Tag: ಪ್ರಶಾಂತ್

  • ರಘುಗೆ ಹೆಂಡ್ತಿ ಸ್ಥಾನದಲ್ಲಿ ನಿಂತ್ಕೋಳಕ್ಕೆ ತುಂಬಾ ಜನ ಇದ್ದಾರಂತೆ

    ರಘುಗೆ ಹೆಂಡ್ತಿ ಸ್ಥಾನದಲ್ಲಿ ನಿಂತ್ಕೋಳಕ್ಕೆ ತುಂಬಾ ಜನ ಇದ್ದಾರಂತೆ

    ಬಿಗ್‍ಬಾಸ್ ಮನೆಯ ಅಂತಿಮ ದಿನ ಕಣ್ಮಣಿ ರಘುಗೆ ನಾಳೆ ನೀವು ಅಡುಗೆ ಮನೆಯಲ್ಲಿ ಇರುತ್ತೀರಾ ಎಂಬ ಪ್ರಶ್ನೆ ಕೇಳಿದ್ದಾಳೆ. ಆಗ ರಘು ಅಡುಗೆ ಮನೆಯಲ್ಲಿ ಇರುತ್ತೇನೆ ಆದರೆ ಅಡುಗೆ ಮನೆಯಲ್ಲಿ ಇನ್ನೊಬ್ಬರು ಇರುವುದಿಲ್ಲ ಬದಲಾಗಿ ನನ್ನ ಹೆಂಡತಿ ಇರುತ್ತಾಳೆ ಎನ್ನುತ್ತಾರೆ.

    ಈ ವೇಳೆ ಅರವಿಂದ್ ಅದು ನಿನ್ನನ್ನು ಇಂದು ಮನೆಯೊಳಗೆ ಬಿಟ್ಟುಕೊಂಡರೆ ಮಾತ್ರ ಎಂದು ರೇಗಿಸುತ್ತಾರೆ. ನೀವು ನನ್ನ ಹೆಂಡ್ತಿ ಸ್ಪೋರ್ಟಿವ್ ಆಗಿ ಇದ್ದಾಳಾ ಎಂದು ಚೇಕ್ ಮಾಡುತ್ತಿದ್ದೀರಾ. ನಾನು ಮನೆಗೆ ಹೋಗಬೇಕಾ, ಇಲ್ಲ ಅಂದರೆ ಎಲ್ಲಾದರೂ ಹೋಗಬೇಕಾ ಗೊತ್ತಾಗುತ್ತಿಲ್ಲ ಎಂದು ರಘು ಕೇಳಿದಾಗ, ನಾವು ಆರೋಗ್ಯ ಮಾತ್ರ ವಿಚಾರಿಸಿದ್ದು, ಇನ್ನು ಮಿಕ್ಕಿದ್ದು ಗಂಡ-ಹೆಂಡತಿಗೆ ಬಿಟ್ಟಿದ್ದು ಎಂದು ಕಣ್ಮಣಿ ಹೇಳುತ್ತಾಳೆ.

    ಈ ವೇಳೆ ಶುಭಾ ಪೂಂಜಾ ನನಗೆ ತಿಳಿದಿರುವಂತೆ ರಘುನಾ ಇಲ್ಲೇ ಬಿಟ್ಟು ಬಿಡಿ. ಏಕೆಂದರೆ ಅವರನ್ನು ಮನೆಗೆ ಸೇರಿಸುವುದಿಲ್ಲ ಅನಿಸುತ್ತದೆ ಎಂದರೆ ಅರವಿಂದ್ ಪಾಪ ಅವನ ಬಳಿ ಕಾರ್ಡ್ ಕೂಡ ಇಲ್ಲ ಅಂತಿದ್ದ ಎಂದು ರೇಗಿಸುತ್ತಾರೆ. ಆಗ ಕಣ್ಮಣಿ, ನಿಮಗೆ ಈಗಾಗಲೇ ನಿಮ್ಮ ಹೆಂಡತಿ ವಾಯ್ಸ್ ನೋಟ್ ಕಳುಹಿಸಿದ್ದಾರಲ್ಲ ಎಂದು ಕೇಳಿದಾಗ, ಮಜಾ ಮಾಡಿ ನೀನು ಬಾ, ನಿನಗಿದೆ ಎಂದು ಎದುರಿಸಿದಂತೆ ಇತ್ತು. ನಾನು ಅವಳು ಹೇಳಿದ್ದನ್ನು ಸೀರಿಯಸ್ ಆಗಿ ತೆಗೆದುಕೊಂಡು ಮಜಾ ಏನೋ ಮಾಡಿ ಬಿಟ್ಟೆ. ಆದ್ರೆ ಮುಂದೆ ಏನು ಗೊತ್ತಾಗುತ್ತಿಲ್ಲ ಎನ್ನುತ್ತಾರೆ.

    ಹಾಗದರೆ ನಿಮಗೊಂದು ಸಣ್ಣ ಸಿಕ್ರೆಟ್ ಹೇಳಿ ಬಿಡುತ್ತೇನೆ. ಆ ವಾಯ್ಸ್ ನೋಟ್‍ನಲ್ಲಿ ಒಂದೆರಡು ವರ್ಡ್ ನಾವು ಎಡಿಟ್ ಮಾಡಿದ್ದೇವೆ ಎಂದು ಕಣ್ಮಣಿ ರಘುಗೆ ಹೇಳತ್ತಾಳೆ. ಆಗ ರಘು ಏನಂತಾ ಇತ್ತು ಎಂದಾಗ ಕಣ್ಮಣಿ ಹೊರಗೆ ಹೋಗಿ ಲೈವ್‍ನಲ್ಲಿಯೇ ಗೊತ್ತಾಗುತ್ತದೆ ಎಂದಿದ್ದಾಳೆ.

    ನಂತರ ಕಣ್ಮಣಿ ಒಂದು ವೇಳೆ ನಿಮ್ಮ ಹೆಂಡತಿ ನಿಮ್ಮನ್ನು ಮನೆಗೆ ಸೇರಿಸಲಿಲ್ಲ ಅಂದರೆ ಏನು ಮಾಡುತ್ತೀರಾ ಎಂದು ಪ್ರಶ್ನಿಸುತ್ತಾಳೆ. ಆಗ ಶುಭಾ, ಪ್ರಶಾಂತ್ ಎಲ್ಲರು ನಮ್ಮ ಮನೆಗೆ ಬರಬಹುದು ಎಂದು ಹೇಳುತ್ತಿದ್ದಾಗ ರಘು, ಈಗಾಗಲೇ ಇದರ ಬಗ್ಗೆ ಸಾಕಷ್ಟು ಬಾರಿ ಯಾರ ಮನೆಯಲ್ಲಿ ಎಷ್ಟು ದಿನ ಇರಬಹುದು ಎಂದು ಮಾತನಾಡಿದ್ದೇವೆ. ನನಗೆ ಹೆಂಡ್ತಿ ಸ್ಥಾನದಲ್ಲಿ ನಿಂತುಕೊಳ್ಳಲು ಬಹಳಷ್ಟು ಜನ ಇದ್ದಾರೆ ಎಂದು ಹೇಳುತ್ತಾರೆ.

    ಆಗ ಕಣ್ಮಣಿ ರಘು ಶುಭಾ ಮನೆಗೆ ಹೋದರೆ ಏನಾಗುತ್ತದೆ ಎಂದು ಗೊತ್ತು ತಾನೇ ಎಂದು ನೆನಪಿಸುತ್ತಾರೆ. ಈ ವೇಳೆ ರಘು ಪಾತ್ರೆ ತೊಳೆಯುವಂತೆ, ಬಟ್ಟೆ ಒಗೆಯುವಂತೆ ಸನ್ನೆ ಮಾಡಿ ತೋರಿಸುತ್ತಾರೆ.

     

  • ದೊಡ್ಮನೆಯಲ್ಲಿ ಮರೆಯಲಾಗದ ನೆನಪುಗಳನ್ನು ಹಂಚಿಕೊಂಡ ಅರವಿಂದ್!

    ದೊಡ್ಮನೆಯಲ್ಲಿ ಮರೆಯಲಾಗದ ನೆನಪುಗಳನ್ನು ಹಂಚಿಕೊಂಡ ಅರವಿಂದ್!

    ಬಿಗ್‍ಬಾಸ್ ಕಾರ್ಯಕ್ರಮ ಆರಂಭವಾಗಿ ಸೋಮವಾರಕ್ಕೆ ಐವತ್ತು ದಿನ ಮುಕ್ತಾಯಗೊಂಡಿದೆ. ಸದ್ಯ ನಿನ್ನೆ ಬಿಗ್‍ಬಾಸ್ ಮನೆಯ ಸ್ಪರ್ಧಿಗಳಿಗೆ ‘ನೆನಪುಗಳ ಮಾತು ಮಧುರ’ ಎಂಬ ಚಟುವಟಿಕೆಯನ್ನು ನೀಡಿದ್ದರು. ಅದರ ಅನುಸಾರ ಮನೆಯ ಸದಸ್ಯರು ಇಷ್ಟು ದಿನ ದೊಡ್ಮನೆಯಲ್ಲಿ ನಡೆದ ಮರೆಯಲಾಗದ ಹಾಗೂ ಮರೆಯಲು ಇಷ್ಟಪಡುವಂತಹ ಒಂದು ಘಟನೆಗಳನ್ನು ಹಂಚಿಕೊಳ್ಳುವಂತೆ ತಿಳಿಸಿದ್ದರು.

    ಅದರಂತೆ ಈ ವಾರ ಕ್ಯಾಪ್ಟನ್ ಆಗಿ ಮಿಂಚುತ್ತಿರುವ ಅರವಿಂದ್, ನಾನು ಹೊರಗಡೆ ಇರುವಂತೆಯೇ ಇಲ್ಲಿಯೂ ಇದ್ದೇನೆ. ಎದುರುತ್ತರ ಮಾತನಾಡುವುದಾಗಲಿ, ಯಾವುದೇ ಘರ್ಷಣೆಯಾಗುತ್ತಿದ್ದರೆ ತುಪ್ಪ ಸುರಿಯುವುದು ಬಹಳ ಕಡಿಮೆ. ಯಾರು ಏನೇ ಹೇಳಿದರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಅದು ನನಗೆ ಎಫೆಕ್ಟ್ ಕೂಡ ಆಗುವುದಿಲ್ಲ. ಆದರೆ ಕೆಲವೊಮ್ಮೆ ಮಿತಿ ಮೀರಿ ಪ್ರಶಾಂತ್ ಹಾಗೂ ನಿಧಿಗೆ ಕೆಲವು ಮಾತನ್ನು ಆಡಿದ್ದೇನೆ. ಅದನ್ನು ಮರೆಯಲು ಇಷ್ಟ ಪಡುತ್ತೇನೆ ಎಂದು ಹೇಳುತ್ತಾರೆ.

    ನಂತರ ನನಗೆ ಮರೆಯುವುದಕ್ಕೆ ಆಗದೇ ಇರುವುದು ಎಂದರೆ ರಿಂಗ್. ಅಲ್ಲದೇ ರಿಂಗ್ ಸಿಕ್ಕಿ ಅರ್ಧ ಗಂಟೆಗೆ ಕಳೆದು ಹೋಗಿತ್ತು. ಆಗ ಇಡೀ ಮನೆ ಒಟ್ಟಾಗಿ ಸೇರಿಕೊಂಡು ರಿಂಗ್ ಹುಡುಕುವುದಕ್ಕೆ ಸಹಾಯ ಮಾಡಿದ್ದು, ನನಗೆ ಯಾವತ್ತಿಗೂ ಮರೆಯುವುದಕ್ಕೆ ಆಗುವುದಿಲ್ಲ. ದಿವ್ಯಾ ಉರುಡಗಗೆ 4 ರಿಂದ 5 ಗಂಟೆ ಈ ರೀತಿ ರಿಂಗ್ ಕಳೆದು ಹೋಗಿದೆ ಎಂಬುವುದು ಗೊತ್ತೆ ಇರಲಿಲ್ಲ. ನೀವು ಮಾಡಿದ ಹೆಲ್ಪ್ ಅನ್ನು ಎಂದು ಕೂಡ ಹೇಳಲು ಆಗುವುದಿಲ್ಲ. ಏಕೆಂದರೆ ಎಲ್ಲರೂ ನಿಮ್ಮದೇ ವಸ್ತು ಕಳೆದು ಹೋಗಿರುವಂತೆ ಹುಡುಕಿದ್ರಿ. ಈ ಗಿಫ್ಟ್ ಹಾಗೂ ನೀವು ಮಾಡಿರೋ ಸಹಾಯ ನನಗೆ ಎಂದಿಗೂ ಮರೆಯುವುದಕ್ಕೆ ಆಗುವುದಿಲ್ಲ.

    ಹಾಗೆಯೇ ಇನ್ನು ಮುಂದಿನ ಐವತ್ತು ದಿನ ಉಳಿದುಕೊಂಡರೆ ಇದೇ ರೀತಿ ಮರೆಯಲಾಗದಂತಹ ಘಟನೆಗಳು ಜಾಸ್ತಿಯಾಗಲಿ, ದಿವ್ಯಾ ಉರುಡುಗ ಅಂತೂ ಮರೆಯಲಾಗದ ಸಾಕಷ್ಟು ನೆನಪುಗಳನ್ನು ಕೊಟ್ಟಿದ್ದಾಳೆ ಎಂದು ಹೇಳುತ್ತಾ ಕಿರುನಗೆ ಬೀರಿದರು.

  • ಅರವಿಂದ್ ಪ್ರಶಾಂತ್ ಮಧ್ಯೆ ಮತ್ತೆ ಹೊತ್ತಿತು ತುಪ್ಪದ ಕಿಡಿ!

    ಅರವಿಂದ್ ಪ್ರಶಾಂತ್ ಮಧ್ಯೆ ಮತ್ತೆ ಹೊತ್ತಿತು ತುಪ್ಪದ ಕಿಡಿ!

    ಬಿಗ್‍ಬಾಸ್ ಮನೆಯಲ್ಲಿ ನಿನ್ನೆ ಯುಗಾದಿ ಹಬ್ಬದ ಸಡಗರ ಸಂಭ್ರಮ ಮನೆಮಾಡಿತ್ತು. ಹಬ್ಬವನ್ನು ವಿಜೃಂಭಣೆಯಾಗಿ ಆಚರಿಸಿದ ಮನೆ ಮಂದಿ ಎಲ್ಲರೂ ಒಟ್ಟಾಗಿ ಕುಳಿತು ಹಬ್ಬದೂಟ ಸವಿದರು. ಈ ವೇಳೆ ಅರವಿಂದ್ ಹಾಗೂ ಪ್ರಶಾಂತ್ ಮಧ್ಯೆ ತುಪ್ಪದ ವಿಚಾರಕ್ಕೆ ಮತ್ತೆ ವಾಗ್ವಾದ ನಡೆದಿದೆ.

    ಊಟ ಮಾಡುವ ವೇಳೆ ವೈಷ್ಣವಿ ಎಲ್ಲರಿಗೂ ಒಂದು ಕಡೆಯಿಂದ ತುಪ್ಪ ಬಡಿಸಿಕೊಂಡು ಬರುತ್ತಿರುತ್ತಾರೆ. ಈ ವೇಳೆ ಅರವಿಂದ್‍ಗೆ ಎರಡು ಬಾರಿ ತುಪ್ಪ ಬಡಿಸಿದ್ಯಾ ಎಂದು ಪ್ರಶಾಂತ್ ಹೇಳುತ್ತಾರೆ.

    ಆಗ ಅರವಿಂದ್ ನೀವು ನನ್ನ ತಟ್ಟೆ ಯಾಕೆ ನೋಡುತ್ತೀರಾ? ನೀವು ಊಟ ಮಾಡಿ, ನಿಮಗೂ ಬೇಕಾದರೆ ಕೇಳಿ ಹಾಕಿಸಿಕೊಳ್ಳಿ. ನನ್ನ ಸುದ್ದಿಗೆ ಯಾಕೆ ಬರುತ್ತೀರಾ, ಅರವಿಂದ್‍ಗೆ ಎರಡು ಬಾರಿ ಹಾಕಿದ್ಯಾ, ನಾಲ್ಕು ಬಾರಿ ಹಾಕಿದ್ಯಾ ಅಂತ ನೀವು ಹಾಕಿಸಿಕೊಳ್ಳಿ ಪ್ರಶಾಂತ್‍ರವರೇ ಎನ್ನುತ್ತಾರೆ. ಈ ವೇಳೆ ಮನೆಯ ಸದಸ್ಯರು ಪರವಾಗಿಲ್ಲ ಇಂದು ಜಗಳ ಬೇಡ ಎಂದು ಸಮಾಧಾನ ಪಡಿಸುತ್ತಾರೆ. ಆಗ ಪ್ರಶಾಂತ್‍ರವರು ಯಾವಾಗಲೂ ನನ್ನ ತಂಟೆಗೆ ಬರುತ್ತಾರೆ. ಯುಗಾದಿಗಾದರೂ ಬಿಟ್ಟು ಬಿಡಿ ಎಂದು ಕೆಂಡಾಕಾರಿದ್ದಾರೆ.

    ನಂತರ ಈ ಬಗ್ಗೆ ಬಾತ್ ರೂಮ್ ಏರಿಯಾದಲ್ಲಿ ಚಕ್ರವರ್ತಿ ಆ ರೀತಿ ಒಪನ್ ಕಮೆಂಟ್ ಮಾಡಬಾರದು ಎಂದು ಅರವಿಂದ್‍ಗೆ ಹೇಳಿದಾಗ, ಅವರೇ ಮಾಡುತ್ತಾರೆ. ನಾವು ಅವರಷ್ಟು ಮಾಡುವುದಿಲ್ಲ. ಅವರು ಮಾಡುವಾಗ ನಾವು ಮುಚ್ಚಿಕೊಂಡು ಇರುವುದಿಲ್ವಾ ಎನ್ನುತ್ತಾರೆ. ಆಗ ಚಕ್ರವರ್ತಿ ನಾನು ಹೇಳುವುದೆಂದರೆ ಎಲ್ಲರ ಎದುರಿಗೆ ಒಪನ್ ಕಮೆಂಟ್ ಮಾಡುವುದು ಸರಿಯಲ್ಲ. ನಾನು ಊಟ ತಿಂಡಿ ವಿಚಾರದಲ್ಲಿ ಅಸಮಾಧಾನ ವ್ಯಕ್ತಪಡಿಸುವುದಿಲ್ಲ. ಬಂದರೆ ಆ ವಿಚಾರವನ್ನು ಖಾಸಗಿಯಾಗಿ ಇಡುತ್ತೇನೆ ಎಂದು ಹೇಳುತ್ತಾರೆ.

  • ಮಾವ ಅನ್ನೋದು ಕೆಟ್ಟ ಪದನಾ- ಪ್ರಶಾಂತ್‍ಗೆ ಕಿಚ್ಚನ ಪ್ರಶ್ನೆ

    ಮಾವ ಅನ್ನೋದು ಕೆಟ್ಟ ಪದನಾ- ಪ್ರಶಾಂತ್‍ಗೆ ಕಿಚ್ಚನ ಪ್ರಶ್ನೆ

    ಬಿಗ್‍ಬಾಸ್ ಕಾರ್ಯಕ್ರಮ ಐದನೇ ವಾರದತ್ತ ಮುನ್ನುಗ್ಗುತ್ತಿದ್ದು, ನಿನ್ನೆ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆ ನಡೆಯಿತು. ಈ ವೇಳೆ ಕಿಚ್ಚ ಸುದೀಪ್ ಪ್ರಶಾಂತ್ ಸಂಬರ್ಗಿಯವರಿಗೆ ಮಾವ ಅನ್ನೋದು ಕೆಟ್ಟ ಪದನಾ ಎಂಬ ಪ್ರಶ್ನೆ ಕೇಳಿದ್ದಾರೆ.

    ಕಳೆದ ವಾರ ಪ್ರಶಾಂತ್ ಸಂಬರ್ಗಿಯವರು ಮಂಜುರನ್ನು ನನ್ನನ್ನು ಮಾವ ಎಂದು ಕರೆಯಬೇಡ ಅಂತಾ ಜಗಳ ಮಾಡಿದ್ದರು. ಈ ವೇಳೆ ಮಂಜು ಹಾಗೂ ಪ್ರಶಾಂತ್ ಮಧ್ಯೆ ದೊಡ್ಡ ವಾಗ್ವಾದವೇ ನಡೆದಿತ್ತು. ಸದ್ಯ ನಿನ್ನೆ ಈ ವಿಚಾರವಾಗಿ ಕಿಚ್ಚ ಸುದೀಪ್ ಪ್ರಶಾಂತ್ ಸಂಬರ್ಗಿ ಜೊತೆ ಪ್ರಸ್ತಾಪಿಸಿದ್ದಾರೆ.

    ಪ್ರಶಾಂತ್‍ರವರೇ, ಮಾಜಿ ಮಾವನಾಗಲು ತೀರ್ಮಾನ ಮಾಡಿದ್ದೇಕೆ ಎಂದು ಕಿಚ್ಚ ಕೇಳುತ್ತಾರೆ. ಆಗ ಮುಂದೆ ಮಾವ ಎಂದು ಹಿಂದೆ ನನ್ನನ್ನು ಗೇಲಿ ಮಾಡುತ್ತಾರೆ ಎಂಬ ಮಾತು ನನ್ನ ಕಿವಿಗೆ ಬಿತ್ತು. ಹಾಗಾಗಿ ಎಲ್ಲರ ಬಳಿ ಹೋಗಿ ನನ್ನ ತಂದೆ-ತಾಯಿ ಇಟ್ಟಿರುವ ಹೆಸರಿಟ್ಟು ಕರೆಯಿರಿ ಪ್ರೀತಿ ಜಾಸ್ತಿ ಇದೆ ಅಂತಾ ಕೇಳಿಕೊಂಡೆ ಎಂದು ಹೇಳುತ್ತಾರೆ.

    ಹಿಂದೆಗಡೆ ಈ ರೀತಿ ಮಾತನಾಡುತ್ತಿದ್ದಾರೆ ಎಂದು ನಿಮಗೆ ಹೇಗೆ ತಿಳಿಯಿತು ಎಂಬ ಪ್ರಶ್ನೆಗೆ, ಹೀಗೆ ಜೆನರಲಿ ಬಂದು ಈ ತರ ಡಬಲ್ ಮಿನಿಂಗ್ ಇದೆ ಎಂದು ಹೇಳಿದರು. ಆಗ ಬೇಡ ಯಾಕೆ ನನ್ನ ಇಮೇಜ್ ಹಾಳು ಮಾಡಿಕೊಳ್ಳಬೇಕು ಎಂದು ಒಬ್ಬೊಬ್ಬರಿಗೂ ಹೋಗಿ ವೈಯಕ್ತಿಕವಾಗಿ ಮನವಿ ಮಾಡಿಕೊಂಡಿದ್ದೇನೆ ಎಂದರು.

    ನಂತರ ಈ ರೀತಿ ಮಾಹಿತಿ ಕೊಟ್ಟವರು ನಾನು ಹೇಳಿದ್ದು ಸುಳ್ಳು ಎಂದು ಕೂಡ ಹೇಳುತ್ತಾರೆ. ಆಗ ನೀವು ಸೀರಿಯಸ್ ಆಗಿ ತೆಗೆದುಕೊಳ್ಳುವ ಮುನ್ನ ಯೋಚನೆ ಮಾಡಬೇಕಾಗಿತ್ತು ಎಂದಾಗ, ನಾನು ಈ ವಿಚಾರವಾಗಿ ಕೇಳಿದಾಗ ನಾನು ಹೇಳಿದ್ದು ಸುಳ್ಳು, ಆದರೆ ಹೊರಗಡೆ ಈ ರೀತಿ ದ್ವಂಧ ಅರ್ಥ ಬರುತ್ತದೆ. ನಿನ್ನ ಹೆಸರಿರುವಾಗ ನೀನು ಯಾಕೆ ಈ ರೀತಿ ಕರೆಸಿಕೊಳ್ಳುತ್ತಿದ್ದಿಯಾ ಎಂದು ಹೇಳಿದರು. ಆಗ ನನಗೂ ಆಚೆ ಇರಲಿ, ಬಿಡಲಿ ನನ್ನ ಹೆಸರಿನಲ್ಲಿ ಕರೆಸಿಕೊಳ್ಳಬೇಕು ಎಂದು ಅನಿಸಿತು ಎಂದು ಹೇಳುತ್ತಾರೆ.

    ಈ ವೇಳೆ ಪ್ರತಿಕ್ರಿಯಿಸಿದ ಮಂಜು, ನಾನು ಒಬ್ಬರನ್ನು ಗೇಲಿ ಮಾಡುತ್ತೇನೆ, ರೇಗಿಸುತ್ತೇನೆ ಎಂದರೆ ತುಂಬಾ ಪ್ರೀತಿಸುತ್ತೇನೆ ಎಂದು ಅರ್ಥ. ಇಲ್ಲಿಗೆ ಬಂದು 40 ದಿನ ಆಗಿದೆ. ಅಂದಿನಿಂದ ನಾನು ಮಾವ ಎಂದು ಕರೆದುಕೊಂಡು ಬರುತ್ತಿದ್ದೇನೆ. ಆದರೆ ಸಡನ್ ಆಗಿ ಹಾಗೇ ಕರೆಯಬೇಡ ಎಂದಾಗ ನಾನು ಆಗುವುದಿಲ್ಲ ಎಂದು ಹೇಳಿದೆ. ಈ ಮಾತನ್ನು ಮುಂಚೆಯೇ ಹೇಳಿದ್ದರೆ ಬಹುಶಃ ಒಪ್ಪಿಕೊಳ್ಳುತ್ತಿದ್ದೆ. ಆದರೆ ಚಕ್ರವರ್ತಿಯವರು ಬಂದ ನಂತರ ಅವರ ಮಾತನ್ನು ಕೇಳಿ ಇವರು ಮಾತನಾಡಿದ್ದು, ನನಗೆ ಇಷ್ಟವಾಗಲಿಲ್ಲ. ಬೇರೆಯವರ ಮಾತು ಕೇಳಿ ನೀವು ಹೇಗೆ ನಿರ್ಧರಿಸುತ್ತೀರಾ ಎನ್ನುವುದು ನನ್ನ ಅಭಿಪ್ರಾಯ ಎನ್ನುತ್ತಾರೆ.

  • ದಿವ್ಯಾ ಸುರೇಶ್‍ರನ್ನೇ ಟಾರ್ಗೆಟ್ ಮಾಡ್ತಿರೋದ್ಯಾಕೆ ಪ್ರಶಾಂತ್?

    ದಿವ್ಯಾ ಸುರೇಶ್‍ರನ್ನೇ ಟಾರ್ಗೆಟ್ ಮಾಡ್ತಿರೋದ್ಯಾಕೆ ಪ್ರಶಾಂತ್?

    ಬಿಗ್‍ಬಾಸ್ ಮನೆಯಲ್ಲಿ ದಿನೇ ದಿನೆ ಕಾಂಪಿಟೇಷನ್ ಹೆಚ್ಚಾಗುತ್ತದೆ. ಸದ್ಯ ನಿನ್ನೆ ಎಲಿಮೀನೆಷನ್ ನಂತರ ಪ್ರಶಾಂತ್ ಸಂಬರ್ಗಿ ಮೈಂಡ್ ಗೇಮ್ ಆಡಲು ಸ್ಟಾರ್ಟ್ ಮಾಡಿದ್ದಾರೆ. ಬಿಗ್‍ಬಾಸ್ ಮನೆಯಲ್ಲಿ ತಾವು ಉಳಿಯಬೇಕಾದರೆ ತಮಗೆ ಕಾಂಪಿಟೇಷನ್ ನೀಡುತ್ತಿರುವ ಸ್ಪರ್ಧಿ ದಿವ್ಯಾ ಸುರೇಶ್‍ರನ್ನು ಸೋಲಿಸಬೇಕೆಂದು ಪ್ರಶಾಂತ್ ನಿನ್ನೆ ಶಮಂತ್ ಜೊತೆ ಕುಳಿತು ಚರ್ಚೆ ನಡೆಸಿದ್ದಾರೆ.

    ಈ ಮನೆಯಲ್ಲಿ ಕಾಂಪಿಟೇಷನ್ ಇರುವುದೆಂದರೆ ನನಗೆ, ನಿನಗೆ, ದಿವ್ಯಾ ಸುರೇಶ್, ಶುಭಾ ಪೂಂಜಾ, ನಿಧಿ, ಅರವಿಂದ್ ಎಂದು ಪ್ರಶಾಂತ್ ಹೇಳುತ್ತಾರೆ. ಆಗ ಶಮಂತ್ ಶುಭ, ನಿಧಿ ಫಿಲ್ಮ್ ಸ್ಟಾರ್ಸ್ ಹಾಗೂ ಅರವಿಂದ್ ಒಳ್ಳೆ ಆಟಗಾರ ಹಾಗಾಗಿ ಈ ವಾರ ಮನೆಯಿಂದ ಈ ಮೂವರು ಹೋಗುವುದಿಲ್ಲ ಅನಿಸುತ್ತದೆ. ಆದರೆ ಮಿಕ್ಕಿರುವ ಡಮ್ಮಿ ಪೀಸ್‍ಗಳೆಂದರೆ ನಾವೇ ಎಂದು ಶಮಂತ್, ಪ್ರಶಾಂತ್‍ಗೆ ಹೇಳುತ್ತಾ ನಗುತ್ತಾರೆ.

    ಆಗ ಪ್ರಶಾಂತ್ ಹೌದು, ಉಳಿದ ಮೂವರಲ್ಲಿ ನಾನು, ನೀನು, ದಿವ್ಯಾ ಸುರೇಶ್ ಬರುತ್ತೇವೆ. ಹಾಗಾಗಿ ಟಾರ್ಗೆಟ್ ಮಾಡಿ ಎಲ್ಲ ಗೇಮ್ ಕೂಡ ಆಡಿ ಅವಳನ್ನೇ ಹೊಡೆಯಬೇಕು. ಇವತ್ತಿಗೆ ಲೈಫ್ ಮುಗಿಯುತ್ತಿದೆ ಇನ್ನೂ ಸಾಯುತ್ತಿದ್ದೇವೆ ಅಂದುಕೊಂಡು ಆಟ ಆಡಬೇಕು. ದಿವ್ಯಾ ಸುರೇಶ್, ಕ್ಯಾಪ್ಟನ್ ಮಂಜು ಅವಳ ಪರವಾಗಿರುತ್ತಾನೆ ಎಂಬ ವಿಶ್ವಾಸ ಹೊಂದಿದ್ದಾಳೆ. ದಿವ್ಯಾ ನಾನು ಡಿಫರೆಂಟ್, ಸ್ಟ್ರಾಂಗ್, ನಾನು ಟಾಸ್ಕ್‍ನಲ್ಲಿ ಪಂಟ್ರು ಎಂದು ಅವಳಿಗೆ ಅವಳೇ ಹೇಳಿಕೊಳ್ಳುತ್ತಾಳೆ. ಹೇಳಬೇಕೆಂದರೆ ಅವಳು ನೋಡುವುದಕ್ಕೆ ಚೆನ್ನಾಗಿದ್ದಾಳೆ, ಸೂಪರ್ ಆಗಿರುವ ಮೇಕಪ್ ಹಾಕುತ್ತಾಳೆ ಅಷ್ಟೇ. ಹಾಗಾಗಿ ನೀನು ಮೊಟಿವೇಟ್ ಮಾಡಿಕೊಂಡು ಈ ವಾರ ಗೇಮ್ ಚೆನ್ನಾಗಿ ಆಡಿದರೆ ಮುಂದಕ್ಕೆ ಹೋಗುತ್ತೇವೆ. ನಾನು ನೀನು ಸೇವ್ ಆಗಬೇಕೆಂದರೆ ನಮ್ಮ ಟಾರ್ಗೆಟ್ ದಿವ್ಯಾ ಸುರೇಶ್‍ರನ್ನು ಮಾಡಿಕೊಳ್ಳಬೇಕು.

    ಡಿಎಸ್ ಗಿಂತ ನಾನು, ಸುಪಿರೀಯರ್, ಟ್ಯಾಲೆಂಟೆಡ್, ಡಿಎಸ್‍ಗಿಂತ ಚೆನ್ನಾಗಿ ಆಟ ಆಡುತ್ತೇನೆ ಅನ್ನುವುದನ್ನು ತಲೆಯಲ್ಲಿ ಇಟ್ಟುಕೊಂಡು ಆಟ ಆಡಬೇಕು ಎನ್ನುತ್ತಾರೆ. ಸದ್ಯ 5 ಜನದಲ್ಲಿರೀಗ ಅವಳೇ ವೀಕೆಸ್ಟ್ ಕಂಟೆಸ್ಟೆಂಟ್. ದಿವ್ಯಾ ಸುರೇಶ್ ಜೊತೆ ಫ್ರೆಂಡ್ ಶಿಪ್ ಮಾಡುವುದನ್ನು ಹೇಳಿಕೊಟ್ಟೆ, ಈಗ ದಿವ್ಯಾ ಸುರೇಶ್‍ನ ಹೊಡೀಬೇಕು ನೀನು ಎಂದು ಪ್ರಶಾಂತ್ ಶಮಂತ್‍ಗೆ ಹೇಳಿದ್ದಾರೆ.

  • ಹುಡುಗೀರನ್ನು ಪಟಾಯಿಸಲು ಶಮಂತ್‍ಗೆ ಪ್ರಶಾಂತ್ ಕೊಟ್ಟ ಟಿಪ್ಸ್ ಏನು ಗೊತ್ತಾ?

    ಹುಡುಗೀರನ್ನು ಪಟಾಯಿಸಲು ಶಮಂತ್‍ಗೆ ಪ್ರಶಾಂತ್ ಕೊಟ್ಟ ಟಿಪ್ಸ್ ಏನು ಗೊತ್ತಾ?

    ಪ್ರತಿವಾರದಂತೆ ಈ ವಾರ ಕೂಡ ಸೂಪರ್ ಸಂಡೇ ವಿತ್ ಕಿಚ್ಚ ಸುದೀಪ್ ಕಾರ್ಯಕ್ರಮ ನಡೆಯಿತು. ಈ ವೇಳೆ ಬಿಗ್‍ಬಾಸ್ ಮನೆಯಲ್ಲಿ ಹುಡುಗಿಯರನ್ನು ಪಟಾಯಿಸಲು ಏನು ಮಾಡಬೇಕು ಎಂಬ ಟಾಪಿಕ್ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆದಿದೆ.

    ಹೌದು.. ಕಳೆದ ವಾರ ಪ್ರಶಾಂತ್ ಸಂಬರ್ಗಿ ಹುಡುಗಿಯನ್ನು ಪಟಾಯಿಸುವುದು ಹೇಗೆ ಎಂದು ನೀಡಿದ ಕೆಲವು ಟಿಪ್ಸ್‍ಗಳನ್ನು ಶಮಂತ್ ಕಿಚ್ಚನ ಮುಂದೆ ರಿವೀಲ್ ಮಾಡಿದ್ದಾರೆ. ಮೊದಲಿಗೆ ಹುಡುಗಿಯರು ಸಾಫ್ಟ್ ಕಾರ್ನರ್ ಇರುವ ವಿಚಾರವನ್ನು ಪ್ರಸ್ತಾಪಿಸಿ ಅವರ ಮನಸ್ಸನ್ನು ಗೆಲ್ಲಬೇಕು. ಆಗ ಅವರನ್ನು ಹ್ಯಾಂಡಲ್ ಮಾಡಲು ಸುಲಭವಾಗುತ್ತದೆ ಎಂದು ಹೇಳಿದ್ದರು ಎನ್ನುತ್ತಾರೆ.

    ಬಳಿಕ ಪ್ರಶಾಂತ್, ಶಮಂತ್ ಒಮ್ಮೆ ಬಂದು ನನ್ನ ಬಳಿ ದಿವ್ಯಾ ಸುರೇಶ್ ಯಾವಾಗಲೂ ನನ್ನನ್ನು ಕೆಟ್ಟ ದೃಷ್ಟಿಯಲ್ಲಿಯೇ ನೋಡುತ್ತಾಳೆ, ಕೋಪ ಮಾಡಿಕೊಂಡಿರುತ್ತಾಳೆ. ನಾನು ಫ್ರೆಂಡ್ ಆಗ ಬೇಕು ಏನಾದರೂ ಐಡಿಯಾ ಕೊಡು ಎಂದು ಕೇಳಿದ್ದ. ಹಾಗಾಗಿ ದಿವ್ಯಾ ಸುರೇಶ್ ಕ್ವಾಲಿಟಿ ನೋಡಿಕೊಂಡು ಹೇಗೆ ಮಾತನಾಡಬೇಕು, ಹಾಗೇ ಮಾತನಾಡು, ಇರಿಟೆಟ್ ಮಾಡಬೇಡ ಎಂದು ಗೈಡೆನ್ಸ್ ನೀಡಿದ್ದೇನೆ. ಶಮಂತ್ ಫಸ್ಟ್ ಜೋರಾಗಿ ಮಾತನಾಡುವುದನ್ನು ಕಲಿಯಬೇಕು ಹಾಗೂ ಪೀಠಿಕೆ ಹಾಕಿ ಮಾತನಾಡುವುದನ್ನು ಬಿಡಬೇಕು ಎಂದು ಹೇಳಿದ್ದೇನೆ ಅಷ್ಟೇ. ಅದು ಬಿಟ್ಟರೆ ಬೇರೆನೂ ಇಲ್ಲ ಎಂದು ಹೇಳುತ್ತಾರೆ.

    ಆಗ ಶಮಂತ್ ಇಷ್ಟೇ ಹೇಳಿಲ್ಲ. ಮೊದಲಿಗೆ ಟಾರ್ಗೆಟ್ ಇಂಪಾರ್ಟೆಟ್. ಫಸ್ಟ್ ಒಳ್ಳೆಯವರು ಅನಿಸಿಕೊಳ್ಳಬೇಕು ನಂತರ ಫ್ರೆಂಡ್ ಶಿಪ್ ಬೆಳೆಸಿಕೊಳ್ಳಬೇಕು. ನೆಕ್ಸ್ಟ್ ಏನು ಮಾಡಬೇಕೆಂದು ಹೇಳುತ್ತೇನೆ ಎಂದು ಹೇಳಿದ್ದರು ಎನ್ನುತ್ತಾರೆ.

    ನಂತರ ಸುದೀಪ್ ಪ್ರಶಾಂತ್‍ರವರೆ ವಾಟ್ ನೆಕ್ಸ್ಟ್ ಎಂದು ಕೇಳಿದಾಗ, ಕಾಮನ್ ಟಾಪಿಕ್ ಹುಡುಕಿಕೊಂಡು ಮಾತನಾಡಬೇಕು. ಮೊದಲಿಗೆ ಎಜುಕೇಷನ್ ಬ್ಯಾಗ್‍ರೌಂಡ್ ಅಥವಾ ಫ್ಯಾಮಿಲಿ ಬ್ಯಾಗ್ ರೌಂಡ್ ವಿಚಾರವಾಗಿ ಮಾತನಾಡಬೇಕು. ಉದಾಹರಣೆಗೆ ದಿವ್ಯಾ ಸುರೇಶ್‍ಗೆ ಮ್ಯೂಸಿಕ್ ಹಾಗೂ ಸ್ಪೋರ್ಸ್ ಇಷ್ಟ ಹಾಗಾಗಿ ಈ ಟಾಪಿಕ್ ಬಗ್ಗೆ ಮಾತನಾಡು ಇದರಿಂದ ಅವಳಿಗೆ ಹತ್ತಿರವಾಗುತ್ತಿಯಾ ಎಂದು ಶಮಂತ್‍ಗೆ ಹೇಳಿದ್ದೆ ಎಂದು ಹೇಳುತ್ತಾರೆ.

     

    ಒಟ್ಟಾರೆ ಪ್ರಶಾಂತ್ ಶಮಂತ್‍ಗೆ ನೀಡಿದ್ದ ಟಿಪ್ಸ್ ಕೇಳಿ ಮನೆಮಂದಿಯೆಲ್ಲಾ ಅಚ್ಚರಿಯಿಂದ ಎದ್ದು-ಬಿದ್ದು ನಕ್ಕಿದ್ದಾರೆ.

  • ಕಳಪೆ ಬೋರ್ಡ್ ನೀಡಿದ್ದಕ್ಕೆ ಜೈಲಿನಲ್ಲಿ ಪ್ರಶಾಂತ್ ಪ್ರತಿಭಟನೆ!

    ಕಳಪೆ ಬೋರ್ಡ್ ನೀಡಿದ್ದಕ್ಕೆ ಜೈಲಿನಲ್ಲಿ ಪ್ರಶಾಂತ್ ಪ್ರತಿಭಟನೆ!

    ಪ್ರತಿವಾರದಂತೆ ಈ ವಾರ ಕೂಡ ಬಿಗ್‍ಬಾಸ್ ಮನೆಯಲ್ಲಿ ಒಬ್ಬ ಕಳಪೆ ಪ್ರದರ್ಶನ ನೀಡಿದ ವ್ಯಕ್ತಿ ಹಾಗೂ ಒಬ್ಬ ಅತ್ಯುತ್ತಮ ಸದಸ್ಯನನ್ನು ಆರಿಸುವಂತೆ ಮನೆಯ ಸದಸ್ಯರಿಗೆ ತಿಳಿಸಲಾಯಿತು.

    ಅದರಂತೆ ಮಂಜು, ನಾನು ಪ್ರಶಾಂತ್ ಸಂಬರ್ಗಿಯವರ ಹೆಸರನ್ನು ಸೂಚಿಸಲು ಇಷ್ಟ ಪಡುತ್ತೇನೆ. ಮನೆಯ ಕೆಲಸ ಸರಿಯಾಗಿ ಮಾಡುವುದಿಲ್ಲ. ಅದಕ್ಕಿಂತಲೂ ನನಗೆ ದುಬಾರಿ ಮತ್ತೊಂದನ್ನು ಹಾಡಿದ್ದಾರೆ. ಒಂದು ಟಾಸ್ಕ್‍ನಲ್ಲಿ ಗ್ರೂಪ್ ಅಂತ ಬಂದಾಗ ಏನೇ ತಪ್ಪು ಮಾಡಿದ್ದರು ಒಪ್ಪಿಕೊಳ್ಳಬೇಕು, ಇಲ್ಲ ನಿಧಾನವಾಗಿ ಬಿಡಿಸಿ ಹೇಳಬೇಕೆಂದು ಹೇಳಿದರು. ನಂತರ ರಘು ನಾನು ಪ್ರಶಾಂತ್ ಎಂದು ಹೇಳುತ್ತೇನೆ. ಕಾರಣ ಕೆಲವೊಂದು ಅನಾವಶ್ಯಕ ಕಮೆಂಟ್‍ಗಳು ಕ್ಯಾಪ್ಟನ್ ಮಾತಿಗೆ ವಿರೋಧ ವ್ಯಕ್ತಪಡಿಸುವುದು ಇನ್ನಿತರ ವಿಚಾರಗಳು ಹಿಡಿಸಲಿಲ್ಲ ಎನ್ನುತ್ತಾರೆ. ಅಲ್ಲದೆ ನಿಧಿ ಸುಬ್ಬಯ್ಯ ಅವರ ಗ್ರೂಪ್‍ನಲ್ಲಿದ್ದಾಗ ನಾನು 2-3 ಭಾರೀ ಡಿಮೊಟಿವೇಟ್ ಆಗಲು ಕಾರಣ ಅವರು, ಡಿ ಮೋಟಿವೇಟ್ ಮಾಡುವುದು ಅವರ ಶಕ್ತಿ ಎಂದು ಕೊಳ್ಳುತ್ತೇನೆ ಎಂದು ಪ್ರಶಾಂತ್ ಹೆಸರನ್ನು ಹೇಳುತ್ತಾರೆ.

    ಈ ವೇಳೆ ಮಾತನಾಡಿದ ಪ್ರಶಾಂತ್ ಸಂಬರ್ಗಿ ಮಂಜು ಹಾಗೂ ನಿಧಿ ಆಯ್ಕೆ ಪೂರ್ವ ನಿಯೋಜಿತ, ಬುಧವಾರ ಮಂಜು ನನಗೆ ಈ ವಾರ ಕಳಪೆ ಬೋರ್ಡ್ ನಿನಗೆ ಹಾಕುತ್ತೇನೆ ಎಂದು ಮೊದಲೇ ಹೇಳಿದ್ದರು. ಅಲ್ಲದೆ ನಿಧಿ ಕೂಡ ಸ್ವಿಮಿಂಗ್ ಪೂಲ್ ಬಳಿ ಕಾಯ್ತಿರು ಈ ವಾರ ಕಳಪೆ ಬೋರ್ಡ್ ಹಾಕುತ್ತೇನೆ ಎಂದು ಹೇಳಿರುವುದಾಗಿ ಆರೋಪಿಸಿದರು. ನಂತರ ನಿಧಿ ಹಾಗೂ ಮಂಜು ನಾವು ಈ ಮನೆಯಲ್ಲಿ ಎಲ್ಲರಿಗೂ ಈ ರೀತಿ ಹಾಸ್ಯ ಮಾಡಲು ಹೇಳುತ್ತೇವೆ ಆದರೆ ಯಾವುದೇ ರೀತಿಯ ಪೂರ್ವ ನಿಯೋಜಿತ ಯೋಚನೆ ಇಲ್ಲ ಎಂದು ಸ್ಪಷ್ಟಪಡಿಸುತ್ತಾರೆ.

    ಹೀಗೆ ವೈಷ್ಣವಿ ಗೌಡ, ದಿವ್ಯಾ ಉರುಡುಗ, ಶಂಕರ್, ಶಮಂತ್ ಹಾಗೂ ಕ್ಯಾಪ್ಟನ್ ವಿಶ್ವನಾಥ್ ಕೂಡ ಪ್ರಶಾಂತ್ ಸಂಬರ್ಗಿಯವರನ್ನು ಈ ವಾರದ ಕಳಪೆ ಪ್ರದರ್ಶನ ತೋರಿದ ಸದಸ್ಯ ಎಂದು ಸೂಚಿಸಿ ಕಳಪೆ ಬೋರ್ಡ್ ನೀಡುತ್ತಾರೆ.

    ಬಳಿಕ ಕಳಪೆ ಬೋರ್ಡ್ ಧರಿಸಿ ಜೈಲು ಸೇರಿದ ಪ್ರಶಾಂತ್, ಮನೆಯ ಗುಂಪುಗಾರಿಕೆಯನ್ನು ಖಂಡಿಸಿ ನಾನು 24 ಗಂಟೆಗಳ ಕಾಲ ಮೌನವಾಗಿದ್ದು, ಯಾವುದೇ ಆಹಾರವನ್ನು ಸೇವಿಸುವುದಿಲ್ಲ ಎಂದು ಪ್ರಶಾಂತ್ ಸಂಬರ್ಗಿ ಇದೀಗ ಪ್ರತಿಭಟನೆ ನಡೆಸುತ್ತಿದ್ದಾರೆ.

  • ‘ಆಸಿಂಕೋಜಿಲ್ಲ’ ಶೀರ್ಷಿಕೆ ಟ್ರೈಲರ್ ಅನಾವರಣ

    ‘ಆಸಿಂಕೋಜಿಲ್ಲ’ ಶೀರ್ಷಿಕೆ ಟ್ರೈಲರ್ ಅನಾವರಣ

    ಬೆಂಗಳೂರು: ಶೀರ್ಷಿಕೆಯಿಂದಲೇ ಕುತೂಹಲ ಕೆರಳಿಸಿ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಕರೆತರುವ ಪ್ರಯತ್ನ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿದೆ. ಇಲ್ಲೊಂದು ಚಿತ್ರತಂಡ ಈಗಾಗಲೇ ತನ್ನ ಚಿತ್ರೀಕರಣವನ್ನೆಲ್ಲಾ ಮುಗಿಸಿಕೊಂಡ ನಂತರ ಶೀರ್ಷಿಕೆಯನ್ನು ಅನಾವರಣ ಮಾಡಿದೆ. ಜೊತೆಗೆ ಚಿತ್ರದ ಟ್ರೈಲರ್ ಹಾಗೂ ಆಡಿಯೋ ಕೂಡ ಬಿಡುಗಡೆ ಮಾಡಿದೆ. ಚಲನಚಿತ್ರ ಕಲಾವಿದರ ಸಂಘದ ಆವರಣದಲ್ಲಿ ನಡೆದ ಈ 3 ಕಾರ್ಯಕ್ರಮಗಳಲ್ಲಿ ಸದಸ್ಯರೆಲ್ಲರೂ ಭಾಗವಹಿಸಿದ್ದರು. ಶಮನ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದ ಹೆಸರು `ಆಸಿಂಕೋಜಿಲ್ಲ’. ನಿರ್ಮಾಪಕ ಭಾಮ ಹರೀಶ್ ಈ ಚಿತ್ರದ ಟೈಟಲ್ ಅನಾವರಣಗೊಳಿಸಿದರು. ಅಲ್ಲದೆ ನಟ ಸುಮಂತ್ ಶೈಲೇಂದ್ರ ಈ ಚಿತ್ರದ ಟ್ರೈಲರ್ ಗೆ ಚಾಲನೆ ನೀಡಿದರು. ಮಂಜುನಾಥ್ ಕೆ.ಸಿ. ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯ ರಚಿಸಿದ್ದಾರೆ.

    ಈ ಸಂದರ್ಭದಲ್ಲಿ ನಿರ್ದೇಶಕ ಶಮನ್ ಮಾತನಾಡುತ್ತಾ ಈ ಚಿತ್ರವನ್ನು ಡಿಫರೆಂಟಾಗಿ ಟ್ರೈ ಮಾಡಿದ್ದೇವೆ. ವಿಜ್ಞಾನಿಯೊಬ್ಬ ಸಮಾಜದಲ್ಲಿ ಒಂದು ಬದಲಾವಣೆ ತರಬೇಕೆಂದು ಯೋಚಿಸಿ ಕಾಡಿಗೆ ಹೋಗಿ ಹೊಸ ಸಾಹಸವನ್ನು ಮಾಡುತ್ತಾನೆ. ಆ ಪ್ರಕ್ರಿಯೆಗೆ ಆತ ಕೊಡುವ ಹೆಸರೇ `ಆಸಿಂಕೋಜಿಲ್ಲ’. ಈ ಸಂದರ್ಭದಲ್ಲಿ ಆತನ ಜೊತೆಗೆ ಇನ್ನೂ ನಾಲ್ಕು ಜನ ವಿಶೇಷ ವ್ಯಕ್ತಿಗಳು ಸೇರಿಕೊಳ್ಳುತ್ತಾರೆ. ಕಾಡಿನಲ್ಲಿ ಅವರಿಗೆ ಎದುರಾದ ಸಮಸ್ಯೆ ಏನು? ಅದರಿಂದ ಅವರು ಹೇಗೆ ಹೊರಬಂದರು? ಎಂಬುದನ್ನು ಆಸಿಂಕೋಜಿಲ್ಲ ಹೇಳುತ್ತದೆ. ಬೆಂಗಳೂರು, ಶಿವಮೊಗ್ಗ, ಮೈಸೂರು ಸುತ್ತಮುತ್ತ 50 ದಿನಗಳ ಕಾಲ ಚಿತ್ರೀಕರಣ ನಡೆಸಿದ್ದೇವೆ ಎಂದು ಹೇಳಿದರು. ಈ ಚಿತ್ರದಲ್ಲಿ 2 ಹಾಡುಗಳಿದ್ದು, ಅಮೋಘವರ್ಷ ಸಂಗೀತ ಸಂಯೋಜನೆ ಮಾಡಿದ್ದಾರೆ. ಸೋಮಶೇಖರ್ ಶೆಟ್ಟಿ ಈ ಚಿತ್ರಕ್ಕೆ ಬಂಡಾವಳ ಹೂಡಿ ನಿರ್ಮಾಣ ಮಾಡಿದ್ದಾರೆ. ಹಿರಿಯ ನಟ ಹೊನ್ನಾವಳ್ಳಿ ಕೃಷ್ಣ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ನಿರ್ಮಾಪಕ ಸೋಮಶೇಖರ ಶೆಟ್ಟಿ ಮಾತನಾಡುತ್ತಾ ಈ ಚಿತ್ರದ ಕಥೆ ಹಲವಾರು ವಿಶೇಷತೆಗಳನ್ನು ಹೊಂದಿದೆ. ಈ ಚಿತ್ರದಲ್ಲಿ ಕೆಲಸ ಮಾಡಿದವರೆಲ್ಲ ಹೊಸಬರಾದರು ಹೊಸದಾಗಿ ಪ್ರಯತ್ನ ಮಾಡಿದ್ದಾರೆ. ಮುಂದಿನ ತಿಂಗಳು ಚಿತ್ರವನ್ನು ಬಿಡುಗಡೆ ಮಾಡುವ ಪ್ಲಾನ್ ಹಾಕಿಕೊಂಡಿದ್ದೇವೆ ಎಂದು ಹೇಳಿದರು.

    ವಿಷ್ಣು ತೇಜ, ಪ್ರಶಾಂತ್, ತಾರಕ್ ಸೋನಮ್ ರಾಯ್, ಭಾನು ಪ್ರಿಯ ಶೆಟ್ಟಿ, ಮೇಘಶ್ರೀ ಹಾಗೂ ರಕ್ಷಿಕ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕ ನಟ ವಿಷ್ಣು ತೇಜ ಮಾತನಾಡಿ ಈ ಹಿಂದೆ ತೆಲುಗು ಚಿತ್ರವೊಂದರಲ್ಲಿ ನಟಿಸಿದ್ದೆ ಇದು ನನ್ನ 2ನೇ ಚಿತ್ರ ಎಂದರೆ ಮತ್ತೊಬ್ಬ ನಟ ಪ್ರಶಾಂತ್ ಮಾತನಾಡಿ ಮುಂಗೋಪಿ ಯುವಕನ ಪಾತ್ರ ಸಿಸ್ಟಂನಲ್ಲಿ ಬದಲಾವಣೆ ತರಲು ಹೋಗಿ ಏನೇನೆಲ್ಲಾ ಮಾಡುತ್ತಾನೆ ಅನ್ನೋದೆ ನನ್ನ ಪಾತ್ರ ಎಂದು ಹೇಳಿಕೊಂಡರು. ನಂತರ ನಟಿಯರಾದ ರಕ್ಷಿಕ, ಭಾನುಪ್ರಿಯ ಶೆಟ್ಟಿ ಹಾಗೂ ಸೋನಮ್ ರಾಯ್ ಕೂಡ ತಮ್ಮ ತಮ್ಮ ಪಾತ್ರಗಳ ಬಗ್ಗೆ ಚುಟುಕಾಗಿ ಹೇಳಿಕೊಂಡರು.

  • ನನ್ನ ಮನೆಗೆ ಬಂದು ಒತ್ತಾಯ ಪೂರ್ವಕವಾಗಿ ಅತ್ಯಾಚಾರ ಮಾಡ್ದ- ಅಯೋಗ್ಯ ಸಹನಟಿ ದೃಶ್ಯ

    ನನ್ನ ಮನೆಗೆ ಬಂದು ಒತ್ತಾಯ ಪೂರ್ವಕವಾಗಿ ಅತ್ಯಾಚಾರ ಮಾಡ್ದ- ಅಯೋಗ್ಯ ಸಹನಟಿ ದೃಶ್ಯ

    – ಗೊತ್ತಿಲ್ಲದೇ ಅಶ್ಲೀಲ ಫೋಟೋ ಕಲೆಕ್ಟ್ ಮಾಡ್ಕೊಂಡ
    – ನಾನು ಸಿಗಲಿಲ್ಲ ಎಂದು ಪ್ರತೀಕಾರ

    ಬೆಂಗಳೂರು: ಅಯೋಗ್ಯ ಸಿನಿಮಾದ ಸಹ ನಟಿಯಾಗಿರುವ ದೃಶ್ಯ ಮೇಲೆ ಕೆಲವೊಂದು ಆರೋಪಗಳು ಕೇಳಿ ಬಂದಿದ್ದವು. ಇದೀಗ ಪ್ರಶಾಂತ್ ನನ್ನ ಹಿಂದೆ ಬಿದ್ದು ಒತ್ತಾಯ ಪೂರ್ವಕವಾಗಿ ಅತ್ಯಾಚಾರ ಮಾಡಿ. ಈಗ ಸುಳ್ಳು ಆರೋಪಗಳನ್ನು ಮಾಡಿದ್ದಾನೆ ಎಂದು ದೃಶ್ಯ ಅವರು ಹೇಳಿದ್ದಾರೆ.

    ತನ್ನ ಮೇಲೆ ಬಂದಿರುವ ಆರೋಪದ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ದೃಶ್ಯ, ನಾನು ಆತನ ಫೇಸ್‍ಬುಕ್, ಇನ್ ಸ್ಟಾಗ್ರಾಮ್ ಖಾತೆಯನ್ನು ಹ್ಯಾಕ್ ಮಾಡಿದ್ದೀನಿ ಎಂದು ಹೇಳಿದ್ದಾನೆ. ಆದರೆ ಆತನಿಗೆ ಫೇಸ್‍ಬುಕ್ ಅಕೌಂಟ್ ಇಲ್ಲ. ಆತ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಇತ್ತೀಚೆಗೆ ಮಾತ್ರ ಇನ್‍ಸ್ಟಾಗ್ರಾಮ್ ನಲ್ಲಿ ಕಾಣಿಸಿಕೊಂಡಿದ್ದಾನೆ. ನಾನು ಅವನ ಫೇಸ್‍ಬುಕ್, ಇನ್ ಸ್ಟಾಗ್ರಾಮ್ ನೋಡುತ್ತಿದ್ದೆ ಎಂದು ಸುಳ್ಳು ಆರೋಪ ಮಾಡಿದ್ದಾನೆ. ಆದರೆ ಆತನೇ ನನ್ನ ಫೇಸ್‍ಬುಕ್, ಇನ್ ಸ್ಟಾಗ್ರಾಮ್ ನೋಡುತ್ತಿದ್ದನು. ಜೊತೆಗೆ ಎರಡು ವರ್ಷದಿಂದ ಲಿವಿಂಗ್ ಟುಗೆದರ್ ನಲ್ಲಿದ್ದೆ ಎಂದು ಹೇಳಿದ್ದಾನೆ. ಅದು ಸುಳ್ಳು, ಯಾಕೆಂದರೆ ಪ್ರಶಾಂತ್ ನನಗೆ ಒಂದು ವರ್ಷದಿಂದ ಮಾತ್ರ ಪರಿಚಯವಿದೆ. ಹೀಗಾಗಿ ಆತ ತಪ್ಪು ಮಾಹಿತಿ ಕೊಟ್ಟಿದ್ದಾನೆ ಎಂದು ಹೇಳಿದ್ದಾನೆ.

    ದೃಶ್ಯ ಹೇಳಿದ್ದು ಏನು?
    ನಾನು ಮಾಡೆಲಿಂಗ್ ಮಾಡುತ್ತಿದ್ದ ಸಮಯದಲ್ಲಿ ಫೋಟೋಶೂಟ್ ಮಾಡಿಸುವಾಗ ಪ್ರಶಾಂತ್ ಪರಿಚಯವಾಗಿದ್ದನು. ಪರಿಚಯವಾಗಿ ಸ್ನೇಹವಾಗಿ ಇಬ್ಬರು ಎರಡು ತಿಂಗಳ ಲಿವಿಂಗ್ ರಿಲೇಷನ್ ಶಿಪ್‍ನಲ್ಲಿದ್ವಿ. ದಿನ ಕಳೆದಂತೆ ಪ್ರಶಾಂತ್ ಅನೇಕ ಹುಡುಗಿಯರಿಗೆ ಮೋಸ ಮಾಡಿರುವುದು, ಚಾಟ್ ಮಾಡುತ್ತಿದ್ದ ವಿಚಾರ ನನಗೆ ತಿಳಿಯಿತು. ಅಷ್ಟೇ ಅಲ್ಲದೇ ಫೋನಿನಲ್ಲಿ ಕದ್ದು ವಿಡಿಯೋ ಕಾಲ್ ಮೂಲಕ ಮಾತನಾಡುತ್ತಿದ್ದನು. ಜೊತೆಗೆ ಹುಡುಗಿಯರ ಅಶ್ಲೀಲ ಫೋಟೋವನ್ನು ಕಲೆಕ್ಟ್ ಮಾಡಿಕೊಳ್ಳುತ್ತಿದ್ದ. ನನಗೆ ಗೊತ್ತಿಲ್ಲದೇ ನನ್ನ ಅಶ್ಲೀಲ ಫೋಟೋವನ್ನು ಕಲೆಕ್ಟ್ ಮಾಡಿಕೊಂಡಿದ್ದನು. ಈ ವಿಚಾರ ನನಗೆ ಗೊತ್ತಾದ ಮೇಲೆ ಈ ಬಗ್ಗೆ ಆತನ ಬಳಿ ಮಾತನಾಡಿದೆ. ಆದರೆ ಪ್ರಶಾಂತ್ ಫೋಟೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಲು ಶುರು ಮಾಡಿದನು. ಕೊನೆಗೆ ಬಲವಂತವಾಗಿ ಫೆಬ್ರವರಿ 24 ರಂದು ನನ್ನ ಜೊತೆ ನಿಶ್ಚಿತಾರ್ಥ ಮಾಡಿಕೊಂಡನು.

    ನಿಶ್ಚಿತಾರ್ಥವಾದ ಬಳಿಕ ಈಗಾಗಲೇ ಪ್ರಶಾಂತ್‍ಗೆ ಮದುವೆಯಾಗಿರುವ ವಿಚಾರ ತಿಳಿಯಿತು. ಪ್ರಶಾಂತ್ ರಾಜ್‍ಕುಮಾರ್ ಕುಟುಂಬಸ್ಥರ ಹೆಸರು ಬಳಸಿಕೊಂಡು ಓಡಾಡುತ್ತಿದ್ದು, ಅವರ ಹೆಸರನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾನೆ. ನಂತರ ಈತನಿಂದ ದೂರವಾಗಿ ನಾನು ನಮ್ಮ ಮನೆ ಕುಶಾಲನಗರದಲ್ಲಿ ವಾಸವಾಗಿದ್ದೆ. ಆದರ ನಂತರ ಪ್ರಶಾಂತ್ ಅಲ್ಲಿಗೂ ಬಂದು ನಮ್ಮ ಮನೆ ಬಾಗಿಲು, ಗ್ಲಾಸ್ ಒಡೆದಿದ್ದಾನೆ. ನನ್ನ ಮೇಲೆ ಹಾಗೂ ನನ್ನ ತಂದೆ-ತಾಯಿ ಮೇಲೆ ಹಲ್ಲೆ ಮಾಡಿದ್ದಾನೆ. ಅಷ್ಟೇ ಅಲ್ಲದೇ ಮಾನಸಿಕ-ದೈಹಿಕವಾಗಿಯೂ ಹಲ್ಲೆ ಮಾಡಿದ್ದಾನೆ. ನೀನು ನನ್ನನ್ನೇ ಮದುವೆಯಾಗಬೇಕು ಎಂದು ಒತ್ತಾಯ ಮಾಡುತ್ತಿದ್ದನು.

    ಪ್ರಶಾಂತ್ ಅನೇಕ ಹುಡುಗಿಯರ ಜೊತೆ ಸುತ್ತಾಡಿರುವ ಫೋಟೋಗಳು ನನ್ನ ಬಳಿ ಇವೆ. ಈ ರೀತಿಯಾಗಿ ಪ್ರತಿದಿನ ಹಿಂಸೆ ಕೊಡುತ್ತಿದ್ದನು. ಕೊನೆಗೆ ಈ ಬಗ್ಗೆ ನಾನು ಕುಶಾಲನಗರದಲ್ಲಿ ಪೊಲೀಸರಿಗೆ ದೂರು ಕೂಡ ನೀಡಿದ್ದೆ. ನಾನು ದೂರು ನೀಡಿದ ಬಳಿಕ ನಮ್ಮ ಮನೆಗೆ ಬಂದು ಒತ್ತಾಯ ಪೂರ್ವಕವಾಗಿ ಅತ್ಯಾಚಾರ ಮಾಡಿದ್ದಾನೆ. ಎಫ್‍ಐಆರ್ ಕೂಡ ದಾಖಲಾಗಿತ್ತು. ನಂತರ ಪೊಲೀಸರು ಈ ಬಗ್ಗೆ ವಿಚಾರಣೆ ಮಾಡಿದ್ದರು. ಆಗ ಮತ್ತೆ ನನ್ನ ಸಹವಾಸಕ್ಕೆ ಬರಲ್ಲ ಎಂದು ಲಿಖಿತ ರೂಪದಲ್ಲಿ ಬರೆದು ಕೊಟ್ಟಿದ್ದಾನೆ. ಆದರೂ ಮನೆಗೆ ಬಂದು ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದನು. ಅಲ್ಲದೇ ನನ್ನ ತಂದೆಗೂ ಅವಾಚ್ಯ ಪದಗಳಿಂದ ನಿಂದಿಸುತ್ತಿದ್ದನು.

    ನಾನು ಮೊದಲು ಸಂಜಯ್ ನಗರದಲ್ಲಿದ್ದೆ. ಆಗ ಪ್ರಶಾಂತ್ ನಾನು ಮನೆ ಮಾಡಿಕೊಡುತ್ತೇನೆ, ನನ್ನ ಒಟ್ಟಿಗೆ ಇರಬೇಕು ಎಂದು ಬ್ರಿಗೇಡ್ ಬಳಿ ಮನೆ ಮಾಡಿಕೊಟ್ಟಿದ್ದನು. ನಾನು ಅಲ್ಲೇ ಇದ್ದೆ, ಮನೆಗೆ ಪ್ರಶಾಂತ್ ಆಗಾಗ ಬಂದು ಹೋಗುತ್ತಿದ್ದನು. ಒಂದುವರೆ ತಿಂಗಳು ಮಾತ್ರ ನಾವಿಬ್ಬರು ಲಿವಿಂಗ್ ಟುಗೆಟರ್ ನಲ್ಲಿದ್ವಿ. ಈತನ ಬಗ್ಗೆ ತಿಳಿದ ಮೇಲೆ ನಾನು ಬೇರೆ ಮನೆಗೆ ಶಿಫ್ಟ್ ಆಗಿದ್ದೇನೆ. ನಾನು ದೂರು ದಾಖಲಿಸಿದ್ದರ ಪ್ರತಿಕಾರಕ್ಕಾಗಿ ನನ್ನ ವಿರುದ್ಧ ಈ ರೀತಿ ಸೇಡು ತೀರಿಸಿಕೊಳ್ಳುತ್ತಿದ್ದಾನೆ. ನಾನು ಅವನಿಗೆ ಸಿಗಲಿಲ್ಲ ಎಂಬ ಒಂದೇ ಕಾರಣಕ್ಕೆ ಈ ರೀತಿ ನನಗೆ ಕಿರುಕುಳ ನೀಡುತ್ತಿದ್ದಾನೆ ಎಂದು ದೃಶ್ಯ ಹೇಳಿದ್ದಾರೆ.

    ಆತನಿಂದ ನನಗೆ ಜೀವ ಬೆದರಿಕೆ ಇತ್ತು. ಹೀಗಾಗಿ ನಾನು ದೂರು ಕೊಡಲು ಮುಂದಾಗಿಲ್ಲ. ನನ್ನನ್ನು ಯಾರು ಏನು ಮಾಡಲು ಸಾಧ್ಯವಿಲ್ಲ. ನಾನು ಈ ಹಿಂದೆ ಕೊಲೆ ಯತ್ನ ಮಾಡಿದ 20 ದಿನಗಳ ನಂತರ ಪೊಲೀಸರು ದೂರು ದಾಖಲಿಸಿದ್ದರು. ಈಗ ನೀನು ದೂರು ಕೊಟ್ಟರು ಏನು ಪ್ರಯೋಜನವಿಲ್ಲ ಎಂದು ಆತ ಈ ಹಿಂದೆ ಹೇಳಿದ್ದ. ಸದ್ಯಕ್ಕೆ ನಾನು ಪೊಲೀಸ್ ಠಾಣೆಗೆ ಹೋಗಿ ಮಾತನಾಡಿದ್ದೇನೆ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬರಬೇಕು ಎಂದು ಘಟನೆಯ ಸಂಪೂರ್ಣ ಮಾಹಿತಿಯನ್ನು ದೃಶ್ಯ ವಿವರಿಸಿದ್ದಾರೆ.

    https://www.youtube.com/watch?v=ExY9XZCYzZE

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv\

  • ನಾನು ಸಿಗಲಿಲ್ಲ ಎಂದು ಹೀಗೆಲ್ಲ ಮಾಡಿದ್ದಾನೆ: ಅಯೋಗ್ಯ ಸಿನ್ಮಾದ ಸಹ ನಟಿ ದೃಶ್ಯ

    ನಾನು ಸಿಗಲಿಲ್ಲ ಎಂದು ಹೀಗೆಲ್ಲ ಮಾಡಿದ್ದಾನೆ: ಅಯೋಗ್ಯ ಸಿನ್ಮಾದ ಸಹ ನಟಿ ದೃಶ್ಯ

    ಬೆಂಗಳೂರು: ಅಯೋಗ್ಯ ಸಿನಿಮಾದ ಸಹ ನಟಿಯಾಗಿರುವ ದೃಶ್ಯಾರ ಮೇಲೆ ಕೆಲವೊಂದು ಆರೋಪಗಳು ಕೇಳಿ ಬಂದಿದ್ದವು. ಇದೀಗ ನಾನು ಸಿಗಲಿಲ್ಲ ಎಂದು ಪ್ರಶಾಂತ್ ಸುಳ್ಳು ಆರೋಪಗಳನ್ನು ಮಾಡಿದ್ದಾನೆ ಎಂದು ದೃಶ್ಯ ಪ್ರತ್ಯಾರೋಪ ಮಾಡಿದ್ದಾರೆ.

    ಪ್ರಶಾಂತ್ ಎಂಬವರು ನನ್ನ ಮೇಲೆ ಕೆಲವು ಅರೋಪಗಳನ್ನು ಮಾಡಿದ್ದಾರೆ. ನಾನು ಮತ್ತು ಪ್ರಶಾಂತ್ ಕಳೆದ ಎರಡು ವರ್ಷಗಳಿಂದ ಲಿವಿಂಗ್ ರಿಲೇಶನ್ ಶಿಪ್‍ನಲ್ಲಿದ್ದೀವಿ ಎಂದು ಸುಳ್ಳು ಹೇಳಿದ್ದಾರೆ. ನನ್ನೊಂದಿಗೆ ಅವರ ಸಂಬಂಧವಿಲ್ಲ. ನಾನು ಕಿರುಕುಳ ನೀಡುತ್ತಿದ್ದೆ, ಬ್ಲ್ಯಾಕ್ ಮೇಲ್ ಮಾಡ್ತಿದ್ದೆ ಎಂಬ ಆರೋಪಗಳನ್ನು ನನ್ನ ಮೇಲೆ ಮಾಡಿದ್ದರಿಂದ ತುಂಬಾ ನೋವಾಗಿದೆ ಎಂದು ನಟಿ ದೃಶ್ಯ ಬೇಸರ ವ್ಯಕ್ತಪಡಿಸಿದರು.

    ಪ್ರಶಾಂತ್ ಬಳಿ ನಾನು ಯಾವತ್ತು ಹಣ ಕೇಳಿಲ್ಲ. ಅವರು ಫೇಸ್‍ಬುಕ್ ಬಳಕೆ ಮಾಡೋದು ಇಲ್ಲ. ಅದು ಹೇಗೆ ಅವರ ಅಕೌಂಟ್ ಹ್ಯಾಕ್ ಆಗುತ್ತದೆ. ಈಗಾಗಲೇ ನಾನು ಸೈಬರ್ ಕ್ರೈಂನಲ್ಲಿ ದೂರು ದಾಖಲಿಸಿದ್ದೇನೆ. ರಾಜ್‍ಕುಮಾರ್ ಕುಟುಂಬಸ್ಥರ ಹೆಸರು ಬಳಸಿಕೊಂಡು ಓಡಾಡುತ್ತಿದ್ದಾರೆ. ರಾಜ್‍ಕುಮಾರ್ ಹೆಸರನ್ನು ದುರಪಯೋಗ ಮಾಡಿಕೊಳ್ಳುತ್ತಿದ್ದಾರೆ. ಮನೆಗೆ ಬಂದು ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದನು. ಅಲ್ಲದೇ ನನ್ನ ತಂದೆಗೂ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದರಿಂದ 2018ರಲ್ಲಿಯೇ ಕುಶಾಲನಗರದಲ್ಲಿ ಪ್ರಶಾಂತ್ ವಿರುದ್ಧ ದೂರು ದಾಖಲಿಸಿದ್ದೇನೆ ಎಂದರು.

    ದೂರು ದಾಖಲಿಸಿದ್ದರ ಪ್ರತಿಕಾರಕ್ಕಾಗಿ ನನ್ನ ವಿರುದ್ಧ ಈ ರೀತಿ ಸೇಡು ತೀರಿಸಿಕೊಳ್ಳುತ್ತಿದ್ದಾನೆ. ನಾನು ಅವನಿಗೆ ಸಿಗಲಿಲ್ಲ ಎಂಬ ಒಂದೇ ಕಾರಣಕ್ಕೆ ಈ ರೀತಿ ನನಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv