Tag: ಪ್ರಶಾಂತ್

  • ಯಾರಿಗೆ ಯಾರುಂಟು: ತ್ರಿಕೋನ ಪ್ರೇಮದ ಮೋಹಕ ಬ್ರಹ್ಮಗಂಟು!

    ಯಾರಿಗೆ ಯಾರುಂಟು: ತ್ರಿಕೋನ ಪ್ರೇಮದ ಮೋಹಕ ಬ್ರಹ್ಮಗಂಟು!

    ಬೆಂಗಳೂರು: ಸಮ್ಮೋಹಕ ಹಾಡುಗಳಿಂದಲೇ ಮೆಲುವಾಗಿ ಪ್ರೇಕ್ಷಕರನ್ನು ತಲುಪಿಕೊಂಡಿದ್ದ ಯಾರಿಗೆ ಯಾರುಂಟು ಚಿತ್ರ ಬಿಡುಗಡೆಯಾಗಿದೆ. ಹಾಡುಗಳಷ್ಟೇ ಮಾಧುರ್ಯ ಹೊಂದಿರೋ ಕಥೆ, ಅದಕ್ಕೆ ಅಂಟಿಕೊಂಡಂತಿರೋ ಮನೋರಂಜನೆ, ಜೀವನಪ್ರೇಮದ ಈ ಚಿತ್ರ ಪ್ರೇಕ್ಷಕರ ನಿರೀಕ್ಷೆಗಳನ್ನು ತಣಿಸುತ್ತಲೇ ಗೆಲುವಿನ ಯಾನ ಆರಂಭಿಸಿದೆ.

    ನಿರ್ದೇಶಕ ಕಿರಣ್ ಗೋವಿ ಈ ಚಿತ್ರದ ಮೂಲಕ ಸೂಕ್ಷ್ಮವಾದ ಕಥಾ ಎಳೆಯೊಂದನ್ನು ತ್ರಿಕೋನ ಪ್ರೇಮದ ಹಿನ್ನೆಲೆಯಲ್ಲಿ ಪರಿಣಾಮಕಾರಿಯಾಗಿಯೇ ನಿರೂಪಿಸಿದ್ದಾರೆ. ಈ ಮೂಲಕವೇ ಯಾರಿಗೆ ಯಾರುಂಟು ವಿಭಿನ್ನವಾದ ಚಿತ್ರವೊಂದನ್ನು ನೋಡಿದ ತೃಪ್ತಿಯನ್ನು ನೋಡುಗರಲ್ಲಿ ಮೂಡಿಸುವಲ್ಲಿಯೂ ಸಫಲವಾಗಿದೆ.

    ಈ ಚಿತ್ರದ ನಾಯಕ ದೊಡ್ಡ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುವಾತ. ಜಗತ್ತಿನ ಎಲ್ಲ ಲವಲವಿಕೆ, ಜೀವನೋತ್ಸಾಹವನ್ನೂ ತನ್ನೊಳಗೆ ತುಂಬಿಸಿಕೊಂಡಂಥಾ ವ್ಯಕ್ತಿತ್ವ ಆತನದ್ದು. ಇಂಥವನಿಗೆ ಸಾವೆಂಬುದು ಸನಿಹದಲ್ಲಿಯೇ ನಿಂತುಯ ಕಾಯುತ್ತಿರುತ್ತದೆ. ತನ್ನ ಆಯುಷ್ಯ ಮುಗಿಯುತ್ತಾ ಬಂದಿದೆ ಅಂತ ಅರಿವಾಗುತ್ತಲೇ ನಾಯಕನೊಳಗೆ ಅದಮ್ಯ ಆಸೆಯೊಂದು ಮೊಳಕೆಯೊಡೆಯುತ್ತೆ.

    ಓರ್ವ ಹುಡುಗಿಯನ್ನು ಉತ್ಕಟವಾಗಿ ಪ್ರೀತಿಸಿ ಆ ಖುಷಿಯಲ್ಲಿಯೇ ಕಣ್ಮುಚ್ಚಬೇಕೆಂಬುದು ಆತನ ಬಯಕೆ. ಮೇಲಿರೋ ದೇವರು ತನಗೆಂದೇ ಚೆಲುವೆಯೊಬ್ಬಳನ್ನು ಕಳಿಸುತ್ತಾನೆಂಬ ನಂಬಿಕೆಯೊಂದಿಗೆ ಜೀವಿಸೋ ಆತ ಮೂವರು ಹುಡುಗೀರ ಜೊತೆ ಪ್ರೀತಿಯಲ್ಲಿ ಬೀಳುತ್ತಾನೆ. ಹಾಗೆ ಮೂರ್ಮೂರು ಪ್ರೀತಿ ಮೇಂಟೇನು ಮಾಡಲು ಕಾರಣವಾಗೋ ಅಂಶ ಯಾವುದು? ಅದರಲ್ಲಿ ನಾಯಕನಿಗೆ ಎದುರಾಗೋ ತೊಡಕುಗಳೇನು? ಆತ ಬದುಕುಳಿಯುತ್ತಾನಾ ಎಂಬುದು ನಿಜವಾದ ಕುತೂಹಲ. ಅದಕ್ಕೆ ಥೇಟರಿನಲ್ಲಿ ಮಜವಾದ ಉತ್ತರ ಕಾದಿದೆ.

    ನಾಯಕ ಪ್ರಶಾಂತ್ ಅವರದ್ದಿಲ್ಲಿ ಪ್ರಶಾಂತವಾದ ಪಾತ್ರ. ಈ ವರೆಗೂ ಮಾಸ್ ಪಾತ್ರಗಳಲ್ಲಿ ನಟಿಸಿದ್ದ ಅವರಿಲ್ಲಿ ಬೇರೆಯದ್ದೇ ಥರದ ಪಾತ್ರಕ್ಕೆ ಜೀವ ತುಂಬಿದ್ದಾರೆ. ಕೃತಿಕಾ ರವೀಂದ್ರ ಕೂಡಾ ಚೆಂದೆದ ಪಾತ್ರಕ್ಕೆ ಜೀವ ತುಂಬಿದ್ದಾರೆ. ಉಳಿಉಕೆ ನಾಯಕಿಯರಾದ ಲೇಖಾ ಚಂದ್ರ ಮತ್ತು ಆದಿತಿ ಪಾತ್ರವೂ ನೆನಪಿಟ್ಟುಕೊಳ್ಳುವಂತಿದೆ. ಚೆಂದದ ದೃಷ್ಯಗಳು, ಬಿಗಿ ಕಳೆದುಕೊಳ್ಳದ ನಿರೂಪಣೆ, ಮಾಧುರ್ಯದ ಹಾಡುಗಳೂ ಸೇರಿದಂತೆ ಹೆ ಸಿ ರಘುನಾಥ್ ನಿರ್ಮಾಣದ ಈ ಚಿತ್ರ ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವಂತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯಾರಿಗೆ ಯಾರುಂಟು: ಸಿಗೋದು ಪಕ್ಕಾ ಗೆಲುವಿನ ನಂಟು!

    ಯಾರಿಗೆ ಯಾರುಂಟು: ಸಿಗೋದು ಪಕ್ಕಾ ಗೆಲುವಿನ ನಂಟು!

    ಬೆಂಗಳೂರು: ರಘುನಾಥ್ ನಿರ್ಮಾಣದ ಯಾರಿಗೆ ಯಾರುಂಟು ಚಿತ್ರದ ಮೆಲೋಡಿ ಹಾಡುಗಳ ಮಾಯೆಗೆ ತಲೆದೂಗದವರೇ ಇಲ್ಲ. ಚಿತ್ರರಂಗದ ನಟ ನಟಿಯರನೇಕರು ಈ ಹಾಡುಗಳನ್ನು ಮೆಚ್ಚಿಕೊಂಡು, ಮನಸಾರೆ ಹೊಗಳುತ್ತಿದ್ದಾರೆ. ಅತ್ತ ಪ್ರೇಕ್ಷಕರ ವಲಯದಲ್ಲಿಯೂ ಕೂಡಾ ಇಂಥಾದ್ದೇ ವಾತಾವರಣವಿದೆ. ಎಲ್ಲರ ಬಾಯಲ್ಲಿಯೂ ಗುನುಗುನಿಸುತ್ತಿರೋ ಹಾಡುಗಳೇ ಇಷ್ಟು ಚೆನ್ನಾಗಿರೋದರಿಂದ ಇಡೀ ಸಿನಿಮಾ ಹೇಗಿರಬಹುದೆಂಬ ಕುತೂಹಲವಂತೂ ಸರ್ವವ್ಯಾಪಿಯಾಗಿ ಬಿಟ್ಟಿದೆ.

    ಅದೆಲ್ಲದಕ್ಕೂ ಇನ್ನೊಂದು ವಾರದಲ್ಲಿ ಖಂಡಿತಾ ಉತ್ತರ ಸಿಗಲಿದೆ. ಯಾಕೆಂದರೆ ಯಾರಿಗೆ ಯಾರುಂಟು ಚಿತ್ರ ಇದೇ ಫೆಬ್ರವರಿ 22ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

    ಒರಟ ಚಿತ್ರದ ಮೂಲಕ ಮಾಸ್ ಲುಕ್ಕಿನಲ್ಲಿ ಅಭಿಮಾನಿ ಬಳಗ ಸಂಪಾದಿಸಿಕೊಂಡಿದ್ದ ಪ್ರಶಾಂತ್ ಪಾಲಿಗೆ ಈ ಸಿನಿಮಾ ಮೂಲಕ ಮತ್ತೆ ಭರ್ಜರಿ ಓಪನಿಂಗ್ ಸಿಗೋ ಲಕ್ಷಣ ಸ್ಪಷ್ಟವಾಗಿದೆ. ನಾಯಕಿಯರಲ್ಲೊಬ್ಬರಾದ ಕೃತಿಕಾ ರವೀಂದ್ರ ಪಾಲಿಗೂ ಈ ಸಿನಿಮಾ ಮೂಲಕ ದೊಡ್ಡ ಮಟ್ಟದಲ್ಲೊಂದು ಬ್ರೇಕ್ ಸಿಗೋ ಸೂಚನೆಗಳಿವೆ. ಲೇಖಾ ಚಂದ್ರ ಮತ್ತು ಅದಿತಿ ಪಾಲಿಗೂ ಅಂಥಾದ್ದೊಂದು ಭರವಸೆ ಇದೆ.

    ಬಿಡುಗಡೆಗೂ ಮುನ್ನವೇ ಇಂಥಾದ್ದೊಂದು ಭರವಸೆ ಮೂಡಿಕೊಂಡಿರೋದಕ್ಕೆ ಮೂಲ ಕಾರಣ ವಿಶಿಷ್ಟವಾದ ಟ್ರೈಲರ್, ಟೀಸರ್ ಮತ್ತು ಚೆಂದದ ಹಾಡುಗಳು ಜನರನ್ನು ತಲುಪಿಕೊಂಡಿರೋ ರೀತಿ. ಈ ಚಿತ್ರದ ಹಾಡುಗಳ ಬಗ್ಗೆ ಕನ್ನಡ ಚಿತ್ರರಂಗದ ಹಲವಾರು ನಟನಟಿಯರು ಭರವಸೆಯ ಮಾತಾಡಿದ್ದಾರೆ. ಬಿ.ಜೆ.ಭರತ್ ಈ ಮೂಲಕವೇ ಮತ್ತೆ ಮುಂಚೂಣಿಯಲ್ಲಿ ಮಿನುಗುತ್ತಿದ್ದಾರೆ. ಧ್ರುವ ಸರ್ಜಾ ಅವರಿಂದ ಆರಂಭವಾಗಿ ನಟ ನವೀನ್ ಕೃಷ್ಣ, ಅರು ಗೌಡ, ನಿರ್ದೇಶಕ ನಂದ ಕಿಶೋರ್, ದಯಾಳ್ ಪದ್ಮನಾಭನ್, ನಟಿ ಅನಿತಾ ಭಟ್, ಪ್ರಥಮ್ ಸೇರಿದಂತೆ ಎಲ್ಲ ವಿಭಾಗದವರೂ ಕೂಡಾ ಯಾರಿಗೆ ಯಾರುಂಟು ಚಿತ್ರ ಮ್ಯೂಸಿಕಲ್ ಹಿಟ್ ಆಗುತ್ತದೆ ಅನ್ನೋ ಭವಿಷ್ಯ ನುಡಿದಿದ್ದಾರೆ.

    ಇಂಥಾ ಪಾಸಿಟಿವ್ ಅಲೆಯ ನಡುವೆಯೇ ಕಿರಣ್ ಗೋವಿ ನಿರ್ದೇಶನದ ಯಾರಿಗೆ ಯಾರುಂಟು ಚಿತ್ರ ಮುಂದಿನ ವಾರ ಅದ್ಧೂರಿಯಾಗಿ ತೆರೆ ಕಾಣಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪುರಾತನ ದೆವ್ವಕ್ಕೆ ಪುಳ್ಚಾರು ಎಡೆಯಿಟ್ಟ ಅಮವಾಸೆ!

    ಪುರಾತನ ದೆವ್ವಕ್ಕೆ ಪುಳ್ಚಾರು ಎಡೆಯಿಟ್ಟ ಅಮವಾಸೆ!

    ಪ್ರಶಾಂತ್ ನಿರ್ದೇಶನದ ಅಮವಾಸೆ ಚಿತ್ರ ಒಂದಷ್ಟು ನಿರೀಕ್ಷೆ ಹುಟ್ಟಿಸಿತ್ತು. ಇದು ಹೇಳಿ ಕೇಳಿ ಹೊಸಾ ಅಲೆಯ ಚಿತ್ರಗಳ ಜಮಾನ. ಹುಮ್ಮಸ್ಸಿನ ಹುಡುಗರು ಸದ್ದೇ ಇಲ್ಲದೆ ಎಂಟ್ರಿ ಕೊಟ್ಟು ಸೆನ್ಸೇಷನ್ ಕ್ರಿಯೇಟ್ ಮಾಡಿ ಬಿಡುತ್ತಾರೆ. ಅಮವಾಸೆಯಲ್ಲೂ ಕೂಡಾ ಇಂಥಾದ್ದೇ ಕಮಾಲ್ ನಡೆದಿರಬಹುದೆಂಬ ನಿರೀಕ್ಷೆ ಹೊತ್ತು ಥೇಟರು ಹೊಕ್ಕವರಿಗೆ ಸಿಕ್ಕಿದ್ದು ನಿರಾಸೆಯ ಅನುಭವ!

    ಯಾವ್ಯಾವುದೋ ಕಾರಣಕ್ಕೆ ಸತ್ತು ಹೋದವರು ದೆವ್ವವಾಗೋದು, ಅದಕ್ಕೆ ಕಾರಣರಾದವರನ್ನು ಥರ ಥರದಲ್ಲಿ ಕಾಡೋದು… ಹುಡುಕಿದರೆ ಈ ಥರದ ಕಥೆ ಹೊಂದಿರೋ ಚಿತ್ರಗಳಿಗೆ ದಂಡಿ ದಂಡಿ ಉದಾಹರಣೆಗಳು ಸಿಗುತ್ತವೆ. ಇಂಥವುಗಳಿಗೆ ಹೊಸಾ ಉದಾಹರಣೆಯಂಥಾ, ಹಳೇ ಟ್ರ್ಯಾಕಿನ ಚಿತ್ರವಾಗಿ ಅಮವಾಸೆ ದಾಖಲಾಗಿದೆ.

    ಈ ಚಿತ್ರದ್ದು ಸಾಧಾರಣ ಕಥೆ. ನಾಲ್ವರು ಆತ್ಮೀಯ ಸ್ನೇಹಿತರಲ್ಲೊಬ್ಬನಿಗೆ ಹುಡುಗಿಯೊಬ್ಬಳ ಮೇಲೆ ಲವ್ವಾಗುತ್ತೆ. ಆಗ ಆತನ ಮುಂದೆ ಸ್ನೇಹ ಅಥವಾ ಪ್ರೀತಿಯನ್ನು ಆಯ್ಕೆ ಮಾಡಿಕೊಳ್ಳುವಂಥಾ ಭಯಾನಕ ಸಂದರ್ಭ ಸೃಷ್ಟಿಯಾಗುತ್ತೆ. ಆತ ಸ್ನೇಹವನ್ನೇ ಆಯ್ದುಕೊಂಡಿದ್ದರ ಫಲವಾಗಿ ಹುಡುಗಿಯ ದುರಂತ ಅಂತ್ಯ. ನಂತರ ಈತನೂ ಆತ್ಮಹತ್ಯೆ ಮಾಡಿಕೊಂಡೇಟಿಗೆ ಕಥೆಗೊಂದು ತಿರುವು. ಅದರಾಚೆಗೆ ಪ್ರೀತಿ ಕೈ ತಪ್ಪಿ ಸತ್ತ ಹುಡುಗಿ ಪ್ರೇತಾತ್ಮವಾಗಿ ಕಾಡುತ್ತಾಳಾ ಎಂಬುದು ಕುತೂಹಲ.

    ಆದರೆ ಈ ಚಿತ್ರದುದ್ದಕ್ಕೂ ಅಂಥಾ ಯಾವ ಕುತೂಹಲಕರವಾದ ವಿಚಾರಗಳೂ ಇಲ್ಲ. ನಿರ್ದೇಶಕ ಪ್ರಶಾಂತ್ ಉಲ್ಟಾ ಸ್ಕ್ರೀನ್ ಪ್ಲೇ ಕೂಡಾ ವರ್ಕೌಟ್ ಆಗಿಲ್ಲ. ಇಡೀ ಚಿತ್ರ ಹಾರರ್ ಕಥೆ ಹೊಂದಿದ್ದರೂ ಪುರಾತನ ದೆವ್ವಕ್ಕೆ ಪುಳ್ಚಾರು ಎಡೆಯಿಟ್ಟಂತಾಗಿದೆ. ಸಿದ್ಧಸೂತ್ರದ ಆಚೀಚೆಗೆ ಕದಲದ ಅಮವಾಸೆಯ ಬೂತಚೇಷ್ಟೆಗಳು ಯಾವ ರೀತಿಯಿಂದಲೂ ಕಾಡೋದಿಲ್ಲ. ಕತೆ ಸಾಧಾರಣವಾದದ್ದೇ ಆದರೂ ಒಂದಷ್ಟುಯ ಶ್ರಮ ವಹಸಿದ್ದರೆ ತಕ್ಕಮಟ್ಟಿಗೆ ಎಫೆಕ್ಟಿವ್ ಆಗಬಹುದಾಗಿದ್ದ ಅವಕಾಶವನ್ನೂ ಕೂಡಾ ನಿರ್ದೇಶಕರು ಕೈ ತಪ್ಪಿಸಿಕೊಂಡಿದ್ದಾರೆ.

    ಹೊಸಬರು ಚಿತ್ರ ಮಾಡಿದಾಗ ಒಂದಷ್ಟು ನಿರೀಕ್ಷೆಗಳಿರುತ್ತವೆ. ಹೊಸಾ ಬಗೆಯ ಕಥೆಯೊಂದಿಗೆ ಏನೋ ಮೋಡಿ ಮಾಡಿರುತ್ತಾರೆಂಬ ನಂಬಿಕೆಯೂ ಪ್ರೇಕ್ಷಕರಲ್ಲಿರುತ್ತೆ. ಆದರೆ ಅಮವಾಸೆಯಂಥಾ ಚಿತ್ರಗಳು ಕೊಡಮಾಡೋದು ಅಪಾದಮಸ್ತಕ ನಿರಾಸೆಯನ್ನಷ್ಟೇ. ಇದರ ಪರಿಣಾಮವಾಗಿ ಕೆಲ ಒಳ್ಳೆ ಚಿತ್ರಗಳನ್ನೂ ಸೋಲಿನ ಬಾಧೆ ಆವರಿಸಿಕೊಳ್ಳುವಂತಾಗುತ್ತದೆ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv