Tag: ಪ್ರೇಯಸಿ

  • ಪ್ರೇಮಿಗಳ ದಿನದಂದು ಗೆಳತಿ ಹೇಳಿದ ಮಾತಿನಿಂದ 8 ಬೈಕ್ ಕಳ್ಳತನ

    ಪ್ರೇಮಿಗಳ ದಿನದಂದು ಗೆಳತಿ ಹೇಳಿದ ಮಾತಿನಿಂದ 8 ಬೈಕ್ ಕಳ್ಳತನ

    – 1.5 ಲಕ್ಷದ ಬೈಕ್ ಕದ್ದು ಸ್ನೇಹಿತನ ಜೊತೆ ಸಿಕ್ಕಿಬಿದ್ದ
    – ಪ್ರೇಯಸಿ ಹೀಯಾಳಿಸಿದ್ದಕ್ಕೆ ನೊಂದ ಯುವಕ

    ನವದೆಹಲಿ: ಗೆಳತಿ ನಿನ್ನ ಬಳಿ ಬೈಕ್ ಇಲ್ಲವೆಂದು ವ್ಯಂಗ್ಯ ಮಾಡಿದ ನಂತರ ಪ್ರಿಯಕರ ಎಂಟು ಬೈಕ್‍ಗಳನ್ನು ಕಳ್ಳತನ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಇದೀಗ ಪೊಲೀಸರು ಆತನನ್ನು ಬಂಧಿಸಿದ್ದಾರೆ.

    ಲಲಿತ್ ಬಂಧಿತ ಆರೋಪಿ. ಈತ ಪ್ರೇಮಿಗಳ ದಿನಾಚರಣೆಯಂದು ಗೆಳತಿಯನ್ನು ಭೇಟಿ ಮಾಡಿದ್ದಾನೆ. ಈ ವೇಳೆ ಆಕೆ ನಿನ್ನ ಬಳಿ ಒಂದು ಬೈಕ್ ಇಲ್ಲ ಎಂದು ವ್ಯಂಗ್ಯ ಮಾಡಿದ್ದಾಳೆ. ಇದರಿಂದ ಕೋಪಗೊಂಡ ಲಲಿತ್ ತನ್ನ ಸ್ನೇಹಿತ ಸಾಹೀದ್ ಜೊತೆ ಸೇರಿಕೊಂಡು ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಲು ಪ್ಲಾನ್ ಮಾಡಿದ್ದಾನೆ. ಅದರಂತೆಯೇ ಬೈಕ್ ಕಳ್ಳತನ ಮಾಡಲು ಶುರು ಮಾಡಿದ್ದಾರೆ. ನಂತರ ಆಟೋನೂ ಕಳ್ಳತನ ಮಾಡಲು ಶುರು ಮಾಡಿದ್ದರು.

    ದಿನದಿಂದ ದಿನಕ್ಕೆ ಬೈಕ್ ಕಳ್ಳತನ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿದ್ದವು. ತಕ್ಷಣ ಎಚ್ಚೆತ್ತ ಪೊಲೀಸರು ಆರೋಪಿಗಳ ಹುಡುಕಾಟ ಶುರು ಮಾಡಿದ್ದರು. ಮಾರ್ಚ್ 6 ರಂದು ಪೊಲೀಸ್ ತಂಡಕ್ಕೆ ಅನುಮಾನಾಸ್ಪದವಾಗಿ ಇಬ್ಬರು ದ್ವಾರಕಾ ಪ್ರದೇಶದಲ್ಲಿ ಓಡಾಡುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ನಂತರ ಪೊಲೀಸರು ಮಾಹಿತಿಯ ಮೇರೆಗೆ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದ್ದಾರೆ. ಆಗ ಇಬ್ಬರು ಶಂಕಿತರು 1.8 ಲಕ್ಷ ರೂ.ಗಳ ಮೌಲ್ಯದ ಬೈಕ್‍ನಲ್ಲಿ ಸುತ್ತಾಡುತ್ತಿರುವುದು ಕಂಡುಬಂದಿದೆ.

    ಅಲ್ಲದೇ ಆ ಬೈಕ್‍ಗೆ ನಂಬರ್ ಪ್ಲೇಟ್ ಸಹ ಇರಲಿಲ್ಲ. ನಂತರ ಪೊಲೀಸರು ಅವರಿಬ್ಬರನ್ನು ಹಿಡಿದು ಬೈಕ್ ದಾಖಲಾತಿಯನ್ನು ಕೇಳಿದ್ದಾರೆ. ಆಗ ಅದು ಕದ್ದ ಬೈಕ್ ಎಂದು ತಿಳಿದುಬಂದಿದೆ. ಈ ದುಬಾರಿ ಬೈಕ್ ಫೆಬ್ರವರಿ 21 ರಂದು ದೆಹಲಿಯ ಬಿಂದಾಪುರದಿಂದ ಕಳ್ಳತನ ಮಾಡಲಾಗಿತ್ತು ಎಂದು ತಿಳಿದುಬಂದಿದೆ. ತಕ್ಷಣ ಇಬ್ಬರನ್ನು ಪೊಲೀಸರು ಬಂಧಿಸಿ ವಿಚಾರಣೆ ಮಾಡಿದ್ದಾರೆ. ಆಗ ಆರೋಪಿಗಳು ತಾವೇ ಕಳ್ಳತನ ಮಾಡಿದ್ದು ಎಂದು ತಪ್ಪೊಪ್ಪಿಕೊಂಡಿದ್ದಾರೆ.

    ಆರೋಪಿ ಲಲಿತ್ ಬಿಹಾರದ ನಿವಾಸಿಯಾಗಿದ್ದು, ತನ್ನ ಪ್ರೇಯಸಿಯನ್ನು ಮೆಚ್ಚಿಸಲು ಯಾವಾಗಲೂ ಪಾರ್ಟಿ ಮಾಡುತ್ತಿದ್ದನು. ಆದರೆ ಕಳೆದ ಪ್ರೇಮಿಗಳ ದಿನದಂದು ಅವನ ಗೆಳತಿ ಬೈಕ್ ಹೊಂದಿಲ್ಲವೆಂದು ಹೀಯಾಳಿಸಿದ್ದಾಳೆ. ಇದರಿಂದ ನೊಂದು ಅನೇಕ ಬೈಕ್‍ಗಳನ್ನು ಹೊಂದಿದ್ದೇನೆ ಎಂದು ಪ್ರೇಯಸಿಗೆ ತೋರಿಸಲು ಕಳ್ಳತನ ಶುರು ಮಾಡಿದ್ದಾನೆ. ನಂತರ ಸ್ನೇಹಿತನ ಜೊತೆ ಸೇರಿಕೊಂಡು ಏಳು ಬೈಕ್ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಎಂಟನೇ ಬೈಕ್ ಕದ್ದು ಪರಾರಿಯಾಗುತ್ತಿದ್ದಾಗ ಇಬ್ಬರು ಸಿಕ್ಕಿಬಿದ್ದಿದ್ದಾರೆ. ಇದೀಗ ಪೊಲೀಸರು ಇಬ್ಬರ ವಿರುದ್ಧ ಬೈಕ್ ಮತ್ತು ಆಟೋ ಕಳ್ಳತನ ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  • ಪ್ರೇಯಸಿ ಜೊತೆ ಸೇರಿಕೊಂಡು ತಾಯಿಯನ್ನೇ ಕೊಂದ ಮಗ

    ಪ್ರೇಯಸಿ ಜೊತೆ ಸೇರಿಕೊಂಡು ತಾಯಿಯನ್ನೇ ಕೊಂದ ಮಗ

    – ಪ್ರೀತಿ ವಿರೋಧಿಸಿದ್ದಕ್ಕೆ ಹೆತ್ತ ತಾಯಿಯ ಕೊಲೆ
    – ಸುಳ್ಳು ಕತೆ ಹೇಳಿದ ಮಗ, ಯುವತಿ ಅರೆಸ್ಟ್

    ಲಕ್ನೋ: ಮಗನೊಬ್ಬ ಪ್ರೇಯಸಿ ಜೊತೆ ಸೇರಿಕೊಂಡು ತನ್ನ ಹೆತ್ತ ತಾಯಿಯನ್ನೇ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

    ಲಕ್ಷ್ಮಿ ದೇವಿ(55) ಕೊಲೆಯಾದ ತಾಯಿ. ಶಿವಂ ಮಾರ್ಚ್ 6ರಂದು ತನ್ನ ತಾಯಿಯನ್ನು ಕೊಲೆ ಮಾಡಿ ಪೊಲೀಸ್ ಠಾಣೆಗೆ ಹೋಗಿ ಪೊಲೀಸರ ಬಳಿ ಸುಳ್ಳು ಕತೆ ಹೇಳಿದ್ದನು. ಪೊಲೀಸರು ಸ್ಥಳಕ್ಕೆ ಬಂದು ಮಹಿಳೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ವರದಿ ಬಂದಾಗ ಇದು ಕೊಲೆ ಎಂಬುದು ಪೊಲೀಸರಿಗೆ ತಿಳಿಯಿತು. ಬಳಿಕ ಶಿವಂ ಮೇಲೆ ಅನುಮಾನಗೊಂಡ ಪೊಲೀಸರು ಆತನನ್ನು ವಿಚಾರಣೆ ನಡೆಸಿದಾಗ ಸತ್ಯ ಬೆಳಕಿಗೆ ಬಂದಿದೆ.

    ನಡೆದಿದ್ದೇನು?
    ಶಿವಂ ತನ್ನ ಪಕ್ಕದ ಮನೆಯಲ್ಲಿರುವ ಯುವತಿಯನ್ನು ಪ್ರೀತಿಸುತ್ತಿದ್ದನು. ಇವರಿಬ್ಬರ ಪ್ರೀತಿಯನ್ನು ಲಕ್ಷ್ಮಿ ದೇವಿ ತೀವ್ರವಾಗಿ ವಿರೋಧಿಸಿದ್ದರು. ಯುವತಿ ಜೊತೆ ಓಡಿ ಹೋಗಿ ಬೇರೆ ಕಡೆ ಜೀವನ ನಡೆಸಲು ಶಿವಂ ನಿರ್ಧರಿಸಿದ್ದನು. ಅಲ್ಲದೆ ತನ್ನ ತಾಯಿಯ ಬಳಿ ಹಣ ಕೂಡ ಕೇಳಿದ್ದನು. ಹಣ ಕೊಟ್ಟರೆ ಶಿವಂ ಯುವತಿ ಜೊತೆ ಓಡಿ ಹೋಗುತ್ತಾನೆ ಎಂದು ಮಹಿಳೆ ಆತನಿಗೆ ಹಣ ಕೊಡಲು ನಿರಾಕರಿಸಿದ್ದಳು.

    ಘಟನೆ ನಡೆದ ದಿನ ಶಿವಂ ಮನೆಯಲ್ಲಿದ್ದ ಚಿನ್ನ ಹಾಗೂ ಹಣವನ್ನು ತೆಗೆದುಕೊಳ್ಳುತ್ತಿದ್ದನು. ಇದನ್ನು ನೋಡಿದ ತಾಯಿ ಆತನಿಗೆ ಬೈದು ಹಣ ಹಾಗೂ ಚಿನ್ನವನ್ನು ವಾಪಸ್ ಪಡೆದರು. ಇದರಿಂದ ಕೋಪಗೊಂಡ ಶಿವಂ ತನ್ನ ತಾಯಿಯನ್ನು ಜೋರಾಗಿ ತಳ್ಳಿದ್ದನು. ಪರಿಣಾಮ ಲಕ್ಷ್ಮಿ ದೇವಿ ಗಾಯಗೊಂಡಿದ್ದರು. ಬಳಿಕ ಶಿವಂ ತನ್ನ ಪ್ರೇಯಸಿಯನ್ನು ಕರೆದಿದ್ದನು. ಇಬ್ಬರು ದಿಂಬಿನಿಂದ ಲಕ್ಷ್ಮಿ ದೇವಿಯ ಉಸಿರುಗಟ್ಟಿ ಕೊಲೆ ಮಾಡಿದ್ದರು. ಕೊಲೆ ಮಾಡಿದ ನಂತರ ಶಿವಂ ಹಾಗೂ ಯುವತಿ ಸ್ಥಳದಿಂದ ಪರಾರಿಯಾಗಿದ್ದರು.

    ಈ ಬಗ್ಗೆ ಎಸ್‍ಪಿ ಸಿ.ಟಿ ರೋಹನ್ ಪ್ರತಿಕ್ರಿಯಿಸಿ, ಲಕ್ಷ್ಮಿ ದೇವಿ ಒಬ್ಬರೇ ಮನೆಯಲ್ಲಿ ವಾಸಿಸುತ್ತಿದ್ದರು. ಅವರ ಪತಿ ಹಲವು ವರ್ಷಗಳ ಹಿಂದೆ ನಿಧನರಾಗಿದ್ದರು. ಘಟನೆ ನಡೆದ ದಿನ ಶಿವಂ ಯುವತಿಯನ್ನು ಆಕೆಯ ಮನೆಗೆ ಕಳುಹಿಸಿ ಸ್ವತಃ ತಾನು ಓಡಿ ಹೋಗಿದ್ದನು. ರಾತ್ರಿ ಶಿವಂ ಮನೆಗೆ ವಾಪಸ್ ಬಂದ ನಂತರ ಪೊಲೀಸ್ ಠಾಣೆಗೆ ಬಂದು ತಾಯಿ ಮೃತಪಟ್ಟಿದ್ದಾರೆ ಎಂದು ಸುಳ್ಳು ಕತೆ ಹೇಳಿದ್ದನು. ನಾವು ಮಹಿಳೆಯ ಮೃತದೇಹವನ್ನು ವಶಕ್ಕೆ ಪಡೆದು ತನಿಖೆ ಶುರು ಮಾಡಿದ್ದೇವು. ಈ ವೇಳೆ ಶಿವಂ ಮೇಲೆ ಅನುಮಾನ ಬಂದಿದ್ದು, ಆತನನ್ನು ವಶಕ್ಕೆ ಪಡೆದುಕೊಂಡಿದ್ದೇವು. ತೀವ್ರವಾಗಿ ವಿಚಾರಣೆ ನಡೆಸಿದಾಗ ಶಿವಂ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡನು. ಬಳಿಕ ಶಿವಂ ಹಾಗೂ ಆತನ ಪ್ರೇಯಸಿಯನ್ನು ಬಂಧಿಸಿದ್ದೇವು ಎಂದು ತಿಳಿಸಿದರು.

  • ಕಡೂರು ಕೊಲೆ ಪ್ರಕರಣ- ಒಡವೆಗಳನ್ನು ವಶಪಡಿಸಿಕೊಂಡ ಪೊಲೀಸರು

    ಕಡೂರು ಕೊಲೆ ಪ್ರಕರಣ- ಒಡವೆಗಳನ್ನು ವಶಪಡಿಸಿಕೊಂಡ ಪೊಲೀಸರು

    ಚಿಕ್ಕಮಗಳೂರು: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಜಿಲ್ಲೆಯ ಕಡೂರಿನ ಕೊಲೆ ಹಾಗೂ ಸರಣಿ ಆತ್ಮಹತ್ಯೆಯ ಕೇಂದ್ರಬಿಂದು ದಂತ ವೈದ್ಯ ರೇವಂತ್ ಪತ್ನಿ ಕೊಲೆ ಪ್ರಕರಣದಲ್ಲಿ ಕಳುವಾಗಿದ್ದ 4.50 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನ ಪೊಲೀಸರು ವಶಪಡಿಸಿಕೊಂಡಿರುವುದಾಗಿ ಕಡೂರು ಸರ್ಕಲ್ ಇನ್ಸ್ ಪೆಕ್ಟರ್ ಮಂಜುನಾಥ್ ತಿಳಿಸಿದರು.

    ಕಡೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರಿನ ರಾಜರಾಜೇಶ್ವರಿ ನಗರದ ಹರ್ಷಿತಾಳೊಂದಿಗೆ ಇದ್ದ ಅಕ್ರಮ ಸಂಬಂಧಕ್ಕೆ ಅಡ್ಡಿ ಎಂಬ ಕಾರಣಕ್ಕೆ ಫೆಬ್ರವರಿ 17ರಂದು ಹರಿತವಾದ ಚಾಕುವಿನಿಂದ ಪತಿ ರೇವಂತ್ ತನ್ನ ಪತ್ನಿಯ ಕತ್ತು ಸೀಳಿ ಕೊಲೆ ಮಾಡಿದ್ದರು. ಇದನ್ನು ಮುಚ್ಚಿ ಹಾಕಲು ನಾಟಕ ಮಾಡಿ ಕೊನೆಗೆ ಸಿಕ್ಕಿಹಾಕಿಕೊಳ್ಳುತ್ತೇವೆ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದರು.

    ಈ ವೇಳೆ ಪೊಲೀಸರ ದಾರಿ ತಪ್ಪಿಸಲು ಕಳ್ಳತನದ ನಾಟಕ ಮಾಡಿ, ಮನೆಯಲ್ಲಿದ್ದ ಒಡವೆಗಳನ್ನ ತಾನೇ ಕದ್ದು ಬೀರೂರಿನಿಂದ ಕೊರಿಯರ್ ಮೂಲಕ ತನ್ನ ಪ್ರೇಯಸಿ ಹರ್ಷಿತಾಗೆ ಕಳುಹಿಸಲಾಗಿತ್ತು. ಆ ಆಭರಣಗಳನ್ನ ತನಿಖಾ ತಂಡ ವಶಪಡಿಸಿಕೊಂಡಿದೆ. ಇದರಿಂದ ಕಡೂರಿನ ಜನತೆಯಲ್ಲಿ ಮೂಡಿದ್ದ ಆತಂಕ ದೂರವಾಗಿದೆ, ಹೆಚ್ಚಿನ ಮಾಹಿತಿಗಾಗಿ ತನಿಖೆ ಮುಂದುವರಿಸಲಿದ್ದೇವೆ ಎಂದರು. ಇದನ್ನು ಓದಿ: ಅವಳಿಗೆ ಗಂಡ ಬೇಡವಾಗಿದ್ದ, ಇವನಿಗೆ ಹೆಂಡ್ತಿ ಬೇಡವಾಗಿದ್ಳು- ಇಬ್ಬರು ಸೇರಲು ಪತ್ನಿಯನ್ನ ಕೊಂದ ಡಾಕ್ಟರ್

    ಎಸ್‍ಪಿ ಹರೀಶ್ ಪಾಂಡೆ, ಎಎಸ್‍ಪಿ ಶೃತಿ ಮಾರ್ಗದರ್ಶನದಲ್ಲಿ ರಚನೆಯಾದ ಡಿ.ಎಸ್.ಪಿ ರೇಣುಕಾ ಪ್ರಸಾದ್ ನೇತೃತ್ವದ ತಂಡದಿಂದ ತನಿಖೆ ನಡೆದಿದೆ. ಪ್ರಕರಣವನ್ನು ಭೇದಿಸುವಲ್ಲಿ ಕಡೂರಿನ ಉಪ ನಿರೀಕ್ಷಕರಾದ ಎನ್.ಸಿ. ವಿಶ್ವನಾಥ್, ಬೀರೂರಿನ ರಾಜಶೇಖರ್, ಸಖರಾಯಪಟ್ಟಣ ಪಿಎಸ್‍ಐ ಮೌನೇಶ್, ಜಿಲ್ಲಾ ಪೊಲೀಸ್ ವೈಜ್ಞಾನಿಕ ತನಿಖಾ ತಂಡ ಹಾಗೂ ಕಡೂರು-ಬೀರೂರು ವೃತ್ತದ ಪೊಲೀಸ್ ಸಿಬ್ಬಂದಿಗಳ ಕಾರ್ಯವನ್ನು ಎಸ್‍ಪಿ ಶ್ಲಾಘಿಸಿದ್ದಾರೆ ಎಂದು ತಿಳಿಸಿದರು.

  • ಬ್ರೇಕಪ್ ಮಾಡ್ಕೊಂಡಿದ್ದಕ್ಕೆ ಪ್ರೇಯಸಿಗೆ ಚಾಕು ಇರಿದ ಪ್ರಿಯಕರ

    ಬ್ರೇಕಪ್ ಮಾಡ್ಕೊಂಡಿದ್ದಕ್ಕೆ ಪ್ರೇಯಸಿಗೆ ಚಾಕು ಇರಿದ ಪ್ರಿಯಕರ

    – ಬಳಿಕ 3ನೇ ಮಹಡಿಯಿಂದ ಆತ್ಮಹತ್ಯೆಗೆ ಯತ್ನ
    – ಇಬ್ಬರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ

    ಭೋಪಾಲ್: ಬ್ರೇಕಪ್ ಮಾಡಿಕೊಂಡಿದ್ದಕ್ಕೆ ಪ್ರಿಯಕರನೊಬ್ಬ ತನ್ನ ಪ್ರೇಯಸಿಗೆ ಚಾಕು ಇರಿದು ಹಲ್ಲೆ ಮಾಡಿ ಸ್ವತಃ ತಾನು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಧ್ಯಪ್ರದೇಶದ ಬುರ್ಹಾನಪುರದಲ್ಲಿ ನಡೆದಿದೆ.

    ಯುವಕ ತನ್ನ ಪ್ರೇಯಸಿಗೆ ಚಾಕು ಇರಿದ ತಕ್ಷಣ ಮೂರನೇ ಮಹಡಿಯಿಂದ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ಈ ಘಟನೆಯಿಂದ ಯುವಕ ಹಾಗೂ ಯುವತಿ ಗಂಭೀರವಾಗಿ ಗಾಯಗೊಂಡಿದ್ದು, ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಸುದ್ದಿ ಸಂಸ್ಥೆ ಪ್ರಕಾರ, ಈ ಘಟನೆ ಬುರ್ಹಾನಪುರದ ಸೇವಾ ಸದನ್ ಕಾಲೇಜಿನಲ್ಲಿ ನಡೆದಿದೆ. ಈ ಕಾಲೇಜಿನ ವಿದ್ಯಾರ್ಥಿಯೊಬ್ಬ ಯುವತಿಗೆ ಚಾಕು ಇರಿದು ಹಲ್ಲೆ ಮಾಡಿದ್ದಾನೆ. ಸಿಕ್ಕಿ ಹಾಕಿಕೊಳ್ಳುತ್ತೇನೆ ಎಂಬ ಭಯದಿಂದ ಯುವಕ ಕಟ್ಟಡದ ಮೂರನೇ ಮಹಡಿಯಿಂದ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಘಟನೆಯಿಂದ ಇಬ್ಬರಿಗೂ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಯುವಕ ಹಾಗೂ ಯುವತಿ ಕೆಲವು ದಿನಗಳ ಹಿಂದೆ ಬ್ರೇಕಪ್ ಮಾಡಿಕೊಂಡಿದ್ದರು. ಗುರುವಾರ ಕಾಲೇಜಿಗೆ ತಲುಪಿದಾಗ ಯುವಕ ತನ್ನ ಪ್ರೇಯಸಿಯ ಮನವೊಲಿಸಲು ಪ್ರಯತ್ನಿಸಿದ್ದಾನೆ. ಇದಕ್ಕಾಗಿ ಆತ ಯುವತಿಯನ್ನು ಮೂರನೇ ಮಹಡಿಗೆ ಕರೆದುಕೊಂಡು ಹೋಗಿದ್ದನು. ಈ ನಡುವೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಇದರಿಂದ ಕೋಪಗೊಂಡ ಯುವಕ ಯುವತಿಗೆ ಚಾಕು ಇರಿದು ಹಲ್ಲೆ ಮಾಡಿದ್ದಾನೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಸಿಸಿಟಿವಿ ದೃಶ್ಯವಾಳಿಗಳನ್ನು ಪರಿಶೀಲಿಸುತ್ತಿದ್ದೇವೆ. ನಮ್ಮ ಒಂದು ತಂಡ ಆಸ್ಪತ್ರೆಗೆ ಭೇಟಿ ನೀಡಿದ್ದು, ಗಾಯಗೊಂಡ ವಿದ್ಯಾರ್ಥಿನಿ ಹಾಗೂ ಆರೋಪಿ ವಿದ್ಯಾರ್ಥಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಪ್ರೇಯಸಿಯನ್ನು ಮನೆಗೆ ಕರೆದುಕೊಂಡು ಬಂದಿದ್ದಕ್ಕೆ ನಿಂದಿಸಿದ ಪೋಷಕರು

    ಪ್ರೇಯಸಿಯನ್ನು ಮನೆಗೆ ಕರೆದುಕೊಂಡು ಬಂದಿದ್ದಕ್ಕೆ ನಿಂದಿಸಿದ ಪೋಷಕರು

    – ಮನನೊಂದ ಯುವಕ ಎರಡು ದಿನದ ನಂತ್ರ ನೇಣಿಗೆ ಶರಣು

    ಚಂಡೀಗಢ್: ಪ್ರೇಯಸಿಯನ್ನು ಮನೆಗೆ ಕರೆದುಕೊಂಡು ಬಂದಿದ್ದಕ್ಕೆ ಪೋಷಕರು ನಿಂದಿಸಿದ್ದು, ಇದರಿಂದ ಬೇಸತ್ತ ಯುವಕ ಎರಡು ದಿನದ ನಂತರ ಆತ್ಮಹತ್ಯೆ ಮಾಡಿಕೊಂಡ ಘಟನೆ ಹರಿಯಾಣದ ಜಗಾದ್ರಿಯಲ್ಲಿ ನಡೆದಿದೆ.

    ಸುರೇಶ್ ಕುಮಾರ್ (19) ಆತ್ಮಹತ್ಯೆ ಮಾಡಿಕೊಂಡ ಯುವಕ. ಸುರೇಶ್ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುತ್ತಿದ್ದನು. ಅಲ್ಲದೆ ಆಕೆಯನ್ನು ತನ್ನ ಮನೆಗೂ ಕರೆದುಕೊಂಡು ಹೋಗುತ್ತಿದ್ದನು. ಆದರೆ ಇದು ಆತನ ತಾಯಿಗೆ ಇಷ್ಟವಾಗಲಿಲ್ಲ. ಹಾಗಾಗಿ ಅವರು ಸುರೇಶ್‍ಗೆ ಬಾಲಕಿಯನ್ನು ಮನೆಗೆ ಕರೆದುಕೊಂಡು ಬರಬೇಡ ಎಂದು ನಿಂದಿಸಿದ್ದಾರೆ. ಇದರಿಂದ ಬೇಸತ್ತ ಸುರೇಶ್ ಎರಡು ದಿನಗಳ ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಈ ಬಗ್ಗೆ ಸುರೇಶ್ ಸಹೋದರ ಲಕ್ಷ್ಮಣ್ ಪ್ರತಿಕ್ರಿಯೆ ನೀಡಿ, ನನ್ನ ತಮ್ಮ ಸುರೇಶ್ ಯಾವಾಗಲೂ ಬೈಕ್ ಮೆಕ್ಯಾನಿಕ್ ಜೊತೆ ಇರುತ್ತಿದ್ದನು. ಅಲ್ಲದೆ ಆತ ಅಪ್ರಾಪ್ತೆಯನ್ನು ಪ್ರೀತಿಸುತ್ತಿದ್ದನು. ಸುರೇಶ್, ಬಾಲಕಿಯನ್ನು ಹಲವಾರು ಬಾರಿ ನಮ್ಮ ಮನೆಗೆ ಕರೆದುಕೊಂಡು ಬಂದಿದ್ದಾನೆ. ಈ ವಿಷಯ ನಮ್ಮ ಕುಟುಂಬಸ್ಥರಿಗೆ ತಿಳಿದಾಗ ಆತನಿಗೆ ಬೈದು ಬುದ್ಧಿ ಹೇಳಲಾಗಿತ್ತು. ಜ. 1ರಂದು ನನ್ನ ಪತ್ನಿ ಒಬ್ಬಳೇ ಮನೆಯಲ್ಲಿದ್ದಳು. ಈ ವೇಳೆ ಸುರೇಶ್, ಬಾಲಕಿಯನ್ನು ಮನೆಗೆ ಕರೆದುಕೊಂಡು ಬಂದಿದ್ದನು ಎಂದು ತಿಳಿಸಿದ್ದಾರೆ.

    ಈ ವಿಷಯವನ್ನು ನನ್ನ ಪತ್ನಿ ನನ್ನ ತಾಯಿಯ ಬಳಿ ಹೇಳಿದ್ದಳು. ಆಗ ನನ್ನ ತಾಯಿ ಆತನಿಗೆ ಬೈದು ಬುದ್ಧಿ ಹೇಳಿದ್ದರು. ಬಳಿಕ ಸೋಮವಾರ ರಾತ್ರಿ ಸುರೇಶ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದನು. ಸುರೇಶ್ ಪ್ರೀತಿಸುತ್ತಿದ್ದ ಬಾಲಕಿ 16 ವರ್ಷದವಳಾಗಿದ್ದು, ಇಬ್ಬರು ಈಗಲೇ ಮದುವೆಯಾಗಲು ಸಾಧ್ಯವಿರಲಿಲ್ಲ. ಹಾಗಾಗಿ ಆತನಿಗೆ ಬುದ್ಧಿವಾದ ಹೇಳಲಾಗಿತ್ತು. ಆದರೆ ನನ್ನ ತಮ್ಮ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ ಎಂದು ನಾವು ಅಂದುಕೊಂಡಿರಲಿಲ್ಲ ಎಂದು ಲಕ್ಷ್ಮಣ್ ಪ್ರತಿಕ್ರಿಯಿಸಿದ್ದಾರೆ.

    ಈ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಯುವಕನ ಪೋಷಕರು ಯಾರ ಮೇಲೂ ಆರೋಪ ಮಾಡುತ್ತಿಲ್ಲ. ಅಲ್ಲದೆ ಯುವಕ ಮೃತದೇಹದ ಬಳಿ ಯಾವುದೇ ಡೆತ್‍ನೋಟ್ ಕೂಡ ಪತ್ತೆಯಾಗಿಲ್ಲ. ಹಾಗಾಗಿ ಪೊಲೀಸರು ಮರಣೋತ್ತರ ಪರೀಕ್ಷೆಯ ನಂತರ ಯುವಕನ ಮೃತದೇಹವನ್ನು ಆತನ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.

  • ಮಗನ 20ರ ಪ್ರೇಯಸಿಯನ್ನ ಮನೆಗೆ ಕರೆದು ತಾಳಿ ಕಟ್ಟಿ ಅತ್ಯಾಚಾರಗೈದ

    ಮಗನ 20ರ ಪ್ರೇಯಸಿಯನ್ನ ಮನೆಗೆ ಕರೆದು ತಾಳಿ ಕಟ್ಟಿ ಅತ್ಯಾಚಾರಗೈದ

    – ಪುತ್ರನ ಜೊತೆ ಮದ್ವೆ ಬಗ್ಗೆ ಮಾತನಾಡಲು ಕರೆದಿದ್ದ
    – 2 ದಿನ ಮನೆಯಲ್ಲಿರಿಸಿಕೊಂಡು ಲೈಂಗಿಕ ದೌರ್ಜನ್ಯ

    ಚೆನ್ನೈ: ಪಾಪಿ ತಂದೆಯೊಬ್ಬ ಮದುವೆ ಬಗ್ಗೆ ಮಾತಾಡಬೇಕೆಂದು ಮನೆಗೆ ಕರೆಸಿಕೊಂಡ ತನ್ನ ಮಗನ ಪ್ರೇಯಸಿಯ ಮೇಲೆಯೇ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ತಮಿಳುನಾಡಿನ ನಾಗಪಟ್ಟಣಂನಲ್ಲಿ ನಡೆದಿದೆ.

    ನಿತ್ಯಾನಂದಂ ಬಂಧಿತ ಆರೋಪಿ. 20 ವರ್ಷದ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ನಿತ್ಯಾನಂದಂ ವೇದರಣ್ಯಂನಲ್ಲಿ ಗಾರ್ಮೆಂಟ್ ಶಾಪ್ ಮಾಲೀಕನಾಗಿದ್ದಾನೆ. ನಿತ್ಯಾನಂದಂ ತನ್ನ ಮಗನ ಗೆಳತಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

    ಆರೋಪಿಯ ಮಗ ಎನ್.ಮುಖೇಶ್ ಕಣ್ಣನ್ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಈ ವಿಚಾರ ಆರೋಪಿ ನಿತ್ಯಾನಂದಂಗೆ ಗೊತ್ತಾಗಿದ್ದು, ತನ್ನ ಮಗ ಮತ್ತು ಗೆಳತಿಯ ನಡುವೆ ಭಿನ್ನಾಭಿಪ್ರಾಯ ಮೂಡಿಸಲು ಪ್ಲಾನ್ ಮಾಡಿಕೊಂಡಿದ್ದನು. ಯಾಕೆಂದರೆ ಅವರಿಬ್ಬರ ಸಂಬಂಧಕ್ಕೆ ನಿತ್ಯಾನಂದಂ ವಿರೋಧವಿತ್ತು. ಅದರಂತೆಯೇ ಆರೋಪಿ ನಿತ್ಯಾನಂದಂ ತನ್ನ ಮಗನ ಗೆಳತಿಗೆ ಫೋನ್ ಮಾಡಿ ತನ್ನನ್ನು ಭೇಟಿಯಾಗಲು ಹೇಳಿದ್ದಾನೆ.

    ನಿಮ್ಮಿಬ್ಬರ ಮದುವೆಯ ಬಗ್ಗೆ ಮಾತನಾಡಬೇಕು ಎಂದು ಸೆಂಬೊಡೈ ಗ್ರಾಮಕ್ಕೆ ಬರುವಂತೆ ಹೇಳಿದ್ದ. ಯುವತಿ ನಿತ್ಯಾನಂದಂ ಮನೆಗೆ ಹೋಗಿದ್ದಾಳೆ. ಯುವತಿ ಮನೆಗೆ ಬಂದ ತಕ್ಷಣ ಆರೋಪಿ ಆಕೆಯ ಮೊಬೈಲ್ ಫೋನ್ ಕಿತ್ತುಕೊಂಡಿದ್ದಾನೆ. ಅಷ್ಟೇ ಅಲ್ಲದೇ ಆಕೆಯ ಕುತ್ತಿಗೆಗೆ ಬಲವಂತವಾಗಿ ಮಂಗಳಸೂತ್ರ ಕಟ್ಟಿದ್ದಾನೆ. ನಂತರ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ವರದಿಯಾಗಿದೆ.

    ಅಲ್ಲದೇ ಆರೋಪಿ ಯುವತಿಯನ್ನು ಎರಡು ದಿನಗಳವರೆಗೆ ತನ್ನ ಮನೆಯಲ್ಲಿಯೇ ಇಟ್ಟುಕೊಂಡು ಲೈಂಗಿಕ ಕಿರುಕುಳ ನೀಡಿದ್ದಾನೆ. ಅಲ್ಲಿಂದ ಆರೋಪಿ ಯುವತಿಯನ್ನು ತನ್ನ ಸ್ನೇಹಿತನ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಈ ವಿಚಾರ ಆರೋಪಿಯ ಮಗ ಕಣ್ಣನ್‍ಗೆ ಗೊತ್ತಾಗಿದೆ. ತಕ್ಷಣ ಕಣ್ಣನ್ ಯುವತಿಯನ್ನು ರಕ್ಷಿಸಿದ್ದಾನೆ. ಜೊತೆಗೆ ಈ ಘಟನೆಯ ಬಗ್ಗೆ ವೇದರಣ್ಯಂ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

    ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

  • ಪ್ರೇಯಸಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ನಟ ನಿತಿನ್

    ಪ್ರೇಯಸಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ನಟ ನಿತಿನ್

    ಹೈದರಾಬಾದ್: ಟಾಲಿವುಡ್ ಖ್ಯಾತ ನಟ ನಿತಿನ್ ಸದ್ಯದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ನಿತಿನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಬಹು ನಿರೀಕ್ಷಿತಾ ‘ಭೀಷ್ಮ’ ಸಿನಿಮಾದ ಬಿಡುಗಡೆ ಬಳಿಕ ನಿತಿನ್ ವಿವಾಹವಾಗಲಿದ್ದು, ಈ ವರ್ಷ ನಿತಿನ್‍ಗೆ ಡಬಲ್ ಸಂಭ್ರಮದ ಖುಷಿ ಸಿಗಲಿದೆ.

    ಸದ್ಯದ ಮಾಹಿತಿ ಪ್ರಕಾರ, ನಿತಿನ್ ಏಪ್ರಿಲ್ 16ರಂದು ದುಬೈನಲ್ಲಿ ಮದುವೆ ಆಗಲಿದ್ದಾರೆ. ಅಷ್ಟೇ ಅಲ್ಲದೆ ಮದುವೆಗೂ ಒಂದು ದಿನದ ಮುಂಚೆ ಅಂದರೆ ಏಪ್ರಿಲ್ 15ರಂದು ಪ್ರೀ ವೆಡ್ಡಿಂಗ್ ಸಮಾರಂಭ ಕೂಡ ಆಯೋಜಿಸಿದ್ದಾರೆ ಎಂದು ವರದಿಯಾಗಿದೆ.

    ನಿತಿನ್ ತಮ್ಮ ಬಹುದಿನದ ಗೆಳತಿ ಶಾಲಿನಿ ಅವರ ಕೈಹಿಡಿಯಲಿದ್ದಾರೆ. ಸುಮಾರು ನಾಲ್ಕೈದು ವರ್ಷದಿಂದ ಶಾಲಿನಿ ಹಾಗೂ ನಿತಿನ್ ಸ್ನೇಹಿತರು. ಈ ಸ್ನೇಹ ಪ್ರೀತಿಗೆ ತಿರುಗಿ ಈಗ ತಮ್ಮ ಗೆಳತಿಯ ಜೊತೆ ದಾಂಪತ್ಯ ಜೀವನ ಆರಂಭಿಸಲು ನಿತಿನ್ ನಿರ್ಧರಿಸಿದ್ದಾರೆ. ತಮ್ಮ ಪ್ರೀತಿಯ ಬಗ್ಗೆ ಇಬ್ಬರ ಮನೆಯಲ್ಲೂ ತಿಳಿಸಿ, ಹಿರಿಯರ ಸಮ್ಮತಿ ಪಡೆದು ಈ ಜೋಡಿ ಮದುವೆಯಾಗುತ್ತಿದ್ದಾರೆ.

    ನಿತಿನ್ ಮದುವೆ ಮಾತ್ರವಲ್ಲ ಸಂಗೀತ ಕಾರ್ಯಕ್ರಮ ಕೂಡ ದುಬೈನಲ್ಲಿಯೇ ನಡೆಯಲಿದ್ದು, ವಿವಾಹದ ಕೆಲ ದಿನಗಳ ಬಳಿಕ ಹೈದರಾಬಾದ್‍ನಲ್ಲಿ ಅದ್ಧೂರಿಯಾಗಿ ಆರತಕ್ಷತೆ ನಡೆಯಲಿದೆ. ಈಗಾಗಲೇ ನಿತಿನ್ ಹಾಗೂ ಶಾಲಿನಿ ಕುಟುಂಬದವರು ಮದುವೆ ತಯಾರಿಯಲ್ಲಿ ಬ್ಯುಸಿಯಾಗಿದ್ದು, ಮದುವೆಗೆ ದುಬೈನಲ್ಲಿ ಹೋಟೆಲ್ ಕೂಡ ಬುಕ್ ಆಗಿದೆ.

    ಫೆಬ್ರವರಿ 21ರಂದು ವೆಂಕಿ ಕುಡುಮುಲಾ ನಿರ್ದೇಶನದಲ್ಲಿ ತಯಾರಾಗಿರುವ ‘ಭೀಷ್ಮ’ ಸಿನಿಮಾ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ನಿತಿನ್‍ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಈ ಚಿತ್ರ ತೆರೆಕಂಡ ಬಳಿಕ ನಿತಿನ್ ತಮ್ಮ ಪ್ರೇಯಸಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲು ತಯಾರಾಗಿದ್ದಾರೆ.

  • ಮದುವೆಗೆ ತಾಯಿ ನಿರಾಕರಿಸಿದ್ದಕ್ಕೆ ಪ್ರೇಯಸಿ ಮನೆಗೆ ಬೆಂಕಿಯಿಟ್ಟ

    ಮದುವೆಗೆ ತಾಯಿ ನಿರಾಕರಿಸಿದ್ದಕ್ಕೆ ಪ್ರೇಯಸಿ ಮನೆಗೆ ಬೆಂಕಿಯಿಟ್ಟ

    ಮುಂಬೈ: ಪ್ರೇಯಸಿಯ ತಾಯಿ ಮದುವೆಗೆ ನಿರಾಕರಿಸಿದಕ್ಕೆ ವ್ಯಕ್ತಿಯೊಬ್ಬ ಆಕೆಯ ಮನೆಗೆ ಬೆಂಕಿ ಹಚ್ಚಿದ ಘಟನೆ ಮಹಾರಾಷ್ಟ್ರದ ಉಲ್ಲಾಸ್‍ನಗರದಲ್ಲಿ ನಡೆದಿದೆ.

    ಅಶೋಕ್ ವಾಘಮರೆ ಅರೆಸ್ಟ್ ಆದ ಆರೋಪಿ. ಉಲ್ಲಾಸ್‍ನಗರದ ನಿವಾಸಿಯಾಗಿರುವ ಅಶೋಕ್, ರೇಖಾ ಮಾರುತಿಯಾ ಎಂಬವಳನ್ನು ಪ್ರೀತಿಸುತ್ತಿದ್ದನು. ಅಲ್ಲದೆ ಆಕೆಯ ಮನೆಗೆ ಹೋಗಿ ತಾಯಿ ಕಮಲ್ ಅವರ ಮುಂದೆ ಮದುವೆ ಪ್ರಸ್ತಾಪಿಸಿದ್ದಾನೆ.

    ಅಶೋಕ್ ನಿರುದ್ಯೋಗಿ ಆಗಿದ್ದ ಕಾರಣ ಕಮಲ್ ಅವರು ಈ ಮದುವೆಗೆ ನಿರಾಕರಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಅಶೋಕ್ ತನ್ನ ಪ್ರೇಯಸಿಯ ಮನೆಗೆ ಬೆಂಕಿ ಹಚ್ಚಿದ್ದಾನೆ. ಬಳಿಕ ಬೆಂಕಿಯನ್ನು ನಂದಿಸಿ ಆತನನ್ನು ಪೊಲೀಸರಿಗೆ ಒಪ್ಪಿಸಲಾಯಿತು.

    ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿ ಸುಧಾಕರ್ ಸುರಾದ್ಕರ್ ಮಾತನಾಡಿ, ಅಶೋಕ್ ಹಾಗೂ ರೇಖಾ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಮದುವೆಯಾಗಲು ನಿರ್ಧರಿಸಿದ್ದರು. ಸೋಮವಾರ ಅಶೋಕ್ ತನ್ನ ಪ್ರೇಯಸಿಯ ಮನೆಗೆ ಹೋಗಿ ರೇಖಾಳನ್ನು ಮದುವೆಯಾಗುತ್ತೇನೆ ಎಂದು ಹೇಳಿದ್ದಾನೆ. ಆದರೆ ಕಮಲ್ ಇದಕ್ಕೆ ಒಪ್ಪಲಿಲ್ಲ ಎಂದು ತಿಳಿಸಿದ್ದಾರೆ.

    ಅಶೋಕ್ ನಿರುದ್ಯೋಗಿ ಆಗಿದ್ದ ಕಾರಣ ಕಮಲ್ ಈ ಮದುವೆಯನ್ನು ನಿರಾಕರಿಸಿದ್ದರು. ಇದರಿಂದ ಕೋಪಗೊಂಡ ಅಶೋಕ್, ಕಮಲ್‍ಗೆ ಬೆದರಿಕೆ ಹಾಕಿ ಬಟ್ಟೆಯ ಮೇಲೆ ಬೆಂಕಿಕಡ್ಡಿಯನ್ನು ಎಸೆದಿದ್ದಾನೆ. ತಕ್ಷಣ ಕಮಲ್ ಬೆಂಕಿಯನ್ನು ನಂದಿಸಿದ್ದಾರೆ. ಆದರೆ ಬಟ್ಟೆಗಳು ಸಂಪೂರ್ಣವಾಗಿ ಸುಟ್ಟು ಹೋಗಿತ್ತು ಎಂದು ಸುಧಾಕರ್ ಹೇಳಿದ್ದಾರೆ.

    ಈ ಘಟನೆ ನಡೆಯುತ್ತಿದ್ದಂತೆ ಕಮಲ್ ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ ಪೊಲೀಸರು ಆರೋಪಿ ಅಶೋಕ್‍ನನ್ನು ಬಂಧಿಸಿದ್ದಾರೆ.

  • ಮನೆಗೆ ಕರೆಸಿ ಪ್ರಿಯತಮೆಗೆ ಬೆಂಕಿ ಹಚ್ಚಿದ ಪ್ರಿಯಕರನ ಕುಟುಂಬಸ್ಥರು

    ಮನೆಗೆ ಕರೆಸಿ ಪ್ರಿಯತಮೆಗೆ ಬೆಂಕಿ ಹಚ್ಚಿದ ಪ್ರಿಯಕರನ ಕುಟುಂಬಸ್ಥರು

    ರಾಯ್‍ಪುರ: ಮನೆಗೆ ಕರೆಸಿ ಪ್ರಿಯಕರನ ಕುಟುಂಬಸ್ಥರು ಯುವತಿಯ ಮೇಲೆ ಬೆಂಕಿ ಹಚ್ಚಿದ ಘಟನೆ ಛತ್ತಿಸ್‍ಗಢದ ರಾಯ್‍ಪುರದಲ್ಲಿ ನಡೆದಿದೆ.

    ಈ ಘಟನೆಯಲ್ಲಿ ಯುವತಿಯ ದೇಹ ಶೇ. 80ರಷ್ಟು ಸುಟ್ಟು ಹೋಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಡಿಸೆಂಬರ್ 18ರಂದು ಈ ಘಟನೆ ನಡೆದಿದ್ದು, ಯುವತಿ ಆಸ್ಪತ್ರೆಗೆ ದಾಖಲಾಗಿರುವುದನ್ನು ನೋಡಿ ಶನಿವಾರ ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ತಿಳಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಪ್ರಿಯಕರನ ಕುಟುಂಬಸ್ಥರು ಹಾಗೂ ಆತನ ಸಂಬಂಧಿಕರ ವಿರುದ್ಧ ಯುವತಿಯ ಸಹೋದರ ದೂರು ದಾಖಲಿಸಿದ್ದಾರೆ.

    ಡಿಸೆಂಬರ್ 18ರಂದು ಪ್ರಿಯಕರ ನನ್ನ ಸಹೋದರಿಯ ಜೊತೆ ಮಾತನಾಡಲು ಮನೆಗೆ ಕರೆದುಕೊಂಡು ಹೋಗಿದ್ದನು. ನನ್ನ ಸಹೋದರಿ ಆತನ ಮನೆಗೆ ತಲುಪಿದಳು. ಪ್ರಿಯಕರ ಮನೆಯಲ್ಲಿ ಇಲ್ಲದ ಸಮಯದಲ್ಲಿ ಆತನ ಕುಟುಂಬಸ್ಥರು ಯುವತಿ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಈ ಘಟನೆಯಲ್ಲಿ ಯುವತಿಯ ದೇಹ ಶೇ. 80ರಷ್ಟು ಸುಟ್ಟು ಹೋಗಿದ್ದು, ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಶನಿವಾರ ಯುವತಿಯನ್ನು ರಾಯ್‍ಪುರ ಮೂಲದ ಆಸ್ಪತ್ರೆಗೆ ದಾಖಲಿಸಿದರು. ಈ ವೇಳೆ ಆಸ್ಪತ್ರೆ ಸಿಬ್ಬಂದಿ ಮಹಿಳೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಸದ್ಯ ಪೊಲೀಸರು ಯುವಕನ ಕುಟುಂಬಸ್ಥರ ವಿರುದ್ಧ ಐಪಿಸಿ ಸೆಕ್ಷನ್ 307(ಕೊಲೆ ಯತ್ನ) ಹಾಗೂ 34 ಅಡಿಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ.

    ಸದ್ಯ ಪೊಲೀಸರು ಆರೋಪಿಗಳನ್ನು ಬಂಧಿಸಲು ಪ್ರಯತ್ನಿಸುತ್ತಿದ್ದಾರೆ.

  • ಮದುವೆಯಾಗದ್ದಕ್ಕೆ ಪ್ರಿಯಕರನ ಮರ್ಮಾಂಗ ಕತ್ತರಿಸಿದ್ಲು – ಪ್ರೇಯಸಿಗೆ ಈಗ 10 ವರ್ಷ ಕಠಿಣ ಶಿಕ್ಷೆ

    ಮದುವೆಯಾಗದ್ದಕ್ಕೆ ಪ್ರಿಯಕರನ ಮರ್ಮಾಂಗ ಕತ್ತರಿಸಿದ್ಲು – ಪ್ರೇಯಸಿಗೆ ಈಗ 10 ವರ್ಷ ಕಠಿಣ ಶಿಕ್ಷೆ

    ಬೆಂಗಳೂರು: ಪ್ರಿಯಕರನ ಮೋಸಕ್ಕೆ ಬೇಸತ್ತು ಪ್ರೇಯಸಿಯೊಬ್ಬಳು ಪ್ರಿಯಕರನ ಮರ್ಮಾಂಗ ಕತ್ತರಿಸಿ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಅನುಭವಿಸುತ್ತಿದ್ದಾಳೆ.

    2008ರಲ್ಲಿ ಬೆಂಗಳೂರಿನ ಕೋರಮಂಲದಲ್ಲಿ ಈ ಘಟನೆ ನಡೆದಿತ್ತು. ದಂತ ವೈದ್ಯರಾಗಿದ್ದ ಸೈಯಾದ್ ಅಮಿನಾ ಮತ್ತು ಮೀರ್ ಅರ್ಷದ್ ಕೋರಮಂಗಲದಲ್ಲಿ ಕ್ಲಿನಿಕ್ ನಡೆಸುತ್ತಿದ್ದರು.

    ಜೊತೆಯಲ್ಲಿ ಇದ್ದ ಇಬ್ಬರು ಕೂಡ ಪ್ರೀತಿ ಮಾಡುತ್ತಿದ್ದರು. ಈ ನಡುವೆ ಹುಡುಗನ ಮನೆಯವರು ಮದುವೆಗೆ ನಿರಾಕರಿಸಿದರು. ಮೀರ್ ಅರ್ಷದ್ ಕ್ಯಾನ್ಸರ್ ಇದೆ ಎಂದು ಅಮಿನಾಗೆ ನಂಬಿಸಿ ಮದುವೆ ಆಗಲು ನಿರಾಕರಿಸಿದ್ದನು. ಬಳಿಕ ಮೀರ್ ಅರ್ಷದ್ ಬೇರೊಂದು ಮದುವೆಯಾಗಿದ್ದನು.

    ಪ್ರಿಯಕರನ ಮದುವೆಯಿಂದ ಕೋಪಗೊಂಡ ಪ್ರೇಯಸಿ ಆತನನ್ನು ಮತ್ತು ಆತನ ಪತ್ನಿಯನ್ನು ಔತಣಕ್ಕೆ ಕರೆದಿದ್ದಳು. ಮನೆಯಲ್ಲಿ ಊಟಕ್ಕೆ ಮತ್ತಿನ ಔಷಧಿ ಹಾಕಿ ಪ್ರಿಯಕರನ ಮರ್ಮಾಂಗ ಕತ್ತರಿಸಿದ್ದಳು. ಬಳಿಕ ಆಕೆಯೇ ಪ್ರಿಯಕರನ ಆಸ್ಪತ್ರೆಗೆ ಸೇರಿಸಿ ಪರಾರಿಯಾಗಿದ್ದಳು.

    ಇಷ್ಟೇಲ್ಲಾ ಘಟನೆ ಬಳಿಕ ಪೊಲೀಸರು ಪ್ರಿಯತಮೆಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಬೆಂಗಳೂರಿನ ಸಿಟಿ ಸಿವಿಲ್ ಕೋಟ್ ನಲ್ಲಿ ವಾದ ಪ್ರತಿವಾದ ಆಲಿಸಿ ಯುವತಿಗೆ 10 ವರ್ಷ ಶಿಕ್ಷೆ ಪ್ರಕಟಿಸಿದೆ.