Tag: ಪ್ರಾಚೀನ ಕಲಾಕೃತಿ

  • ಮೋದಿ ಭೇಟಿ ಬೆನ್ನಲ್ಲೇ 297 ಪುರಾತನ ವಸ್ತುಗಳನ್ನು ಭಾರತಕ್ಕೆ ಹಸ್ತಾಂತರಿಸಿದ ಅಮೆರಿಕ

    ಮೋದಿ ಭೇಟಿ ಬೆನ್ನಲ್ಲೇ 297 ಪುರಾತನ ವಸ್ತುಗಳನ್ನು ಭಾರತಕ್ಕೆ ಹಸ್ತಾಂತರಿಸಿದ ಅಮೆರಿಕ

    – ಕಳ್ಳಸಾಗಣೆಯಾಗಿದ್ದ ಪ್ರಾಚೀನ ಕಲಾಕೃತಿಗಳನ್ನು ಮರಳಿ ನೀಡಿದ ಯುಕೆ ಸರ್ಕಾರ

    ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಅಮೆರಿಕ (America) ಭೇಟಿ ನೀಡಿರುವುದರಿಂದ ಭಾರತದ ಸಾಂಸ್ಕೃತಿಕ ಶ್ರೀಮಂತಿಕೆಯ ಕಳ್ಳಸಾಗಣೆ ವಿರುದ್ಧವೂ ಜಯ ಸಾಧಿಸಿದೆ. ಕಳ್ಳಸಾಗಣೆ ಮಾಡಲಾಗಿದ್ದ 297 ಪುರಾತನ ವಸ್ತುಗಳನ್ನು ಅಮೆರಿಕ ಸರ್ಕಾರ ಭಾರತಕ್ಕೆ (India) ಹಸ್ತಾಂತರಿಸಿದೆ.

    ಸಾಂಸ್ಕೃತಿಕ ಆಸ್ತಿಗಳ ಕಳ್ಳಸಾಗಣೆ ದೀರ್ಘಕಾಲದ ಸಮಸ್ಯೆಯಾಗಿದ್ದು, ಇದು ಇತಿಹಾಸದುದ್ದಕ್ಕೂ ಅನೇಕ ಸಂಸ್ಕೃತಿಗಳು ಮತ್ತು ದೇಶಗಳ ಮೇಲೆ ಪರಿಣಾಮ ಬೀರಿದೆ. ಇದರಿಂದಾಗಿ ಭಾರತಕ್ಕೆ ಹೊಡೆತ ಬಿದ್ದಿದೆ. ಇದನ್ನೂ ಓದಿ: ತಿರುಪತಿ ದೇವಾಲಯ ಪವಿತ್ರೋತ್ಸವ – ಹಾಲು, ಮೊಸರು, ತುಪ್ಪ, ಗೋಮೂತ್ರ, ಸಗಣಿ ಬಳಸಿ ದೇವಸ್ಥಾನ ಶುದ್ಧೀಕರಣ

    ‘ಸಾಂಸ್ಕೃತಿಕ ಸಂಪರ್ಕವನ್ನು ಆಳಗೊಳಿಸುವುದು ಮತ್ತು ಸಾಂಸ್ಕೃತಿಕ ಆಸ್ತಿಗಳ ಅಕ್ರಮ ಕಳ್ಳಸಾಗಣೆ ವಿರುದ್ಧದ ಹೋರಾಟವನ್ನು ಬಲಪಡಿಸುವುದಕ್ಕಾಗಿ 297 ಅಮೂಲ್ಯ ಪ್ರಾಚೀನ ವಸ್ತುಗಳನ್ನು ಭಾರತಕ್ಕೆ ಹಿಂದಿರುಗಿಸಿದ್ದಕ್ಕಾಗಿ ನಾನು ಅಧ್ಯಕ್ಷ ಜೋ ಬೈಡನ್ (Joe Biden) ಮತ್ತು ಯುಎಸ್ (US) ಸರ್ಕಾರಕ್ಕೆ ಕೃತಜ್ಞನಾಗಿದ್ದೇನೆ’ ಎಂದು ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಮಹಿಳೆಯ ಬರ್ಬರ ಹತ್ಯೆ- ಪಶ್ಚಿಮ ಬಂಗಾಳದಲ್ಲಿ ಹಂತಕ ತಲೆಮರೆಸಿಕೊಂಡಿರೋ ಶಂಕೆ

     

    2014 ರಿಂದ ಭಾರತವು ಮರಳಿ ಪಡೆದ ಒಟ್ಟು ಪ್ರಾಚೀನ ವಸ್ತುಗಳ ಸಂಖ್ಯೆ 640 ಕ್ಕೆ ಏರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯುಎಸ್‌ನಿಂದ 578 ಪುರಾತನ ವಸ್ತುಗಳು ಭಾರತಕ್ಕೆ ಮರಳಿವೆ. ಇದನ್ನೂ ಓದಿ: ಮಠ, ದೇವಾಲಯಗಳನ್ನ ಮುಜರಾಯಿ ಇಲಾಖೆಯಿಂದ ಮುಕ್ತಗೊಳಿಸಬೇಕು: ಮಂತ್ರಾಲಯ ಶ್ರೀ ಒತ್ತಾಯ

    ಭಾರತಕ್ಕೆ ಹಸ್ತಾಂತರಿಸಲಾದ ಕೆಲವು ಗಮನಾರ್ಹ ಪ್ರಾಚೀನ ವಸ್ತುಗಳಲ್ಲಿ ಕ್ರಿ.ಶ 10-11 ನೇ ಶತಮಾನಕ್ಕೆ ಸೇರಿದ ಮಧ್ಯ ಭಾರತದ ಮರಳುಗಲ್ಲಿನ ‘ಅಪ್ಸರೆ’, ಕ್ರಿ.ಶ 15-16 ನೇ ಶತಮಾನಕ್ಕೆ ಸೇರಿದ ಕಂಚಿನ ಜೈನ ತೀರ್ಥಂಕರ, ಕ್ರಿ.ಶ 3-4 ನೇ ಶತಮಾನಕ್ಕೆ ಸೇರಿದ ಪೂರ್ವ ಭಾರತದ ಟೆರಾಕೋಟಾ ಹೂದಾನಿ ಮತ್ತು ಕ್ರಿ.ಪೂ 1 ರಿಂದ 1 ನೇ ಶತಮಾನಕ್ಕೆ ಸೇರಿದ ದಕ್ಷಿಣ ಭಾರತದ ಕಲ್ಲಿನ ಶಿಲ್ಪ ಸೇರಿವೆ. ಇದನ್ನೂ ಓದಿ: ದಸರಾ ಆನೆ ಸೊಂಡಿಲು, ದಂತ ಹಿಡಿದು ರೀಲ್ಸ್ – ಅರಣ್ಯಾಧಿಕಾರಿಗಳ ದಿವ್ಯ ನಿರ್ಲಕ್ಷ್ಯ

    ಭಾರತಕ್ಕೆ ಹಿಂತಿರುಗಿಸಲಾದ ಕೆಲವು ಪುರಾತನ ವಸ್ತುಗಳಲ್ಲಿ 17-18 ನೇ ಶತಮಾನಕ್ಕೆ ಸೇರಿದ ದಕ್ಷಿಣ ಭಾರತದ ಕಂಚಿನ ಗಣೇಶ, ಕ್ರಿ.ಶ 15-16 ನೇ ಶತಮಾನದ ಉತ್ತರ ಭಾರತದ ಮರಳುಗಲ್ಲಿನ ಕೆತ್ತಲಾದ ನಿಂತಿರುವ ಬುದ್ಧ, ಕ್ರಿ.ಶ 17-18 ನೇ ಶತಮಾನಕ್ಕೆ ಸೇರಿದ ಪೂರ್ವ ಭಾರತದ ಕಂಚಿನ ವಿಷ್ಣು ಇತರ ಪ್ರಮುಖ ವಸ್ತುಗಳಲ್ಲಿ ಸೇರಿವೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಭೀಕರ ಅಪಘಾತ – ಮರಕ್ಕೆ ಕಾರು ಡಿಕ್ಕಿ ಹೊಡೆದು ಯುವಕ ಸಾವು

    2021 ರಲ್ಲಿ ಮೋದಿ ಅಮೆರಿಕಾಗೆ ಭೇಟಿ ಕೊಟ್ಟಾಗ, 12 ನೇ ಶತಮಾನದ ಸುಂದರವಾದ ಕಂಚಿನ ನಟರಾಜ ಪ್ರತಿಮೆ ಸೇರಿ ಸುಮಾರು 157 ಪ್ರಾಚೀನ ವಸ್ತುಗಳನ್ನು ಭಾರತಕ್ಕೆ ಹಸ್ತಾಂತರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2023 ರಲ್ಲಿ ಅವರ ಯುಎಸ್ ಭೇಟಿಯ ಕೆಲ ದಿನಗಳ ನಂತರ, 105 ಪ್ರಾಚೀನ ವಸ್ತುಗಳನ್ನು ಭಾರತಕ್ಕೆ ಹಿಂದಿರುಗಿಸಿದೆ. ಆಸ್ಟ್ರೇಲಿಯಾದಿಂದ 40, ಯುಕೆಯಿಂದ 16 ಕಲಾಕೃತಿಗಳನ್ನು ಮರಳಿ ಪಡೆಯಲಾಗಿದೆ. 2004 ಮತ್ತು 2013 ರ ಅಂತರದಲ್ಲಿ ಕೇವಲ ಒಂದು ಕಲಾಕೃತಿಯನ್ನಷ್ಟೇ ಭಾರತಕ್ಕೆ ಮರಳಿ ತರಲಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಬೆಂಗಳೂರು| ಉತ್ತರ ಭಾರತ ಮೂಲದ ಯುವಕನ ಮೇಲೆ ಆ್ಯಸಿಡ್ ದಾಳಿ

  • ಯುಪಿಯಲ್ಲಿ ಕಾಣೆಯಾಗಿದ್ದ ಯೋಗಿನಿ ವಿಗ್ರಹ ಯುಕೆಯಲ್ಲಿ ಪತ್ತೆ

    ಯುಪಿಯಲ್ಲಿ ಕಾಣೆಯಾಗಿದ್ದ ಯೋಗಿನಿ ವಿಗ್ರಹ ಯುಕೆಯಲ್ಲಿ ಪತ್ತೆ

    ಲಂಡನ್: ಉತ್ತರ ಪ್ರದೇಶದ ಲೊಖಾರಿ ಗ್ರಾಮದ ದೇವಸ್ಥಾನದಿಂದ ಕಾಣೆಯಾದ ಯೋಗಿನಿ ವಿಗ್ರಹ ಇಂಗ್ಲೆಂಡ್‍ನ ಹಳ್ಳಿ ಮನೆಯಲ್ಲಿ ಪತ್ತೆಯಾಗಿದೆ.

    ಉತ್ತರ ಪ್ರದೇಶದ ಲೊಖಾರಿ ಗ್ರಾಮದ ದೇವಸ್ಥಾನದಿಂದ ಮೇಕೆ ದೇವತೆ(ಯೋಗಿನಿ)ಯ ಪುರಾತನ ಭಾರತೀಯ ವಿಗ್ರಹವು 40 ವರ್ಷಗಳ ಹಿಂದೆ ಕಾಣೆಯಾಗಿತ್ತು. ಇಂದು ಆ ವಿಗ್ರಹ ಇಂಗ್ಲೆಂಡ್‍ನ ಹಳ್ಳಿಯ ಮನೆಯೊಂದರ ಉದ್ಯಾನವನದಲ್ಲಿ ಪತ್ತೆಯಾಗಿದ್ದು, ವಿಗ್ರಹ ಶೀಘ್ರದಲ್ಲೇ ಭಾರತಕ್ಕೆ ಮರಳಲಿದೆ.

    ಹಿಂದೂ ಧರ್ಮದಲ್ಲಿನ ದೈವಿಕ ಸ್ತ್ರೀಲಿಂಗವನ್ನು ಉಲ್ಲೇಖಿಸುವ ಯೋಗಿನಿ ವಿಗ್ರಹವು 8ನೇ ಶತಮಾನದಷ್ಟು ಹಿಂದಿನದು. 1970ರ ದಶಕದ ಕೊನೆಯಲ್ಲಿ ಮತ್ತು 1980 ರ ದಶಕದ ಆರಂಭದಲ್ಲಿ ಬಂದಾ ಜಿಲ್ಲೆಯ ಲೋಖಾರಿ ಗ್ರಾಮದಿಂದ ಈ ವಿಗ್ರಹ ಕಾಣೆಯಾಗಿತ್ತು. ಈಗ ಆ ವಿಗ್ರಹ ಪತ್ತೆಯಾಗಿದ್ದು, ಈ ವಾರವೇ ಲಂಡನ್‍ನಲ್ಲಿರುವ ಭಾರತೀಯ ಹೈ ಕಮಿಷನ್ ಭಾರತಕ್ಕೆ ಪ್ರಾಚೀನ ಕಲಾಕೃತಿಯಾದ ಯೋಗಿನಿ ವಿಗ್ರಹವನ್ನು ಹಿಂದಿರುಗಿಸಲು ಎಲ್ಲ ರೀತಿಯ ಅನುಮತಿಯನ್ನು ಪಡೆದುಕೊಳ್ಳಲಾಗಿದೆ. ಅದನ್ನು ಕೆಲವೇ ತಿಂಗಳುಗಳಲ್ಲಿ ಭಾರತದ ಮೂಲ ಸ್ಥಾನದಲ್ಲಿ ಮರುಸ್ಥಾಪಿಸಲಾಗುವುದು ಎಂದು ಶಿಲ್ಪದ ಮರುಸ್ಥಾಪನೆಯನ್ನು ಸಂಪರ್ಕಿಸುತ್ತಿರುವ ವ್ಯಾಪಾರ ಮತ್ತು ಆರ್ಥಿಕ ಪ್ರಥಮ ಕಾರ್ಯದರ್ಶಿ ಜಸ್ಪ್ರೀತ್ ಸಿಂಗ್ ಸುಖಿಜಾ ಹೇಳಿದ್ದಾರೆ. ಇದನ್ನೂ ಓದಿ: ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಭಾರತೀಯ ಆಹಾರವನ್ನು ಇಷ್ಟಪಡುತ್ತಾರೆ: ಅನಿಲ್ ಮೆನನ್

    ಎಲ್ಲ ವಿಧಿವಿಧಾನಗಳು ಪೂರ್ಣಗೊಂಡಿವೆ. ಈ ಕಲಾಕೃತಿಯನ್ನು ಭಾರತಕ್ಕೆ ತರಲು ನಾವು ಅಂತಿಮ ಹಂತದಲ್ಲಿದ್ದೇವೆ. ಕ್ರಿಸ್ ಮರಿನೆಲ್ಲೋ ಮತ್ತು ಶ್ರೀ ವಿಜಯ್ ಕುಮಾರ್ ಅವರು ಒಂದೆರಡು ತಿಂಗಳ ಹಿಂದೆ ಈ ಕಲಾಕೃತಿಯನ್ನು ಗುರುತಿಸಲು ಸಹಾಯ ಮಾಡಿದರು. ಯೋಗಿನಿ ವಿಗ್ರಹವನ್ನು ಹೈಕಮಿಷನ್‍ಗೆ ಹಸ್ತಾಂತರಿಸುವುದನ್ನು ಮತ್ತು ಅದರ ಪೂರ್ಣ ವೈಭವವನ್ನು ಪುನಃಸ್ಥಾಪಿಸುವುದನ್ನು ನೀವು ಶೀಘ್ರದಲ್ಲೇ ನೋಡುತ್ತೀರಿ ಎಂದು ತಿಳಿಸಿದರು.

    ನ್ಯಾಯವಾದಿ ಮತ್ತು ಆರ್ಟ್ ರಿಕವರಿ ಇಂಟರ್‍ನ್ಯಾಶನಲ್‍ನ ಸಂಸ್ಥಾಪಕರಾದ ಮರಿನೆಲ್ಲೋ ಈ ಕುರಿತು ಮಾತನಾಡಿದ್ದು, ಯುಕೆಯಲ್ಲಿ ವೃದ್ಧೆ ತನ್ನ ಪತಿ ತೀರಿಕೊಂಡ ನಂತರ ಮನೆಯಲ್ಲಿದ್ದ ಎಲ್ಲ ವಸ್ತುಗಳನ್ನು, ತೋಟವನ್ನು ಮಾರಾಟ ಮಾಡಿದ್ದರು. ಈ ವೇಳೆ ಇದರಲ್ಲಿ ಪ್ರಾಚೀನ ವಿಗ್ರಹವು ಸೇರಿಕೊಂಡಿದೆ. ನಂತರ ಈ ತೋಟವನ್ನು ಖರೀದಿಸಿದ ಮಾಲೀಕರ ಕಣ್ಣಿಗೆ ಈ ವಿಗ್ರಹ ಕಂಡುಬಂದಿದ್ದು, ಪರಿಣಾಮ ಅವರು ತನಿಖೆ ಮಾಡಲು ನಮ್ಮನ್ನು ಸಂಪರ್ಕಿಸಿದರು. ಈ ಮನೆಯನ್ನು ಅವರು 15 ವರ್ಷಗಳ ಹಿಂದೆ ಖರೀದಿಸಿದ್ದು, ತೋಟದಲ್ಲೇ ಈ ವಿಗ್ರಹ ಇತ್ತು ಅಂತ ಅವರು ತಿಳಿಸಿದ್ದಾರೆ ಎಂದು ವಿವರಿಸಿದರು. ಇದನ್ನೂ ಓದಿ: ನಾವು ಮಠಕ್ಕೆ ಬಂದು ಮೊಟ್ಟೆ ತಿಂತೀವಿ: ಮಠಾಧೀಶರಿಗೆ ವಿದ್ಯಾರ್ಥಿನಿ ಸವಾಲು

    ನಂತರ ನಾನು ಭಾರತದ ಕಳೆದುಹೋದ ಕಲಾಕೃತಿಗಳನ್ನು ಮರುಸ್ಥಾಪಿಸುವಲ್ಲಿ ಕೆಲಸ ಮಾಡುವ ಇಂಡಿಯಾ ಪ್ರೈಡ್ ಪ್ರಾಜೆಕ್ಟ್ ಸಂಸ್ಥೆಯ ಸಹ-ಸಂಸ್ಥಾಪಕ ವಿಜಯ್ ಕುಮಾರ್ ಅವರನ್ನು ಸಂಪರ್ಕಿಸಿದೆ. ನಂತರ ಅವರು ಈ ವಿಗ್ರಹ ಉತ್ತರ ಪ್ರದೇಶದಿಂದ ಕಾಣೆಯಾದ ‘ಯೋಗಿನಿ’ ವಿಗ್ರಹ ಎಂದು ಗುರುತಿಸಲು ಸಾಧ್ಯವಾಯಿತು ಎಂದು ತಿಳಿಸಿದರು.