Tag: ಪ್ರಶಾಂತ್ ಸಂಬರ್ಗಿ

  • ಲವ್ ಯೂ ರಚಿತಾ, ನನ್ನ ನೀ ಹಗ್ ಮಾಡು: ಆರ್ಯವರ್ಧನ್ ಗುರೂಜಿ ಬೇಡಿಕೆ

    ಲವ್ ಯೂ ರಚಿತಾ, ನನ್ನ ನೀ ಹಗ್ ಮಾಡು: ಆರ್ಯವರ್ಧನ್ ಗುರೂಜಿ ಬೇಡಿಕೆ

    ಬಿಗ್ ಬಾಸ್ (Bigg Boss Season 9) ಮನೆಯಲ್ಲಿ ಆರ್ಯವರ್ಧನ್ ಗುರೂಜಿ (Aryavardhan Guruji) ವಿಚಿತ್ರ ಬೇಡಿಕೆ ಇಟ್ಟಿದ್ದಾರೆ. ಗುರೂಜಿ ಬಾಯಿಯಿಂದ ಇಂತಹ ನುಡಿಮುತ್ತುಗಳು ಬರುತ್ತಿದ್ದಂತೆಯೇ ಬಿಗ್ ಬಾಸ್ ಮನೆ ಸದಸ್ಯರೂ ಭಾವುಕರಾಗಿದ್ದಾರೆ. ಅಷ್ಟಕ್ಕೂ ಗುರೂಜಿಯ ಆ ಬೇಡಿಕೆ ಸದ್ಯಕ್ಕೆ ಈಡೇರದಿದ್ದರೂ, ಮುಂದಿನ ದಿನಗಳಲ್ಲಿ ಕಂಡಿತಾ ಸಾಧ್ಯವಾಗಬಹುದು ಎಂದು ಪ್ರಶಾಂತ್ ಸಂಬರ್ಗಿ ಭವಿಷ್ಯ ನುಡಿದಿದ್ದಾರೆ. ಹಾಗಾದರೆ, ಆರ್ಯವರ್ಧನ್ ಗುರೂಜಿ ಬೇಡಿಕೆ ಏನಾಗಿತ್ತು? ಯಾಕೆ ಬಿಗ್ ಬಾಸ್ ಮನೆಯ ಸದಸ್ಯರು ಭಾವುಕರಾದರು ಎನ್ನುವುದೇ ಸದ್ಯಕ್ಕಿರುವ ಕುತೂಹಲ.

    ಹೊಟ್ಟೆ ತುಂಬಾ ಊಟ ಮಾಡಿಕೊಂಡು ಬಂದ ಪ್ರಶಾಂತ್ ಸಂಬರ್ಗಿ(Prashant Sambargi) , ಕ್ಯಾಮೆರಾ ಮುಂದೆ ಬಂದು ‘ಬಿಗ್ ಬಾಸ್ ನನ್ನದು ಊಟ ಆಯಿತು, ನಿಮ್ಮದು ಆಯಿತಾ ಅಂದ್ಕೋತೀನಿ. ಥ್ಯಾಂಕ್ಸ್ ಬಿಗ್ ಬಾಸ್’ ಅಂದರು. ಅದನ್ನು ಗಮನಿಸುತ್ತಿದ್ದ ಆರ್ಯವರ್ಧನ್ ಗುರೂಜಿ, ‘ನೀವಷ್ಟೇ ಕ್ಯಾಮೆರಾ ಮುಂದೆ ಮಾತಾಡ್ಬೇಕಾ? ನಾನೂ ಮಾತಾಡ್ತೀನಿ’ ಅಂತ ಕ್ಯಾಮೆರಾ ಎದುರು ನಿಂತರು. ಪ್ರಶಾಂತ್ ಸಂಬರ್ಗಿ ರೀತಿಯಲ್ಲೇ ಗುರೂಜಿ ಕೂಡ ಬಿಗ್ ಬಾಸ್ ಗೆ ಏನಾದರೂ ಕೇಳುತ್ತಾರೆ ಅಂದುಕೊಂಡರೆ ಲೆಕ್ಕಾಚಾರವೇ ಉಲ್ಟಾ ಆಯಿತು. ಇದನ್ನೂ ಓದಿ: ‘ಬಿಗ್ ಬಾಸ್ ಸೀಸನ್ 9’ರ ಮೊದಲ ಮಹಿಳಾ ಕ್ಯಾಪ್ಟನ್ ಆಗಿ ದೀಪಿಕಾ ದಾಸ್ ಆಯ್ಕೆ

    ಕ್ಯಾಮೆರಾ ಮುಂದೆ ಬಂದ ಗುರೂಜಿ ತುಸು ಭಾವುಕರಾಗಿಯೇ ‘ ಐ ಲವ್ ಯೂ ರಚಿತಾ’ (Rachita) ಎಂದು ಬಿಟ್ಟರು. ರಚಿತಾ ಅಂದಾಕ್ಷಣ ಬಹುತೇಕರು ನಟಿ ರಚಿತಾ ರಾಮ್ ಗೆ ಹೇಳುತ್ತಿದ್ದಾರಾ ಅಂತ ಅಂದುಕೊಂಡಿದ್ದು ಸುಳ್ಳಲ್ಲ.  ಮತ್ತೆ ಮಾತು ಮುಂದುವರೆಸಿದ ಗುರೂಜಿ, ‘ನಿನಗೋಸ್ಕರ ನಾನು ಇಲ್ಲಿಗೆ ಬಂದಿದ್ದೇನೆ. ಆಚೆ ಬಂದ್ಮೇಲೆ ನನ್ನ ತುಂಬಾ ಲವ್ ಮಾಡು, ಯಾವತ್ತೂ ನಾನು ಲವ್ ನೋಡೇ ಇಲ್ಲ. ನಿನ್ನ ಪ್ರೀತಿ ಮಾಡಿಲ್ಲ. ನಿನ್ನ ಜೊತೆ ಲೈವ್ ಆಗಿ ಪ್ರೀತಿ ಮಾಡಿಲ್ಲ. ನಿನ್ನನ್ನು ನಾನು ರಿಯಲ್ ಆಗಿ ಲವ್ ಮಾಡ್ಬೇಕು. ನೀನು ನನ್ನ ಹಗ್ ಮಾಡಬೇಕು’ ಅಂತೆಲ್ಲ ಮಾತಾಡೋಕೆ ಶುರು ಮಾಡಿದ್ದರು. ಇದನ್ನು ಕೇಳಿ ಬಿಗ್ ಬಾಸ್ ಮನೆಯವರು ಒಂದು ಕ್ಷಣ ಶಾಕ್ ಗೆ ಒಳಗಾದರು.

    ರೋಮ್ಯಾಂಟಿಕ್ ಆಗಿ, ಎಮೋಷನಲ್ ಆಗಿ ಗುರೂಜಿ ಯಾವ ರಚಿತಾಗೆ ಈ ಮಾತುಗಳನ್ನು ಹೇಳುತ್ತಿರಬೇಕು ಎಂದು ಹಲವರು ತಲೆ ಕೆಡಿಸಿಕೊಂಡರು. ಆನಂತರ ಗೊತ್ತಾಗಿದ್ದು, ಗುರೂಜಿ ಅವರ ಪತ್ನಿಯ ಹೆಸರು ರಚಿತಾ ಅಂತ. ತಮ್ಮ ಪತ್ನಿಗೆ ಗುರೂಜಿ ಇದನ್ನೆಲ್ಲ ಹೇಳಿದ್ದಾರೆ ಎಂದು ಕೇಳಿ ಎಲ್ಲರೂ ನಿಟ್ಟುಸಿರಿಟ್ಟರು. ಅಷ್ಟಕ್ಕೆ ಸುಮ್ಮನಾಗದ ಗುರೂಜಿ, ‘ಇಲ್ಲಿ ಎಲ್ಲರೂ ನೈಟ್ ಹಗ್ ಮಾಡ್ತಾರೆ. ಅಯ್ಯಯ್ಯೋ ನಂಗೆ ನೋಡೋಕೆ ಆಗ್ತಿಲ್ಲ. ಅವರನ್ನೆಲ್ಲ ನೋಡಿ ನಿನ್ನ ಹಗ್ ಮಾಡ್ಬೇಕು ಅನಿಸ್ತಿದೆ’ ಎಂದು ತಮ್ಮೊಳಗೆ ತುಮುಲಗಳನ್ನು ಬಿಚ್ಚಿಟ್ಟರು ಗುರೂಜಿ.

    ಲವ್, ರಿಯಲ್ ಲವ್, ಹಗ್ ಅಂತೆಲ್ಲ ಮಾತನಾಡುತ್ತಾ ಗುರೂಜಿ, ನಂತರ ತುಸು ಭಾವುಕರಾಗಿ ‘ಇಲ್ಲಿವರೆಗೂ ಹೇಗೋ ಆಯ್ತು. ಕ್ಷಮಿಸಿ ಬಿಡಿ ನನ್ನ. ನಿನಗೋಸ್ಕರ ನಾನು ದುಡೀತೀನಿ. ನಿನಗೋಸ್ಕರ ಬದುಕ್ತೀನಿ’ ಎಂದು ಆಶ್ವಾಸನೆ ನೀಡಿದರು. ಗುರೂಜಿ ಮಾತುಗಳನ್ನು ಕೇಳಿಸಿಕೊಂಡ ದೊಡ್ಮನೆ ಸದಸ್ಯರು ಗುರೂಜಿ ಮಾತುಗಳಿಗೆ ಮೆಚ್ಚುಗೆ ಸೂಚಿಸಿದರು. ಗುರೂಜಿ ಮಾತು ಒಂದು ಕ್ಷಣ ಅಚ್ಚರಿ ಮತ್ತೊಂದು ಕ್ಷಣ ಭಾವುಕತೆಗೆ ನೂಕಿದ್ದು ಸುಳ್ಳಲ್ಲ. ಮನೆಯಿಂದ ಗುರೂಜಿ ಆಚೆ ಬಂದ ತಕ್ಷಣವೇ ರಚಿತಾ ಅವರು ಹಗ್ ಮಾಡಿಕೊಂಡು ಪತಿಯನ್ನು ಸ್ವಾಗತಿಸಿಕೊಳ್ಳಲಿ ಎಂದು ಹಾರೈಸೋಣ.

    Live Tv
    [brid partner=56869869 player=32851 video=960834 autoplay=true]

  • ಪ್ರಶಾಂತ್ ಸಂಬರ್ಗಿ ತಾಯಿಗೆ ಅವಮಾನ ಮಾಡಿದ ರೂಪೇಶ್ ರಾಜಣ್ಣ: ಬಹಿರಂಗ ಕ್ಷಮೆ

    ಪ್ರಶಾಂತ್ ಸಂಬರ್ಗಿ ತಾಯಿಗೆ ಅವಮಾನ ಮಾಡಿದ ರೂಪೇಶ್ ರಾಜಣ್ಣ: ಬಹಿರಂಗ ಕ್ಷಮೆ

    ಬಿಗ್ ಬಾಸ್ (Bigg Boss Season 9) ಮನೆಯಲ್ಲಿ ಪ್ರಶಾಂತ್ ಸಂಬರ್ಗಿ (Prashant Sambargi) ಮತ್ತು ರೂಪೇಶ್ ರಾಜಣ್ಣ ನಡೆ ಒಂದು ಕಡೆಯಾದರೆ, ಉಳಿದವರ ಆಟ ಮತ್ತೊಂದು ಕಡೆ ಆಗಿದೆ. ಎತ್ತು ಏರಿಗೆ ಎಳೆದರೆ, ಕೋಣ ನೀರಿಗೆ ಎಳೆಯಿತು ಅಂತಾರಲ್ಲ ಹಾಗಾಗಿದೆ ಬಿಗ್ ಬಾಸ್ ಮನೆಯ ಪರಿಸ್ಥಿತಿ. ದೊಡ್ಮನೆಯಲ್ಲಿರುವ ಬಹುತೇಕ ಸದಸ್ಯರು ಟಾಸ್ಕ್ ಗಾಗಿ ಕಿತ್ತಾಡಿಕೊಂಡರೆ, ಸಂಬರ್ಗಿ ಮತ್ತು ರೂಪೇಶ್ ವೈಯಕ್ತಿಕ ಕಾರಣಗಳಿಗಾಗಿ ಜಗಳ ಮಾಡುತ್ತಿದ್ದಾರೆ. ಈ ಜಗಳವು ಅವರ ಕುಟುಂಬದ ಸದಸ್ಯರಿಗೆ ಮುಜುಗರ ಪಡುವಂತಾಗಿದೆ.

    ವೈಯಕ್ತಿಕವಾಗಿ ಅವರಿಬ್ಬರೂ ಹೇಗಾದರೂ ಕಿತ್ತಾಡಿಕೊಳ್ಳಲಿ, ಯಾವ ಪದಗಳಿಂದಲಾದರೂ ನಿಂದಿಸಿಕೊಳ್ಳಲಿ. ಆದರೆ, ತಮ್ಮ ಮನೆಯ ಸದಸ್ಯರಿಗೆ ಅಪಮಾನ ಮಾಡುವಂತಹ ಮಾತುಗಳನ್ನು ಆಡುವುದು ಸರಿಯಲ್ಲ ಎನ್ನುವ ಮಾತು ಬಿಗ್ ಬಾಸ್ ಪ್ರೇಮಿಗಳದ್ದು. ಗೋಲ್ಡ್ ಮೈನ್ ಟಾಸ್ಕ್ ನಲ್ಲಂತೂ ಇಬ್ಬರೂ ನಾಲಿಗೆ ಹರಿಬಿಟ್ಟು, ತಮ್ಮ ಮರ್ಯಾದೆಯನ್ನು ತಾವೇ ಕಳೆದುಕೊಂಡಿದರು. ಅದರಲ್ಲೂ ಪ್ರಶಾಂತ್ ಸಂಬರ್ಗಿ ತಾಯಿಗೆ ಅಪಮಾನ ಮಾಡುವ ರೀತಿಯಲ್ಲಿ ರೂಪೇಶ್ ರಾಜಣ್ಣ ಮಾತನಾಡಿ ತಮ್ಮ ವ್ಯಕ್ತಿತ್ವಕ್ಕೆ ಮಸಿ ಬಳಿದುಕೊಂಡರು. ರೂಪೇಶ್ (Rupesh Rajanna) ಆಡಿದ ಆ ಮಾತು ಸಂಬರ್ಗಿಯನ್ನು ಸಖತ್ ಕೆರಳಿಸಿತು. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ರಾಜಣ್ಣ ಮೇಲೆ ಪ್ರಶಾಂತ್ ಸಂಬರ್ಗಿ ವಾಗ್ದಾಳಿ

    ಇದೇ ವಿಚಾರವಾಗಿ ಸಂಬರ್ಗಿ ಮತ್ತು ರೂಪೇಶ್ ಪದೇ ಪದೇ ಜಗಳ ಮಾಡುತ್ತಿದ್ದಾರೆ. ‘ನನ್ನ ತಾಯಿಗೆ ಅವಮಾನ ಮಾಡಿದ್ದೀರಿ. ಇದು ಮಾನನಷ್ಟ ಮೊಕದ್ದಮೆ ಹೂಡುವಂತಹ ಪದವಾಗಿದೆ. ನಮ್ಮ ತಾಯಿಯ ಮಾನವನ್ನು ಕರ್ನಾಟಕದ ಜನತೆ ಮುಂದೆ ಹರಾಜು ಹಾಕಿದ್ದೀರಿ. ನಾನು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ’ ಎಂದು ರೂಪೇಶ್ ಮೇಲೆ ಸಂಬರ್ಗಿ ಕೂಗಾಡಿದ್ದಾರೆ. ಕೊನೆಗೂ ತಾವು ಮಾಡಿದ್ದ ತಪ್ಪಿನ ಅರಿವಾಗಿ ರೂಪೇಶ್ ಬಹಿರಂಗವಾಗಿಯೇ ಕ್ಷಮೆಯಾಚಿಸಿದ್ದಾರೆ. ನಾನು ಆ ಎರಡು ಪದಗಳನ್ನು ಆಡಬಾರದಿತ್ತು. ಆಡಿದ್ದಕ್ಕೆ ಕ್ಷಮೆ ಕೇಳುವೆ. ಆದರೆ ಉಳಿದ ಪದಗಳಿಗೆ ನಾನು ಬದ್ಧನಾಗಿದ್ದೇನೆ ಎಂದು ಮತ್ತೆ ಚುಚ್ಚಿದ್ದಾರೆ.

    ಗೋಲ್ಡ್ ಮೈನ್ ಟಾಸ್ಕ್‌ನಲ್ಲಿ ಪ್ರಶಾಂತ್ ಸಂಬರ್ಗಿಗೆ ರಾಜಾ ಇಲಿ, ಹೇಡಿ, ಕುತಂತ್ರಿ ಅಂತೆಲ್ಲ ಕರೆದಿದ್ದಾರೆ ರೂಪೇಶ್ ರಾಜಣ್ಣ. ಇಷ್ಟೆಲ್ಲ ಅನಿಸಿಕೊಂಡಿದ್ದ ಸಂಬರ್ಗಿ ಕೂಡ ಸುಮ್ಮನೆ ಕೂತಿಲ್ಲ, ರೂಪೇಶ್ ರಾಜಣ್ಣಗೂ ಬಾಯಿಗೆ ಬಂದಂತೆ ಬೈದಿದ್ದಾರೆ. ರೋಲ್‌ಕಾಲ್ ಹೋರಾಟಗಾರ ಎಂದೆಲ್ಲ ಜರಿದಿದ್ದಾರೆ. ‘ತಾವು ರೋಲ್‌ಕಾಲ್ ಮಾಡಿದ್ರೆ ಪ್ರೂ ಮಾಡಿ. ನೇಣಿಗೂ ಸಿದ್ಧನಿದ್ದೇನೆ’ ಎಂದು ರೂಪೇಶ್ ರಾಜಣ್ಣ ಮರು ಉತ್ತರ ನೀಡಿದ್ದರು. ಈ ಇಬ್ಬರ ಗಲಾಟೆ ಬಿಗ್ ಬಾಸ್ ನೋಡುಗರಿಗಂತೂ ಸಖತ್ ಕಿರಿಕಿರಿ ಮಾಡುತ್ತಿರುವುದಂತೂ ಸತ್ಯ.

    Live Tv
    [brid partner=56869869 player=32851 video=960834 autoplay=true]

  • ಕನ್ನಡದ ಹೆಸರಲ್ಲಿ ರೋಲ್‌ಕಾಲ್‌: ಪ್ರೂವ್ ಮಾಡಿದರೆ ನೇಣಿಗೇರುವೆ ಎಂದ ರೂಪೇಶ್ ರಾಜಣ್ಣ

    ಕನ್ನಡದ ಹೆಸರಲ್ಲಿ ರೋಲ್‌ಕಾಲ್‌: ಪ್ರೂವ್ ಮಾಡಿದರೆ ನೇಣಿಗೇರುವೆ ಎಂದ ರೂಪೇಶ್ ರಾಜಣ್ಣ

    ಮಾತಿನ ಚಕಮಕಿಯಿಂದಾಗಿ ‘ಬಿಗ್ ಬಾಸ್’ (Bigg Boss Season 9) ಮನೆ ಕೊತ ಕೊತ ಕುದಿಯುತ್ತಿದೆ. ಮೊದಲ ದಿನದಂದು ಇಲ್ಲಿಯತನಕ ಪ್ರಶಾಂತ್ ಸಂಬರ್ಗಿ ಮತ್ತು ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ(Rupesh Rajanna)  ಮಧ್ಯೆ ಜಗಳವಾಗುತ್ತಲೇ ಇದೆ. ಇಬ್ಬರೂ ಒಂದು ರೀತಿಯಲ್ಲಿ ಹಾವು ಮುಂಗಸಿ ತರಹ ಆಡುತ್ತಿದ್ದಾರೆ. ವೈಯಕ್ತಿಕ ವಿಚಾರವನ್ನು ಕೆದಕಿ, ತಮ್ಮ ಮರ್ಯಾದೆಯನ್ನು ತಾವೇ ಕ್ಯಾಮೆರಾ ಮುಂದೆ ಕಳೆದುಕೊಳ್ಳುತ್ತಿದ್ದಾರೆ. ಕ್ಯಾಪ್ಟೆನ್ಸಿಗಾಗಿ ನಡೆದ ‘ಬಿಗ್ ಬಾಸ್ ಗೋಲ್ಡ್ ಮೈನ್’ ಟಾಸ್ಕ್ ನಲ್ಲಿ ಮತ್ತೆ ಇಬ್ಬರೂ ಗಲಾಟೆ ಮಾಡಿಕೊಂಡಿದ್ದಾರೆ.

    ಈ ವಾರದ ಕ್ಯಾಪ್ಟೆನ್ಸಿಗಾಗಿ ವಿಭಿನ್ನ ರೀತಿಯ ಟಾಸ್ಕ್ ಒಂದನ್ನು ಆಯೋಜನೆ ಮಾಡಿದ್ದಾರೆ ಬಿಗ್ ಬಾಸ್. ಈ ಟಾಸ್ಕ್ ನಲ್ಲಿ ನಿಧಿ ಶೋಧಕರು ಚಿನ್ನವನ್ನು ಹುಡುಕಿ, ಅದನ್ನು ವಿಸರ್ಜಕರ ಬಳಿ ವಿನಿಯೋಗಿಸಿ, ಎದುರಾಳಿಯನ್ನು ಕ್ಯಾಪ್ಟೆನ್ಸಿ ಟಾಸ್ಕ್ ನಿಂದ ಹೊರಗಿಡಬೇಕು.  ಮೊದಲ ಸುತ್ತಿನಲ್ಲಿ ರೂಪೇಶ್ ಶೆಟ್ಟಿ ಜೊತೆ ಒಪ್ಪಂದ ಮಾಡಿಕೊಂಡಿದ್ದ ರೂಪೇಶ್ ರಾಜಣ್ಣ, ಟಾಸ್ಕ್ ಅನುಸಾರ ಪ್ರಶಾಂತ್ ಸಂಬರ್ಗಿಯನ್ನು ಔಟ್ ಮಾಡಿದರು. ಎರಡನೇ ಸುತ್ತಿನಲ್ಲಿ ವಿನೋದ್ ಗೊಬ್ಬರಗಾಲ ಜೊತೆ ಪ್ರಶಾಂತ್ ಸಂಬರ್ಗಿ ಡೀಲ್ ಮಾಡಿಕೊಂಡು ರೂಪೇಶ್ ರಾಜಣ್ಣನನ್ನು ಹೊರ ಹಾಕಿದರು. ಇದೇ ಜಗಳಕ್ಕೆ ಕಾರಣವಾಯಿತು. ಇದನ್ನೂ ಓದಿ:ತಮಿಳು ಬಿಗ್ ಬಾಸ್‌ಗೆ ಕಾಲಿಟ್ಟ ಕನ್ನಡತಿ ರಚಿತಾ ಮಹಾಲಕ್ಷ್ಮಿ

    ಕುತಂತ್ರಿ ಬುದ್ದಿಯಿಂದ ತನ್ನನ್ನು ಔಟ್ ಮಾಡಿದರು ಎಂದು ರೂಪೇಶ್ ರಾಜಣ್ಣ ಕೂಗಾಡಿದರು. ಸಂಬರ್ಗಿ (Prashant Sambargi) ಅವರನ್ನು ‘ಹೇಡಿ, ರಾಜಾ ಇಲಿ’ ಎಂದೆಲ್ಲ ಜರಿದರು. ಮಾತಿಗೆ ಮಾತು ಬೆಳೆದು ‘ಡಬ್ಬಾ ನನ್ ಮಗ, ಹೆದರುಪುಕ್ಲ ರೂಪೇಶ್ ರಾಜಣ್ಣ, ಯಾರ‍್ಯಾರ ಬಳಿ ರೋಲ್ ಮಾಡಿದ್ದಾರೋ, ಏನೋ? ಕನ್ನಡದ ಕಂದ ಹೇಡಿ’ ಅಂತೆಲ್ಲ ಪ್ರಶಾಂತ್ ಸಂಬರಗಿ ಜರಿದರು. ರೋಲ್‌ಕಾಲ್‌ ವಿಚಾರವಾಗಿ ರೂಪೇಶ್ ರಾಜಣ್ಣ ಗರಂ ಆದರು. ಇಬ್ಬರ ನಡುವಿನ ಗಲಾಟೆ ತಾರಕಕ್ಕೇರಿ ಬಿಗ್ ಬಾಸ್ ಮನೆಯ ವಾತಾವರಣವೇ ಬದಲಾಯಿತು.

    ತನಗೆ ರೋಲ್‌ಕಾಲ್‌ (Roll Call) ಅಂದ ಪ್ರಶಾಂತ್ ಸಂಬರ್ಗಿಯನ್ನು ದುರುಗುಟ್ಟಿ ನೋಡಿದ ರೂಪೇಶ್ ರಾಜಣ್ಣ, ‘ನಾನೇನಾದರೂ ರೋಲ್‌ಕಾಲ್ ಮಾಡಿದ್ದರೆ, ಯಾರಿಂದಾದರೂ ನಯಾಪೈಸೆ ಪಡೆದಿದ್ದರೆ, ಅದನ್ನು ಸಂಬರ್ಗಿ ಸಾಬೀತು ಪಡಿಸಲಿ. ನಾನು ರೋಲ್‌ಕಾಲ್ ಮಾಡಿದ್ದೇನೆ ಅಂತ ಪ್ರೂವ್ ಮಾಡಿದರೆ ಹ್ಯಾಂಗ್ ಮಾಡಿಕೊಳ್ಳಲು ಸಿದ್ಧ’ ಎಂದು ಘೋಷಿಸಿದರು. ‘ಹೊರಗಡೆ ಕೋಟಿ ಕೋಟಿ ವ್ಯವಹಾರ ಮಾಡೋ ಕುತಂತ್ರಿಗಳು ನಾವಲ್ಲ’ ಎಂದು ಪರೋಕ್ಷವಾಗಿ ಸಂಬರ್ಗಿಗೆ ಟಾಂಗ್ ಕೂಡ ಕೊಟ್ಟರು.

    ಕನ್ನಡದ (Kannada) ವಿಚಾರದಲ್ಲಿ ಮೊದಲಿನಿಂದಲೂ ರೂಪೇಶ್ ರಾಜಣ್ಣ ಮತ್ತು ಪ್ರಶಾಂತ್ ಸಂಬರ್ಗಿ ಮಧ್ಯೆ ಶೀತಲಸಮರ ನಡೆಯುತ್ತಲೇ ಇದೆ. ಈ ಹಿಂದೆ ‘ಸಂಬರ್ಗಿ ಕನ್ನಡ ವಿರೋಧಿ’ ಎಂದು ರೂಪೇಶ್ ಆರೋಪಿಸಿದ್ದರು. ‘ಕನ್ನಡದ ವಿಚಾರದಲ್ಲಿ ರೂಪೇಶ್ ಏನು ಅಂತ ಎಲ್ಲರಿಗೂ ಗೊತ್ತಿದೆ’ ಎಂದು ಸಂಬರ್ಗಿ ಪ್ರಶ್ನೆ ಮಾಡಿದ್ದರು. ಇದೀಗ ರೋಲ್‌ಕಾಲ್ ವಿಷಯ ಬಿಗ್ ಬಾಸ್ ಮನೆಯಲ್ಲಿ ಮಾತ್ರವಲ್ಲ, ದೊಡ್ಮನೆ ಆಚೆಯೂ ಚರ್ಚೆಗೆ ಕಾರಣವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಸಾನ್ಯ ಅಯ್ಯರ್ ತಂಟೆಗೆ ಬಂದವರಿಗೆ ರೂಪೇಶ್ ಶೆಟ್ಟಿ ಖಡಕ್ ವಿಲನ್ : ಪ್ರಶಾಂತ್ ಸಂಬರ್ಗಿ ಎಚ್ಚರಿಕೆ

    ಸಾನ್ಯ ಅಯ್ಯರ್ ತಂಟೆಗೆ ಬಂದವರಿಗೆ ರೂಪೇಶ್ ಶೆಟ್ಟಿ ಖಡಕ್ ವಿಲನ್ : ಪ್ರಶಾಂತ್ ಸಂಬರ್ಗಿ ಎಚ್ಚರಿಕೆ

    ಕಿರುತೆರೆಯ ಬಿಗ್ ಶೋ ಬಿಗ್ ಬಾಸ್‌ನ ಲವ್ ಬರ್ಡ್ಸ್ ಆಗಿ ಮಿಂಚುತ್ತಿರುವ ಸಾನ್ಯ ಅಯ್ಯರ್ ಮತ್ತು ರೂಪೇಶ್ ಶೆಟ್ಟಿ ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಇದೀಗ ಸಾನ್ಯ ತಂಟೆಗೆ ಬಂದ್ರೆ ರೂಪೇಶ್ ವಿಲನ್ ಆಗುತ್ತಾನೆ ಎಂದು ಸಂಬರ್ಗಿ ಮಾತನಾಡಿರುವ ಮಾತು ಹೈಲೆಟ್ ಆಗಿದೆ.

    ಸಾನ್ಯ ಮತ್ತು ರೂಪೇಶ್ ಲವ್ವಿ ಡವ್ವಿ ವಿಚಾರ ಮನೆಮಂದಿಗೆ ಮಾತ್ರವಲ್ಲ ನೋಡುಗರಿಗೆ ಈ ಜೋಡಿ ಇಷ್ಟವಾಗಿದೆ. ಹಾಗೆಯೇ ಮನೆಯಲ್ಲಿ ಈ ಜೋಡಿಯನ್ನು ಕಂಡ್ರೆ‌ ಉರಿದುಕೊಳ್ಳುವವರು ಇದ್ದಾರೆ. ಸದ್ಯ ರೂಪೇಶ್ ಮತ್ತು ಸಾನ್ಯ ಬಗ್ಗೆ ರಾಕೇಶ್ ಬಳಿ ಸಂಬರ್ಗಿ ಚರ್ಚಿಸಿದ್ದಾರೆ. ಮನೆಮಂದಿಯ ಬಗ್ಗೆ ಈ‌ ಮೊದಲೇ ತಿಳಿದುಕೊಂಡು‌ ಬಂದಿದ್ದೇನೆ. ಅವರ ಪಾಸಿಟಿವ್ & ನೆಗೆಟಿವ್ ಗೊತ್ತು ಎಂದು ರಾಕಿ ಬಳಿ ಪ್ರಶಾಂತ್ ಸಂಬರ್ಗಿ ಚರ್ಚೆ ಮಾಡಿದ್ದಾರೆ. ಇದನ್ನೂ ಓದಿ:ತಮಿಳು ಬಿಗ್ ಬಾಸ್‌ಗೆ ಕಾಲಿಟ್ಟ ಕನ್ನಡತಿ ರಚಿತಾ ಮಹಾಲಕ್ಷ್ಮಿ

    ಮನೆಮಂದಿಯ ಪಾಸಿಟಿವ್ ಮತ್ತು ನೆಗೆಟಿವ್ ಬಗ್ಗೆ ರಾಕಿ ಮತ್ತು ಸಂಬರ್ಗಿ ಡಿಸ್ಕಸ್ ಮಾಡಿದ್ದಾರೆ. ಈ ವೇಳೆ ಸಾನ್ಯ, ರೂಪೇಶ್ ಬಗ್ಗೆ ಸಂಬರ್ಗಿ ಮಾತನಾಡಿದ್ದಾರೆ. ಸಾನ್ಯ ಒಳ್ಳೆಯ ಹುಡುಗಿ, ರೂಪೇಶ್ ಹಾರ್ಟ್ಲಿ ಒಳ್ಳೆಯ ಹುಡುಗ. ಆದರೆ ಅವನ ಕೆಲವೊಂದು ವೈಯಕ್ತಿಕ ವಿಚಾರಕ್ಕೆ ಕೈ ಹಾಕಿದ್ರೆ ಅವನಿಗೆ ಆಗಲ್ಲ. ಊಟ, ಸ್ನಾನ, ಸಾನ್ಯ ವಿಚಾರಕ್ಕೆ ರೂಪೇಶ್ ವಿಲನ್ ಆಗುತ್ತಾರೆ ಎಂದು ಸಂಬರ್ಗಿ ರಾಕೇಶ್ ಅಡಿಗ ಬಳಿ ಹೇಳಿದ್ದಾರೆ. ಸಾನ್ಯ ತಂಟೆಗೆ ಬಂದ್ರೆ ಶೆಟ್ರು ವಿಲನ್ ಆಗುತ್ತಾರೆ ಎಂಬ ಮಾತನ್ನ ಸಂಬರ್ಗಿ ಮಾತನಾಡಿದ್ದಾರೆ.

    ಕೆಲ ದಿನಗಳ ಹಿಂದೆ ರೂಪೇಶ್ ಯಾವಾಗಲೂ ಶೌಚಾಲಯದಲ್ಲಿಯೇ ಇರುತ್ತಾರೆ ಎಂದು ದೊಡ್ಡ ಚರ್ಚೆ ಆಗಿತ್ತು. ಆಗ ರೂಪೇಶ್ ಖಡಕ್ ಆಗಿಯೇ ಉತ್ತರ ನೀಡಿದ್ದರು. ಹಾಗಾಗಿ ರೂಪೇಶ್ ಆದ್ಯತೆ ಕೊಡುವ ಸ್ಥಾನದಲ್ಲಿ ಸಾನ್ಯ ಕೂಡ ಇದ್ದಾರೆ ಎಂಬ ಮಾತನ್ನ ಸಂಬರ್ಗಿ ಆಡಿದ್ದಾರೆ. ಮುಂದಿನ ದಿನಗಳಲ್ಲಿ ದೊಡ್ಮನೆ ಆಟ ಯಾವ ರೀತಿ ತಿರುವು ಪಡೆಯಲಿದೆ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ರಾಜಣ್ಣ ಮೇಲೆ ಪ್ರಶಾಂತ್ ಸಂಬರ್ಗಿ ವಾಗ್ದಾಳಿ

    ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ರಾಜಣ್ಣ ಮೇಲೆ ಪ್ರಶಾಂತ್ ಸಂಬರ್ಗಿ ವಾಗ್ದಾಳಿ

    ದೊಡ್ಮನೆಗೆ ಎಂಟ್ರಿ ಕೊಟ್ಟ ದಿನದಿಂದ ರೂಪೇಶ್ ರಾಜಣ್ಣ (Rupesh Rajanna) ಮತ್ತು ಪ್ರಶಾಂತ್ ಸಂಬರ್ಗಿಗೂ ಮಾತಿನ ಜಟಾಪಟಿ ನಡೆಯುತ್ತಲೇ ಇದೆ. ಇತ್ತೀಚೆಗೆ ಕನ್ನಡದ ವಿಷ್ಯವಾಗಿ ಇಬ್ಬರ ನಡುವೆ ವಾಗ್ದಾಳಿ ನಡೆದಿತ್ತು. ಈಗ ಮತ್ತೆ ಬಿಗ್ ಬಾಸ್ ಮನೆಯಲ್ಲಿ ಇಬ್ಬರ ನಡುವೆ ಕಿತ್ತಾಟ ನಡೆದಿದೆ.

    ಬಿಗ್ ಬಾಸ್ (Bigg Boss Season 9) ಮನೆಯಲ್ಲಿ ಸಾಕಷ್ಟು ವಿಷ್ಯವಾಗಿ ಸಂಬರ್ಗಿ, ರೂಪೇಶ್ ರಾಜಣ್ಣ ಹೈಲೆಟ್ ಆಗಿದ್ದಾರೆ.  ಆಗಾಗ ಇಬ್ಬರ ಮಾತಿನ ವಾಗ್ದಾಳಿ ತಾರಕಕ್ಕೆ ಏರುತ್ತಿದೆ. ಇದೀಗ ಮತ್ತೆ ಅದೇ ರೀತಿಯ ಘಟನೆವೊಂದು‌ ನಡೆದಿದೆ. ವಾರದ ಕ್ಯಾಪ್ಟೆನ್ಸಿ ವಿಷ್ಯವಾಗಿ ಬಿಗ್ ಬಾಸ್ ಮನೆಯಲ್ಲಿ ನಿಧಿ ಶೋಧ ಟಾಸ್ಕ್ ನೀಡಲಾಗಿದೆ. ಬಜರ್ ಆದಾಗ ಟಾರ್ಚ್ ಹಿಡಿದುಕೊಂಡು ನಿಧಿ ಶೋಧಕ್ಕೆ ಹೋಗಬೇಕು. ನಂತರ ಚಿನ್ನಕ್ಕಾಗಿ ಡೀಲಿಂಗ್ ಕೂಡ ಮಾಡಬೇಕು. ಈ ಸಂದರ್ಭದಲ್ಲಿ ಪ್ರಶಾಂತ್ ಸಂಬರ್ಗಿ ಅವರಿಂದ ಮೋಸ ಆಗಿದೆ ಎಂದು ಆರೋಪಿಸಿದರು ರೂಪೇಶ್ ರಾಜಣ್ಣ. ಈ ವಿಚಾರಕ್ಕೆ ಕಿತ್ತಾಟ ನಡೆದೇ ಇತ್ತು.

    ನಿಮ್ಮ ರೀತಿ ಚಿಲ್ರೆ ಆಟ ಆಡಲ್ಲ. ಬಾಯಿಂದ ಮಾತುಗಳು ಬರ್ತಿವೆ, ಹೇಗೋ ತಡ್ಕೊಂಡಿದೀನಿ. ನಾನು ಏನಿದ್ದರೂ ನೇರವಾಗಿ ಡೀಲ್ ಮಾಡ್ತೀನಿ. ನಿಮ್ಮ ರೀತಿ ಹೇಡಿ ರೀತಿ ಮಾಡಲ್ಲ. ಮೊದಲ ದಿನ ನಿಮಗೆ ಕುತಂತ್ರಿ ಎಂದು ಹೇಳಿದ್ದಾರೆ. ಅದು ಸರಿಯಾಗಿಯೇ ಇದೆ’ ಎಂದರು ರೂಪೇಶ್ ರಾಜಣ್ಣ. ಇದಕ್ಕೆ ಪ್ರಶಾಂತ್ ಸಂಬರ್ಗಿ (Prashant Sambargi) ಟೀಕೆ ಮಾಡಿದರು. ಯಾರ ವಂಶ ಕುತಂತ್ರಿ ಅಂತ ಗೊತ್ತು’ ಎಂದು ಪ್ರಶಾಂತ್ ಹೇಳಿದರು. ಇದಕ್ಕೆ ರೂಪೇಶ್ ಸಿಟ್ಟಾದರು. ಇದನ್ನೂ ಓದಿ:ತಮಿಳು ಬಿಗ್ ಬಾಸ್‌ಗೆ ಕಾಲಿಟ್ಟ ಕನ್ನಡತಿ ರಚಿತಾ ಮಹಾಲಕ್ಷ್ಮಿ

    ಇಷ್ಟಕ್ಕೆ ನಿಲ್ಲದ ಇವರ ಜಟಾಪಟಿ, ಆಯ್ತು ರಾಜಹುಲಿ ಅವರೇ ಬಿಡಿ ಎಂದಿದ್ದಾರೆ ಸಂಬರ್ಗಿ, ಅದಕ್ಕೆ ಪ್ರತಿಯುತ್ತರವಾಗಿ ನೀವು ಇಲಿ ನಾ ಎಂದು ಸಂಬರ್ಗಿಗೆ ರೂಪೇಶ್ ರಾಜಣ್ಣ ಟಾಂಗ್ (Tong) ಕೊಟ್ಟಿದ್ದಾರೆ. ಮಾಸ್ಟರ್ ಮೈಂಡ್ ಸಂಬರ್ಗಿ ಆಟಕ್ಕೆ ಮನೆಮಂದಿ ಕೂಡ ಗಪ್ ಚುಪ್ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಭಾಷೆ ಬತ್ತಳಿಕೆ ಇಟ್ಕೊಂಡು ಆಟ ಆಡಬೇಡಿ: ರೂಪೇಶ್‌ ರಾಜಣ್ಣಗೆ ಸಂಬರ್ಗಿ ವಾರ್ನಿಂಗ್‌

    ಭಾಷೆ ಬತ್ತಳಿಕೆ ಇಟ್ಕೊಂಡು ಆಟ ಆಡಬೇಡಿ: ರೂಪೇಶ್‌ ರಾಜಣ್ಣಗೆ ಸಂಬರ್ಗಿ ವಾರ್ನಿಂಗ್‌

    ನ್ನಡ ಪರ ಹೋರಾಟದ ಮೂಲಕ ಗುರುತಿಸಿಕೊಂಡಿರುವ ರೂಪೇಶ್ ರಾಜಣ್ಣ (Roopesh Rajanna), ಬಿಗ್‌ಬಾಸ್ (Bigg Boss) ಮನೆಯಲ್ಲೂ ಅವರು ಇದೇ ವಿಚಾರಕ್ಕೆ ಗುರುತಿಸಿಕೊಳ್ಳುತ್ತಿದ್ದಾರೆ. ದೊಡ್ಮನೆಯಲ್ಲಿ ಯಾರಾದರೂ ಬೇರೆ ಭಾಷೆ ಮಾತನಾಡಿದರೆ ವಿರೋಧ ವ್ಯಕ್ತಪಡಿಸುತ್ತಾರೆ ರೂಪೇಶ್. ಇದರಿಂದಾಗಿ ಅವರು ಮನೆಯವರಿಂದ ಟೀಕೆಗೆ ಒಳಗಾದ ಉದಾಹರಣೆ ಕೂಡ ಇದೆ. ಈಗ ರೂಪೇಶ್ ರಾಜಣ್ಣ ಅವರು ಪ್ರಶಾಂತ್ ಸಂಬರ್ಗಿ(Prashanth Sambargi)ಯಿಂದ ಖಡಕ್ ಎಚ್ಚರಿಕೆ ಪಡೆದಿದ್ದಾರೆ.

    ರೂಪೇಶ್ ರಾಜಣ್ಣ ಅವರು ದೊಡ್ಮನೆಯಲ್ಲಿ ಸೈಲೆಂಟ್ ಆಗಿದ್ದಾರೆ. ಮನೆಯಿಂದ ಆಚೆ ಇದ್ದ ರೀತಿಗೂ ಹೊರಗಡೆ ಇರುವ ರೀತಿಗೂ ಬದಲಾವಣೆಯಿದೆ. ಇದನ್ನು ಸ್ವತಃ ರೂಪೇಶ್ ಕೂಡ ಒಪ್ಪಿಕೊಂಡಿದ್ದಾರೆ. ಇನ್ನು, ರೂಪೇಶ್ ರಾಜಣ್ಣ ಹಾಗೂ ಪ್ರಶಾಂತ್ ಸಂಬರ್ಗಿ ಮಧ್ಯೆ ಹಲವು ವಿಚಾರಕ್ಕೆ ಜಗಳ ಆಗಿದ್ದೂ ಇದೆ. ಈಗ ಭಾಷೆ ವಿಚಾರಕ್ಕೆ ರೂಪೇಶ್ ಹಾಗೂ ಪ್ರಶಾಂತ್ ಮಧ್ಯೆ ಕಿತ್ತಾಟ ನಡೆದಿದೆ.

    ರೂಪೇಶ್ ರಾಜಣ್ಣ ಅವರು ಸಂಬರ್ಗಿ ಹತ್ತಿರ ಬಂದು ನನ್ನಲ್ಲಿ ಏನಾದರೂ ಬದಲಾವಣೆ ಆಗಬೇಕೇ ಎಂದು ಕೇಳಿದ್ದರು. ಇದಕ್ಕೆ ಉತ್ತರಿಸಿದ್ದ ಪ್ರಶಾಂತ್ ಸಂಬರ್ಗಿ, ನಿಮ್ಮ ಬಳಿ ಇರೋದು ಒಂದೇ ಅಸ್ತ್ರ, ಅದು ಭಾಷೆಯ ಅಸ್ತ್ರ. ಬಿಗ್ ಬಾಸ್(Bigg Boss House) ಮನೆಯಲ್ಲಿರುವ ಎಲ್ಲರಿಗೂ ಕನ್ನಡದ ಮೇಲೆ ಪ್ರೀತಿ ಇದೆ ಎಂದಿದ್ದಾರೆ. ಇದನ್ನು ಕೇಳಿ ರೂಪೇಶ್ ರಾಜಣ್ಣ ಗುಡುಗಿದ್ದಾರೆ. ಇಬ್ಬರ ಮಧ್ಯೆ ಈ ವಿಚಾರವಾಗಿ ಚರ್ಚೆ ನಡೆದಿದೆ. ಇದನ್ನೂ ಓದಿ:`ಪುನೀತ ಪರ್ವ’ ಕಾರ್ಯಕ್ರಮಕ್ಕೆ ಸಿಎಂಗೆ ಆಹ್ವಾನ ನೀಡಿದ ಅಣ್ಣಾವ್ರ ಕುಟುಂಬ

    ಭಾಷೆ ಬತ್ತಳಿಕೆ ಇಟ್ಕೊಂಡು ಆಡಿದ್ರೆ ನಿಮಗೆ ಒಳ್ಳೆಯದಾಗಲ್ಲ. ಇಷ್ಟು ಮಾತ್ರ ಹೇಳೋಕೆ ಆಗೋದು ಎಂದು ಪ್ರಶಾಂತ್ ಸಂಬರ್ಗಿ ಅವರು ರೂಪೇಶ್ ರಾಜಣ್ಣಗೆ ನೇರವಾಗಿ ಹೇಳಿದ್ದಾರೆ. ಭಾಷೆ ಬತ್ತಳಿಕೆ ಇಟ್ಕೊಂಡು, ಅದನ್ನೇ ಅಸ್ತ್ರದ ರೀತಿ ಬಳಸಿ ಆಟ ಆಡಬೇಡಿ ಎಂದು ಖಡಕ್ ಆಗಿ ಸಂಬರ್ಗಿ ಮಾತನಾಡಿದ್ದಾರೆ. ದೊಡ್ಮನೆಯಲ್ಲಿ ಸಾಕಷ್ಟು ಬಾರಿ ರೂಪೇಶ್ ಹಾಗೂ ಪ್ರಶಾಂತ್ ಸಂಬರ್ಗಿ ಮಧ್ಯೆ ಕಿತ್ತಾಟ ನಡೆದಿತ್ತು. ಅದು ಭಾಷೆ ವಿಚಾರಕ್ಕೆ ಅನ್ನೋದು ವಿಪರ್ಯಾಸ. ʻಬಿಗ್ ಬಾಸ್ʼ ಮನೆಗೆ ಬರುವ ಮುಂಚೆಯೇ ಸಾಕಷ್ಟು ವಿಚಾರವಾಗಿ ಇಬ್ಬರ ನಡುವೆ ಮನಸ್ತಾಪವಿತ್ತು. ಈಗ ಅದು ದೊಡ್ಮನೆಯಲ್ಲೂ ಮುಂದುವರೆದಿದೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್ ಮನೆಯ ಅಷ್ಟೂ ಹುಡುಗಿಯರಿಗೂ ಗುರೂಜಿ ಆಗಿದ್ದಾರೆ ‘ಅಪ್ಪಾಜಿ’

    ಬಿಗ್ ಬಾಸ್ ಮನೆಯ ಅಷ್ಟೂ ಹುಡುಗಿಯರಿಗೂ ಗುರೂಜಿ ಆಗಿದ್ದಾರೆ ‘ಅಪ್ಪಾಜಿ’

    ಬಿಗ್ ಬಾಸ್ (Bigg Boss Season 9) ಮನೆಯು ಕೆಲವರಿಗೆ ಪ್ರೇಮಿಗಳ ತಾಣವಾಗಿದ್ದರೆ, ಇನ್ನೂ ಕೆಲವರು ಬಾಂಧವ್ಯದ ಕೊಂಡಿಯಾಗಿ ಕಾಣುತ್ತಿದೆ. ಹೀಗಾಗಿಯೇ ಅಲ್ಲಿ ಪ್ರೇಮಿಗಳು ಹುಟ್ಟಿಕೊಳ್ಳುತ್ತಿದ್ದಾರೆ, ಅಪ್ಪ, ತಂಗಿ, ಅಣ್ಣ ಹೀಗೆ ಸಂಬಂಧಗಳು ಬೆಸೆಯುತ್ತಿವೆ. ಬಿಗ್ ಬಾಸ್ ಮನೆಯಲ್ಲಿ ಅದೆಷ್ಟೋ ಹುಡುಗಿಯರು ಅರುಣ್ ಅಣ್ಣನಾಗಿದ್ದರೆ, ಆರ್ಯವರ್ಧನ್ ಗುರೂಜಿ ತಂದೆಯ ರೀತಿಯಂತೆ ಕಾಣುತ್ತಿದ್ದಾರೆ. ಹಾಗಾಗಿಯೇ ದಿವ್ಯ ಉರುಡುಗ ಸೇರಿದಂತೆ ಹಲವರು ಗುರೂಜಿಗೆ ಅಪ್ಪಾಜಿ ಅಂತಾನೇ ಕರೆಯುತ್ತಿದ್ದಾರೆ.

    ದಿವ್ಯಾ ಉರುಡುಗ ಅವರು ಗುರೂಜಿಯನ್ನು (Aryavardhan Guruji) ಅಪ್ಪಾಜಿ ಎಂದು ಕರೆದರೆ, ಗುರೂಜಿ ಕೂಡ ದಿವ್ಯಾರನ್ನು ಮಗಳೆ (Daughter) ಎಂದೇ ಕರೆಯುತ್ತಾರೆ. ಸದ್ಯ ಈ ಬಾಂಧವ್ಯದಲ್ಲಿ ಕೊಂಚ ಬಿರುಕು ಮೂಡಿದೆ. ಹಾಗಾಗಿ ನಿನ್ನನ್ನು ನಾನು ಮಗಳೆ ಎಂದು ಕರೆಯಲಾರೆ ಅಂತ ಗುರೂಜಿ ಹೇಳಿದ್ದರೆ, ನಾನೂ ನಿಮ್ಮನ್ನು ಅಪ್ಪ ಅಂತ ಕರೆಯಲಾರೆ ಎಂದು ದಿವ್ಯಾ (Divya Uruduga) ಕೂಡ ಪ್ರತ್ಯುತ್ತರ ನೀಡಿದ್ದಾರೆ. ಟಾಸ್ಕ್ ವಿಚಾರವಾಗಿ ನಡೆದ ಗಲಾಟೆಯಲ್ಲಿ ಈ ಮಾತು ಕೇಳಿ ಬಂದಿದೆ. ಇದನ್ನೂ ಓದಿ : ಕನ್ನಡದ ನಟಿ ದಿವ್ಯಾ ಶ್ರೀಧರ್ ಲವ್ ಜಿಹಾದ್ ಆರೋಪಕ್ಕೆ ಪತಿ ಅಮ್ಜಾದ್ ಖಾನ್ ಪ್ರತಿಕ್ರಿಯೆ

    ಮೊನ್ನೆ ನಡೆದ ತುಲಾಭಾರ ಟಾಸ್ಕ್ ನಲ್ಲಿ ಆರ್ಯವರ್ಧನ್ ಗುರೂಜಿಗೆ ‘ನಿಮ್ಮಲ್ಲಿ ರಾಕ್ಷಸಿ ಗುಣವಿದೆ’ ಎಂದು ಜರಿದಿದ್ದರು. ಅದರಂತೆ ಕುಪಿತಗೊಂಡ ಗುರೂಜಿ, ತಮ್ಮ ನೋವನ್ನು ತೋಡಿಕೊಂಡಿದ್ದರಂತೆ. ಆಗ ‘ಮಗಳೆ ಅನ್ನುವುದನ್ನು ನಿಮ್ಮಿಂದ ಕಿತ್ತಾಕಿದ್ದೇನೆ, ಇನ್ಮುಂದೆ ನನ್ನನ್ನು ಹಾಗೆ ಕರೆಯಬೇಡಿ’ ಎಂದು ಹೇಳಿದ್ದರು ದಿವ್ಯಾ.  ಸಂಬರ್ಗಿಯಿಂದ (Prashant Sambargi) ತಂಗಿ ಪದ ಕಿತ್ತು ಹಾಕಿದೆ. ನನ್ನಿಂದ ಮಗಳು ಪದ ಕಿತ್ತ್ ಹಾಕಿದೆ. ಏನೆಲ್ಲ ಕಿತ್ತಾಕ್ತಿದ್ಯಾ ಎಂದು ಗುರೂಜಿ ತಮಾಷೆ ಮಾಡಿದ್ದರು.

    ದಿವ್ಯಾ ಕೋಪ ಮಾಡಿಕೊಂಡು ಮಗಳು ಅಂತ ಕರೆಯಬೇಡಿ ಎಂದು ಗುರೂಜಿಗೆ ಹೇಳಿದ್ದರೂ, ಗುರೂಜಿ ಮಾತ್ರ ಈಗಲೂ ಮಗಳೇ ಅಂತಾನೇ ಕರೆಯುತ್ತಿದ್ದಾರೆ. ದಿವ್ಯಾಗೆ ಮಗಳು ಅಂತ ಕರೆದರೆ, ರೂಪೇಶ್ ಶೆಟ್ಟಿಗೆ ಮಗನ ಸ್ಥಾನ ಕೊಟ್ಟಿದ್ದಾರೆ. ವಯಸ್ಸಿನ ಅಂತವರನ್ನೂ ಲೆಕ್ಕಿಸದೇ ಬಿಗ್ ಬಾಸ್ ಮನೆಯಲ್ಲಿ ಎಲ್ಲರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹೋಗುತ್ತಿದ್ದಾರೆ ಆರ್ಯವರ್ಧನ್ ಗುರೂಜಿ.

    Live Tv
    [brid partner=56869869 player=32851 video=960834 autoplay=true]

  • ಕಳಪೆ ಆಟದಿಂದ ದೀಪಿಕಾಗೆ ಮುಖ ತೋರಿಸಲಾಗದೇ ಟಾಯ್ಲೆಟ್ ಒಳಗೆ ಸೇರಿಕೊಂಡ ಸಂಬರ್ಗಿ

    ಕಳಪೆ ಆಟದಿಂದ ದೀಪಿಕಾಗೆ ಮುಖ ತೋರಿಸಲಾಗದೇ ಟಾಯ್ಲೆಟ್ ಒಳಗೆ ಸೇರಿಕೊಂಡ ಸಂಬರ್ಗಿ

    ಬಿಗ್ ಬಾಸ್ (Bigg Boss) ಮನೆ ಇದೀಗ ರಣರಂಗವಾಗಿ ಮಾರ್ಪಟ್ಟಿದೆ. ಎರಡನೇ ವಾರಕ್ಕೆ ಕಾಲಿಟ್ಟಿರುವ ದೊಡ್ಮನೆಯಲ್ಲಿ ಪ್ರಶಾಂತ್ ಸಂಬರ್ಗಿ ಕಳಪೆ ಪ್ರದರ್ಶನ ನೀಡಿ, ದೀಪಿಕಾ ದಾಸ್‌ಗೆ(Deepika Das) ಮುಖ ತೋರಿಸಲಾಗದೇ ಟಾಯ್ಲೆಟ್ ಒಳಗೆ ಸೇರಿಕೊಂಡಿದ್ದಾರೆ. ಮನೆ ಮಂದಿಯನ್ನ ಬುಗುರಿ ಆಡಿಸಿದಂತೆ ಆಡುತ್ತಿದ್ದ ಸಂಬರ್ಗಿ ಅವರು ಇದೀಗ ತನ್ನ ತಂಡವನ್ನ ಗೆಲ್ಲಿಸಲಾಗದೆ ಸೋತು ಮಕಾಡೆ ಮಲಗಿದ್ದಾರೆ.

    ಕಳೆದ ಸೀಸನ್‌ನಿಂದ ಮೋಡಿ ಮಾಡಿದ್ದ ಪ್ರಶಾಂತ್ ಸಂಬರ್ಗಿ(Prashanth Sambargi) ಇದೀಗ ಬಿಗ್ ಬಾಸ್ ಸೀಸನ್ 9ಕ್ಕೂ ಕಾಲಿಟ್ಟಿದ್ದಾರೆ. ಒಂದಲ್ಲಾ ಒಂದು ವಿಚಾರವಾಗಿ ಮನೆಯ ಕಲಹಕ್ಕೆ ಕಾರಣವಾಗುವ ಸಂಬರ್ಗಿ ಇದೀಗ ಅನುಪಮಾ ಮುಂದೆ ಸೋತು ದೀಪಿಕಾ ಮುಖ ತೋರಿಸಲಾಗದೇ ಟಾಯ್ಲೆಟ್ ಒಳಗೆ ಸೇರಿಕೊಂಡಿದ್ದಾರೆ.

    ಎರಡನೇ ವಾರದಲ್ಲಿ ದೀಪಿಕಾ ದಾಸ್ (Deepika Das) ಮತ್ತು ಅನುಪಮಾ ಗೌಡ (Anupama Gowda) ಅವರನ್ನ ಕ್ಯಾಪ್ಟನ್ ಮಾಡಿ ಎರಡು ತಂಡಗಳನ್ನಾಗಿ ವಿಂಗಡಿಸಿತ್ತು. ಮೊದಲ ಟಾಸ್ಕ್‌ನಲ್ಲಿ ಬುಟ್ಟಿಯ ಒಳಗೆ ಹಾಕುವ ಟಾಸ್ಕ್‌ನಲ್ಲಿ ಮಯೂರಿ ಮುಂದೆ ಸಂಬರ್ಗಿ ಸೋತಿದ್ದರು. ಆ ಬಳಿಕ ದಿನದ ಮತ್ತೊಂದು ಟಾಸ್ಕ್ ಪ್ರಾರಂಭವಾಯ್ತು, ಎರಡು ಕಾರುಗಳನ್ನು ನಿಲ್ಲಿಸಿ ಅದರ ಪ್ರತಿಯೊಂದು ಟೈರ್ ಅನ್ನು ಜಾಕ್ ಸಹಾಯದಿಂದ ಬಿಚ್ಚಿ ಹೊಸ ಟೈರ್ ಹಾಕುವ ಟಾಸ್ಕ್ ಅದಾಗಿತ್ತು. ಇದನ್ನೂ ಓದಿ:ಮಗಳ ಫೋಟೋ ಜೊತೆ ಹೆಸರು ರಿವೀಲ್ ಮಾಡಿದ `ಕಾಂತಾರಾ’ ಹೀರೋ ರಿಷಬ್ ಶೆಟ್ಟಿ

    ಟೈಯರ್ ಅನ್ನು ಬದಲಾಯಿಸುವ ಅಭ್ಯಾಸ ನನಗೆ ಇದೆಯೆಂದು 200% ಈ ಟಾಸ್ಕ್ ನಾನು ಆಡಬಲ್ಲೆ ಎಂದು ದೀಪಿಕಾ ತಂಡದಿಂದ ಪ್ರಶಾಂತ್ ಸಂಬರ್ಗಿ ಮೊದಲು ಹೋದರು. ಅನುಪಮಾ ತಂಡದಿಂದ ರಾಕೇಶ್ ಮೊದಲು ಹೋದರು. ಆದರೆ ಪ್ರಶಾಂತ್ ಸಂಬರ್ಗಿಗೆ ಒಂದೇ ಒಂದು ಟೈರ್ ಅನ್ನು ಫಿಟ್ ಮಾಡಲು ಸಾಧ್ಯವಾಗಲಿಲ್ಲ. ಆದರೆ ಅನುಪಮಾ ತಂಡದಿಂದ ರಾಕೇಶ್, ದರ್ಶ್ ಚಂದಪ್ಪ, ಆರ್ಯವರ್ಧನ್ ಗುರೂಜಿ ಹಾಗೂ ಅಮೂಲ್ಯ ಅವರುಗಳು ಟೈರ್ ಅನ್ನು ಆರಾಮವಾಗಿ ಬದಲಾಯಿಸಿ ಟಾಸ್ಕ್ ಅನ್ನು ಸುಲಭವಾಗಿ ಗೆದ್ದುಬಿಟ್ಟರು.

    ಆದರೆ ಒಂದೂ ಟೈಯರ್ ಬದಲಾಯಿಸಲಾಗದೆ ಸೋತ ಪ್ರಶಾಂತ್, ಬೇಸರದಿಂದ ಟಾಯ್ಲೆಟ್ ಒಳಗೆ ಸೇರಿಕೊಂಡು ಬಿಟ್ಟಿದ್ದರು. ಎಷ್ಟು ಹೊತ್ತಾದರೂ ಬರಲಿಲ್ಲ, ಕೊನೆಗೆ ದೀಪಿಕಾ, ರೂಪೇಶ್ ಇನ್ನಿತರರು ಹೋಗಿ ಕರೆದ ಬಳಿಕ ಅವರು ಹೊರಗೆ ಬಂದರು. ಹೊರಗೆ ಬಂದರೂ ಬಹಳ ಬೇಸರದಲ್ಲಿಯೇ ಇದ್ದರು. ಆದರೆ ಅವರ ತಂಡದ ಸದಸ್ಯರಾದ ರೂಪೇಶ್ ರಾಜಣ್ಣ ಹಾಗೂ ನವಾಜ್ ಅವರುಗಳು ಪ್ರಶಾಂತ್ ಬಗ್ಗೆ ತೀವ್ರ ಬೇಸರದಲ್ಲಿದ್ದರು. ಅವರಿಗೆ ಟೈರ್ ಬದಲಾಯಿಸುವುದು ಬರಲಿಲ್ಲವೆಂದ ಮೇಲೆ ಮೊದಲು ಹೋಗಿದ್ದು ಏಕೆ ಎಂದು ರೂಪೇಶ್ ರಾಜಣ್ಣ ಪ್ರಶ್ನೆ ಮಾಡಿದರು. ಇನ್ನು ನವಾಜ್, ತನಗೆ ಆಡಲು ಅವಕಾಶ ಸಿಗಲಿಲ್ಲವೆಂದು ಬೇಸರದಲ್ಲಿದ್ದರು. ನಾನು ನಾಮಿನೇಟ್ ಆಗಿದ್ದೇನೆ, ನನಗೆ ಆಡಲು ಅವಕಾಶ ಬೇಕು ಎಂದು ಕ್ಯಾಪ್ಟನ್ ದೀಪಿಕಾ ಬಳಿ ಅಳಲು ತೋಡಿಕೊಂಡಿದ್ದರು. ಸಂಬರ್ಗಿ ಕಳಪೆ ಪ್ರದರ್ಶನಕ್ಕೆ ದೀಪಿಕಾ ದಾಸ್ ತಂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ಬಿಗ್ ಬಾಸ್’ ಮನೆಯಲ್ಲಿ ಜಗಳ: ಗೆಳೆಯನ ವಿರುದ್ಧವೇ ಗರಂ ಆದ ಸಂಬರ್ಗಿ

    ‘ಬಿಗ್ ಬಾಸ್’ ಮನೆಯಲ್ಲಿ ಜಗಳ: ಗೆಳೆಯನ ವಿರುದ್ಧವೇ ಗರಂ ಆದ ಸಂಬರ್ಗಿ

    ಬಿಗ್ ಬಾಸ್ (Bigg Boss Season 9) ಮನೆಯಲ್ಲಿ ಟಾಸ್ಕ್ ವಿಚಾರಕ್ಕೆ ಜಗಳ ಕಾವೇರಿದೆ. ಸ್ಯಾಂಡ್ ವಿಚ್ ಮಾಡೋ ವಿಚಾರಕ್ಕೆ 2 ತಂಡಗಳು ಜಗಳ ಆಡಿವೆ. ಕ್ಯಾಪ್ಟನ್ ಕೊಟ್ಟ ತೀರ್ಪು ಒಪ್ಪಲು ಪ್ರಶಾಂತ್ ಸಂಬರ್ಗಿ ರೆಡಿಯಿಲ್ಲ ಅದಕ್ಕೆ ಜಗಳ ಆಗಿದೆ. ಈ ವೇಳೆ ಗೆಳೆಯ ಗೊಬ್ಬರಗಾಲ ವಿರುದ್ಧವೇ ಸಂಬರ್ಗಿ ತಿರುಗಿ ಬಿದ್ದಿದ್ದಾರೆ.

    ದೊಡ್ಮನೆಯಲ್ಲಿ ಕ್ಯಾಪ್ಟನ್ಸಿ ಆಯ್ಕೆಗೆ ವಿವಿಧ ಟಾಸ್ಕ್​ಗಳನ್ನು ನೀಡಲಾಗುತ್ತಿದೆ. ಅದಕ್ಕಾಗಿ ಮನೆಯಲ್ಲಿ ಎರಡು ತಂಡಗಳನ್ನಾಗಿ ಮಾಡಲಾಗಿದೆ. ಒಂದು ಗುಂಪಿಗೆ ಅನುಪಮಾ ಗೌಡ ಕ್ಯಾಪ್ಟನ್ ಆದರೆ, ಮತ್ತೊಂದು ಟೀಂಗೆ ದೀಪಿಕಾ ಕ್ಯಾಪ್ಟನ್. ಈ ಎರಡೂ ಟೀಂಗಳಿಗೆ ವಿವಿಧ ರೀತಿಯ ಟಾಸ್ಕ್ ನೀಡಲಾಗುತ್ತಿದೆ. ಮೊದಲ ಟಾಸ್ಕ್​ನಲ್ಲಿ  ಸಂಬರ್ಗಿ (Prashant Sambargi) ಫುಲ್ ರಾಂಗ್ ಆಗಿದ್ದಾರೆ. ಇದನ್ನೂ ಓದಿ: ಕಾಂತಾರ ಕಾಳಗ: ಜಾಲತಾಣಗಳಲ್ಲಿ ಸೈದ್ಧಾಂತಿಕ, ರಾಜಕೀಯ, ಪ್ರಾದೇಶಿಕ ಸೊಗಡಿನ ಚರ್ಚೆ

    ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್​ನ ಪ್ರಕಾರ ಸ್ಪರ್ಧಿಗಳು ಜಿಮ್ ಸೈಕಲ್ ತುಳಿಯುತ್ತಾ ಸ್ಯಾಂಡ್​ವಿಚ್ ಮಾಡಬೇಕಿತ್ತು. ಈ ಟಾಸ್ಕ್​ ಮುಗಿದ ಮೇಲೆ ಪ್ರಶಾಂತ್ ಸಂಬರ್ಗಿ ಸಖತ್ ವೈಲೆಂಟ್ ಆದರು. ಕ್ಯಾಪ್ಟನ್ ಆಗಿದ್ದ ವಿನೋದ್ (Vinod Gobbargala) ಅವರು ತಮ್ಮ ನಿರ್ಧಾರಕ್ಕೆ ಬದ್ಧರಾಗಿದ್ದರು. ಟಾಸ್ಕ್​ನ ಕೆಲ ನಿಯಮಗಳನ್ನು ವಿವಿಧ ರೀತಿಯಲ್ಲಿ ಬದಲಾಯಿಸಿ ಹೇಳಿದ್ದರು ಎಂಬುದು ಪ್ರಶಾಂತ್ ಸಂಬರ್ಗಿ ವಾದ ಮಾಡಿದ್ದಾರೆ. ವಿನೋದ್​ ನಡೆ ಅನೇಕರಿಗೆ ಇಷ್ಟವಾಗಿಲ್ಲ. ಅನೇಕರ ಕೆಂಗಣ್ಣಿಗೆ ಕಾರಣವಾಗಿದೆ. ಅದರಲ್ಲೂ ಪ್ರಶಾಂತ್ ಸಂಬರ್ಗಿ ಅವರು ಸಖತ್ ವೈಲೆಂಟ್ ಆಗಿದ್ದಾರೆ.

    ಕಳೆದ ಸೀಸನ್ ನಲ್ಲೂ ಗುರುತಿಸಿಕೊಂಡಿದ್ದ ಪ್ರಶಾಂತ್ ಸಂಬರ್ಗಿ ಸೀಸನ್ ೯ ರ ಹೊಸತರಲ್ಲಿ ಸೈಲೆಂಟ್ ಆಗಿದ್ದರು. ಈಗ ಮತ್ತೆ ಬಿಗ್ ಬಾಸ್ ಮನೆಯಲ್ಲಿ ಸಂಬರ್ಗಿ ಫುಲ್ ರಾಂಗ್ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಾಕೇಶ್ ಅಡಿಗ ಮಾಡಿದ ಎಡವಟ್ಟಿಗೆ ಸಿಡಿದೆದ್ದ ಸಂಬರ್ಗಿ

    ರಾಕೇಶ್ ಅಡಿಗ ಮಾಡಿದ ಎಡವಟ್ಟಿಗೆ ಸಿಡಿದೆದ್ದ ಸಂಬರ್ಗಿ

    ಟಿವಿ ಲೋಕದಲ್ಲಿ ಇದೀಗ ಬಿಗ್ ಬಾಸ್ (Bigg Boss) ಹವಾ ಜೋರಾಗಿದೆ. ಹೊಸ ಸೀಸನ್‌ನಲ್ಲಿ ಪ್ರವೀಣ ಜೊತೆ ನವೀನರ ಜುಗಲ್‌ಬಂದಿ ನೋಡುಗರನ್ನ ಮೋಡಿ ಮಾಡುತ್ತಿದೆ. ಇದೀಗ ಮನೆಗೆ ಎರಡನೇ ಬಾರಿ ಪ್ರಶಾಂತ್ ಸಂಬರ್ಗಿ ಎಂಟ್ರಿಯಾಗಿದೆ. ಖಡಕ್ ಮಾತಿನ ಮೂಲಕ ಹೈಲೆಟ್ ಆಗಿರುವ ಸಂಬರ್ಗಿ ಇದೀಗ ರಾಕೇಶ್ ಅಡಿಗ (Rakesh Adiga)  ಮೇಲೆ ಸಿಡಿದೆದ್ದಿದ್ದಾರೆ. ದೊಡ್ಮನೆಯಲ್ಲಿ ರಾಕೇಶ್ ಮಾಡಿರುವ ಎಡವಟ್ಟಿನಿಂದ ಸಂಬರ್ಗಿ ಫುಲ್ ಗರಂ ಆಗಿದ್ದಾರೆ.

    ಬಿಗ್ ಬಾಸ್ ಇದೀಗ ಒಂದು ವಾರ ಪೂರ್ತಿಗೊಂಡು ಎರಡನೇ ವಾರಕ್ಕೆ ಕಾಲಿಟ್ಟಿದೆ. ರಾಕೇಶ್ ಪ್ರ್ಯಾಂಕ್ ಮಾಡಲು ಹೋಗಿ ಪ್ರಶಾಂತ್ ಸಂಬರ್ಗಿ ಅವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಎಲ್ಲರನ್ನೂ ಪ್ರ‍್ಯಾಂಕ್ ಮಾಡುವ ನಿರ್ಧಾರಕ್ಕೆ ಅನುಪಮಾ ಹಾಗೂ ರಾಕೇಶ್ ಬಂದರು. ಈ ಐಡಿಯಾ ಬಂದಿದ್ದೇ ಬಾಯಲ್ಲಿ ಪೇಸ್ಟ್ ಹಾಕಿಕೊಂಡ ರಾಕೇಶ್ ಅವರು ಗಾರ್ಡನ್ ಏರಿಯಾಗೆ ಬಂದು ಬಿದ್ದರು. ಪಿಡ್ಸ್ ಬಂದ ರೀತಿಯಲ್ಲಿ ಒದ್ದಾಡಿದರು. ಅಮೂಲ್ಯ ಗೌಡ ಅವರು ನಗುತ್ತಲೇ ಜೋರಾಗಿ ಕೂಗಿ ಮನೆ ಮಂದಿಯನ್ನು ಕರೆದರು.

    ರಾಕೇಶ್ ಬಿದ್ದಿದ್ದಾರೆ. ಕಬ್ಬಿಣ ಹಿಡಿದುಕೊಂಡು ಬನ್ನಿ ಪ್ಲೀಸ್ ಎಂದು ಕರೆದರು. ಮನೆ ಮಂದಿಯೆಲ್ಲ ಆತಂಕದಿಂದ ಓಡಿ ಬಂದರು. ಪ್ರಶಾಂತ್ ಸಂಬರ್ಗಿ ಅವರಂತೂ ಸಾಕಷ್ಟು ಆತಂಕಗೊಂಡರು. ಮನೆಯಲ್ಲಿ ಆತಂಕದ ವಾತಾವರಣ ಹೆಚ್ಚುತ್ತಿದ್ದಂತೆ ಇದು ಪ್ರ‍್ಯಾಂಕ್ (Prank)  ಎಂದು ನಕ್ಕಿದ್ದಾರೆ ರಾಕೇಶ್. ಇದನ್ನು ನೋಡಿ ಪ್ರಶಾಂತ್ ಸಂಬರ್ಗಿಗೆ ಸಖತ್ ಸಿಟ್ಟು ಬಂದಿದೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಿಂದ ಐಶ್ವರ್ಯ ಪಿಸ್ಸೆ ಔಟ್

    ರಾಕೇಶ್ (Rakesh) ಕಾಲರ್ ಹಿಡಿದ ಪ್ರಶಾಂತ್ ಸಂಬರ್ಗಿ (Prashanth Sambargi) ರಾಕೇಶ್ ಇದು ಸರಿ ಅಲ್ಲ. ಈ ರೀತಿ ಮಾಡೋದ್ರಿಂದ ನೀವು ಆ ರೋಗಕ್ಕೆ, ಆ ರೋಗ ಬಂದವರಿಗೆ ಅವಮಾನ ಮಾಡಿದ್ದೀರಿ. ನನ್ನ ಮಗನಿಗೂ ಇದೇ ರೀತಿಯ ಕಾಯಿಲೆ ಇತ್ತು. ಆತ ನಿಂತಲ್ಲೇ ನಿಂತು ಬಿಡುತ್ತಿದ್ದ. ಚಿಕಿತ್ಸೆ ಕೊಡಿಸಿ ಕೊಡಿಸಿ ಆತನಿಗೆ ಕಾಯಿಲೆ ಈಗ ಗುಣಮುಖ ಆಗಿದೆ. ನನ್ನ ಮಗನೇ ನನಗೆ ನೆನಪಿಗೆ ಬಂದ ಎಂದು ಸಂಬರ್ಗಿ ಗಳಗಳನೇ ಅತ್ತಿದ್ದಾರೆ. ಈ ಪ್ರ‍್ಯಾಂಕ್‌ನಲ್ಲಿ ಭಾಗಿ ಆದ ಅನೇಕರು ಪ್ರಶಾಂತ್ ಬಳಿ ಕ್ಷಮೆ ಕೇಳಿದರು. ಪ್ರಶಾಂತ್ ಸಂಬರ್ಗಿ ಅವರು ರಾಕೇಶ ಕಾಲರ್ ಹಿಡಿದಾಗ ಒಂದಷ್ಟು ಮಂದಿಗೆ ಆತಂಕ ಕೂಡ ಆಯಿತು. ಬಳಿಕ ರಾಕೇಶ್ ಕೂಡ ಪ್ರಶಾಂತ್ ಅವರ ಬಳಿ ಕ್ಷಮೆ ಕೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]