯುತ್ ಬೇಡ ಯಾಕೆ?
    ಪರಿಸರದ ಮೇಲಿನ ಪ್ರೀತಿಯಿಂದ ನಾನು ವಿದ್ಯುತ್ ಬಳಕೆ ಮಾಡಲ್ಲ. ನಾಯಿ, 2 ಬೆಕ್ಕು ಹಾಗೂ ಪಕ್ಷಿಗಳೇ ನನ್ನ ಆಸ್ತಿ. ಇವುಗಳನ್ನು ನೋಡಿಕೊಳ್ಳುವುದಕ್ಕಾಗಿಯೇ ನಾನಿಲ್ಲಿದ್ದೇನೆ. ಜನ ನನ್ನ ಮೂರ್ಖಳು ಎಂದು ಕರೆಯಬಹುದು. ಅಥವಾ ಹುಚ್ಚಿ ಅಂದರೂ ನನಗೆ ಬೇಜಾರಿಲ್ಲ. ಇದು ನನ್ನ ಜೀವನವಾಗಿದೆ. ನಾನು ಇಷ್ಟಪಟ್ಟಂತೆ ಇಲ್ಲಿ ಬದುಕುತ್ತಿದ್ದೇನೆ ಎಂದು ಪ್ರೊಫೆಸರ್ ಹೇಳಿದ್ದಾರೆ.

    ಇವರ ಮನೆಯ ಸುತ್ತಲೂ ವಿವಿಧ ರೀತಿಯ ಮರಗಳಿದ್ದು, ಹಲವು ಬಗೆಯ ಪಕ್ಷಿಗಳು ಹಾರಾಡುತ್ತಿವೆ. ಹಕ್ಕಿಗಳ ಬೆಳಗ್ಗಿನ ಕಲರವದಿಂದಲೇ ಇವರ ಜೀವನ ಆರಂಭವಾಗುತ್ತಿದ್ದು, ಆಕಾಶದಲ್ಲಿ ನಕ್ಷತ್ರಗಳನ್ನು ನೋಡುವ ಮೂಲಕ ದಿನ ಕೊನೆಯಾಗುತ್ತದೆ. ಇವರು ಪರಿಸರಕ್ಕೆ ಸಂಬಂಧಿಸಿದಂತೆ ಹಲವು ಪುಸ್ತಕಗಳನ್ನು ಬರೆದಿದ್ದು, ಎಲ್ಲವೂ ಮಾರುಕಟ್ಟೆಯಲ್ಲಿ ಸಿಗುತ್ತಿವೆ. ಇವತ್ತಿಗೂ ಅವರು ಪುಸ್ತಕಗಳನ್ನು ಬರೆಯುತ್ತಿದ್ದಾರೆ.

    ನನಗೆ ನನ್ನ ಜೀವನದಲ್ಲಿ ಒಮ್ಮೆಯೂ ವಿದ್ಯುತ್ ಬೇಕು ಅನ್ನಿಸಿಲ್ಲ. ಎಲೆಕ್ಟ್ರಿಸಿಟಿ ಇಲ್ಲದೇ ಹೇಗೆ ಜೀವನ ಮಾಡ್ತೀಯಾ ಎಂದು ಹಲವು ಮಂದಿ ನನ್ನನ್ನು ಪ್ರಶ್ನಿಸಿದ್ದಾರೆ. ಆಗ ನಾನು ಜೀವನ ಮಾಡಲು ಕರೆಂಟ್ ಯಾಕೆ ಬೇಕು ಎಂದು ಮರುಪ್ರಶ್ನೆ ಹಾಕುತ್ತಿದ್ದೆ. ಪಕ್ಷಿಗಳೇ ನನ್ನ ಗೆಳೆಯರು. ನಾನು ಮನೆ ಕೆಲಸ ಮಾಡುವಾಗ ಅವುಗಳು ಕೂಡ ಬರುತ್ತವೆ. ನೀವು ಯಾಕೆ ಈ ಮನೆ ಮಾರುತ್ತಿಲ್ಲ. ಮಾರಿದ್ರೆ ನಿಮ್ಮ ತುಂಬಾ ಹಣ ಬರಬಹುದು ಅಲ್ಲವೇ ಎಂದು ಹಲವು ಮಂದಿ ನನ್ನ ಕೇಳಿದ್ದರು. ನಾನು ಮನೆ ಮಾರಿದ್ರೆ ಮರ ಹಾಗೂ ನನ್ನ ಮರ ಹಾಗೂ ಪಕ್ಷಿಗಳನ್ನು ಯಾರು ನೋಡಿಕೊಳ್ಳುತ್ತಾರೆ. ಹೀಗಾಗಿ ನಾನು ಎಲ್ಲಗೂ ಹೋಗುವುದಿಲ್ಲ. ಇವುಗಳ ಜೊತೆಯೇ ವಾಸ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.

     

  • ಕನ್ಯತ್ವದ ಬಗ್ಗೆ ಪೋಸ್ಟ್ ಹಾಕಿ, ಅದು ಸಂಡೇ ಫನ್ ಎಂದ ಪ್ರೊಫೆಸರ್!

    ಕನ್ಯತ್ವದ ಬಗ್ಗೆ ಪೋಸ್ಟ್ ಹಾಕಿ, ಅದು ಸಂಡೇ ಫನ್ ಎಂದ ಪ್ರೊಫೆಸರ್!

    ಕೋಲ್ಕತ್ತಾ: ಕನ್ಯತ್ವದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಪೋಸ್ಟ್ ಹಾಕಿದ್ದ ಪ್ರೊಫೆಸರ್, ಅದು ನನ್ನ ಸಂಡೇ ಫನ್ ಅಂದು ಹೇಳುವ ಮೂಲಕ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

    ಪಶ್ಚಿಮ ಬಂಗಾಳದ ಜಾಧವ್‍ಪುರ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಕನಕ್ ಸರ್ಕಾರ್ ಕನ್ಯತ್ವದ ಬಗ್ಗೆ ಅಶ್ಲೀಲವಾಗಿ ಫೇಸ್‍ಬುಕ್‍ನಲ್ಲಿ ಬರೆದು ಪೋಸ್ಟ್ ಮಾಡಿದ್ದರು. ಆದರಿಂದ ಅವರ ಅನಿಸಿಕೆಯ ಬಗ್ಗೆ ಸಾಕಷ್ಟು ಟೀಕೆ, ವ್ಯಕ್ತವಾಗಿ ವಿವಾದ ಸೃಷ್ಟಿಯಾಗಿತ್ತು. ವಿರೋಧ ಅಭಿಪ್ರಾಯಗಳು ಪ್ರಕಟವಾಗುತ್ತಿದ್ದಂತೆ, ನಾನು ಭಾನುವಾರದ ಮಜಾ ತೆಗೆದುಕೊಳ್ತಿದ್ದೆ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ.  ಇದನ್ನೂ ಓದಿ: ನೀವು ಸೀಲ್ ಒಡೆದಿರುವ ತಂಪು ಪಾನೀಯ ಖರೀದಿ ಮಾಡುತ್ತೀರಾ : ಕನ್ಯತ್ವದ ಬಗ್ಗೆ ಪ್ರೊಫೆಸರ್ ಪೋಸ್ಟ್

    ಸರ್ಕಾರ್‍ರ ಅನಿಸಿಕೆ ಬಗ್ಗೆ ಖುದ್ದು ವಿವಿಯ ಕುಲಪತಿ ಸುರಂಜನ್ ದಾಸ್ ವಿರೋಧ ವ್ಯಕ್ತಪಡಿಸಿದ್ದು, ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಕೂಡ ಪ್ರೊ. ಸರ್ಕಾರ್ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ಇನ್ನು ಮುಂದೆ ಸರ್ಕಾರ್ ನಮಗೆ ಪಾಠ ಮಾಡುವುದು ಬೇಡ. ಇಂತವರಿಂದ ಯುವ ಜನಾಂಗದ ಮನಸ್ಸು ಹಾಳಾಗುತ್ತಿದೆ. ಜಾಧವ್ ಅವರನ್ನು ಸೇವೆಯಿಂದಲೇ ವಜಾಗೊಳಿಸಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದಾರೆ.

    ಪ್ರತಿಭಟನೆಯ ವಿಚಾರವಾಗಿ ಪ್ರತಿಕ್ರಿಯಿಸಿದ ಪ್ರೊ. ಸರ್ಕಾರ್, ಎಲ್ಲರಿಗೂ ಮಾತನಾಡುವ ಹಕ್ಕು ಇದ್ದು, ನಾನು ನನ್ನ ಅನಿಸಿಕೆಯನ್ನು ವ್ಯಕ್ತಪಡಿಸಿದ್ದೆ. ಸೇವೆಯಿಂದ ವಜಾಗೊಳಿಸಿದರೆ ನನ್ನ ವಾಕ್ ಸ್ವಾತಂತ್ರ್ಯವನ್ನು ಹರಣ ಮಾಡಿದಂತೆ ಎಂದು ಹೇಳಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನೀವು ಸೀಲ್ ಒಡೆದಿರುವ ತಂಪು ಪಾನೀಯ ಖರೀದಿ ಮಾಡುತ್ತೀರಾ : ಕನ್ಯತ್ವದ ಬಗ್ಗೆ ಪ್ರೊಫೆಸರ್ ಪೋಸ್ಟ್

    ನೀವು ಸೀಲ್ ಒಡೆದಿರುವ ತಂಪು ಪಾನೀಯ ಖರೀದಿ ಮಾಡುತ್ತೀರಾ : ಕನ್ಯತ್ವದ ಬಗ್ಗೆ ಪ್ರೊಫೆಸರ್ ಪೋಸ್ಟ್

    ಕೋಲ್ಕತ್ತಾ: ಯುವತಿಯರ ಕನ್ಯತ್ವದ ಬಗ್ಗೆ ಅಶ್ಲೀಲವಾಗಿ ಪಶ್ಚಿಮ ಬಂಗಾಳದ ಪ್ರೊಫೆಸರ್ ಒಬ್ಬರು ಬರೆದು ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ.

    ಕೋಲ್ಕತ್ತಾದ ಪ್ರತಿಷ್ಠಿತ ಜಾಧವ್‍ಪುರ ವಿಶ್ವವಿದ್ಯಾಲಯದ ಪ್ರೊಫೆಸರ್ ಕನಕ್ ಸರ್ಕಾರ್ ಕನ್ಯತ್ವವನ್ನು ತಂಪು ಪಾನೀಯಕ್ಕೆ ಹೋಲಿಸಿ, ನೀವು ಸೀಲ್ ಒಡೆದಿರುವ ತಂಪು ಪಾನೀಯ ಖರೀದಿ ಮಾಡುತ್ತೀರಾ ಎಂದು ಪ್ರಶ್ನಿಸಿ ಫೇಸ್‍ಬುಕ್ ನಲ್ಲಿ ಪೋಸ್ಟ್ ಪ್ರಕಟಿಸಿದ್ದಾರೆ.

    ನೀವು ಸೀಲ್ ಒಡೆದಿರುವ ತಂಪು ಪಾನೀಯವನ್ನು ಖರೀದಿ ಮಾಡುತ್ತೀರಾ ಅಥವಾ ಪ್ಯಾಕ್ ಆಗಿರುವ ಬಿಸ್ಕೇಟ್ ಅನ್ನು ಖರೀದಿ ಮಾಡುತ್ತೀರಾ ಎಂದು ಯುವಕರಿಗೆ ಕನಕ್ ಸರ್ಕಾರ್ ಪ್ರಶ್ನೆ ಮಾಡಿದ್ದಾರೆ.

    20 ವರ್ಷ ಬೋಧನ ಅನುಭವ ಮತ್ತು ಪಿಎಚ್‍ಡಿ ಮಾರ್ಗದರ್ಶಕರಾಗಿರುವ ಕನಕ್ ಸರ್ಕಾರ್, ಕನ್ಯತ್ವ ಹೊಂದಿರುವ ಯುವತಿಯರ ಬಗ್ಗೆ ಈಗಿನ ಹುಡುಗರಿಗೆ ಅರಿವು ಇಲ್ಲ. ಹುಡುಗಿ ಸೀಲ್ ಆಗಿದ್ದರೆ ಆಕೆ `ದೇವತೆ’ ಎಂದು ಬರೆದುಕೊಂಡಿದ್ದಾರೆ.

    ಹುಟ್ಟಿನಿಂದ ಸೀಲ್ ಓಪನ್ ಆಗುವರೆಗೂ ಆಕೆ ಹುಡುಗಿಯಾಗಿರುತ್ತಾಳೆ. ಮದುವೆಯ ಸಮಯದಲ್ಲೂ ಕನ್ಯತ್ವವನ್ನು ಉಳಿಸಿಕೊಂಡಿದ್ದಾಳೆ ಎಂದರೆ ಆಕೆ ಉತ್ತಮ ಗುಣ ನಡತೆಯ ಜೊತೆ ಸುಸಂಸ್ಕೃತೆ ಎಂದರ್ಥ. ಇಂದಿನ ಕಾಲದಲ್ಲಿ ಹುಡುಗರು, ಹುಡುಗಿಯರು ಬ್ರಹ್ಮಚರ್ಯೆ ಮತ್ತು ಕನ್ಯತ್ವದ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳುವುದಿಲ್ಲ. ಈ ಕಾರಣಕ್ಕೆ ಹುಡುಗಿಯರು ಹುಡುಗರ ಕುತಂತ್ರಕ್ಕೆ ಬಲಿಯಾಗುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ.

    ಕನ್ಯತ್ವದ ಬಗ್ಗೆ ಜಪಾನ್ ದೇಶದ ಉದಾಹರಣೆ ನೀಡಿದ ಅವರು, ಜಪಾನಿನ ಶೇ.99ರಷ್ಟು ಹುಡುಗಿಯರು ಮದುವೆಯಾಗುವವರೆಗೂ ಕನ್ಯತ್ವ ಉಳಿಸಿಕೊಂಡಿರುತ್ತಾರೆ ಎನ್ನುವುದು ಹೆಮ್ಮೆಯ ವಿಚಾರ. ಜಪಾನಿನ ಸಮಾಜ ಅಭಿವೃದ್ಧಿ ಹೊಂದಿದೆ ಎನ್ನುವುದನ್ನು ಇದರಿಂದಲೇ ಗುರುತಿಸಬಹುದು ಎಂದು ಹೇಳಿದ್ದಾರೆ.

    ಪಾಶ್ಚಿಮಾತ್ಯ ಜೀವನ ಶೈಲಿ ಅಳವಡಿಸಿಕೊಂಡ ಕಾರಣ ಇಂದಿನ ಯುವಕ, ಯುವತಿ ಹಾಳಾಗುತ್ತಿದ್ದಾರೆ. ಹೀಗಾಗಿ ಇವರಿಗೆ ಕನ್ಯತ್ವದ ಮಹತ್ವವೇ ತಿಳಿದಿಲ್ಲ ಎಂದು ದೂರಿದ್ದಾರೆ.

    ಫೇಸ್‍ಬುಕ್ ನಲ್ಲಿ ಕೆಲ ದಿನಗಳಿಂದ ಕನ್ಯತ್ವದ ಬಗ್ಗೆ ಪೋಸ್ಟ್ ಪ್ರಕಟಿಸುತ್ತಿದ್ದ ಕನಕ್ ಸರ್ಕಾರ್ ತನ್ನ ಅಭಿಪ್ರಾಯಗಳು ವಿವಾದಕ್ಕೆ ಕಾರಣವಾಗುತ್ತಿದೆ ಎನ್ನುವುದನ್ನು ತಿಳಿದು ಎಲ್ಲ ಪೋಸ್ಟ್ ಗಳನ್ನು ಈಗ ಡಿಲೀಟ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಾಠ ಮಾಡ್ತಿದ್ದಾಗ 500 ವಿದ್ಯಾರ್ಥಿಗಳ ಮುಂದೆಯೇ ಫ್ಲೇ ಆಯ್ತು ಪೋರ್ನ್ ವಿಡಿಯೋ!

    ಪಾಠ ಮಾಡ್ತಿದ್ದಾಗ 500 ವಿದ್ಯಾರ್ಥಿಗಳ ಮುಂದೆಯೇ ಫ್ಲೇ ಆಯ್ತು ಪೋರ್ನ್ ವಿಡಿಯೋ!

    ಟೊರೊಂಟೊ: ಮನೋವಿಜ್ಞಾನಿ ಪ್ರೊಫೆಸರ್ ಒಬ್ಬರು ವಿದ್ಯಾರ್ಥಿಗಳಿಗೆ ವಿಡಿಯೋ ಮೂಲಕ ಪಾಠ ಹೇಳಿಕೊಡುತ್ತಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಪೋರ್ನ್ ವಿಡಿಯೋ ಪ್ರಸಾರವಾಗಿರುವ ಘಟನೆ ಕೆನಡಾದ ಟೊರೊಂಟೊದಲ್ಲಿ ನಡೆದಿದೆ.

    ಟೊರಂಟೊ ಸ್ಕಾರ್ಬರೊ ವಿಶ್ವವಿದ್ಯಾನಿಲಯದಲ್ಲಿ ಈ ಘಟನೆ ನಡೆದಿದ್ದು, ಪ್ರೊಫೆಸರ್ ಡಾ. ಸ್ಟೀವ್ ಜೋರ್ಡಾನ್ಸ್ ಪಾಠ ಮಾಡುವಾಗ ಈ ರೀತಿ ವಿಡಿಯೋ ಪ್ಲೇ ಆಗಿದೆ. ಈ ತರಗತಿಯಲ್ಲಿ ಸುಮಾರು 500 ವಿದ್ಯಾರ್ಥಿಗಳಿದ್ದರು ಎಂದು ವದರಿಯಾಗಿದೆ.

    ಪ್ರೋ. ಜೋರ್ಡಾನ್ಸ್ ಕ್ಲಾಸ್ ರೂಮಿನಲ್ಲಿ ಜೈವಿಕ ಮತ್ತು ಅರಿವಿನ ಮನೋವಿಜ್ಞಾನದ ಬಗ್ಗೆ ತಿಳಿಸಲು ತಮ್ಮ ಮೊಬೈಲನ್ನು ಲ್ಯಾಪ್‍ಟಾಪಿಗೆ ಸಂಪರ್ಕಿಸಿ ದೊಡ್ಡ ಸ್ರ್ಕೀನ್ ಮೂಲಕ ಪಾಠ ಮಾಡುತ್ತಿದ್ದರು. ಈ ವೇಳೆ ಇದ್ದಕ್ಕಿದಂತೆ ಪೋರ್ನ್ ವಿಡಿಯೋ 500 ವಿದ್ಯಾರ್ಥಿಗಳ ಮುಂದೆ ಪ್ರಸಾರವಾಗಿದೆ. ವಿಡಿಯೋ ಪ್ರಸಾರವಾಗುತ್ತಿದ್ದಂತೆ ವಿದ್ಯಾರ್ಥಿಗಳು ಶಾಕ್ ಆಗಿದ್ದು, ನಂತರ ನಗಲಾರಂಭಿಸಿದ್ದಾರೆ.

    ಈ ವೇಳೆ ಕೆಲ ವಿದ್ಯಾರ್ಥಿಗಳು ಇದನ್ನು ತಮ್ಮ ಮೊಬೈಲಿನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದು, ಬಳಿಕ ಅವರು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಬಗ್ಗೆ ಅನೇಕ ರೀತಿಯ ಕಮೆಂಟ್ ಗಳನ್ನು ಮಾಡಿದ್ದಾರೆ. ನಾನು ಪೋರ್ನ್ ವಿಡಿಯೋ ನೋಡಿದಾಗ ನನಗೆ ಆಶ್ಚರ್ಯವಾಯಿತು. ಆದರೆ ತರಗತಿಯಲ್ಲಿದ್ದ ಬಹಳಷ್ಟು ಜನರು ನಗುತ್ತಿದ್ದರು ಎಂದು ವಿದ್ಯಾರ್ಥಿಯೊಬ್ಬ ಕಮೆಂಟ್ ಮಾಡಿದ್ದಾನೆ.

    ಪ್ರತಿಯೊಬ್ಬರೂ ತಪ್ಪು ಮಾಡುತ್ತಾರೆ. ಆದ್ದರಿಂದ ನಾನು ಅವರನ್ನು ದೂಷಿಸುವುದಿಲ್ಲ. ಈ ಸಂದರ್ಭದಲ್ಲಿ ಎಲ್ಲರೂ ನಕ್ಕು ಸುಮ್ಮನಾಗಿದ್ದಾರೆ ಎಂದು ವಿದ್ಯಾರ್ಥಿಯೊಬ್ಬ ಹೇಳಿದ್ದಾನೆ.

    ಇದು ಖಾಸಗಿ ವಿಚಾರವಾಗಿದ್ದು, ಸೂಕ್ತ ವಿಚಾರಣೆ ನಡೆಸುವುದಾಗಿ ವಿಶ್ವವಿದ್ಯಾನಿಲಯದ ಮುಖ್ಯಸ್ಥರು ಹೇಳಿದ್ದಾರೆ. ಇತ್ತ ಈ ಬಗ್ಗೆ ಪ್ರಾಧ್ಯಾಪಕ ಜೊರ್ಡೆನ್ಸ್ ಅವರು ತಮ್ಮ ತಪ್ಪಿಗಾಗಿ ವಿದ್ಯಾರ್ಥಿಗಳು ಮತ್ತು ಸಹೋದ್ಯೋಗಿಗಳ ಮುಂದೆ ಕ್ಷಮೆಯಾಚಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಲ್ಲಂಗಡಿ ಹಣ್ಣಿನಂತೆ ಹುಡುಗಿಯರ ಎದೆ: ಪ್ರೊಫೆಸರ್ ವಿರುದ್ಧ ಯುವತಿಯರಿಂದ ಟಾಪ್‍ಲೆಸ್ ಪ್ರತಿಭಟನೆ

    ಕಲ್ಲಂಗಡಿ ಹಣ್ಣಿನಂತೆ ಹುಡುಗಿಯರ ಎದೆ: ಪ್ರೊಫೆಸರ್ ವಿರುದ್ಧ ಯುವತಿಯರಿಂದ ಟಾಪ್‍ಲೆಸ್ ಪ್ರತಿಭಟನೆ

    ತಿರುವನಂತಪುರಂ: ಕಾಲೇಜಿನಲ್ಲಿ ಪ್ರೊಫೆಸರ್ ಒಬ್ಬರು ಮಹಿಳೆಯರ ಸ್ತನವನ್ನು ಕಲ್ಲಂಗಡಿಗೆ ಹೊಲಿಸಿದ್ದಕ್ಕೆ ಯುವತಿಯರು ಫೇಸ್‍ಬುಕ್‍ನಲ್ಲಿ ಟಾಪ್‍ಲೆಸ್ ಪ್ರತಿಭಟನೆ ಮಾಡಿದ್ದಾರೆ.

    ಕ್ಯಾಲಿಕಟ್‍ನಲ್ಲಿರುವ ಫಾರೂಕ್ ಕಾಲೇಜಿನ ಅಸಿಸ್ಟೆಂಟ್ ಪ್ರೊಫೆಸರ್ ಭಾಷಣ ಮಾಡುವಾಗ ಕಾಲೇಜಿನ ಯುವತಿಯರ ಸ್ತನ ಕಲ್ಲಂಗಡಿ ಹಣ್ಣಿನ ರೀತಿ ಇರುತ್ತದೆ ಎಂದು ಹೇಳಿದ್ದರು.

    ಪ್ರೊಫೆಸರ್ ಭಾಷಣದಲ್ಲಿ, “ನಾನು ಒಬ್ಬ ಶಿಕ್ಷಕನಾಗಿದ್ದು, ನನ್ನ ಕಾಲೇಜಿನಲ್ಲಿ 80% ವಿದ್ಯಾರ್ಥಿಗಳು ಯುವತಿಯರೇ. ಅದರಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಜಾಸ್ತಿ. ಇವರು ಸಂಪ್ರದಾಯಕ್ಕೆ ತಕ್ಕಂತೆ ಉಡುಪು ಧರಿಸುತ್ತಿಲ್ಲ. ಅವರು ತಮ್ಮ ಸ್ತನವನ್ನು ಹಿಜಾಬ್ ನಲ್ಲಿ ಸರಿಯಾಗಿ ಮುಚ್ಚಿಕೊಳ್ಳುವುದಿಲ್ಲ. ಇದು ತುಂಡರಿಸಿದ ಕಲ್ಲಂಗಡಿ ಹಣ್ಣನ್ನು ಪ್ರದರ್ಶನಕ್ಕೆ ಇಟ್ಟಂತೆ ಕಾಣುತ್ತದೆ” ಎಂದು ಹೇಳಿದ್ದರು.

    ಇದ್ದರಿಂದ ರೊಚ್ಚಿಗೆದ್ದ ಯುವತಿಯರು ಪ್ರೊಫೆಸರ್ ವಿರುದ್ಧ ಫೇಸ್‍ಬುಕ್‍ನಲ್ಲಿ ಟಾಪ್‍ಲೆಸ್ ಪ್ರತಿಭಟನೆ ಮಾಡುತ್ತಿದ್ದಾರೆ. ವಿಷ್ಣು ಎಂಬವರು ತನ್ನ ಗೆಳತಿ ಆರತಿ ಎಸ್‍ಎ ಅವರ ಟಾಪ್‍ಲೆಸ್ ಫೋಟೋವನ್ನು ಫೇಸ್‍ಬುಕ್‍ನಲ್ಲಿ ಶೇರ್ ಮಾಡಿದ್ದಾರೆ. ಇದಾದ ನಂತರ ತಿರುವನಂತಪುರಂ ಮೂಲದ ದಿಯಾ ಸನಾ ಎಂಬವವರು ಕೂಡ ತನ್ನ ಸ್ತನವನ್ನು ಕಲ್ಲಂಗಡಿ ಹಣ್ಣನಿಂದ ಮುಚ್ಚಿಕೊಂಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಸದ್ಯ ಈ ಎರಡೂ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಈ ರೀತಿಯ ಫೋಟೋವನ್ನು ಶೇರ್ ಮಾಡಿದ ವ್ಯಕ್ತಿಗಳ ಖಾತೆಯನ್ನು ಫೇಸ್‍ಬುಕ್ ಬ್ಲಾಕ್ ಮಾಡಿದೆ ಎಂದು ವರದಿಯಾಗಿದೆ.

  • ನಿನ್ನ ಮುದ್ದಾಡಬೇಕು – ಪೋಲಿ ಪ್ರೊಫೆಸರ್ ನಿಂದ ಕಾಲೇಜು ವಾಟ್ಸಪ್ ಗ್ರೂಪ್‍ನಲ್ಲಿ ಸಂದೇಶ

    ನಿನ್ನ ಮುದ್ದಾಡಬೇಕು – ಪೋಲಿ ಪ್ರೊಫೆಸರ್ ನಿಂದ ಕಾಲೇಜು ವಾಟ್ಸಪ್ ಗ್ರೂಪ್‍ನಲ್ಲಿ ಸಂದೇಶ

    ಬೆಳಗಾವಿ: ಕಾಲೇಜು ವಾಟ್ಸಪ್ ಗ್ರೂಪ್‍ನಲ್ಲಿ ನಿನ್ನ ಮುದ್ದಾಡಬೇಕು ಅನ್ನಿಸುತ್ತಿತ್ತು ಇವತ್ತು ಎಂದು ಕಾಲೇಜು ಪ್ರೊಫೆಸರ್ ಒಬ್ಬ ಬಹಿರಂಗವಾಗಿ ಮಾಡಿರುವ ಸಂದೇಶ ಈಗ ಚರ್ಚೆಗೆ ಗ್ರಾಸವಾಗಿದೆ.

    ಜಿಲ್ಲೆಯ ಹುಕ್ಕೇರಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನ ವಾಣಿಜ್ಯ ವಿಭಾಗದ ಪ್ರೊಫೆಸರ್ ದೇವರಾಜ ತಳವಾರ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರು ಹಾಗೂ ಉಪನ್ಯಾಸಕಿಯರು ಇರುವ ಕಾಲೇಜಿನ ಗ್ರೂಪ್‍ನಲ್ಲಿ ಈ ರೀತಿ ಅಸಭ್ಯವಾದ ಸಂದೇಶ ಹಾಕಿದ್ದಾನೆ. ಇದರಿಂದ ವಿದ್ಯಾರ್ಥಿನಿಯರು ಹಾಗೂ ಉಪನ್ಯಾಸಕಿಯರಿಗೆ ಇರುಸು ಮುರುಸು ತರಿಸಿದೆ.

    ಪ್ರೊಫೆಸರ್ ದೇವರಾಜ ತಳವಾರ ಮೊದಲಿನಿಂದಲೂ ವಿದ್ಯಾರ್ಥಿನಿಯರಿಗೆ ಈ ರೀತಿಯ ಮೆಸೇಜ್ ಕಳಿಸಿ ಸತಾಯಿಸುತ್ತಿದ್ದನು. ಎನ್‍ಎಸ್‍ಎಸ್ ಕ್ಯಾಂಪ್‍ ನ ಕೋ ಆರ್ಡಿನೇಟರ್ ಆಗಿರುವ ಈತ ಶಿಬಿರಗಳಲ್ಲೂ ಕೂಡ ನಿದ್ದೆ ಬರುತ್ತಿಲ್ವಾ… ಎಂದು ಮಧ್ಯರಾತ್ರಿಯಲ್ಲಿ ವಿದ್ಯಾರ್ಥಿನಿಯರಿಗೆ ಮೆಸೇಜ್ ಕಳಿಸುತ್ತಿದ್ದ ಎಂಬ ಆರೋಪವು ಈತನ ಮೇಲಿದೆ.

    ಪ್ರೊಫೆಸರ್ ನ ಸಂದೇಶಗಳ ಪುರಾಣ ಇದೇ ಮೊದಲೇನಲ್ಲ. ಈ ಹಿಂದೆಯೂ ಇದೇ ರೀತಿ ಸಂದೇಶ ಕಳಹಿಸಿದ್ದು, ಇದರಿಂದ ವಿದ್ಯಾರ್ಥಿನಿಯರು ತಮ್ಮ ಮುಂದೆ ಅಳಲು ತೋಡಿಕೊಂಡಿದ್ದರು ಎಂದು ಕಾಲೇಜಿನ ಪ್ರಾಂಶುಪಾಲರು ಹೇಳಿದ್ದಾರೆ. ಆದರೆ ಇದು ನನಗೆ ಗೊತ್ತಿಲ್ಲದೇ ತಪ್ಪಾಗಿದೆ ಎಂದು ಬೆಪ್ಪನಂತೆ ಉಪನ್ಯಾಸಕನಾದ ದೇವರಾಜ ತಳವಾರ ಹೇಳುತ್ತಿದ್ದಾನೆ.

  • ವಾಟ್ಸಪ್, ಎಸ್‍ಎಂಎಸ್‍ನಲ್ಲೇ ಅಲಿಘರ್ ವಿವಿ ಪ್ರಾಧ್ಯಾಪಕನಿಂದ ತಲಾಖ್ – ಪತ್ನಿಯಿಂದ ಆತ್ಮಹತ್ಯೆ ಬೆದರಿಕೆ

    ವಾಟ್ಸಪ್, ಎಸ್‍ಎಂಎಸ್‍ನಲ್ಲೇ ಅಲಿಘರ್ ವಿವಿ ಪ್ರಾಧ್ಯಾಪಕನಿಂದ ತಲಾಖ್ – ಪತ್ನಿಯಿಂದ ಆತ್ಮಹತ್ಯೆ ಬೆದರಿಕೆ

    ನವದೆಹಲಿ: ಸುಪ್ರೀಂಕೋರ್ಟ್ ಎರಡು ತಿಂಗಳ ಹಿಂದೆ ಮುಸ್ಲಿಮರ ತ್ರಿವಳಿ ತಲಾಕ್‍ಗೆ ನಿಷೇಧ ಹೇರಿರೋದು ನಿಮಗೆಲ್ಲಾ ಗೊತ್ತೇ ಇದೆ. ಆದ್ರೆ ತ್ರಿವಳಿ ತಲಾಖ್ ಭೂತ ಇನ್ನೂ ಕೊನೆಗೊಂಡಿಲ್ಲ.

    ಉತ್ತರಪ್ರದೇಶದ ಅಲಿಘಡ ಮುಸ್ಲಿಂ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಮತ್ತು ಸಂಸ್ಕೃತ ವಿಭಾಗದ ಮುಖ್ಯಸ್ಥ ಖಾಲಿದ್ ಬಿನ್ ಯೂಸುಫ್ ಖಾನ್ ಅನ್ನೋರು ಪತ್ನಿಗೆ ತ್ರಿವಳಿ ತಲಾಖ್ ನೀಡೋಕೆ ಮುಂದಾಗಿದ್ದಾರೆ. ಮೂರರಲ್ಲಿ ವಾಟ್ಸಪ್ ಮತ್ತು ಎಸ್‍ಎಂಎಸ್ ಮೂಲಕ ಈಗಾಗಲೇ ಎರಡು ತಲಾಖ್ ಹೇಳಿದ್ದಾರೆ. ಇದ್ರಿಂದ ನೊಂದಿರುವ ಪತ್ನಿ ಯಸ್ಮೀನ್ ಖಾಲೀದ್ ಡಿಸೆಂಬರ್ 11ರೊಳಗೆ ತನಗೆ ನ್ಯಾಯ ಸಿಗದಿದ್ರೆ ಎಎಂಯು ಕುಲಪತಿಯ ಮನೆ ಮುಂದೆಯೇ ತನ್ನ ಮೂವರು ಮಕ್ಕಳ ಜೊತೆ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದಾರೆ.

    ಆದ್ರೆ ಪ್ರೊಫೆಸರ್ ಖಾಲಿದ್ ಯೂಸ್ ತಲಾಖ್ ನೀಡಿದ್ದನ್ನು ಸಮರ್ಥಿಸಿದ್ದಾರೆ. ಆಕೆ ಎರಡು ದಶಕಗಳಿಂದ ತನಗೆ ಕಿರುಕುಳ ನೀಡುತ್ತಿದ್ದಳು. ತಾನು ಪದವೀಧರೆ ಅಂತ ಸುಳ್ಳು ಹೇಳಿ ಮದುವೆಯಾಗಿದ್ದಾಳೆ. ತಾನು ವಾಟ್ಸಪ್ ಮತ್ತು ಎಸ್‍ಎಂಎಸ್‍ನಲ್ಲಿ ಮಾತ್ರ ಹೇಳಿದ್ದಲ್ಲ. ಷರಿಯಾ ಪ್ರಕಾರ ಇಬ್ಬರ ಸಮ್ಮುಖದಲ್ಲಿ ಸಮಯ ತೆಗೆದುಕೊಂಡೇ ಬಾಯಲ್ಲಿ ತಲಾಖ್ ಹೇಳಿದ್ದೇನೆ. ಸರಿಯಾದ ಸಮಯಕ್ಕೆ ಮೂರನೇ ತಲಾಖ್ ಕೂಡ ನೀಡಲಿದ್ದೇನೆ. ನನ್ನನ್ನು ಯಾರಿಗೂ ತಡೆಯೋಕೆ ಆಗಲ್ಲ. ಆಕೆ ಏನು ಮಾಡ್ಕೊಂಡ್ರು ನಾನು ಕ್ಯಾರೇ ಮಾಡಲ್ಲ ಅಂತ ದರ್ಪದ ಮಾತನ್ನಾಡಿದ್ದಾರೆ. ಆದ್ರೆ ತಾನು ಅಲಿಘಡ ವಿವಿಯಿಂದ ಎಂಎ ಮತ್ತು ಬಿಎಡ್ ಪದವಿ ಪಡೆದಿರೋದಾಗಿ ಪತ್ನಿ ಯಾಸ್ಮಿನ್ ತಿಳಿಸಿದ್ದಾರೆ.