Tag: ಪ್ರದೀಪ್ ಮೆಹ್ರಾ

  • ಮಧ್ಯರಾತ್ರಿ ಓಡಿ ಮನೆ ಸೇರೋ ಯುವಕನಿಗೆ 2.5 ಲಕ್ಷದ ಚೆಕ್ ನೀಡಿದ ಶಾಪರ್ಸ್ ಸ್ಟಾಪ್

    ಮಧ್ಯರಾತ್ರಿ ಓಡಿ ಮನೆ ಸೇರೋ ಯುವಕನಿಗೆ 2.5 ಲಕ್ಷದ ಚೆಕ್ ನೀಡಿದ ಶಾಪರ್ಸ್ ಸ್ಟಾಪ್

    ನೊಯ್ಡಾ: ಸೇನೆ ಸೇರುವ ಉದ್ದೇಶದಿಂದ ಕೆಲಸ ಮುಗಿಸಿ ಪ್ರತಿದಿನ ರಾತ್ರಿ ಓಡಿ ಮನೆ ಸೇರುತ್ತಿದ್ದ ಯುವಕನಿಗೆ ಇದೀಗ ಶಾಪರ್ಸ್ ಸ್ಟಾಪ್ 2.5 ಲಕ್ಷದ ಚೆಕ್ ನೀಡಿದೆ.

    ಹೌದು. ಪ್ರದೀಪ್ ಮೆಹ್ರಾ ತಾಯಿ ಟಿಬಿ ಕಾಯಿಲೆಯಿಂದ ಬಳಲುತ್ತಿದ್ದು, ದೆಹಲಿಯ ಆಸ್ಪತ್ರೆಯೊಂದರಲ್ಲಿ ಕಳೆದ 2 ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವಿಚಾರ ತಿಳಿದ ಶಾಪರ್ಸ್ ಸ್ಟಾಪ್, ಪ್ರದೀಪ್‍ಗೆ 2.5 ಲಕ್ಷ ರೂ ಚೆಕ್ ನೀಡಿದೆ. ಈ ಮೂಲಕ ಪ್ರದೀಪ್ ಕನಸು ನನಸು ಮಾಡಲು ಹಾಗೂ ತಾಯಿಗೆ ಚಿಕಿತ್ಸೆ ನೀಡಲು ಸಹಾಯವಾದಂತಾಗಿದೆ.

    ಚಲನಚಿತ್ರ ನಿರ್ಮಾಪಕ ವಿನೋದ್ ಕಪ್ರಿ, ಪ್ರದೀಪ್ ರಾತ್ರಿ ಓಡುತ್ತಿರುವ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಈ ವೀಡಿಯೋ ಸಾಕಷ್ಟು ವೈರಲ್ ಆಗಿತ್ತು. ಅಲ್ಲದೆ ಪ್ರದೀಪ್ ಗೆ ಸಹಾಯದ ಮಹಾಪೂರವೇ ಹರಿದಬಂತು. ಇದೀಗ ವಿನೋದ್ ಅವರು ಪ್ರದೀಪ್‍ಗೆ ಚೆಕ್ ನೀಡಿರುವ ಫೋಟೋಗಳನ್ನು ಕೂಡ ತಮ್ಮ ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೆ ಮಧ್ಯರಾತ್ರಿಯ ಓಟಗಾರ ಪ್ರದೀಪ್ ಮೆಹ್ರಾ, ನಿಮ್ಮೆಲ್ಲರ ಪ್ರೀತಿ ಹಾಗೂ ಸಹಕಾರ ಕಂಡು ತುಂಬಾ ಖುಷಿಯಾಗಿದ್ದಾರೆ. ಅಲ್ಲದೆ ತಾಯಿಯ ಚಿಕಿತ್ಸೆ ಹಾಗೂ ಕನಸು ನನಸು ಮಾಡುವ ಸಲುವಾಗಿ ನಿನ್ನೆ ಅವರಿಗೆ ಶಾಪರ್ಸ್ ಸ್ಟಾಪ್ ಕಡೆಯಿಂದ 2.5 ಲಕ್ಷದ ಚೆಕ್ ನೀಡಲಾಗಿದೆ. ದೇವರು ಒಳ್ಳೆದು ಮಾಡಲಿ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಮೃತಪಟ್ಟ ಮುದ್ದಿನ ಶ್ವಾನದ ಸವಿನೆನಪಿಗಾಗಿ ದೇಗುಲ ನಿರ್ಮಾಣ

    ಪ್ರದೀಪ್ ವೀಡಿಯೋ ವೈರಲ್: ರಾತ್ರಿ ವೇಳೆ ಓಡಿಕೊಂಡು ಹೋಗುತ್ತಿದ್ದ ಪ್ರದೀಪ್ ಮೆಹ್ರಾನನ್ನು ನೋಡಿದ ಚಿತ್ರನಿರ್ಮಾಪಕ ವಿನೋದ್ ಕಪ್ರಿ ವೀಡಿಯೋವನ್ನು ಮಾಡಿದ್ದರು. ಈ ವೇಳೆ ಕಪ್ರಿಯವರು ಯುವಕನ ಬಳಿ, ಮನೆಗೆ ಬಿಡುವುದಾಗಿ ಹೇಳಿದ್ದರು. ಅದಕ್ಕೆ ಇಲ್ಲ ನನ್ನ ಅಭ್ಯಾಸ ತಪ್ಪಿ ಹೋಗುತ್ತದೆ. ನಾನು ಫಿಟ್ ಆಗಿರಲು ಓಡುವುದು ನನಗೆ ಅವಶ್ಯಕ ಎಂದು ಹೇಳಿದ್ದರು. ಇದನ್ನೂ ಓದಿ: ಸೇನೆಗೆ ತಯಾರಿ – ಕೆಲಸ ಮುಗಿಸಿ ಪ್ರತಿದಿನ 10 ಕಿಮೀ ಓಡಿಕೊಂಡೇ ಮನೆಗೆ ಹೋಗ್ತಾನೆ!

    ಅಲ್ಲದೆ ಓಡುತ್ತಲೇ ಕಪ್ರಿ ಅವರ ಪ್ರಶ್ನೆಗಳಿಗೆ ಉತ್ತರಿಸಿದ್ದ ಪ್ರದೀಪ್, ಸದ್ಯ ನಾನು ನನ್ನ ಅಣ್ಣನೊಂದಿಗೆ ಇದ್ದೇನೆ. ತಾಯಿಗೆ ಹುಷಾರಿಲ್ಲ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದಿದ್ದರು. ಊಟ ಆಗಿದೆಯಾ ಎಂದು ಕೇಳಿದ್ದಕ್ಕೆ, ಇಲ್ಲ ಈಗ ನಾನು ಮನೆಗೆ ಹೋಗಿ ಅಡುಗೆ ಮಾಡಬೇಕು. ಆಗ ಕಪ್ರಿಯವರು, ಬಾ ನನ್ನೊಂದಿಗೆ ಊಟ ಮಾಡು ಎಂದಿದ್ದಕ್ಕೆ ಇಲ್ಲ ನಾನು ಹಾಗೆ ಮಾಡಿದರೆ ಮನೆಯಲ್ಲಿರುವ ನನ್ನ ಅಣ್ಣ ಹಸಿದುಕೊಂಡೇ ಇರಬೇಕಾಗುತ್ತದೆ ಎಂದು ಹೇಳಿದ್ದರು. ಯಾಕೆ ಅವರು ಅಡುಗೆ ಮಾಡುವುದಿಲ್ಲವಾ ಎಂದು ಕಪ್ರಿ ಮರು ಪ್ರಶ್ನೆ ಹಾಕಿದಾಗ, ಇಲ್ಲ ಅವರಿಗೆ ಈಗ ರಾತ್ರಿ ಡ್ಯೂಟಿ ಇದೆ. ನಾನು ಹೋಗಿ ಅಡುಗೆ ಮಾಡಬೇಕು ಎಂದು ಹೇಳಿದ್ದರು.

    ಈ ವೀಡಿಯೋವನ್ನು ಕಪ್ರಿಯವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಿಂದ ಶೇರ್ ಮಾಡಿಕೊಂಡಿದ್ದರು. ಈ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅಲ್ಲದೆ ಉತ್ತರಾಖಂಡದ ಅಲ್ಮೋರಾದ ಯುವಕ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದ್ದರು. ಸೇನೆಯ ಅಧಿಕಾರಿಗಳು, ರಾಜಕಾರಣಿಗಳು ಮತ್ತು ಬಾಲಿವುಡ್ ಸೆಲೆಬ್ರಿಟಿಗಳು ಪ್ರದೀಪ್ ಅವರನ್ನು ‘ಶುದ್ಧ ಚಿನ್ನ’ ಎಂದು ಶ್ಲಾಘಿಸಿದ್ದರು.

  • ಸೇನೆಗೆ ತಯಾರಿ – ಕೆಲಸ ಮುಗಿಸಿ ಪ್ರತಿದಿನ 10 ಕಿಮೀ  ಓಡಿಕೊಂಡೇ ಮನೆಗೆ ಹೋಗ್ತಾನೆ!

    ಸೇನೆಗೆ ತಯಾರಿ – ಕೆಲಸ ಮುಗಿಸಿ ಪ್ರತಿದಿನ 10 ಕಿಮೀ ಓಡಿಕೊಂಡೇ ಮನೆಗೆ ಹೋಗ್ತಾನೆ!

    ನವದೆಹಲಿ: ಕೆಲವೊಂದು ಕನಸು, ಗುರಿ ಈಡೇರಿಕೆಗೆ ನಿರಂತರ ಪ್ರಯತ್ನ ಅಗತ್ಯವಾಗಿತ್ತದೆ. ಇಲ್ಲೊಬ್ಬ ಯುವಕ ತಾನು ಸೈನ್ಯಕ್ಕೆ ಸೇರ ಬೇಕು, ದೇಶ ಸೇವೆ ಮಾಡಬೇಕು ಎನ್ನುವ ಹಿಂದೆ ಇರುವ ರೋಚಕ ಕಥೆ ಮತ್ತು ಪ್ರಯತ್ನವನ್ನು ನಿರ್ಮಾಪಕ, ಲೇಖಕ ವಿನೋದ್ ಕಪ್ರಿ ತಮ್ಮ ಟ್ವೀಟ್ ಮೂಲಕವಾಗಿ ಹಂಚಿಕೊಂಡಿದ್ದಾರೆ.

    ವಿನೋದ್ ಕಪ್ರಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ವೀಡಿಯೋಗೆ, ಆ ಯುವಕ ಪ್ರದೀಪ್ ಮೆಹ್ರಾ ಶುದ್ಧವಾದ ಬಂಗಾರ ಎಂದು ಕ್ಷಾಪ್ಷನ್ ಕೊಟ್ಟಿದ್ದಾರೆ. ಕಾರಿನಲ್ಲೇ ಕುಳಿತು ವೀಡಿಯೋ ಶೇರ್ ಮಾಡಿದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ವೀಡಿಯೋದಲ್ಲಿ ಏನಿದೆ?: ಪ್ರದೀಪ್ ಮೆಹ್ರಾ ರಸ್ತೆಯಲ್ಲಿ ಓಡುತ್ತಿರುತ್ತಾನೆ. ತನ್ನನ್ನೊಂದು ಕಾರು ಹಿಂಬಾಲಿಸುತ್ತಿದೆ ಎಂಬುದನ್ನು ನೋಡುವುದಿಲ್ಲ. ಒಂದೇ ಸಮ ಓಡುತ್ತಲೇ ಹೋಗುತ್ತಿರುತ್ತಾರೆ. ವಿನೋದ್ ಕಪ್ರಿ ಹುಡುಗನಿಗೆ ಸಮಾನಾಂತರವಾಗಿ ಕಾರನ್ನು ಚಲಾಯಿಸಿಕೊಂಡು ಹೋಗಿ, ಬಾ ನಿನ್ನನ್ನು ಮನೆಗೆ ಬಿಡುತ್ತೇನೆ ಎಂದರೆ ಬೇಡ, ನನಗೆ ಓಡಬೇಕು ಎನ್ನುತ್ತಾರೆ. ಎಷ್ಟು ಹೇಳಿದರೂ ಕೇಳುವುದಿಲ್ಲ. ಆಗ ವಿನೋದ್ ಕಪ್ರಿ, ಯಾಕೆ ಓಡಬೇಕು ಹೀಗೆ ಎಂದು ಕೇಳಿದಾಗ, ನಾನು ಸೇನೆಯನ್ನು ಸೇರಬೇಕು. ನನಗೆ ಬೆಳಗ್ಗೆ ಓಡಲು ಸಮಯ ಸಿಗುವುದಿಲ್ಲ. ಹೀಗಾಗಿ ಕೆಲಸ ಮುಗಿಸಿ ಮಧ್ಯರಾತ್ರಿ ಓಡಿಯೇ ಮನೆಗೆ ಹೋಗುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ‘ಶಾಸಕನ ಮೊಮ್ಮಗ’ ಎನ್ನುವುದೇ ಬೈಕ್ ನಂಬರ್ ಪ್ಲೇಟ್!

    ಸಿಕ್ಕಾಪಟೆ ಖುಷಿಯಾದ ವಿನೋದ್ ಕಪ್ರಿ: ಯುವಕನ ಬಳಿ ಆತನ ಬಗ್ಗೆ ವಿಚಾರಿಸಿದ್ದಾರೆ. ವಿನೋದ್ ಕೇಳಿದ ಎಲ್ಲ ಪ್ರಶ್ನೆಗೂ ಯುವಕ ಓಡುತ್ತಲೇ ಉತ್ತರ ಕೊಟ್ಟಿದ್ದಾರೆ. ತಾವು ನೊಯ್ಡಾದ ಸೆಕ್ಟರ್ 16ರಿಂದ ಬರೋಲಾದಲ್ಲಿರುವ ಮನೆಗೆ 10 ಕಿಮೀ ದೂರ ಪ್ರತಿದಿನವೂ ಓಡಿಕೊಂಡೇ ಹೋಗುವುದಾಗಿ ಹೇಳಿದ್ದಾರೆ. ಸದ್ಯ ನಾನು ನನ್ನ ಅಣ್ಣನೊಂದಿಗೆ ಇದ್ದೇನೆ. ತಾಯಿಗೆ ಹುಷಾರಿಲ್ಲ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬುದನ್ನೂ ವಿನೋದ್ ಕಪ್ರಿಯವರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತ ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಸೋಲಿಸಲು 25 ವರ್ಷಗಳ ಬಳಿಕ ಒಂದಾದ ಸಹೋದರರು

    ವಿನೋದ್ ಕಪ್ರಿ ಪ್ರಶ್ನೆಗೆ ಯುವಕನ ನೇರ ಉತ್ತರ:  ಊಟ ಆಗಿದೆಯಾ ಎಂದು ಕೇಳಿದ್ದಕ್ಕೆ, ಇಲ್ಲ ಈಗ ನಾನು ಮನೆಗೆ ಹೋಗಿ ಅಡುಗೆ ಮಾಡಬೇಕು ಎನ್ನುತ್ತಾರೆ. ಬಾ ನನ್ನ ಜೊತೆ, ನನ್ನೊಂದಿಗೆ ಊಟ ಮಾಡು ಎಂದಿದ್ದಕ್ಕೆ, ಇಲ್ಲ ನಾನು ಹಾಗೆ ಮಾಡಿದರೆ ಮನೆಯಲ್ಲಿರುವ ನನ್ನ ಅಣ್ಣ ಹಸಿದುಕೊಂಡೇ ಇರಬೇಕಾಗುತ್ತದೆ ಎಂದು ಪ್ರದೀಪ್ ಹೇಳುತ್ತಾರೆ. ಯಾಕೆ ಅವರು ಅಡುಗೆ ಮಾಡುವುದಿಲ್ಲವಾ ಎಂದು ವಿನೋದ್ ಕಪ್ರಿ ಕೇಳಿದ್ದಕ್ಕೆ, ಇಲ್ಲ ಅವರಿಗೆ ಈಗ ರಾತ್ರಿ ಡ್ಯೂಟಿ ಇದೆ. ನಾನು ಹೋಗಿ ಅಡುಗೆ ಮಾಡಬೇಕು ಎಂದಿದ್ದಾನೆ.