Tag: ಪೊಲೀಸ್ ಠಾಣಾ

  • ಪತಿಯ ಮನೆಯ ಬಾಗಿಲಲ್ಲಿಯೇ ವಧುವಿನಿಂದ ವರನಿಗೆ ಕಪಾಳ ಮೋಕ್ಷ

    ಪತಿಯ ಮನೆಯ ಬಾಗಿಲಲ್ಲಿಯೇ ವಧುವಿನಿಂದ ವರನಿಗೆ ಕಪಾಳ ಮೋಕ್ಷ

    ಲಕ್ನೋ: ಹೊಸದಾಗಿ ಮದುವೆಯಾದ ವಧು ವರನಿಗೆ ಕಪಾಳ ಮೋಕ್ಷ ಮಾಡಿ ತವರು ಮನೆಗೆ ಹಿಂದಿರುಗಿದ ಘಟನೆ ಉತ್ತರ ಪ್ರದೇಶದ ಜೌನ್‍ಪುರ ಜೆಲ್ಲೆಯ ಖುತಾಹನ್ ಬ್ಲಾಕ್‍ನ ಲವಾಯೆನ್ ಗ್ರಾಮದಲ್ಲಿ ನಡೆದಿದೆ.

    ಮದುವೆ ಮಂಟಪದಿಂದ ಕಾರಿನಲ್ಲಿ ನವಜೋಡಿ ವರನ ಮನೆಗೆ ಬಂದಿದ್ದಾರೆ. ಕಾರಿನಲ್ಲಿ ಬರುತ್ತಿರುವ ವಧುವನ್ನು ಸ್ವಾಗತಿಸಲು ವರನ ಕುಟುಂಬದವರು ತಯಾರಿ ನಡೆಸುತ್ತಿದ್ದರು. ಈ ವೇಳೆ ಕಾರಿನಲ್ಲಿ ವರನೊಟ್ಟಿಗೆ ಬಂದ ವಧು ಕಾರಿನಿಂದ ಇಳಿದ ತಕ್ಷಣ ವರನ ಕಪಾಳಕ್ಕೆ ಹೊಡೆದಿದ್ದಾಳೆ. ನಂತರ ಮನೆಯೊಳಗೆ ಮದುವೆಯಲ್ಲಿ ಧರಿಸಿದ್ದ ಲೆಹೆಂಗಾವನ್ನು ಬದಲಾಯಿಸಿ, ಕ್ಯಾಶುಯಲ್ ವೇರ್ ಧರಿಸಿ ತವರ ಮನೆಗೆ ಮರಳಿದ್ದಾಳೆ.

    ಮದುವೆ ಸಮಾರಂಭದ ನಂತರ ವರನ ಕುಟುಂಬವನ್ನು ವಧುವನ್ನು ಮನೆಗೆ ಬರಮಾಡಿಕೊಳ್ಳಲು ತಯಾರಿ ನಡೆಸುತ್ತಿದ್ದ ವೇಳೆ ಈ ಘಟನೆ ಜರುಗಿದ್ದು, ವಧು ತವರು ಮನೆಗೆ ಮರಳುತ್ತಿದ್ದಂತೆ ಈ ಸುದ್ದಿ ಊರಿಗೆಲ್ಲಾ ಹಬ್ಬಿದೆ.

    ಈ ಕುರಿತಂತೆ ವಿಚಾರಣೆ ವೇಳೆ ವರ ಮತ್ತೊಬ್ಬರನ್ನು ಪ್ರೀತಿ ಮಾಡುತ್ತಿದ್ದ ವಿಚಾರ ಬೆಳಕಿಗೆ ಬಂದಿದ್ದು, ಇದನ್ನು ತಿಳಿದು ವಧು ದ್ರೋಹ ಮಾಡಿದ್ದಕ್ಕೆ ಸಿಟ್ಟಾಗಿ ವರನ ಕಪಾಳಕ್ಕೆ ಹೊಡೆದಿದ್ದಾಳೆ.

    ವರ ಹಾಗೂ ವಧುವಿನ ಕುಟುಂಬದವರು ಈ ಸಮಸ್ಯೆಯನ್ನು ನಿಭಾಯಿಸಲು ಸಾಧ್ಯವಾಗದೇ ಇದ್ದಾಗ ಪ್ರಕರಣ ಪೊಲೀಸ್ ಠಾಣಾ ಮೆಟ್ಟಿಲೇರಿದ್ದು, ಪೊಲೀಸರು ಇಬ್ಬರನ್ನು ಪ್ರತ್ಯೇಕವಾಗಿರುವಂತೆ ಸೂಚಿಸಿದ್ದಾರೆ. ಇದನ್ನೂ ಓದಿ: ಪಾನಮತ್ತ ವ್ಯಕ್ತಿಯ ಕಿತಾಪತಿ – ಮಹಿಳೆಯರ ಮುಂದೆ ಬೆತ್ತಲೆ ಪ್ರದರ್ಶನ

  • ನಟ ಚೇತನ್ ವಿರುದ್ಧ FIR ದಾಖಲು

    ನಟ ಚೇತನ್ ವಿರುದ್ಧ FIR ದಾಖಲು

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಚೇತನ್ ಅಹಿಂಸಾ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

    ಕನ್ನಡದ ಖ್ಯಾತ ನಟ ಚೇತನ್ ರಾಜ್ಯಾದ್ಯಂತ ಕೊರೊನಾ ಸೋಂಕಿತರು, ಕೊರೊನಾ ವಾರಿಯರ್ಸ್, ಲಾಕ್ ಡೌನ್ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ಒದಗಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಈ ವೇಳೆ ಬ್ರಾಹ್ಮಣರಿಗೆ ಪ್ರತ್ಯೇಕವಾಗಿ ಆಹಾರ ವಿತರಣೆ ಮಾಡಿದ ನಟರೊಬ್ಬರ ಬಗ್ಗೆ ಮನುಷ್ಯ ಸಹಜವಾಗಿ ಚೇತನ್ ಟೀಕಿಸಿದ್ದರು.

    ಹೀಗಾಗಿ ನಟ ಚೇತನ್ ಹೇಳಿಕೆಗೆ ಕೆಂಡಾಮಂಡಲವಾಗಿದ್ದ ಬ್ರಾಹ್ಮಣ ಸಮುದಾಯ ಇದೀಗ ಸಿಡಿದೆದ್ದು ದೂರು ಕೊಟ್ಟಿದೆ. ಸನಾತನ ಹಿಂದೂ ಸಮುದಾಯದ ಭದ್ರ ಬುನಾದಿಗೆ ಅಪಮಾನ ಉಂಟು ಮಾಡಿ , ಸಮಾಜದಲ್ಲಿ ಸ್ವಾಸ್ಥ್ಯವನ್ನು ಹಾಳುಮಾಡಿ, ಜನರನ್ನು ಎತ್ತಿಕಟ್ಟುವ ರೀತಿ ಚೇತನ್ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಗಳು ಯು ಟ್ಯೂಬ್‍ನನಲ್ಲಿ ಪ್ರಸಾರವಾಗಿವೆ.

    ಬ್ರಾಹ್ಮಣ ಹಾಗೂ ಬ್ರಾಹ್ಮಣ್ಯದ ಕುರಿತು ಹೇಳಿಕೆ ನೀಡಿದ್ದು, ಬ್ರಾಹ್ಮಣರ ಕುರಿತು ವ್ಯಂಗ್ಯವಾಗಿ ಮಾತಾಡಿದ್ದಾರೆ. ಇಂಥ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ. ಬ್ರಾಹ್ಮಣರು ಭಯೋತ್ಪಾದಕರು ಎಂದು ವಿಡಿಯೋದಲ್ಲಿ ಹೇಳಿಕೆ ನೀಡಿದ್ದಾರೆ ಎಂದು ವಿಪ್ರ ಯುವ ವೇದಿಕೆಯಿಂದ ಬಸವನಗುಡಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲಾಗಿದೆ. ಸದ್ಯ ದೂರಿನ ಆಧಾರದ ಮೇಲೆ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ನಟ ಚೇತನ್ ವಿರುದ್ದ ಎಫ್ ಐ ಆರ್ ದಾಖಲಾಗಿದ್ದು, ಐಪಿಸಿ 153(ಬಿ) 295(ಎ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನು ಓದಿ: ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಡ್ಯಾನಿಶ್ ಸೇಠ್

     

    View this post on Instagram

     

    A post shared by Chetan Ahimsa (@chetanahimsa)