Tag: ಪೊಲೀಸ್ ಕಮಿಷನರ್

  • ಸಿಎಂ ಸೂಚನೆ ಬೆನ್ನಲ್ಲೇ ಅಧಿಕಾರಿಗಳೊಂದಿಗೆ ಅಲೋಕ್ ಕುಮಾರ್ ಸಭೆ

    ಸಿಎಂ ಸೂಚನೆ ಬೆನ್ನಲ್ಲೇ ಅಧಿಕಾರಿಗಳೊಂದಿಗೆ ಅಲೋಕ್ ಕುಮಾರ್ ಸಭೆ

    ಬೆಂಗಳೂರು: ನೂತನ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕಾರ ಮಾಡಿರುವ ಬಿಎಸ್ ಯಡಿಯೂರಪ್ಪ ಅವರು ನಗರ ಪೊಲೀಸ್ ಆಯುಕ್ತರಿಗೆ ಖಡಕ್ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಲಭಿಸಿದ್ದು, ಸಿಎಂ ಸೂಚನೆ ಬೆನ್ನಲ್ಲೇ ಅಲೋಕ್ ಕುಮಾರ್ ಅವರ ನೇತೃತ್ವದಲ್ಲಿ ಉನ್ನತ ಪೊಲೀಸ್ ಅಧಿಕಾರಗಳ ಸಭೆ ನಡೆದಿದೆ.

    ಇಂದು ಬೆಳಗ್ಗೆ ಸಿಎಂ ಬಿಎಸ್ ಯಡಿಯೂರಪ್ಪ ಅವರ ನಿವಾಸಕ್ಕೆ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರು ಭೇಟಿ ನೀಡಿ ಮಾತುಕತೆ ನಡೆಸಿದ್ದರು. ಈ ಸಂದರ್ಭದಲ್ಲಿ ನಗರದ ಕಾನೂನು ಸುವ್ಯವಸ್ಥೆ ಬಗ್ಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಬಿಎಸ್‍ವೈ ಸೂಚಿಸಿದ್ದರು ಎಂಬುದಾಗಿ ತಿಳಿದುಬಂದಿದೆ.

    ಸಿಎಂ ಭೇಟಿಯಾದ ಬೆನ್ನಲ್ಲೇ ದಿಢೀರ್ ಸಭೆ ನಡೆಸಿರುವ ಬೆಂಗಳೂರಿನ ಹೆಚ್ಚುವರಿ ಪೊಲೀಸ್ ಆಯುಕ್ತರು, ಡಿಸಿಪಿಗಳೊಂದಿಗೆ ಚರ್ಚೆ ನಡೆಸಿ ಸಿಎಂ ಸೂಚನೆಯ ಬಗ್ಗೆ ಮಾತುಕತೆ ನಡೆಸಿದ್ದಾರೆ. ಅಲ್ಲದೇ ನಗರದಲ್ಲಿ ಕಾನೂನು ವ್ಯವಸ್ಥೆ ಬಗ್ಗೆ ಎಚ್ಚರಿಕೆ ವಹಿಸಲು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

    ಮುಖ್ಯಮಂತ್ರಿಯಾಗಿ ಬಿ.ಎಸ್ ಯಡಿಯೂರಪ್ಪ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಕೆಲವೇ ಗಂಟೆಗಳಲ್ಲಿ ಸಿದ್ಧತೆ ನಡೆಸಿದ್ದ ಪೊಲೀಸರು ಕಟ್ಟುನಿಟ್ಟಿನ ವ್ಯವಸ್ಥೆ ಕೈಗೊಂಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ್ದ ಅಲೋಕ್ ಕುಮಾರ್ ಅವರು, ಪ್ರಮಾಣ ವಚನ ಕಾರ್ಯಕ್ರಮ ಏನೆಲ್ಲ ಭದ್ರತೆ ಮಾಡಬೇಕೋ ಅದನ್ನು ಮಾಡುತ್ತೇವೆ. ನಾವು ತುರ್ತು ಪರಿಸ್ಥಿತಿ ಎದುರಿಸಲು ಸಿದ್ಧರಿದ್ದೇವೆ. ಕೇಂದ್ರದ ನಾಯಕರು ಬಂದರೆ ಹೆಚ್ಚುವರಿ ಭದ್ರತೆ ಒದಗಿಸುವುದಾಗಿ ಹೇಳಿದ್ದರು.

  • ಕ್ರೈಂ ಡಿಟೆಕ್ಷನ್ ನಲ್ಲಿ ದಾಖಲೆ ಬರೆದ ಪೊಲೀಸ್ ಕಮೀಷನರ್ ಸುನೀಲ್ ಕುಮಾರ್

    ಕ್ರೈಂ ಡಿಟೆಕ್ಷನ್ ನಲ್ಲಿ ದಾಖಲೆ ಬರೆದ ಪೊಲೀಸ್ ಕಮೀಷನರ್ ಸುನೀಲ್ ಕುಮಾರ್

    ಬೆಂಗಳೂರು: ಸ್ಯಾಂಡಲ್ ವುಡ್ ನಟ ದಿವಂಗತ ಅಂಬರೀಷ್ ಅಂತ್ಯಕ್ರಿಯೆಯಲ್ಲಿ ಒಂಚೂರು ಗಲಾಟೆಯಾಗದಂತೆ ಬಂದೋಬಸ್ತ್ ಮಾಡಿದ್ದ ಬೆಂಗಳೂರು ಪೊಲೀಸ್ ಕಮೀಷನರ್ ಹೀರೋ ಆಗಿ ಮಿಂಚಿದ್ದರು. ಇದೀಗ ಮತ್ತೊಮ್ಮೆ ಪೊಲೀಸ್ ಆಯುಕ್ತರ ಮುಡಿಗೆ ಕಿರೀಟವೊಂದು ಬಂದು ಸೇರಿದೆ.

    ಅಂಬಿ ಅಂತ್ಯಕ್ರಿಯೆಯನ್ನು ಅಚ್ಚುಕಟ್ಟಾಗಿ ನೆರವೇರಿಸಿಕೊಟ್ಟಿದ್ದ ಬೆಂಗಳೂರು ಪೊಲೀಸ್ ಆಯುಕ್ತ ಇದೀಗ ಕ್ರೈಂ ಡಿಟೆಕ್ಷನ್‍ನಲ್ಲೂ ಸೈ ಎನಿಸಿಕೊಂಡಿದ್ದಾರೆ. ಹಿಂದಿನ ಯಾವ ಕಮೀಷನರ್ ಗಳ ಅವಧಿಯಲ್ಲೂ ಆಗದಷ್ಟು ಹೆಚ್ಚಿನ ಕ್ರೈಂ ಡಿಟೆಕ್ಷನ್ ಸುನೀಲ್ ಕುಮಾರ್ ಅವಧಿಯಲ್ಲಿ ಆಗಿದೆ.

    ಈ ವರ್ಷ ನವೆಂಬರ್ ಅಂತ್ಯದ ತನಕ ನಗರದಲ್ಲಿ ಒಟ್ಟು 202 ಕೊಲೆಗಳಾಗಿದೆ. ಇದರಲ್ಲಿ 194 ಕೇಸ್ ಡಿಟೆಕ್ಟ್ ಆಗಿದ್ದು, ಕೊಲೆ ಹಂತಕರನ್ನು ಜೈಲಿಗಟ್ಟಿದ್ದಾರೆ. 636 ದರೋಡೆ ಪ್ರಕರಣಗಳು ದಾಖಲಾಗಿದ್ದು, 411 ರಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಲಾಗಿದೆ. ಅಲ್ಲದೇ ಪೊಲೀಸರ ನಿದ್ದೆ ಕೆಡಿಸಿದ ಸರಗಳ್ಳತನ ಪ್ರಕರಣಗಳ 289 ಕೇಸ್ ವರದಿಯಾಗಿದ್ದು, ಅದರಲ್ಲಿ 206 ಕೇಸ್ ಪತ್ತೆ ಮಾಡಲಾಗಿದೆ. ಈ ವರ್ಷದಲ್ಲಿ 5023 ಮೋಟಾರ್ ವಾಹನಗಳು ಕಳವಾಗಿದ್ದು, 1296 ವಾಹನಗಳನ್ನ ಪತ್ತೆ ಮಾಡಲಾಗಿದೆ. ಈ ವರ್ಷ 2701 ಚೀಟಿಂಗ್ ಕೇಸ್ ಗಳು ದಾಖಲಾಗಿದ್ದು, 1015 ಕೇಸ್ ಗಳಲ್ಲಿ ನ್ಯಾಯ ಕೊಡಿಸಲಾಗಿದೆ.

    ದುರಂತ ಅಂದರೆ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗದೇ ಇರುವುದು. ಈ ವರ್ಷ ಬರೋಬ್ಬರಿ 350 ಪೋಕ್ಸೋ ಕೇಸ್ ಗಳು ದಾಖಲಾಗಿದ್ದು, 339 ಮಂದಿ ಆರೋಪಿಗಳನ್ನ ಜೈಲಿಗಟ್ಟಲಾಗಿದೆ. 750 ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿ 560 ಕೇಸ್ ಗಳನ್ನು ಪರಿಹರಿಸಲಾಗಿದೆ. ಸ್ವಾರಸ್ಯದ ಸಂಗತಿ ಅಂದರೆ ದಾಖಲಾದ 98 ರೇಪ್ ಕೇಸ್ ಗಳಲ್ಲಿ ಅಷ್ಟು ಮಂದಿಗೂ ನ್ಯಾಯ ಕೊಡಿಸುವಲ್ಲಿ ಪೊಲೀಸರು ಸಫಲರಾಗಿದ್ದಾರೆ.

    ಒಟ್ಟಿನಲ್ಲಿ ಈ ಬಾರಿ ಕ್ರೈಂ ಡಿಟೆಕ್ಷನ್ ಮೇಲುಗತಿಯಲ್ಲಿ ಸಾಗಿದೆ. ಹಗಲು ರಾತ್ರಿ ದುಡಿದು ಸಾಕಷ್ಟು ಕೇಸ್ ಗಳನ್ನ ಪತ್ತೆ ಹಚ್ಚುವಲ್ಲಿ ಎಲ್ಲಾ ಪೊಲೀಸರು ಶ್ರಮಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 10 ನೇ ಮಹಡಿ ಮೇಲಿಂದ ಜಿಗಿದು ಪೊಲೀಸ್ ಕಮಿಷನರ್ ಆತ್ಮಹತ್ಯೆ!

    10 ನೇ ಮಹಡಿ ಮೇಲಿಂದ ಜಿಗಿದು ಪೊಲೀಸ್ ಕಮಿಷನರ್ ಆತ್ಮಹತ್ಯೆ!

    ನವದೆಹಲಿ: ಮಾನಸಿಕ ಖಿನ್ನತೆಗೆ ಒಳಗಾಗಿದ್ದ ನಗರದ ಪೊಲೀಸ್ ಕಮಿಷನರ್‍ರೊಬ್ಬರು ಇಂದು ದೆಹಲಿಯ ಪೊಲೀಸ್ ಮುಖ್ಯ ಕಚೇರಿಯ 10 ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಪ್ರೇಮ್ ಬಲ್ಲಾ (53) ಆತ್ಮಹತ್ಯೆ ಮಾಡಿಕೊಂಡಿರುವ ಪೊಲೀಸ್ ಅಧಿಕಾರಿ. ಪ್ರೇಮ್ ಬಲ್ಲಾ ಅವರು ದೆಹಲಿಯ ಮುಖ್ಯ ಕಚೇರಿಯಲ್ಲಿ ಪೊಲೀಸ್ ಕಮಿಷನರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಕೆಲವು ದಿನಗಳಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಪ್ರೇಮ್ ಬಲ್ಲಾ ಚಿಕಿತ್ಸೆಗೆಂದು ದೆಹಲಿಯ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ 5 ದಿನಗಳ ಹಿಂದೆಯಷ್ಟೆ ಮತ್ತೆ ಕೆಲಸಕ್ಕೆ ಹಿಂದಿರುಗಿದ್ದ ಕಮಿಷನರ್ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಮಾನಸಿಕವಾಗಿ ಕುಗ್ಗಿದ್ದ ಪ್ರೇಮ್ ಬಲ್ಲಾ ಇಂದು ಪೊಲೀಸ್ ಮುಖ್ಯ ಕಚೇರಿ ಕಟ್ಟಡದ 10 ನೇ ಮಹಡಿ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರೇಮ್ ಅವರು ಕಟ್ಟಡದಿಂದ ಬಿದ್ದ ತಕ್ಷಣವೇ ಕಚೇರಿಯಲ್ಲಿದ್ದ ಪೊಲೀಸ್ ಸಿಬ್ಬಂದಿ ಅವರನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಪೊಲೀಸ್ ಅಧಿಕಾರಿ ಮೃತಪಟ್ಟಿದ್ದಾರೆ.

    ಪ್ರೇಮ್ ಬಲ್ಲಾ ಅವರು ಪೊಲೀಸ್ ಮುಖ್ಯಪೇದೆಯಾಗಿ 1986 ರಲ್ಲಿ ಪೊಲೀಸ್ ಇಲಾಖೆಯನ್ನು ಸೇರಿದ್ದರು. ನಂತರ 2016 ರಲ್ಲಿ ಪೊಲೀಸ್ ಕಮಿಷನರ್ ಆಗಿ ನೇಮಕಗೊಂಡಿದ್ದರು. ಪ್ರೇಮ್ ಬಲ್ಲಾ ಅವರು ದೆಹಲಿ ಪೊಲೀಸ್ ಇಲಾಖೆಯಲ್ಲಿ ಓರ್ವ ಹಿರಿಯ ಅಧಿಕಾರಿಯಾಗಿ ಕರ್ತವ್ಯ ಸಲ್ಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • `ಸನ್ನಿ ನೈಟ್ಸ್’ಗೆ ಯಾವುದೇ ಪರ್ಮಿಷನ್ ನೀಡಿಲ್ಲ- ಪೊಲೀಸ್ ಆಯುಕ್ತರ ಸ್ಪಷ್ಟನೆ

    `ಸನ್ನಿ ನೈಟ್ಸ್’ಗೆ ಯಾವುದೇ ಪರ್ಮಿಷನ್ ನೀಡಿಲ್ಲ- ಪೊಲೀಸ್ ಆಯುಕ್ತರ ಸ್ಪಷ್ಟನೆ

    ಬೆಂಗಳೂರು: ಹೊಸ ವರ್ಷಾಚರಣೆಗಾಗಿ ನಗರದಲ್ಲಿ ಆಯೋಜನೆ ಮಾಡಲಾಗ್ತಿರೋ `ಸನ್ನಿ ನೈಟ್ಸ್’ಗೆ ಯಾವುದೇ ಪರ್ಮಿಷನ್ ನೀಡಿಲ್ಲ ಅಂತ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

    ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಪರ್ಮಿಷನ್ ನೀಡದೆ ಇರೋದ್ರಿಂದ ಕಾರ್ಯಕ್ರಮ ಮಾಡುವ ಹಾಗಿಲ್ಲ. ಮನೋರಂಜನೆ ಕಾಯ್ದೆಯಡಿ ಪರ್ಮಿಷನ್ ಪಡೆಯುವುದು ಅಗತ್ಯ. ಈ ದೃಷ್ಟಿಯಿಂದ ಕಾರ್ಯಕ್ರಮ ನಡೆಯಲು ಅವಕಾಶ ನೀಡುವುದಿಲ್ಲ ಅಂತ ಅವರು ಹೇಳಿದ್ದಾರೆ. ಇದನ್ನೂ ಓದಿ: `ಸನ್ನಿ ನೈಟ್ಸ್’ ವಿರುದ್ಧ ಪೊರಕೆ ಹಿಡಿದ ಬೆಂಗ್ಳೂರು ಮಹಿಳೆಯರು

    ನಮ್ಮ ಪರ್ಮಿಷನ್ ಪಡೆಯದೇ ಟಿಕೆಟ್ ಮಾರಾಟ ಮಾಡಿರೋದು ಸರಿಯಲ್ಲ. ದೊಡ್ಡ ಕಾರ್ಯಕ್ರಮ ಆಗಿರೋದ್ರಿಂದ ಪೊಲೀಸರು ಒದಗಿಸುವ ಅವಕಾಶ ಇಲ್ಲ. ಕೇರಳದಲ್ಲೂ ಸನ್ನಿ ಲಿಯೋನ್ ಬಂದಾಗ ಲಾಠಿ ಚಾರ್ಜ್ ಆಗಿತ್ತು. ಕಾನೂನು ಸುವ್ಯವಸ್ಥೆ ಹಾಳಾಗಿತ್ತು. ಈಗ ಬೆಂಗಳೂರಲ್ಲಿ ಅದು ಆಗೋದು ಇಷ್ಟ ಇಲ್ಲ, ಅವಕಾಶವೂ ಇಲ್ಲ ಅಂತ ತಿಳಿಸಿದ್ದಾರೆ.  ಇದನ್ನೂ ಓದಿ: ಸನ್ನಿ ಲಿಯೋನ್ ಸೀರೆ ಉಟ್ಕೊಂಡು ಬರಲಿ- `ಸನ್ನಿ ನೈಟ್ಸ್’ ಆಯೋಜಕರಿಗೆ ಕರವೇ ಸವಾಲು

    ಇನ್ನು ಹೊಸ ವರ್ಷ ಆಚರಣೆಗೆ ಮದ್ಯ ನಿಷೇಧ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಎಲ್ಲಾ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಇದುವರೆಗೂ ಯಾವುದೇ ಚಿಂತನೆ ಮಾಡಿಲ್ಲ. ಅಧಿಕಾರಿಗಳ ಜೊತೆ ಚರ್ಚಿಸಿ ಬಳಿಕ ಎಲ್ಲಾ ತೀರ್ಮಾನ ಹೇಳಲಾಗುವುದು ಅಂತ ವಿವರಿಸಿದ್ರು.

    ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ರಿವಾಲ್ವರ್‍ಗೆ ಅರ್ಜಿ ಸಲ್ಲಿಸಿದ್ದಾರೆ. ನಮ್ಮ ಅಧಿಕಾರಿಗಳು ಪರಿಶೀಲಿಸಿ ಕ್ರಮಕೈಗೊಳ್ಳಲಿದ್ದಾರೆ ಅಂದ್ರು.

    ಹೊಸ ವರ್ಷಾಚರಣೆಯ ಹಿಂದಿನ ದಿನ ಸನ್ನಿ ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂದು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದ್ದು, ಕನ್ನಡ ಪರ ಸಂಘಟನೆಗಳಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಸನ್ನಿ ಲಿಯೋನ್ ಫೋಟೊಗೆ ಬೆಂಕಿ ಇಟ್ಟು ಬೆಂಗಳೂರಿಗೆ ಸನ್ನಿ ಬರದಂತೆ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

    https://www.youtube.com/watch?v=hw9rGJ7u0KA

    https://www.youtube.com/watch?v=05Jkbnw4rXE