Tag: ಪುಣ್ಯಾತ್ಗಿತ್ತೀರು

  • ಪುಣ್ಯಾತ್ ಗಿತ್ತೀರ ಹಾಡು ಪಾಡು!

    ಪುಣ್ಯಾತ್ ಗಿತ್ತೀರ ಹಾಡು ಪಾಡು!

    ಬೆಂಗಳೂರು: ಸರಿಸುಮಾರು ಎರಡು ವರ್ಷಗಳ ಹಿಂದೆ ತೆರೆಗೆ ಬಂದಿದ್ದ ಪಾಸಿಬಲ್ ಸಿನಿಮಾವನ್ನು ನಿರ್ದೇಶಿಸಿದ್ದವರು ರಾಜ್ ಬಿ.ಎನ್. ಮತ್ತೆ ಅವರದ್ದೇ ನಿರ್ದೇಶನದಲ್ಲಿ ಮೂಡಿಬಂದಿರುವ ಸಿನಿಮಾ `ಪುಣ್ಯಾತ್‍ಗಿತ್ತೀರು’. ಬೇರೆ ಬೇರೆ ಬಗೆಯ ವ್ಯಕ್ತಿತ್ವದ ನಾಲ್ವರು ಹುಡುಗಿಯರ ಬದುಕಿನ ಶೈಲಿಯನ್ನೇ ಕಥೆಯನ್ನಾಗಿಸಿರುವ ಈ ಚಿತ್ರದಲ್ಲಿ ಮಮತಾ ರಾವುತ್, ದಿವ್ಯಶ್ರೀ, ಸಂಭ್ರಮ ಹಾಗೂ ಐಶ್ವರ್ಯ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

    ಈಗಾಗಲೇ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಸಂಪೂರ್ಣಗೊಳಿಸಿಕೊಂಡಿರುವ ಚಿತ್ರತಂಡ ಈಗ ಸಿನಿಮಾವನ್ನು ಬಿಡುಗಡೆಯ ಹಂತಕ್ಕೆ ತಂದಿದೆ. ಇತ್ತೀಚೆಗೆ ಈ ಚಿತ್ರದ ಹಾಡುಗಳ ಧ್ವನಿಸುರುಳಿ ಬಿಡುಗಡೆ ಸಮಾರಂಭ ನೆರವೇರಿತು. ಪುಣ್ಯಾತ್‍ಗಿತ್ತೀರು ಚಿತ್ರದಲ್ಲಿ ರಾಮಾನುಜಂ ಸಂಗೀತ ಸಂಯೋಜಿಸಿರುವ ನಾಲ್ಕು ಹಾಡುಗಳಿವೆ.

    ಸಾಮಾನ್ಯವಾಗಿ ಘಟುವಾಣಿ ಥರದ, ಧೈರ್ಯವಂತ ಹೆಂಗಸರನ್ನು ಪುಣ್ಯಾತ್ ಗಿತ್ತೀರು ಎಂದು ಕರೆಯುತ್ತಾರೆ. ಈ ಚಿತ್ರದಲ್ಲಿ ಕೂಡ ಅಂಥಾ ಡೇರ್ ಕ್ಯಾರೆಕ್ಟರ್ ಇರುವ ನಾಲ್ವರು ಹುಡುಗಿಯರ ಕಥೆ ಇರುವುದರಿಂದ ಚಿತ್ರಕ್ಕೆ ಈ ಹೆಸರಿಟ್ಟಿರುವುದಾಗಿ ನಿರ್ದೇಶಕ ರಾಜ್ ತಿಳಿಸಿದ್ದಾರೆ.

    ಈ ಚಿತ್ರದ ನಾಲ್ವರು ಹುಡುಗಿಯರು ಮಾಸ್ ಲುಕ್‍ನಲ್ಲಿ ಕಾಣಿಸಿಕೊಂಡಿರೆ. ಪಿಜಿಯಲ್ಲಿ ಉಳಿದುಕೊಂಡಿದ್ದ ನಾಲ್ವರು ಅನಾಥ ಹುಡುಗಿಯರು ಸದಾ ಜನರಿಗೆ ವಂಚನೆ ಮಾಡುತ್ತಾ ಜೀವನ ಸಾಗಿಸುತ್ತಿರುತ್ತಾರೆ. ಒಂದು ಘಟನೆ ನಡೆದಾಗ, ಅವರ ಗುಣದಲ್ಲಿ ಬದಲಾವಣೆಯಾಗಿ ಸಮಾಜಕ್ಕೆ ಒಳ್ಳೇ ಕೆಲಸ ಮಾಡುವಲ್ಲಿ ಸಫಲರಾಗುತ್ತಾರೆ. ಮೊದಲ ಭಾಗದಲ್ಲಿ ವೀಕ್ಷಕರಿಂದ ಬೈಸಿಕೊಳ್ಳುವ ಪಾತ್ರಗಳಿದ್ದು, ವಿರಾಮದ ನಂತರ ಎಲ್ಲರಿಗೂ ಅಚ್ಚುಮೆಚ್ಚಿನ ಮಹಿಳೆಯರಾಗುತ್ತಾರೆ.

    ಬೆಂಗಳೂರು, ಬಳ್ಳಾರಿ, ಕನಕಪುರ ಮುಂತಾದ ಕಡೆಗಳಲ್ಲಿ ಮೂವತ್ತು ದಿನಗಳ ಕಾಲ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ನಿರ್ದೇಶಕ ರಾಜ್. ಬಿ.ಎನ್. ಅವರೇ ಚಿತ್ರದ ಕತೆ ಬರೆದು ನಿರ್ದೇಶನ ಮಾಡಿರೆ. ಮಮತಾ ರಾವುತ್ ಈ ಚಿತ್ರದಲ್ಲಿ ಆರ್ಟಿಸ್ಟ್ ಆರತಿ ಆಗಿ ಬಣ್ಣಹಚ್ಚಿದ್ದರೆ. ಹಿರಿಯ ನಟಿಯರ ಅಭಿನಯವನ್ನು ತೋರಿಸುವ ಪ್ರಯತ್ನ ಮಾಡಿದ್ದರೆ. ಅವಕಾಶಗಳು ಸಿಗದೆ ಗ ಬೇರೆ ಥರದ ಕೆಲಸ ಮಾಡಲು ನಿರ್ಧರಿಸಿದಾಗ ಇವರ ಪರಿಚಯವಾಗುತ್ತದೆ. ಮೀಟ್ರು ಮಂಜುಳ ಹೆಸರಿನಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ದಿವ್ಯಶ್ರೀ ಅಭಿನಯಿಸಿದ್ದಾರೆ. ಬಾಯ್ಬಡ್ಕಿಯಾಗಿ ಹೆಸರು ಮಾಡಿರುವ ಐಶ್ವರ್ಯ ಮತ್ತು ಸದಾ ಸುಳ್ಳನ್ನು ಹೇಳುವ ಸಂಭ್ರಮ ಕೂಡ ಚಿತ್ರದಲ್ಲಿದ್ದು, ಈಕೆಯ ಸುಳ್ಳು ಕತೆಗೆ ತಿರುವು ಕೊಡುತ್ತದೆ, ಹಾಗೂ ಕೆಲವೊಮ್ಮೆ ಒಳ್ಳೆಯದೇ ಆಗುತ್ತದಂತೆ.

    ಚಿತ್ರದ ಉಳಿದ ತಾರಾಬಳಗದಲ್ಲಿ ಶೋಭರಾಜ, ಜಡೆನಾಗನ ಪಾತ್ರದಲ್ಲಿ ಟಗರು ಕಾಕ್ರೋಚ್ ಕುರಿರಂಗ, ಕಾಮಿಡಿ ಕಿಲಾಡಿಗಳು ಗೋವಿಂದೇಗೌಡ ಅಭಿನಯಿಸಿದ್ದರೆ. ಚಿತ್ರದ ನಿರ್ಮಾಪಕ ಸತ್ಯನಾರಾಯಣ ಮನ್ನೆ ಮಾತನಾಡಿ ಒಂದು ಒಳ್ಳೆಯ ಚಿತ್ರವನ್ನು ನಿರ್ಮಾಣ ಮಾಡಿದ ತೃಪ್ತಿ ನನಗೆ ಇದೆ. ನಮ್ಮ ಚಿತ್ರ ಎಲ್ಲಾ ವರ್ಗದ ಜನರಿಗೂ, ಎಲ್ಲರಿಗೂ ಇಷ್ಟವಾಗಲಿದೆ ಎಂದು ಹೇಳಿದರು.

  • ತಮ್ಮ ಹಾಡನ್ನು ತಾವೇ ಲಾಂಚ್ ಮಾಡಿದ ಪುಣ್ಯಾತ್ಗಿತ್ತೀರು!

    ತಮ್ಮ ಹಾಡನ್ನು ತಾವೇ ಲಾಂಚ್ ಮಾಡಿದ ಪುಣ್ಯಾತ್ಗಿತ್ತೀರು!

    ತ್ಯನಾರಾಯಣ ಮನ್ನೆ ನಿರ್ಮಾಣ ಮಾಡಿರೋ ಪುಣ್ಯಾತ್ಗಿತ್ತೀರು ಚಿತ್ರದ ಆಡಿಯೋ ಬಿಡುಗಡೆಯಾಗಿದೆ. ರಾಮಾನುಜಂ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರೋ ನಾಲ್ಕು ಹಾಡುಗಳೂ ಇದೀಗ ಮೆಲ್ಲಗೆ ಪ್ರೇಕ್ಷಕರನ್ನು ಆವರಿಸಿಕೊಳ್ಳುತ್ತಿವೆ. ಡಾ. ವಿ ನಾಗೇಂದ್ರಪ್ರಸಾದ್ ಬರೆದಿರೋ ಟೈಟಲ್ ಸಾಂಗ್ ಅಂತೂ ಆರಂಭಿಕವಾಗಿಯೇ ಹಿಟ್ ಆಗೋ ಸೂಚನೆಗಳನ್ನ ರವಾನಿಸಿದೆ.

    ಪುಣ್ಯಾತ್ಗಿತ್ತೀರು ಚಿತ್ರದ ಆಡಿಯೋ ಸಮಾರಂಭವನ್ನು ಅರ್ಥಪೂರ್ಣವಾಗಿ, ಸಾರ್ಥಕವಾಗಿ ಮಾಡಲು ಚಿತ್ರತಂಡ ಬಹು ಹಿಂದಿನಿಂದಲೇ ಪ್ರಯತ್ನ ಶುರು ಮಾಡಿತ್ತು. ಈ ಚಿತ್ರದಲ್ಲಿ ನಾಲ್ವರು ಹುಡುಗಿಯರು ಕೂಡಾ ಅನಾಥರೇ. ಹಾಗಿರೋದರಿಂದ ಅನಾಥ ಹೆಣ್ಣುಮಗಳೊಬ್ಬಳಿಂದ ಆಡಿಯೋ ರಿಲೀಸ್ ಕಾರ್ಯಕ್ರಮ ಮಾಡಿಸಲೂ ಯೋಜನೆ ಹಾಕಿಕೊಳ್ಳಲಾಗಿತ್ತು. ಅನಾಥಾಶ್ರಮವೊಂದರಿಂದ ಓರ್ವ ಹೆಣ್ಣು ಮಗುವನ್ನು ದತ್ತು ಪಡೆದುಕೊಂಡು ಅದರ ಶೈಕ್ಷಣಿಕ ಜವಾಬ್ದಾರಿಯನ್ನೂ ಹೊತ್ತುಕೊಳ್ಳಲಾಗಿತ್ತು.

    ಆದರೆ ಇತ್ತೀಚೆಗೆ ಆ ಮಗು ಅನಾರೋಗ್ಯಕ್ಕೀಡಾಗಿತ್ತಂತೆ. ಇನ್ನೇನು ಬಿಡುಗಡೆಯ ಕ್ಷಣಗಳು ಹತ್ತಿರದಲ್ಲಿರೋದರಿಂದ ಈ ಚಿತ್ರದ ನಾಲ್ವರು ನಾಯಕಿಯರೇ ಆಡಿಯೋ ರಿಲೀಸ್ ಮಾಡಿದ್ದಾರೆ. ರಾಮಾನುಜಂ ಸಂಗೀತ ನೀಡಿರೋ ನಾಲಕ್ಕು ಹಾಡುಗಳು ಇಲ್ಲಿವೆ. ಪುಣ್ಯಾತ್ಗಿತ್ತೀರು ಎಂಬ ಟೈಟಲ್ ಸಾಂಗನ್ನು ನಾಗೇಂದ್ರ ಪ್ರಸಾದ್ ಬರೆದಿದ್ದಾರೆ. ರಾಜಣ್ಣನ ಬೆನ್ನ ಹಿಂದೆ ಎಂಬ ಹಾಡನ್ನು ನಿರ್ದೇಶಕ ರಾಜ್ ಬಿ ಎನ್ ಅವರೇ ಬರೆದಿದ್ದಾರೆ. ಇನ್ನು ಸ್ವರಾಜ್ ಅಣ್ಣಮ್ಮ ಕಣ್ಣು ಬಿಟ್ಟು ಎಂಬ ಟಪ್ಪಾಂಗುಚ್ಚಿ ಹಾಡು ಹೊಸೆದಿದ್ದಾರೆ. ಕುಣಿದಿದೆ ಮನವು ಖುಷಿಯಲ್ಲಿ ಎಂಬ ಮೆಲೋಡಿ ಹಾಡಿಗೆ ಮೋಹನ್ ಸಾಹಿತ್ಯ ನೀಡಿದ್ದಾರೆ.

    ಇದು ಯಾವ ದಿಕ್ಕೂ ಇಲ್ಲದೆ ಪಿಜಿಯಲ್ಲಿ ಬದುಕುತ್ತಾ ಥರ ಥರದ ಮೋಸವನ್ನೇ ಬದುಕಾಗಿಸಿಕೊಂಡ ಬಜಾರಿಯರ ಕಥೆ. ಫಸ್ಟ್ ಹಾಫ್‍ನ ತುಂಬಾ ಇವರ ಬಜಾರಿ ವೃತ್ತಾಂತವೇ ಸಾಗುತ್ತೆ. ಅದು ಯಾವ ಪರಿಯದ್ದೆಂದರೆ, ಪ್ರೇಕ್ಷಕರೂ ಪುಣ್ಯಾತ್ಗಿತ್ತೀರಿಗೆ ಬೈದುಕೊಳ್ಳುತ್ತಾರೆ. ಆದರೆ ಮೋಸ ಮಾಡಿಯೇ ಬದುಕೋ ಈ ಬಜಾರಿಯರಿಗೆ ಕಡೆಗೂ ಜ್ಞಾನೋದಯವಾಗಿ ಸೆಕೆಂಡ್ ಹಾಫಲ್ಲಿ ಎಲ್ಲರ ಮನಸನ್ನೂ ಸೆಳೆಯುವ ಎಮೋಷನಲ್ ವೃತ್ತಾಂತ ತೆರೆದುಕೊಳ್ಳುತ್ತೆ. ಒಟಾರೆಯಾಗಿ ಈ ಚಿತ್ರ ಎರಡು ಘಂಟೆಗಳ ಕಾಲ ಪ್ರೇಕ್ಷಕರನ್ನು ಕದಲದಂತೆ ಹಿಡಿದಿಡುತ್ತೆ. ಒಂದು ಸಂದೇಶವನ್ನು ರಚವಾನಿಸುತ್ತೆ.

    ಇನ್ನು ನಿರ್ಮಾಪಕರಾದ ಸತ್ಯನಾರಾಯಣ ಮನ್ನೆಯವರಿಗೆ ಇದು ಮೊದಲ ಅನುಭವ. ಉದ್ಯೋಗವನ್ನರಸಿ ಈಗ್ಗೆ ಇಪ್ಪತ್ತೊಂದು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಅವರೀಗ ಸ್ವಂತದ ಬ್ಯುಸಿನೆಸ್ ನಡೆಸುತ್ತಿದ್ದಾರಂತೆ. ಆದರೆ ಸಿನಿಮಾ ನಿರ್ಮಾಣ ಮಾಡಬೇಕೆಂಬುದು ಅವರ ಹಳೇಯ ಕನಸಾಗಿತ್ತು. ಹಾಗೆಯೇ ಚಿತ್ರವನ್ನು ಮಾಡಿ ಮುಗಿಸಿದ ಖುಷಿಯನ್ನೂ ಅವರು ಹಂಚಿಕೊಂಡಿದ್ದಾರೆ.

    ಪುಣ್ಯಾತ್ಗಿತ್ತೀರು ಈಗ ಕೆಲಸ ಕಾರ್ಯಗಳನ್ನೆಲ್ಲ ಮುಗಿಸಿಕೊಂಡು ಥೇಟರಿನತ್ತ ಮುಖ ಮಾಡಿದ್ದಾರೆ. ಇದೇ ಏಪ್ರಿಲ್ ನಲ್ಲಿ ಈ ಚಿತ್ರವನ್ನು ತೆರೆಗಾಣಿಸಲು ತಯಾರಿ ಆರಂಭಿಸಲಾಗಿದೆ.