Tag: ಪ್ರಕಾಶ್ ಅಮ್ಮಣ್ಣಾಯ

  • ನಾಳೆ ಖಗ್ರಾಸ ಚಂದ್ರಗ್ರಹಣ, ಕೊರೊನಾ ಸೋಂಕಿತರು ಉಪವಾಸ ಮಾಡಬೇಡಿ: ಪ್ರಕಾಶ್ ಅಮ್ಮಣ್ಣಾಯ

    ನಾಳೆ ಖಗ್ರಾಸ ಚಂದ್ರಗ್ರಹಣ, ಕೊರೊನಾ ಸೋಂಕಿತರು ಉಪವಾಸ ಮಾಡಬೇಡಿ: ಪ್ರಕಾಶ್ ಅಮ್ಮಣ್ಣಾಯ

    ಉಡುಪಿ: ಕೊರೊನಾ ಸೋಂಕಿತರು, ಸೋಂಕಿನಿಂದ ಗುಣಮುಖರಾದವರು ಚಂದ್ರಗ್ರಹಣ ಸಂದರ್ಭದಲ್ಲಿ ಉಪವಾಸ ಮಾಡುವ ಸಾಹಸಕ್ಕೆ ಕೈ ಹಾಕಬೇಡಿ. ನೀವು ನಿಮ್ಮ ಆರೋಗ್ಯದ ಕಡೆ ಗಮನ ಕೊಡಿ. ವೈದ್ಯರು ಹೇಳಿದ್ದನ್ನು ಮಾಡಿ ಎಂದು ಉಡುಪಿಯ ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ಸಲಹೆ ನೀಡಿದ್ದಾರೆ.

    ಮೇ 16 ರಂದು ಪೂರ್ಣ ಅಥವಾ ಖಗ್ರಾಸ ಚಂದ್ರಗ್ರಹಣ ನಡೆಯಲಿದೆ. ಭಾರತೀಯ ಕಾಲಮಾನ ಪ್ರಕಾರ ಸಂಜೆ 3:14 ರಿಂದ 6:23 ರವರೆಗೆ ಗ್ರಹಣ ಗೋಚರ ಕಾಲವಾಗಿದ್ದು,ಸೂರ್ಯಾಸ್ತಮಾನಕ್ಕೆ ಮೊದಲು ಗ್ರಹಣ ಗೋಚರ ಆಗಲಿದೆ. ಇದು ವೃಶ್ಚಿಕ ರಾಶಿಯಲ್ಲಿ ಬರುವಂತಹ ಕೇತು ಗ್ರಹಣ. ಹೀಗಾಗಿ ವೃಶ್ಚಿಕ ರಾಶಿಯವರು ಜಪ ತಪ ಧ್ಯಾನ ಮಾಡಿ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕು ಎಂದರು.

    ಕರ್ನಾಟಕದ ಯಾವುದೇ ಭಾಗದಲ್ಲಿ ಈ ಗ್ರಹಣ ಗೋಚರ ಆಗುವುದಿಲ್ಲ. ಗ್ರಹಣ ಗೋಚರ ಆಗದೇ ಇದ್ದರೆ ಆಚರಣೆ ಮಾಡಬೇಕೆಂದಿಲ್ಲ ಎಂದು ಶಾಸ್ತ್ರ ಹೇಳುತ್ತದೆ. ಆದರೆ ಗ್ರಹಣ ಬರುವುದು ನಮ್ಮದೇ ಚಂದ್ರನಿಗೆ. ಅದೇ ಚಂದ್ರನು ದುರ್ಬಲವಾಗುವ ಕಾಲವನ್ನು ಗ್ರಹಣ ಅಂತಾರೆ, ಅದೇ ಚಂದ್ರ ನಮಗೂ ಕಣ್ಣಿಗೆ ಕಾಣುವುದರಿಂದ ಆಚರಣೆ ಮಾಡಬೇಕೋ ಬೇಡವೋ ಎನ್ನುವ ಜಿಜ್ಞಾಸೆಯೂ ಇದೆ.

    ಗ್ರಹಣ ಗೋಚರವಿಲ್ಲ- ಉಪವಾಸ ಅಗತ್ಯ ಇಲ್ಲ: ನಮಗೆ ಗ್ರಹಣ ಗೋಚರವಾದಾಗ ಮಾಡುವ ಎಲ್ಲಾ ಆಚರಣೆಗಳನ್ನು ಈ ಬಾರಿ ಮಾಡಬೇಕೆಂದಿಲ್ಲ. ಸಂಜೆ ಗ್ರಹಣ ಪ್ರಾರಂಭ ಆಗುವ 3:14 ರಿಂದ 6:10 ರವರೆಗೆ ಆಹಾರ ನಿಷೇಧ ಮಾಡಿದರೆ ಸಾಕು. ರೋಗಿಗಳು, ಮಕ್ಕಳಿಗೆ ವಿನಾಯಿತಿ ಇದೆ. ಅವರು ಕಡಿಮೆ ಪ್ರಮಾಣದ ಆಹಾರ ಸೇವಿಸಿದರೆ ಉತ್ತಮ. ಇದರಿಂದ ಗ್ರಹಣದಿಂದ ಬರಬಹುದಾದ ದೈಹಿಕ ದುರ್ಬಲತೆಯಿಂದ ಪಾರಾಗಬಹುದು ಎಂದು ಪ್ರಕಾಶ್ ಅಮ್ಮಣ್ಣಾಯ ಸಲಹೆ ನೀಡಿದರು.

    ಬೇರೆ ಬೇರೆ ಗ್ರಹಗಳಿಂದ ಬರುವ ಕಿರಣಗಳಿಂದಲೂ ನಮ್ಮ ದೇಹದ ರೋಗನಿರೋಧಕ ಶಕ್ತಿ ನಿರ್ಧಾರವಾಗುತ್ತದೆ. ಆದ್ದರಿಂದ ಗ್ರಹಣ ಕಾಲದಲ್ಲಿ ಆಹಾರ ಸ್ವೀಕರಿಸದೇ ಇರುವುದು ಒಳ್ಳೆಯದು. ನಮಗೆ ಗ್ರಹಣ ಗೋಚರ ಆಗೋದಿಲ್ಲ. ಆದರೆ ಪೂರ್ವ ದೇಶದ ಕೆಲವು ಭಾಗಗಳಲ್ಲಿ ಗ್ರಹಣ ಗೋಚರಕ್ಕೆ ಬರುತ್ತದೆ. ಕೊನೆಯ ಮೂರ್ನಾಲ್ಕು ನಿಮಿಷ ಭಾರತದ ಕೆಲವೆಡೆ ಕಾಣಬಹುದು. ಆಧ್ಯಾತ್ಮಿಕ ದೃಷ್ಟಿಕೋನದಿಂದ ನೋಡಿದಾಗ ಚಂದ್ರನ ಆರಾಧನೆ ಮಾಡುವ ಕಾರಣ ಮತ್ತು ಚಂದನಿಗೆ ಸಂಬಂಧಿಸಿದ ಅಧಿದೇವತೆಗಳನ್ನು ಕಾಡುವ ಕಾರಣ ಆ ಹೊತ್ತು ಆಹಾರವನ್ನು ಬಿಟ್ಟು ಉಪವಾಸ ಇರಬೇಕು.

    ಗ್ರಹಣ ಮೋಕ್ಷ ಆದ ನಂತರ ಸ್ನಾನ ಮಾಡಿ ನಿತ್ಯಕರ್ಮ ಮಾಡುವುದು ಉತ್ತಮ. ಯಾವ ಗ್ರಹಣದಿಂದಾಗಿ ಯಾವ ರಾಶಿಗೂ ಅನಿಷ್ಟ ಬರುವುದಿಲ್ಲ. ಗ್ರಹಣ ಕಾಲದಲ್ಲಿ ಅನಾಚಾರ ಮಾಡಿದರೆ ಖಂಡಿತವಾಗಿ ಸಮಸ್ಯೆ ಬರುತ್ತದೆ. ವೃಶ್ಚಿಕ ರಾಶಿಗೆ ಈ ಬಾರಿ ಗ್ರಹಣ ಬರುತ್ತದೆ. ಆದ್ದರಿಂದ ವೃಶ್ಚಿಕ ರಾಶಿಯವರು ಎಚ್ಚರಿಕೆಯಿಂದ ಇರಬೇಕು. ಆರೋಗ್ಯದಲ್ಲಿ ಸಣ್ಣ ಏರು-ಪೇರು ಬರಬಹುದು, ಈಗಾಗಲೇ ವಾತಾವರಣದಲ್ಲಿ ಕೊರೊನಾ ಮಹಾಮಾರಿ ಇದೆ. ಹಾಗಾಗಿ ಆರೋಗ್ಯದ ಬಗ್ಗೆ ವಿಶೇಷ ಗಮನ ಕೊಡಬೇಕು. ಗ್ರಹಣಕಾಲದಲ್ಲಿ ಉಪವಾಸ ಇರುವುದೇ ಉತ್ತಮ ಪರಿಹಾರ.

    ಕೆಲವರು ಜಪ, ಹೋಮಗಳನ್ನು ಮಾಡುತ್ತಾರೆ. ಇದೇನು ಕಡ್ಡಾಯ ಅಲ್ಲ. ಬೇಕೆನಿಸಿದರಷ್ಟೇ ಮಾಡಿಕೊಳ್ಳಬಹುದು. ಗ್ರಹಣ ಬಂದಾಗ ಮನಃಕಾರಕ ಚಂದ್ರನು ಮಾನಸಿಕ ಖಿನ್ನತೆ ವಿಕೃತಿಗಳಿಗೆ ಕಾರಣನಾಗುತ್ತಾನೆ. ಗ್ರಹಣದ ಪ್ರಭಾವ ಜಾಸ್ತಿ ಇರುವ ಸ್ಥಳಗಳಲ್ಲಿ ವ್ಯಕ್ತಿಗಳ ಮೇಲೆ ಮಾನಸಿಕ ಪರಿಣಾಮ ಇರುತ್ತದೆ. ಚೀನಾದ ಪೂರ್ವ ಭಾಗ ಮಲೇಶಿಯಾ ಇಂಡೋನೇಶಿಯಾ ಜಪಾನ್ ಮುಂತಾದ ಭಾಗಗಳಲ್ಲಿ ಗ್ರಹಣದ ಪರಿಣಾಮ ಜಾಸ್ತಿ. ಪ್ರಕೃತಿಯ ಮೇಲೂ ತೊಂದರೆಗಳಾಗಬಹುದು. ಸಮುದ್ರದ ಅಲೆ ಭೂಕಂಪನ ಇತ್ಯಾದಿಗಳು ಆಗಬಹುದು. ಚಂಡ ಮಾರುತಗಳು ಬರಬಹುದು, ಅಲೆ ಹೆಚ್ಚಾಗಬಹುದು.

    ಮನುಷ್ಯನ ಬುದ್ಧಿಯ ಮೇಲೆ ಪರಿಣಾಮ ಬೀರಬಹುದು. ಲಾಕ್‍ಡೌನ್ ಮಾಡಿದ ನಂತರ ಬಹಳ ಜನರು ಓಡಾಡುತ್ತಿಲ್ಲವೇ, ನಾನು ಓಡಾಡಿದರೆ ನನಗೇನು ಆಗಲ್ಲ ಅಂತಾರೆ. ಕೇವಲ ಪ್ರಜೆಗಳು ಮಾತ್ರವಲ್ಲ ರಾಜರಿಗೂ ತೊಂದರೆಗಳು ಬರುತ್ತವೆ. ಆಡಳಿತ ಮಾಡುವ ರಾಜರಿಗೆ ತೊಂದರೆ ಬಂದರೆ ದೇಶಕ್ಕೆ ತೊಂದರೆ. ರಾಜಕೀಯದಲ್ಲಿ ಹೊಡೆದಾಟಗಳು ಪೀಠಕ್ಕಾಗಿ ಕಾದಾಟ ನಡೆಯಬಹುದು. ಮುಂಜಾಗ್ರತೆ ವಹಿಸಿ.

    ಭಾರತಕ್ಕೆ ಗ್ರಹಣದ ಪ್ರಭಾವ ಕಡಿಮೆ: ಚೈನಾದಲ್ಲಿ ಉಂಟಾದ ವೈರಸ್ ಭಾರತವನ್ನು ಕಾಡಿದ ರೀತಿಯಲ್ಲಿ ಅನ್ಯ ದೇಶಗಳ ಮೇಲೆ ಉಂಟಾಗುವ ತೊಂದರೆ ಭಾರತಕ್ಕೂ ಬರುತ್ತದೆ. ಆದರೆ ನೇರವಾಗಿ ಭಾರತದ ಮೇಲೆ, ಭಾರತೀಯರ ಮೇಲೆ ಬೀರುವ ಸಾಧ್ಯತೆ ಕಂಡು ಬರುತ್ತದೆ. ಭಾರತೀಯರು ಎಚ್ಚರದಿಂದ ಇರಬೇಕು ಎಂದು ಅಮ್ಮಣ್ಣಾಯ ಹೇಳಿದರು.

  • ಬಿಎಸ್‍ವೈ ಕಷ್ಟಕಾಲ ನೀರಾಯ್ತು, ಹೆಚ್‍ಡಿಕೆ ಸೈಲೆಂಟಾದ್ರೆ ಒಳ್ಳೆದು: ಪ್ರಕಾಶ್ ಅಮ್ಮಣ್ಣಾಯ

    ಬಿಎಸ್‍ವೈ ಕಷ್ಟಕಾಲ ನೀರಾಯ್ತು, ಹೆಚ್‍ಡಿಕೆ ಸೈಲೆಂಟಾದ್ರೆ ಒಳ್ಳೆದು: ಪ್ರಕಾಶ್ ಅಮ್ಮಣ್ಣಾಯ

    – ಸಿದ್ದರಾಮಯ್ಯ ಜವಾಬ್ದಾರಿ ಬಿಟ್ಟು ಮನೆಗೆ ಹೋಗ್ತಾರೆ

    ಉಡುಪಿ: ಅಮಾವಾಸ್ಯೆ ಶುಕ್ರವಾರ ಮಧ್ಯಾಹ್ನ ಮೂರು ಗಂಟೆಗೆ ಶನಿ ಗ್ರಹದ ಮಕರ ರಾಶಿಯ ಪ್ರವೇಶವಾಗಿದೆ. ದೇಶದಲ್ಲಿ ರಾಜ್ಯದಲ್ಲಿ ಹಲವಾರು ಬಂಧನಗಳನ್ನು ಈ ಬೆಳವಣಿಗೆ ಸೂಚಿಸುತ್ತದೆ ಎಂದು ಉಡುಪಿಯ ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾಯಕರ, ಹೋರಾಟಗಾರರ, ಆರೋಪ ಹೊತ್ತವರ ಬಂಧನ ಕಾಲ ಇದು. ಜಾಗರೂಕತೆಯೇ ಎಲ್ಲದಕ್ಕೂ ಮದ್ದು, ಎಲ್ಲದರ ಪರಿಹಾರ ಎಂದು ಕಿವಿಮಾತು ಹೇಳಿದರು. ಮಾಜಿ ಸಚಿವ ಡಿಕೆ ಶಿವಕುಮಾರ್ ಸಂಕಷ್ಟ ಪರಿಹಾರವಾಗುತ್ತೆ. ಕಷ್ಟ ಕಾಲಗಳೆಲ್ಲ ದೂರವಾಗಿ ಬಿಎಸ್‍ವೈ ಅಧಿಕಾರ ತ್ಯಜಿಸಿ ವಿಶ್ರಾಂತಿ ಪಡೆಯುವ ಯೋಗವಿದೆ ಎಂದರು.

    ಮಾಜಿ ಸಿಎಂ ಸಿದ್ದರಾಮಯ್ಯನಿಗೆ ಕೆಲಸವಿಲ್ಲದೆ ನೆಮ್ಮದಿ ಎಂದ ಅವರು, ವಿರೋಧ ಪಕ್ಷಕ್ಕೆ ಕೆಲಸವಿಲ್ಲದೆ ಸಿದ್ದರಾಮಯ್ಯಗೆ ಫುಲ್ ರೆಸ್ಟ್ ಮಾಡುತ್ತಾರೆ. ಸಿದ್ದರಾಮಯ್ಯನ ಅಧಿಕಾರಗಳೆಲ್ಲ ದೂರವಾಗಿ ನೆಮ್ಮದಿಗೆ ಜಾರುತ್ತಾರೆ ಎಂದು ಭವಿಷ್ಯ ಹೇಳಿದರು. ಮಾಜಿ ಸಿಎಂ ಕುಮಾರಸ್ವಾಮಿಗೆ ಕೂಲಾಗಿದ್ದರೆ ಒಳ್ಳೆದು. ಅವರ ಹೇಳಿಕೆಗಳಿಂದಲೇ ಅವರ ವರ್ಚಸ್ಸು ಹಾಳಾಗುತ್ತದೆ ಎಂದು ಹೇಳಿದರು.

    ಕುಮಾರಸ್ವಾಮಿ ಆರೋಗ್ಯದಲ್ಲಿ ದುಷ್ಪರಿಣಾಮದ ಆತಂಕವಿದೆ. ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡಿ. ಮನಸ್ಥಿತಿಯನ್ನು ಸರಿಯಾಗಿಟ್ಟುಕೊಳ್ಳಿ. ನಿಮ್ಮ ಬಿಪಿ ಹತೋಟಿಗೆ ತಂದುಕೊಳ್ಳಿ ಎಂದರು. ಪ್ರಧಾನಿ ಮೋದಿಯ ವಿಮಾನ ಟೇಕಾಫ್ ಆಗುವ ಕಾಲ ಕಳೆಯಿತು. ಅಲ್ಲೋಲ ಕಲ್ಲೋಲ ಆಗುತ್ತಿದೆ. ಮೋದಿಗೆ ಇನ್ಮುಂದೆ ಶುಭಕಾಲ ಇರುತ್ತದೆ. ವಿಮಾನ ಆಕಾಶ ಸೇರುವ ಕಾಲ ಇದು ಎಂದರು.

    ಬಾಂಬರ್ ಆದಿತ್ಯನ ಬಗ್ಗೆ ಅಮ್ಮಣ್ಣಾಯ ಭವಿಷ್ಯ ನುಡಿದಿದ್ದಾರೆ. ಆತನ ಮೈಂಡ್ ಪ್ರೋಗ್ರಾಮಿಂಗ್ ಆತನಿಗೆ ಕುತ್ತು ತಂದಿದೆ. ತಂತ್ರಜ್ಞಾನ ಸದ್ಬಳಕೆ ಮಾಡದೆ ತನ್ನನ್ನು ತಾನೇ ಬಾವಿಗೆ ತಳ್ಳಿಕೊಂಡ ಎಂದರು.

  • ಪ್ರಧಾನಿ ಮೋದಿಯ ಭವಿಷ್ಯ ನುಡಿದ ಪ್ರಕಾಶ್ ಅಮ್ಮಣ್ಣಾಯ

    ಪ್ರಧಾನಿ ಮೋದಿಯ ಭವಿಷ್ಯ ನುಡಿದ ಪ್ರಕಾಶ್ ಅಮ್ಮಣ್ಣಾಯ

    ಉಡುಪಿ: 2020ರ ಭವಿಷ್ಯ ಹೇಳೋದು ಬಹಳ ಸುಲಭ. ಒಂದು ಸಂಖ್ಯೆ ಹಲವನ್ನು ಹೇಳುತ್ತದೆ. ಅರ್ಧ ಸಿಹಿ, ಅರ್ಧ ಕಹಿ. ಟ್ವೆಂಟಿ ಟ್ವೆಂಟಿ ಒಂದು ಲೆಕ್ಕದಲ್ಲಿ ಫಿಫ್ಟಿ ಫಿಫ್ಟಿ ಇದ್ದಂತೆ ಎಂದು ಖ್ಯಾತ ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ಹೇಳಿದ್ದಾರೆ. ಹಾಗಾದರೆ ಈ ವರ್ಷ ಮೋದಿಯ ಭವಿಷ್ಯವೇನು ಎಂದು ಕೇಳಿದರೆ ಅಮ್ಮಣ್ಣಾಯ ಅವರು ನೀಡುವ ಉತ್ತರ ಹೀಗಿದೆ..

    ಪ್ರಧಾನಿ ನರೇಂದ್ರ ಮೋದಿಯ ಜಾತಕ: ಮೋದಿ ಯಾವುದಕ್ಕೂ ಹಿಂದೇಟು ಹಾಕುವ ಮನುಷ್ಯ ಅಲ್ಲ. ದಿಟ್ಟ ನಿರ್ಧಾರ ಮಾಡಿದವರು ಹಿಂದೆ ಬರಲ್ಲ. ಮೋದಿಯನ್ನು ಕೆರಳಿಸಬಾರದು. ಕೆರಳಿಸಿದರೆ ಕಷ್ಟವಾಗಬಹುದು. ಮೋದಿ ದೇಶಕ್ಕಾಗಿ ಶಾಸನ ಮಾಡುವ ವ್ಯಕ್ತಿ. ಅಡ್ಡಗಾಲು ಹಾಕಿದರೆ ಕಷ್ಟ ಶಾಸನ ಹೊರಡಬಹುದು. ಸುಖಾ-ಸುಮ್ಮನೆ ರಾಜಕೀಯ ಪ್ರೇರಣೆಯ ಪ್ರತಿಭಟನಾಕಾರರಿಗೆ ಶಾಸ್ತಿಯಾಗಲಿದೆ. ಮೋದಿಗೆ ಕಷ್ಟ ಕಾಲ ಬಂದರೂ ಅವರು ರಾಜೀನಾಮೆ ಕೊಡಲ್ಲ. ಆಲೋಚನೆ ಮಾಡಿ ಕ್ರಮ ತೆಗೆದುಕೊಳ್ಳುವವರಾಗಿದ್ದಾರೆ ಎಂದು ತಿಳಿಸಿದ್ದಾರೆ.

    ಮೋದಿಯ ಜಾತಕದಲ್ಲಿ ಚಂದ್ರದೆಸೆ. ಕುಜ-ಶುಕ್ರರ ನಡುವೆ ಪರಮ ಶತ್ರುಗಳು. ದೇಶದ ಅಲಂಕಾರಗಳನ್ನು, ಸ್ವತ್ತನ್ನು ವಿರೂಪ ಮಾಡಿದರೆ ಮೋದಿ ಕೆರಳುತ್ತಾರೆ. ಇದರಿಂದ ಶತ್ರುಗಳಿಗೆ ಉಳಿಗಾಲವಿಲ್ಲ. ಮೋದಿಯ ಚಾಣಾಕ್ಷತನ ಮತ್ತಷ್ಟು ಪ್ರಬಲವಾಗುತ್ತದೆ. ಮೋದಿಗೆ ಅಖಂಡ ಸಾಮ್ರಾಜ್ಯ ಯೋಗವಿದೆ. ಮೋದಿಗೆ ಪ್ರಶ್ನೆ ಮಾಡಬಹುದು, ಸೋಲಿಸಲಾಗದು. ವಿದೇಶಿ ಕೈವಾಡ ವಿಪಕ್ಷದ ಜೊತೆ ಸೇರಿಕೊಳ್ಳುತ್ತದೆ. ವಿದೇಶಗಳು ಭಾರತದ ವಿರುದ್ಧ ನಿಲ್ಲಬಹುದು. ಆದರೆ ಭಾರತವನ್ನು ಸೋಲಿಸಲು ಆಗದು. ರಾಹು ಕೇತುಗಳು ಮೋದಿಯ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ. ಆದರೆ ಪ್ರಧಾನಿಗಳು ಎಲ್ಲವನ್ನೂ ಕೂಲಂಕುಷವಾಗಿ ಪರಿಶೀಲಿಸುವ ವ್ಯಕ್ತಿ. ಹಿಂಸಾಚಾರ ಸಾಧ್ಯತೆಯೂ ಇದೆ. 2020 ಸಿಹಿಯೂ ಕಹಿಯೂ ಪ್ರಾಪ್ತಿಯಾಗಲಿದೆ. 2021ರ ನಂತರ ಮೋದಿಯ ಆಡಳಿತದ ಸಿಹಿ ಸಿಗಲಿದೆ. ಎಲ್ಲರೂ ತಾಳ್ಮೆಯಿಂದ ಕಾಯಬೇಕು. ತಾಳ್ಮೆ ಕಳೆದುಕೊಳ್ಳಬಾರದು ಎಂದು ನುಡಿದಿದ್ದಾರೆ.

    ವಿರೋಧಿಗಳಿಗೆ- ವಿಪಕ್ಷಕ್ಕೆ ಜಟಿಲ ಕಾಲ. ವಿಪಕ್ಷ ಮೋದಿಯ ವಿರುದ್ಧ ಗೆಲ್ಲೋದಿಲ್ಲ. ಮೋದಿ ದೇಶಕ್ಕಾಗಿ, ಜನರಿಗಾಗಿ ಜೀವನ ಮುಡಿಪಾಗಿಟ್ಟವರು ಎಂದು ಹೇಳಿದ್ದಾರೆ.

    ಶನಿ ಮಕರ ರಾಶಿ ಪ್ರವೇಶ. ಗುರು ಕೂಡ ಮಕರ ರಾಶಿಯ ಪ್ರವೇಶವಾಗುವ ಕಾಲ. ಸೂರ್ಯ ಚಂದ್ರರ ಪರಿಣಾಮದಂತೆ ಈ ಗ್ರಹಗಳ ಸಂಚಾರ ಭೂಮಿಯ ಮೇಲೆ ಪ್ರಭಾವ ಬೀರುತ್ತದೆ. ಇದರಿಂದ ತೊಂದರೆಗಳು, ಒಳ್ಳೆಯ ಕಾಲಗಳು ಬರುತ್ತದೆ ಎಂದು ತಿಳಿಸಿದ್ದಾರೆ.

    2020 ಹೊಸವರ್ಷ ಎಂದು ಕರೆದರೂ ಹಿಂದೂಗಳ ಪಂಚಾಂಗ ಪ್ರಕಾರ ಹೊಸ ವರ್ಷ ಅಲ್ಲ. ಭಾರತೀಯ ಪಂಚಾಂಗ ಪ್ರಕಾರ ಇದು ಹೊಸವರ್ಷ ಅಲ್ಲ. ಅರ್ಧ ರಾತ್ರಿಗೆ ಒಂದು ದಿವಸದ ಲೆಕ್ಕವಿದೆ. ನಮ್ಮದು ಸೂರ್ಯೋದಯದ ಲೆಕ್ಕಾಚಾರ. ಆದರೂ ವಿಶ್ವಕ್ಕೆ ಹೊಸ ವರ್ಷ ಆಗಿರೋದರಿಂದ ಒಂದು ಕ್ಷಣದ ದುಃಖ, ಒಂದು ಕ್ಷಣದ ಖುಷಿಗಳು ಬರಬಹುದು. ಖುಷಿ ಮತ್ತು ಬೇಸರಗಳು ಬಹಳ ಕಾಲ ಉಳಿಯದೆ ಬದಲಾಗುತ್ತಿರಬಹುದು. ದಾನವರ ಸಂಭ್ರಮದ ರೀತಿ ಆಗಬಹುದು. ಆದರೆ ಅದರಲ್ಲಿ ಲಾಭವಿಲ್ಲ ಎಂದಿದ್ದಾರೆ.

    2019ರ ಕಾರ್ಯ 2020ರಲ್ಲಿ ಫಲ: ಬಂಧನಗಳು ಆಗುವ ಸಾಧ್ಯತೆ ಇದೆ. ದೊಡ್ಡ ವ್ಯಕ್ತಿಗಳು ಬಂಧನಗಳಾಗುತ್ತದೆ. ಅಪರಾಧ ಮಾಡುವವರಿಗೆ ಕಷ್ಟಕಾಲ. ಅಕ್ರಮಗಳು ಸಾಬೀತಾಗುತ್ತದೆ. ಕಾನೂನಿನ ವಿರುದ್ಧ ಹೋದವರಿಗೆಲ್ಲ ಕಷ್ಟಕಾಲ. ಅಕ್ಟೋಬರ್ ನಂತರದ ಕಾಲದಲ್ಲಿ ಹೀಗೆಲ್ಲ ಆಗುತ್ತದೆ. ಧರ್ಮಭ್ರಷ್ಟರಿಗೆ ಶುಭಕಾಲ ಇಲ್ಲ. ಕಾನೂನಿಗೆ ವಿರೋಧ ಮಾಡಿದವರಿಗೆ ಕಷ್ಟಕಾಲ ಬರುತ್ತದೆ. ಸಿಎಎ, ಎನ್.ಆರ್.ಸಿಗಳ ವಿರುದ್ಧ ಹೋದವರಿಗೆ ಕೆಟ್ಟ ಫಲ ಸಿಗಲಿದೆ. ಕಾನೂನು ಧಿಕ್ಕರಿಸಿ ವಿರೋಧಿಸಿದವರಿಗೆ ಬಂಧನ, ಅಪಾಯ ಬರಬಹುದು. 2-3 ಪೌರತ್ವ ಇರುವವರು ಕಷ್ಟಕ್ಕೊಳಗಾಗುತ್ತೀರಿ. ಅಮಾಯಕರು ಬಂಧನಕ್ಕೊಳಗಾಗುವ ಸಾಧ್ಯತೆ ಇದೆ. ಮುಂದೆ ಫಲಸಿಕ್ಕಿ ಹೊರ ಬರುತ್ತಾರೆ ಅಂತ ಹೇಳಿದ್ದಾರೆ.

  • 2020ರ ಸಿಂಪಲ್ ಭವಿಷ್ಯ ನುಡಿದ ಪ್ರಕಾಶ್ ಅಮ್ಮಣ್ಣಾಯ

    2020ರ ಸಿಂಪಲ್ ಭವಿಷ್ಯ ನುಡಿದ ಪ್ರಕಾಶ್ ಅಮ್ಮಣ್ಣಾಯ

    ಉಡುಪಿ: ಹಳೆ ವರ್ಷಕ್ಕೆ ಟಾಟಾ ಬೈಬೈ ಹೇಳಿ ಹೊಸ ವರ್ಷ ಬರಮಾಡಿಕೊಂಡಿದ್ದೇವೆ. ಕಳೆದದ್ದು ಕಳೆದು ಹೋಯಿತು. ಆಗಿದ್ದು ಆಗೋಯ್ತು. ಮುಂದೇನು ಎನ್ನುವ ಕುತೂಹಲ ಎಲ್ಲರಿಗೂ ಇರುತ್ತದೆ. ಹೊಸ ವರ್ಷದಲ್ಲಿ ಏನಾದರೂ ಹೊಸ ರೆಸಲ್ಯೂಷನ್ ತಗೆದುಕೊಳ್ಳಬೇಕು ಎಂದು ಎಲ್ಲರೂ ಯೋಚನೆ ಮಾಡುತ್ತಿದ್ದಾರೆ.

    ಜ್ಯೋತಿಷ್ಯ ನಂಬುವವರು ನನ್ನ ಮುಂದಿನ ವರ್ಷ ಹೇಗಿರುತ್ತದೆ ಎಂದು ಲೆಕ್ಕ ಹಾಕಿಯೇ ಹಾಕುತ್ತಾರೆ. ಗ್ರಹಫಲ ಏನು. ಕಂಟಕ ಇದ್ದರೆ ಸುಲಭ ಪರಿಹಾರ ಏನು ಎಂದು ಹುಡುಕುತ್ತಿರುತ್ತಾರೆ. ಉಡುಪಿಯ ಕಾಪು ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ದ್ವಾದಶ ರಾಶಿಯ ಫಲಾಫಲ ಹೇಳಿದ್ದಾರೆ. ಜ್ಯೋತಿಷ್ಯದ ಜೊತೆ ವಿಜ್ಞಾನ, ಮನಶಾಸ್ತ್ರ ಕಲಿತಿರುವ ಪ್ರಕಾಶ್ ಅಮ್ಮಣ್ಣಾಯ ಜನರನ್ನು ಭಯ ಬೀಳಿಸದೆ. ಸಾವಿರ ಲಕ್ಷದ ಪರಿಹಾರ ಸೂಚಿಸಿಲ್ಲ. ಬಹಳ ಸಿಂಪಲ್ಲಾಗಿ 2020ಯನ್ನು ಖುಷಿಖುಷಿಯಾಗಿ ಕಳೆಯಿರಿ ಎಂದು ಹೇಳಿದ್ದಾರೆ.

    ಹೊಸ ವರ್ಷ ಬಂದಾಗ ಮನುಷ್ಯ ಬಹಳ ಪ್ರಫುಲ್ಲಿತನಾಗಿರುತ್ತಾನೆ. ಹೊಸ ವರ್ಷ ಬಂದಾಗ ವರ್ಷ ಹೇಗಿರುತ್ತದೆ ಎಂಬುದು ಎಲ್ಲರಿಗೂ ಕುತೂಹಲ ಇರುತ್ತದೆ. ರಾಶಿಗಳ ಮೇಲೆ ಇಡೀ ವರ್ಷದ ಭವಿಷ್ಯ ಹೇಳುವುದು ಕಷ್ಟ. ಜಾತಕದ ಮೇಲೆ ಹೇಳಬಹುದು. ಆಳವಾಗಿ ದ್ವಾದಶರಾಶಿಯನ್ನು ಹೇಳದಿದ್ದರೂ, 12 ರಾಶಿಯನ್ನು ಪರಾಮರ್ಷೆ ಮಾಡಿ, ಕೆಲ ವಿಮರ್ಶೆ ಮಾಡಿದ್ದಾರೆ.

    2020 ಜನವರಿ 26ಕ್ಕೆ ಶನಿ ಮಕರ ಪ್ರವೇಶವಾಗುತ್ತದೆ. ಮಾರ್ಚ್‍ನಲ್ಲಿ ಗುರು ಕೂಡ ಮಕರಕ್ಕೆ ಪ್ರವೇಶವಾಗುತ್ತದೆ. ಜೂನ್ ನಂತರ ಧನಸ್ಸು ರಾಶಿಗೆ ಎರಡು ಗ್ರಹಗಳ ಪ್ರವೇಶ ಆಗುವುದರಿಂದ ಈ ಮೂರು ರಾಶಿಯವರು ಮುಂಜಾಗ್ರತೆ ವಹಿಸಬೇಕು.

    ಮೇಷ: ನಮ್ಮ ಅಭಿವೃದ್ಧಿಗೆ ನಾವೇ ಮಾರಕರಾಗುವ ಸ್ವಭಾವ. ಅವಸರ ಸ್ವಭಾವ ಸಲ್ಲದು. ಧರ್ಮ ಭ್ರಷ್ಟರಾಗುತ್ತೇವೆ. ದುಡಿತಕ್ಕೆ ತಕ್ಕ ಸಂಭಾವನೆ ಲಭ್ಯ. ಕಾಯಕವೇ ಕೈಲಾಸದಲ್ಲಿ ನಂಬಿಕೆ ಇಡಬೇಕು. ಭಾಗ್ಯ ಪ್ರಾಪ್ತಿ.

    ವೃಷಭ: ಇದೂವರೆಗೆ ಅನುಭವಿಸಿದ ಸಂಕಟಗಳು ಕಡಿಮೆಯಾಗುತ್ತವೆ. ಅನಾರೋಗ್ಯ ದೂರ. ಜನವರಿ 26ರಿಂದ ಶುಭ ಫಲ ಪ್ರಾಪ್ತಿ. ಸರಿಯಾಗಿ ಯೋಚಿಸಿ ಕಾರ್ಯ ಪ್ರವೃತ್ತರಾಗಿ. ಮಾರ್ಚ್ ಬಳಿಕ ಗುರು ಅನುಗ್ರಹದಿಂದ ಇನ್ನೂ ಒಳ್ಳೆಯ ಸಮಯ. ಶನಿಯ ಪ್ರಭಾವ ತಪ್ಪುತ್ತದೆ, ಎಚ್ಚರಿಕೆ ಅತಿ ಮುಖ್ಯ.

    ಮಿಥುನ: ಇಂದಿನ ಶ್ರಮಕ್ಕೆ ನಾಳೆ ಫಲ. ಆರೋಗ್ಯದ ಬಗ್ಗೆ ತುಂಬಾ ಎಚ್ಚರ ಅಗತ್ಯ. ಯಾರೊಡನೆಯೂ ನಿಷ್ಠುರ ಮಾತುಗಳು ಬೇಡ. ಆಲೋಚನೆ ಮೊದಲು- ಮಾತು ಆಮೇಲೆ ಆಡಿದರೆ ಒಳ್ಳೆಯದು. ಮಾರ್ಚ್ ಬಳಿಕ ವಿವಾಹ ಯೋಗ. ಅವಮಾನದಿಂದ ದೂರ ಇರುವುದು ಒಳ್ಳೆಯದು. ಧರ್ಮ ತಪ್ಪುವ ಕೆಲಸ ಮಾಡಬೇಡಿ. ತಜ್ಞರ ಬಳಿ ಸಲಹೆ ಪಡೆಯಲೇಬೇಕು.

    ಕರ್ಕಾಟಕ: ಸಪ್ತಮ ಸ್ಥಾನಕ್ಕೆ ಶನಿ ಪ್ರವೇಶ. ಕಷ್ಟನಷ್ಟಗಳ ಸಾಧ್ಯ. ಕೋರ್ಟ್ ಕಚೇರಿ ಅಲೆದಾಟ ಸಾಧ್ಯತೆ. ಜೂನ್ ಬಳಿಕ ಶುಭಫಲ, ಆದರೆ ಜಾಗರೂಕತೆ ಅಗತ್ಯ. ಋಣಬಾಧೆ ಬರುತ್ತದೆ. ಋಣ ತೀರಿಸಿ ಜೀವನ ನಡೆಸಬೇಕು.

    ಸಿಂಹ: ಪಂಚಮದಲ್ಲಿ ಶನಿ, ಪಂಚಮದಲ್ಲಿ ಗುರು. ಅನಗತ್ಯ ಕಲಹ. ಜನವರಿ 26ರ ಬಳಿಕ ಕಲಹಕ್ಕೆ ತೀರ್ಮಾನ ಸಾಧ್ಯತೆ. ಋಣ ಬಾಧೆ ಹೆಚ್ಚಳವಾಗುತ್ತದೆ. ಸ್ನೇಹಕ್ಕೆ ಒತ್ತು ಕೊಡಬೇಕು. ತಾಳ್ಮೆ ಅಗತ್ಯ. ಟೆನ್ಶನ್ ಮಾಡದೆ ಆಲೋಚಿಸಿ ನಿರ್ಧರಿಸಿ.

    ಕನ್ಯಾ: ಪಂಚಮಸ್ಥಾನದಲ್ಲಿ ಶನಿ ಸ್ವಜನ ಬಂಧು ಕಲಹ ಋಣಾತ್ಮಕ ಚಿಂತನೆ ಬೇಡ. ಜನವರಿ ಬಳಿಕ ಸಂತಾನ ಪ್ರಾಪ್ತಿ, ಧನ ಪ್ರಾಪ್ತಿ ಕಾಯುವುದರಲ್ಲಿ ಸುಖವಿದೆ. ಪಂಚಮಕ್ಕೆ ಗುರು ಬರುವ ಕಾಲ ಶುಭಕಾಲ.

    ತುಲಾ: ತೃತೀಯ ಸ್ಥಾನದಲ್ಲಿ ಗುರುವಿದೆ. ತೃತೀಯ ಗುರುವಿದೆ ಅನಗತ್ಯ ಭಯ. ಶನಿ ಕೂಡ ಇದೆ. ಅರ್ಧಾಷ್ಟಮ ಶನಿ ಉದ್ಯೋಗ ಪರಿವರ್ತನೆ ಸ್ಥಳ ಪರಿವರ್ತನೆ ಆಗುತ್ತದೆ. ದೈವ ದ ಮೇಲೆ ದೇವರ ಮೇಲೆ ಭಾರ ಹಾಕಿ ಮುಂದುವರಿಯಿರಿ.

    ವೃಶ್ಚಿಕ: ಅತ್ಯುತ್ತಮ ಕಾಲ. 20 ತಿಂಗಳ ಬಳಿಕ ಈ ರಾಶಿಗೆ ಮಹಾಯೋಗ ಭಾಗ್ಯೋದಯ ಕಾಲ. ಮಾರ್ಚ್ ಬಳಿಕ ಭಯ ಭಾವ ಆತ್ಮ ಧೈರ್ಯ ಇರಲಿ. ಪ್ರಧಾನಿ, ಮುಖ್ಯಮಂತ್ರಿಗಳ ಭಾಗ್ಯೋದಯ ಉತ್ಪತ್ತಿ ಕಾಲ. ಭಯ ಆವರಿಸಿದರೂ ಆತಂಕಬೇಡ. ದಿಟ್ಟತೆ ರೂಢಿಸಬೇಕು.

    ಧನು: ಜನ್ಮದಲ್ಲಿ ಶನಿ. ಆರೋಗ್ಯದಲ್ಲಿ ಏರುಪೇರು ಆಗಬಹುದು. ಅನಗತ್ಯ ಕಲಹ ಪ್ರಜ್ಞಾಹೀನತೆ ಕಳೆದುಕೊಳ್ಳಬೇಡಿ. ಮಾರ್ಚ್ ಬಳಿಕ ಉತ್ತಮ ಯೋಗ. ವಿರೋಧ ಆರೋಪಗಳಿಗೆ ಯಾವುದೇ ಕಿವಿಕೊಡಬಾರದು. ಕಲಹಕ್ಕೆ ಕಲಹ ಮಾಡಿದರೆ ನಿಮ್ಮ ನಾಯಕತ್ವ ದೂರವಾಗಬಹುದು.

    ಮಕರ: ಇದೂವರೆಗೆ ಅನುಭವಿಸಿದ ಕಷ್ಟಗಳ ಪರಿಹಾರ. ಸಾಲ ಮಾಡುವ ಸಾಧ್ಯತೆ. ಸಮಸ್ಯೆ ಹೆಚ್ಚಾಗದಂತೆ ಎಚ್ಚರ ವಹಿಸಬೇಕು. ಗುರು ವ್ಯಯ ಸ್ಥಾನದಲ್ಲಿ ಇರುತ್ತದೆ. ತಜ್ಞರ ಅಭಿಪ್ರಾಯ ಒಡೆದರೆ ಕ್ಷೇಮ.

    ಕುಂಭ: ಬಹಳ ಒಳ್ಳೆಯ ಸಮಯವಾಗಿತ್ತು. ಈವರೆಗೆ ಇದ್ದ ಕಾಲ ಮುಂದುವರಿಯುತ್ತದೆ. ಗ್ರಹಗಳು ನೀಡುವ ಫಲಗಳನ್ನು ಉಳಿಸಿಕೊಳ್ಳಿ. ಗಳಿಸಿದ ಸಂಪತ್ತಿನಲ್ಲಿ ನಷ್ಟ ಸಾಧ್ಯತೆ. ಶುಭಾಶುಭಗಳ ಮಿಶ್ರ ಫಲ. ಗುರು ದ್ವಾದಶಕ್ಕೆ ಪ್ರವೇಶ ಮಾಡುವುದರಿಂದ ನಷ್ಟವಾಗಬಹುದು. ಎಚ್ಚರಿಕೆಯಿಂದ ಹೆಜ್ಜೆಯಿಡಬೇಕಿದೆ.

    ಮೀನ: ಸೆಂಟಿಮೆಂಟಲ್ ರಾಶಿ. ಭಾವನಾತ್ಮಕ ಕ್ಷಣಗಳು ಎದುರಾಗುತ್ತದೆ. ಅಪಾತ್ರರಿಗೆ ದಾನ ಬೇಡ. ಸಹಾಯ ಬೇಡ. ಏಕಾದಶದ ಶನಿ ಮತ್ತು ಗುರು ಉತ್ತಮ ಫಲಗಳ ಪ್ರಾಪ್ತಿ. ಇದನ್ನು ಉಪಯೋಗ ಮಾಡಬೇಕು. ಸತ್ಪಲ ಪ್ರಾಪ್ತಿಕಾಲ. ಎರಡೂವರೆ ವರ್ಷದ ಕಷ್ಟ ದೂರವಾಗುತ್ತದೆ.

    ಪ್ರಕಾಶ್ ಅಮ್ಮಣ್ಣಾಯ ಅವರ ಪರಿಹಾರ ಸಿಂಪಲ್. ಭಯಬೀಳಿಸುವ ವಿಭೂತಿ ಬಳಿಯುವ ಜ್ಯೋತಿಷಿಗಳ ನಡುವೆ, ಪ್ರಕಾಶ್ ಅಮ್ಮಣ್ಣಾಯ ಸಾಮಾನ್ಯ ಪರಿಹಾರ ಸೂಚಿಸಿದ್ದಾರೆ. ಎಲ್ಲಾ ರಾಶಿಯವರು ವಿಷ್ಣು ಸಹಸ್ರನಾಮ, ಶಿವ ಪಂಚಾಕ್ಷರಿ, ದುರ್ಗೆಯ ಆರಾಧನೆ ಮಾಡಬೇಕು. ಈ ಮೂರನ್ನು ಮಾಡಿದರೆ ಜೀವನ ಸಾರ್ಥಕ. ಕಂಟಲ ಇಲ್ಲದಿದ್ದವರು ಪಠಣ ಮಾಡಿದರೆ ಪುಣ್ಯ ಹೆಚ್ಚಾಗುತ್ತಂತೆ. ವಿಷ್ಣುವಿನಿಂದ ಸಂಕರ್ಷಣಾ ಸಂಪತ್ತು. ಶಕ್ತಿ ಶಿವನಿಂದ ಪ್ರದ್ಯುಮ್ನ ಶಕ್ತಿ. ದುರ್ಗೆಯ ಆರಾಧನೆಯಿಂದ ಗೋ ಶಕ್ತಿ ಸಿಗುತ್ತದಂತೆ.

    ಜ್ಯೋತಿಷ್ಯರಲ್ಲಿ ಹೋಗಿ ತಲೆ ಕೆಡಿಸಿಕೊಳ್ಳಬೇಡಿ. ಹಣ ಕಳೆದುಕೊಳ್ಳಬೇಡಿ. ನಮ್ಮೊಳಗಿನ ಸ್ವಂತ ಸಾಮಥ್ರ್ಯ ಬಳಸಬೇಕು. ಅದನ್ನು ಬಳಸಬೇಕು. ಮೂರು ತರದ ಆರಾಧನೆಯಿಂದ ಎಲ್ಲಾ ತೊಂದರೆಗಳನ್ನು ದೂರ ಮಾಡಿಕೊಳ್ಳಬಹುದು ಎಂದು ಹೇಳಿದ್ದಾರೆ.

  • ನವೆಂಬರ್ 5ರ ನಂತರ ಆರ್ಥಿಕತೆ ಸ್ಥಿರ – ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ಭವಿಷ್ಯ

    ನವೆಂಬರ್ 5ರ ನಂತರ ಆರ್ಥಿಕತೆ ಸ್ಥಿರ – ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ಭವಿಷ್ಯ

    ಉಡುಪಿ: ನವೆಂಬರ್ 5ರ ನಂತರ ಆರ್ಥಿಕತೆ ಸ್ಥಿರವಾಗಲಿದೆ ಎಂದು ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ಅವರು ಭವಿಷ್ಯ ನುಡಿದ್ದಾರೆ.

    ಭಾರತದ ಆರ್ಥಿಕ ಸ್ಥಿತಿ ಕುಸಿತದ ಕುರಿತು ಮಾತನಾಡಿದ ಅವರು, ಬೆಳವಣಿಗೆಯ ಸಂದರ್ಭದಲ್ಲಿ ಆರ್ಥಿಕ ಸ್ಥಿತಿಯಲ್ಲಿ ವ್ಯತ್ಯಾಸ ಬರುತ್ತದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯ ಮೇಲೆ ಜವಾಬ್ದಾರಿ ಹೊರಿಸುವುದು ಸರಿಯಲ್ಲ. ನೈಸರ್ಗಿಕ ಲಗ್ನ ಮೇಷ ಆಗುತ್ತದೆ. ಮೇಷಕ್ಕೆ ಅಷ್ಟಮದಲ್ಲಿ ಗುರು ಇದ್ದಾನೆ. ನವಮ ಸ್ಥಾನದಲ್ಲಿ ಶನಿ ಇದ್ದಾನೆ. ಹೀಗಿರುವಾಗ ಲೆಕ್ಕಾಚಾರಗಳೆಲ್ಲ ಬುಡಮೇಲು ಆಗುತ್ತದೆ ಎಂದು ತಿಳಿಸಿದರು.

    ನವೆಂಬರ್ 5ರ ನಂತರ ದೇಶದ ಆರ್ಥಿಕ ಸ್ಥಿತಿ ಬೆಳವಣಿಗೆಯಾಗುತ್ತದೆ. ನವೆಂಬರ್ 5ಕ್ಕೆ ಗುರು ಧನುರಾಶಿಗೆ ಪ್ರವೇಶ ಮಾಡುತ್ತಾನೆ. ಇದರಿಂದಾಗಿ ಆರ್ಥಿಕ ಸಂಕಷ್ಟಗಳೆಲ್ಲ ಬಗೆಹರಿಯಲು ಆರಂಭವಾಗುತ್ತದೆ. 12 ವರ್ಷಗಳಿಗೊಮ್ಮೆ ಆರ್ಥಿಕ ಸಮಸ್ಯೆ ಬರುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲೂ ಈ ಬಗ್ಗೆ ಉಲ್ಲೇಖಗಳಿವೆ ಎಂದರು.

    ದೇಶದ ಆರ್ಥಿಕತೆ ಬಲಿಷ್ಟವಾಗುವ ಲಕ್ಷಣ ಇದು. ಪ್ರಧಾನಿ ನರೇಂದ್ರ ಮೋದಿಯ ಜಾತಕ ನವೆಂಬರ್ ನಂತರ ಉತ್ತಮವಾಗಿದೆ. ವೃಶ್ಚಿಕ ರಾಶಿಗೆ ತೃತೀಯದಲ್ಲಿ ಶನಿ ಪ್ರವೇಶವಾಗಲಿದೆ. ದ್ವಿತೀಯದಲ್ಲಿ ಗುರುವಿನ ಪ್ರವೇಶ ಆಗಲಿದೆ. ಇದರಿಂದಾಗಿ ಮೋದಿಗೆ ಒಳ್ಳೆಯದಾಗಲಿದೆ ಎಂದು ಉಡುಪಿಯ ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ಭವಿಷ್ಯ ನುಡಿದ್ದಾರೆ.

  • ಚಂದ್ರ ಗ್ರಹಣದ ನಂತ್ರ ರಾಜ್ಯಕ್ಕೆ ದಲಿತ ಸಿಎಂ – ಜ್ಯೋತಿಷಿ ಅಮ್ಮಣ್ಣಾಯ ಭವಿಷ್ಯ

    ಚಂದ್ರ ಗ್ರಹಣದ ನಂತ್ರ ರಾಜ್ಯಕ್ಕೆ ದಲಿತ ಸಿಎಂ – ಜ್ಯೋತಿಷಿ ಅಮ್ಮಣ್ಣಾಯ ಭವಿಷ್ಯ

    ಉಡುಪಿ: ಚಂದ್ರ ಗ್ರಹಣದ ನಂತರ ರಾಜ್ಯಕ್ಕೆ ದಲಿತ ಸಿಎಂ ಆಯ್ಕೆಯಾಗುವ ಸಾಧ್ಯತೆ ಇದೆ. ಮೈತ್ರಿ ಸರ್ಕಾರಕ್ಕೆ ನಿಮ್ಮ ವರ್ಗದವರು ಅಧಿಕಾರ ಚುಕ್ಕಾಣಿ ಹಿಡಿಯಲು ಗ್ರಹಣ ಸಹಕಾರ ಕೊಡುತ್ತದೆ ಎಂದು ಖ್ಯಾತ ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ಹೇಳಿದ್ದಾರೆ.

    ಉಡುಪಿಯಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾನು ರಾಜಕಾರಣಿಗಳ ಪರವಾಗಿ ಮಾತನಾಡಲ್ಲ. ಕರ್ನಾಟಕದ ಜನತೆಯ ಪರವಾಗಿ ಹೇಳುತ್ತೇನೆ. ವಾತಾವರಣಕ್ಕೆ ಹಿತವಾಗಿ ರಾಜಕಾರಣ ಇದ್ದರೆ ಮಾತ್ರ ರಾಜ್ಯದ ಭವಿಷ್ಯ ಚೆನ್ನಾಗಿರುತ್ತದೆ. ರಾಜ್ಯಕ್ಕೂ ಜನಕ್ಕೂ ಅದು ಹಿತ ಎಂದು ಹೇಳಿದರು. ಮೈತ್ರಿ ಸರ್ಕಾರದ ರಚನೆ ಪ್ರಕೃತಿಯ ಸ್ಥಿತಿಗೆ ವಿರೋಧವಿದೆ. ಬೆಳಕಿಗೆ ತಕ್ಕಂತೆ ಜನ ಬದುಕಬೇಕು. ರಾಜ್ಯದ ಜನ ಬಿಜೆಪಿ ಕಡೆ ಒಲವು ತೋರಿರುವಾಗ, ಜೆಡಿಎಸ್- ಬಿಜೆಪಿ ಮೈತ್ರಿಯಾಗಿದ್ದರೆ ಸರ್ಕಾರ ಐದು ವರ್ಷ ಪೂರೈಸುತ್ತಿತ್ತು. ಕೇಂದ್ರದ ಅನುದಾನ ಬಂದು ಅಭಿವೃದ್ಧಿ ಆಗುತಿತ್ತು. ಈಗಿನ ಸ್ಥಿತಿಯಲ್ಲಿ ಸರ್ಕಾರ ಬೀಳುವ ಸಾಧ್ಯತೆಯೇ ಹೆಚ್ಚು ಎಂದರು.

    ಗ್ರಹಗತಿಯಲ್ಲಿ ದುರ್ಯೋಗಕ್ಕೂ- ಸುಯೋಗಕ್ಕೂ ಗ್ರಹಣದ ನಂತರ ಭಂಗವಿದೆ. ಸರ್ಕಾರ ಅಸ್ಥಿರವಾಗಿದೆ. ಕರ್ನಾಟಕ ಜನಕ್ಕೆ ಜವಾಬ್ದಾರಿಯುತ ವ್ಯಕ್ತಿಯ ನೇತೃತ್ವ ಇಲ್ಲ. ಅಸಂಬದ್ಧ ಮಾತು, ಅಸಂಬದ್ಧ ನಡವಳಿಕೆಯನ್ನು ಜನ ಸಹಿಸುತ್ತಿಲ್ಲ ಎಂದರು. ದಲಿತ ಸಿಎಂ ಎಂದಾಗ ಮಲ್ಲಿಕಾರ್ಜುನ ಖರ್ಗೆ ಹೆಸರು ಮೇಲ್ಪಂಕ್ತಿಗೆ ಬರುತ್ತದೆ. ಖರ್ಗೆ ರಾಜಕೀಯ ಮುತ್ಸದ್ಧಿ. ಮಲ್ಲಿಕಾರ್ಜುನ ಖರ್ಗೆಯನ್ನು ಈ ಮೊದಲೇ ಸಿಎಂ ಮಾಡಿದರೆ ಇಂತಹ ಯಾವುದೇ ಗೊಂದಲಗಳು ಬರುತ್ತಿರಲಿಲ್ಲ ಎಂದರು.

    ಅಧಿಕಾರದಲ್ಲಿರುವವರ ಹಣೆಬರಹ ಸರಿ ಇಲ್ಲದಿದ್ದರೆ ಹೀಗೆಲ್ಲ ಆಗುತ್ತದೆ. ಕರ್ನಾಟಕದ ಸುಗಮ ಸ್ಥಿತಿಗೆ ಒಂದು ಕಾಲದಲ್ಲಿ ಶೋಷಿತರು, ನಿಮ್ಮ ವರ್ಗದವರು ಮೇಲ್ಪಂಕ್ತಿಗೆ ಬರಬೇಕು ಎಂದಿದ್ದರು. ಮೈತ್ರಿಯೊಳಗಿರುವ ನಾಯಕರ ಪರಿಸ್ಥಿತಿ ಸರಿಯಿಲ್ಲದಿರುವಾಗ ಖರ್ಗೆ ಸಿಎಂ ಆದರೂ ಬಾಳಲಿಕ್ಕಿಲ್ಲ. ಬಿಜೆಪಿ ಸರ್ಕಾರ ಬಂದರೂ ದಲಿತ ಸಿಎಂ ಆಗುವ ಅವಕಾಶ ಇದೆ ಎಂದು ಪ್ರಕಾಶ್ ಅಮ್ಮಣ್ಣಾಯ ಹೇಳಿದ್ದಾರೆ.

    ದಲಿತ ನಾಯಕನಿಗೆ ಆ ಸ್ಥಾನಮಾನ ಕೊಟ್ಟರೆ ಎಲ್ಲರೂ ಬೆಂಬಲ ಕೊಡುತ್ತಾರೆ. ಚುನಾವಣೆಗೆ ಹೋಗದೆ ಇದ್ದರೂ ಚುನಾವಣೆಗೆ ಹೋದರೂ ದಲಿತ ಸಿಎಂ ಆದರೆ ಪಕ್ಷದ, ರಾಜ್ಯದ ಭವಿಷ್ಯ ಒಳ್ಳೆದಿರುತ್ತದೆ. ಪ್ರಜೆಗಳು ಪ್ರಬುದ್ಧರಾಗಿದ್ದಾರೆ- ಎಲ್ಲವನ್ನೂ ನೋಡುತ್ತಾರೆ. ಬಿಜೆಪಿಯಲ್ಲಿ ಯಡಿಯೂರಪ್ಪ ಮಾಸ್ ಲೀಡರ್. ದೊಡ್ಡ ಸಂಘಟಕ- ಅಭಿವೃದ್ಧಿಯ ಚಿಂತನೆ ಇರುವ ವ್ಯಕ್ತಿ. ಯಡಿಯೂರಪ್ಪ ಜಾತಕದ ಪ್ರಕಾರ ವೃಷಭದಲ್ಲಿ ಶನಿ ಇರುವಾಗ ಅವರ ಜಾತಕ ಸಿಎಂ ಗಾದಿಗೆ ಸೂಕ್ತವಾಗಿಲ್ಲ. ಗ್ರಹಗತಿ ಸರಿ ಇಲ್ಲದಿರುವಾಗ ಅವರು ಸಿಎಂ ರೇಸ್‍ನಿಂದ ಹಿಂದೆ ಉಳಿದುಕೊಳ್ಳುವುದು ಒಳ್ಳೆಯದು ಎಂದು ಅಮ್ಮಣ್ಣಾಯ ಹೇಳಿದರು.

    ಬಿಜೆಪಿಯಲ್ಲಿ ಸಿಎಂ ಆಗುವ ಜಾತಕಫಲ ಇರುವ ಸಾಕಷ್ಟು ಜನ ದಲಿತ ನಾಯಕರು ಇರುವುದರಿಂದ ಈ ಬಗ್ಗೆ ದೃಷ್ಟಿ ನೆಡಬಹುದು. ಆರ್‍ಎಸ್‍ಎಸ್ ಗರಡಿಯಲ್ಲಿ ಪಳಗಿದವರು, ಯಡಿಯೂರಪ್ಪನವರ ಶಿಷ್ಯರು ಸಿಎಂ ಆಗುವ ಎಲ್ಲ ಅವಕಾಶ ಇದೆ. ಗಟ್ಟಿ ನಾಯಕತ್ವ ಇರುವ ಜಾತಕಫಲ ಚೆನ್ನಾಗಿರುವ ದಲಿತ ನಾಯಕ ಸಿಎಂ ಆಗುತ್ತಾರೆ ಎಂದು ಅಮ್ಮಣ್ಣಾಯ ಭವಿಷ್ಯ ನುಡಿದರು.

  • ಮೋದಿ ಪ್ರಮಾಣವಚನ ಮಾಡುವ ಘಳಿಗೆ ಮುಂದಿನ ಐದು ವರ್ಷ ಹೇಗಿದೆ?

    ಮೋದಿ ಪ್ರಮಾಣವಚನ ಮಾಡುವ ಘಳಿಗೆ ಮುಂದಿನ ಐದು ವರ್ಷ ಹೇಗಿದೆ?

    ಉಡುಪಿ: ನರೇಂದ್ರ ಮೋದಿ ಎರಡನೇ ಅವಧಿಗೆ ಪ್ರಧಾನಿಯಾಗಿ ಇಂದು ರಾತ್ರಿ 7 ಗಂಟೆಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಪ್ರಮಾಣ ವಚನದ ಘಳಿಗೆ ಹೇಗಿದೆ? ಮೋದಿಯ ಮುಂದಿನ ಐದು ವರ್ಷಗಳ ಆಡಳಿತ ಹೇಗಿರಲಿದೆ ಎಂಬುದನ್ನು ಉಡುಪಿ ಖ್ಯಾತ ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ಜಾತಕ ನೋಡಿ ಲೆಕ್ಕಾಚಾರ ಹಾಕಿದ್ದಾರೆ.

    ನರೇಂದ್ರ ಮೋದಿ ಅವರು 2014ರಂತೆ ಈ ಬಾರಿಯೂ ಗೋಧೂಳಿ ಲಗ್ನದಲ್ಲಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಸಂಜೆ ಏಳಕ್ಕೆ ವೃಶ್ಚಿಕ ರಾಶಿ ಅನುರಾಧ ನಕ್ಷತ್ರ ಮೂರನೇ ಪಾದದಲ್ಲೇ ಇರುವ ಲಗ್ನ. ಅದೇ ರಾಶಿಯಲ್ಲಿ ಗುರು ಕೂಡ ಇರುತ್ತಾನೆ. ರೇವತಿ ನಕ್ಷತ್ರ ನಾಲ್ಕನೇ ಪಾದದಲ್ಲಿ ಚಂದ್ರ ಇರಲಿದ್ದಾನೆ. ಲಗ್ನಕ್ಕೆ ಸಪ್ತಮದಲ್ಲಿ ರವಿ, ಬುಧ. ಆರನೇ ಮನೆಯಲ್ಲಿ ಶುಕ್ರ. ಎಂಟರಲ್ಲಿ ರಾಹುವಿನ ಜತೆಗೆ ಕುಜ. ದ್ವಿತೀಯ ಸ್ಥಾನದಲ್ಲಿ ಶನಿಯ ಜತೆಗೆ ಕೇತು ಇರಲಿದ್ದಾನೆ.

    ಈ ಮುಹೂರ್ತಕ್ಕೆ ಶುಭ ಅಶುಭ ಫಲಗಳೆರಡೂ ಇವೆ. ಲಗ್ನದಲ್ಲಿ ಗುರುವಿರುವುದರಿಂದ ಅದು ಶಕ್ತಿ. ಅಷ್ಟಮ ಸ್ಥಾನದಲ್ಲಿ ಕುಜ ಇರುವುದರಿಂದ ಇದು ಯುದ್ಧ ಸ್ಥಿತಿ. ಸ್ವತಃ ನರೇಂದ್ರ ಮೋದಿ ಅವರೇ ಬಲ ಪ್ರದರ್ಶನಕ್ಕೆ ಇಳಿಯತ್ತಾರೆ. ದೇಶದ ಒಳಗಿನ ಹಾಗೂ ಹೊರಗಿನ ಶತ್ರು ಪಡೆ ಮೇಲಿಂದ ಮೇಲೆ ಮುಗಿ ಬೀಳುತ್ತವೆ. ಹತಾಶರಾದ ವಿರೋಧಿಗಳಿಂದ ಪಿತೂರಿ ಮಾಡುತ್ತಾರೆ. ಶತ್ರು ದೇಶಗಳಿಂದ ಯುದ್ಧ ಸನ್ನಿವೇಶ ಸೃಷ್ಟಿಯಾಗುತ್ತದೆ ಎಂದು ತಿಳಿಸಿದರು.

    ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ದಾಳಿಗಳಾಗುವ ಸಾಧ್ಯತೆ ಹೆಚ್ಚಿದೆ. ಸ್ವತಃ ಪ್ರಧಾನಿಗಳ ಜಾತಕದಲ್ಲಿ ಆಯುಷ್ಯ ಸ್ಥಾನ ತುಂಬ ಬಲವಾಗಿದೆ. ಆ ಕಾರಣಕ್ಕೆ ಹೆಚ್ಚು ಆತಂಕ ಪಡುವ ಅಗತ್ಯ ಇಲ್ಲ ಎಂದು ಅಮ್ಮಣ್ಣಾಯ ಭವಿಷ್ಯ ನುಡಿದಿದ್ದಾರೆ.

    ಈ ಐದು ವರ್ಷಗಳ ಅವಧಿಯಲ್ಲಿ ನಕಾರಾತ್ಮಕ ಪ್ರಚಾರಗಳನ್ನು ವಿರೋಧಿಗಳು ಕೈಗೊಳ್ಳುತ್ತಾರೆ. ನರೇಂದ್ರ ಮೋದಿಗೆ ಮಹಾ ಸಿಂಹಾಸನಾಧೀಶ್ವರ ಯೋಗದ ಫಲ ಇರುವುದರಿಂದ ಅವರಾಗಿಯೇ ಅಧಿಕಾರ ತ್ಯಜಿಸುವವರೆಗೆ ಯಾರಿಂದಲೂ ಪ್ರಧಾನಿ ಹುದ್ದೆ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದರು.

    ಇಳಿ ಸಂಜೆ ಜರಾಸಂಧನ ವಧೆಯಾದಂತೆ, ದುಷ್ಟ ಸಂಹಾರ ಆಗುತ್ತದೆ. ಇಂದು ಸಂಜೆ 6ಕ್ಕೆ ಪ್ರಮಾಣ ವಚನವಾದರೂ ಲಗ್ನ ವೃಶ್ವಿಕವೇ. ಲಗ್ನದ ಅಧಿಪತಿ ಕುಜನೇ ಅಷ್ಟಮದಲ್ಲಿ ಇರುತ್ತಾನೆ. ಬುಧನು ನಿಪುಣ ಯೋಗದಲ್ಲಿ ಇರುವುದರಿಂದ ಗುರು ವೀಕ್ಷಣೆಯಲ್ಲಿ ಇರುವುದರಿಂದ ಇದು ಶುಭವೂ ಆಗುತ್ತದೆ ಎನ್ನುತ್ತಾರೆ ಪ್ರಕಾಶ್ ಅಮ್ಮಣ್ಣಾಯ.

  • ವಿಶ್ವಾಸ ಮತಯಾಚನೆ ಮೊದಲೇ ಬಿಎಸ್‍ವೈರ ಭವಿಷ್ಯ ನುಡಿದ ಜ್ಯೋತಿರ್ವಿಜ್ಞಾನಿ

    ವಿಶ್ವಾಸ ಮತಯಾಚನೆ ಮೊದಲೇ ಬಿಎಸ್‍ವೈರ ಭವಿಷ್ಯ ನುಡಿದ ಜ್ಯೋತಿರ್ವಿಜ್ಞಾನಿ

    ಉಡುಪಿ: ಇಂದು ಸಂಜೆ ನಡೆಯುವ ವಿಶ್ವಾಸಮತ ಯಾಚನೆಯಲ್ಲಿ ಬಿ.ಎಸ್ ಯಡಿಯೂರಪ್ಪ ವಿಜಯ ಶಾಲಿಯಾಗಲಿದ್ದಾರೆ ಎಂದು ಉಡುಪಿಯ ಪ್ರಖ್ಯಾತ ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ಭವಿಷ್ಯ ನುಡಿದಿದ್ದಾರೆ.

    ಪ್ರಕಾಶ್ ಅಮ್ಮಣ್ಣಾಯ, ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಯಡಿಯೂರಪ್ಪ ನ ಚಂದ್ರನಿಗೆ ಇಂದು ನೀಚಭಂಗ. ಬಿ.ಎಸ್ ಯಡಿಯೂರಪ್ಪನಿಗೆ ರಾಜಯೋಗ ಅಂತ ಹೇಳಿದ್ದಾರೆ. ಯಡಿಯೂರಪ್ಪ ನ ಏಕಾದಶ ಸ್ಥಾನದಲ್ಲಿ ಗುರುಬಲ ಇದೆ. ಇಂದಿನ ದಿನವೂ ಚೆನ್ನಾಗಿದೆ ಅಂತ ಹೇಳಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಅತಂತ್ರ ಸರ್ಕಾರ ನಿರ್ಮಾಣ- ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ಭವಿಷ್ಯ

    ಸಂಜೆ 4.30 ರ ಒಳಗೆ ವಿಶ್ವಾಸಮತ ಯಾಚನೆ ಮಾಡಬೇಕು. ಸಂಜೆ 5 ಗಂಟೆ ನಂತರ ಗಳಿಗೆಗಳು ಸರಿಯಿಲ್ಲ. ಬಿ.ಎಸ್ ವೈಭವ ರದ್ದು ಹೋರಾಟವೇ ಜೀವನ. ಇವತ್ತು ಕೂಡಾ, ಹೋರಾಟ ನಡೆಸಿಯೇ ಗೆಲ್ಲುತ್ತಾರೆ ಎಂದು ಅಮ್ಮಣ್ಣಾಯ ಭವಿಷ್ಯ ನುಡಿದಿದ್ದಾರೆ.

  • ಚಂದ್ರಗ್ರಹಣದ ವೇಳೆ ಏನು ಮಾಡಬಾರದು? ಅನಿಷ್ಟ ಫಲ ಏನು? – ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ಹೇಳ್ತಾರೆ ಓದಿ

    ಚಂದ್ರಗ್ರಹಣದ ವೇಳೆ ಏನು ಮಾಡಬಾರದು? ಅನಿಷ್ಟ ಫಲ ಏನು? – ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ಹೇಳ್ತಾರೆ ಓದಿ

    ಉಡುಪಿ: ಇಂದು ಶತಮಾನದ ಚಂದ್ರಗ್ರಹಣ ಸಂಜೆ ನಡೆಯಲಿದೆ. ದೇವಸ್ಥಾನಗಳಲ್ಲಿ ಪೂಜಾ ಸಮಯ ಬದಲಾಗಿದೆ. ಖಗೋಳ ಶಾಸ್ತ್ರಜ್ಞರು ಆಗಸದಲ್ಲಾಗುವ ಕೌತುಕದ ಬಗ್ಗೆ ನಿಗಾ ಇಟ್ಟಿದ್ದಾರೆ. ಈ ನಡುವೆ ಉಡುಪಿ ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ಚಂದ್ರಗ್ರಹಣದ ಬಗ್ಗೆ ಮಾಹಿತಿ ನೀಡಿದ್ದಾರೆ.

    ಚಂದ್ರಗ್ರಹಣ ಬಗ್ಗೆ ಬುಧವಾರ, ಹುಣ್ಣಿಮೆಯ ದಿನ ಸಂಜೆ 5.22ಗೆ ಚಂದ್ರನಿಗೆ ಪೂರ್ಣ ರಾಹು ಗ್ರಹಣವು ಆಶ್ಲೇಷಾ ನಕ್ಷತ್ರದಲ್ಲಿ ಸಂಭವಿಸಲಿದೆ. ಗ್ರಹಣ ಸ್ಪರ್ಶ- 5.22 ಆದರೆ ಮಧ್ಯ ಕಾಲ 7.04, ಉನ್ಮೀಲನ 7.42, ಗ್ರಹಣ ಮೋಕ್ಷ ಕಾಲ- 8.46ಕ್ಕೆ ಆಗಲಿದೆ. ಈ ಗ್ರಹಣದಿಂದ ಕರ್ಕ, ಸಿಂಹ, ಮೇಷ, ಧನುಸ್ಸು ರಾಶಿಗಳಿಗೆ ಪುಷ್ಯ, ಆಶ್ಲೇಷ, ಮಘ, ಜ್ಯೇಷ್ಠ, ರೇವತಿ, ನಕ್ಷತ್ರದವರಿಗೂ ಅನಿಷ್ಟವಿದೆ. ಇದನ್ನೂ ಓದಿ: ಬುಧವಾರ ಚಂದ್ರಗ್ರಹಣದ ಜೊತೆ ಸೂಪರ್ ಮೂನ್, ಬ್ಲಡ್‍ಮೂನ್ ಗೋಚರ- ನಿಮ್ಮ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

    ಯಾವ ರಾಶಿಯಲ್ಲಿ ಗ್ರಹಣ ಹಿಡಿಯುತ್ತೋ ಆ ರಾಶಿಗೆ,ಅದರ ಮುಂದಿನ ರಾಶಿ ಮತ್ತು ಅದರ ತ್ರಿಕೋನ(ಸಿಂಹ, ಧನು, ಮೇಷ) ರಾಶಿಗಳಿಗೆ ಪ್ರಭಾವವಿದೆ. ಯಾವ ನಕ್ಷತ್ರದಲ್ಲಿ ಗ್ರಹಣ ಹಿಡಿಯುತ್ತದೆಯೋ ಅದರ ಅಧಿಪತಿಯ ಎಲ್ಲಾ ನಕ್ಷತ್ರಗಳಿಗೆ (ಆಶ್ಲೇಷಾ, ಜ್ಯೇಷ್ಠ, ರೇವತಿ, ಬುಧ ಅಧಿಪತಿ) ಪ್ರಭಾವ ಇರುತ್ತದೆ. ಇದು ಗ್ರಹಣ ಸಿದ್ಧಾಂತ.

    ಅನಿಷ್ಟ ಫಲ ಏನು?
    ಚಂದ್ರನು ಮನೋ ಕಾರಕ ಗ್ರಹ. ಈ ಗ್ರಹಣದಿಂದಾಗಿ ಇವನ ಬೆಳಕನ್ನು ಕೆಲ ಸಮಯದವರೆಗೆ ತಡೆ ಹಿಡಿದಂತಾಗುತ್ತದೆ .ಆಗ ಚಂದ್ರನ ಪ್ರಭಾವ ಅಷ್ಟು ಹೊತ್ತು ಇಲ್ಲದಂತಾಗಿ ಮನೋ ಖಿನ್ನತೆಗಳಾಗಬಹುದು. ಎಲ್ಲರಿಗೂ ಆಗುತ್ತದೆ ಎಂದಲ್ಲ ಅನೇಕರಿಗೆ ಖಿನ್ನತೆಗಳಿದ್ದರೆ ಅದು ಉಲ್ಭಣಿಸಬಹುದು. ಆ ಖಿನ್ನತೆ ರೋಗಗಳಿಗೂ ಕಾರಣವಾಗಬಹುದು. ಇದನ್ನೂ ಓದಿ: 150 ವರ್ಷಗಳ ಬಳಿಕ ರಕ್ತಚಂದಿರ ಗ್ರಹಣ- ತಿರುಪತಿ, ಧರ್ಮಸ್ಥಳ, ಕುಕ್ಕೆಯಲ್ಲಿ ದರ್ಶನವಿಲ್ಲ

    ಮನೋ ಬಲ ಇರುವವರಿಗೂ ಬಲದ ಕುಸಿತವಾದರೂ ಅದು ಕೂಡಾ ದೋಷ ಪ್ರದವೇ ಆಗುತ್ತದೆ. ಅಲ್ಲದೆ ಗ್ರಹಣ ಸಂಭವಿಸಿದಾಗ ಇದು ಭೂಮಿಯ ವಾತಾವರಣದ ಮೇಲೆ ಪರಿಣಾಮ ಬೀರುತ್ತದೆ. ಭೂಮಿಯ ಮೇಲೆ ಪರಿಣಾಮ ಬಿದ್ದಾಗ ಅನುಭವಿಸುವವರು ನಾವಲ್ಲವೇ? ಅದರಲ್ಲೂ ವಿಶೇಷ ಪರಿಣಾಮ ಯಾರಿಗಂದರೆ, ಮೇಲೆ ತಿಳಿಸಿದ ರಾಶಿ, ನಕ್ಷತ್ರ ಜನಿತರಿಗೆ ಇರುತ್ತದೆ. ವಿಜ್ಞಾನಿಗಳಿಗೆ ಇದು ಕುತೂಹಲ ತರುವ ಖಗೋಳ ವೈಚಿತ್ರ್ಯ ಆದರೂ ಸಾಮಾನ್ಯರಿಗೆ ಇದು ಅನಿಷ್ಟವೇ ಆಗುತ್ತದೆ. ಇದನ್ನೂ ಓದಿ: ಕರ್ನಾಟಕ ಚುನಾವಣೆಯಲ್ಲಿ ಯಾರಿಗೂ ಬಹುಮತ ಸಿಗಲ್ಲ, ಸಮ್ಮಿಶ್ರ ಸರ್ಕಾರ ವರ್ಷದೊಳಗೆ ಬಿದ್ದೋಗುತ್ತೆ: ಉಡುಪಿ ಜ್ಯೋತಿಷಿ

    ಈ ಅನಿಷ್ಟವನ್ನು ಹೇಗೆ ದೂರಮಾಡಬಹುದು?
    `ಲಂಘನಂ ಪರಮೌಷಧಂ ಎಂಬಂತೆ ಆ ದಿನ ಮಧ್ಯಾಹ್ನ ಭೋಜನದ ನಂತರ ಉಪವಾಸ ಇರಬೇಕು. ಇದಕ್ಕಿಂತ ದೊಡ್ಡ ಪರಿಹಾರವಿಲ್ಲ. ಹೊಟ್ಟೆ ತುಂಬಿದ್ದರಲ್ಲವೇ ಅಧಿಕ ಪ್ರಸಂಗಕ್ಕಿಳಿಯುವುದು. ಹೊಟ್ಟೆ ಚುರು ಚುರು ಅಂದಾಗ ಮನುಷ್ಯ ಅಧಿಕ ಪ್ರಸಂಗ ಮಾಡಲು ಹೋಗುವುದಿಲ್ಲ.

    ಉಪವಾಸ ಪರಿಹಾರವೇ ಶ್ರೇಷ್ಠ
    ಗ್ರಹಣ ಕಾಲದಲ್ಲಿ ಉಪವಾಸ ಶ್ರೇಷ್ಠ. ಮಿತ ಆಹಾರ ಸೇವಿಸಿದರೆ ಉತ್ತಮ. ಇನ್ನೊಂದೆಡೆ ಜಪ, ತಪ, ಧ್ಯಾನಗಳ ಮೂಲಕ ಮನೋ ನಿಯಂತ್ರಣ ಸಾಧ್ಯವಿದೆ. ಅದನ್ನೂ ಗ್ರಹಣ ಕಾಲದಲ್ಲಿ ಮಾಡಬಹುದು. ವಿದ್ಯಾರ್ಥಿಗಳು, ಸಂಶೋಧಕರು, ಅಧ್ಯಯನಕಾರರು ಈ ಗ್ರಹಣ ಪರ್ವಕಾಲದಲ್ಲಿ ತಮ್ಮ ತಮ್ಮ ಕ್ರಿಯೆಗಳನ್ನು ಮಾಡಿದರೆ ಅತಿಶಯ ಫಲವಿದೆ.

    ಪ್ರಾಣಾಯಾಮ ಕ್ರಿಯೆಯೂ ಅತ್ಯುತ್ತಮ. ಲೋಕ ಕಲ್ಯಾಣಕ್ಕಾಗಿ ಗ್ರಹಣ ಶಾಂತಿಯನ್ನೂ ಮಾಡಬಹುದು. ಸ್ತ್ರೀ ಪುರುಷರು ಅಂದರೆ ಪತಿ ಪತ್ನಿಯರು ಯಾವುದೇ ವಿನೋದ ಕ್ರಿಯೆಗಳನ್ನು ಮಾಡಲೇಬಾರದು. ಇದು ಉತ್ಪಾತ ಶಿಶುವಿನ ಜನನಕ್ಕೆ ಕಾರಣವಾಗುತ್ತದೆ. ಅಂದರೆ ಸೈಕಿಕ್ ಮಕ್ಕಳಾಗಬಹುದು ಎಂದರ್ಥ. ಅಲ್ಲದೆ ಗ್ರಹಣವೂ ಇಲ್ಲ, ಗ್ರಿಹಣವೂ ಇಲ್ಲ ಎಂದು ಗ್ರಹಣ ಕಾಲದಲ್ಲಿ ನಿಷೇಧಿಸಲ್ಪಟ್ಟದ್ದನ್ನು ಮಾಡಿದರೆ ಮುಂದೆ ಶಾಶ್ವತವಾಗಿ ಎಲ್ಲವನ್ನೂ ನಿಷೇಧ ಮಾಡಲೇಬೇಕಾದೀತು. ಕೆಲ ರೋಗಗಳಿಗೆ ಪಥ್ಯ ಮಾಡಬೇಕು ಎಂದು ವೈದ್ಯರು ಹೇಳಿದಂತೆ. ಹಾಗಾಗಿ ಗ್ರಹಣಗಳು ಅಸಮಾನ್ಯ ಖಗೋಳ ವೈಚಿತ್ರ್ಯ. ಇದು ಇಡೀ ಜಗತ್ತಿನ ಮೇಲೆ ಪರಿಣಾಮವನ್ನು ಬೀರುತ್ತದೆ. ಇದನ್ನೂ ಓದಿ:  ಗುಜರಾತ್ ಭವಿಷ್ಯ 20 ಗಂಟೆ ಮೊದಲೇ ಬರೆದಿದ್ದ ಉಡುಪಿ ಜ್ಯೋತಿಷಿ

    ಗ್ರಹಣದ ಫಲ
    ಧನಾಗ್ರಹ, ಧರ್ಮದ ಆಧಾರದಲ್ಲಿ ಭಯೋತ್ಪಾದನೆ ಮಾಡುವ ಆಗ್ರಹಿಗಳಿಗೆ, ಜಿಹಾದಿ ಎಂದು ಹಾರಾಡುವ ಆಗ್ರಹಿಗಳಿಗೆ ಇದು ನಿಶ್ಚಿತವಾಗಿ ತೊಂದರೆ ನೀಡುವ ಗ್ರಹಣವಾಗಿದೆ. ಈ ಗ್ರಹಣ ಒಂದೇ ಸಾಲದು ಎಂದು ಇನ್ನೊಂದು ಇಂತಹದ್ದೇ ಗ್ರಹಣ ಈ ವರ್ಷದ ಜುಲೈ 28 ರಂದು ಸಂಭವಿಸಲಿದೆ. ಒಂದೇ ವರ್ಷ ಒಂದಕ್ಕಿಂತ ಹೆಚ್ಚು ಗ್ರಹಣ ಸಂಭವಿಸಿದರೆ ಜಗತ್ತಿನಲ್ಲಿ ನಮ್ಮದೇ ಧರ್ಮ ಶ್ರೇಷ್ಠ ಎನ್ನುವ ಮತಾಂಧರಿಗೆ ಮಾರಣ ಹೋಮವನ್ನೇ ಮಾಡಿಸುತ್ತದೆ. ಅವರ ಮೇಲೆ ಈ ಗ್ರಹಣದ ಪ್ರಭಾವವೂ ಬೀರಿದರೆ ಆತ್ಮಾಹುತಿ ದಳ (ಸುಸೈಡ್ ಬಾಂಬರ್) ಗಳಾಗಿ ಹೆಚ್ಚೆಚ್ಚು ಸಂಖ್ಯೆಯಲ್ಲಿ ಸಾಯಬಹುದು.

    ದೇವಸ್ಥಾನಗಳ ಸಂಪರ್ಕ ಇರುವವರು ಯಾರು ವೇದೋಕ್ತ ಜೀವನ ನಡೆಸುವುದಿಲ್ಲವೋ ಅವರಿಗೆ ಅಪಾಯವಿದೆ. ಗೋ ಭಕ್ಷಕರಿಗೆ, ಕಾಲ ವಿವೇಚನೆ ಇಲ್ಲದ ಕುಡುಕರಿಗೆ, ಅಕಾಲ ಭೋಜನ ಮಾಡುವವರಿಗೆ, ಕಂಡ ಕಂಡಲ್ಲಿ ತಿನ್ನುವ ಚಾಳಿ ಇರುವವರಿಗೆ ಅಪಾಯಕ್ಕೆ ಆಹ್ವಾನ ನೀಡಿದಂತಾಗುತ್ತದೆ.

    ಸಾಮೂಹಿಕ ನಮಾಜ್ ಮಾಡಿದ್ರೆ ಉತ್ತಮ: ಇಂದಿನ ಚಂದ್ರಗ್ರಹಣ ಮುಸ್ಲೀಮರ ಮೇಲೂ ಪ್ರಭಾವ ಬೀರುತ್ತದೆ. ಮುಸಲ್ಮಾನರು ಚಂದ್ರನ ಚಲನೆಯನ್ನು ನಂಬುವವರು. ಚಂದ್ರನನ್ನೇ ಅವಲಂಭಿಸುವವರು. ಮುಸಲ್ಮಾನರು ಎಲ್ಲರಿಗಿಂತ ಹೆಚ್ಚು ಧರ್ಮಪ್ರಿಯರು. ಹೀಗಾಗಿ ಮುಸಲ್ಮಾನರೂ ಗ್ರಹಣ ಸಂದರ್ಭ ಕುರಾನ್ ಪಠಿಸಿ ನಮಾಜ್ ಮಾಡಿದರೆ ಒಳ್ಳೆದಾಗುತ್ತದೆ. ಬೆಳಕನ್ನು ಎಲ್ಲರೂ ಗ್ರಹಣ ಮಾಡುತ್ತೇವೆ. ಚಂದ್ರ- ಸೂರ್ಯನಿಗೆ ಜಾತಿ ಧರ್ಮ ಇಲ್ಲ. ಹೀಗಾಗಿ ಚಂದ್ರನನ್ನು ಅತಿಯಾಗಿ ಇಷ್ಟಪಡುವ ವ್ಯಕ್ತಿತ್ವ ಮುಸಲ್ಮಾನರಿಗೆ ಇರುತ್ತದೆ. ಹೀಗಾಗಿ ನಮಾಜ್ ಮಾಡಬೇಕು, ಉಪವಾಸ ಮಾಡಿದ್ರೆ ಉತ್ತಮ. ಚಂದ್ರ ಮನೋಕಾರಕ ಆಗಿದ್ದಾನೆ. ಹಾಗಾಗಿ ಮನಸ್ಸಿನ ಮೇಲೆ ಹೆಚ್ಚಿನ ಪರಿಣಾಮಗಳು ಜಾಸ್ತಿ. ಹೀಗಾಗಿ ಮುಸಲ್ಮಾನರು ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.

    1836ರ ಕೆಂಬ್ರಿಡ್ಜ್ ವಿಶ್ವವಿದ್ಯಾಲಯದ ಪುಸ್ತಕ ಓದಿದ್ದೇನೆ. ಅದು ಗ್ರಹಣದ ಬಗ್ಗೆ ಹೆಚ್ಚು ಗಮನ ಚೆಲ್ಲುತ್ತದೆ. ಭಾರತದಿಂದಲೇ ಕಳ್ಳತನವಾದ ಗ್ರಂಥ ಅದು. 155 ವರ್ಷಗಳ ನಂತರ 3 ಗಂಟೆಗಳ ಕಾಲ ಈ ಗ್ರಹಣ ನಡೆಯುತ್ತದೆ. ಮೂರು ಗಂಟೆ ಚಂದ್ರನ ಕಿರಣ ಭೂಮಿಗೆ ಬೀಳುವುದಿಲ್ಲ. ಒಂದು ಕ್ಷಣ ಬೆಳಕು ಇಲ್ಲವಾದ್ರೂ ಬಹಳ ಸಮಸ್ಯೆ ಆಗುತ್ತದೆ. ಹೀಗಾಗಿ ಇಂದು ನಡೆಯುವ ಮೂರು ಗಂಟೆಗಳ ಗ್ರಹಣಕ್ಕೆ ಹೆಚ್ಚಿನ ಮಹತ್ವವಿದೆ.

    ಉಪವಾಸ ಮಾಡಿದಷ್ಟು ಉತ್ತಮ. ಗ್ರಹಣ ಕಾಲದಲ್ಲಿ ಭಾವನೆಗಳು ಉದ್ದೀಪನಗೊಳ್ಳುತ್ತದೆ. ಹೊಟ್ಟೆ ತುಂಬಿದರೆ ಹಲವು ವಿಚಾರಗಳು ಮನಸ್ಸಿಗೆ ಬರುತ್ತದೆ. ಆದ್ರೆ ಉಪವಾಸ ಮಾಡಿದ್ರೆ ಸಾತ್ವಿಕ ವಿಚಾರಗಳ ಚಿಂತನೆ ಬರುತ್ತದೆ. ದೇವರ ಧ್ಯಾನ- ತಪಸ್ಸು, ಭಜನೆ ಮಾಡಬೇಕು. ಹಿಂಸೆ-ಕ್ರೌರ್ಯ ಇರುವ ದೃಶ್ಯಗಳನ್ನು ನೋಡದೇ ಇರುವುದು ಒಳ್ಳೆಯದು.

    ಗ್ರಹಣಕ್ಕೆ ಯಾರೂ ಹೆದರಬೇಕಾಗಿಲ್ಲ. ಗ್ರಹಣದ ಮುನ್ಸೂಚನೆಗಳನ್ನು ಪಾಲಿಸಿದರೆ ಯಾರಿಗೂ ಸಮಸ್ಯೆಯಿಲ್ಲ. ಚಂದ್ರನನ್ನು ನೋಡುವುದೂ ತಪ್ಪಲ್ಲ. ವಿಜ್ಞಾನಿಗಳಿಗೆ ಕುತೂಹಲ ಇರುವಾಗ ಜನರೂ ಈ ಬಗ್ಗೆ ಕುತೂಹಲ ಇಟ್ಟುಕೊಳ್ಳುವುದರಲ್ಲ ತಪ್ಪಿಲ್ಲ. ಆದ್ರೆ ಚಂದ್ರಗ್ರಹಣದ ಬಗ್ಗೆ ಯಾರಲ್ಲೂ ಭಯಬೇಡ ಎಂದು ಪ್ರಕಾಶ್ ಅಮ್ಮಣ್ಣಾಯ ಹೇಳಿದ್ದಾರೆ.