Tag: ಪೂಜಾ ಹೆಗ್ಡೆ

  • ನಟಿ ಪೂಜಾ ಹೆಗ್ಡೆ ಜೊತೆ ಕಿಸ್ ಮಾಡಲಾರೆ: ಖ್ಯಾತ ನಟ ಅಡವಿ ಶೇಷ

    ನಟಿ ಪೂಜಾ ಹೆಗ್ಡೆ ಜೊತೆ ಕಿಸ್ ಮಾಡಲಾರೆ: ಖ್ಯಾತ ನಟ ಅಡವಿ ಶೇಷ

    ತೆಲುಗಿನ ಮೇಜರ್ ಸಿನಿಮಾದ ಮೂಲಕ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ನಟ ಅಡವಿ ಶೇಷ ನಟಿಯೊಬ್ಬರಿಗೆ ಮುಜುಗರ ಪಡುವಂತಹ ಹೇಳಿಕೆಗಳನ್ನು ನೀಡಿದ್ದಾರೆ. ಅಡವಿ ಶೇಷ ಮಾತಿನಿಂದಾಗಿ ಆ ನಟಿ ಗರಂ ಆಗಿದ್ದಾರೆ. ‘ಅನ್ ಸ್ಟಾಪೆಬಲ್ ವಿತ್ ಎನ್ ಬಿ ಕೆ’ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ  ಅಡವಿ ಶೇಷ ಅವರಿಗೆ ನಿರೂಪಕರು ಪ್ರಶ್ನೆಯೊಂದನ್ನು ಕೇಳುತ್ತಾರೆ. ಆ ಪ್ರಶ್ನೆಗೆ ತಡವರಿಸದೇ, ತಕ್ಷಣವೇ ಉತ್ತರಿಸುವ ಮೂಲಕ ಅಚ್ಚರಿ ಮೂಡಿಸುತ್ತಾರೆ.

    ಅಂದುಕೊಂಡಂತೆ ಆಗಿದರೆ ಮೇಜರ್ ಸಿನಿಮಾದಲ್ಲಿ ಅಡವಿ ಶೇಷ ಜೊತೆ ಕನ್ನಡತಿ ಪೂಜಾ ಹೆಗ್ಡೆ (Pooja Hegde) ನಾಯಕಿಯಾಗಿ ನಟಿಸಬೇಕಿತ್ತು. ಪಾತ್ರ ಮಾಡಲು ಪೂಜೆ ಒಪ್ಪಿಕೊಂಡಿದ್ದರು. ಆನಂತರ ಸಿನಿಮಾದಿಂದ ಆಚೆ ಬಂದರು. ಈ ಸಿನಿಮಾದಲ್ಲಿ ನಟಿಸಲು ಪೂಜಾ 2 ಕೋಟಿ ಸಂಭಾವನೆ ಕೇಳಿದರು ಎನ್ನುವ ಸುದ್ದಿ ಹರಿದಾಡಿತು. ಈ ಕಾರಣಕ್ಕಾಗಿಯೇ ಸಿನಿಮಾದಿಂದ ಅವರನ್ನು ಕೈ ಬಿಡಲಾಯಿತು ಎಂದೂ ಹೇಳಿದರು. ಆದರೆ, ಅಸಲಿ ವಿಷಯವೇ ಬೇರೆ ಇತ್ತು. ಇದನ್ನೂ ಓದಿ:ತಾಯ್ನಾಡಿಗೆ ಪ್ರಿಯಾಂಕಾ ಚೋಪ್ರಾ ಕಾಲಿಟ್ಟ ಬೆನ್ನಲ್ಲೇ ನಟಿಯ ವಿರುದ್ಧ ಗಂಭೀರ ಆರೋಪ

    ಪೂಜಾ ಹೆಗ್ಡೆ ಪ್ರತಿಭಾನ್ವಿತ ಕಲಾವಿದೆ. ಅವರದ್ದೇ ಆದ ಅಭಿಮಾನಿ ಬಳಗವಿದೆ. ಸಿನಿಮಾದಿಂದ ಸಿನಿಮಾಗೆ ಸಂಭಾವನೆಯನ್ನು ಹೆಚ್ಚಿಸಿಕೊಂಡು ಬಂದಿದ್ದಾರೆ ನಿಜ. ಆದರೆ ಮೇಜರ್ ಸಿನಿಮಾದಿಂದ ಅವರು ಆಚೆ ಬರಲು ಕಾರಣ, ಸಂಭಾವನೆ ಅಲ್ಲ. ಅಡವಿ ಶೇಷ ಜೊತೆ ನಟಿಸೋಕೆ ಆಗದೇ ಇರುವ ಕಾರಣಕ್ಕಾಗಿ ಸಿನಿಮಾದಿಂದ ಆಚೆ ಬಂದಿದ್ದರು ಎನ್ನುವುದು ಅಸಲಿ ವಿಚಾರ. ಅದು ಅಡವಿ ಶೇಷ ಅವರಿಗೂ ಗೊತ್ತಿತ್ತು. ಈ ಕಾರಣಕ್ಕಾಗಿಯೇ ಅವರು ಟಾಕ್ ಶೋ ನಲ್ಲಿ ಪೂಜಾ ಹೆಗ್ಡೆ ವಿರುದ್ಧ ಸೇಡು ತೀರಿಸಿಕೊಂಡಿದ್ದಾರೆ.

    ನೀವು ಯಾವ ನಟಿಯ ಜೊತೆ ಕಿಸ್ ಮಾಡಲು ಹಿಂಜರಿಯುತ್ತೀರಿ ಎಂದು ನಿರೂಪಕರು ಕೇಳಿದ ಪ್ರಶ್ನೆಗೆ, ‘ಪೂಜಾ ಹೆಗ್ಡೆ’ ಎಂದು ಹೇಳುವ ಮೂಲಕ ನಟಿಗೆ ಅವಮಾನಿಸಿದ್ದಾರೆ. ಈ ಪ್ರಶ್ನೋತ್ತರ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅಂತಹ ಸುಂದರಿ ಹುಡುಗಿಗೆ ಕಿಸ್ ಮಾಡಲ್ಲ ಅಂತ ಹೇಳಿದ ವಿಚಾರಕ್ಕೆ ಸ್ವತಃ ಅಡವಿ ಶೇಷ ಟ್ರೋಲ್ ಆಗಿದ್ದಾರೆ. ನೀನು ಹೀರೋನಾ? ಎಂದು ಹಲವರು ಪ್ರಶ್ನಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಸತತ ಸಿನಿಮಾ ಸೋಲಿನ ನಂತರ ಶಸ್ತ್ರಚಿಕಿತ್ಸೆಗೆ ಮುಂದಾದ ನಟಿ ಪೂಜಾ ಹೆಗ್ಡೆ

    ಸತತ ಸಿನಿಮಾ ಸೋಲಿನ ನಂತರ ಶಸ್ತ್ರಚಿಕಿತ್ಸೆಗೆ ಮುಂದಾದ ನಟಿ ಪೂಜಾ ಹೆಗ್ಡೆ

    ಸೌತ್ ಸಿನಿಮಾಗಳ (ಮೂಲಕ‌ ಮೋಡಿ ಮಾಡಿರುವ ಕರಾವಳಿ ಸುಂದರಿ ಪೂಜಾ ಹೆಗ್ಡೆ (Pooja Hegde) ಮತ್ತೆ ಸುದ್ದಿಯಲ್ಲಿದ್ದಾರೆ. ಸಾಲು ಸಾಲು ಸಿನಿಮಾಗಳ ಸೋಲಿನಿಂದ ಕೆಂಗೆಟ್ಟಿರುವ ಪೂಜಾ, ಶಸ್ತ್ರಚಿಕಿತ್ಸೆಗೆ (Surgery) ಮುಂದಾಗಿದ್ದಾರೆ.

    ಬ್ಯೂಟಿ ಜೊತೆ ಪ್ರತಿಭೆ ಇರುವ ನಟಿ ಪೂಜಾಗೆ ಅದ್ಯಾಕೋ ಲಕ್ ಕೈ ಕೊಟ್ಟಿದೆ. ಈ‌ ಹಿಂದೆ ನಟಿಸಿದ ಸಿನಿಮಾಗಳಿಂದ ಸಾಕಷ್ಟು ಪ್ರಶಂಸೆಗೆ ಪಾತ್ರರಾಗಿದ್ದ ನಟಿಗೆ ಈಗ ಅದೃಷ್ಟ ಕೈ ಕೊಟ್ಟಿದೆ. ಸಾಲು ಸಾಲು ಸಿನಿಮಾಗಳ ಸೋಲಿನ ನಂತರ ಪೂಜಾ ಹೆಗ್ಡೆ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ತಮ್ಮ ಸೌಂದರ್ಯದ ಕಡೆ ಮತ್ತಷ್ಟು ಗಮನ ಹರಿಸಲು ಮುಂದಾಗಿದ್ದಾರೆ. ಇದನ್ನೂ ಓದಿ: 2024ರ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ: ಮೋದಿ, ಹೇಮಾ ಮಾಲಿನಿಗೆ ರಾಖಿ ಸಾವಂತ್ ಥ್ಯಾಂಕ್ಸ್ ಹೇಳಿದ್ದೇಕೆ?

    ಸಾಕಷ್ಟು ಕಲಾವಿದರು ತಮ್ಮ ವೃತ್ತಿಬದುಕಿನ ಬದಲಾವಣೆಗಾಗಿ ಶಸ್ತ್ರಚಿಕಿತ್ಸೆ ಮಾಡಲು ಮುಂದಾಗುತ್ತಾರೆ. ಅದೇ ಹಾದಿಯಲ್ಲಿ ಪೂಜಾ ಸಾಗುತ್ತಿದ್ದಾರೆ. ಮೂಗಿನ ಸರ್ಜರಿ ಮಾಡಿಸಲು ಪ್ಲ್ಯಾನ್ ಮಾಡಿದ್ದಾರೆ. ನಟಿಯ ಈ ನಿರ್ಧಾರ ಮುಂದೆ ವೃತ್ತಿ ಬದುಕಲ್ಲಿ ಹೊಸ ಬದಲಾವಣೆಯ ಜೊತೆ ಸಕ್ಸಸ್ ತಂದು ಕೊಡುತ್ತಾ ಕಾದುನೋಡಬೇಕಿದೆ. ಇದನ್ನೂ ಓದಿ: ಮಗಳ ಜೊತೆಗಿನ ಮುದ್ದಾದ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್

    Live Tv
    [brid partner=56869869 player=32851 video=960834 autoplay=true]

  • ಯಶ್ ಮುಂದಿನ ಚಿತ್ರಕ್ಕೆ ಪೂಜಾ ಹೆಗ್ಡೆ ನಾಯಕಿನಾ?

    ಯಶ್ ಮುಂದಿನ ಚಿತ್ರಕ್ಕೆ ಪೂಜಾ ಹೆಗ್ಡೆ ನಾಯಕಿನಾ?

    ನ್ಯಾಷನಲ್ ಸ್ಟಾರ್ ಯಶ್ (Yash) `ಕೆಜಿಎಫ್ 2′ (Kgf 2) ಸಕ್ಸಸ್ ಖುಷಿಯಲ್ಲಿದ್ದಾರೆ. ಅವರ ಮುಂದಿನ ಸಿನಿಮಾ ಮೇಲೆ ಅಭಿಮಾನಿಗಳು ಕಣ್ಣಿಟ್ಟಿದ್ದಾರೆ. ಹೀಗಿರುವಾಗ ಬಹುನಿರೀಕ್ಷಿತ ಯಶ್ 19 ಸಿನಿಮಾಗೆ ಪೂಜಾ ಹೆಗ್ಡೆ (Pooja Hegde) ನಾಯಕಿ ಎನ್ನಲಾಗುತ್ತಿದೆ. ಈ ಕುರಿತ ಸುದ್ದಿಗೆ ಸ್ವತಃ ಪೂಜಾ ಹೆಗ್ಡೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.

    ಪುನೀತ್ ರಾಜ್‌ಕುಮಾರ್ (Puneeth Rajkumar) ಅವರಿಗೆ ನಮನ ಸಲ್ಲಿಸಲು ಈ ಬಾರಿ ಸೈಮಾ ಕಾರ್ಯಕ್ರಮವನ್ನ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಾಡಲಾಗಿತ್ತು. ಎಲ್ಲಾ ಭಾಷೆಯ ಕಲಾವಿದರು ಬೆಂಗಳೂರಿನಲ್ಲಿ ಸೇರಿದ್ದರು. ಇದೇ ಕಾರ್ಯಕ್ರಮದಲ್ಲಿ ಪೂಜಾ ಹೆಗ್ಡೆ ಕೂಡ ಭಾಗವಹಿಸಿದ್ದರು. ಈ ವೇಳೆ ಪತ್ರಕರ್ತರೊಬ್ಬರು ನೀವು `ಯಶ್ 19′ (Yash 19) ಚಿತ್ರದಲ್ಲಿ ನಟಿಸುತ್ತಿದ್ದೀರಾ ಎಂದು ಕೇಳಿದ್ದಾರೆ. ಇದನ್ನೂ ಓದಿ:‘ಹನಿಮೂನ್’ ಗೂ ಮುನ್ನ ಮನೆದೇವರ ಆಶೀರ್ವಾದ ಪಡೆದ ನಟಿ ಮಹಾಲಕ್ಷ್ಮಿ ಹಾಗೂ ರವೀಂದರ್

    ಈ ಪ್ರಾಜೆಕ್ಟ್ ಬಗ್ಗೆ ಯಾವುದೇ ಐಡಿಯಾ ನನಗಿಲ್ಲ. ಮುಂದೇನು ಆಗತ್ತೋ ನೋಡೋಣ ಎಂದು ಪೂಜಾ ಹೆಗ್ಡೆ ಉತ್ತರಿಸಿದ್ದಾರೆ. ನನಗೆ ಕನ್ನಡದಲ್ಲಿ ಏನಾದರೂ ಮಾಡಬೇಕು ಎಂಬ ಯೋಜನೆ ಇದೆ ಎಂದು ಮನಬಿಚ್ಚಿ ಮಾತನಾಡಿದ್ದಾರೆ.

    ದಕ್ಷಿಣದ ಸಿನಿಮಾಗಳ ಮೂಲಕ ಮೋಡಿ ಮಾಡುತ್ತಿರುವ ನಟಿ ಪೂಜಾ ಹೆಗ್ಡೆ ಯಶ್ ಮುಂದಿನ ಸಿನಿಮಾಗೆ ನಾಯಕಿಯಾಗುತ್ತಾರಾ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ವಿಜಯ್ ದೇವರಕೊಂಡಗಾಗಿ ‘ಡಾನ್ಸ್’ ಮಾಡೋಕೆ ಒಪ್ಪಿಕೊಂಡ ರಶ್ಮಿಕಾ ಮಂದಣ್ಣ

    ವಿಜಯ್ ದೇವರಕೊಂಡಗಾಗಿ ‘ಡಾನ್ಸ್’ ಮಾಡೋಕೆ ಒಪ್ಪಿಕೊಂಡ ರಶ್ಮಿಕಾ ಮಂದಣ್ಣ

    ತೆಲುಗಿನ ಸೂಪರ್ ಹಿಟ್ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ನಡುವೆ ಯಾವುದೂ ಸರಿಯಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಇಬ್ಬರೂ ಮನಸ್ತಾಪ ಮಾಡಿಕೊಂಡು ದೂರ ದೂರವಾಗಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿತ್ತು. ಹೀಗಾಗಿಯೇ ಅವರಿಬ್ಬರೂ ಮತ್ತೆ ಒಟ್ಟಾಗಿ ನಟಿಸುತ್ತಿಲ್ಲ ಎನ್ನುವ ಗಾಸಿಪ್ ಕೂಡ ಶುರುವಾಗಿತ್ತು. ಇದೀಗ ಎಲ್ಲದಕ್ಕೂ ಉತ್ತರ ಕೊಟ್ಟಿದ್ದಾರೆ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ.

    ಸದ್ಯ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮತ್ತೆ ಒಟ್ಟಾಗಿ ಕ್ಯಾಮೆರಾ ಎದುರಿಸಲಿದ್ದಾರೆ ಎನ್ನುವ ಸುದ್ದಿ ಸಿಕ್ಕಿದೆ. ಆದರೆ, ಅವರು ಆ ಸಿನಿಮಾದಲ್ಲಿ ನಾಯಕಿ ಅಲ್ಲವಂತೆ. ಹಾಡೊಂದರಲ್ಲಿ ಕಾಣಿಸಿಕೊಳ್ಳಲು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ವಿಜಯ್ ದೇವರಕೊಂಡ ನಟನೆಯ ಹೊಸ ಸಿನಿಮಾದಲ್ಲಿ ರಶ್ಮಿಕಾ ಹಾಡೊಂದಕ್ಕೆ ನೃತ್ಯ ಮಾಡಲಿದ್ದಾರಂತೆ. ವಿಜಯ್ ಜೊತೆ ನಾಯಕಿಯಾಗಿ ನಟಿಸುತ್ತಿರುವುರು ಪೂಜಾ ಹೆಗ್ಡೆ. ಇದನ್ನೂ ಓದಿ : Breaking- ಫಹಾದ್ ಫಾಸಿಲ್ ಗಾಗಿ ಸಿನಿಮಾ ಮಾಡಲು ಮತ್ತೆ ತಮಿಳಿಗೆ ಹೊರಟ ಪವನ್ ಕುಮಾರ್

    ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಗೀತ ಗೋವಿಂದಂ ಸಿನಿಮಾದ ಮೂಲಕ ಭಾರೀ ಹೆಸರು ಮಾಡಿದರು. ಗೆಲುವಿನ ಜೋಡಿ ಎಂದೇ ಅವರನ್ನು ಬಿಂಬಿಸಲಾಯಿತು. ನಂತರ ಇಬ್ಬರೂ ಪರಸ್ಪರ ಆತ್ಮೀಯರಾದರು. ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂದೆಲ್ಲ ಸುದ್ದಿ ಆಯಿತು. ಈ ನಡುವೆ ಇಬ್ಬರಿಗೂ ಸರಿ ಇಲ್ಲ. ಹಾಗಾಗಿ ದೂರವಾಗಿದ್ದಾರೆ ಎನ್ನುವಲ್ಲಿಗೆ ಗಾಸಿಪ್ ನಿಂತಿತ್ತು. ಇದೀಗ ಮತ್ತೆ ಒಂದಾಗಲಿದ್ದಾರೆ ಎನ್ನುವ ಸುದ್ದಿ ಹರಡಿದೆ.

    Live Tv
    [brid partner=56869869 player=32851 video=960834 autoplay=true]

  • ಮತ್ತೆ ಬೋಲ್ಡ್ ಅವತಾರದಲ್ಲಿ ಮಿಂಚಿದ ಪೂಜಾ ಹೆಗ್ಡೆ

    ಮತ್ತೆ ಬೋಲ್ಡ್ ಅವತಾರದಲ್ಲಿ ಮಿಂಚಿದ ಪೂಜಾ ಹೆಗ್ಡೆ

    ಕ್ಷಿಣ ಭಾರತದ ಚೆಂದದ ನಟಿ ಪೂಜಾ ಹೆಗ್ಡೆಗೆ ಲಕ್ ಕೈ ಕೊಟ್ಟಂತಿದೆ. ಇತ್ತೀಚೆಗೆ ನಟಿಸಿರೋ ಸಾಲು ಸಾಲು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸೋತಿದೆ. ಅದರೂ ಪೂಜಾಗೆ ಅವಕಾಶಗಳೇನು ಕಮ್ಮಿಯಾಗಿಲ್ಲ. ಇತ್ತೀಚೆಗೆ ಕಾನ್ ಫೆಸ್ಟಿವಲ್‌ನಲ್ಲಿ ಮಿಂಚಿದ ಬಳಿಕ ಈಗ ಹೊಸದೊಂದು ಫೋಟೋಶೂಟ್ ಮಾಡಿಸಿದ್ದಾರೆ. ಕಲರ್‌ಫುಲ್ ಅವತಾರದಲ್ಲಿ ಮಿಂಚಿದ್ದಾರೆ.

     

    View this post on Instagram

     

    A post shared by Pooja Hegde (@hegdepooja)

    ಸದ್ಯ ವಿಜಯ್ ದೇಚರಕೊಂಡ ನಟನೆಯ ಚಿತ್ರದಲ್ಲಿ ನಾಯಕಿಯಾಗಿ ಪೂಜಾ ನಟಿಸುತ್ತಿದ್ದಾರೆ. ಸಾಲು ಸಾಲು ಸಿನಿಮಾ ಶೂಟಿಂಗ್ ಮಧ್ಯೆ ಇದೀಗ ಕ್ಯಾಮೆರಾ ಕಣ್ಣಿಗೆ ಹಾಟ್ ಲುಕ್‌ನಲ್ಲಿ ಪೋಸ್ ನೀಡಿದ್ದಾರೆ. ಕಲರ್‌ಫುಲ್ ಡ್ರೆಸ್‌ನಲ್ಲಿ ಬೊಟ್ಟಬೊಮ್ಮ ಸುಂದರಿ ಮಿಂಚಿದ್ದಾರೆ. ವೈಟ್ ಕಲರ್ ಡ್ರೆಸ್ ಮತ್ತು ಬಣ್ಣ ಬಣ್ಣದ ಡ್ರೆಸ್ ಎರಡು ಲುಕ್‌ನಲ್ಲಿಯೂ ಬೋಲ್ಡ್ ಆಗಿ ಮಿಂಚಿದ್ದಾರೆ. ಇದನ್ನೂ ಓದಿ:ಸಲ್ಮಾನ್ ಖಾನ್ ಗೆ ಜೀವ ಬೆದರಿಕೆ ಹಾಕಿದವರ ಲಿಸ್ಟ್ ನಲ್ಲಿ ಕರಣ್ ಜೋಹರ್

     

    View this post on Instagram

     

    A post shared by Pooja Hegde (@hegdepooja)

    ಪೂಜಾ ಹೆಗ್ಡೆ ಐರೆನ್ ಲೆಗ್ ಎಂಬ ಮಾತುಗಳ ಮಧ್ಯೆ, ಸಾಲು ಸಾಲು ಸಿನಿಮಾಗಳಿಗೆ ನಾಯಕಿಯಾಗುವ ಮೂಲಕ ಸೌಂಡ್ ಮಾಡ್ತಿದ್ದಾರೆ. ಈ ಮಧ್ಯೆ ಯಶ್‌ಗೆ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಎಲ್ಲದಕ್ಕೂ ಅಧಿಕೃತ ಘೋಷಣೆಗಾಗಿ ಕಾಯಬೇಕಿದೆ.

    Live Tv

  • ಯಶ್ ಮುಂದಿನ ಸಿನಿಮಾಗೆ ಕರಾವಳಿ ಸುಂದರಿ ಜೋಡಿ

    ಯಶ್ ಮುಂದಿನ ಸಿನಿಮಾಗೆ ಕರಾವಳಿ ಸುಂದರಿ ಜೋಡಿ

    ಭಾರತೀಯ ಚಿತ್ರರಂಗದಲ್ಲಿ ಸದ್ಯ ಸದ್ದು ಮಾಡುತ್ತಿರುವ ಸೂಪರ್ ಸ್ಟಾರ್ ಅಂದ್ರೆ ನ್ಯಾಷನಲ್ ಸ್ಟಾರ್ ಯಶ್, `ಕೆಜಿಎಫ್ 2′ ಭರ್ಜರಿ ಹಿಟ್ ಆದ ಮೇಲೆ ಎಲ್ಲರ ಗಮನ ಯಶ್ ಮುಂದಿನ ಚಿತ್ರದ ಮೇಲಿದೆ. ರಾಕಿಭಾಯ್ ನೆಕ್ಸ್ಟ್‌ ಸಿನಿಮಾ ಯಾವುದು, ಅವರ ಮುಂದಿನ ಸಿನಿಮಾಗೆ ನಾಯಕಿ ಯಾರು ಎಂಬ ಎಲ್ಲಾ ಪ್ರಶ್ನೆಗೆ ಇಲ್ಲಿದೆ ಡೀಟೈಲ್ಸ್.‌

    ಚಿತ್ರರಂಗದಲ್ಲಿ ಯಶ್ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. `ಕೆಜಿಎಫ್ 2′ ಸಕ್ಸಸ್ ನಂತರ ಮುಂದಿನ ಸಿನಿಮಾಗಾಗಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. `ಮಫ್ತಿ’ ನಿರ್ದೇಶಕ ನರ್ತನ್ ಮತ್ತು ಯಶ್ ಕಾಂಬಿನೇಷನ್‌ನಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಬರೋದಕ್ಕೆ ತೆರೆ ಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಸದ್ಯದಲ್ಲೇ ಈ ಸಿನಿಮಾ ಅಧಿಕೃತವಾಗಿ ಅನೌನ್ಸ್ ಆಗಲಿದೆ.

    ನ್ಯಾಷನಲ್ ಸ್ಟಾರ್ ಯಶ್ ಮತ್ತು ಮಪ್ತಿ ನಿರ್ದೇಶಕ ನರ್ತನ್ ಸಿನಿಮಾಗೆ ಕೆವಿಎನ್ ಚಿತ್ರ ನಿರ್ಮಾಣ ಸಂಸ್ಥೆ ಕೈ ಜೋಡಿಸಿದೆ. ಇದರ ಬೆನ್ನಲ್ಲೆ ರಾಕಿಂಗ್ ಸ್ಟಾರ್ ಯಶ್‌ಗೆ ನಾಯಕಿ ಯಾರು ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಪ್ಯಾನ್ ಇಂಡಿಯಾ ಚಿತ್ರವಾಗಿರೋದ್ರಿಂದ ದಕ್ಷಿಣದ ಸ್ಟಾರ್ ನಾಯಕಿಯನ್ನೇ ಆಯ್ಕೆ ಮಾಡಿದ್ದಾರೆ. ಕರಾವಳಿ ಮೂಲದ ನಟಿ ದಕ್ಷಿಣ ಭಾರತದ ಬೊಟ್ಟಬೊಮ್ಮ ಸುಂದರಿ ಪೂಜಾ ಹೆಗ್ಡೆ ಯಶ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ: ಪತ್ನಿ ನಯನತಾರಾ ತಪ್ಪಿಗೆ ಪತಿ ವಿಘ್ನೇಶ್ ಶಿವನ್ ಕ್ಷಮೆಯಾಚನೆ

    ನಟಿ ಪೂಜಾ ಹೆಗ್ಡೆ, ಕರ್ನಾಟಕದ ಮೂಲದವರಾಗಿದ್ದರೂ, ಬೆಳೆದಿದ್ದೆಲ್ಲಾ ಮುಂಬೈನಲ್ಲಿ ಸೌತ್ ಮತ್ತು ಬಾಲಿವುಡ್‌ನಲ್ಲಿ ಸಖತ್ ಬ್ಯುಸಿಯಿರೋ ಬ್ಯೂಟಿ ಇವರೆಗೂ ಒಂದೇ ಒಂದು ಕನ್ನಡ ಸಿನಿಮಾದಲ್ಲೂ ನಟಿಸಿಲ್ಲ. ಇದೀಗ ಆ ಕಾಲ ಕೂಡಿ ಬಂದಿದೆ. ಯಶ್‌ಗೆ ನಾಯಕಿಯಾಗುವ ಮೂಲಕ ಪೂಜಾ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡ್ತಿದ್ದಾರೆ. ಪೂಜಾ ನಿಜವಾಗಲೂ ಕನ್ನಡಕ್ಕೆ ಬರುತ್ತಾರಾ, ಯಶ್ ಜೊತೆ ಪೂಜಾ ಜೋಡಿ ಅದ್ಯಾವ ಮಟ್ಟಿಗೆ ಮೋಡಿ ಮಾಡಲಿದೆ ಅಂತಾ ಕಾದುನೋಡಬೇಕಿದೆ.

  • ವಿಮಾನ ಸಿಬ್ಬಂದಿಯ ಅಸಭ್ಯ ವರ್ತನೆಗೆ ಬೇಸತ್ತ ಪೂಜಾ ಹೆಗ್ಡೆ

    ವಿಮಾನ ಸಿಬ್ಬಂದಿಯ ಅಸಭ್ಯ ವರ್ತನೆಗೆ ಬೇಸತ್ತ ಪೂಜಾ ಹೆಗ್ಡೆ

    ಸೌತ್ ಬ್ಯೂಟಿ ಪೂಜಾ ಹೆಗ್ಡೆ ಇಂಡಿಗೋ ವಿಮಾನ ಸಿಬ್ಬಂದಿಯ ವರ್ತನೆಯಿಂದ ಬೇಸತ್ತಿದ್ದಾರೆ. ಸಿಬ್ಬಂದಿಯ ವರ್ತನೆಗೆ ಟ್ವೀಟ್ ಮೂಲಕ ತಮ್ಮ ನೋವನ್ನ ಹೇಳಿಕೊಂಡಿದ್ದಾರೆ. ಸದ್ಯ ಈ ಪೋಸ್ಟ್ ಸಖತ್ ವೈರಲ್ ಆಗಿದೆ.

    ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿರುವ ನಟಿ ಪೂಜಾ ಸದ್ಯ ವಿಜಯ್ ದೇವರಕೊಂಡ ನಟನೆಯ `ಜನ ಗಣ ಮನ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು ನಟಿ ಪೂಜಾ ವಿಮಾನ ಸಿಬ್ಬಂದಿಯ ವರ್ತನೆ ಕುರಿತು ಅಸಮಾಧಾನ ಹೊರ ಹಾಕಿದ್ದಾರೆ. ಪೂಜಾ ಅವರ ಪ್ರಯಾಣದ ವೇಳೆಯಲ್ಲಿ ಇಂಡಿಗೋ ವಿಮಾನದ ಸಿಬ್ಬಂದಿ ವಿಪುಲ್ ನಕಾಶೆ ಎಂಬುವವರು ಪೂಜಾ ಜತೆ ಅಸಭ್ಯ ವರ್ತನೆ ಮಾಡಿದ್ದು, ಈ ಕುರಿತು ಟ್ವೀಟರ್ ಮೂಲಕ  ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬಾಹುಬಲಿ ಪ್ರಭಾಸ್ ಗೆ ಕೊನೆಗೂ ಕೂಡಿ ಬಂತು ಕಂಕಣ ಭಾಗ್ಯ: ಹುಡುಗಿ ಯಾರು?

    ಇಂಡಿಗೋ ಸಿಬ್ಬಂದಿ ಇಂದು ವಿಮಾನದ ಒಳಗೆ ಕೆಟ್ಟದಾಗಿ ನಡೆದುಕೊಂಡರು. ಯಾವುದೇ ಕಾರಣವಿಲ್ಲದೇ ನಮ್ಮ ಬಳಿ ಕೆಟ್ಟದಾಗಿ ಮಾತನಾಡಿದ್ದರು. ಅವರ ಜೋರು ಧ್ವನಿ ಬೆದರಿಕೆ ಹಾಕುವಂತೆ ಇತ್ತು. ಸಾಮಾನ್ಯವಾಗಿ ಇಂತಹ ವಿಚಾರದ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ ಆ ವ್ಯಕ್ತಿಯ ವರ್ತನೆ ನಿಜಕ್ಕೂ ಘಾಸಿಯಾಯಿತು ಎಂದು ಟ್ವೀಟ್ ಮೂಲಕ ತಮ್ಮ ನೋವನ್ನು ಪೂಜಾ ಹೇಳಿಕೊಂಡಿದ್ದಾರೆ.

    ಸಿಬ್ಬಂದಿಯ ಅಸಭ್ಯ ವರ್ತನೆಗೆ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. ಪ್ರಯಾಣಿಕರನ್ನು ಹೇಗೆ ಮಾತನಾಡಿಸಬೇಕು ಅಂತಾ ನಿಮ್ಮ ಸಿಬ್ಬಂದಿಗೆ ತಿಳಿಸಿಕೊಡಿ ಅಂತಾ ಫ್ಯಾನ್ಸ್ ಫುಲ್ ಗರಂ ಆಗಿದ್ದಾರೆ.

  • ಪೂಜಾ ಹೆಗ್ಡೆಗೆ ಸ್ಪೆಷಲ್‌ ಆಗಿ ವೆಲ್‌ಕಮ್‌ ಮಾಡಿದ ‌ʻಜನ ಗಣ ಮನʼ ಚಿತ್ರತಂಡ

    ಪೂಜಾ ಹೆಗ್ಡೆಗೆ ಸ್ಪೆಷಲ್‌ ಆಗಿ ವೆಲ್‌ಕಮ್‌ ಮಾಡಿದ ‌ʻಜನ ಗಣ ಮನʼ ಚಿತ್ರತಂಡ

    ಪುರಿ ಜಗನ್ನಾಥ್ ಮತ್ತು ವಿಜಯ್ ದೇವರಕೊಂಡ ಕಾಂಬಿನೇಷನ್‌ನ ಹೊಸ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಜೊತೆ ಡ್ಯುಯೇಟ್ ಹಾಡಲು ಮಂಗಳೂರು ಬೆಡಗಿ ಪೂಜಾ ಹೆಗ್ಡೆ ಸಜ್ಜಾಗಿದ್ದಾರೆ.. ಪೂಜಾ ಸೆಟ್ ಬರುತ್ತಿದ್ದಂತೆ ಸಖತ್ ಆಗಿ ವೆಲ್‌ಕಮ್ ಮಾಡಿದ್ದಾರೆ. ಈ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ.

    ಟಾಲಿವುಡ್ ನಿರ್ದೇಶಕ ಪುರಿ ಜಗನ್ನಾಥ್ ಮತ್ತು ವಿಜಯ್ ದೇವರಕೊಂಡ ಕಾಂಬಿನೇಶನ್‌ನ ಎರಡನೇ ಮೆಗಾ ಪ್ರಾಜೆಕ್ಟ್ `ಜನ ಗಣ ಮನ’ ಚಿತ್ರಕ್ಕೆ ತುಳುನಾಡಿನ ಕುವರಿ ಪೂಜಾ ಹೆಗ್ಡೆ ಈ ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಲಿದ್ದಾರೆ. ಈಗಾಗಲೇ ಶೂಟಿಂಗ್ ಸಕಲ ತಯಾರಿ ನಡೆದಿದ್ದು, ಪೂಜಾ ಹೆಗ್ಡೆ ಸೆಟ್‌ಗೆ ಕಾಲಿಡುತ್ತಿದ್ದಂತೆ ನಿರ್ಮಾಪಕಿ ಚಾರ್ಮಿ ಕೌರ್ ಸ್ಪೆಷಲ್ ಆಗಿ ವೆಲ್‌ಕಮ್ ಮಾಡಿದ್ದಾರೆ. ಇದನ್ನೂ ಓದಿ: Exclusive – ವಾಣಿಜ್ಯ ಮಂಡಳಿಯಲ್ಲಿ ಕೋಟ್ಯಂತರ ದುರುಪಯೋಗ? : ರಾಜೇಂದ್ರ ಸಿಂಗ್ ಬಾಬು ಹೇಳಿದ್ದೇನು?

     

    View this post on Instagram

     

    A post shared by Pooja Hegde (@hegdepooja)

    `ಜನ ಗಣ ಮನ’ ಚಿತ್ರಕ್ಕೆ ಪೂಜಾ ಸಾಥ್ ನೀಡಿದ್ದು, ವಿಜಯ್ ಸದ್ಯ ಸಮಂತಾ ಜತೆಗಿನ `ಖುಷಿ’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯದಲ್ಲಿ ಚಿತ್ರತಂಡವನ್ನ ಸೇರಿಕೊಳ್ಳಲಿದ್ದಾರೆ. ಇದೊಂದು ಆಕ್ಷನ್ ಕಥೆಯಾಗಿದ್ದು, ಈ ಸಿನಿಮಾದ ಶೂಟಿಂಗ್ ಮುಂಬೈನಲ್ಲಿ ನಡೆಯಲಿದೆ. ಪೂಜಾ ಹೆಗ್ಡೆ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ. ಈ ಸಿನಿಮಾವನ್ನು ಐದು ಭಾಷೆಯಲ್ಲಿ ರಿಲೀಸ್ ಮಾಡಲು ತಯಾರಿ ನಡೆಸಲಾಗುತ್ತಿದೆ.

    vijaydevarakonda

    ಮೊದಲ ಬಾರಿಗೆ ಒಟ್ಟಿಗೆ ತೆರೆಹಂಚಿಕೊಳ್ತಿರೋ ವಿಜಯ್ ಮತ್ತು ಪೂಜಾ ಹೆಗ್ಗೆ ಅವರ ಜೋಡಿ ಬೆಳ್ಳಿತೆರೆಯಲ್ಲಿ ಹೇಗೆ ಕಮಾಲ್ ಮಾಡಲಿದೆ ಎಂದು ಕಾದುನೋಡಬೇಕಿದೆ.

  • ವಿಜಯ್ ದೇವರಕೊಂಡ ಚಿತ್ರಕ್ಕೆ ಜೋಡಿಯಾಗಿ ಕರಾವಳಿ ನಟಿ ಫಿಕ್ಸ್

    ವಿಜಯ್ ದೇವರಕೊಂಡ ಚಿತ್ರಕ್ಕೆ ಜೋಡಿಯಾಗಿ ಕರಾವಳಿ ನಟಿ ಫಿಕ್ಸ್

    ಪುರಿ ಜಗನ್ನಾಥ್ ಮತ್ತು ವಿಜಯ್ ದೇವರಕೊಂಡ ಕಾಂಬಿನೇಷನ್‌ನ ಹೊಸ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಜೊತೆ ಡ್ಯುಯೇಟ್ ಹಾಡಲು ಮಂಗಳೂರು ಬೆಡಗಿ ಪೂಜಾ ಹೆಗ್ಡೆ ರೆಡಿಯಾಗಿದ್ದಾರೆ.

    vijaydevarakonda

    ಟಾಲಿವುಡ್ ನಿರ್ದೇಶಕ ಪುರಿ ಜಗನ್ನಾಥ್ ಹಾಗೂ `ಅರ್ಜುನ್ ರೆಡ್ಡಿ’ ಸಿನಿಮಾ ಖ್ಯಾತಿಯ ವಿಜಯ್ ದೇವರಕೊಂಡ ಕಾಂಬಿನೇಶನ್‌ನ ಮತ್ತೊಂದು ಮೆಗಾ ಪ್ರಾಜೆಕ್ಟ್‌ಗೆ ನಾಯಕಿಯ ಆಯ್ಕೆ ಆಗಿದೆ. ತುಳುನಾಡಿನ ಕುವರಿ ಪೂಜಾ ಹೆಗ್ಡೆ ಈ ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಲಿದ್ದಾರೆ.ಇದನ್ನೂ ಓದಿ:ಕಿಚ್ಚ ಸುದೀಪ್ ಅವರನ್ನ ಕಾಪಿ ಹೊಡೆದ ಸ್ಟಾರ್ ನಟ ಕಮಲ್ ಹಾಸನ್

    ಇದೊಂದು ಆಕ್ಷನ್ ಕಥೆಯಾಗಿದ್ದು, ಜೂನ್ ಮೊದಲ ವಾರದಲ್ಲಿಯೇ ಈ ಸಿನಿಮಾದ ಶೂಟಿಂಗ್ ಮುಂಬೈನಲ್ಲಿ ನಡೆಯಲಿದೆ. ಪೂಜಾ ಹೆಗ್ಡೆ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ. ಈ ಸಿನಿಮಾವನ್ನು ಐದು ಭಾಷೆಯಲ್ಲಿ ರಿಲೀಸ್ ಮಾಡಲು ತಯಾರಿ ನಡೆಸಲಾಗುತ್ತಿದೆ.

    ಪೂಜಾ ಹೆಗ್ಡೆ ಅವರಿಗೆ ಸಾಲು ಸಾಲು ಸಿನಿಮಾ ಸೋತಿದೆ. ಗೆಲುವಿಗಾಗಿ ಕಾಯುತ್ತಿರುವ ಪೂಜಾ ಈ ಚಿತ್ರದಲ್ಲಿಯಾದರೂ ಅವರು ಗೆಲುವು ಸಿಗಲಿದೆಯೇ ಎಂಬ ನಿರೀಕ್ಷೆಯಲ್ಲಿದ್ದಾರೆ. ಪದೇ ಪದೇ ಸೋಲು ಸಿಕ್ಕಿದ್ದಕ್ಕೆ ಪೂಜಾ ಹೆಗ್ಡೆ ಅವರಿಗೆ ಐರನ್ ಲೆಗ್ ಎಂದು ಕೆಲವರು ಟ್ರೋಲ್ ಮಾಡಿದ್ದಾರೆ. ಮುಂಬರುವ ಚಿತ್ರದ ಮೂಲಕ ಪೂಜಾ ಹೆಗ್ಡೆ ಅದೃಷ್ಟ ಖುಲಾಯಿಸುತ್ತಾ ಅಂತಾ ಕಾದು ನೋಡಬೇಕಿದೆ.

  • ಐರೆನ್ ಲೆಗ್ ಅಂದವರಿಗೆ ಪೂಜಾ ತಿರುಗೇಟು:ಟೀಕಿಸಿದವರಿಗೆ ಪೂಜಾ ಹೆಗ್ಡೆ ಕ್ಲಾಸ್

    ಐರೆನ್ ಲೆಗ್ ಅಂದವರಿಗೆ ಪೂಜಾ ತಿರುಗೇಟು:ಟೀಕಿಸಿದವರಿಗೆ ಪೂಜಾ ಹೆಗ್ಡೆ ಕ್ಲಾಸ್

    ಕ್ಷಿಣ ಭಾರತದ ಸ್ಟಾರ್ ನಟಿ ಪೂಜಾ ಹೆಗ್ಡೆ ಇದೀಗ ರೆಬೆಲ್ ಆಗಿದ್ದಾರೆ. ಇತ್ತೀಚೆಗಷ್ಟೇ ಪೂಜಾ ಹಗ್ಡೆ ನಟನೆಯ ಸಾಲು ಸಾಲು ಸಿನಿಮಾಗಳ ಸೋಲಿಗೆ ಟೀಕಿಸಿದವರಿಗೆ ಪೂಜಾ ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಐರೆನ್ ಲೆಗ್ ಅಂತಾ ಕರೆದವರಿಗೆ ಬೊಟ್ಟಬೊಮ್ಮ ಸುಂದರಿ ಪೂಜಾ ತಿರುಗೇಟು ಕೊಟ್ಟಿದ್ದಾರೆ.

    ಸೌತ್ ಸಿನಿಮಾ ರಂಗದ ಬ್ಯೂಟಿ ಜತೆ ಟ್ಯಾಲೆಂಟ್‌ಯಿರೋ ನಾಯಕಿ ಪೂಜಾ ಹೆಗ್ಡೆ ಇದೀಗ ಫುಲ್ ಗರಂ ಆಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಆರು ಸಿನಿಮಾಗಳು ಹಿಟ್ ಕೊಟ್ಟಿದ್ದ ನಟಿ ಪೂಜಾ ನಟಿಸಿರುವ ಇತ್ತೀಚಿನ ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಕಲೆಕ್ಷನ್ ಮಾಡೋದ್ರಲ್ಲಿ ವಿಫಲವಾಗಿತ್ತು. ರಾಧೆ ಶ್ಯಾಮ್, ಬೀಸ್ಟ್, ಆಚಾರ್ಯ ಸೋಲಿಗೆ ಈ ನಟಿನೇ ಕಾರಣ, ಐರೆನ್ ಲೆಗ್ ನಟಿ ಈಕೆ ಅಂತಾ ಅಂದವರಿಗೆ ಪೂಜಾ ಹೆಗ್ಡೆ ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.

    ಪೂಜಾ ನಟಿಸಿರುವ ಸಾಲು ಸಾಲು ಚಿತ್ರಗಳನ್ನು ಹಿಟ್ ಕೊಟ್ಟಾಗ ಈ ನಟಿಯನ್ನ ಪೂಜಿಸಿದ ಜನರೇ ಇಂದು ಟೀಕಿಸ್ತಿದ್ದಾರೆ. ಈಕೆಯನ್ನ ಮತ್ತೆ ಸಿನಿಮಾಗೆ ಹಾಕಿಕೊಂಡರೆ ಆ ಸಿನಿಮಾ ಫ್ಲಾಪ್ ಆಗೋದು ಗ್ಯಾರೆಂಟ್ ಐರೆನ್‌ಲೆಗ್ ನಾಯಕಿ ಅಂತಾ ಹೇಳಿದವರಿಗೆ ಪೂಜಾ ಖಡಕ್ ರಿಯಾಕ್ಷನ್ ಕೊಟ್ಟಿದ್ದಾರೆ. ಇದನ್ನೂ ಓದಿ: ಪ್ರಶಾಂತ್ ನೀಲ್ – ಜ್ಯೂ.ಎನ್‌ಟಿಆರ್ ಚಿತ್ರದಲ್ಲಿ ಸೂಪರ್ ಸ್ಟಾರ್ ಕಮಲ್ ಹಾಸನ್..!

    ಸೋಲು ಮತ್ತು ಗೆಲವು ಜೀವನದ ಒಂದು ಭಾಗ. ಬ್ಯಾಕ್ ಟು ಬ್ಯಾಕ್ 6 ಸಿನಿಮಾಗಳನ್ನು ಹಿಟ್ ಕೊಟ್ಟಿದ್ದೇನೆ. ಈ ಬಗ್ಗೆ ನನಗೆ ಖುಷಿಯಿದೆ. ಸೋಲು ಮತ್ತು ಗೆಲುವಿನ ಸಿನಿಮಾಗಳನ್ನು ನಾನು ಸಮಾನವಾಗಿ ಸ್ವೀಕರಿಸುತ್ತೀನಿ. ನಟನೆಗೆ ಅವಕಾಶವಿರುವ ಕಾರಣ ರಾಧೆ ಶ್ಯಾಮ್, ಬೀಸ್ಟ್, ಆಚಾರ್ಯ ಚಿತ್ರವನ್ನು ಒಪ್ಪಿಕೊಂಡೆ. ನಮ್ಮ ನಟನೆಯನ್ನ ನೋಡಿ ಮುಂದಿನ ಚಿತ್ರವನ್ನ ಆಫರ್ ಮಾಡುತ್ತಾರೆ. ಎಂಡ್ ಆಫ್ ದಿ ಡೇ ನಾವು ಎಂಟರ್‌ಟೈನರ್ಸ್..ಜನರ ಮುಖದಲ್ಲಿ ನಗು ಅರಳಿಸೋದಷ್ಟೇ ನಮ್ಮ ಕರ್ತವ್ಯ ಎಂದು ಟೀಕಿಸಿದವರಿಗೆ ಪೂಜಾ ಸ್ಟ್ರಾಂಗ್ ಆಗಿ ಉತ್ತರಿಸಿದ್ದಾರೆ.