ಬಿಗ್ಬಾಸ್ ಮನೆಯ ಜೋಡಿಯೊಂದು ಕಿತ್ತಾಡಿಕೊಂಡಿದೆ. ಕೈ ಹಿಡಿದುಕೊಂಡು ಜೊತೆ ಜೊತೆಯಾಗಿ ನಡೆದಾಡುತ್ತಾ ನಕ್ಕು ನಲಿಯುತ್ತಿದ್ದ ಜೋಡಿ ಇದೀಗ ಬಿಗ್ಬಾಸ್ ಮನೆಯಲ್ಲಿ ಮುನಿಸಿಕೊಂಡು ಸುದ್ದಿಯಾಗಿದೆ.

ಹೌದು ಬಿಗ್ಬಾಸ್ ಮನೆಯಲ್ಲಿ ಮೊದಲಿನಿಂದಲೂ ಬಿಗ್ಬಾಸ್ ಕ್ಯಾಮೆರಾ ಮತ್ತು ವೀಕ್ಷಕರ ಕಣ್ಣಿಗೆ ಬಿದ್ದಿದ್ದು ದಿವ್ಯಾ ಸುರೇಶ್ ಹಾಗೂ ಮಂಜು ಪಾವಗಡ ಮುದ್ದಾದ ಜೋಡಿ. ಈ ಜೊಡಿ ಮೊದಲಿನಿಂದ ತಮಾಷೆ, ಹರಟೆ, ಜೊತೆಯಲ್ಲಿಯೆ ಹೆಚ್ಚು ಸಮಯ ಕಳೆಯುವ ಮೂಲಕವಾಗಿ ಗುರುತಿಸಿಕೊಂಡಿತ್ತು. ಇದೀಗ ಮೊದಲ ಬಾರಿ ಕಿತ್ತಾಡಿಕೊಂಡಿದೆ.

ಪ್ರಶಾಂತ್ ಸಂಬರ್ಗಿ ಆಟ ಮನೆಯಲ್ಲಿ ಶುರುವಾಗಿದೆ. ಮಂಜು ವಿರುದ್ಧವಾಗಿ ಎಲ್ಲರ ಬಳಿ ಹೇಳಿ ಎಲ್ಲರೂ ಮಂಜು ವಿರುದ್ಧವಾಗಿ ತಿರುಗಿ ಬೀಳುವಂತೆ ಸಂಬರ್ಗಿ ಮಾಡಿದ್ದಾರೆ. ಮಂಜುಗೆ ಅತ್ಯಂತ ಹತ್ತಿರ ಎಂದರೆ ದಿವ್ಯಾ ಸುರೇಶ್ ಇದೀಗ ಅವರ ಇಬ್ಬರ ಮಧ್ಯೆ ಜಗಳ ಪ್ರಾರಂಭವಾಗಿದೆ. ನಿನ್ನೆ ಇಬ್ಬರು ಮಾತಿಗೆ ಮಾತು ಆಡಿಕೊಂಡಿದ್ದಾರೆ.

ನೀನು ಮಂಜುನ ಬಾಲ ಆಗಿದ್ದೀಯಾ.. ನೆರಳಲ್ಲಿ ಬದುಕಬೇಡ, ಯಾರೊಬ್ಬರ ಪ್ರಾಪರ್ಟಿ ಆಗಬಾರದು ಎಂದು ಸಂಬರ್ಗಿ ದಿವ್ಯಾಗೆ ಹೇಳಿದ್ದರು. ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡ ದಿವ್ಯಾ ಮಂಜುನನ್ನು ದೂರ ಇಡಲು ಆರಂಭಿಸಿದ್ದರು.

ಬಿಗ್ಬಾಸ್ ಮನೆಯಲ್ಲಿ ಕಿಚನ್ ಡಿಪಾರ್ಟ್ಮೆಂಟ್ ನೀಡಲಾಗಿತ್ತು. ಆದರೆ ಮಂಜು ಅಡುಗೆ ಮನೆಗೆ ಹೋಗದೆ ಹೊರ ಭಾಗದಲ್ಲಿ ಕುಳಿತು ಮಾತನಾಡುತ್ತಾ ಇದ್ದರು. ನಾನು ವಾಕಿಂಗ್ ಮುಗಿಸಿ ಬಂದು ಪಾತ್ರೆ ತೊಳೆಯುತ್ತೇನೆ ಎಂದು ಮಂಜು ಹೇಳಿದ್ದರು. ಆದರೆ ದಿವ್ಯಾ ಪಾತ್ರೆ ತೊಳೆಯುವ ಕೆಲಸವನ್ನು ಮಾಡಿದ್ದಾರೆ. ಹೀಗಾಗಿ ನಾನು ಕಿಚನ್ ಹೋಗಲ್ಲ ಎಂದು ಮಂಜು ಹೇಳಿದ್ದಾರೆ. ಈ ವೇಳೆ ದಿವ್ಯಾ ಮಂಜುಗೆ ಮಾತಿಗೆ ಮಾತು ಆಗಿದೆ. ಮಂಜು ಈ ವಿಚಾರವಾಗಿ ಕೊಂಚ ಬೇಸರವಾಗಿದ್ದಾರೆ. ಬಿಗ್ಬಾಸ್ಮನೆಯಲ್ಲಿ ಎಷ್ಟು ಚೆನ್ನಾಗಿ ಮಾತನಡಿಕೊಂಡು ಇರುವವರು ಯಾವ ಸಮಯದಲ್ಲಿ ಬೇಕಾದರು ಕಿತ್ತಾಡಿಕೊಳ್ಳಬಹುದು ಎನ್ನುವುದು ಮಾತ್ರ ಸತ್ಯ.













ಹೌದು ಬಿಗ್ಬಾಸ್ ಮನೆಯಲ್ಲಿ ರೇಶನ್ ಒಂದು ಅಳತೆಯಲ್ಲಿ ಬರುತ್ತದೆ. ಬೇಕಾ ಬಿಟ್ಟಿಯಾಗಿ ಖರ್ಚು ಮಾಡುವಂತಿಲ್ಲ. ಮಾಡಿದರೆ ಅವರೆ ಮುಂದೆ ಮತ್ತೆ ರೇಶನ್ ಬರುವವರೆಗೂ ಅದೇ ಸಾಮಾಗ್ರಿಗಳಲ್ಲಿ ಅಡುಗೆ ಮಾಡಿಕೊಂಡು ಹೋಗಬೇಕು. ಆದರೆ ಒಂಟಿ ಮನೆಯ ಸದಸ್ಯರು ತುಪ್ಪ ಖಾಲಿ ಆಗಿದೆ ಎಂದು ಒಬ್ಬರಿಗೊಬ್ಬರು ಕಿತ್ತಾಡಿಕೊಂಡಿದ್ದಾರೆ.

ಹೌದು. ಜೋಡಿ ಟಾಸ್ಕ್ನಲ್ಲಿ ಆಡಲು ದಿವ್ಯ ಉರುಡುಗ ಅವರು ಅರವಿಂದ್ ಅವರನ್ನು ಆಯ್ಕೆ ಮಾಡಿಕೊಂಡಿದ್ದರು. ಆ ಬಳಿಕದಿಂದ ಇಬ್ಬರೂ ಹೆಚ್ಚು ಜೊತೆಯಾಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ದಿವ್ಯ ಹಾಗೂ ಅರವಿಂದ್ ಮಧ್ಯೆ ಏನೋ ನಡೆಯುತ್ತಿದೆ ಅಂತ ಮನೆ ಮಂದಿ ಪಿಸು ಪಿಸು ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನು ಈ ಹಿಂದೆ ದಿವ್ಯ ಉರುಡುಗ ಅವರು ಪ್ರಶಾಂತ್ ಸಂಬರ್ಗಿ ಜೊತೆ ಚೆನ್ನಾಗಿಯೇ ಇದ್ದರು. ಆದರೆ ಜೋಡಿ ಟಾಸ್ಕ್ ಬಂದ ಬಳಿಕ ದಿವ್ಯ ಉರುಡುಗ ವರ್ತನೆ ಬದಲಾಗಿದೆ ಎಂದು ನಿಧಿ ಸುಬ್ಬಯ್ಯ ಹಾಗೂ ಶುಭಾ ಪೂಂಜಾ ಮಾತನಾಡಿಕೊಂಡಿದ್ದಾರೆ.




ನಿರ್ಮಲಾ ನಡವಳಿಕೆಯಿಂದ ಬೇಸರ!


ಸಂಬರ್ಗಿ ಆಟದ ನಿಯಮವನ್ನು ಮಂಜು ಅವರಿಗೆ ಅರ್ಥ ಮಾಡಿಸುತ್ತಾ ಇದು ರಗ್ಬಿ ಆಟದ ತರ ಈ ಆಟದಲ್ಲಿ ಯಾವ ತಂಡಕ್ಕೂ ಗೆಲುವು ಸೋಲು ಇಲ್ಲ ಎಂದು ಹೇಳುತ್ತಿದ್ದಂತೆ ಸಂಬರ್ಗಿ ಮಾತಿಗೆ ಮನುಷ್ಯ ತಂಡದ ಸದಸ್ಯರು ಚಪ್ಪಾಳೆ ತಟ್ಟಿ ವ್ಯಂಗ್ಯಮಾಡಿದ್ದಾರೆ. ಇದರಿಂದ ಮತ್ತೆ ಕೆರಳಿದ ಸಂಬರ್ಗಿ, ಮಂಜು ಜೊತೆ ಮತ್ತೆ ಮಾತಿನ ಸಮರಕ್ಕೆ ಮುಂದಾಗಿ ನಿನು ಬಿಗ್ಬಾಸ್ ಮನೆಯಲ್ಲಿ ತಲೆ ಕೆಟ್ಟೊಗಿದೆ ಎಂದು 1 ಲಕ್ಷ ಬಾರಿ ಹೇಳಿದ್ದೀಯ ಅದನ್ನು ಹೊರತು ಪಡಿಸಿ ಬೇರೆ ಡೈಲಾಗ್ ಹೇಳು ಆಗ ನಿನ್ನ ಕಾಮಿಡಿಯನ್ ಹೆಸರನ್ನು ಒಪ್ಪಿಕೊಳ್ಳುತ್ತೆನೆ ಎಂದು ಟಕ್ಕರ್ ಕೊಟ್ಟರು. ನಂತರ ಮಂಜು ಸಂಬರ್ಗಿ ಅವರಿಗೆ ನೀವು ಆಟವಾಡಿದ ನಿಯಮ ಸರಿಯಿದೆ ಎಂದು ಹೇಳಿ ಆಗ ನಾನು ಒಪ್ಪಿಕೊಳ್ಳುತ್ತೇನೆಂದು ತಿರುಗೇಟು ನೀಡಿದ್ದಾರೆ.



ಆದರೆ ಬಿಗ್ ಬಾಸ್ ನೀಡಿದ ಟಾಸ್ಕ್ ಅನ್ವಯ ಪ್ರಶಾಂತ್ ಅವರಿಗೆ ಲೈಕ್ ಬರುವುದೆ ಇಲ್ಲ ಎಂದುಕೊಂಡಿದ್ದ ವೇಳೆ ಅವರಿಗೂ ಒಂದು ಲೈಕ್ ಬಂದಿದೆ. ಹೌದು ಧನುಶ್ರೀ ಅವರು ಪ್ರಶಾಂತ್ ಸಂಬರ್ಗಿ ಅವರನ್ನು ಮೆಚ್ಚಿ ಲೈಕ್ ಕೊಟ್ಟಿದ್ದಾರೆ. ಈ ವೇಳೆ ಮಂಜು ಪಾವಗಡ ಬದಲಾಗ್ಬೇಡ ಮಾವ ನೀನು ಎಂದು ಜೋರಾಗಿ ಹೇಳಿದ್ದಾರೆ. ಈ ವೇಳೆ ಮನೆ ಮಂದಿ ಎಲ್ಲಾ ನಕ್ಕು ಸಂತೋಷಪಟ್ಟಿದ್ದಾರೆ.
ತನಗೆ ಲೈಕ್ ನೀಡಿದ ಧನುಶ್ರೀಯನ್ನು ಪ್ರಶಾಂತ್ ಸಂಬರ್ಗಿ ಎತ್ತಿಕೊಂಡು ಸಂತೋಷಪಟ್ಟಿದ್ದಾರೆ. ಈ ಮನೆಯಲ್ಲಿ ಕೃತಜ್ಞತೆಗೆ ಅವಕಾಶ ಇಲ್ಲ ಎಂಬುದು ತಿಳಿಯಿತ್ತು ಎಂದು ಮನೆಯ ಸದಸ್ಯರೊಂದಿಗೆ ಪ್ರಶಾಂತ್ ಹೇಳಿಕೊಂಡಿದ್ದಾರೆ. ಯಾಕಂದ್ರೆ ಈ ಹಿಂದೆ ನಿರ್ಮಲಾ ಅವರಿಗೆ ಬ್ಯಾಗ್ ನೀಡುವ ಮೂಲಕ ಹೆಲ್ಪ್ ಮಾಡಿದ್ದರು. ಆದರೆ ಇದೀಗ ನಿರ್ಮಲಾ, ಪ್ರಶಾಂತ್ ಅವರಿಗೆ ಡಿಸ್ಲೈಕ್ ನೀಡಿರುವುದು ಬೇಸರ ತರಿಸಿದೆ.




