Tag: ಪೊಲೀಸ್ ಅಧಿಕಾರಿಗಳು

  • ಹಗರಿಬೊಮ್ಮನಹಳ್ಳಿ ಠಾಣೆ ನಿರ್ವಹಣೆ ನೆಪದಲ್ಲಿ ಲಂಚಕ್ಕೆ ಇಳಿದ ಪೊಲೀಸ್ ಅಧಿಕಾರಿಗಳು! – ವಿಡಿಯೋ ನೋಡಿ

    ಹಗರಿಬೊಮ್ಮನಹಳ್ಳಿ ಠಾಣೆ ನಿರ್ವಹಣೆ ನೆಪದಲ್ಲಿ ಲಂಚಕ್ಕೆ ಇಳಿದ ಪೊಲೀಸ್ ಅಧಿಕಾರಿಗಳು! – ವಿಡಿಯೋ ನೋಡಿ

    ಬಳ್ಳಾರಿ: ಜಿಲ್ಲೆಯಲ್ಲಿ ಪೊಲೀಸ್ ಅಧಿಕಾರಿಗಳ ಲಂಚ ಬಾಕತನ ಮೀತಿ ಮೀರಿ ಬಿಟ್ಟಿದೆ. ಠಾಣೆಯ ನಿರ್ವಹಣೆಗೆ ಹಗರಿಬೊಮ್ಮನಹಳ್ಳಿ ಪೊಲೀಸ್ ಅಧಿಕಾರಿಗಳು ಜನರಿಂದಲೇ ಲಂಚ ವಸೂಲಿ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

    ಪಿಎಸ್‍ಐ ಪುಲ್ಲಯ್ಯ ರಾಠೋಡ್ ಹಾಗೂ ಎಎಸ್‍ಐ ಪರಮೇಶ್ವರಪ್ಪ ರೈತರಿಂದ ಲಂಚ ವಸೂಲಿ ಮಾಡುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಇಬ್ಬರು ಅಧಿಕಾರಿಗಳು ಟ್ರ್ಯಾಕ್ಟರ್ ಗಳನ್ನು ಹಿಡಿದು, ಪ್ರಕರಣ ದಾಖಲಿಸಿ 500 ರೂ. ದಂಡ ವಿಧಿಸುತ್ತಿದ್ದರು. ಆದರೆ ರೈತರು ಹಾಗೂ ಮಾಲೀಕರಿಂದ 5 ಸಾವಿರ ರೂ., 10 ಸಾವಿರ ರೂ. ಲಂಚ ಪಡೆದು ವಸೂಲಿ ಮಾಡಿ, ಟ್ರ್ಯಾಕ್ಟರ್ ಬಿಟ್ಟು ಕಳುಹಿಸುತ್ತಿದ್ದರು.

    ಒಂದು ವೇಳೆ ದಂಡಕ್ಕಿಂತ ಹೆಚ್ಚಿನ ಹಣವನ್ನು ಏಕೆ ನೀಡಬೇಕು ಎಂದು ರೈತರು, ಟ್ರ್ಯಾಕ್ಟರ್ ಮಾಲೀಕರು ಪ್ರಶ್ನಿಸಿದರೆ, ಅಕ್ರಮವಾಗಿ ಮರಳು, ಕಲ್ಲು ಸಾಗಾಟದ ಪ್ರಕರಣ ದಾಖಲಿಸುವುದಾಗಿ ಹೆದರಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ದಂಡದ ಹಣಕ್ಕೆ ರಶೀದಿ ಕೇಳಿದರೆ, 2016ರ ಹಳೇ ದಿನಾಂಕಗಳ ರಶೀದಿ ನೀಡುತ್ತಿದ್ದಾರೆ.

    ಮಂಗಳವಾರ ಪಿಎಸ್‍ಐ ಪುಲ್ಲಯ್ಯ ಹಾಗೂ ಎಎಸ್‍ಐ ಪರಮೇಶ್ವರಪ್ಪ ಇಬ್ಬರು ಸೇರಿ ಲಂಚ ವಸೂಲಿ ಮಾಡುತ್ತಿದ್ದಾಗ ಮಾನವ ಹಕ್ಕುಗಳ ಸಂರಕ್ಷಣಾ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಚನ್ನವೀರ ಅವರು ತಮ್ಮ ಮೊಬೈಲ್‍ನಲ್ಲಿ ದೃಶ್ಯ ಸೆರೆ ಹಿಡಿದಿದ್ದಾರೆ. ಸದ್ಯ ವಿಡಿಯೋಗಳನ್ನು ಪೊಲೀಸ್ ವರಿಷ್ಠಾಧಿಕಾರಿ ಅರುಣ ರಂಗರಾಜನ್ ಅವರಿಗೆ ನೀಡಿ, ಲಂಚ ವಸೂಲಿ ಮಾಡುತ್ತಿದ್ದ ಇಬ್ಬರು ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ದೂರು ಸಲ್ಲಿಸಿದ್ದಾರೆ.

    https://www.youtube.com/watch?v=FeMFBwJfl8k

     

    https://www.youtube.com/watch?v=A4RTAFry3Uw

  • ಕೈಗೆ ಕೋಳ ಹಾಕದೆ ಕೈದಿಗಳಿಂದ ವಸತಿ ಗೃಹದ ಸ್ವಚ್ಛತೆ

    ಕೈಗೆ ಕೋಳ ಹಾಕದೆ ಕೈದಿಗಳಿಂದ ವಸತಿ ಗೃಹದ ಸ್ವಚ್ಛತೆ

    ಮಂಗಳೂರು: ಮಂಗಳೂರಿನ ಜೈಲು ಅಪರಾಧಿಗಳ ಪಾಲಿನ ನರಕ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಇದಕ್ಕೆ ಸಾಕ್ಷಿ ಜೈಲಿನ ಎದುರುಗಡೆ ಇರುವ ಜೈಲರ್ ವಸತಿಗೃಹವನ್ನು ಕೈದಿಗಳಿಂದಲೇ ಕ್ಲೀನ್ ಮಾಡಿಸಿದ್ದಾರೆ.

    ವಿಚಾರಣಾಧೀನ ಕೈದಿಗಳಿಗೆ ಕೈಗೆ ಕೊಳ ಹಾಕದೆ ಸ್ವತಂತ್ರವಾಗಿ ಬಿಟ್ಟು ವಸತಿಗೃಹ ಕ್ಲೀನ್ ಮಾಡಿಸಿದ್ದಾರೆ. ಇದು ಜೈಲಿನ ಮತ್ತೊಂದು ಅಕ್ರಮಕ್ಕೆ ಸಾಕ್ಷಿಯಾಗಿದೆ. ಸುಮಾರು 7 ರಿಂದ 8 ಕೈದಿಗಳು ಕ್ಲೀನ್ ಮಾಡುತ್ತಿದ್ದರೆ ಪೊಲೀಸರು ಮಾತ್ರ ಕೈದಿಗಳನ್ನು ದೂರದಲ್ಲೇ ಬಿಟ್ಟು ತಮ್ಮಷ್ಟಕ್ಕೆ ಹರಟೆ ಹೊಡೆಯುತ್ತಾ ಕುಳಿತಿದ್ದರು. ಈ ಮೂಲಕ ಜೈಲಿನ ಅಕ್ರಮಗಳಿಗೆ ಪರೋಕ್ಷವಾಗಿ ಭಾಗಿಯಾಗಿದ್ದಾರೆ. ಈ ಎಲ್ಲಾ ದೃಶ್ಯಗಳು ಪಬ್ಲಿಕ್ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಜೈಲಿನ ಒಳಭಾಗದಲ್ಲಿ ಕೈದಿಗಳಿಂದ ಕೆಲಸ ಮಾಡಿಸುವುದು ಸಾಮಾನ್ಯವಾಗಿದೆ. ಆದರೆ ಜೈಲಿನ ಹೊರಗೆ ಸಾರ್ವಜನಿಕ ಪ್ರದೇಶದಲ್ಲೂ ಕೈದಿಗಳನ್ನು ಸ್ವತಂತ್ರವಾಗಿ ಬಿಟ್ಟು ಕೆಲಸ ಮಾಡಿಸಿರುವುದು ಮಂಗಳೂರು ಜೈಲಿನಲ್ಲಿ ಮಾತ್ರ. ಅಧಿಕಾರಿಗಳ ಸೂಚನೆಯಂತೆ ಕೆಲಸಕ್ಕೆಂದು ಹೊರಗೆ ಬಂದ ಕೈದಿಗಳು ಅಲ್ಲಿಂದಲೇ ತಪ್ಪಿಸಿಕೊಂಡು ಹೋಗಿ ಮತ್ತೊಂದು ದುಷ್ಕೃತ್ಯ ಎಸಗಿದರೆ ಯಾರು ಹೊಣೆ ಎಂಬ ಮಾತು ಸಾರ್ವಜನಿಕವಾಗಿ ವ್ಯಕ್ತವಾಗಿದೆ.

    ಈ ಹಿಂದೆ ಜೈಲಿನ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜೈಲಿನೊಳಗೇ ಒಂದೇ ದಿನ ಇಬ್ಬರು ಪಾತಕಿಗಳ ಹತ್ಯೆ ನಡೆದಿದೆ. ಗುಂಡು ಪಾರ್ಟಿ ನಡೆಸಿರೋದು, ತಪಾಸಣೆಗೆ ತೆರಳಿದ್ದ ಸ್ಥಳೀಯ ಪೊಲೀಸರಿಗೆ ಮಾರಣಾಂತಿಕ ಹಲ್ಲೆ ನಡೆಸಿರುವುದನ್ನು ಇಲ್ಲಿ ಸ್ಮರಿಸಬಹುದು. ಈ ಹಿಂದೆ ಇದೇ ರೀತಿ ಕೈದಿಗಳಿಂದ ವಸತಿಗೃಹ ಕ್ಲೀನ್ ಮಾಡಿಸಿದ್ದ ವರದಿಯನನ್ನ ಪಬ್ಲಿಕ್ ಟಿವಿಯಲ್ಲಿ ಪ್ರಸಾರ ಮಾಡಿದ ಬಳಿಕ ಅಂದಿನ ಜೈಲು ಅಧೀಕ್ಷಕರನ್ನು ಅಮಾನಾತು ಮಾಡಲಾಗಿತ್ತು.