Tag: ಪೌರಕಾರ್ಮಿಕರು

  • ವೇತನ ಹೆಚ್ಚಳಕ್ಕೆ ಆಗ್ರಹಿಸಿದ್ದ ಪೌರಕಾರ್ಮಿಕರಿಗೆ ಬಿಬಿಎಂಪಿಯಿಂದ ಗೇಟ್‍ಪಾಸ್ ಶಿಕ್ಷೆ!

    ವೇತನ ಹೆಚ್ಚಳಕ್ಕೆ ಆಗ್ರಹಿಸಿದ್ದ ಪೌರಕಾರ್ಮಿಕರಿಗೆ ಬಿಬಿಎಂಪಿಯಿಂದ ಗೇಟ್‍ಪಾಸ್ ಶಿಕ್ಷೆ!

    ಬೆಂಗಳೂರು: ವೇತನ ಹೆಚ್ಚಳಕ್ಕಾಗಿ ಆಗ್ರಹಿಸಿದ್ದಕ್ಕೆ ಬಿಬಿಎಂಪಿ ತನ್ನ ಪೌರಕಾರ್ಮಿಕರಿಗೆ ಗೇಟ್ ಪಾಸ್ ನೀಡಿದೆ.

    ವೇತಕ ಹೆಚ್ಚಳಕ್ಕಾಗಿ ಆಗ್ರಹಿಸಿದ್ದ ಪೌರಕಾರ್ಮಿಕರಿಗೆ ಬಿಬಿಎಂಪಿ ಗೇಟ್‍ಪಾಸ್ ಶಿಕ್ಷೆ ನೀಡಿದೆ. ತನ್ನ ಎಂಟೂ ವಲಯಗಳಲ್ಲೂ ಪೌರ ಕಾರ್ಮಿಕರಿಗೆ ಗೇಟ್‍ಪಾಸ್ ಶಿಕ್ಷೆ ನೀಡಿದ್ದು, ಈಗಾಗಲೇ 1,700 ಮಂದಿಗೆ ಕೆಲಸಕ್ಕೆ ಬರಬೇಡಿ ಎಂದು ಸೂಚಿಸಿದೆ.

    ಕಂಟ್ರಾಕ್ಟರ್ ಪದ್ದತಿ ಇದ್ದಾಗ ಪಿಎಫ್, ಇಎಸ್‍ಐ ಕಟ್ಟದೆ ಇರುವವರನ್ನ ಟಾರ್ಗೆಟ್ ಮಾಡಿರುವ ಪಾಲಿಕೆಯು ಪಿಎಫ್, ಇಎಸ್‍ಐ ಕಟ್ಟದೇ ಇರುವ ಪೌರಕಾರ್ಮಿಕರನ್ನ `ಒಂದು ವರ್ಷದೊಳಗಿನ ಪೌರ ಕಾರ್ಮಿಕರು’ ಅಂತ ಗುರುತಿಸಿ ಗೇಟ್‍ಪಾಸ್ ನೀಡುತ್ತಿದ್ದಾರೆ. ಕಂಟ್ರಾಕ್ಟರ್ ಹಾಗೂ ಅಧಿಕಾರಿಗಳ ನಡುವಿನ ಕಮಿಷನ್ ಒಪ್ಪಂದಕ್ಕೆ ಪೌರ ಕಾರ್ಮಿಕರು ಬಲಿಯಾಗಿದ್ದು, ಬಿಬಿಎಂಪಿ ನಿರ್ಧಾರಕ್ಕೆ ಪೌರಕಾರ್ಮಿಕರು ಕಂಗಾಲಾಗಿದ್ದಾರೆ.

    ಸಂಬಳ ಆಗಿಲ್ಲ ಅಂತ ಪೌರಕಾರ್ಮಿಕ ಮಹಿಳೆಯರು ತಮ್ಮ ಚಿನ್ನದ ಕಿವಿಯೋಲೆ, ಆಭರಣಗಳನ್ನ ಅಡವಿಟ್ಟು ಜೀವನ ನಡೆಸುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಒಮ್ಮೆಲೆ ಕೆಲಸಕ್ಕೆ ಬರಬೇಡಿ ಎಂಬ ತೀರ್ಮಾನದಿಂದ ಪೌರಕಾರ್ಮಿಕರು ಬೇಸತ್ತು ಹೋಗಿದ್ದಾರೆ. ಅಲ್ಲದೇ ವೇತನ ಸಿಕ್ಕಿಲ್ಲ ಅಂತ ಸಾಲ ಮಾಡಿದ್ದೇವೆ ಈಗ ಬದುಕು ನಡೆಸೋದು ಹೇಗೆ ಅಂತ ಕಣ್ಣೀರು ಸುರಿಸುತ್ತಿದ್ದು, ಬಿಬಿಎಂಪಿ ಏಕಾಏಕಿ ನಿರ್ಧಾರದಿಂದ ಮಕ್ಕಳ ಶಾಲಾ ಶಿಕ್ಷಣದ ಶುಲ್ಕ ಕಟ್ಟಲು ದುಡ್ಡಿಲ್ಲ ಹಾಗೂ ಮನೆ ಬಾಡಿಗೆ ಕಟ್ಟುವುದಕ್ಕೆ ಸಹ ದುಡ್ಡಿಲ್ಲ ಎಂದು ಪೌರಕಾರ್ಮಿಕರು ಗೋಳಾಡುತ್ತಿದ್ದಾರೆ.

  • ಪೌರಕಾರ್ಮಿಕರಿಗೆ ಇಸ್ಕಾನ್ ನೀಡಿದ ಅನ್ನ ತಿನ್ನಲು ಯೋಗ್ಯವಲ್ಲ- ಪಬ್ಲಿಕ್ ಹೆಲ್ತ್ ಇನ್ಸ್ ಟಿಟ್ಯೂಟ್ ವರದಿ

    ಪೌರಕಾರ್ಮಿಕರಿಗೆ ಇಸ್ಕಾನ್ ನೀಡಿದ ಅನ್ನ ತಿನ್ನಲು ಯೋಗ್ಯವಲ್ಲ- ಪಬ್ಲಿಕ್ ಹೆಲ್ತ್ ಇನ್ಸ್ ಟಿಟ್ಯೂಟ್ ವರದಿ

    ಬೆಂಗಳೂರು: ಇಸ್ಕಾನ್ ಸಂಸ್ಥೆಯವರು ಪೌರ ಕಾರ್ಮಿಕರಿಗೆ ಹಳಸಿದ ಅನ್ನ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಬ್ಲಿಕ್ ಹೆಲ್ತ್ ಇನ್ಸ್ ಟಿಟ್ಯೂಟ್‍ನಿಂದ ವರದಿ ಬಂದಿದ್ದು, ಈ ಅನ್ನ ತಿನ್ನಲು ಯೋಗ್ಯವಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

    ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡ್ ನಲ್ಲಿ ಮಾರ್ಚ್ 27ರಂದು ಪೌರಕಾರ್ಮಿಕರಿಗೆ ವಿತರಿಸಿದ ಅನ್ನ ತಿನ್ನಲು ಯೋಗ್ಯವಲ್ಲ ಎಂದು ಮೈಕ್ರೊ ಬಯಾಲಜಿಸ್ಟ್ ಹೇಳಿದ್ದಾರೆ. ಮಾರ್ಚ್ 27 ರಂದು ಇಸ್ಕಾನ್ ನಿಂದ ಪೌರಕಾರ್ಮಿಕರಿಗೆ ಹಳಸಿದ ಅನ್ನ ನೀಡಲಾಗಿತ್ತು. ಹಳಸಿದ ಅನ್ನವನ್ನು ಮಾಜಿ ಕಾರ್ಪೋ ರೇಟರ್ ಧನರಾಜ್ ಬಿಬಿಎಂಪಿಗೆ ತೆಗೆದುಕೊಂಡು ಬಂದಿದ್ರು.

    ಧರ್ಮರಾಯ ಗುಡಿ ವಾರ್ಡ್ ನ ಕಾರ್ಪೋ ರೇಟರ್ ಪ್ರತಿಭಾ ಪತಿಯಾದ ಧನರಾಜ್, ಈ ಹಿಂದೆಯೂ ಸಹ ಹಳಸಿದ ಅನ್ನ ಕೊಟ್ಟಿದ್ದಾಗಿ ಆರೋಪ ಮಾಡಿದ್ರು. ವಾಸನೆ ಬರ್ತಿರೋ ಅನ್ನವನ್ನು ಬಿಬಿಎಂಪಿ ಸಭೆಯಲ್ಲಿ ತೋರಿಸಿ ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಗಲಾಟೆ ಮಾಡಿದ್ರು. ಆ ಸಂಧರ್ಭದಲ್ಲಿ ಮೇಯರ್ ಪದ್ಮಾವತಿ ಇಸ್ಕಾನ್ ಅನ್ನವನ್ನು ಲ್ಯಾಬ್‍ನಲ್ಲಿ ಟೆಸ್ಟ್ ಮಾಡಿಸೋಕೆ ಹೇಳಿದ್ರು.

    ಇದೀಗ ಈ ಊಟ ತಿನ್ನಲು ಯೋಗ್ಯವಲ್ಲ ಅನ್ನೋದಾಗಿ ರಿಪೋರ್ಟ್  ಬಂದಿದೆ.