Tag: ಪ್ರಸಿದ್ಧ ಕೃಷ್ಣ

  • ಕನ್ನಡಿಗ ಪ್ರಸಿದ್ಧ ಕೃಷ್ಣ ಬೌಲಿಂಗ್‍ಗೆ ಬ್ರೆಟ್ ಲೀ ಫಿದಾ

    ಕನ್ನಡಿಗ ಪ್ರಸಿದ್ಧ ಕೃಷ್ಣ ಬೌಲಿಂಗ್‍ಗೆ ಬ್ರೆಟ್ ಲೀ ಫಿದಾ

    ಬೆಂಗಳೂರು: ಆಸ್ಟ್ರೇಲಿಯಾ ಮಾಜಿ ಬೌಲರ್ ಬ್ರೆಟ್ ಲಿ ಕನ್ನಡಿಗ ಪ್ರಸಿದ್ಧ ಕೃಷ್ಣ ಬೌಲಿಂಗ್‍ಗೆ ಫಿದಾ ಆಗಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಲೀ, ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ ಕೃಷ್ಣ, ನವ್‍ದೀಪ್ ಸೈನಿರ ಬೌಲಿಂಗ್ ಸಾಮರ್ಥ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    700 ಅಂತರಾಷ್ಟ್ರೀಯ ವಿಕೆಟ್‍ಗಳನ್ನು ಪಡೆದಿರುವ ಬ್ರೆಟ್ ಲೀ ಭಾರತೀಯ ಬೌಲರ್ ಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಒಬ್ಬ ಉತ್ತಮ ಬೌಲರ್ ವೇಗದೊಂದಿಗೆ ಉತ್ತಮ ಓಟಗಾರ ಆಗಿರಬೇಕು. 160 ಕೆ ವೇಗದಲ್ಲಿ ಬೌಲ್ ಮಾಡುವ ಎಲ್ಲಾ ಬೌಲರ್ ಗಳು ಉತ್ತಮ ಆಥ್ಲೇಟಿಕ್ ಪ್ಲೇಯರ್ಸ್ ಆಗಿರುತ್ತಾರೆ. ಈ ಕಾರ್ಯಕ್ರಮದಲ್ಲಿ ನನಗೆ ಭಾರತದ ಮುಂದಿನ ವೇಗದ ಬೌಲರ್ ಆಯ್ಕೆ ಮಾಡುವ ಅವಕಾಶ ಸಿಕ್ಕಿದ್ದು, ಭಾರತದ ಬೌಲರ್ ಗಳನ್ನು ತಮ್ಮನ್ನು ಆಕರ್ಷಿಸಿದ್ದಾರೆ ಎಂದರು.

    ನನ್ನಂತೆಯೇ ಹೆಚ್ಚು ವೇಗವಾಗಿ ಚೆಂಡನ್ನು ಎಸೆಯುವ ಸಾಮರ್ಥ್ಯವನ್ನು ಕೃಷ್ಣ, ಸೈನಿ ಹೊಂದಿದ್ದಾರೆ ಎಂದು ತಿಳಿಸಿದ್ದು, ಕೃಷ್ಣ 145ಕೆ ವೇಗದಲ್ಲಿ ಬೌಲ್ ಮಾಡಬಲ್ಲರು. ಸೈನಿ ಕೂಡ ಭರವಸೆಯ ಆಟಗಾರ. ಈ ಬಾರಿಯ ಟೂರ್ನಿಯಲ್ಲಿ ಇಬ್ಬರು ಉತ್ತಮ ಪ್ರದರ್ಶನವನ್ನು ನೀಡಿದ್ದಾರೆ. ಇಬ್ಬರು ಆಟಗಾರರು ತಮ್ಮ ಓಟದಲ್ಲಿ ಮತ್ತಷ್ಟು ಸುಧಾರಣೆ ಕಂಡರೆ ಅತ್ಯುತ್ತಮ ಪ್ರದರ್ಶನ ನೀಡುತ್ತಾರೆ. ಪ್ರಸಿದ್ಧ ಭಾರತ ಭವಿಷ್ಯದ ವೇಗದ ಬೌಲರ್ ಆಗಲಿದ್ದಾರೆ ಎಂದು ತಿಳಿಸಿದರು.

    ಐಪಿಎಲ್ ಟೂರ್ನಿಯಲ್ಲಿ ಪ್ರಸಿದ್ಧ ಕೃಷ್ಣ ಸೈನಿ ಆರ್ ಸಿಬಿ ಪರ ಆಡುತ್ತಿದ್ದು, ತಮ್ಮ ಲೈನ್ ಅಂಡ್ ಲೆಂಥ್ ಬೌಲಿಂಗ್ ಮಾಡಿ ಬಿಸಿಸಿಐ ಆಯ್ಕೆ ಸಮಿತಿಯ ಗಮನ ಸೆಳೆದಿದ್ದು, ವಿಶ್ವಕಪ್ ಸ್ಟಾಂಡ್ ಬೈ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

  • `ಈ ಸಲ ಕಪ್ ನಮ್ದೆ’ – ನಾವು ಕನ್ನಡಿಗರೇ ನಮ್ಮನ್ನು ಬೆಂಬಲಿಸಿ : ಉತ್ತಪ್ಪ, ಕೃಷ್ಣ

    `ಈ ಸಲ ಕಪ್ ನಮ್ದೆ’ – ನಾವು ಕನ್ನಡಿಗರೇ ನಮ್ಮನ್ನು ಬೆಂಬಲಿಸಿ : ಉತ್ತಪ್ಪ, ಕೃಷ್ಣ

    ಕೋಲ್ಕತ್ತಾ: ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ಪ್ಲೇ ಆಫ್‍ಗೆ ಅರ್ಹತೆ ಪಡೆದಿಲ್ಲ. ಹೀಗಾಗಿ ನಾವು ಕನ್ನಡಿಗರೇ ನಮ್ಮನ್ನು ಬೆಂಬಲಿಸಿ ಎಂದು ಕನ್ನಡಿಗರಾದ ರಾಬಿನ್ ಉತ್ತಪ್ಪ, ಪ್ರಸಿದ್ಧ ಕೃಷ್ಣ ಕನ್ನಡಲ್ಲೇ ಮನವಿ ಮಾಡಿದ್ದಾರೆ.

    ಚೆನ್ನೈ ವಿರುದ್ಧ ಪಂದ್ಯದ ಬಳಿಕ ಮಾತನಾಡಿರುವ ಕೋಲ್ಕತ್ತಾ ತಂಡ ಪರ ಆಡುತ್ತಿರುವ ರಾಬಿನ್ ಉತ್ತಪ್ಪ ಮತ್ತು ಕೃಷ್ಣ, ಆರ್ ಸಿಬಿ ಈ ಟೂರ್ನಿಯಲ್ಲಿ ಇಲ್ಲ. ಅದ್ದರಿಂದ ತಮಗೇ ಬೆಂಬಲ ನೀಡಿ ಎಂದು ಕೇಳಿದ್ದಾರೆ.

    ಇದೇ ವೇಳೆ ಈ ಸಲ ಕಪ್ ನಮ್ದೆ ಎಂದು ಹೇಳಿದ ಇಬ್ಬರು ಆಟಗಾರರು, ಕೆಕೆಆರ್ ತಂಡದಲ್ಲಿ ಹಲವರು ಕನ್ನಡಿಗರು ಆಡುತ್ತಿದ್ದಾರೆ. ಈ ಬಾರಿ ಕಪ್ ಗೆಲ್ಲುವ ವಿಶ್ವಾಸವಿದೆ. ಅದ್ದರಿಂದ ಬೆಂಬಲ ನೀಡಿ ಎಂದು ಕನ್ನಡದಲ್ಲೇ ಮನವಿ ಮಾಡಿದರು.

    ಶನಿವಾರ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಕೃಷ್ಣ, ಕೊನೆಯ ಓವರ್ ನಲ್ಲಿ ರನೌಟ್ ನೊಂದಿಗೆ ಒಟ್ಟು 4 ವಿಕೆಟ್ ಪಡೆದು ಮಿಂಚಿದ್ದರು. ಈ ವೇಳೆ ಮಾತನಾಡಿದ ಕೃಷ್ಣ ಇನ್ನಿಂಗ್ಸ್ ಮೊದಲ ಓವರ್ ನಲ್ಲಿ 11 ರನ್ ನೀಡಿದ ವೇಳೆ ಹೆಚ್ಚಿನ ಒತ್ತಡವಾಗಿತ್ತು, ಬಳಿಕ ನನ್ನ ಮೇಲಿನ ವಿಶ್ವಾಸವನ್ನು ದೃಢಮಾಡಿ ಬೌಲ್ ಮಾಡಿದೆ ಎಂದು ಹೇಳಿದ್ದರು. ಕೆಕೆಆರ್ ಪ್ಲೇ ಆಫ್ ಪ್ರವೇಶಿಸಲು ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಉತ್ತಪ್ಪ ಹಾಗೂ ಕೃಷ್ಣ ಪ್ರಮುಖ ಪಾತ್ರವಹಿಸಿದ್ದರು. ಈ ಪಂದ್ಯದಲ್ಲಿ ಉತ್ತಪ್ಪ 34 ಎಸೆತಗಳಲ್ಲಿ 45 ರನ್ ಸಿಡಿಸಿದ್ದರು.

    ಈ ಬಾರಿ ಟೂರ್ನಿಯಲ್ಲಿ ಕೆಕೆಆರ್ ತಂಡ ಮಾತ್ರವಲ್ಲದೆ ರಾಜಸ್ಥಾನ ಪರ ಕನ್ನಡಿಗರಾದ ಶ್ರೇಯಸ್ ಗೋಪಾಲ್, ಕೆ ಗೌತಮ್ ಆಡಿದ್ದರೆ, ಕೆಎಲ್ ರಾಹುಲ್, ಕರುಣ್, ಮಾಯಾಂಕ್ ಅಗರವಾಲ್ ಪಂಜಾಬ್ ತಂಡವನ್ನು ಪ್ರತಿನಿಧಿಸಿದ್ದರು. ಕೆಕೆಆರ್ ನಲ್ಲಿ ವಿನಯ್ ಕುಮಾರ್ ಆಡುತ್ತಿದ್ದಾರೆ.

    https://www.youtube.com/watch?v=oY-HilLrKn4