Tag: ಪ್ರೇಯಸಿ

  • ಅಕ್ರಮ ಸಂಬಂಧಕ್ಕೆ ಪ್ರಿಯಕರನನ್ನೇ ಮರ್ಡರ್ ಮಾಡಿದ್ಳು – ಪೊಲೀಸರಿಗೆ ಸಿಕ್ತು ಸಿಸಿಟಿವಿಯಿಂದ ಸುಳಿವು

    ಅಕ್ರಮ ಸಂಬಂಧಕ್ಕೆ ಪ್ರಿಯಕರನನ್ನೇ ಮರ್ಡರ್ ಮಾಡಿದ್ಳು – ಪೊಲೀಸರಿಗೆ ಸಿಕ್ತು ಸಿಸಿಟಿವಿಯಿಂದ ಸುಳಿವು

    ನೆಲಮಂಗಲ: ಪ್ರೇಯಸಿಯೇ ತನ್ನ ಪ್ರಿಯಕರನಿಗೆ ಸ್ಕೆಚ್ ಹಾಕಿ ಮರ್ಡರ್ ಮಾಡಿದ್ದ ಪ್ರಕರಣವನ್ನು ಮಾದನಾಯಕನಹಳ್ಳಿ ಪೊಲೀಸರು ಭೇದಿಸಿದ್ದಾರೆ.

    ಸೆಪ್ಟೆಂಬರ್ 5 ರಂದು ಮಾದಾವರದ ನವಿಲೇ ಲೇಔಟ್‍ನ ನಿರ್ಜನ ಪ್ರದೇಶದಲ್ಲಿ ಕಿಡಿಗೇಡಿಗಳು ಕಿರಣ್ ಕುಮಾರ್ ಕೊಲೆ ಮಾಡಲು ಪ್ರಯತ್ನಿಸಿದ್ದರು. ಕೊನೆಗೆ ಬೆಂಗಳೂರಿನ ಪ್ರಕ್ರಿಯ ಆಸ್ಪತ್ರೆಯಲ್ಲಿ ಕಿರಣ್ ಕುಮಾರ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು. ಪ್ರಕರಣವನ್ನು ಕೊಲೆ ಎಂದು ದಾಖಲು ಮಾಡಿಕೊಂಡ ಮಾದನಾಯಕನಹಳ್ಳಿ ಪೊಲೀಸರು ತನಿಖೆ ಕೈಗೊಂಡು, 4 ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ:  ವಿಚ್ಛೇದನ ಜೀವನಾಂಶ ಹಣ ಹೊಂದಿಸಲಾಗಿಲ್ಲ ಅಂತ ಪತಿ ಆತ್ಮಹತ್ಯೆ

    murder

    5 ವರ್ಷ ಸಂಬಂಧ ಹೊಂದಿದ್ದ ಕಿರಣ್ ಕುಮಾರ್‌ನನ್ನು ಮುಗಿಸಲು ಶ್ವೇತಾ ಡೇವಿಡ್ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಳು. ನಂತರ ಕಿರಣ್ ಮುಗಿಸಲು ಶ್ರೀಕಾಂತ್ ಮತ್ತು ದಿನೇಶ್ ಜೊತೆ ಸೇರಿ 1 ಲಕ್ಷ ರೂಪಾಯಿಗೆ ಡೀಲ್ ಮಾತನಾಡಿಕೊಂಡ ಡೇವಿಡ್ 10 ಸಾವಿರ ಹಣ ನೀಡಿ ತನ್ನ ಬೈಕ್ ಕೊಟ್ಟು ಕಿರಣ್ ಮೇಲೆ ಅಟ್ಯಾಕ್ ಮಾಡಿಸಿದ್ದ. ಈ ಕೊಲೆಗೆ ಕಿರಣ್ ಕುಮಾರ್ ಚಲನವಲನದ ಬಗ್ಗೆ ಸಂಪೂರ್ಣ ಅರಿತಿದ್ದ ಶ್ವೇತಾ ಎಲ್ಲಾ ಮಾಹಿತಿಗಳನ್ನು ನೀಡಿದ್ದಳು.

    murder

    ಈ ಪ್ರಕರಣ ದಾಖಲಿಸಿಕೊಂಡ ಮಾದನಾಯಕನಹಳ್ಳಿ ಇನ್ಸ್‌ಪೆಕ್ಟರ್‌ ಮಂಜುನಾಥ್ ನೇತೃತ್ವದಲ್ಲಿ ತಂಡ ರಚಿಸಿ ಸಿಸಿಟಿವಿಯಲ್ಲಿ ಬೈಕ್ ಚಲನವಲನ ಆಧರಿಸಿ ಶ್ವೇತಾಳನ್ನು ವಿಚಾರಣೆಗೆ ಒಳಪಡಿಸಿದರು ಮತ್ತು ಕೃತ್ಯಕ್ಕೆ ಬಳಸಿದ್ದ ಬೈಕ್, ಚಾಕು, ಡಾಂಗಲ್ ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಎಸ್‍ಪಿ ಕೋನವಂಶಿ ಕೃಷ್ಣ ತಿಳಿಸಿದ್ದಾರೆ. ಇದನ್ನೂ ಓದಿ: ಕೊರೊನಾಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಕುಟುಂಬಕ್ಕೂ ಪರಿಹಾರ -ಕೇಂದ್ರ ಸರ್ಕಾರ

     

  • ಆಂಟಿ ಸುಪಾರಿ- ತಿಂಗಳ ಹಿಂದಷ್ಟೇ ವಿವಾಹವಾಗಿದ್ದವನ ಕೊಲೆ

    ಆಂಟಿ ಸುಪಾರಿ- ತಿಂಗಳ ಹಿಂದಷ್ಟೇ ವಿವಾಹವಾಗಿದ್ದವನ ಕೊಲೆ

    – ಜಿಮ್ ಬಾಡಿ, ಟಿಕ್‍ಟಾಕ್‍ನಲ್ಲಿ ಹೀರೋ

    ಕೋಲಾರ: ದಷ್ಟ ಪುಷ್ಟವಾಗಿ, ಜಿಮ್ ಬಾಡಿ ಮೆಂಟೈನ್ ಮಾಡುತ್ತ, ಇತ್ತೀಚೆಗಷ್ಟೇ ಮದುವೆಯಾಗಿದ್ದ ನವ ವಿವಾಹಿತನಿಗೆ ಸುಂದರವಾದ ಪ್ರೇಯಸಿಯ ಪ್ರೀತಿಯೇ ಅವನ ಕೊಲೆಗೆ ಕಾರಣವಾಗಿದೆ. ಮದುವೆಯ ಮನೆ ಈಗ ಸೂತಕದ ಮನೆಯಾಗಿದೆ.

    ನಗರದ ಮಹಾಲಕ್ಷ್ಮಿ ಬಡಾವಣೆಯ ನಿವಾಸಿ ಜಾಬೀರ್ ಪ್ರೇಯಸಿ ನೀಡಿದ ಸುಪಾರಿಯಿಂದಲೇ ಕೊಲೆಯಾದವ. ಕೋಲಾರದಿಂದ ದೂರದ ಬೀದರ್‍ನ ನಿಡುವಂಚಿ ಗ್ರಾಮದ ಅಜ್ಞಾತ ಸ್ಥಳದಲ್ಲಿ ಭೀಕರವಾಗಿ ಕೊಲೆ ಮಾಡಲಾಗಿದೆ. ಮಗ ಕಾಣೆಯಾದ ಬಗ್ಗೆ ಜಾಬೀರ್ ಪೋಷಕರು ಕೋಲಾರದ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಕೊಲೆಯಾದ ಒಂದು ತಿಂಗಳ ನಂತರ ದೂರದ ಬೀದರ್ ನ ನಿಡುವಂಚಿ ಗ್ರಾಮದ ಬಳಿ ಮಣ್ಣಲ್ಲಿ ಅವನ ಶವ ಪತ್ತೆಯಾಗಿದೆ.

    ಬೇರೆ ರಾಜ್ಯಗಳಿಂದ ಕಾರ್ ಗಳನ್ನು ಖರೀದಿಸಿ ತಂದು ಮಾರಾಟ ಮಾಡುವುದು ಜಾಬೀರ್‍ನ ಕಾಯಕವಾಗಿತ್ತು. ಜೊತೆಗೆ ಬಾಡಿ ಬಿಲ್ಡಿಂಗ್ ಮಾಡುವುದು ಹವ್ಯಾಸವಾಗಿತ್ತು. ಒಂದು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ. ಇದೆಲ್ಲದರ ಮಧ್ಯೆ ತನ್ನ ತಂದೆಯ ದೂರದ ಸಂಬಂಧಿ ವಿವಾಹಿತ ಮಹಿಳೆ ಝಕಿಯಾಳೊಂದಿಗೆ ಸಲುಗೆ ತೋರಿದ್ದು ಇವನ ಪ್ರಾಣ ಹೋಗಲು ಕಾರಣವಾಗಿದೆ.

    ಆಂಟಿಯಿಂದಲೇ ಸುಪಾರಿ
    ವಿವಾಹಿತ ಮಹಿಳೆ ಝಕಿಯಾಗೆ ಇವನ ಮೇಲೆ ಮೋಹ ಹುಟ್ಟಿ, ಅನೈತಿಕ ಸಂಭಂದವೂ ಕೂಡ ಇತ್ತು ಎನ್ನಲಾಗಿದೆ. ಆದರೆ ಜಾಬೀರ್‍ಗೆ ಅವನ ಮನೆಯವರು ಚಿಕ್ಕಬಳ್ಳಾಪುರದಲ್ಲಿ ಬೇರೊಬ್ಬ ಯುವತಿಯೊಂದಿಗೆ ಮದುವೆ ಮಾಡಿದ್ದರು. ಇದನ್ನು ಅರಗಿಸಿಕೊಳ್ಳಲಾಗದ ಝಕಿಯಾ, ಬೇರೊಂದು ನೆಪ ಹೇಳಿ ಜಾಬೀರ್‍ನನ್ನು ಹೈದ್ರಾಬಾದ್‍ಗೆ ಕರೆಸಿಕೊಳ್ಳುವ ನಾಟಕವಾಡಿದ್ದಾಳೆ. ಬಳಿಕ ದಾರಿ ಮಧ್ಯೆ ಧಾರುಣವಾಗಿ ಕೊಲೆ ಮಾಡಿದ್ದಾರೆ.

  • ಪ್ರೇಯಸಿಯ ಕೊಂದು ಆತ್ಮಹತ್ಯೆಗೆ ಶರಣಾದ ವಿವಾಹಿತ

    ಪ್ರೇಯಸಿಯ ಕೊಂದು ಆತ್ಮಹತ್ಯೆಗೆ ಶರಣಾದ ವಿವಾಹಿತ

    ಮೈಸೂರು: ಪ್ರೇಯಸಿಯ ಹತ್ಯೆ ಮಾಡಿದ ವಿವಾಹಿತ ವ್ಯಕ್ತಿ ನಂತರ ತಾನು ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನಲ್ಲಿ ನಡೆದಿದೆ.

    ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಹೊಂಬಾಳೆ ಕೊಪ್ಪಲು ಗ್ರಾಮದ ಎಚ್.ಎಂ.ಲೋಕೇಶ್(39) ತನ್ನ ಪ್ರೇಯಸಿ ನಾಗಮಂಗಲದ ಅಮೂಲ್ಯರನ್ನು ಹತ್ಯೆ ಮಾಡಿ, ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೈಸೂರಿನ ಹೊರವಲಯದ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿನ ಹೋಟೆಲ್‍ನಲ್ಲಿ ಈ ಘಟನೆ ನಡೆದಿದೆ.

    ಪ್ರಥಮ ದರ್ಜೆ ಗುತ್ತಿಗೆದಾರನಾಗಿದ್ದ ಲೋಕೇಶ್ ಗೆ ಮದುವೆಯಾಗಿ, ಮಗಳು ಇದ್ದಳು. ಮೈಸೂರಿನ ಕಾಲೇಜಿನಲ್ಲಿ ಎಂಎಸ್‍ಸಿ ಓದುತ್ತಿದ್ದ ಅಮೂಲ್ಯ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ. ಅಮೂಲ್ಯ ತನ್ನನ್ನು ಮದುವೆಯಾಗುವಂತೆ ಲೋಕೇಶ್ ನನ್ನು ಒತ್ತಾಯಿಸಿದ್ದಳು. ಈ ಕಾರಣ ನಿನ್ನೆ ಬೆಳಗ್ಗೆ ಮೈಸೂರಿನ ಹೊರವಲಯದ ಹೋಟೆಲ್ ನಲ್ಲಿ ರೂಮ್ ಬುಕ್ ಮಾಡಿ ಅಲ್ಲಿಗೆ ಯುವತಿಯನ್ನು ಕರೆದುಕೊಂಡು ಬಂದಿದ್ದಾನೆ. ಅಲ್ಲಿ ಆಕೆಯ ಕತ್ತನ್ನು ಹಗ್ಗದಿಂದ ಬಿಗಿದು ಹತ್ಯೆ ಮಾಡಿದ್ದಾನೆ.

    ನಂತರ ತನ್ನ ಸ್ನೇಹಿತನಿಗೆ ಫೋನ್ ಮಾಡಿ ಹತ್ಯೆ ವಿಚಾರ ತಿಳಿಸಿ ಯುವತಿಯ ದೇಹವನ್ನು ಇಲ್ಲಿಂದ ತೆಗೆದುಕೊಂಡು ಹೋಗಿ ಸುಟ್ಟು ಹಾಕಬೇಕು. ಇದಕ್ಕೆ ಸಹಾಯ ಮಾಡುವಂತೆ ಕೇಳಿದ್ದಾನೆ. ಸ್ನೇಹಿತ ಇದಕ್ಕೆ ಒಪ್ಪಿಲ್ಲ. ಅದರೂ ತನ್ನ ಮತ್ತೊಬ್ಬ ಸ್ನೇಹಿತನ ಜತೆ ಹೋಟೆಲ್‍ಗೆ ಬಂದಿದ್ದಾನೆ. ಆಗ ಬಾಗಿಲು ತೆಗೆಯದಿದ್ದಾಗ, ಫೋನ್ ಕೂಡ ರಿಸೀವ್ ಮಾಡದೆ ಇದ್ದಾಗ ಅನುಮಾನಗೊಂಡು ಬಾಗಿಲು ತೆಗೆಸಿದಾಗ ಪ್ರೇಯಸಿಯನ್ನು ಹತ್ಯೆ ಮಾಡಿದ ಲೋಕೇಶ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಹೆಬ್ಬಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪ್ರೀತಿಗಾಗಿ ಅಪಹರಣ ನಾಟಕ – ತಂದೆಗೆ 10 ಲಕ್ಷ ಬೇಡಿಕೆ ಇಟ್ಟ ಯುವಕ

    ಪ್ರೀತಿಗಾಗಿ ಅಪಹರಣ ನಾಟಕ – ತಂದೆಗೆ 10 ಲಕ್ಷ ಬೇಡಿಕೆ ಇಟ್ಟ ಯುವಕ

    ಲಕ್ನೋ: ಪ್ರೇಯಸಿ ತಂದೆಯ ಮೇಲೆ ಸುಳ್ಳು ಆಪಾದನೆ ಮಾಡುವ ಸಲುವಾಗಿ ಯುವಕನೊಬ್ಬ ಸ್ನೇಹಿತನೊಂದಿಗೆ ಅಪಹರಣ ನಾಟಕವಾಡಿ ತಾನೇ ಸಮಸ್ಯೆಗೆ ಸಿಲುಕಿಕೊಂಡ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಆರೋಪಿಯನ್ನು ಜಿತೇಂದ್ರ ಕುಮಾರ್ ಎಂದು ಗುರುತಿಸಲಾಗಿದ್ದು, ಈತ ಅಮೇಥಿ ಜಿಲ್ಲೆಯ ನಿವಾಸಿ. ಸುಲ್ತಾನಪುರ ಜಿಲ್ಲೆಯ ಲಂಭುವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ನವಧನ್ ಗ್ರಾಮದಲ್ಲಿ ತನ್ನ ಅಜ್ಜಿ ಜೊತೆ ವಾಸವಾಗಿದ್ದನು. ಇತ್ತೀಚೆಗಷ್ಟೇ ಸ್ಥಳೀಯ ಕಾರ್ಯಕ್ರಮಗಳಲ್ಲಿ ಗಾಯಕನಾಗಿ ವೃತ್ತಿ ಆರಂಭಿಸಿದ್ದ ಈತ ಸಂಗೀತ ಕಲಿಯುವ ನೆಪ ಹೇಳಿ ಜನವರಿ 23ರಂದು ಮನೆಯಿಂದ ವಾರಣಾಸಿಗೆ ಹೋಗಿದ್ದಾನೆ.

    ಮರುದಿನ ಜಿತೇಂದ್ರ ಕುಮಾರ್ ಮೊಬೈಲ್ ಮೂಲಕ ಆತನ ತಂದೆ ಸುರೇಂದ್ರ ಕುಮಾರ್ ಗೆ ತಮ್ಮ ಮಗನನ್ನು ಅಪಹರಣ ಮಾಡಲಾಗಿದೆ ಎಂಬ ಕರೆ ಬಂದಿದೆ. ಅಲ್ಲದೆ ಆತನನ್ನು ಸುರಕ್ಷಿತವಾಗಿ ವಾಪಸ್ ಕಳುಹಿಸಬೇಕಾದರೆ 10 ಲಕ್ಷ ರೂ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಇದರಿಂದ ಆತಂಕಗೊಂಡ ಸುರೇಂದ್ರ ಕುಮಾರ್ ದಿಕ್ಕುತೋಚದೆ ಪೊಲೀಸರ ಮೊರೆ ಹೋಗಿದ್ದಾರೆ.

    ತನಿಖೆ ವೇಳೆ ಅಪಹರಣಕಾರರು ಜಿತೇಂದ್ರ ಕುಮಾರ್ ಫೋನ್ ಬಳಸಿ ಕರೆ ಮಾಡಿರುವುದನ್ನು ಪತ್ತೆ ಹಚ್ಚಿದ ಪೊಲೀಸರು ಘಟನೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಜನವರಿ 24ರಂದು ಮಧ್ಯರಾತ್ರಿ 2 ಗಂಟೆಗೆ ಜಿತೇಂದ್ರ್ರ ಮೊಬೈಲ್ ನಿಂದ ಸಿಮ್ ಬದಲಿಸಿ ಬೆಳಗ್ಗೆ 8 ಗಂಟೆ ಹೊತ್ತಿಗೆ ಕರೆ ಮಾಡಲಾಗಿದೆ ಎಂದು ಪೊಲೀಸರು ಸುರೇಂದ್ರ ಕುಮಾರ್ ತಿಳಿಸಿದ್ದಾರೆ. ಅಲ್ಲದೆ ಕರೆ ಮಾಡಲು ಬಳಸಿದ್ದ ಸಿಮ್ ಜಿತೇಂದ್ರ ಕುಮಾರ್ ಸ್ನೇಹಿತನ ರವಿ ಹೆಸರು ತೋರಿಸುತ್ತಿದೆ. ಕೊನೆಗೆ ಟ್ರೇಸ್ ಮಾಡಿ ಶಿವಗರದಲ್ಲಿ ಆರೋಪಿಗಳನ್ನು ಪತ್ತೆ ಮಾಡಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ನಂತರ ವಿಚಾರಣೆ ವೇಳೆ ಜಿತೇಂದ್ರ ಕುಮಾರ್ ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದು, ಆಕೆಯ ತಂದೆ ಪ್ರೀತಿಯನ್ನು ನಿರಾಕರಿಸಿದ ಕಾರಣ ಅವರ ಮೇಲೆ ಸುಳ್ಳು ಆಪಾದನೆ ಮಾಡುವ ಸಲುವಾಗಿ ಅಪಹರಣ ನಾಟಕವಾಡಿರುವುದಾಗಿ ಬಾಯ್ಬಿಟ್ಟಿದ್ದಾನೆ.

  • ಮದ್ವೆಯಾಗದೇ ಸಂಸಾರ – ತಾಳಿ ಕಟ್ಟು ಅಂದಿದ್ದಕ್ಕೆ ಗೆಳತಿ, ಅತ್ತೆಯ ಕೊಲೆ

    ಮದ್ವೆಯಾಗದೇ ಸಂಸಾರ – ತಾಳಿ ಕಟ್ಟು ಅಂದಿದ್ದಕ್ಕೆ ಗೆಳತಿ, ಅತ್ತೆಯ ಕೊಲೆ

    – ಇಬ್ಬರ ಕತ್ತು ಕೊಯ್ದು ಕೊಂದು ಪೊಲೀಸರಿಗೆ ಶರಣಾದ

    ಚಿಕ್ಕಬಳ್ಳಾಪುರ: ಪ್ರಿಯತಮೆ ಮತ್ತು ಆಕೆಯ ತಾಯಿಯನ್ನ ಕೊಂದು ಆರೋಪಿ ಪೊಲೀಸರಿಗೆ ಶರಣಾಗಿರುವ ಘಟನೆ ದೇವನಹಳ್ಳಿ ತಾಲೂಕಿನ ಬೈಚಾಪುರ ಗ್ರಾಮದಲ್ಲಿ ನಡೆದಿದೆ.

    ಲಕ್ಷ್ಮಿದೇವಿ (50) ಮತ್ತು ರಮಾದೇವಿ (30) ಮೃತ ತಾಯಿ ಮಗಳು. ಓರಿಸ್ಸಾ ಮೂಲದ ಮಲಯಫರೀದ್ ಮದುವೆಯಾಗದೇ ರಮಾದೇವಿ ಸಂಸಾರ ನಡೆಸುತ್ತಿದ್ದನು. ಮದುವೆಗೂ ಮುನ್ನವೇ ಜೋಡಿ ಮಗುವಾಗಿತ್ತು. ಐದು ತಿಂಗಳು ಮಗುವಾದ್ರು ಮಲಯಫರೀದ್ ಮದುವೆಯಾಗಲು ಹಿಂದೇಟು ಹಾಕಿದ್ದನು.

    5 ತಿಂಗಳ ಮಗುವಿದ್ದ ಕಾರಣ ಮಗಳನ್ನ ಮದುವೆ ಆಗುವಂತೆ ಲಕ್ಷ್ಮಿದೇವಿ ಒತ್ತಾಯಿಸುತ್ತಿದ್ದರು. ಮಧ್ಯರಾತ್ರಿ ತಾಯಿ ಮತ್ತು ಮಗಳ ಕತ್ತುಕೊಯ್ದು ಬರ್ಬರವಾಗಿ ಕೊಲೆ ಮಾಡಿದ್ದಾನೆ. ನಂತರ ಮಗುವಿನ ಜೊತೆ ಠಾಣೆಗೆ ತೆರಳಿ ಶರಣಾಗಿದ್ದಾನೆ. ಪೊಲೀಸರು ಎರಡು ಮೃತದೇಹಗಳನ್ನ ಮರಣೋತ್ತರ ಶವ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿ ತನಿಖೆ ನಡೆಸುತ್ತಿದ್ದಾರೆ.

     

  • ತಂದೆ ಜೊತೆ ಸೇರಿ ಪ್ರಿಯತಮೆಯನ್ನ ಅತ್ಯಾಚಾರಗೈದ ಕಾಮಿ

    ತಂದೆ ಜೊತೆ ಸೇರಿ ಪ್ರಿಯತಮೆಯನ್ನ ಅತ್ಯಾಚಾರಗೈದ ಕಾಮಿ

    – ಮದ್ವೆಗೂ ಮುನ್ನ ಗೆಳೆಯನ ಮನೆಯಲ್ಲಿದ್ದ ಯುವತಿ

    ದಿಸ್ಪುರ್: ಆಘಾತಕಾರಿ ಘಟನೆಯೊಂದರಲ್ಲಿ 19 ವರ್ಷದ ಹುಡುಗಿಯ ಮೇಲೆ ಆಕೆಯ ಪ್ರಿಯತಮ ಹಾಗೂ ಆತನ ತಂದೆಯೇ ಅತ್ಯಾಚಾರ ಎಸಗಿ ವಿಕೃತಿ ಮೆರೆದಿದ್ದಾರೆ.

    ಅಸ್ಸಾಂನ ಕ್ಯಾಚರ್ ಜಿಲ್ಲೆಯ ಧೂಲೈ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, 19 ವರ್ಷದ ಹುಡುಗಿಯ ಮೇಲೆ ಆಕೆಯ ಪ್ರಿಯತಮ ಹಾಗೂ ಆತನ ತಂದೆ ಅತ್ಯಾಚಾರಗೈದಿದ್ದಾರೆ. ಸಂತ್ರಸ್ತೆಯ ಪ್ರಿಯತಮನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳನ್ನು ಪ್ರೀತಮ್‍ನಾತ್ ಹಾಗೂ ಈತನ ತಂದೆ ಪಂಚುನಾತ್ ಎಂದು ಗುರುತಿಸಲಾಗಿದೆ.

    ಆರು ತಿಂಗಳ ಹಿಂದೆ ಪ್ರೀತಮ್‍ನನ್ನು ನಾನು ಪ್ರೀತಿಸಲು ಆರಂಭಿಸಿದೆ. ನವೆಂಬರ್‍ನಲ್ಲಿ ವಿವಾಹ ಮಾಡಲು ಅವರು ನಿರ್ಧರಿಸಿದ್ದರು. ಹೀಗಾಗಿ ಅಕ್ಟೋಬರ್ 8ರಂದು ಪ್ರೀತಮ್ ಮನೆಗೆ ಹೋಗಿದ್ದೆ. ಅಲ್ಲದೆ ವಿವಾಹವಾಗುವ ವರೆಗೆ ಬೇರೆ ಬೇರೆ ರೂಮ್‍ಗಳಲ್ಲೇ ಇರಬೇಕು ಎಂದು ಈ ಜೋಡಿ ನಿರ್ಧರಿಸಿತ್ತು. ಮಾತನಾಡಿಕೊಂಡಂತೆ ಹುಡುಗಿ ಪ್ರತ್ಯೇಕ ರೂಮ್‍ನಲ್ಲಿ ವಾಸವಿದ್ದು, ಈ ವೇಳೆ ಪ್ರೀತಮ್ ಹಾಗೂ ಆತನ ತಂದೆ ಅತ್ಯಾಚಾರಗೈದಿದ್ದಾರೆ.

    ಘಟನೆ ನಂತರ ನವೆಂಬರ್ 6ರಂದು ಹುಡುಗಿ ತನ್ನ ತವರು ಮನೆಗೆ ಬಂದಿದ್ದು, ಘಟನೆ ಕುರಿತು ಕುಟುಂಬಸ್ಥರಿಗೆ ವಿವರಿಸಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಕುಟುಂಬಸ್ಥರು ನವೆಂಬರ್ 10ರಂದೇ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣವನ್ನು ಸಹ ದಾಖಲಿಸಿದ್ದಾರೆ. ಆದರೆ ಮುಂದೆ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ, ಪೊಲೀಸರು ಸರಿಯಾದ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿಲ್ಲ. ದೂರು ದಾಖಲಿಸಿ ಒಂದು ವಾರ ಕಳೆದರೂ ಆರೋಪಿಗಳನ್ನು ಬಂಧಿಸಿಲ್ಲ ಎಂದು ಸಂತ್ರಸ್ತೆ ಕುಟುಂಬಸ್ಥರು ಆರೋಪಿಸಿದ್ದಾರೆ.

  • ಮಂಡ್ಯದಲ್ಲಿ ಪ್ರೀತಿ – ಬೆಂಗಳೂರಿಗೆ ಬಂದು ಪ್ರೇಯಸಿಯನ್ನು ಮಚ್ಚಿನಿಂದ ಕತ್ತರಿಸಿದ ಪ್ರೇಮಿ

    ಮಂಡ್ಯದಲ್ಲಿ ಪ್ರೀತಿ – ಬೆಂಗಳೂರಿಗೆ ಬಂದು ಪ್ರೇಯಸಿಯನ್ನು ಮಚ್ಚಿನಿಂದ ಕತ್ತರಿಸಿದ ಪ್ರೇಮಿ

    – ಐದು ಬಾರಿ ಕುತ್ತಿಗೆ, ತಲೆ, ಕಾಲು, ಹೊಟ್ಟೆ ಭಾಗಕ್ಕೆ ಹಲ್ಲೆ

    ಬೆಂಗಳೂರು: ಮದುವೆ ನಿಗದಿಯಾಗಿದ್ದಕ್ಕೆ ಕೋಪಗೊಂಡ ಯುವನೋರ್ವ ತಾನು ಪ್ರೀತಿಸಿದ ಹುಡುಗಿಗೆ ಐದು ಬಾರಿ ಮಚ್ಚಿನಿಂದ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದಲ್ಲಿ ನಡೆದಿದೆ.

    ಕೊಲೆಗೆ ಪ್ರಯತ್ನ ಮಾಡಿದ ಪಾಗಲ್ ಪ್ರೇಮಿಯನ್ನು ಗಿರೀಶ್ ಎಂದು ಗುರುತಿಸಲಾಗಿದೆ. ಈತ ತನ್ನ ಪ್ರೇಯಸಿ ನಿತ್ಯಶ್ರೀಯನ್ನು ಮಚ್ಚಿನಿಂದ ಕತ್ತರಿಸಿ ಸಾಯಿಸಲು ಪ್ರಯತ್ನಿಸಿದ್ದಾನೆ. ಐದು ಬಾರಿ ನಿತ್ಯಶ್ರೀ ಕುತ್ತಿಗೆ, ತಲೆ, ಕಾಲು, ಹೊಟ್ಟೆ ಭಾಗಕ್ಕೆ ಹಲ್ಲೆ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ನಿತ್ಯಶ್ರೀ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

    ಏನಿದು ಘಟನೆ?
    ಗಿರೀಶ್ ಮತ್ತು ನಿತ್ಯಶ್ರೀ ಮಂಡ್ಯದಲ್ಲಿ ಕಾಲೇಜು ವ್ಯಾಸಂಗ ಮಾಡುವ ವೇಳೆ ಪ್ರೀತಿ ಮಾಡುತ್ತಿದ್ದರು. ನಂತರ ಓದು ಮಗಿದ ಮೇಲೆ ನಿತ್ಯಶ್ರೀ ಮಂಡ್ಯದಿಂದ ಬೆಂಗಳೂರಿಗೆ ಶಿಫ್ಟ್ ಆಗಿದ್ದಳು. ಬೆಂಗಳೂರಿನ ಪಾಪರೆಡ್ಡಿ ಪಾಳ್ಯದಲ್ಲಿ ವಾಸವಿದ್ದ ನಿತ್ಯಶ್ರೀ, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಗಿರೀಶ್ ಖಾಸಗಿ ಆಸ್ಪತ್ರೆಯ ಸೆಕ್ಯೂರಿಟಿ ಸೂಪರ್ ವೈಸರ್ ಆಗಿದ್ದು, ಕಳೆದ ಕೆಲವು ತಿಂಗಳಿಂದ ಇಬ್ಬರ ನಡುವೆ ಬಿನ್ನಾಭಿಪ್ರಾಯ ಉಂಟಾಗಿತ್ತು.

    ಈ ಹಿಂದೆ ಇಬ್ಬರ ಪ್ರೀತಿಯ ಗಲಾಟೆ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಬಳಿಕ ರಾಜಿ ಮಾಡಿಕೊಂಡು ಸುಮ್ಮನಾಗಿರುವುದಾಗಿ ಇಬ್ಬರು ಹೇಳಿದ್ದರು. ಆದರೆ ಈ ನಡುವೆ ಮತ್ತೆ ಗಿರೀಶ್ ನಿತ್ಯಶ್ರೀಗೆ ಕಾಟಕೊಡುತ್ತಿದ್ದ. ಈ ಕಾರಣದಿಂದಲೇ ನಿತ್ಯಶ್ರೀಗೆ ಆಕೆಯ ಮನೆಯವರು ಮುಂದಿನ ಜೂನ್ ತಿಂಗಳಲ್ಲಿ ಮದುವೆ ಮಾಡಲು ತಯಾರಿ ನಡೆಸಿದ್ದರು. ಇದನ್ನು ತಿಳಿದ ಗಿರೀಶ್ ಇಂದು ಯುವತಿ ತಾನು ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಗೆ ಕೆಲಸಕ್ಕೆ ರಾಜೀನಾಮೆ ನೀಡಲು ತೆರಳಿದ್ದ ವೇಳೆ ಮಂಡ್ಯದಿಂದ ಬಂದು ಮಚ್ಚಿನಿಂದ ಬರ್ಬರವಾಗಿ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ.

    ಇದೇ ವೇಳೆ ಪೊಲೀಸರಿಗೆ ಇನ್ನೊಂದು ಅನುಮಾನ ಕಾಡುತ್ತಿದ್ದು, ಗಿರೀಶ್ ನಿತ್ಯಶ್ರೀ ಮೇಲೆ ಹಲ್ಲೇ ಮಾಡಿ ಆತ ಏನಾದರೂ ಮಾಡಿಕೊಂಡಿರಬಹುದು ಎಂದು ಶಂಕಿಸಿದ್ದಾರೆ. ಈ ಅನುಮಾದ ಬೆನ್ನಲ್ಲೇ ಸೈಕೋ ಪ್ರೇಮಿಯ ಹುಡುಕಾಟದಲ್ಲಿ ಪೊಲೀಸರು ತೊಡಿಗಿಕೊಂಡಿದ್ದಾರೆ. ಸದ್ಯ ಈ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸರಿಂದ ತನಿಖೆ ಚುರುಕುಗೊಂಡಿದೆ.

  • ಅಪ್ರಾಪ್ತೆ ಪ್ರೇಯಸಿಯ ನಿರ್ಧಾರದಿಂದ ಸಿಟ್ಟಾಗಿ ಕೊಂದೇ ಬಿಟ್ಟ

    ಅಪ್ರಾಪ್ತೆ ಪ್ರೇಯಸಿಯ ನಿರ್ಧಾರದಿಂದ ಸಿಟ್ಟಾಗಿ ಕೊಂದೇ ಬಿಟ್ಟ

    – ವಾಟರ್ ಟ್ಯಾಂಕ್ ನಿಯಂತ್ರಣ ಕೊಠಡಿಯಲ್ಲಿ ಕೊಲೆ
    – ಜಿಲ್ಲಾಸ್ಪತ್ರೆಗೆ ಹೋಗಿದ್ದಾಗ ಹುಡುಗಿ ಮಿಸ್ಸಿಂಗ್
    – ಗದಗ್ ಮೂಲದ ಆರೋಪಿ

    ಪಣಜಿ: ಮಾಜಿ ಪ್ರಿಯಕರನೊಬ್ಬ ಅಪ್ರಾಪ್ತೆ ಗೆಳತಿಯ ನಿರ್ಧಾರದಿಂದ ಕೋಪಗೊಂಡು ಆಕೆಯನ್ನು ಕೊಲೆ ಮಾಡಿರುವ ಘಟನೆ ಗೋವಾದಲ್ಲಿ ನಡೆದಿದೆ.

    ಈ ಘಟನೆ ಪೋಂಡಾ ಪಟ್ಟಣದ ಸಮೀಪದ ಪ್ರದೇಶದಲ್ಲಿ ನಡೆದಿದೆ. ಆರೋಪಿಯನ್ನು ಮನ್ಸೂರ್ ಹುಸೇನ್ ಶೇಖ್ (22) ಎಂದು ಗುರುತಿಸಲಾಗಿದೆ. ಈತ ತನ್ನ 17 ವರ್ಷದ ಪ್ರಿಯತಮೆಯನ್ನು ಕೊಲೆ ಮಾಡಿದ್ದಾನೆ.

    ಏನಿದು ಪ್ರಕರಣ?
    ಮೃತ ಹುಡುಗಿ ಗೋವಾದ ಉಸ್ಗಾವೊ ನಿವಾಸಿಯಾಗಿದ್ದು. ಏಪ್ರಿಲ್ 13 ರಂದು ಹುಡುಗಿ ಪೋಂಡಾದ ಉಪ ಜಿಲ್ಲಾಸ್ಪತ್ರೆಗೆ ಹೋಗಲು ಮನೆಯಿಂದ ಹೊರಟಿದ್ದಾಳೆ. ಆದರೆ ಆಕೆ ಮತ್ತೆ ಹಿಂದಿರುಗಿ ಮನೆಗೆ ವಾಪಸ್ ಬಂದಿಲ್ಲ. ಆಕೆಯ ಕುಟುಂಬದವರು ಆತಂಕಗೊಂಡು ಎಲ್ಲಾ ಕಡೆ ಹುಡುಕಾಡಿದ್ದಾರೆ. ಆದರೆ ಎಲ್ಲೂ ಹುಡುಗಿ ಪತ್ತೆಯಾಗಿಲ್ಲ. ಕೊನೆಗೆ ಪೋಷಕರು ಪೋಂಡಾ ಪೊಲೀಸ್ ಠಾಣೆಗೆ ಹೋಗಿ ನಾಪತ್ತೆ ದೂರನ್ನು ದಾಖಲಿಸಿದ್ದಾರೆ.

    ಇತ್ತ ಗೋವಾದ ಬೋರಿಮ್ ಪ್ರದೇಶದಲ್ಲಿ ಗೋಡಂಬಿ ಕೃಷಿಕರು ತೋಟದಲ್ಲಿ ಬಿದ್ದ ಗೋಡಂಬಿಗಳನ್ನು ಸಂಗ್ರಹಿಸುವ ಕೆಲಸವನ್ನು ಮಾಡುತ್ತಿದ್ದರು. ಆಗ ಕೃಷಿಕರಿಗೆ ಏನೋ ದುರ್ವಾಸನೆ ಬಂದಿದೆ. ನಂತರ ವಾಟರ್ ಟ್ಯಾಂಕ್‍ನ ನಿಯಂತ್ರಣ ಕೊಠಡಿ ದುರ್ವಾಸನೆ ಬರುತ್ತಿರುವುದು ತಿಳಿದುಬಂದಿದೆ. ತಕ್ಷಣ ಅವರು ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ.

    ಮಾಹಿತಿ ತಿಳಿದು ತಕ್ಷಣ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದು ವಾಟರ್ ಟ್ಯಾಂಕ್‍ನ ನಿಯಂತ್ರಣ ಕೊಠಡಿಯಲ್ಲಿದ್ದ ಮೃತದೇಹವನ್ನು ವಶಪಡಿಸಿಕೊಂಡಿದ್ದಾರೆ. ಮೃತದೇಹ ಅಪ್ರಾಪ್ತೆಯದ್ದಾಗಿದ್ದು, ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಹುಡುಗಿಯಾಗಿರಬಹದು ಎಂದು ಪೊಲೀಸರು ಶಂಕಿಸಿದ್ದಾರೆ.

    ಈ ಬಗ್ಗೆ ತನಿಖೆ ನಡೆಸಲು ಪೊಲೀಸ್ ತಂಡವನ್ನು ರಚಿಸಲಾಗಿತ್ತು. ತನಿಖೆ ವೇಳೆ ಆಕೆಯ ಮಾಜಿ ಗೆಳೆಯ ಕೊಲೆ ಮಾಡಿದ್ದಾನೆ ಎಂದು ತನಿಖಾ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಅಲ್ಲದೇ ನಾಪತ್ತೆಯಾಗಿದ್ದ 17 ವರ್ಷದ ಹುಡುಗಿ ಎಂದು ತಿಳಿದುಬಂದಿದೆ. ಆರೋಪಿಯನ್ನು ಕರ್ನಾಟಕದ ಗದಗ ಜಿಲ್ಲೆಯ ಮನ್ಸೂರ್ ಹುಸೇನ್ ಶೇಖ್ ಎಂದು ಗುರುತಿಸಲಾಗಿದೆ.

    ಏಪ್ರಿಲ್ 13 ರಂದು ಮೃತ ಹುಡುಗಿ ಮತ್ತು ಆರೋಪಿ ಶೇಖ್ ಬೋರಿಮ್‍ಗೆ ಹೋಗಿದ್ದರು. ಆರೋಪಿ ಮತ್ತು ಮೃತ ಹುಡುಗಿ ಇಬ್ಬರು ಈ ಹಿಂದೆ ಪ್ರೀತಿಸುತ್ತಿದ್ದರು. ಮಾತನಾಡಬೇಕು ಎಂದು ಕರೆದುಕೊಂಡು ಹೋಗಿದ್ದ. ಆದರೆ ಮೃತ ಹುಡುಗಿ ಅವನಿಂದ ದೂರವಾಗಿದ್ದಳು. ಈ ನಿರ್ಧಾರದಿಂದ ಆರೋಪಿ ಕೋಪಗೊಂಡಿದ್ದನು. ಅಲ್ಲದೇ ಪ್ರೇಯಸಿಯ ನಿರ್ಧಾರವನ್ನು ನಿರಾಕರಿಸಿ, ಆಕೆಯ ಮನವೊಲಿಸುವ ಪ್ರಯತ್ನ ಮಾಡಿದ್ದಾನೆ. ಆದರೆ ಮೃತ ಹುಡುಗಿ ಮಾತ್ರ ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಇದರಿಂದ ಕೋಪಗೊಂಡು ಆರೋಪಿ ಶೇಖ್ ವಾಟರ್ ಟ್ಯಾಂಕ್‍ನ ನಿಯಂತ್ರಣ ಕೊಠಡಿಗೆ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ. ಆರೋಪಿ ಗೋವಾದ ಹವೇಲಿ-ಕರ್ಟಿಯಲ್ಲಿ ವಾಸಿಸುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

  • ಪ್ರೇಯಸಿ ಮನೆಗೆ ರಹಸ್ಯವಾಗಿ ಹೋದ 4 ಮಕ್ಕಳ ತಂದೆ – ಜೋಡಿ ಕೊಲೆ

    ಪ್ರೇಯಸಿ ಮನೆಗೆ ರಹಸ್ಯವಾಗಿ ಹೋದ 4 ಮಕ್ಕಳ ತಂದೆ – ಜೋಡಿ ಕೊಲೆ

    – ಮದ್ವೆಯಾಗಿ ನಾಲ್ಕು ಮಕ್ಕಳಿದ್ರೂ ಅಪ್ರಾಪ್ತೆ ಹಿಂದೆ ಬಿದ್ದ
    – ಕಾಪಾಡಲು ಬಂದ 17ರ ಅಪ್ರಾಪ್ತೆಯೂ ಸಾವು

    ಲಕ್ನೋ: ಕೊರೊನಾ ವೈರಸ್‍ಗೆ ದೇಶವೇ ಲಾಕ್‍ಡೌನ್ ಆಗಿ 11 ದಿನಗಳ ಕಳೆದಿದೆ. ಈ ಮಧ್ಯೆ ಉತ್ತರ ಪ್ರದೇಶದಲ್ಲಿ ಜೋಡಿ ಕೊಲೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

    ಮೃತರನ್ನು ಅಬ್ದುಲ್ ಕರೀಮ್ (26) ಮತ್ತು 17 ವರ್ಷದ ಹುಡುಗಿ ಎಂದು ಗುರುತಿಸಲಾಗಿದೆ. ಕರೀಮ್ ತನ್ನ ಅಪ್ರಾಪ್ತೆ ಪ್ರಿಯತಮೆಯನ್ನು ರಾತ್ರಿ ರಹಸ್ಯವಾಗಿ ಭೇಟಿ ಮಾಡಲು ಹೋದಾಗ ಸಿಕ್ಕಿಬಿದ್ದಿದ್ದಾನೆ. ಈ ವೇಳೆ ಇಬ್ಬರನ್ನು ಗೆಳತಿಯ ಕುಟುಂಬದವರು ಥಳಿಸಿ ಕೊಲೆ ಮಾಡಿದ್ದಾರೆ.

    ಲಕ್ನೋದ ಸಾದತ್‍ಗಂಜ್ ಪ್ರದೇಶದ ನೌಬಸ್ತಾ ಕಾಲೋನಿಯಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ. ಮೃತ ಕರೀಮ್ ತನ್ನ ಅಪ್ರಾಪ್ತೆ ಗೆಳತಿಯನ್ನು ಭೇಟಿ ಮಾಡಲು ಶನಿವಾರ ರಾತ್ರಿ ಆಕೆಯ ಮನೆಗೆ ರಹಸ್ಯವಾಗಿ ಹೋಗಿದ್ದಾನೆ. ಆದರೆ ಮನೆಯಲ್ಲಿ ಕರೀಮ್ ಇರುವ ಬಗ್ಗೆ ಹುಡುಗಿಯ ಕುಟುಂಬವರಿಗೆ ಗೊತ್ತಾಗಿದೆ.

    ಆಗ ಹುಡುಗಿಯ ತಂದೆ ಉಸ್ಮಾನ್, ಸಹೋದರ ಡ್ಯಾನಿಶ್, ಚಿಕ್ಕಪ್ಪ ಸುಲೈಮಾನ್ ಮತ್ತು ಚಿಕ್ಕಪ್ಪನ ಮಗ ರಾಣು ನಾಲ್ವರು ಕರೀಮ್‍ನನ್ನು ಹಿಡಿದು ಥಳಿಸಿದ್ದಾರೆ. ಈ ವೇಳೆ ಕರೀಮ್‍ನನ್ನು ಕಾಪಾಡಲು 17 ವರ್ಷದ ಗೆಳತಿ ಅಡ್ಡ ಬಂದಿದ್ದಾಳೆ. ಆಗ ಕುಟುಂಬದವರು ಆಕೆಗೂ ಥಳಿಸಿದ್ದು, ಕೊನೆಗೆ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಮೃತ ಕರೀಮ್‍ಗೆ ಈಗಾಗಲೇ ಮದುವೆಯಾಗಿ ನಾಲ್ಕು ಮಕ್ಕಳಿದ್ದರು. ಆದರೂ ಅಪ್ರಾಪ್ತ ಹುಡುಗಿಯನ್ನು ಪ್ರೀತಿಸುತ್ತಿದ್ದನು. ಈ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಡುಗಿಯ ತಂದೆ, ಸಹೋದರ, ಚಿಕ್ಕಪ್ಪ ಮತ್ತು ಚಿಕ್ಕಪ್ಪನ ಮಗ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ವಿಕಾಸ್ ಚಂದ್ರ ತ್ರಿಪಾಠಿ ತಿಳಿಸಿದ್ದಾರೆ.

    ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತ ಇಬ್ಬರು ಒಂದೇ ಪ್ರದೇಶಕ್ಕೆ ಸೇರಿದವರಾಗಿದ್ದು, ಎರಡು ಕುಟುಂಬದವರಿಗೂ ಪರಿಚಯವಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

  • ಪ್ರೇಯಸಿ ಜೊತೆ ಇಟಲಿಗೆ ಹೋಗಿದ್ದ ಪತಿಗೆ ಕೊರೊನಾ – ಈಗ ಪತ್ನಿಗೆ ಗೃಹಬಂಧನ

    ಪ್ರೇಯಸಿ ಜೊತೆ ಇಟಲಿಗೆ ಹೋಗಿದ್ದ ಪತಿಗೆ ಕೊರೊನಾ – ಈಗ ಪತ್ನಿಗೆ ಗೃಹಬಂಧನ

    – ಮರಳಿ ಮನೆಗೆ ಬಂದಾಗ ಸೋಂಕು ಪತ್ತೆ
    – ಪತ್ನಿಗೆ ಬಿಸಿನೆಸ್ ಟ್ರಿಪ್ ಎಂದಿದ್ದ ಪತಿ

    ಲಂಡನ್: ತನ್ನ ಪತ್ನಿಗೆ ಸುಳ್ಳು ಹೇಳಿ ಪ್ರೇಯಸಿ ಜೊತೆ ಎಂಜಾಯ್ ಮಾಡಲು ಇಟಲಿಗೆ ಹಾರಿದ ಪತಿಯೊಬ್ಬ ಈಗ ಕೊರೊನಾ ವೈರಸ್‍ನಿಂದ ಬಳಲುತ್ತಿದ್ದಾನೆ.

    ವ್ಯಕ್ತಿ ತನ್ನ ಪತ್ನಿಗೆ ಬಿಜಿನೆಸ್ ಟ್ರಿಪ್ ಇದೆ ಎಂದು ಸುಳ್ಳು ಹೇಳಿ ಪ್ರೇಯಸಿ ಜೊತೆ ಎಂಜಾಯ್ ಮಾಡಲು ಇಟಲಿಗೆ ಹೋಗಿದ್ದನು. ಇಟಲಿಯಿಂದ ವಾಪಸ್ ಬರುತ್ತಿದ್ದಂತೆ ವ್ಯಕ್ತಿಯ ದೇಹದಲ್ಲಿ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿದ್ದವು. ತಕ್ಷಣ ಆತ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿದಾಗ ಆತನಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು.

    ಉತ್ತರ ಇಂಗ್ಲೆಂಡ್‍ನಲ್ಲಿ ವ್ಯಕ್ತಿಯ ಪತ್ನಿ ಗೃಹ ಬಂಧನದಲ್ಲಿ ಇದ್ದಾಳೆ. ಅಲ್ಲದೆ ಪತಿಗೆ ಹೇಗೆ ಸೋಂಕು ತಗುಲಿದೆ ಎಂಬುದು ಪತ್ನಿಗೆ ಇದುವರೆಗೂ ಗೊತ್ತಾಗಲಿಲ್ಲ. ಸದ್ಯ ವ್ಯಕ್ತಿ ಉತ್ತರ ಇಂಗ್ಲೆಂಡ್‍ನ ವೈದ್ಯರ ಬಳಿ ತನಗೆ ಈ ವೈರಸ್ ಹೇಗೆ ತಗುಲಿದೆ ಎಂಬುದನ್ನು ವಿವರಿಸಿದ್ದಾನೆ.

    ತನ್ನ ಪತಿ ಇಟಲಿಗೆ ಹೋದ ವಿಷಯ ಪತ್ನಿಗೆ ಗೊತ್ತೇ ಆಗಲಿಲ್ಲ. ಪತಿ ಇಟಲಿಯಿಂದ ಬಂದಾಗ ಆತನ ದೇಹದಲ್ಲಿ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿದ್ದವು. ಬಳಿಕ ಸ್ವತಃ ಆತನೇ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿದಾಗ ಕೊರೊನಾ ಇರುವುದು ದೃಢಪಟ್ಟಿದೆ.

    ವೈದ್ಯರು ಪರೀಕ್ಷೆ ನಡೆಸಿದ ನಂತರ ವ್ಯಕ್ತಿ ಮಹಿಳೆ ಜೊತೆ ಅಕ್ರಮ ಸಂಬಂಧ ಇರುವುದನ್ನು ಬಹಿರಂಗಪಡಿಸಿದ್ದನು. ಆದರೆ ಆಕೆಯ ಹೆಸರನ್ನು ಹೇಳಲು ನಿರಾಕರಿಸಿದ್ದನು. ಇಟಲಿಯಲ್ಲಿ ನಡೆದ ಪ್ರತಿ ವಿಷಯವನ್ನು ವ್ಯಕ್ತಿ ವೈದ್ಯರ ಬಳಿ ಹೇಳಿದ್ದಾನೆ. ಅಲ್ಲದೆ ಇದು ಯಾವುದು ತನ್ನ ಪತ್ನಿಗೆ ಗೊತ್ತಿಲ್ಲ ಎಂಬುದನ್ನು ಸಹ ಹೇಳಿದ್ದಾನೆ.

    ಈ ಪ್ರಕರಣ ಇಡೀ ವಿಶ್ವದಲ್ಲೇ ವೈರಲ್ ಆಗಿದೆ. ಅಲ್ಲದೆ ವ್ಯಕ್ತಿಯ ಪರಿಸ್ಥಿತಿ ತಮಾಷೆಯಾಗಿದ್ದರು, ಅದರ ಗಂಭೀರತೆ ಕಡಿಮೆ ಇಲ್ಲ. ಕೊರೊನಾದಿಂದ ವ್ಯಕ್ತಿಯ ಅಕ್ರಮ ಸಂಬಂಧ ಬಯಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.