Tag: ಪ್ರಭುದ್ಯಾ

  • ವಿದ್ಯಾರ್ಥಿನಿ ಪ್ರಬುದ್ಧ್ಯಾ ನಿಗೂಢ ಸಾವು ಕೇಸ್- ತಾಯಿ ದೂರಿನನ್ವಯ ಎಫ್‍ಐಆರ್

    ವಿದ್ಯಾರ್ಥಿನಿ ಪ್ರಬುದ್ಧ್ಯಾ ನಿಗೂಢ ಸಾವು ಕೇಸ್- ತಾಯಿ ದೂರಿನನ್ವಯ ಎಫ್‍ಐಆರ್

    ಬೆಂಗಳೂರು: ಇತ್ತೀಚೆಗೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪದವಿ ವಿದ್ಯಾರ್ಥಿನಿ ಪ್ರಭುದ್ಧ್ಯಾ (Student Prabhudhya) ನಿಗೂಢ ಸಾವು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

    ಮಗಳದ್ದು ಆತ್ಮಹತ್ಯೆಯಲ್ಲ ಕೊಲೆ ಅಂತ ತಾಯಿ ಕೆ.ಆರ್ ಸೌಮ್ಯ ಆರೋಪಿಸಿದ್ದರು. ಅದರಂತೆ ದೂರು ಕೂಡ ದಾಖಲಿಸಿದ್ದರು. ಈ ಸಂಬಂಧ ಸುಬ್ರಮಣ್ಯಪುರ ಪೊಲೀಸರು ಐಪಿಸಿ ಸೆಕ್ಷನ್ 302 ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಮೇ 15 ರಂದು 20 ವರ್ಷದ ಪ್ರಭುದ್ಧ್ಯಾ ಮೃತದೇಹ ಮನೆಯ ಬಾತ್‍ರೂಮ್‍ನಲ್ಲಿ ಪತ್ತೆ ಆಗಿತ್ತು. ಕತ್ತು ಹಾಗೂ ಕೈ ಕೊಯ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಅಂತಾ ಪೊಲೀಸರು ಪರಿಗಣಿಸಿದ್ದರು. ಮಗಳ ಸಾವಿನ ಬಗ್ಗೆ ತಾಯಿ ಅನುಮಾನ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ನನ್ನ ಮಗಳದ್ದು ಆತ್ಮಹತ್ಯೆ ಅಲ್ಲ, ಕೊಲೆ- ಮೃತ ಪ್ರಭುಧ್ಯಾ ತಾಯಿ ಗಂಭೀರ ಆರೋಪ

    ನನ್ನ ಮಗಳ ಕತ್ತು ಮತ್ತು ಕೈಯನ್ನ ಚಾಕುವಿನಿಂದ ಕುಯ್ದು ಕ್ರೂರವಾಗಿ ಕೊಲೆ ಮಾಡಿದ್ದಾರೆ. ಮುಖಕ್ಕೆ ಮತ್ತು ತಲೆಯ ಹಿಂಭಾಗಕ್ಕೆ ಬಲವಾಗಿ ಹೊಡೆಯಲಾಗಿದೆ. ಹೀಗಾಗಿ ನನ್ನ ಮಗಳದ್ದು ಆತ್ಮಹತ್ಯೆ ಅಲ್ಲ ಕೊಲೆ ಅಂತ ದೂರು ದಾಖಲಿಸಿದ್ದರು. ಇದೀಗ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಅನುಮಾನಸ್ಪದ ವ್ಯಕ್ತಿಗಳನ್ನ ವಿಚಾರಣೆ ನಡೆಸ್ತಿದ್ದಾರೆ.

  • ನನ್ನ ಮಗಳದ್ದು ಆತ್ಮಹತ್ಯೆ ಅಲ್ಲ, ಕೊಲೆ- ಮೃತ ಪ್ರಭುಧ್ಯಾ ತಾಯಿ ಗಂಭೀರ ಆರೋಪ

    ನನ್ನ ಮಗಳದ್ದು ಆತ್ಮಹತ್ಯೆ ಅಲ್ಲ, ಕೊಲೆ- ಮೃತ ಪ್ರಭುಧ್ಯಾ ತಾಯಿ ಗಂಭೀರ ಆರೋಪ

    ಬೆಂಗಳೂರು: ನನ್ನ ಮಗಳದ್ದು ಆತ್ಮಹತ್ಯೆ ಅಲ್ಲ ಕೊಲೆ ಎಂದು ಮೃತ ಪ್ರಭುಧ್ಯಾ (Prabhudya) ತಾಯಿ ಸೌಮ್ಯ ಕಣ್ಣೀರು ಹಾಕುತ್ತಾ ಗಂಭೀರ ಆರೋಪ ಮಾಡಿದ್ದಾರೆ.

    ಮಗಳ ಸಾವಿನ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ನನ್ನ ಮಗಳು ಆತ್ಮಹತ್ಯೆಗೆ ಶರಣಾಗುವ ಯುವತಿಯಲ್ಲ. ಪ್ರತಿದಿನ ಕಾಲೇಜಿಗೆ ಹೋದಾಗ ಕರೆ ಮಾಡಿ ಹೇಳುತ್ತಿದ್ದಳು. ಬುಧವಾರ ಮಧ್ಯಾಹ್ನ 1:30ರ ಸುಮಾರಿಗೆ ಫೋನ್ ಮಾಡಿ ಫ್ರೆಂಡ್ ಜೊತೆ ಪಾನಿಪುರಿ ತಿಂತಿದ್ದೀನಿ ಅಂದ್ಲು. ಆದರೆ ಮಧ್ಯಾಹ್ನ 3:30ರ ಸುಮಾರಿಗೆ ಹೀಗಾಗಿದೆ ಎಂದು ಕಣ್ಣೀರಿಟ್ಟರು.

    ಮನೆಯ ಮೈನ್ ಡೋರ್ ಕ್ಲೋಸ್ ಆಗಿತ್ತು. ಹಿಂದಿನ ಡೋರ್ ತೆಗೆದಿತ್ತು. ಮೊದಲು ನೋಡಿದಾಗ ಮಗಳ ಮೊಬೈಲ್ ಇತ್ತು. ಆಮೇಲೆ ಮೊಬೈಲ್ ಇರಲಿಲ್ಲ. ಗಿಣಿ ಸಾಕಿದ ಹಾಗೆ ನನ್ನ ಮಗಳನ್ನ ಸಾಕಿದ್ದೆ. ಯಾರೋ ನನ್ನ ಮಗಳನ್ನ ಸಾಯಿಸಿದ್ದಾರೆಂದು ಸೌಮ್ಯಾ ಗೋಳಾಡಿದ್ದಾರೆ.

    ಮೊಬೈಲ್ ಸೀಜ್: ಇನ್ನು ಪ್ರಕರಣ ದಾಖಲಿಸಿಕೊಂಡ ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಚುರುಕುಗೊಳಿಸಿದ್ದಾರೆ. ಯುವತಿಯ ಮೊಬೈಲ್‍ನ್ನು ವಶಕ್ಕೆ ಪಡೆದು, ಎಲ್ಲಾ ಆಯಾಮದಲ್ಲೂ ತನಿಖೆ ಕೈಗೆತ್ತಿಕೊಂಡಿದ್ದಾರೆ. ಇದನ್ನೂ ಓದಿ: ಆಟೋದಲ್ಲಿ ಬಂದು ಅಂಜಲಿ ಕೊಲೆಗೈದು ಹಂತಕ ಎಸ್ಕೇಪ್- ಸಿಸಿಟಿವಿಯಲ್ಲಿ ದೃಶ್ಯ ಸೆರೆ

    ಸಾವಿನ ಸುತ್ತ ಅನುಮಾನ: ದ್ವಿತೀಯ ವರ್ಷದ ಪದವಿ ಓದುತ್ತಿದ್ದ 21 ವರ್ಷದ ಪ್ರಭುಧ್ಯಾ ತಮ್ಮ ಮನೆಯ ಬಾತ್ ರೂಂನಲ್ಲೇ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಶವವಾಗಿ ಪತ್ತೆ ಆಗಿದ್ದಾರೆ. ನಿನ್ನೆ ಘಟನೆ ನಡೆದಿದ್ದು ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ. ಆದರೆ ಯುವತಿ ಅನುಮಾನಾಸ್ಪದ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದೆ.