Tag: ಪೇಂಟರ್

  • 12 ಕೋಟಿ ರೂ. ಬಂಪರ್ ಲಾಟರಿ ಗೆದ್ದ ಪೇಂಟರ್!

    12 ಕೋಟಿ ರೂ. ಬಂಪರ್ ಲಾಟರಿ ಗೆದ್ದ ಪೇಂಟರ್!

    ತಿರುವನಂತಪುರಂ: ಕೇರಳದ ಕೊಟ್ಟಾಯಂನಲ್ಲಿ ಪೇಂಟಿಂಗ್ ಕೆಲಸಗಾರರೊಬ್ಬರು ಸರ್ಕಾರದ ಕ್ರಿಸ್‍ಮಸ್-ಹೊಸ ವರ್ಷದ ಲಾಟರಿಯ ಮೊದಲ ಬಹುಮಾನವಾದ 12 ಕೋಟಿ ರೂ. ಗೆದ್ದಿದ್ದಾರೆ.

    ಕುಡಯಂಪಾಡಿ ಮೂಲದ ಸದಾನಂದನ್ ಅಲಿಯಾಸ್ ಸದನ್ ಅವರು ಭಾನುವಾರ ಬೆಳಗ್ಗೆ ತಿರುವನಂತಪುರದಲ್ಲಿ ಲಕ್ಕಿ ಡ್ರಾಗೆ ಕೆಲವೇ ಗಂಟೆಗಳ ಮೊದಲು 218582 ಸಂಖ್ಯೆಯ ಲಾಟರಿ ಟಿಕೆಟ್ ಖರೀದಿಸಿದ್ದಾರೆ. ಟಿಕೆಟ್ ಖರೀದಿಸಿದ ಕೆಲವೇ ಗಂಟೆಗಳಲ್ಲಿ ಬಹುಮಾನ ಅನೌನ್ಸ್ ಆಗಿದ್ದು, ಸದಾನಂದನ್ ಅವರು ಕ್ರಿಸ್‍ಮಸ್ ನ್ಯೂ ಇಯರ್ ಬಂಪರ್ 12 ಕೋಟಿ ರೂ. ಲಾಟರಿ ಗೆದ್ದಿದ್ದಾರೆ. ಇದನ್ನೂ ಓದಿ: ಕೋವಿಡ್-19 ಪ್ರಕರಣ ಏರಿಕೆ – ಮದುವೆ ನೋಂದಣಿ ಸೇವೆ ಸ್ಥಗಿತ!

    Kerala: ₹12 crore lottery brings splash of color in painting worker's life

    ಈ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಇಂದು ಬೆಳಿಗ್ಗೆ ಮಾಂಸವನ್ನು ಖರೀದಿಸಲು ಹತ್ತಿರದ ಮಾರುಕಟ್ಟೆಗೆ ಹೋಗಿದ್ದೆ. ಆಗ ಲಾಟರಿ ಮಾರಾಟಗಾರ ಸೆಲ್ವನ್ ನಿಂದ ಈ ಟಿಕೆಟ್ ಖರೀದಿಸಿದೆ. ಆದರೆ ಈಗ ಟಿಕೆಟ್ ಗೆ ಬಹುಮಾನ ಬಂದಿರುವುದು ಖುಷಿಯಾಗುತ್ತಿದೆ ಎಂದು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

    ಲಾಟರಿಯಿಂದ ಬಂದ ಹಣವನ್ನು ತನ್ನ ಮಕ್ಕಳಾದ ಸನೀಷ್ ಮತ್ತು ಸಂಜಯ್ ಅವರಿಗಾಗಿ ಬಳಸುತ್ತೇನೆ ಎಂದು ಹೇಳಿದ್ದಾರೆ. ಸದಾನಂದನ್ ಅವರು 50 ವರ್ಷಗಳಿಂದ ಪೇಂಟಿಂಗ್ ಅನ್ನು ವೃತ್ತಿ ಜೀವನವಾಗಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ವಸತಿ ಶಾಲೆಗಳಿಂದ ಮಕ್ಕಳನ್ನು ಕರೆದೊಯ್ಯುತ್ತಿದ್ದಾರೆ ಪೋಷಕರು

  • ಪ್ರಾಣದ ಹಂಗು ತೊರೆದು ಪೇಂಟರ್ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

    ಪ್ರಾಣದ ಹಂಗು ತೊರೆದು ಪೇಂಟರ್ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

    ನೆಲಮಂಗಲ: ಬಣ್ಣ ಬಳಿಯಲು ಹೋಗಿ ಸುಮಾರು 12 ಅಡಿ ಆಳದ ನೀರಿನ ಸಂಪ್‍ಗೆ ಬಿದ್ದು ಉಸಿರಾಟದ ತೊಂದರೆಯಿಂದ ನರಳಾಡುತ್ತಿದ್ದ ಪೇಂಟರ್ ಹಾಗೂ ಆತನ ರಕ್ಷಣೆಗೆ ಇಳಿದಿದ್ದವರನ್ನು ಅಗ್ನಿಶಾಮಕ ಸಿಬ್ಬಂದಿ ರೇವಣ್ಣ ಪ್ರಾಣದ ಹಂಗು ತೊರೆದು ರಕ್ಷಿಸಿ ಹೀರೋ ಆಗಿದ್ದಾರೆ.

    ಬೆಂಗಳೂರು ಹೊರವಲಯದ ನೆಲಮಂಗಲ ನಗರದ ಸುಭಾಷ್ ನಗರದಲ್ಲಿ ಘಟನೆ ನಡೆದಿದ್ದು, ಉಸಿರಾಟದ ತೊಂದರೆಯಿಂದ ನರಳಾಡುತ್ತಿದ್ದ ಪೇಂಟರ್ ಹಾಗೂ ಆತನ ರಕ್ಷಣೆಗೆ ಇಳಿದಿದ್ದ ವ್ಯಕ್ತಿ ಒಟ್ಟು ಇಬ್ಬರನ್ನು ಅಗ್ನಿಶಾಮಕ ಸಿಬ್ಬಂದಿ ರೇವಣ್ಣ ರಕ್ಷಿಸಿದ್ದಾರೆ.

    ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಒಟ್ಟು ಒಬ್ಬರು ಪೇಂಟರ್ಸ್ ಸಂಪ್‍ಗೆ ಇಳಿದಿದ್ದರು. ಒಬ್ಬರು ಹೇಗೋ ಮೇಲಕ್ಕೆ ಬಂದಿದ್ದಾರೆ. ಆದರೆ ಓರ್ವ ಸಂಪ್‍ನಲ್ಲಿಯೇ ಸಿಕ್ಕಿಹಾಕಿಕೊಂಡಿದ್ದಾರೆ. ಉಸಿರಾಟದ ತೊಂದರೆಯಿಂದ ಪೇಂಟರ್ ಅಸ್ವಸ್ಥರಾಗಿದ್ದಾರೆ. ಪೇಂಟರ್ ರಕ್ಷಣೆ ಮಾಡಲು ಇಬ್ಬರು ಸಂಪ್‍ಗೆ ಇಳಿದಿದ್ದರೂ ಸಾಧ್ಯವಾಗಲಿಲ್ಲ. ಈ ಸಂದರ್ಭದಲ್ಲಿ ಸಹ ರಕ್ಷಣೆಗಾಗಿ ಇಳಿದಿದ್ದ ಇಬ್ಬರ ಪೈಕಿ ಒಬ್ಬರು ಸಂಪ್ ನಲ್ಲಿ ಸಿಲುಕಿದ್ದರು. ಮತ್ತೊಬ್ಬರು ಮೇಲಕ್ಕೆ ಬಂದಿದ್ದರು.

    ವಿಷಯ ತಿಳಿದ ನೆಲಮಂಗಲ ಅಗ್ನಿಶಾಮಕ ಸಿಬ್ಬಂದಿ ನೀರಿನ, ಸಂಪ್‍ಗೆ ಹಿಳಿದು ಇಬ್ಬರನ್ನೂ ರಕ್ಷಿಸಿದ್ದಾರೆ. ಪ್ರಾಣದ ಹಂಗು ತೊರೆದು ಕಿರಿದಾದ ನೀರಿನ ಸಂಪ್‍ಗೆ ಇಳಿದು ಇಬ್ಬರನ್ನೂ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ ರೇವಣ್ಣ ಹೀರೋ ಹಾಗಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ರೇವಣ್ಣ, ಆಕ್ಸಿಜನ್ ಅಳವಡಿಸಿಕೊಂಡು ಧೈರ್ಯದಿಂದ ನೀರಿನ ಸಂಪ್‍ಗೆ ಇಳಿದು ಇಬ್ಬರನ್ನೂ ರಕ್ಷಣೆ ಮಾಡಿದ್ದಾರೆ.

    ರಕ್ಷಿಸಿದ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ಅಸ್ವಸ್ಥರಾಗಿದ್ದಾರೆ. ನೆಲಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಕಂಠ ಪೂರ್ತಿ ಕುಡಿದು ಪಾರ್ಟಿ ಮಾಡ್ದ- ನಶೆಯಲ್ಲಿ ನಾಲ್ಕನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ

    ಕಂಠ ಪೂರ್ತಿ ಕುಡಿದು ಪಾರ್ಟಿ ಮಾಡ್ದ- ನಶೆಯಲ್ಲಿ ನಾಲ್ಕನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ

    ಬೆಂಗಳೂರು: ಸ್ನೇಹಿತರ ಜೊತೆ ಪಾರ್ಟಿ ಮಾಡಿದ ಯುವಕ ಮದ್ಯದ ಅಮಲಿನಲ್ಲಿ ನಾಲ್ಕನೇ ಮಹಡಿ ಮೇಲಿಂದ ಆಯತಪ್ಪಿ ಬಿದ್ದು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಸಾದರಮಂಗಲ ಸ್ಲಂಬೋರ್ಡ್ ನಲ್ಲಿ ನಡೆದಿದೆ.

    ರಾಜಶೇಖರ್ (22) ಮೃತ ದುರ್ದೈವಿ. ಮೃತ ರಾಜಶೇಖರ್ ಬೆಂಗಳೂರಿನ ಬಯ್ಯಪ್ಪನಹಳ್ಳಿ ನಿವಾಸಿಯಾಗಿದ್ದು, ಪೇಂಟರ್ ಕೆಲಸ ಮಾಡಿಕೊಂಡು ಸ್ಲಂ ಬೋರ್ಡ್ ನಲ್ಲಿ ನೆಲೆಸಿದ್ದ ಎನ್ನಲಾಗಿದೆ.

    ಇಂದು ಬೆಳಗ್ಗೆ ಕೆಲಸದ ನಿಮಿತ್ತ ಚೆನ್ನೈಗೆ ತೆರಳಬೇಕಿದ್ದ ರಾಜಶೇಖರ್ ಭಾನುವಾರ ರಾತ್ರಿ ಸ್ನೇಹಿತರ ಜೊತೆ ಗುಂಡು ಪಾರ್ಟಿ ಮಾಡಿದ್ದು, ಸ್ನೇಹಿತರು ವಾಪಸ್ ತೆರಳಿದ ಮೇಲೆ ಕಾಡುಗುಡಿ ಠಾಣಾ ವ್ಯಾಪ್ತಿಯ ಸಾದರಮಂಗಲ ಸ್ಲಂ ಬೋರ್ಡನ ಕಟ್ಟಡದಿಂದ ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾನೆ ಎಂಬುದಾಗಿ ತಿಳಿದುಬಂದಿದೆ.

     

    ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಕಾಡುಗುಡಿ ಪೊಲೀಸರು ಪರಿಶೀಲನೆ ನಡೆಸಿದಾಗ ಕಟ್ಟಡದ ಮೇಲಿನ ಭಾಗದಲ್ಲಿ ಮೃತನ ಚಪ್ಪಲಿ ಹಾಗೂ ಇತರೆ ವಸ್ತುಗಳು ದೊರೆತಿದ್ದು, ಪ್ರಕರಣ ದಾಖಲಿಸಿಕೊಂಡು ವೈದ್ಯಕೀಯ ಪರೀಕ್ಷೆಗಾಗಿ ರಾಜಶೇಖರ ಮೃತದೇಹ ವೈದೇಹಿ ಆಸ್ಪತ್ರೆಗೆ ರವಾನಿಸಿದ್ದಾರೆ. ಕಾಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅಂದು ಬೇಡಿಕೆಯ ಆ್ಯಕ್ಟರ್ ಈಗ ಪೈಂಟರ್: ಇದು ಕಲಾವಿದನ ನೋವಿನ ಕಥೆ

    ಅಂದು ಬೇಡಿಕೆಯ ಆ್ಯಕ್ಟರ್ ಈಗ ಪೈಂಟರ್: ಇದು ಕಲಾವಿದನ ನೋವಿನ ಕಥೆ

    ಲಾಹೋರ್: ಪ್ರಸಿದ್ಧರಾಗಲು ಬಯಸುವ ಜನರಿಗೆ ಹಣ ಮಹತ್ತರ ಪ್ರೇರಣೆ ನೀಡುತ್ತದೆ ಎಂದರೆ ತಪ್ಪಾಗಲಾರದು. ಹಣ ಕಂಡರೆ ಹೆಣವೂ ಬಾಯಿಬಿಡುತ್ತದೆ ಎಂಬ ನಾಣ್ಣುಡಿಯೇ ಪ್ರಚಲಿತದಲ್ಲಿರುವುದು ಈ ಕಾರಣದಿಂದಲೇ. ಹಣ ಗಳಿಸಲು ಜನರು ಯಾವ ಹಾದಿಯಲ್ಲೂ ತುಳಿಯಲು ಹೇಸುವುದಿಲ್ಲ. ಕೆಲವರು ಇಂಥದ್ದೇ ಉದ್ಯೋಗ ಮಾಡಿಯೇ ಹಣ ಗಳಿಸುತ್ತೇನೆ ಎನ್ನುವ ಒಳ್ಳೆಯವರೂ ಇದ್ದಾರೆ. ಕೆಲವೊಮ್ಮೆ ದುರಾದೃಷ್ಟ ಕೈ ಹಿಡಿದಿದ್ದರೆ ಉನ್ನತ ಸ್ಥಾನದಲ್ಲಿದ್ದವರೂ ತಳಮಟ್ಟಕ್ಕೆ ತಲುಪುತ್ತಾರೆ ಎನ್ನುವುದಕ್ಕೆ ಈ ಪಾಕಿಸ್ತಾನಿ ನಟನ ಉದಾಹರಣೆ ಉತ್ತಮವಾಗಿದೆ.

    ಪ್ರಪಂಚದಾದ್ಯಂತ ಮನರಂಜನಾ ಉದ್ಯಮದಲ್ಲಿ ಮಿಂಚಿ ಸ್ಟಾರ್ ಗಿರಿಯನ್ನು ಪಡೆದುಕೊಂಡಿದ್ದ ಈ ನಟ ಅದನ್ನು ಪಡೆದುಕೊಂಡಿರುವಾಗಲೇ ಕಳೆದುಕೊಂಡ. ಈ ನಟನೇ ಶಾಹಿದ್ ನಸೀಬ್, ಕೆಲಸದ ಕೊರತೆಯಿಂದಾಗಿ ಪೈಂಟರ್ ವೃತ್ತಿಗೆ ಇಳಿದಿದ್ದಾರೆ.

    ಇತ್ತೀಚಿನ ಸಿನಿಮಾ ನಾಟಕ ವಿಸಿಲ್ ನಲ್ಲಿ ಖಳ ನಟನಾಗಿದ್ದ ಇವರು ಹಲವಾರು ದೂರದರ್ಶನ ಧಾರಾವಾಹಿಗಳಾದ ದುಲ್ಲಾರಿ, ಜಬ್ ಉಸೆ ಮೊಹಬ್ಬತ್ ಹುಯಿ ಮತ್ತು ಇಲ್ಟಾಜಾನಲ್ಲಿ ನಟಿಸಿದ್ದಾರೆ. ಆಗ ಅದೃಷ್ಟವಿತ್ತು ಈಗ ದುರಾದೃಷ್ಟ ಕೈ ಹಿಡಿದಿದ್ದರಿಂದ ಕಾರ್ಮಿಕನಾಗಿದ್ದಾರೆ.

    “ನಾನು ಎರಡು ನಾಟಕ ಧಾರವಾಹಿ ಮತ್ತು ಟೆಲಿಫಿಲ್ಮ್ ಗಳಲ್ಲಿ ಉತ್ತಮ ಪಾತ್ರವನ್ನು ಹೊಂದಿದ್ದೆನೆ. ಆದರೆ ಕಳೆದ ಹತ್ತು ವರ್ಷಗಳು ನನಗೆ ತುಂಬಾ ಕಠಿಣವಾದ ದಿನಗಳಾಗಿವೆ. ದಿ ವಿಸಿಲ್ ನನಗೆ ದೊಡ್ಡ ಅವಕಾಶವನ್ನು ಕೊಟ್ಟಿದೆ ಹಾಗೂ ಅವಕಾಶಗಳ ಬಾಗಿಲನ್ನು ತೆರೆಸಿದೆ. ಆದರೆ ಈಗ ದುರಾದೃಷ್ಟವಶಾತ್ ಯಾವ ಪಾತ್ರಗಳೂ ದೊರಕುತ್ತಿಲ್ಲ. ನಾನು ಹಣ ಗಳಿಸಲು ಪೈಂಟರ್ ಆಗಿದ್ದೇನೆ” ಎಂದು ಅವರು ಹೇಳಿದರು.

    ನಾನು ನಟನಾಗಲು ಆಶಿಸಿ ಹತ್ತು ವರ್ಷಗಳ ಹಿಂದೆ ನನ್ನ ಗ್ರಾಮವನ್ನು ಬಿಟ್ಟೆ. ಅಲ್ಲಿಂದೀಚೆಗೆ ನಾನು ಇಸ್ಲಾಮಾಬಾದ್, ಕರಾಚಿ, ಪೇಶಾವರ್‍ಗಳಲ್ಲಿ ಅಲೆದಾಡಿದ್ದೇನೆ ಈಗ ಲಾಹೋರ್‍ನಲ್ಲಿ ಕೆಲಸ ಹುಡುಕುತ್ತಿದ್ದೇನೆ. ಆದರೆ ಅದೃಷ್ಟ ನನ್ನ ಕಡೆಗಿಲ್ಲ” ಎಂದು ಶಾಹಿದ್ ಮುಂದುವರಿಸಿದರು. “ನಾನೀಗ ನನ್ನ ಗ್ರಾಮಕ್ಕೆ ಮರಳಲು ಸಾಧ್ಯವಿಲ್ಲ ಏಕೆಂದರೆ ಎಲ್ಲರೂ ನನ್ನ ವೈಫಲ್ಯವನ್ನು ನೋಡಿ ನಗುತ್ತಿದ್ದಾರೆ. ನನ್ನ ಜೊತೆ ಕೆಲಸ ಮಾಡುವವರೂ ಸಹ ‘ಶಾಹಿದ್ ರಂಗ್ವಾಲಾ’ ನಂತಹ ಹೆಸರುಗಳ ಮೂಲಕ ನನ್ನನ್ನು ಹಂಗಿಸುತ್ತಿದ್ದಾರೆ ಇದರಿಂದ ನನಗೆ ತುಂಬಾ ದುಖಃವಾಗಿದೆ” ಎಂದು ಬೇಸರ ಹಂಚಿದ್ದಾರೆ.

    ಅನೇಕ ನಿರ್ಮಾಪಕರು ಕೆಲಸಕ್ಕೆ ಬದಲಾಗಿ ತಮ್ಮ ಮನೆಗಳಲ್ಲಿ ಚಿತ್ರಿಸಲು ಬಳಸಿಕೊಂಡಿದ್ದಾರೆ. ಇಂದು ಮನರಂಜನಾ ಮಾಧ್ಯಮದಲ್ಲಿ ಯಾರೊಂದಿಗೂ ನಿಜವಾದ ಸಂಬಂಧ ಹೊಂದಲು ಸಾಧ್ಯವಿಲ್ಲ. ನಾನು ಕಳಪೆ ಕಲಾವಿದನಾಗಿದ್ದರಿಂದ ವಿಸಿಲ್ ನಿರ್ಮಾಪಕರು ಚಿತ್ರದ ಕ್ರೆಡಿಟ್‍ಗಳಲ್ಲಿ ನನ್ನ ಹೆಸರನ್ನು ಸೇರಿಸಿಲ್ಲ. ಆದರೆ ಇಡೀ ಸ್ಕ್ರಿಪ್ಟ್ ನ್ನು ನಾನು ಬರೆದಿದ್ದೇನೆ” ಎಂದು ಅವರು ನೋವು ಹಂಚಿಕೊಂಡರು.

    ಈಗ ದಿನವೂ ರಾತ್ರಿ ನಾನು ದುಖಿಃಸುತ್ತಿದ್ದೇನೆ. ನನ್ನ ಸಂಪಾದನೆ ಈಗ ಕೇವಲ 20 ಸಾವಿರ ರೂ.. ಇದರಲ್ಲಿಯೂ ಸ್ವಲ್ಪ ಹಣವನ್ನು ನಾನು ಉಳಿಸಲು ಪ್ರಯತ್ನಿಸುತಿದ್ದೇನೆ. ಈ ಹಣದಲ್ಲಿ ನನ್ನ ಹಾಡುಗಳನ್ನು ಬಿಡುಗಡೆ ಗೊಳಿಸುವದು ನನ್ನ ಉದ್ದೇಶ. ನಾನು ಕೆಲವು ಸಂಗೀತಗಾರರನ್ನು ಭೇಟಿಯಾಗಿದ್ದೇನೆ ಅವರು ಟ್ರಾಕ್ ಬಿಡುಗಡೆಗೊಳಿಸಲು 10 ಸಾವಿರ ರೂ. ಕೇಳುತ್ತಿದ್ದಾರೆ. ಇನ್ನು ಹೆಚ್ಚು ಹಣ ಗಳಿಸುವುದು ನನ್ನ ಉದ್ದೇಶ ಎಂದು ತಿಳಿಸಿದರು.

    ಪೈಟಿಂಗ್ ಜೊತೆಗೆ ಶಾಹಿದ್ ಕೆಲವು ಖಾಸಗಿ ಕಾರ್ಯಕ್ರಮಗಳನ್ನು ಕೂಡ ನಿರ್ವಹಿಸುತ್ತಿದ್ದಾರೆ. “ನಾನು ದಿನಕ್ಕೆ ಒಂದು ಬಾರಿ ಮಾತ್ರ ತಿನ್ನುತ್ತೇನೆ. ಹೆಚ್ಚು ಹಣ ನೀಡುವ ಯಾವುದೇ ಕೆಲಸವನ್ನು ನಾನೀಗ ಮಾಡುತ್ತಿಲ್ಲ. ನನ್ನ ರಾತ್ರಿಗಳನ್ನು ನಾನು ರಸ್ತೆಗಳಲ್ಲಿ ಕಳೆಯುತ್ತಿದ್ದೇನೆ. ಈ ದಿನಗಳು ನನಗೆ ತುಂಬಾ ಕಠಿಣವಾಗಿವೆ ಆದರೆ ಲಾಲಿವುಡ್ ಮತ್ತು ಬಾಲಿವುಡ್ ನಲ್ಲಿ ಇಂತಹ ದಿನಗಳನ್ನು ಅನೇಕರು ಎದುರಿಸಿದ್ದಾರೆ ಎಂದು ನನಗೆ ಗೊತ್ತು” ಎಂದು ಹೇಳಿದರು.