Tag: ಪ್ರಿನ್ಸ್

  • ಚಂದ್ರಶೇಖರ್ ಗುರೂಜಿ ಅಂತಿಮ ದರ್ಶನ ಪಡೆದ ಮುದ್ದಿನ ಶ್ವಾನ

    ಚಂದ್ರಶೇಖರ್ ಗುರೂಜಿ ಅಂತಿಮ ದರ್ಶನ ಪಡೆದ ಮುದ್ದಿನ ಶ್ವಾನ

    ಹುಬ್ಬಳ್ಳಿ: ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿಯ ಅಂತಿಮ ಸಂಸ್ಕಾರವು ಹುಬ್ಬಳ್ಳಿ ಸುಳ್ಳ ಗ್ರಾಮದ ರಸ್ತೆಯಲ್ಲಿ ಇರುವ ಗುರೂಜಿ ಜಮೀನಿನಲ್ಲಿಯೇ ನಡೆಯುತ್ತಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

    ಸಾರ್ವಜನಿಕರು, ಕುಟುಂಬಸ್ಥರು ಸೇರಿದಂತೆ ಎಲ್ಲರೂ ಗುರೂಜಿ ಅಂತಿಮ ದರ್ಶನ ಪಡೆದರು. ಇದೇ ವೇಳೆ ಗುರೂಜಿ ಮುದ್ದಿನ ಶ್ವಾನ ಪ್ರಿನ್ಸ್ ಕೂಡ ಯಜಮಾನನ ಅಂತಿಮ ದರ್ಶನ ಪಡೆಯಿತು. ಶವಪೆಟ್ಟಿಗೆ ಮೇಲೆ ಕುಳಿತು ಪ್ರಿನ್ಸ್ ದುಃಖ ಹೊರಹಾಕಿತ್ತು. ಅಲ್ಲದೆ ಗುರೂಜಿ ಬಿಟ್ಟು ಹೋಗಲಾರೆ ಎಂದು ಶ್ವಾನ ಹಠ ಮಾಡಿರುವುದು ನೆರೆದವರ ಕಣ್ಣಂಚಲ್ಲಿ ನೀರು ತರಿಸಿತು.

    58 ವರ್ಷದ ಚಂದ್ರಶೇಖರ್ ಗುರೂಜಿಯನ್ನು ಭೇಟಿ ಮಾಡಲು ಬಂದ ಅವರ ಮಾಜಿ ಆಪ್ತ ಸಹಾಯಕರು ಈ ಕೃತ್ಯ ಎಸಗಿದ್ದಾರೆ. ಮಧ್ಯಾಹ್ನ 12.23ರ ಸಮಯಲ್ಲಿ ಹೋಟೆಲ್ ರೂಂನಿಂದ ರಿಸೆಪ್ಶನ್‍ಗೆ ಬಂದ ಚಂದ್ರಶೇಖರ ಗುರೂಜಿ ಪಾದಕ್ಕೆ ಒಬ್ಬ ನಮಸ್ಕರಿಸುವ ಹೊತ್ತಲ್ಲೇ ಅಲ್ಲೇ ನಿಂತಿದ್ದ ಇನ್ನೊಬ್ಬ ಗುರೂಜಿ ಎದೆಗೆ ಚಾಕು ಹಾಕಿದ್ದ. ನಂತರ ಇಬ್ಬರೂ ಸೇರಿಕೊಂಡು ಕೇವಲ 40 ಸೆಕೆಂಡ್‍ಗಳ ಅಂತರದಲ್ಲಿ 60ಕ್ಕೂ ಹೆಚ್ಚು ಬಾರಿ ಚುಚ್ಚಿ, ಕತ್ತು ಕೊಯ್ದು ಭೀಕರವಾಗಿ ಕೊಂದಿದ್ದಾರೆ. ಇದನ್ನೂ ಓದಿ: ನಾಳೆ ಪಂಜಾಬ್ ಸಿಎಂ 2ನೇ ಮದುವೆ – ಮತ್ತೆ ಹಸೆಮಣೆ ಏರಲಿದ್ದಾರೆ ಭಗವಂತ್ ಮಾನ್

    ರಕ್ತದ ಮಡುವಿನಲ್ಲಿ ವಿಲವಿಲ ಒದ್ದಾಡಿದ ಚಂದ್ರಶೇಖರ ಗುರೂಜಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹತ್ಯೆ ಬೆನ್ನಲ್ಲೇ ಇಬ್ಬರು ಹಂತಕರು ಅಲ್ಲಿಂದ ಹೊರಗೆ ಓಡಿದ್ದಾರೆ. ಈ ಎಲ್ಲಾ ಭೀಕರ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು, ಕಾರಲ್ಲಿ ಮುಂಬೈಗೆ ಎಸ್ಕೇಪ್ ಆಗುತ್ತಿದ್ದ ಇಬ್ಬರು ಹಂತಕರಾz ಧಾರವಾಡದ ಮಹಂತೇಶ್ ಶಿರೂರ ಮತ್ತು ಕಲಘಟಗಿಯ ಮಂಜುನಾಥ್‍ನನ್ನು ರಾಮದುರ್ಗ ಬಳಿ ಸಿನಿಮೀಯ ರೀತಿಯಲ್ಲಿ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

    ಮೊಬೈಲ್ ಲೋಕೇಷನ್ ಟವರ್ ಆಧರಿಸಿ ಬೆನ್ನಟ್ಟಿದ ಪೊಲೀಸರು ಆರೋಪಿಗಳು ಎಸ್ಕೇಪ್ ಆಗದಂತೆ ಸುತ್ತುವರೆದಿದ್ದಾರೆ. ರಸ್ತೆಗೆ ಅಡ್ಡಲಾಗಿ ಜೆಸಿಬಿ ನಿಲ್ಲಿಸಿ ಕಾರನ್ನು ತಡೆದ್ರು. ಆರೋಪಿಗಳು ಓಡಲು ಪ್ರಯತ್ನಿಸಿದಾಗ ರಾಮದುರ್ಗ ಡಿವೈಎಸ್‍ಪಿ ಶೂಟೌಟ್ ಮಾಡೋ ಎಚ್ಚರಿಕೆ ನೀಡಿ ಅರೆಸ್ಟ್ ಮಾಡಿದ್ರು.

    Live Tv
    [brid partner=56869869 player=32851 video=960834 autoplay=true]

  • ಪ್ರಿನ್ಸ್ ಸಾವನ್ನು ಮರೆಸುತ್ತಿರುವ ಜೂ. ಪ್ರಿನ್ಸ್

    ಪ್ರಿನ್ಸ್ ಸಾವನ್ನು ಮರೆಸುತ್ತಿರುವ ಜೂ. ಪ್ರಿನ್ಸ್

    ಮೈಸೂರು: ಬಂಡೀಪುರದ ಪ್ರಿನ್ಸ್ ಹುಲಿ ಸಾವನ್ನು ಮೈಸೂರಿನ ಜ್ಯೂ. ಪ್ರಿನ್ಸ್ ಮರೆಸುತ್ತಿದ್ದು, ನಾಗರಹೊಳೆಯಲ್ಲಿ ಪ್ರವಾಸಿಗರಿಗೆ ಜ್ಯೂ. ಪ್ರಿನ್ಸ್ ಫುಲ್ ಮನರಂಜನೆ ನೀಡುತ್ತಿದ್ದಾನೆ.

    ಬಂಡೀಪುರದಲ್ಲಿ 13 ವರ್ಷದಿಂದ ಪ್ರಿನ್ಸ್ ಹವಾ ಜೋರಾಗಿತ್ತು. ಆದರೆ ಇದೀಗಾ ಜ್ಯೂ. ಪ್ರಿನ್ಸ್ ಹವಾ ಶುರುವಾಗಿದೆ. ಕಳೆದ ಒಂದೂವರೆ ವರ್ಷದಿಂದ ಜ್ಯೂ. ಪ್ರಿನ್ಸ್ ನಾಗರಹೊಳೆಯಲ್ಲಿ ಫೋಟೋಗೆ ಸಖತ್ ಪೋಸ್ ಕೊಡುತ್ತಿದ್ದಾನೆ.

    ಪ್ರಾಣಿ ಪ್ರಿಯರಿಗೆ ಇಷ್ಟವಾಗಿದ್ದು, ಜ್ಯೂ. ಪ್ರಿನ್ಸ್ ಕಾಣಲೆಂದೆ ನಿತ್ಯವೂ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ನಾಗರಹೊಳೆಗೆ ಆಗಮಿಸುತ್ತಿದ್ದಾರೆ. ಜ್ಯೂ. ಪ್ರಿನ್ಸ್ ನಿಂದ ನಾಗರಹೊಳೆಯ ಸಫಾರಿಗೆ ಹೊಸ ಕಳೆ ಬಂದಿದ್ದು, ಬಂಡೀಪುರದಿಂದ ನಾಗರಹೊಳೆಯತ್ತ ಪ್ರವಾಸಿಗರ ತಮ್ಮ ಚಿತ್ತ ಹರಿಸಿದ್ದಾರೆ.

    ಪ್ರಿನ್ಸ್ ನಿಗೂಢವಾಗಿ ಬಂಡೀಪುರ ಅಭಯಾರಣ್ಯದಲ್ಲಿ ಮೃತಪಟ್ಟಿತ್ತು. ಮೊದಲು ವಿಷಾಹಾರದಿಂದ ಹುಲಿ ಸಾವನ್ನಪ್ಪಿದ್ದು ಎಂದು ಅರಣ್ಯ ಇಲಾಖೆ ತಿಳಿಸಿತ್ತು. ಬಳಿಕ ಪ್ರಿನ್ಸ್ ಹುಲಿ ಸಿಡಿಮದ್ದಿನಿಂದ ಮೃತಪಟ್ಟಿತ್ತು ಎನ್ನುವ ವಿಚಾರ ತಿಳಿದುಬಂದಿತ್ತು. ಕಾಡಿನ ಸುತ್ತಮುತ್ತಲಿನ ಜನ ಸಾಮಾನ್ಯವಾಗಿ ಹಂದಿ ಹಿಡಿಯಲು ಕೋಳಿಯ ಕೊರಳಿಗೆ ಸಿಡಿಮದ್ದು ಕಟ್ಟಿರುತ್ತಾರೆ. ಈ ಕೋಳಿಯನ್ನು ತಿನ್ನಲು ಹೋದಾಗ ಪ್ರಿನ್ಸ್ ಬಾಯಲ್ಲಿ ಸಿಡಿಮದ್ದು ಸ್ಫೋಟವಾಗಿ ಸ್ಥಳದಲ್ಲೇ ಮೃತಪಟ್ಟಿತ್ತು.