Tag: ಪ್ರತಿಭಟನೆ

  • ಮಹದಾಯಿ ಹೋರಾಟ- ತೀವ್ರ ಜ್ವರದಿಂದ ಧರಣಿನಿರತ ರೈತರು ಅಸ್ವಸ್ಥ

    ಮಹದಾಯಿ ಹೋರಾಟ- ತೀವ್ರ ಜ್ವರದಿಂದ ಧರಣಿನಿರತ ರೈತರು ಅಸ್ವಸ್ಥ

    ಬೆಂಗಳೂರು: ನಗರದಲ್ಲಿ ನಡೆಯುತ್ತಿರುವ ಮಹದಾಯಿ ಹೋರಾಟ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಈ ನಡುವೆ ಕೆಲವು ಹೋರಾಟಗಾರರು ಜ್ವರದಿಂದ ಬಳಲುತ್ತಿದ್ದಾರೆ.

    ರೈತ ಹನುಮಂತಪ್ಪ ತೀವ್ರ ಅಸ್ವಸ್ಥರಾಗಿದ್ದು, ಆಂಬುಲೆನ್ಸ್ ಮೂಲಕ ಕೆಸಿ ಜನರಲ್ ಅಸ್ಪತ್ರೆಗೆ ರವಾನೆ ಮಾಡಲಾಗಿದೆ. ಏಳಕ್ಕೂ ಹೆಚ್ಚು ರೈತ ಮಹಿಳೆಯರು ಜ್ವರದಿಂದ ಬಳಲುತ್ತಿದ್ದಾರೆ. ಹೀಗಾಗಿ ಪ್ರತಿಭಟನಾ ಸ್ಥಳಕ್ಕೆ ವೈದ್ಯರನ್ನು ಕರೆಸುವ ಸಾಧ್ಯತೆ ಇದೆ. ಸಿನಿಮಾ ನಟ ನಟಿಯರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಇದೀಗ ಚಿತ್ರರಂಗ ಹೋರಾಟಗಾರರ ಬೆಂಬಲಕ್ಕೆ ಬಂದಿದೆ.

    ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಯುತ್ತಿದ್ದಾಗ ಸಂತೈಸುವ ನಾಟಕವಾಡಿದ ಸಿನಿಮಾ ಮಂದಿ ಇದೀಗ ಬೆಂಗಳೂರಿಗೆ ಬಂದರೂ ಭೇಟಿಯ ಸೌಜನ್ಯ ಇಲ್ಲ. ನಮಗೆ ಊಟ, ತಿಂಡಿ, ಹಣ ಬೇಡ, ಕುಡಿಯಲು ನೀರು ಬೇಕಷ್ಟೆ. ಶಿವರಾಜಕುಮಾರ್ ಹುಬ್ಬಳ್ಳಿ ಗೆ ಬಂದಾಗ ನಿಮಗೆ ನ್ಯಾಯ ಒದಗಿಸಲು ನಾವು ನಿಮ್ಮೊಂದಿಗಿದ್ದೇವೆ ಎಂದಿದ್ದರು. ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟರೂ ಯಾರೊಬ್ಬರೂ ಈ ಕಡೆ ತಲೆ ಹಾಕಿಲ್ಲ. ಯಾವ ರಾಜಕೀಯ ಪಕ್ಷದವರ ಕರುಣೆಯೂ ನಮಗೆ ಬೇಡ. ನಮಗೆ ಬೇಕಾದಷ್ಟು ಆಹಾರ ನಮ್ಮ ಬಳಿ ಇದೆ. ಬೆಂಗಳೂರಿನ ಜನ ನಮ್ಮ ಸಹಾಯಕ್ಕಿದ್ದಾರೆ. ರಾಜಕೀಯ ಪಕ್ಷಗಳಿಂದ ನಮಗೆ ಬೇಕಾಗಿರುವುದು ನೀರಿನ ನ್ಯಾಯ ಅಷ್ಟೆ ಅಂತ ಮಹದಾಯಿ ಹೋರಾಟಗಾರ ಎಸ್.ಕೆ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದರು.

    ಇದರ ಬೆನ್ನಲ್ಲೇ ಪ್ರತಿಭಟನಾ ಸ್ಥಳಕ್ಕೆ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್ ಆಗಮಿಸಿ ಪ್ರತಿಭಟನಾನಿರತ ರೈತರೊಂದಿಗೆ ಮಾತುಕತೆ ನಡೆಸಿದ್ರು. ಚಿತ್ರರಂಗದ ಯಾರು ಬಂದಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ರು.

    ಇದಕ್ಕೆ ಪ್ರತಿಕ್ರಿಯಿಸಿದ ಉಮೇಶ್ ಬಣಕಾರ್, ಈ ಚಳುವಳಿಗೆ ಬರುತ್ತಿರುವ ವಿಚಾರ ತಿಳಿದಿರಲಿಲ್ಲ. ಫಿಲ್ಮ್ ಚೇಂಬರ್ ಅಧ್ಯಕ್ಷರಾಗಿರುವ ಸಾ.ರಾ.ಗೋವಿಂದು ಆನೇಕಲ್ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದಾರೆ. ಹೀಗಾಗಿ ನಾಳೆ ಬರುವುದಕ್ಕೆ ಪ್ಲಾನ್ ಮಾಡಿದ್ವಿ, ಅಷ್ಟರೊಳಗೆ ಇವತ್ತು ಬಂದು ಬೆಂಬಲ ಸೂಚಿಸೋದಕ್ಕೆ ಬಂದಿದ್ದೇವೆ. ಹುಬ್ಬಳ್ಳಿಗೆ ಹೋಗಿದ್ದವರಿಗೆ ಇಲ್ಲಿಗೆ ಬರಲು ಕಷ್ಟವಲ್ಲ. ಮೂರು ದಿನಗಳ ರಜೆ ಇದ್ದರಿಂದ ಕೆಲವರು ಹೊರಗಡೆ ಹೋಗಿದ್ದಾರೆ. ನಾಳೆ ಫಿಲ್ಮ್ ಚೇಂಬರ್ ಅಧ್ಯಕ್ಷರು ಸೇರಿದಂತೆ ಇಡೀ ಚಿತ್ರರಂಗ ಭೇಟಿ ನೀಡಲಿದೆ. ರೈತರು ನಡೆಸುತ್ತಿರುವ ಹೋರಾಟಕ್ಕೆ ಯಾವಾಗಲೂ ನಮ್ಮ ಬೆಂಬಲ ಇರುತ್ತದೆ ಅಂತ ಭರವಸೆ ನೀಡಿದ್ರು.

    ಮಹದಾಯಿ ಹೋರಾಟಗಾರರಿಗೆ ಅಪ್ಪಾಜಿ ಕ್ಯಾಂಟಿನ್ ನಿಂದ ಜೆಡಿಎಸ್ ಎಮ್‍ಎಲ್‍ಸಿ ಶರವಣ ಉಪಹಾರವನ್ನ ತಂದಿದ್ರು. ಅದ್ರೇ ಅದನ್ನ ಹೋರಾಟಗಾರರು ಸ್ವೀಕರಿಸದೇ ನಮಗೆ ತಿಂಡಿ ಬೇಡ ನಮಗೆ ನೀರು ಕೊಡಿ. ನಿಮ್ಮೆಲ್ಲ ರಾಜಕೀಯ ಬಿಟ್ಟು ನೀರು ಕೊಡಿಸೋ ಪ್ರಯತ್ನ ಮಾಡಿ ಎಂದ್ರು. ಇದಕ್ಕೆ ಉತ್ತರಿಸಿದ ಶರವಣ ನಮ್ಮ ಪಕ್ಷ ನಿಮಗೆ ನೈತಿಕಬೆಂಬಲ ಕೊಡುತ್ತೆ. ಮಾನವೀಯ ದೃಷ್ಟಿಯಿಂದ ಉಪಹಾರ ತಂದಿದ್ದೇವೆ. ನಿಮಗೆ ನೀರು ಕೊಡಿಸೋ ಪ್ರಯತ್ನ ಜೆಡಿಎಸ್ ಮಾಡುತ್ತೆ ಅಂದ್ರು.

  • ಬಿಎಸ್‍ವೈ ಆಗಮನಕ್ಕೆ ಬಿಗಿಪಟ್ಟು – ಚಳಿಯಲ್ಲೂ ಮಹದಾಯಿ ರೈತರ ಹೋರಾಟ

    ಬಿಎಸ್‍ವೈ ಆಗಮನಕ್ಕೆ ಬಿಗಿಪಟ್ಟು – ಚಳಿಯಲ್ಲೂ ಮಹದಾಯಿ ರೈತರ ಹೋರಾಟ

    ಬೆಂಗಳೂರು: ಮಹದಾಯಿ ನದಿ ನೀರು ಹೋರಾಟ ಮೂರನೇ ದಿನಕ್ಕೆ ಕಾಲಿಟ್ಟಿದೆ. ನೂರಾರು ರೈತರು ಮಲ್ಲೇಶ್ವರಂ ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆ ಮುಂದುವರೆಸಿದ್ದಾರೆ.

    ಕೊರೆಯುವ ಚಳಿಯಲ್ಲಿ ರೈತರು ರಾತ್ರಿ ರಸ್ತೆಯಲ್ಲೆ ವಾಸ್ತವ್ಯ ಹೂಡಿದ್ದು, ರಸ್ತೆ ಮತ್ತು ಫುಟ್‍ಪಾತ್ ಮೇಲೆ ಮಲಗಿ ನಿದ್ದೆ ಮಾಡಿದ್ರು. ಯಡಿಯೂರಪ್ಪನವರು ಇಲ್ಲಿಗೆ ಬರಬೇಕು. ನಮ್ಮ ಮನವಿ ಸ್ವೀಕರಿಸಬೇಕು. ಅಲ್ಲಿವರೆಗೆ ಜಪ್ಪಯ್ಯ ಅಂದ್ರೂ ಕದಲಲ್ಲ ಅಂತ ಪಟ್ಟು ಹಿಡಿದಿದ್ದಾರೆ.

    ಪ್ರತಿಭಟನಾನಿರತರಿಗೆ ಸಿಲಿಕಾನ್ ಸಿಟಿ ಜನ ತಿಂಡಿ, ಊಟೋಪಚಾರದ ವ್ಯವಸ್ಥೆ ಮಾಡ್ತಿದ್ದಾರೆ. ಅತ್ತ ಹಾವೇರಿಯ ಪರಿವರ್ತನಾ ರ‍್ಯಾಲಿಯಲ್ಲಿ ಭಾನುವಾರದಂದು ಮಾತನಾಡಿದ್ದ ಯಡಿಯೂರಪ್ಪ, ಹೋರಾಟಗಾರರೇ ಮೊದಲು ಬಿಜೆಪಿ ಕಚೇರಿ ಮುಂದಿನಿಂದ ಎದ್ದೇಳಿ. ನೀವು ಸಿಎಂ ಮನೆ ಮುಂದೆ ಹೋರಾಟ ಮಾಡಿ ಅಂತಾ ತಾಕೀತು ಮಾಡಿದ್ದಾರೆ.

    ಈ ಮಧ್ಯೆ ಮಹದಾಯಿ ನಮ್ಮ ತಾಯಿ. ರಾಜಕೀಯಕ್ಕಾಗಿ ಜನರ ವಿಶ್ವಾಸಕ್ಕೆ ದ್ರೋಹ ಬಗೆಯಲ್ಲ. ಯಾವುದೇ ಕಾರಣಕ್ಕೂ ನೀರು ಹರಿಸೋ ಪ್ರಶ್ನೆಯೇ ಇಲ್ಲ ಅಂತ ಗೋವಾ ಜಲ ಸಂಪನ್ಮೂಲ ಸಚಿವ ವಿನೋದ್ ಪಾಲೇಕರ್ ಮತ್ತೊಂದು ಟ್ವೀಟ್ ಮಾಡಿದ್ದಾರೆ. ಈ ಮೂಲಕ ರಾಜ್ಯ ಬಿಜೆಪಿ ನಾಯಕರಿಗೂ ಪರೋಕ್ಷವಾಗಿ ಪಾಲೇಕರ್ ಉತ್ತರ ನೀಡಿದ್ದಾರೆ.

  • ಹೆಬ್ಬಾಳ-ನಾಗವಾರ ಏತ ನೀರಾವರಿ ಯೋಜನೆ ವಿರೋಧಿಸಿ ಇಂದು ಚಿಕ್ಕಬಳ್ಳಾಪುರ ಬಂದ್

    ಹೆಬ್ಬಾಳ-ನಾಗವಾರ ಏತ ನೀರಾವರಿ ಯೋಜನೆ ವಿರೋಧಿಸಿ ಇಂದು ಚಿಕ್ಕಬಳ್ಳಾಪುರ ಬಂದ್

    ಚಿಕ್ಕಬಳ್ಳಾಪುರ: ಕೋಲಾರ-ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಗಳಿಗೆ ಸರ್ಕಾರ ಜಾರಿ ಮಾಡಲು ಹೊರಟಿರುವ ಕೆಸಿ ಹಾಗೂ ಎಚ್‍ಎನ್ ವ್ಯಾಲಿ ಯೋಜನೆಗಳನ್ನ ಕೈ ಬಿಡುವಂತೆ ಆಗ್ರಹಿಸಿ ಇಂದು ಚಿಕ್ಕಬಳ್ಳಾಪುರ ಬಂದ್ ಗೆ ವಿವಿಧ ಸಂಘಟನೆಗಳು ಕರೆ ನೀಡಿವೆ.

    ಹೆಬ್ಬಾಳ-ನಾಗವಾರ ಏತ ನೀರಾವರಿ ಯೋಜನೆಯನ್ನ ವಿರೋಧಿಸಿ ಇಂದು ಬೆಳಗ್ಗೆ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪಂಜಿನ ಮೆರವಣಿಗೆ ನಡೆಸಿವೆ. ಚಿಕ್ಕಬಳ್ಳಾಪುರ ನಗರದ ಬಲಮುರಿ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೂ ಪಂಜಿನ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಸರ್ಕಾರ ಕೂಡಲೇ ಯೋಜನೆ ಕೈಬಿಡುವಂತೆ ಅಗ್ರಹಿಸಿದರು.

    ಬೆಂಗಳೂರಿನ ಹೆಬ್ಬಾಳ ಹಾಗೂ ನಾಗವಾರ ಕೆರೆಯ ನೀರನ್ನು ಸಂಸ್ಕರಿಸಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ 44 ಕರೆಗೆಳಿಗೆ ನೀರು ತುಂಬಿಸಲು ಸರ್ಕಾರ ಮುಂದಾಗಿದೆ. ಆದ್ರೆ ಸಂಸ್ಕರಿಸಿದ ನೀರು ಎಷ್ಟರ ಮಟ್ಟಿಗೆ ಸುರಕ್ಷಿತ ಅನ್ನೋ ಆತಂಕ ಪ್ರತಿಭಟನಕಾರರನ್ನ ಕಾಡುತ್ತಿದೆ. ಕೊಳಚೆ ನೀರಿನಲ್ಲಿ ಕ್ಯಾನ್ಸರ್ ಕಾರಕ ರಾಸಾಯನಿಕಗಳಿದ್ದು, ಈ ಕೊಳಚೆ ನೀರು ನಮಗೆ ಬೇಡ. ಹೀಗಾಗಿ ಕೆಸಿ ವ್ಯಾಲಿ ಹಾಗೂ ಎಚ್‍ಎನ್ ವ್ಯಾಲಿ ಎರಡು ಯೋಜನೆಗಳನ್ನ ಸರ್ಕಾರ ರದ್ದು ಮಾಡಬೇಕು ಅಂತ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

    ಬಂದ್ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸಂಘಟನೆಗಳ ಬಂದ್ ಗೆ ಶಾಸಕ ಸುಧಾಕರ್ ವಿರೋಧ ವ್ಯಕ್ತಪಡಿಸಿದ್ದು, ರಾಜಕೀಯ ದುರದ್ದೇಶದಿಂದ ಬಂದ್ ನಡೆಸಲಾಗ್ತಿದೆ. ಬಂದ್ ಗೆ ಸಹಕರಿಸಬೇಡಿ ಅಂತ ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಶಾಸಕ ಸುಧಾಕರ್ ನೇತೃತ್ವದಲ್ಲಿ ಬಂದ್ ವಿರೋಧಿಸಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ.

  • ಶಾಲೆಗೆ ಹೋಗುವಾಗ ಅಪ್ರಾಪ್ತೆಯ ಮೇಲೆ ಗ್ಯಾಂಗ್ ರೇಪ್, ಕೊಲೆ!

    ಶಾಲೆಗೆ ಹೋಗುವಾಗ ಅಪ್ರಾಪ್ತೆಯ ಮೇಲೆ ಗ್ಯಾಂಗ್ ರೇಪ್, ಕೊಲೆ!

    ವಿಜಯಪುರ: ಗಾಂಜಾ ನಶೆಯಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಘಟನೆ ವಿಜಯಪುರದಲ್ಲಿ ನಡೆದಿದೆ.

    ವಿಜಯಪುರದ ಮಂಜುನಾಥ ನಗರದ ಮಲ್ಲಿಕಾರ್ಜುನ್ ಸ್ಕೂಲ್ ಬಳಿ ಅಪ್ರಾಪ್ತ ಬಾಲಕಿ ಹೊರಟಾಗ ಮೂವರು ಕಾಮುಕರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕುತ್ತಿಗೆ ಹಿಸುಕಿ ಕೊಲೆಗೈದಿದ್ದಾರೆಂಬ ಆರೋಪ ಕೇಳಿ ಬಂದಿದೆ.

    ಕೈಲಾಶ್, ಸಾಗರ್ ಮೋರೆ, ದೀಪಕ್ ಹಾಗೂ ಇನ್ನು ಇಬ್ಬರಿಂದ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಕೈಲಾಶ್ ಓರ್ವನನ್ನು ಬಿಟ್ಟು ಉಳಿದ ಇಬ್ಬರು ಅತ್ಯಾಚಾರಿಗಳು ಅಪ್ರಾಪ್ತರು ಎಂದು ತಿಳಿದು ಬಂದಿದೆ. ಸದ್ಯಕ್ಕೆ ಕೈಲಾಸ್ ಮತ್ತು ಸಾಗರ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರ್ಶನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ದೂರು ದಾಖಲಾಗಿಲ್ಲ.

    ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಹಿನ್ನಲೆಯಲ್ಲಿ ವಿಜಯಪುರದ ಅಂಬೇಡ್ಕರ್ ವೃತ್ತದಲ್ಲಿ ಮೃತ ಬಾಲಕಿಯ ಶವವಿಟ್ಟು ಕುಟುಂಬಸ್ಥರು ತಡರಾತ್ರಿ ಪ್ರತಿಭಟನೆ ನಡೆಸಿದ್ದಾರೆ. ಕುಟುಂಬಸ್ಥರ ಪ್ರತಿಭಟನೆಗೆ ವಿವಿಧ ದಲಿತ ಪರ ಸಂಘಟನೆಗಳು ಸಾಥ್ ನೀಡಿದ್ದಾರೆ.

    ಪ್ರತಿಭಟನಾಕಾರರು ಕಲಬುರ್ಗಿ ಅಥಣಿ ರಸ್ತೆ ಬಂದ್ ಮಾಡಿ ಟಯರ್ ಗೆ ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕಿದ್ದಾರೆ.

  • ಕೈ ತುಂಬಾ ಸಂಬಳ ಕೊಡ್ತೀವಿ ಅಂದ್ರು – ಮೋದಿ ಹೆಸರಲ್ಲಿ ಮಾಡಿದ್ರೂ ಮೋಸ!

    ಕೈ ತುಂಬಾ ಸಂಬಳ ಕೊಡ್ತೀವಿ ಅಂದ್ರು – ಮೋದಿ ಹೆಸರಲ್ಲಿ ಮಾಡಿದ್ರೂ ಮೋಸ!

    – ಸಿಟ್ಟಿಗೆದ್ದ ಯುವಕರಿಂದ ಪೀಠೋಪಕರಣ ಧ್ವಂಸ

    ಬೆಂಗಳೂರು: ಪ್ರಧಾನಿ ಮೋದಿ ಹೆಸರು ಬಳಸಿಕೊಂಡು ಮೋಸ ಮಾಡ್ತಿದ್ದವರ ವಿರುದ್ಧ ಯುವಕ-ಯುವತಿಯರು ರೊಚ್ಚಿಗೆದ್ದು ಕಚೇರಿಯ ಪೀಠೋಪಕರಣಗಳನ್ನು ಧ್ವಂಸ ಮಾಡುವ ಮೂಲಕ ಪ್ರತಿಭಟನೆ ಮಡಿದ್ದಾರೆ.

    ನಗರದ ಹೊರವಲಯದಲ್ಲಿರುವ ಶ್ರೀ ಶ್ರೀನಿವಾಸ ಚಾರಿಟಬಲ್ ಟ್ರಸ್ಟ್ ಎಂಬ ಸಂಸ್ಥೆ ನಿರುದ್ಯೋಗ ಯುವಕ-ಯುವತಿಯರಿಗೆ ಮೋಸ ಮಾಡಿದೆ. ಡಿಜಿಟಲ್ ಇಂಡಿಯಾದ ಮಾದರಿಯಲ್ಲಿ ಲಾಗಿನ್ ಇಂಡಿಯಾ ಎನ್ನುವ ವೆಬ್ ಸೈಟ್ ಮುಖಾಂತರ ಸಾವಿರಾರು ನಿರುದ್ಯೋಗಿಗಳಿಗೆ ಮೋಸ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ರೊಚ್ಚಿಗೆದ್ದ ನಿರುದ್ಯೋಗಿ ಯುವಕ-ಯುವತಿಯರು ಗಲಾಟೆ ನಡೆಸಿ ಪೀಠೋಪಕರಣಗಳನ್ನ ದ್ವಂಸಗೊಳಿಸಿ, ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದಾರೆ.

    ಟ್ರಸ್ಟ್ ಅಧ್ಯಕ್ಷ ಹರ್ಷ ನರ್ಸಿಂಗ್ ಕಾಲೇಜು, ಸ್ಕೂಲ್ ಹಾಗೂ ಆಸ್ಪತ್ರೆಯನ್ನ ನಡೆಸುತ್ತಿದ್ದಾರೆ. ನೆಲಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • `ಸನ್ನಿ ನೈಟ್ಸ್’ ವಿರುದ್ಧ ಪೊರಕೆ ಹಿಡಿದ ಬೆಂಗ್ಳೂರು ಮಹಿಳೆಯರು

    `ಸನ್ನಿ ನೈಟ್ಸ್’ ವಿರುದ್ಧ ಪೊರಕೆ ಹಿಡಿದ ಬೆಂಗ್ಳೂರು ಮಹಿಳೆಯರು

    ಬೆಂಗಳೂರು: ಹೊಸ ವರ್ಷ ಸಂಭ್ರಮದಲ್ಲಿ ನಗರದಲ್ಲಿ ಆಯೋಜನೆಗೊಂಡಿರುವ `ಸನ್ನಿ ನೈಟ್ಸ್’ ವಿರುದ್ಧ ಸಿಲಿಕಾನ್ ಸಿಟಿ ಮಹಿಳೆಯರು ಪೊರಕೆ ಹಿಡಿದು ಪ್ರತಿಭಟನೆ ಮಾಡಿದ್ದಾರೆ.

    ಬಾಲಿವುಡ್ ನಟಿ ಸನ್ನಿ ಲಿಯೋನ್ ಕಾರ್ಯಕ್ರಮಕ್ಕೆ ಮತ್ತೆ ವಿರೋಧ ವ್ಯಕ್ತವಾಗುತ್ತಿದ್ದು, ಕರ್ನಾಟಕ ರಕ್ಷಣಾ ವೇದಿಕೆಯ ಯುವ ಸೇನೆ ಆಕ್ರೋಶವನ್ನು ವ್ಯಕ್ತಪಡಿಸಿದೆ. ನಗರದ ಮಾನ್ಯತಾ ಟೆಕ್ ಪಾರ್ಕ್ ಬಳಿ ಕಪ್ಪು ಪಟ್ಟಿ ಧರಿಸಿ, ಪೊರಕೆ ಹಿಡಿದು ಸನ್ನಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.

    ಟೈಮ್ಸ್ ಕ್ರಿಯೆಷನ್ ಡಿಸೆಂಬರ್ 31 ರಂದು ರಾತ್ರಿ ಮಾನ್ಯತಾ ಟೆಕ್ ಪಾರ್ಕ್ ವೈಟ್ ಆರ್ಕಿಡ್‍ನಲ್ಲಿ ಸನ್ನಿ ಲಿಯೋನ್ ಕಾರ್ಯಕ್ರಮ ಆಯೋಜಿಸಿದೆ. ಇದು ನಮ್ಮ ನೆಲದ ಸಂಸ್ಕೃತಿ ವಿರೋಧ. ಪರಭಾಷಿಕರು ಕನ್ನಡದ ಸಂಸ್ಕೃತಿಯನ್ನು ಹಾಳು ಮಾಡುತ್ತಿದ್ದಾರೆ. ಆದ್ದರಿಂದ ಯಾವುದೇ ಕಾರಣಕ್ಕೂ ಕಾರ್ಯಕ್ರಮವನ್ನು ಆಯೋಜನೆಗೊಳ್ಳಬಾರದು ಎಂದು ಆಗ್ರಹಿಸಿದ್ದಾರೆ.

    ಈ ಹಿಂದೆ ಕರವೇ ಯುವ ಸೇನೆ ಕ್ಯಾತೆ ತೆಗೆದಿದ್ದು, ಎಚ್ಚರಿಕೆಯನ್ನು ನೀಡಿತ್ತು. `ಸನ್ನಿ ನೈಟ್ಸ್’ ನಮ್ಮ ಸಂಸ್ಕೃತಿ ಅಲ್ಲ. ಬೆತ್ತಲೆ ನಟಿ ಇಲ್ಲಿ ಬಂದು ಸೊಂಟ ಕುಣಿಸಿ, ಡ್ಯಾನ್ಸ್ ಮಾಡಿ ನಮ್ಮ ಯುವಜನರನ್ನು ಹಾಳು ಮಾಡೋದು ಬೇಡ ಅಂತಾ ಕರವೇ ಯುವ ಸೇನೆ ಸನ್ನಿ ಎಂಟ್ರಿಗೆ ವಿರೋಧಿಸಿ ಮೌರ್ಯ ಸರ್ಕಲ್‍ನಲ್ಲಿ ಪ್ರತಿಭಟನೆ ನಡೆಸಿದ್ದರು.

    ಸನ್ನಿ ಸೀರೆ ಉಟ್ಟುಕೊಂಡು ಬಂದು ಕಾರ್ಯಕ್ರಮ ನಡೆಸಲಿ ಅಂತಾ ಕರವೇ ಯುವ ಸೇನೆ ಸವಾಲು ಹಾಕಿದ್ದು, ಇದರ ಜೊತೆಗೆ ಕಾರ್ಯಕ್ರಮದ ಆಯೋಜಕರಿಗೆ ಹಾಗೂ ನಗರ ಪೊಲೀಸ್ ಆಯುಕ್ತರಿಗೆ ಸನ್ನಿ ಲಿಯೋನ್ ಕಾರ್ಯಕ್ರಮ ರದ್ದು ಮಾಡುವಂತೆ ಮನವಿ ಕೊಡೋದಾಗಿ ಹೇಳಿದ್ದರು. ಸನ್ನಿ ಕಾರ್ಯಕ್ರಮ ನಡೆಸಿದರೆ ಕಪ್ಪು ಬಾವುಟ ಹಾರಿಸೋದಾಗಿ ಕರವೇ ಯುವ ಸೇನೆ ರಾಜ್ಯಾಧ್ಯಕ್ಷ ಪ್ರೇಮ್ ಕುಮಾರ್ ಎಚ್ಚರಿಕೆ ನೀಡಿದ್ದರು.

    https://www.youtube.com/watch?v=05Jkbnw4rXE

    https://www.youtube.com/watch?v=naANm0aEdZs

     

     

     

     

  • ಕಾರವಾರ ಆಯ್ತು, ಈಗ ಶಿವಮೊಗ್ಗ ಸರದಿ- ಶಿರಸಿ ಬಳಿಕ ಪಕ್ಕದ ಸಾಗರ ಬಂದ್‍ ಗೆ ಕರೆ

    ಕಾರವಾರ ಆಯ್ತು, ಈಗ ಶಿವಮೊಗ್ಗ ಸರದಿ- ಶಿರಸಿ ಬಳಿಕ ಪಕ್ಕದ ಸಾಗರ ಬಂದ್‍ ಗೆ ಕರೆ

    ಶಿವಮೊಗ್ಗ: ಕಳೆದ ಮೂರ್ನಾಲ್ಕು ದಿನಗಳಿಂದ ಹೊತ್ತಿ ಉರಿದಿದ್ದ ಉತ್ತರ ಕನ್ನಡ ಇನ್ನೂ ಬೂದಿ ಮುಚ್ಚಿ ಕೆಂಡದಂತಿದೆ.

    ಸಿದ್ಧಾಪುರ, ಮುರುಡೇಶ್ವರದಲ್ಲಿ ಬಂದ್ ನ ವದಂತಿ ಹಬ್ಬಿತ್ತು. ಸಾಮಾಜಿಕ ಜಾಲತಾಣಗಳಲ್ಲೂ ಬಂದ್ ಕುರಿತಂತೆ ಸುಳ್ಳು ಸಂದೇಶಗಳು ಹರಿದಾಡುತ್ತಿದ್ದವು. ಆದರೆ ಯಾವುದೇ ಪಕ್ಷ ಅಧಿಕೃತವಾಗಿ ಬಂದ್ ಗೆ ಕರೆ ಕೊಟ್ಟಿರಲಿಲ್ಲ. ಮುಂಜಾಗ್ರತಾ ಕ್ರಮವಾಗಿ 3 ದಿನಗಳ ಕಾಲ ಸಭೆ, ಸಮಾರಂಭ, ಪ್ರತಿಭಟನೆಗಳಿಗೆ ನಿಷೇಧ ಹೇರಲಾಗಿದ್ದು, ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.

    ಕುಮಟಾ ಮತ್ತು ಶಿರಸಿ ಸಹಜ ಸ್ಥಿತಿಗೆ ಮರಳುತ್ತಿದ್ದರೆ, ಮೇಸ್ತಾ ಸಾವು ಖಂಡಿಸಿ ಇವತ್ತು ಶಿವಮೊಗ್ಗ ಬಂದ್ ಗೆ ಸಂಘ ಪರಿವಾರ ಕರೆ ನೀಡಿದೆ. 144 ಸೆಕ್ಷನ್ ಜಾರಿ ಮಾಡಿ ಹೋರಾಟ ಕೈ ಬಿಡುವಂತೆ ಎಸಿ ಹಾಗೂ ಎಎಸ್ಪಿ ನೇತೃತ್ವದಲ್ಲಿ ಸಭೆಯನ್ನು ನಡೆಸಲಾಗಿತ್ತು.

    ಆದರೆ ಏನೇ ಆದರೂ ಪ್ರತಿಭಟನೆ ನಿಶ್ಚಿತ ಎಂದು ಸಂಘ ಪರಿವಾರದ ನಾಯಕರು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಸಂಘ ಪರಿವಾರ ಇವತ್ತು ಗಣಪತಿ ದೇವಾಲಯದಿಂದ ಎಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದೆ.

  • ಸಹಜ ಸ್ಥಿತಿಯತ್ತ ಶಿರಸಿ-ಎಲ್ಲಿ ಏನಾಗುತ್ತೋ ಅನ್ನೋ ಭಯದಲ್ಲಿ ಪೊಲೀಸರು

    ಸಹಜ ಸ್ಥಿತಿಯತ್ತ ಶಿರಸಿ-ಎಲ್ಲಿ ಏನಾಗುತ್ತೋ ಅನ್ನೋ ಭಯದಲ್ಲಿ ಪೊಲೀಸರು

    -ಮುರುಡೇಶ್ವರ, ಯಲ್ಲಾಪುರದಲ್ಲಿ ಬಂದ್ ವದಂತಿ!

    ಕಾರವಾರ: ಬಂದ್ ಬಂದ್ ಬಂದ್. ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಕಳೆದ ಐದು ದಿನಗಳಿಂದ ನಡೀತಿರೋ ಬಂದ್ ಗಳಿಂದ ಪೊಲೀಸರು ಹೈರಾಣಾಗಿ ಹೋಗಿದ್ದಾರೆ. ಇಂದು ಎಲ್ಲಿ ಗಲಾಟೆ ನಡೆಯುತ್ತೋ, ಎಲ್ಲಿ ಬಂದ್ ಆಗುತ್ತೋ ಅನ್ನೋ ಆತಂಕದಲ್ಲೇ ಪೊಲೀಸರು ಕಾಲ ಕಳೆಯುವಂತಾಗಿದೆ.

    ಅಲ್ಲದೆ ಈ ಮಧ್ಯೆ ಇಂದು ಮುರುಡೇಶ್ವರ ಮತ್ತು ಯಲ್ಲಾಪುರದಲ್ಲಿ ಬಂದ್ ಆಚರಿಸಲಾಗುತ್ತೆ ಅನ್ನೋ ವದಂತಿಗಳು ಹಬ್ಬಿವೆ. ಡಿಸೆಂಬರ್ 6ರಂದು ಸಿಎಂ ಸಿದ್ದರಾಮಯ್ಯ ವಿವಿಧ ಕಾಮಗಾರಿಗಳ ಉದ್ಘಾಟನೆಗಾಗಿ ಎರಡು ದಿನ ಉತ್ತರ ಕನ್ನಡ ಜಿಲ್ಲೆಯಲ್ಲಿದ್ದರು. ಈ ವೇಳೆ ಚಂದಾವರದಲ್ಲಿ ಧ್ವಜದ ವಿಚಾರವಾಗಿ ಎರಡು ಕೋಮಿನವರ ನಡುವೆ ಗಲಾಟೆ ನಡೆದು ಅದು ಕೋಮುಗಲಭೆ ಬಣ್ಣ ಪಡಿತು.

    ಅಂದು ಕಾಣೆಯಾಗಿದ್ದ ಹಿಂದೂ ಯುವಕ ಪರೇಶ್ ಮೇಸ್ತ ಮೃತದೇಹ ಡಿಸೆಂಬರ್ 8ರಂದು ಕೆರೆಯಲ್ಲಿ ಪತ್ತೆಯಾಯ್ತು. ಇದಾದ ಬಳಿಕ ಉತ್ತರಕನ್ನಡ ಜಿಲ್ಲೆ ಬೂದಿ ಮುಚ್ಚಿದ ಕೆಂಡದಂತಾಗಿದ್ದು, ಯುವಕನನ್ನು ಅನ್ಯಧರ್ಮೀಯರೇ ಕೊಲೆ ಮಾಡಿದ್ದಾರೆಂದು ಹಿಂದೂಪರ ಸಂಘಟನೆಗಳು ಆರೋಪಿಸಿವೆ. ಹೀಗಾಗಿ ಹೊನ್ನಾವರ, ಕುಮಟಾದಲ್ಲಿ ನಡೆದಿದ್ದ ಬಂದ್‍ಗಳು ಹಿಂಸಾತ್ಮಕ ರೂಪ ಪಡೆದುಕೊಂಡಿತ್ತು.

    ಅಷ್ಟೇ ಅಲ್ಲದೆ ಮಂಗಳವಾರ ಶಿರಸಿಯಲ್ಲಿ ನಡೆದ ಪ್ರತಿಭಟನೆಯಲ್ಲಿ 50 ಲಕ್ಷಕ್ಕೂ ಹೆಚ್ಚು ಮೌಲ್ಯದ ಆಸ್ತಿಪಾಸ್ತಿ ಹಾಳಾಗಿದ್ದು, ಪೊಲೀಸರು ಸೇರಿದಂತೆ 13 ಮಂದಿಗೆ ಗಾಯಗಳಾಗಿತ್ತು. ಇನ್ನು ಮಂಗಳವಾರ ನಿಷೇಧಾಜ್ಞೆ ಉಲ್ಲಂಘಿಸಿ ಯಾತ್ರೆ ಹೊರಟಿದ್ದ ಶಿರಸಿ ಶಾಸಕ ಕಾಗೇರಿ ಸೇರಿದಂತೆ 70 ಮಂದಿ ಹಿಂದೂ ನಾಯಕರನ್ನು ಬಂಧಿಸಲಾಯ್ತು.

    ಗಲಭೆ ನಿಯಂತ್ರಣಕ್ಕಾಗಿ ಜಿಲ್ಲಾಧಿಕಾರಿ ಎಸ್‍ಎಸ್ ನಕುಲ್ ನೇತೃತ್ವದಲ್ಲಿ ಸಭೆ ನಡಿದಿದ್ದು, 11 ತಾಲೂಕಿನಲ್ಲಿಯೂ ಶಾಂತಿ ಸಭೆ ನಡೆಸುವಂತೆ ಎಸಿ ಹಾಗೂ ತಹಶೀಲ್ದಾರ್ ಗೆ ಮನವಿ ಮಾಡಿದ್ದಾರೆ. ಇನ್ನು ಈ ಬಗ್ಗೆ ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಸಿಎಂ, ಇದೆಲ್ಲಾ ಸಂಘ ಪರಿವಾರಗಳ ಕಿತಾಪತಿ ಎಂದಿದ್ದಾರೆ.

    https://www.youtube.com/watch?v=dZ2QYyQX7lQ

    https://www.youtube.com/watch?v=6gDTIt2kztg

    https://www.youtube.com/watch?v=mLbtbTysyQg

    https://www.youtube.com/watch?v=wMhoBywNC5w

    https://www.youtube.com/watch?v=YWp8oHGTKro

    https://www.youtube.com/watch?v=l2bS6mJ_ysM

    https://www.youtube.com/watch?v=9GHFyRsVyyQ

    https://www.youtube.com/watch?v=N94xeWb2ryM

    https://www.youtube.com/watch?v=d2u3htXp_s4

     

  • ಸಿಎಂ ಹೋದ ಜಿಲ್ಲೆಯಲ್ಲೊಂದು ಹಿಂದೂ ಕಾರ್ಯಕರ್ತನ ಹೆಣ ಬೀಳತ್ತೆ- ಶೋಭಾ ಕಿಡಿ

    ಸಿಎಂ ಹೋದ ಜಿಲ್ಲೆಯಲ್ಲೊಂದು ಹಿಂದೂ ಕಾರ್ಯಕರ್ತನ ಹೆಣ ಬೀಳತ್ತೆ- ಶೋಭಾ ಕಿಡಿ

    ಕಾರವಾರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೋದ ಜಿಲ್ಲೆಯಲ್ಲೊಂದು ಹಿಂದೂ ಕಾರ್ಯಕರ್ತನ ಹೆಣ ಬೀಳುತ್ತದೆ ಅಂತ ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

    ಕಾರವಾರದ ಶಿರಸಿಯಲ್ಲಿ ಪರೇಶ್ ಮೇಸ್ತಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಸತ್ತ ದಿನವೇ ಮುಖ್ಯಮಂತ್ರಿಗಳು ಮಂಗಳೂರಿಗೆ ಹೋಗಿದ್ದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ವಾಪಾಸ್ ಬಂದ್ರು. ಅಂದೇ ಸಂಜೆ ಶರತ್ ಮಡಿವಾಳ ಸತ್ತ ಅನ್ನೋವಂಥದ್ದು ಘೋಷಣೆಯಾಯ್ತು ಅಂದ್ರು. ಇದನ್ನೂ ಓದಿ: ರಾಜ್ಯದಲ್ಲಿ ಮತ್ತೋರ್ವ ಹಿಂದೂ ಕಾರ್ಯಕರ್ತನ ಕೊಲೆ

    ಇದೇ ಡಿಸೆಂಬರ್ 7ರಂದು ಹೊನ್ನಾವರ, ಭಟ್ಕಳಕ್ಕೆ ಸಿಎಂ ಹೋಗ್ತಾರೆ, 8 ರಂದು ಬೆಳಗ್ಗೆ ಪರೇಶ್ ಮೇಸ್ತಾ ಸತ್ತ ಅಂತ ಹೇಳಿ ಘೋಷಣೆ ಮಾಡ್ತಾರೆ. ಹೀಗೆ ಯಾವ್ಯಾವ ಜಿಲ್ಲೆಗೆ ಮುಖ್ಯಮಂತ್ರಿಯವರು ಹೋಗ್ತಾರೋ, ಆ ಜಿಲ್ಲೆಯಲ್ಲಿ ಒಂದು ಹಿಂದೂ ಕಾರ್ಯಕರ್ತನ ಜೀವ ಉರುಳುತ್ತೆ ಅನ್ನುವಂತದ್ದು ಇಂದು ಹಲವಾರು ಕೊಲೆ ಪ್ರಕರಣಗಳ ಮೂಲಕ ಸಾಬೀತಾಗಿದೆ ಅಂತ ಆಕ್ರೋಶ ವ್ಯಕ್ತಪಡಿಸಿದ್ರು.  ಇದನ್ನೂ ಓದಿ: ಮರಣೋತ್ತರ ಪರೀಕ್ಷೆ ವರದಿ ಇನ್ನೂ ಬಂದಿಲ್ಲ, ಕೊಲೆ ಹೇಗೆ ಆಗುತ್ತೆ: ಸಿಎಂ ಸಿದ್ದರಾಮಯ್ಯ

    ಪರೇಶ್ ಮೇಸ್ತಾ ಅವರ ಕೊಲೆಯನ್ನು ಮುಚ್ಚಿಹಾಕುವಂತಹ ಒಂದು ವ್ಯವಸ್ಥಿತ ಷಡ್ಯಂತ್ರವನ್ನು ಮುಖ್ಯಮಂತ್ರಿಯವರು ಮಾಡ್ತಾ ಇದ್ದಾರೆ. ಡಿಸೆಂಬರ್ 7ರಂದು ಮುಖ್ಯಮಂತ್ರಿಗಳು ಹೊನ್ನಾವರ ಭಟ್ಕಳದಲ್ಲಿ ಇದ್ದು, ಪರೇಶ್ ಮೇಸ್ತಾ ಅವರ ಹೆಣದ ಮೇಲೆ ಶಿಲಾನ್ಯಾಸವನ್ನು ಮಾಡಿ ಬಂದಿದ್ದಾರೆ ಅಂದ್ರು. ಇದನ್ನೂ ಓದಿ: ಸಹಜ ಸ್ಥಿತಿಯತ್ತ ಹೊನ್ನಾವರ- ಜಿಲ್ಲೆಯಾದ್ಯಂತ 3 ದಿನಗಳ ಕಾಲ ನಿಷೇಧಾಜ್ಞೆ ಜಾರಿ

    ಮುಸಲ್ಮಾನ ಗೂಂಡಾಗಳು ದೇಶದ್ರೋಹಿ ಚಟುವಟಿಕೆಗಳನ್ನು ಮಾಡುತ್ತಾ, ನಿರಂತರವಾಗಿ ಇಲ್ಲಿ ಓಡಾಟ ಮಾಡಿ ತಲ್ವಾರ್, ಲಾಟಿ ಹಿಡ್ಕೊಂಡು ರಸ್ತೆಯಲ್ಲಿ ಓಡಾಡುತ್ತಿದ್ದರೂ ಕೂಡ ಸರ್ಕಾರ ಯಾವುದೇ ರೀತಿಯ ಕ್ರಮಗಳನ್ನು ಕೈಗೊಳ್ಳೂತ್ತಿಲ್ಲ. ಅದರ ಬದಲಾಗಿ ರಾತ್ರಿ 2, 3 ಗಂಟೆ ಹೊತ್ತಲ್ಲಿ ಹಿಂದೂಗಳ ಮನೆಗೆ ನುಗ್ಗಿ ಅವರನ್ನು ಬಂಧಿಸುಂತಹ ಕೆಲಸವನ್ನು ಹೊನ್ನಾವರದಲ್ಲಿ ಮಾಡಲಾಗಿದೆ ಅಂತ ಕಿಡಿಕಾರಿದ್ರು. ಇದನ್ನೂ ಓದಿ: ಪರೇಶ್ ಮೇಸ್ತ ದೇಹದ ಸ್ಥಿತಿ ಬಗ್ಗೆ ಪೊಲೀಸರು ಕೇಳಿದ ಪ್ರಶ್ನೆಗೆ ವೈದ್ಯರು ಉತ್ತರ ನೀಡಿದ್ದು ಹೀಗೆ

    ಇಂದು ಜಿಹಾದಿಗಳಿಗೆ, ಪಿಎಫ್ ಐ ಕಾರ್ಯಕರ್ತರಿಗೆ ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಮುಖ್ಯಮಂತ್ರಿಗಳೇ ಗೃಹಸಚಿವರಿಗೆ ಕುಮ್ಮಕ್ಕು ಕೊಡ್ತಾ ಇದ್ದಾರೆ. ಈ ಕಾರಣದಿಂದ ಇಂದು ಕರ್ನಾಟಕದಲ್ಲಿ ಜಿಹಾದಿಗಳು ಅಟ್ಟಹಾಸ ಮೆರೆಯುತ್ತಿದ್ದಾರೆ. ಒಟ್ಟಿನಲ್ಲಿ ಪರೇಶ್ ಮೇಸ್ತಾ ಅವರ ಕೊಲೆ ಪ್ರಕರಣವನ್ನು ಎನ್‍ಐಎ ಅಥವಾ ಸಿಬಿಐ ತನಿಖೆಗೆ ನೀಡಬೇಕು ಎಂದು ಅವರು ಆಗ್ರಹಿಸಿದರು.

    ಇಂದು ಬಡ ಮೀನುಗಾರನೊಬ್ಬ ತನ್ನ ಮುಂದಿನ ಕುಟುಂಬವನ್ನು ಕಳೆದುಕೊಂಡಿದ್ದಾನೆ. 19 ವರ್ಷದ ಯುವಕ ತನ್ನ ಇಡೀ ಕುಟುಂಬವನ್ನೇ ತ್ಯಜಿಸಿದ್ದಾನೆ. ಹೀಗಾಗಿ ಆ ಕುಟುಂಬಕ್ಕೆ ತಕ್ಷಣ ಪರಿಹಾರ ನೀಡಬೇಕು ಎಂದು ಆಗ್ರಹಿಸುತ್ತಿದ್ದೇವೆ ಅಂತ ಶೋಭಾ ಕರಂದ್ಲಾಜೆ ಹೇಳಿದ್ರು. ಇದನ್ನೂ ಓದಿ:

  • ಕೂಲಿ ಕೇಳಲು ಹೋದವನ ಮೇಲೆ ಮಾರಣಾಂತಿಕ ಹಲ್ಲೆ- ಸಾವು ಬದುಕಿನ ಮಧ್ಯೆ ಕಾರ್ಮಿಕ ಹೋರಾಟ

    ಕೂಲಿ ಕೇಳಲು ಹೋದವನ ಮೇಲೆ ಮಾರಣಾಂತಿಕ ಹಲ್ಲೆ- ಸಾವು ಬದುಕಿನ ಮಧ್ಯೆ ಕಾರ್ಮಿಕ ಹೋರಾಟ

    ಬೆಂಗಳೂರು: ಟ್ರ್ಯಾಕ್ಟರ್ ಕೆಲಸದ ಕೂಲಿ ಕೇಳಲು ಹೋದ ಕಾರ್ಮಿಕನ ಮೇಲೆ ತೋಟದ ಮಾಲೀಕ ಮತ್ತು ಆತನ ಸಹಚರರು ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

    ಗಿರೀಶ್ ಹಲ್ಲೆಗೊಳಗಾದ ವ್ಯಕ್ತಿ. ತೋಟದ ಮನೆಯಲ್ಲಿ ಕೂಡಿ ಹಾಕಿ ಮಾಲೀಕ ರಮ್‍ನಾಯಕ್ ಮತ್ತು ಆತನ ಚೇಲಾಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

    ಗಿರೀಶ್ ಶನಿವಾರ ಬೆಂಗಳೂರಿನ ಕಗ್ಗಲಿಪುರದ ಬಾದೆಕಟ್ಟೆಯ ತೋಟದ ಮನೆಗೆ ಹೋಗಿದ್ದರು. ಆದರೆ ಶನಿವಾರ ಮತ್ತೆ ಮನೆಗೆ ವಾಪ್ಸಾಗಿರಲಿಲ್ಲ. ಜೊತೆಗೆ ಫೋನ್ ಸ್ವಿಚ್ ಆಫ್ ಆಗಿತ್ತು. ಈ ವೇಳೆ ಸಂಶಯಗೊಂಡ ಕುಟುಂಬಸ್ಥರು ಬಾದೆಕಟ್ಟೆ ಗ್ರಾಮದ ತೋಟದ ಮನೆಗೆ ಹೋಗಿ ನೋಡಿದಾಗ ಗಿರೀಶ್ ಸಾವು ಬದುಕಿನ ನಡುವೆ ನರಳಾಡುತ್ತಿದ್ದರು. ಕೂಡಲೇ ಗಿರೀಶ್ ನನ್ನು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‍ನಲ್ಲಿರುವ ಸಾಗರ್ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.

    ಈ ಸಂಬಂಧ ಬೆಂಗಳೂರು ಹೊರವಲಯದ ಕಗ್ಗಲೀಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇತ್ತ ಮಾಲೀಕನ ಮತ್ತವನ ಬಂಟರ ವಿರುದ್ಧ ದೂರು ಕೊಟ್ಟರು ಕೇವಲ ಸ್ಟೇಷನ್‍ಗೆ ಕರೆಸಿ ಬಿಟ್ಟು ಕಳಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮಾತ್ರವಲ್ಲದೇ ಆರೋಪಿಗಳನ್ನು ಬಂಧಿಸುವಂತೆ ಗಿರೀಶ್ ಕಡೆಯವರು ಶನಿವಾರ ರಾತ್ರಿ ರಸ್ತೆ ತಡೆದು ಪ್ರತಿಭಟಿಸಿದ್ದರು.