Tag: ಪೂನಂ ಮಹಾಜನ್

  • ಪ್ರಿಯಾಂಕ ಗಾಂಧಿಯನ್ನ ಬಾಲಿವುಡ್ ನಟಿಯ ಪುತ್ರನೊಂದಿಗೆ ಹೋಲಿಸಿದ ಬಿಜೆಪಿ ಸಂಸದೆ

    ಪ್ರಿಯಾಂಕ ಗಾಂಧಿಯನ್ನ ಬಾಲಿವುಡ್ ನಟಿಯ ಪುತ್ರನೊಂದಿಗೆ ಹೋಲಿಸಿದ ಬಿಜೆಪಿ ಸಂಸದೆ

    ಮುಂಬೈ: ಬಿಜೆಪಿ ಯುವ ಮೋರ್ಚಾ ಅಧ್ಯಕ್ಷೆ ಮತ್ತು ಸಂಸದೆ ಪೂನಂ ಮಹಾಜನ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸೋದರಿ ಪ್ರಿಯಾಂಕ ಗಾಂಧಿ ಅವರನ್ನು ಬಾಲಿವುಡ್ ಬೇಬೋ ಕರೀನಾ ಕಪೂರ್ ಪುತ್ರ ತೈಮೂರ್ ಅಲಿಯೊಂದಿಗೆ ಹೋಲಿಸಿ ವ್ಯಂಗ್ಯ ಮಾಡಿದ್ದಾರೆ.

    ಭಾನುವಾರ ನಗರದ ಸೌಮ್ಯ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪೂನಂ ಮಹಾಜನ್ ತಮ್ಮ ಸಮಾರೋಪ ಭಾಷಣದಲ್ಲಿ ಕಾಂಗ್ರೆಸ್ ನಾಯಕರನ್ನು ಟೀಕಿಸಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕ ಶರದ್ ಪವಾರ್, ಮಹಾಭಾರತದಲ್ಲಿ ಬರುವ ಶಕುನಿ ಮತ್ತು ರಾಮಯಾಣದ ಮಂಥರೆಗೆ ಹೋಲಿಸಿದರು. ಶರದ್ ಪವಾರ್ ಅವರಿಗೆ ಏನು ಸಿಗಲಿಲ್ಲ ಅಂದ್ರೆ ಅಲ್ಲಿಯ ವಿಷಯವನ್ನು ಇಲ್ಲಿಗೆ, ಇಲ್ಲಿಯ ವಿಷಯವನ್ನು ಬೇರೆಯವರಿಗೆ ರವಾನಿಸುವ ಕೆಲಸ ಮಾಡ್ತಾರೆ. ಎಲ್ಲರು ಸೇರಿಕೊಂಡು ಮೋದಿ ಅವರ ಅಭಿವೃದ್ಧಿ ಕೆಲಸಗಳನ್ನು ತಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರ ಪ್ರಯತ್ನದಿಂದ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದು ಟೀಕಿಸಿದರು.

    ರಾಹುಲ್ ಗಾಂಧಿ ಇನ್ನು ತಾಯಿಯ ಮುದ್ದಿನ ಮಗ. ಕೆಲವು ದಿನಗಳಿಂದ ರಫೇಲ್, ರಫೇಲ್ ಎಂದು ಚೀರಾಡುತ್ತಾ ಓಡಾಡುತ್ತಿದ್ದಾರೆ. ರಫೇಲ್ ಬಗ್ಗೆ ಗೊತ್ತಿಲ್ಲದೇ ಈಗ ರಾ’ಫೂಲ್’ ಆಗಿದ್ದಾರೆ. ‘ಮಗಳನ್ನು ತನ್ನಿ ಮಗನನ್ನು ಉಳಿಸಿ’ ಎಂಬ ಉದ್ದೇಶದಿಂದ ಪ್ರಿಯಾಂಕರನ್ನು ರಾಜಕೀಯಕ್ಕೆ ಕರೆತಂದಿದ್ದಾರೆ. ಕಾಂಗ್ರೆಸ್ ನಾಯಕರು ತೈಮೂರ್ ಫೋಟೋದ ರೀತಿಯಲ್ಲಿ ಪ್ರಿಯಾಂಕ ಅವರ ಫೋಟೋಗ ಕಟೌಟ್ ಹಾಕಲಾಗುತ್ತಿದೆ ಎಂದು ವ್ಯಂಗ್ಯ ಮಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಂಸದ ಪ್ರತಾಪ ಸಿಂಹ ವಿರುದ್ಧ ಬಿಜೆಪಿ ರಾಷ್ಟ್ರೀಯ ಯುವಮೋರ್ಚಾ ಅಧ್ಯಕ್ಷೆ ಪೂನಂ ಮಹಾಜನ್ ಅತೃಪ್ತಿ

    ಸಂಸದ ಪ್ರತಾಪ ಸಿಂಹ ವಿರುದ್ಧ ಬಿಜೆಪಿ ರಾಷ್ಟ್ರೀಯ ಯುವಮೋರ್ಚಾ ಅಧ್ಯಕ್ಷೆ ಪೂನಂ ಮಹಾಜನ್ ಅತೃಪ್ತಿ

    ಬೆಂಗಳೂರು: ರಾಜ್ಯ ಯುವಮೋರ್ಚಾ ಘಟಕದ ಕಾರ್ಯವೈಖರಿಗೆ ಬಿಜೆಪಿ ರಾಷ್ಟ್ರೀಯ ಯುವಮೋರ್ಚಾ ಅಧ್ಯಕ್ಷೆ ಪೂನಂ ಮಹಾಜನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಯುವಮೋರ್ಚಾ ರಾಜ್ಯಾಧ್ಯಕ್ಷ, ಸಂಸದ ಪ್ರತಾಪ ಸಿಂಹ ವಿರುದ್ಧ ಅತೃಪ್ತಿ ವ್ಯಕ್ತಪಡಿಸಿದ ಪೂನಂ ಮಹಾಜನ್ ಕಾರ್ಯಕ್ರಮ ಸರಿಯಾಗಿ ಆಯೋಜನೆ ಮಾಡದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಪಕ್ಷದ ಮೂಲಗಳು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿವೆ.

    71ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸೋಮವಾರ ಮಧ್ಯರಾತ್ರಿ ಫ್ರೀಡಂ ಪಾರ್ಕ್ ನಲ್ಲಿ ಬಿಜೆಪಿಯ ಯುವಮೋರ್ಚಾ ಘಟಕದ ವತಿಯಿಂದ ಮಿಡ್‍ನೈಟ್ ಮ್ಯಾರಥಾನ್ ಮತ್ತು ಧ್ವಜಾರೋಹಣ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಂಬೈಯಿಂದ ಪೂನಂ ಮಹಾಜನ್ ಬೆಂಗಳೂರಿಗೆ ಆಗಮಿಸಿದ್ದರು.

    ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಆಯೋಜನೆ ಮಾಡಿರುವ ಕಾರ್ಯಕ್ರಮ ಇದಾಗಿದೆ. ಕಾರ್ಯಕ್ರಮ ಸರಿಯಾಗಿ ಆಯೋಜನೆ ಮಾಡಲು ಯಾಕೆ ಆಗಿಲ್ಲ? 5 ನಿಮಿಷ ಮಾತನಾಡಲು ನಾನು ಮುಂಬೈನಿಂದ ಬರಬೇಕಾಗಿತ್ತೇ ಎಂದು ಪಕ್ಷದ ನಾಯಕರಲ್ಲಿ ಪೂನಂ ಮಹಾಜನ್ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ಕಾರ್ಯಕ್ರಮದಲ್ಲಿ ಮಾತನಾಡಲು ಹೆಚ್ಚು ಅವಕಾಶ ನೀಡದ್ದಕ್ಕೆ ಬೇಸರ ವ್ಯಕ್ತಪಡಿಸಿದ ಅವರು ಅನಗತ್ಯವಾಗಿ ಹಣ ವೆಚ್ಚ ಮಾಡುವುದನ್ನು ಸಹ ನಿಲ್ಲಿಸಿ ಎಂದು ರಾಜ್ಯ ನಾಯಕರಲ್ಲಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ಏರ್‍ಪೋರ್ಟ್ ನಿಂದ ರಸ್ತೆಯಲ್ಲಿ ಬರುವಾಗಲೇ ರಾಜ್ಯ ಬಿಜೆಪಿ ನಾಯಕರಿಗೆ ಶಾ ತರಾಟೆ