Tag: ಪ್ರಶಾಂತ್ ಸಂಬರ್ಗಿ

  • ನೀನು ನನಗೆ ಅಡ್ವೈಸ್ ಮಾಡಬೇಡ: ನಿಧಿಗೆ ಶುಭಾ ಟಾಂಗ್

    ನೀನು ನನಗೆ ಅಡ್ವೈಸ್ ಮಾಡಬೇಡ: ನಿಧಿಗೆ ಶುಭಾ ಟಾಂಗ್

    ಇಷ್ಟು ದಿನ ಬಿಗ್‍ಬಾಸ್ ಮನೆಯಲ್ಲಿ ಚಿಕ್ಕಮಕ್ಕಳಂತೆ ಜಗಳ, ಚೇಷ್ಟೆ, ತಮಾಷೆ ಮಾಡಿಕೊಮಡಿದ್ದ ನಿಧಿ ಸುಬ್ಬಯ್ಯ ಮತ್ತು ಶುಭಾ ಪೂಂಜಾ ಜಗಳ ಮಾಡಿದ್ದಾರೆ.

    ಗಾರ್ಡನ್ ಏರಿಯಾದಲ್ಲಿ ಶುಭಾ ಪೂಂಜಾ ಗೇಮ್‍ಗೆ ಸಂಬಂಧ ಪಟ್ಟ ವಿಚಾರದಲ್ಲಿ ಎಷ್ಟು ಬೇಕಾದರೂ ಕಿತ್ತಾಡಿ, ಆದರೆ ವೈಯಕ್ತಿಕವಾಗಿ ಬೇಡ ಎಂದು ಪ್ರಶಾಂತ್ ಹಾಗೂ ಚಕ್ರವರ್ತಿಯವರಿಗೆ ಮನವಿ ಮಾಡಿದ್ದರು. ನಂತರ ದಿವ್ಯಾ ಸುರೇಶ್ ಬಳಿ ಹೋಗಿ ಇನ್ನು ಮುಂದೆ ಏನು ಮಾತನಾಡಬೇಡ ಎಲ್ಲವನ್ನು ಇಗ್‍ನೋರ್ ಮಾಡು, ಯಾವ ಹುಡುಗಿಯರ ಬಗ್ಗೆನೂ ಕೆಟ್ಟದಾಗಿ ಮಾತನಾಡುವುದು ನನಗೆ ಇಷ್ಟ ಆಗುವುದಿಲ್ಲ. ಯಾಕೆಂದರೆ ನಾನು ಇದನ್ನು ಅನುಭವಿಸಿದ್ದೇನೆ. ಇರುವುದು ಮೂರು ಅಥವಾ ಎರಡು ವಾರ ಎಲ್ಲವನ್ನು ಬಿಟ್ಟು ಬಿಡು ಎಂದು ಕಿವಿ ಮಾತು ಹೇಳಿದ್ದರು.

    ನಂತರ ಈ ವಿಚಾರವಾಗಿ ಶುಭಾಪೂಂಜಾ ನಿಧಿ ಸುಬ್ಬಯ್ಯ ಜೊತೆ ರಾತ್ರಿ ಮಾತನಾಡಿದ್ದಾರೆ. ಈ ವೇಳೆ ನಿಧಿ ಸುಬ್ಬಯ್ಯ, ಪ್ರಶಾಂತ್‍ರವರಿಗೆ ನೀನು ಹೇಳಿದ್ದು ಸರಿ, ಆದರೆ ದಿವ್ಯಾ ಸುರೇಶ್‍ಗೆ ಹೇಳಬಾರದಿತ್ತು. ಯಾಕೆಂದರೆ ಅವಳು ಮೊದಲೇ ಅಳುತ್ತಿದ್ದಾಳೆ. ಆಗ ಶುಭಾ ಅವಳಿಗೆ ಹೀಗೆ ನೂರು ಬಾರಿ ಹೇಳುತ್ತಿದ್ದರೆ, ಇನ್ನೂ ಕುಗ್ಗಿ ಹೋಗುತ್ತಾಳೆ ಎಂದು ಹೇಳುತ್ತಾರೆ.

    ಇದಕ್ಕೆ ಶುಭಾ ಪೂಂಜಾ ನೀನು ನನ್ನನ್ನು ಅರ್ಥಮಾಡಿಕೊಳ್ಳುತ್ತಿಲ್ಲ. ನೀನು ಒಂದು ಹೇಳಿದರೆ, ಅವರು ಒಂದು ಹೇಳುತ್ತಾರೆ, ಪ್ಲೀಸ್ ನಿಧಿ ನೀನು ಕೆಲವೊಂದು ಬಾರಿ ಅರ್ಥನೇ ಮಾಡಿಕೊಳ್ಳುವುದಿಲ್ಲ ಎನ್ನುತ್ತಾರೆ. ಆಗ ನಿಧಿ ಸುಬ್ಬಯ್ಯ ನಾನು ಅವರನ್ನು ಫುಲ್ ಡೇ ಇಗ್‍ನೋರ್ ಮಾಡುತ್ತಿದ್ದೇನೆ ಎಂದಾಗ ನೀನು ಇಗ್‍ನೋರ್ ಮಾಡುತ್ತಿಲ್ಲ. ಬದಲಾಗಿ ನೀನು ಏನೇನೋ ಕಮೆಂಟ್ಸ್ ಮಾಡುತ್ತಿರುತ್ತೀಯಾ? ನೀನು ಕಮೆಂಟ್ ಪಾಸ್ ಮಾಡುವುದನ್ನು ನಿಲ್ಲಿಸು ಎಂದು ಶುಭಾ ಕಿಡಿಕಾರುತ್ತಾರೆ.

    ಯಾವ ಕಮೆಂಟ್ ಪಾಸ್ ಮಾಡುತ್ತಿದ್ದೇನೆ ಎಂದು ನಿಧಿ ಪ್ರಶ್ನಿಸಿದಾಗ, ನೀನು ನನಗೆ ಅಡ್ವೈಸ್ ನೀಡುವುದನ್ನು ನಿಲ್ಲಿಸು. ನನಗೂ ನಾನು ಏನು ಮಾಡುತ್ತಿದ್ದೇನೆ ಗೊತ್ತಿದೆ. ದಯವಿಟ್ಟು ನನ್ನನ್ನು ಸ್ವಲ್ಪ ಬಿಟ್ಟು ಬಿಡು. ನನಗೂ ಏನು ಮಾತನಾಡುತ್ತಿದ್ದೇನೆ ಎಂಬ ಬುದ್ದಿ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ದೊಡ್ಮನೆ ಒಳಗಿನ ಗುಂಪುಗಾರಿಕೆ ಕಂಡು ಬೇಸರ ವ್ಯಕ್ತಪಡಿಸಿದ ಶಮಂತ್

  • ನಾನು ಒಳ್ಳೆಯವರಿಗೆ ತುಂಬಾ ಒಳ್ಳೆಯವನು, ಕೆಟ್ಟವರಿಗೆ ದುಷ್ಟ: ಸಂಬರಗಿ

    ನಾನು ಒಳ್ಳೆಯವರಿಗೆ ತುಂಬಾ ಒಳ್ಳೆಯವನು, ಕೆಟ್ಟವರಿಗೆ ದುಷ್ಟ: ಸಂಬರಗಿ

    ಬಿಗ್‍ಬಾಸ್ ಸೆಕೆಂಡ್ ಇನ್ನಿಂಗ್ಸ್‍ನ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯ ವೇಳೆ ದಿವ್ಯಾ ಸುರೇಶ್ ಹೇಳಿದ ಒಂದು ಹೇಳಿಕೆಯಿಂದ ಪ್ರಶಾಂತ್ ಸಂಬರಗಿ ಮತ್ತು ಚಕ್ರವರ್ತಿ ಚಂದ್ರಚೂಡ್ ಆಕ್ರೋಶಗೊಂಡಿದ್ದಾರೆ.

    ಭಾನುವಾರ ನಡೆದ ‘ವಾರದ ಕಥೆ ಕಿಚ್ಚನ ಜೊತೆ’ ಕಾರ್ಯಕ್ರಮದಲ್ಲಿ ಪ್ರಶಾಂತ್ ಸಂಬರಗಿ ಹಾಗೂ ಚಕ್ರವರ್ತಿ ಚಂದ್ರಚೂಡ್‍ರವರನ್ನು ಬಹುಶಃ ನಿನ್ನನ್ನು ಸೆಕ್ಯೂರಿಟಿ ಗಾರ್ಡ್ ಆಗಿ ಕರೆಸಿರಬಹುದು. ಯಾವಾಗಲೂ ಹಿಂದೆ ಮಾತನಾಡುತ್ತಿದ್ದರು ಎಂದು ನಮ್ಮ ಮನೆಯಲ್ಲಿ ಹೇಳುತ್ತಿದ್ದರು ಎಂದು ದಿವ್ಯಾ ಸುರೇಶ್ ಸುದೀಪ್ ಎದುರಲ್ಲಿ ಹೇಳಿದ್ದರು.

    ವಾರದ ಕೊನೆಯಲ್ಲಿ ಪ್ರಶಾಂತ್ ಅವರನ್ನು ಎಲಿಮಿನೆಟ್‍ಗೊಳಿಸಿ ನಂತರ ಮನೆಯ ಸ್ಪರ್ಧಿಗಳಿಗೆ, ಪ್ರಶಾಂತ್ ಅವರು ಸೇವ್ ಆಗಿದ್ದು, ಬಿಗ್‍ಬಾಸ್ ಮುಂದಿನ ಆದೇಶದವರೆಗೂ ಮನೆಯಲ್ಲಿ ಪ್ರಶಾಂತ್ ಕಂಡರೂ ಕಾಣದಂತೆ ವರ್ತಿಸಬೇಕು ಎಂದು ಬಿಗ್‍ಬಾಸ್ ಸೂಚಿಸಿದ್ದರು. ನಂತರ ಮನೆ ಮಂದಿಯನ್ನೆಲ್ಲಾ ಮಾತನಡಿಸಲು ಸರ್ಕಸ್ ಮಾಡಿದ ಪ್ರಶಾಂತ್ ಜೊತೆಗೆ ಯಾರು ಕೂಡ ಮಾತನಾಡಲಿಲ್ಲ.

    ಈ ವೇಳೆ ದಿವ್ಯಾ ಸುರೇಶ್‍ರನ್ನು ಬಿಡದೇ ಪ್ರಶಾಂತ್ ಸಂಬರ್ಗಿ ಕೆದಕುವ ಪ್ರಯತ್ನ ಮಾಡಿದ್ದಾರೆ. ಡೈನಿಂಗ್ ಹಾಲ್ ಕುಳಿತು ದಿವ್ಯಾ ಸುರೇಶ್ ಟಿಫಿನ್ ಮಾಡುತ್ತಿರುತ್ತಾರೆ. ಆಗ ಪ್ರಶಾಂತ್, ಪ್ರಿಯಾಂಕ ಆಚೆ ಹೋದಾಗ ನನ್ನ ಟಿವಿ ಸಂದರ್ಶನಗಳನ್ನು ನೋಡಿದ್ಯಾ? ಫೇಕ್ ಲವ್ ಸ್ಟೋರಿ ಬಗ್ಗೆ ಹೇಳಿದ್ದೇನೆ. ಅದನ್ನು ಇಲ್ಲಿಯೂ ಒಪ್ಪಿಕೊಂಡಿದ್ದಾರೆ. ಪ್ರಿಯಾಂಕ ಫೇಕ್ ಲವ್ ಸ್ಟೋರಿ ಬಗ್ಗೆ ಕೇಳಿದ್ಯಾ? ಕೃತಕವಾದ ಮೆಕನಿಕಲ್ ಲವ್ ಸ್ಟೋರಿ ಬಗ್ಗೆ ನಾನು ಆಚೆ ಹೇಳಿದ್ದೇನೆ. ಕರ್ನಾಟಕ ಜನತೆ ಮುಂದೆ ಆಡಿರುವ ನಾಟಕ ಒಪ್ಪಿಕೊಂಡಿದ್ದಾರೆ. ಇರುವುದನ್ನು ಹಾಗೇ ನಾನು ಆಚೆ ನೇರವಾಗಿ ಹೇಳಿದರೆ ನಿಷ್ಠುರವಾಗಿ ಕೋಪ ಬರುತ್ತದೆ. ಪ್ರಿಯಾಂಕ ನಮ್ಮ ಮನೆಯ ಸೆಕ್ಯೂರಿಟಿ ಗಾರ್ಡ್‍ಗೆ ಎಷ್ಟು ಕೆಲಸ ಗೊತ್ತಾ? ನಮ್ಮ ಮನೆಯ ಸೆಕ್ಯೂರಿಟಿ ಗಾರ್ಡ್‍ಗೆ 30 ಸಾವಿರ ಸಂಬಳ ಜೊತೆಗೆ ಮನೆ ಕೂಡ ನೀಡಿದ್ದೇನೆ ಎಂದು ಅಣುಕಿಸಿದ್ದಾರೆ.

    ನಂತರ ಶಮಂತ್ ಕಿವಿಯ ಬಳಿ ಬಂದು ನಾನು ಒಳ್ಳೆಯವರಿಗೆ ತುಂಬಾ ಒಳ್ಳೆಯವನು ಕೆಟ್ಟವರಿಗೆ ದುಷ್ಟ ಎಂದು ನನಗೆ ಶತ್ರುಗಳಿಗಿಂತ ಮಿತ್ರರು ಜಾಸ್ತಿ ಇದ್ದಾರೆ. ಆದರೆ ಶತ್ರುಗಳೇ ರಿಯಲ್ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಿಕ್ಕಿ ಬಿಕ್ಕಿ ಅತ್ತ ಪ್ರಶಾಂತ್ ಸಂಬರಗಿ

  • ಬಿಗ್‍ಬಾಸ್‍ಗೆ ಸಾಷ್ಟಾಂಗ ನಮಸ್ಕಾರ ಹಾಕಿದ ಸ್ಪರ್ಧಿಗಳು..!

    ಬಿಗ್‍ಬಾಸ್‍ಗೆ ಸಾಷ್ಟಾಂಗ ನಮಸ್ಕಾರ ಹಾಕಿದ ಸ್ಪರ್ಧಿಗಳು..!

    ಹಾಮಾರಿ ಕೊರೊನಾ ವೈರಸ್ ಎರಡನೇ ಅಲೆಯಿಂದ ದೇಶ ಹಾಗೂ ರಾಜ್ಯದ ಜನ ಕಂಗೆಟ್ಟಿದ್ದು, ದಿನಕ್ಕೊಂದು ಹೊಸ ಸಮಸ್ಯೆಗಳು ತಲೆದೋರುತ್ತಿವೆ. ಈ ಹಿನ್ನೆಲೆಯಲ್ಲಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕಾರ್ಯಕ್ರಮವನ್ನು 72 ದಿನಕ್ಕೆ ಮುಕ್ತಾಯಗೊಳಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇಷ್ಟು ದಿನ ಹೊರ ಜಗತ್ತಿನಲ್ಲಿ ಏನು ನಡೆಯುತ್ತಿದೆ ಎಂಬುದನ್ನೇ ಅರಿಯದ ಸ್ಪರ್ಧಿಗಳಿಗೆ ದೊಡ್ಡ ಶಾಕ್ ಉಂಟಾಗಿದೆ.

    ಹೌದು. ಸ್ಪರ್ಧಿಗಳಿಗೆ ಶೋ ನಿಲ್ಲಿಸುವ ಮಾಹಿತಿಯನ್ನು ಬಿಗ್ ಬಾಸ್ ನೀಡಿದ್ದಾರೆ. ಮಾಧ್ಯಮದಲ್ಲಿ ಪ್ರಸಾರವಾದ ಕೊರೊನಾ ಮಾಹಿತಿ ಹಾಗೂ ಲಾಕ್ ಡೌನ್ ಹೇರಿರುವ ತುಣುಕನ್ನು ಬಿಗ್ ಬಾಸ್ ಮನೆಯ ಒಳಗಡೆ ಪ್ರಸಾರ ಮಾಡಲಾಯಿತು. ಈ ವಿಚಾರ ತಿಳಿಯುತ್ತಿದ್ದಂತೆಯೇ ಸ್ಪರ್ಧಿಗಳಲ್ಲಿ ಅಚ್ಚರಿ ಜೊತೆ ದುಃಖದ ಕಟ್ಟೆಯೊಡೆದಿದೆ.

    ಇದರ ಪ್ರೋಮೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿ ಬಿಗ್ ಬಾಸ್ ಶೋ ಮುಗಿಯುತ್ತಿದೆ ಎಂಬುದನ್ನು ಸ್ಪರ್ಧಿಗಳ ಕೈಯಲ್ಲಿ ಅರಗಿಸಿಕೊಳ್ಳಲು ಸಾಧ್ಯವಾಗದೇ ಇರುವುದನ್ನು ನಾವು ಗಮನಿಸಬಹುದಾಗಿದೆ. ಈ ವೇಳೆ ಚಕ್ರವರ್ತಿ, ವ್ಯವಸ್ಥೆಯಲ್ಲಿ ದೊಡ್ಡ ಪ್ರಾಬ್ಲಂ ಆಗಿದೆ. ಇದಕ್ಕೆ ವ್ಯವಸ್ಥೆಯೇ ಕಾರಣ ಅಂತ ಹೇಳಿಲ್ವಾ ಎಂದು ಹೇಳಿದ್ದಾರೆ. ಕೆಲವರು ಸಖತ್ ಭಯ ಆಗ್ತಿದೆ ಎಂದು ಕಣ್ಣೀರು ಹಾಕಿದರೆ, ಇನ್ನೂ ಕೆಲವರು ಈವಾಗ ಗೊತ್ತಾಗ್ತಾ ಇದೆ, ಪ್ರಾಪರ್ಟಿಯನ್ನ ಯಾಕೆ ಮುಟ್ಟಬೇಡಿ ಅಂತ ಹೇಳ್ತಾ ಇದ್ದರು ಅಂತ. ಆದರೆ ಈ ಮನೆಯನ್ನ ತುಂಬ ಮಿಸ್ ಮಾಡಿಕೊಳ್ಳುತ್ತೇನೆ ಎಂದು ರಘು ಜೊತೆ ಶಮಂತ್ ಕಣ್ಣೀರು ಹಾಕಿದ್ದಾರೆ.

    ಒಟ್ಟಿನಲ್ಲಿ ಕಳೆದ ಭಾನುವಾರವೇ ಶೋ ಮುಗಿದಿದೆ. ಆದರೆ ವಿದಾಯದ ಎಪಿಸೋಡ್ ಇನ್ನೂ ಪ್ರಸಾರವಾಗಿಲ್ಲ. ಸ್ಪರ್ಧಿಗಳೆಲ್ಲ ಕಣ್ಮಣಿ ಜೊತೆಗೆ ಚರ್ಚೆ ಮಾಡುತ್ತಾ ಸಂತೋಷದಿಂದಲೇ ಸಮಯ ಕಳೆದಿದ್ದಾರೆ. ಇಂದು ಮತ್ತು ನಾಳೆ ರಾತ್ರಿ 7.30 ಕೊನೆಯ ಕ್ಷಣಗಳ ಸಂಚಿಕೆಗಳು ಪ್ರಸಾರವಾಗಲಿವೆ. ಈಗಾಗಲೇ ರಿಲೀಸ್ ಆಗಿರುವ ಪ್ರೋಮೋದಲ್ಲಿ ಪ್ರಶಾಂತ್ ಸಂಬರಗಿ ಅವರು, ನಮ್ಮ ಸುರಕ್ಷತೆಗಾಗಿ ಶೋ ಎಂಡ್ ಮಾಡ್ತಿದ್ದೀರಾ, ಬಿಗ್ ಬಾಸ್ ನಿಮಗೆ ಸಾಷ್ಟಾಂಗ ನಮಸ್ಕಾರಗಳು ಎಂದು ಹೇಳಿದ್ದಾರೆ.

  • ಪ್ರಶಾಂತ್‍ಗೆ ಬಂತು ಪುತ್ರನಿಂದ ಕರೆ!

    ಪ್ರಶಾಂತ್‍ಗೆ ಬಂತು ಪುತ್ರನಿಂದ ಕರೆ!

    ನೆಯಿಂದ ದೂರ ಇರುವ ದೊಡ್ಮನೆ ಸ್ಪರ್ಧಿಗಳು ತಮ್ಮ ಮನೆಯವರನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಎಷ್ಟೋ ಬಾರಿ ಮನೆಯವರೊಂದಿಗೆ ಮಾತನಾಡಬೇಕು ಅಂತಾ ಅಂದುಕೊಂಡರೂ ಕೂಡ ಆಗದೇ ಬಿಗ್‍ಬಾಸ್ ಮನೆಯಲ್ಲಿ ಅತ್ತಿರುವುದನ್ನು ನಾವು ನೋಡಿರಬಹುದು. ಕನಿಷ್ಠ ಪಕ್ಷ ಮನೆಯವರ ಧ್ವನಿ ಕೇಳಿದರೆ ಸಾಕಪ್ಪಾ ಎಂದು ಪರದಾಡುತ್ತಿರುತ್ತಾರೆ.

    ಈ ಮಧ್ಯೆ ಬೇರೆ ಸ್ಫರ್ಧಿಗಳಿಗೆ ಹೋಲಿಸಿದರೆ, ಪ್ರಶಾಂತ್ ಸಂಬರಗಿಗೆ ಎರಡೆರಡು ಬಾರಿ ಮನೆಯವರ ಧ್ವನಿ ಕೇಳುವ ಭಾಗ್ಯ ಬಿಗ್‍ಬಾಸ್ ಮನೆಯಲ್ಲಿ ಒಲಿದು ಬಂದಿದೆ. ಹೌದು, ಬಿಗ್‍ಬಾಸ್ ನೀಡಿದ್ದ ಕ್ಯಾಪ್ಟನ್ಸಿ  ಟಾಸ್ಕ್‌ನಲ್ಲಿ ಗೆದ್ದ ಪ್ರಶಾಂತ್ ಸಂಬರ್ಗಿ ಇದೀಗ 2ನೇ ಬಾರಿ ಮನೆಯ ಕ್ಯಾಪ್ಟನ್ ಆಗಿದ್ದಾರೆ. ಕ್ಯಾಪ್ಟನ್ ಆದ ಹಿನ್ನೆಲೆ ನಿನ್ನೆ ಪ್ರಶಾಂತ್ ಸಂಬರಗಿಗೆ ಪುತ್ರ ವಾಯ್ಸ್ ರೆಕಾರ್ಡ್ ಕಳುಹಿಸುವ ಮೂಲಕ ವಿಶ್ ಮಾಡಿದ್ದಾರೆ.

    ಹಾಯ್, ಪಪ್ಪಾ ಆದಿ ಮಾತನಾಡುತ್ತಿದ್ದೇನೆ. 2ನೇ ಬಾರಿ ಕ್ಯಾಪ್ಟನ್ ಆಗಿದ್ದಕ್ಕೆ ಬಹಳ ಖುಷಿಯಾಗಿದೆ. ನಿಮ್ಮ ಬಗ್ಗೆ ನಾನು ಹೆಮ್ಮೆ ಪಡುತ್ತೇನೆ. ಆಟ ಎಲ್ಲಾ ಚೆನ್ನಾಗಿ ಆಡಿಕೊಂಡು ಬಾ.. ಬಿಗ್‍ಬಾಸ್‍ಗೆ ಹೋಗಲು ಒಂದು ಬಾರಿ ನಿನಗೆ ಅವಕಾಶ ಸಿಕ್ಕಿದೆ. ನೀನು ಅದನ್ನು ಉಪಯೋಗಿಸಿಕೋ, ನಿನ್ನ ಕೈಲಾದಷ್ಟು ಸಾಮಾಥ್ರ್ಯ ಬಳಸಿ ಆಟ ಆಡು. ನೀನು ಬೇರೆಯವರು ಏನು ಹೇಳುತ್ತಾರೋ ಎಂಬ ಬಗ್ಗೆ ಯೋಚಿಸಲು ಹೋಗಬೇಡ. ನೀನು ನಿನಗೇನು ಅನಿಸುತ್ತದೆಯೋ ಆ ನಿರ್ಧಾರಗಳನ್ನು ತೆಗೆದುಕೋ. ನನಗೆ ಗೊತ್ತಿದೆ ನಿನ್ನ ನಿರ್ಧಾರಗಳು ಯಾವಾಗಲೂ ಸರಿಯಾಗಿಯೇ ಇರುತ್ತದೆ ಅಂತಾ ಎಂದಿದ್ದಾರೆ.

    ಮನೆಯಲ್ಲಿ ಎಲ್ಲರೂ ಚೆನ್ನಾಗಿದ್ದಾರೆ. ನಿಕ್ಕು ನನ್ನ ಪ್ರತಿ ದಿನ ಪಪ್ಪಾ ಯಾವಾಗ ಬರುತ್ತಾರೆ ಎಂದು ಕೇಳುತ್ತಿರುತ್ತಾನೆ. ನಾನು ಪಪ್ಪಾ ಬಿಗ್‍ಬಾಸ್ ಗೆದ್ದೆ ಬರುತ್ತಾರೆ ಎಂದು ಹೇಳುತ್ತಿರುತ್ತೇನೆ. ಅವನು ಪ್ರತಿ ದಿನ ಟಿವಿಯಲ್ಲಿ ನಿನ್ನ ನೋಡಿ ಪಪ್ಪಾ, ಪಪ್ಪಾ ಎನ್ನುತ್ತಿರುತ್ತಾನೆ. ವಿ ಮಿಸ್ ಯೂ, ವಿ ವೇರಿ ಪ್ರೌಡ್ ಆಫ್ ಯೂ, ಎನರ್ಜಿಯಿಂದ ಆಟವಾಡು, ಲವ್ ಯೂ, ಆಲ್ ದಿ ಬೆಸ್ಟ್ ಎಂದು ಪ್ರಶಾಂತ್‍ಗೆ ಅವರ ಮಗ ಆದಿತ್ಯ ವಿಶ್ ಮಾಡಿದ್ದಾರೆ.

  • ಪ್ರಶಾಂತ್‍ಗೆ ಮಂಜುನಿಂದ ಅನ್ಯಾಯ ಆಗಿದ್ಯಾ?

    ಪ್ರಶಾಂತ್‍ಗೆ ಮಂಜುನಿಂದ ಅನ್ಯಾಯ ಆಗಿದ್ಯಾ?

    ಬಿಗ್‍ಬಾಸ್ ಕಾರ್ಯಕ್ರಮದ ಆರಂಭದಲ್ಲಿ ಮಾವ ಅಳಿಯ ಅಂತಿದ್ದ ಮಂಜು-ಪ್ರಶಾಂತ್ ಇದೀಗ ಎಣ್ಣೆ ಸೀಗೆಕಾಯಿಯಂತೆ ಆಗಿದ್ದಾರೆ.

    ಮೊನ್ನೆ ಬಿಗ್‍ಬಾಸ್ ನೀಡಿದ್ದ ಟಾಸ್ಕ್‌ವೊಂದರಲ್ಲಿ ಸೋಲಲು ಮಂಜುನೇ ಕಾರಣ ಎಂದು ಪ್ರಶಾಂತ್ ಮನೆಮಂದಿಗೆಲ್ಲಾ ಹೇಳಿಕೊಂಡು ಬರುತ್ತಿದ್ದಾರೆ. ಅಲ್ಲದೆ ನಿನ್ನೆ ಮಂಜು ವಿರುದ್ಧ ಪ್ರಶಾಂತ್ 38 ಗಂಟೆಗಳ ಕಾಲ ಉಪವಾಸ ಸತ್ಯಗ್ರಹ ನಡೆಸಲು ಕೂಡ ಮುಂದಾಗಿದ್ದರು. ಸದ್ಯ ಇಂದು ನಿಧಿ ಸುಬ್ಬಯ್ಯ ಬಳಿ ಮಂಜುನಿಂದ ಅನ್ಯಾಯವಾಗಿದೆ ಎಂದು ಪ್ರಶಾಂತ್ ಹೇಳಿದ್ದರು. ಈ ಇಬ್ಬರ ಮಾತು ಕೇಳಿಸಿಕೊಂಡು ದಿವ್ಯಾ ಸುರೇಶ್ ಈ ಬಗ್ಗೆ ಮಂಜು ಬಳಿ ಚರ್ಚೆ ನಡೆಸಿದರು.

    ಬೆಡ್ ರೂಮ್ ಏರಿಯಾದಲ್ಲಿ ಮಂಜು ಕುಳಿತಿದ್ದ ವೇಳೆ ದಿವ್ಯಾ ಸುರೇಶ್, ನಿನ್ನಂದ ಅನ್ಯಾಯವಾಗಿದೆ ಎಂದು ನಿಧಿ ಸುಬ್ಬಯ್ಯ ಬಳಿ ಪ್ರಶಾಂತ್ ಹೇಳುತ್ತಿದ್ದರು. ನೀನು ಎಲ್ಲರನ್ನು ಇನ್‍ಫ್ಲೂಯನ್ಸ್ ಮಾಡಿದ್ಯಾ ಹಾಗೂ ಪ್ರಶಾಂತ್ ಕ್ಯಾಪ್ಟನ್ ಆಗಬಾರದು ಎಂಬ ಕಾರಣಕ್ಕೆ ಫೇವರಿಸಮ್ ಮಾಡಿದ್ಯಾ ಅಂತಿದ್ದರು.

    ಆದರೆ ಅನ್ಯಾಯ ಆಗಿದೆ ಎಂದಾಗ ಅವರ ಬಳಿ ಹೋಗಿ ಮಾತನಾಡಬೇಕು. ನೀನು ಏನು ಅನ್ಯಾಯವಾಗಿದೆ ಎಂದು ಕೇಳಿದಾಗಲೂ ಅವರು ಉತ್ತರಿಸದೇ ಸುಮ್ಮನೆ ಇದ್ದರೆ, ಅದು ತಪ್ಪಾಗುತ್ತದೆ. ಅಂದಿನದ್ದು, ಅಂದೇ ಮಾತನಾಡಿ ಬಗೆಹರಿಸಿಕೊಳ್ಳಬಹುದಾಗಿತ್ತು. ಆದರೆ ನಾನು ಎಲ್ಲದಕ್ಕೂ ಹೋರಾಡುತ್ತೇನೆ, ದಿಕ್ಕಾರ ಎಂದರೆ ಅದಕ್ಕೆ ಏನು ಅರ್ಥಬರುತ್ತದೆ ಎನ್ನುತ್ತಾರೆ. ಆಗ ಮಂಜು ಹೋಗಲಿ ಬಿಡು ಅವರು ಮಾತನಾಡಿದಾಗ ಮಾತನಾಡುತ್ತೇನೆ ಎಂದಿದ್ದಾರೆ.

    ನಂತರ ದಿವ್ಯಾ ಸುರೇಶ್ ಮಾತಿಗೆ ಮುಂಚೆ ಜನಗಳಿಗೆ ಕಾಣಿಸುತ್ತಿರುತ್ತದೆ ಅಲ್ವಾ ಎಂದು ಹೇಳುತ್ತಾರೆ. ಆದ್ರೆ ಅದೇ ಜನವೇ ಅಂದು ಕೂಡ ನಿಧಿ ಸುಬ್ಬಯ್ಯ ಜೊತೆ ಜಗಳವಾದಾಗ ಕಾಲ್ ಮಾಡಿ ಉಗಿದ್ರಾಲ್ವಾ ಎಂದು ಚರ್ಚೆ ನಡೆಸಿದ್ದಾರೆ.

  • ದೊಡ್ಮನೆ ಸ್ಪರ್ಧಿಗಳ ಬಗ್ಗೆ ಕಮೆಂಟ್ ಪಾಸ್ ಮಾಡಿದ ಪ್ರಶಾಂತ್!

    ದೊಡ್ಮನೆ ಸ್ಪರ್ಧಿಗಳ ಬಗ್ಗೆ ಕಮೆಂಟ್ ಪಾಸ್ ಮಾಡಿದ ಪ್ರಶಾಂತ್!

    ಬಿಗ್‍ಬಾಸ್ ಮನೆಯಲ್ಲಿ 36 ಗಂಟೆಗಳ ಕಾಲ ಊಟ ಮಾಡುವುದಿಲ್ಲ ಎಂದು ಪ್ರತಿಭಟನೆ ನಡೆಸುತ್ತಿರುವ ಪ್ರಶಾಂತ್ ಸಂಬರ್ಗಿ ಮನೆಯ ಸದಸ್ಯರ ಬಗ್ಗೆ ಕಮೆಂಟ್ ಮಾಡಿದ್ದಾರೆ. ಸ್ನೇಹಿತ ಚಕ್ರವರ್ತಿ ಚಂದ್ರಚೂಡ್ ಜೊತೆ ಲಿವಿಂಗ್ ಏರಿಯಾದಲ್ಲಿ ಕುಳಿತು ಪ್ರಶಾಂತ್ ಮಾತನಾಡುತ್ತಿರುತ್ತಾರೆ. ಈ ವೇಳೆ ಚಕ್ರವರ್ತಿ ಚಂದ್ರಚೂಡ್ ಮನೆಯ ಸ್ಪರ್ಧಿಗಳ ಹೆಸರನ್ನು ಒಂದೊಂದಾಗಿ ಹೇಳಿಕೊಂಡು ಹೋಗುತ್ತಾರೆ. ಇದಕ್ಕೆ ಪ್ರತಿಯಾಗಿ ಪ್ರಶಾಂತ್ ಸಂಬರಗಿ ಉತ್ತರಿಸುತ್ತಾ ಹೋಗಿದ್ದಾರೆ.

    ಮೊದಲಿಗೆ ದಿವ್ಯಾ ಸುರೇಶ್ ಎಂದು ಚಕ್ರವರ್ತಿ ಹೇಳಿದಾಗ, ಗ್ಯಾಲರಿಯಲ್ಲಿ ಆಡುತ್ತಿದ್ದಾಳೆ ಮಂಜು ಶಿಷ್ಯೆ, ನಾನು ಡಿಫರೆಂಟ್, ನಾನು ಕಾನ್ಫಿಡೆಂಟ್ ಅಂತ ತೋರಿಸುವ ಭರದಲ್ಲಿ ನೀಚ ಸ್ವಭಾವ ಎಕ್ಸ್‍ಪೋಸ್ ಆಗುತ್ತಿದೆ. ಗೆಲ್ಲವುದೊಂದೇ ಗುರಿ, ಮಾರ್ಗ ಯಾವುದು ಬೇಕಾದರೂ ಆಗಬಹುದು ಎಂದು ಆಟ ಆಡುತ್ತಿದ್ದಾಳೆ ಅಂತ ಪ್ರಶಾಂತ್ ಹೇಳುತ್ತಾರೆ.

    ನಂತರ ಡಿಯು ಎಂದಾಗ, ಪ್ರಶಾಂತ್ ಅರವಿಂದನ ಮಡಿಲಿನಲ್ಲಿ ಅವನ ಜೊತೆಗೆ ನಾನು ಸಾಗುವೆ ಎನ್ನುತ್ತಾರೆ. ಮಂಜು ಪಾವಗಡ ಹೆಸರು ಬಂದಾಗ, ದುಷ್ಟ, ಅಹಂಕಾರಿ, ಹಾಸ್ಯ ಬಿಟ್ಟು ಎಲ್ಲ ಮಾಡುತ್ತಿದ್ದಾನೆ. ಇನ್ನೂ ರಘು ಉಸರವಳ್ಳಿ. ಪ್ರಿಯಾಂಕ, ಸುಂದರವಾಗಿದ್ದಿನಿ ಎಂಬ ಜಂಬ, ನಾನು ಡಿಫರೆಂಟ್ ಆಗಿದ್ದೇನೆ ಎಂದು ತೋರಿಸಿಕೊಳ್ಳಲು ಹೊರಟಿದ್ದಾರೆ. ಲೋ ಬುದ್ಧಿ, ಲೋ ಹೈಕ್ಯೂ ಇರುವುದರಿಂದ ನಿರ್ಧಾರಗಳು ಕರೆಕ್ಟ್ ಅಂದುಕೊಂಡು ಫೆಲ್ ಆಗುತ್ತಿರುವ ಹುಡುಗಿ ಎನ್ನುತ್ತಾರೆ.

    ಟ್ಯಾಲೆಂಟೆಂಡ್, ಕಂಪೆಷನೆಟ್, ಎಕ್ಸ್ ಪ್ರೆಸ್ ಮಾಡದೇ ಇರುವಂತಹ ಹುಡುಗ ಎಂದು ಶಮಂತ್‍ಗೆ ಹೇಳುತ್ತಾರೆ. ಚಕ್ರವರ್ತಿಯವರು ಅವರ ಹೆಸರನ್ನೇ ಸೂಚಿಸಿದಾಗ ಅತೀ ಬುದ್ಧಿವಂತಿಕೆ ಮಾತಿನ ಚಾತುರ್ಯದಿಂದ ಗೆಲ್ಲಬಹುದು ಎಂದು ತಿಳಿದು ಎಲ್ಲರನ್ನು ದುಷ್ಮನ್ ಮಾಡಿಕೊಳ್ಳುತ್ತಿರುವ ವ್ಯಕ್ತಿ ಎಂದು ಪ್ರಶಾಂತ್ ಅಭಿಪ್ರಾಯ ತಿಳಿಸುತ್ತಾರೆ.

    ಹಾಗಾದರೆ ಪ್ರಶಾಂತ್ ಸಂಬರ್ಗಿ ಎಂದು ಚಕ್ರವರ್ತಿ ಕೇಳಿದಾಗ, ಶಕ್ತಿ, ಯುಕ್ತಿಗಿಂತ ಮನುಷ್ಯತ್ವ ಮೇಲೂ ಅಂತ ಆಡುತ್ತಿರುವ ಎಮೋಷನಲ್ ಫೂಲ್ ಎಂದು ತಮಗೆ ತಾವೇ ಪ್ರಶಾಂತ್ ಹೇಳಿದ್ದಾರೆ.

  • ಪ್ರಶಾಂತ್ ಬಿಗ್ ಬಾಸ್ ಚೆನ್ನಾಗಿ ಆಡಿ ಗೆಲ್ಲೋ ಮಂಗ್ಯ

    ಪ್ರಶಾಂತ್ ಬಿಗ್ ಬಾಸ್ ಚೆನ್ನಾಗಿ ಆಡಿ ಗೆಲ್ಲೋ ಮಂಗ್ಯ

    ಬಿಗ್‍ಬಾಸ್‍ಮನೆಯಲ್ಲಿ ಹೆಚ್ಚು ಸುದ್ದಿಯಲ್ಲಿರುವ ಪ್ರಶಾಂತ್ ಸಂಬರ್ಗಿ ಬಂದ ಮೊದಲ ದಿನದಿಂದಲೂ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಾ ಇದ್ದರು. ಇವರಿಗೆ ಕ್ಯಾಪ್ಟನ್ ಆಗುವ ಹಂಬಲ ಇತ್ತು. ಹೀಗಾಗಿ ಏನೆಲ್ಲಾ ಕಸರತ್ತುಗಳನ್ನು ಮಾಡುತ್ತಿದ್ದರು. ಈ ವಾರದ ಕ್ಯಾಪ್ಟನ್ ಆಗಿದ್ದಾರೆ. ಈ ವಿಚಾರವಾಗಿ ಮನೆಮಂದಿಗೆ ಕೊಂಚ ಬೇಸರವಾಗಿದೆ ಆದರೆ ನಗು ಮುಖದಿಂಲೇ ಸಂಬರ್ಗಿಗೆ ಶುಭ ಕೋರಿದ್ದಾರೆ.

    ಕ್ಯಾಪ್ಟನ್ಸಿ ಟಾಸ್ಕ್ ಗೆದ್ದು ಪ್ರಶಾಂತ್ ಸಂಬರ್ಗಿ ಅವರು ಈ ವಾರದ ಕ್ಯಾಪ್ಟನ್ ಆಗಿದ್ದಾರೆ. ಹೀಗಾಗಿ ಅವರನ್ನು ಯಾರೂ ಎಲಿಮಿನೇಶನ್ ವೇಳೆ ನಾಮಿನೇಟ್ ಮಾಡುವಂತಿಲ್ಲ. ಪ್ರಶಾಂತ್ ಕ್ಯಾಪ್ಟನ್ ಆಗಿದ್ದು ಬಿಗ್ ಬಾಸ್ ಕನ್ನಡ ಸೀಸನ್ 8ರ ಮನೆಯ ಅನೇಕ ಸದಸ್ಯರಿಗೆ ಹಾಗೂ ವೀಕ್ಷಕರಿಗೆ ಶಾಕ್ ಆಗಿದೆ.

    ಪ್ರಶಾಂತ್ ಸಂಬರ್ಗಿ ಅವರು ಕ್ಯಾಪ್ಟನ್ ಆಗಿದ್ದಕ್ಕೆ ಅವರ ಅಕ್ಕ ಸೀಮಾರಿಂದ ಸಂದೇಶ ಬಂದಿದೆ. ನಿನ್ನ ನೋಡಿ ತುಂಬ ಖುಷಿಯಾಯ್ತು. ಚಿಕ್ಕವನಿದ್ದಾಗ ನಿನಗೆ ಚೆನ್ನಾಗಿ ಅಭ್ಯಾಸ ಮಾಡಲೇ ಮಂಗ್ಯ ಅಂತ ಹೇಳುತ್ತಿದ್ದೆ. ಬಿಗ್ ಬಾಸ್‍ನಲ್ಲಿ ಸಿಕ್ಕ ಜನಪ್ರಿಯತೆಯನ್ನು ನೀನು ಒಳ್ಳೆಯ ಕೆಲಸಕ್ಕೆ ಬಳಸಿಕೊಳ್ತೀಯಾ ಅಂತ ನಂಬಿದ್ದೇನೆ. ಈಗ ಬಿಗ್ ಬಾಸ್‍ನಲ್ಲಿ ಆಡಿ ಗೆಲ್ಲೋ ಮಂಗ್ಯ ಅಂತ ಹೇಳ್ತೀನಿ, ನಿನ್ನ ಪ್ರೀತಿಯ ಅಕ್ಕ ಸೀಮಾ ಎಂದು ಹೇಳಿದ್ದಾರೆ.

    ಸೀಮಾ ಮಾತು ಕೇಳಿ ಪ್ರಶಾಂತ್ ಸಂಬರ್ಗಿ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಬಿಗ್ ಬಾಸ್ ಧನ್ಯವಾದಗಳು. ಈ ವಾರ ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗಿದ್ದೇನೆ. ನನ್ನ ಪ್ರೀತಿಯ ಅಕ್ಕನ ಧ್ವನಿ ಕೇಳಿ ಸಂತೋಷವಾಯಿತ್ತು. ನನಗೆ ಮಾತು ಬರ್ತಿಲ್ಲ, ಕಣ್ಣೀರು ಬರ್ತಿದೆ. ಅಕ್ಕನ ಹಾರೈಕೆ, ಆಶೀರ್ವಾದ, ಮಾರ್ಗದರ್ಶನ, ಬೆಂಬಲ ಎಲ್ಲವೂ ನನಗೆ ಬೇಕು ಎಂದು ಪ್ರಶಾಂತ್ ಸಂಬರ್ಗಿ ಅವರು ಬಿಗ್ ಬಾಸ್ ಕ್ಯಾಮರಾ ಮುಂದೆ ಬಂದು ಹೇಳಿದ್ದಾರೆ.

     ಮಾವ ಕ್ಯಾಪ್ಟನ್ ಆದ್ರು. ಕ್ಯಾಪ್ಟನ್ ಆಗಿರೋದಕ್ಕೆ ಮಾವ ಅಂತ ಕೂಡ ಕರೆಯೋಹಾಗಿಲ್ಲ. ಮಾವನ ಆರ್ಭಟ ಶುರು ಎಂದು ಹೇಳಿದ್ದಾರೆ. ಬಿಗ್‍ಬಾಸ್ ಮನೆಯ ಮಾವ ಯಾವ ರೀತಿಯ ಆಟ ಮಾಡಲಿದ್ದಾರೆ. ಎಲೇಲ್ಲೂ ಡ್ರಾಮಗಳು ಮನೆಯಲ್ಲಿ ಈ ವಾರ ನಡೆಯಲಿದೆ ಎನ್ನುವ ಕುತುಹೊಲ ಹೆಚ್ಚಾಗಿದೆ. ಪ್ರಶಾಂತ್ ಅವರ ಮುಂದಾಳತ್ವದಲ್ಲಿ ಏನೆಲ್ಲಾ ನಡೆಯಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

  • ಮತ್ತೆ ಒಂದಾದ ಮಂಜು-ಪ್ರಶಾಂತ್!

    ಮತ್ತೆ ಒಂದಾದ ಮಂಜು-ಪ್ರಶಾಂತ್!

    ಬಿಗ್‍ಬಾಸ್ ಮನೆಯಲ್ಲಿ ಎರಡು ದಿನಗಳ ಹಿಂದೆಯಷ್ಟೇ ಕಿತ್ತಾಡಿಕೊಂಡಿದ್ದ ಮಂಜು ಹಾಗೂ ಪ್ರಶಾಂತ್ ನಿನ್ನೆ ಮತ್ತೆ ಒಂದಾಗಿದ್ದಾರೆ.

    ಮೊದಮೊದಲಿಗೆ ಬಿಗ್‍ಬಾಸ್ ಕಾರ್ಯಕ್ರಮ ಆರಂಭವಾದಾಗ ಪ್ರಶಾಂತ್ ಸಂಬರ್ಗಿಯನ್ನು ಮಂಜು ಪವಾಗಡ ಮಾವ ಎಂದು ಕರೆಯಲು ಆರಂಭಿಸಿದರು. ಅಂದಿನಿಂದ ದೊಡ್ಮನೆಯಲ್ಲಿ ಪ್ರಶಾಂತ್ ಸಂಬರ್ಗಿ ಮಾವ ಎಂದೇ ಫೇಮಸ್ ಆದರು.

    ಆದರೆ ಎರಡು ದಿನಗಳ ಹಿಂದೆ ಪ್ರಶಾಂತ್ ಸಂಬರ್ಗಿ, ನನ್ನನ್ನು ಮಾವ ಎಂದು ಕರೆಯಬೇಡ ಅಂತಾ ಸ್ವಿಮಿಂಗ್ ಪೂಲ್ ಬಳಿ ಮಂಜು ಮೇಲೆ ರೇಗಾಡಿ ಜಗಳ ಮಾಡಿದ್ದರು. ಈ ಮಧ್ಯೆ ಪ್ರಶಾಂತ್ ದಿವ್ಯಾ ಸುರೇಶ್ ಹೆಸರು ಎತ್ತಿದ್ದಕ್ಕೆ ಮಂಜು ಹಾಗೂ ಪ್ರಶಾಂತ್ ಮಧ್ಯೆ ಮಾತಿನ ಚಕಮಕಿ ನಡೆದಿತ್ತು ಇವರಿಬ್ಬರ ಜಗಳಕ್ಕೆ ಬಿಗ್‍ಮನೆ ಕಾವೇರಿತ್ತು.

    ಇದೀಗ ನಿನ್ನೆ ಮಂಜು ಪ್ರಶಾಂತ್ ಬಳಿ ಹೋಗಿ ಸಾರಿ ಎಂದು ಕೇಳಿದ್ದಾರೆ. ಈ ವೇಳೆ ಪ್ರಶಾಂತ್ ನಾನು ನಿನಗೆ ಮೊದಲಿನಿಂದಲೂ ನಾಲ್ಕು ಬಾರಿ ಮಾವ ಎಂದು ಕರೆಯಬೇಡ ಅಂತ ಹೆಳಿದ್ದೆ. ಅಲ್ಲದೇ ಕೈ ಮುಗಿದು ಕೇಳಿಕೊಳ್ಳುತ್ತೇನೆ ಎಂದು ರಿಕ್ವೆಸ್ಟ್ ಕೂಡ ಮಾಡಿಕೊಂಡಿದ್ದೆ, ಆದರೂ ನೀನು ಹಾಗೆಯೇ ಕರೆಯುತ್ತಿದೆ ಎಂದು ಹೇಳುತ್ತಾರೆ.

    ಈ ವೇಳೆ ಮಂಜು ನಾನು ಮೊದಲಿನಿಂದಲೂ ನಿಮಗೆ ಮಾವ ಎಂದು ಕರೆದು ಅಭ್ಯಾಸ ಆಗಿ ಹೋಯಿತು. ಹಾಗಾಗಿ ನಿಮ್ಮನ್ನು ಹಾಗೇ ಕರೆಯುತ್ತಿದ್ದೆ ಎಂದು ಹೇಳಿದಾಗ ಹೋಗಲಿ ಬಿಡು ಇಬ್ಬರು ಮಾತನಾಡಿದ್ದು, ತಪ್ಪಾಗಿದೆ ಎಂದು ಹೇಳಿ ಹೆಗಲ ಮೇಲೆ ಕೈ ಹಾಕಿಕೊಂಡು ಒಟ್ಟಿಗೆ ಹೋಗುತ್ತಾರೆ.

  • ಮಾವ, ಅಳಿಯನ ಕಿತ್ತಾಟಕ್ಕೆ ರಣರಂಗವಾಯ್ತು ಬಿಗ್‍ಬಾಸ್ ಮನೆ

    ಮಾವ, ಅಳಿಯನ ಕಿತ್ತಾಟಕ್ಕೆ ರಣರಂಗವಾಯ್ತು ಬಿಗ್‍ಬಾಸ್ ಮನೆ

    ಬಿಗ್‍ಬಾಸ್ ಮನೆ ದಿನದಿಂದದಿನಕ್ಕೆ ರೋಚಕತೆಯನ್ನು ಪಡೆದುಕೊಳ್ಳುತ್ತಿದೆ. ಇಂದು ಖಾಸಗಿ ವಾಹಿನಿ ತನ್ನ ಇನ್‍ಸ್ಟ್ರಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಪ್ರೋಮೋದಲ್ಲಿ ಮಾವ, ಅಳಿಯನ ಮಧ್ಯೆ ಹೊಡೆದಾಡಿಕೊಳ್ಳುವ ರೀತಿಯಲ್ಲಿ ಜಗಳವಾಗಿದೆ.

    ಹೌದು ಮೊದಲ ದಿನದಿಂದಲು ಮಾವ, ಅಳಿಯ ಎಂದು ಪ್ರಸಿದ್ಧರಾಗಿರುವ ಪ್ರಶಾಂತ್ ಸಂಬರ್ಗಿ ಮತ್ತು ಮಂಜುಪಾವಗಡ ಇಬ್ಬರು ಮಾತಿಗೆ ಮಾತು ಆಡಿಕೊಂಡಿದ್ದಾರೆ. ವೈಯಕ್ತಿಕ ವಿಚಾರಗಳನ್ನು ಎಳೆದುಕೊಂಡು ಸ್ಪರ್ಧಿಗಳು ಅಸಭ್ಯವಾಗಿ ಮಾತನಾಡಿಕೊಂಡಿದ್ದಾರೆ. ಈ ಪ್ರೋಮೋವನ್ನು ನೋಡಿದ ಅಭಿಮಾನಿಗಳು ಇಂದಿನ ಎಪಿಸೋಡ್‍ಗಾಗಿ ಕಾಯುತ್ತಾ ಕುಳಿತಿರುವುದಂತೂ ಸತ್ಯವಾಗಿದೆ.

    ಸ್ವಿಮ್ಮಿಂಗ್ ಪುಲ್‍ನಲ್ಲಿ ಪ್ರಶಾಂತ್ ಸಂಬರ್ಗಿ, ಚಕ್ರವರ್ತಿ ಚಂದ್ರಚೂಡ ಹಾಡು ಹೇಳುತ್ತಿದ್ದರು. ಈ ವೇಳೆ ಅಲ್ಲಿಯೇ ಇದ್ದ ದಿವ್ಯಾ ಸುರೇಶ್ ಸ್ವಲ್ಪ ಸೌಂಡ್ ಕಡಿಮೆ ಮಾಡಿ ಎಂದು ಹೇಳಿದ್ದಾರೆ. ಈ ವೇಳೆ ಪ್ರಶಾಂತ್ ಸಂಬರ್ಗಿ ನಮಗೇನು ಹೇಳುತ್ತಿಯಾ ನಿನ್ನ ಡೌಗೆ ಹೇಳು ಎಂದು ಮಂಜುಗೆ ಹೇಳಿದ್ದಾರೆ. ಈ ವೇಳೆ ಸಿಟ್ಟೆಗೆದ್ದ ದಿವ್ಯಾ ನಿಮಗೆ ಅದನ್ನೆಲ್ಲಾ ಮಾತನಾಡುವ ಯಾವ ಹಕ್ಕು ಇಲ್ಲ ಎಂದು ಹೇಳಿದ್ದಾರೆ.

    ಈ ವೇಳೆ ಅಲ್ಲಿಗೆ ಬಂದ ಮಂಜು ಮಾವ ನನಗೆ ನೇರವಾಗಿ ಹೇಳು ಯಾಕೆ ಹೀಗೆ ಮಾತನಾಡುತ್ತೀಯಾ ಎಂದು ಹೇಳಿದ್ದಾರೆ. ನನಗೆ ಮಾವ ಅನ್ನಬೇಡಾ ಎಂದು ಸಂಬರ್ಗಿ ಹೇಳಿದ್ದಾರೆ. ಈ ವೇಳೆ ಮಂಜು ಮತ್ತು ಸಂಬರ್ಗಿ ಮಧ್ಯೆ ಜೋರಾದ ಜಗಳವಾಗಿದೆ. ಇಂದು ಪ್ರಸಾರವಾಗಲಿರುವ ಈ ಎಪಿಸೋಡ್‍ನಲ್ಲಿ ನೋಡಬಹುದಾಗಿದೆ.

  • ಕಾಮನ ಬಿಲ್ಲಿಗೆ ಬಣ್ಣ ಬಣ್ಣದ ಕಲರ್ ಕಾಗೆ ಹಾರಿಸುವವನು ಪ್ರಶಾಂತ್ ಅಂದಿದ್ಯಾಕೆ ಚಕ್ರವರ್ತಿ

    ಕಾಮನ ಬಿಲ್ಲಿಗೆ ಬಣ್ಣ ಬಣ್ಣದ ಕಲರ್ ಕಾಗೆ ಹಾರಿಸುವವನು ಪ್ರಶಾಂತ್ ಅಂದಿದ್ಯಾಕೆ ಚಕ್ರವರ್ತಿ

    ಬಿಗ್‍ಬಾಸ್ ಕಾರ್ಯಕ್ರಮ ಆರಂಭವಾಗಿ ಐದನೇ ವಾರದತ್ತ ಸಾಗುತ್ತಿದೆ. ಸದ್ಯ ನಿನ್ನೆ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆ ನಡೆಯಿತು. ಈ ವೇಳೆ ಮನೆಗೆ ಹೊಸದಾಗಿ ಬಂದ ಸದಸ್ಯ ಚಕ್ರವರ್ತಿ ಚಂದ್ರಚೂಡ್ ಕಿಚ್ಚನ ಮುಂದೆ ಪ್ರಶಾಂತ್ ಸಂಬರ್ಗಿಯವರ ಕುರಿತಂತೆ ಸಾಹಿತ್ಯವೊಂದನ್ನು ಬರೆದಿದ್ದಾರೆ.

    ಕಲ್ಲದೇವರನ್ನೇ ಕಡಿದು ದೇವರಾಗಿಸಿದವನು, ಮೊಸಳೆಯ ಸಾಕಿ ಹಸುಳೆಯನ್ನಾಗಿಸಿದವನು, ಕಡಲನೇ ತಂದು ಮಡಿಲಿಗೆ ಸುರಿದವನು. ಕಾಮನ ಬಿಲ್ಲಿಗೆ ಬಣ್ಣ ಬಣ್ಣಗಳ ಕಲರ್ ಕಾಗೆ ಹಾರಿಸಿದವನು ಎಂದು ಚಕ್ರವರ್ತಿ ಚಂದ್ರಚೂಡರವರು ಹೇಳುತ್ತಾರೆ. ಈ ವೇಳೆ ಕಿಚ್ಚ ಸುದೀಪ್ ಪ್ರಶಾಂತ್ ಸಂಬರ್ಗಿಯವರೆ ನಿಮಗೆ ಯಾಕೆ ಈ ಸಾಲುಗಳನ್ನು ಹೇಳಿದರು ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ಪ್ರಶಾಂತ್ ಗೊತ್ತಿಲ್ಲ ಎಂದಾಗ ಸುದೀಪ್ ಹಾಸ್ಯಮಯವಾಗಿ ನಿಮಗೆ ಗೊತ್ತಿಲ್ವಾ ಎನ್ನುತ್ತಾ ನಗುತ್ತಾರೆ.

    ಬಳಿಕ ಸುದೀಪ್ ಚಕ್ರವರ್ತಿವಯರೇ ವಿವರಿಸಿ ಯಾಕೆ ಪ್ರಶಾಂತ್ ಸಂಬರ್ಗಿಯವರ ಮೇಲೆ ಈ ಸಾಹಿತ್ಯ ಬರೆದಿದ್ದೀರಾ ಎಂದು ಹೇಳಿದಾಗ, ಕಲ್ಲದೇವರನ್ನೇ ಕಡಿದು ದೇವರಾಗಿಸಿದವನು ಎಂದರೆ ಕಲ್ಲಾಗಿದ್ದಾಗ ಅದು ಯಾರಿಗೂ ಬೇಡವಾಗಿರುತ್ತದೆ, ಆದರೆ ಅದು ದೇವರಾದಾಗ ಎಲ್ಲರಿಗೂ ಬೇಕಾಗುತ್ತದೆ. ಒಂದು ಬೇಡವಾಗಿರುವುದನ್ನು ಬೇಕಾಗಿಸುವಂತಹ ಶಕ್ತಿ ಪ್ರಶಾಂತ್‍ರವರಿಗೆ ಇದೆ. ಮೊಸಳೆಯ ಸಾಕಿ ಹಸುಳೆಯನ್ನಾಗಿಸಿದವನು ಎಂದರೆ ಮೊಸಳೆ ನೀರಿನಲ್ಲಿದ್ದಾಗ ಯಾರಾದರೂ ಹೋದರೆ, ಒಮ್ಮೆ ಅದು ಹಿಡಿದುಕೊಂಡರೆ ಬಿಡುವುದಿಲ್ಲ. ಆದರೆ ಅದನ್ನು ಮಗುವಿನಂತೆ ಮಾಡಿಸುತ್ತಾನೆ ಎಂದರೆ ಅವನು ನೂರಾರು ಬ್ರಹ್ಮಗಳಿಗೆ ತಂದೆ ಎಂದರ್ಥ.

    ಕಡಲನೇ ತಂದು ಮಡಿಲಿಗೆ ಸುರಿದ ಎಂದರೆ ಈ ಮನುಷ್ಯ ಯಾರಿಗಾದರೂ ಸಂತೋಷ ಕೊಡಲು ಪ್ರಾರಂಭಿಸಿದರೆ, ಅಷ್ಟು ಸಂತೋಷ ಕೊಡುವ ತಾಕತ್ತಿದೆ. ಹಾಗೇಯೇ ಅಷ್ಟೇ ಕಾಟವನ್ನು ಕೂಡ ಕೊಟ್ಟು ಬಿಡುತ್ತಾನೆ. ಕಾಮನ ಬಿಲ್ಲಿಗೆ ಬಣ್ಣ ಬಣ್ಣಗಳ ಕಲರ್ ಕಾಗೆ ಹಾರಿಸಿದವನು ಅಂದರೆ ಕಾಮನ ಬಿಲ್ಲು ಶಾಶ್ವತ ಅಲ್ಲ ಹೀಗೆ ಬಂದು ಹೀಗೆ ಹೋಗುತ್ತದೆ. ಸುಳ್ಳನ್ನೆ ತಂದು, ಸುಳ್ಳನ್ನೇ ಅಡುಗೆ ಮಾಡಿ, ಸುಳ್ಳನ್ನೇ ಬಡಿಸುವಷ್ಟು ಸತ್ಯವಂತ ಅಂತ ನಾನು ಭಾವಿಸಿದ್ದೇನೆ ಎಂದು ವ್ಯಂಗ್ಯಮಯವಾಗಿ ನುಡಿಯುತ್ತಾ, ಪ್ರಶಾಂತ್ ಸಂಬರ್ಗಿಯವರ ಮೇಲೆ ಕವಿತೆ ಬರೆದು ಬಣ್ಣಿಸಿದ್ದಾರೆ.

    ಒಟ್ಟಾರೆ ಚಕ್ರವರ್ತಿಯವರು ಆನ್ ದಿ ಸ್ಪಾರ್ಟ್ ಬರೆದ ಈ ಸಾಹಿತ್ಯ ಕೇಳಿ ಮನೆಯ ಎಲ್ಲಾ ಸದಸ್ಯರು ಎದ್ದು-ಬಿದ್ದು ನಕ್ಕಿದ್ದಾರೆ.