Tag: ಪುಣೆ

  • 2 ಅತ್ಯುತ್ತಮ ಜೊತೆಯಾಟ, ಇಂಗ್ಲೆಂಡಿಗೆ 6 ವಿಕೆಟ್‌ಗಳ ಭರ್ಜರಿ ಜಯ – ಭಾನುವಾರ ಫೈನಲ್‌

    2 ಅತ್ಯುತ್ತಮ ಜೊತೆಯಾಟ, ಇಂಗ್ಲೆಂಡಿಗೆ 6 ವಿಕೆಟ್‌ಗಳ ಭರ್ಜರಿ ಜಯ – ಭಾನುವಾರ ಫೈನಲ್‌

    ಪುಣೆ: ಐಸಿಸಿ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಇಂಗ್ಲೆಂಡ್‌ ಇಂದು ಅತ್ಯುತ್ತಮ ಆಟವನ್ನು ಪ್ರದರ್ಶಿಸಿ ಭಾರತದ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿ 1-1 ರಲ್ಲಿ ಸಮಬಲಗೊಂಡಿದೆ.

    ಗೆಲ್ಲಲು 337 ರನ್‌ಗಳ ಕಠಿಣ ಗುರಿಯನ್ನು ಪಡೆದ ಇಂಗ್ಲೆಂಡ್‌ ಇನ್ನೂ 39 ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟ್‌ ನಷ್ಟಕ್ಕೆ 337 ರನ್‌ ಹೊಡೆಯುವ ಮೂಲಕ ಗೆಲುವಿನ ನಗೆ ಬೀರಿತು.

    ಎರಡು ಅತ್ಯುತ್ತಮ ಜೊತೆಯಾಟದಿಂದ ಇಂಗ್ಲೆಂಡ್‌ ತಂಡ ಇಂದಿನ ಪಂದ್ಯವನ್ನು ಗೆದ್ದುಕೊಂಡಿದೆ. ಮೊದಲ ವಿಕೆಟಿಗೆ ಜೇಸನ್‌ ರಾಯ್‌ ಮತ್ತು ಜಾನಿ ಬೈರ್‌ಸ್ಟೋ 102 ಎಸೆತಗಳಿಗೆ 110 ರನ್‌ ಜೊತೆಯಾಟವಾಡಿದರೆ ಎರಡನೇ ವಿಕೆಟಿಗೆ ಬೈರ್‌ಸ್ಟೋ ಮತ್ತು ಬೆನ್‌ ಸ್ಟೋಕ್ಸ್‌  117 ಎಸೆತಗಳಿಗೆ 175 ರನ್‌ ಜೊತೆಯಾಟವಾಡಿದರು. ಕೊನೆಯಲ್ಲಿ ಮುರಿಯದ 5ನೇ ವಿಕೆಟಿಗೆ ಡೇವಿಡ್‌ ಮಲಾನ್‌ ಮತ್ತು ಲಿವಿಂಗ್‌ಸ್ಟೋನ್‌ ಅವರು 43 ಎಸೆತಗಳಲ್ಲಿ 50 ರನ್‌ ಜೊತೆಯಾಟವಾಡಿ ಇಂಗ್ಲೆಂಡ್‌ ತಂಡಕ್ಕೆ ಗೆಲುವು ತಂದುಕೊಟ್ಟರು.

    ಜೇಸನ್‌ ರಾಯ್‌ 55 ರನ್‌( 52 ಎಸೆತ, 7 ಬೌಂಡರಿ, 1 ಸಿಕ್ಸರ್‌) ಜಾನಿ ಬೈರ್‌ಸ್ಟೋ 124 ರನ್‌(112 ಎಸೆತ, 11 ಬೌಂಡರಿ, 7 ಸಿಕ್ಸರ್‌), ಬೆನ್‌ ಸ್ಟೋಕ್ಸ್‌ 99 ರನ್‌( 52 ಎಸೆತ, 4 ಬೌಂಡರಿ, 10 ಸಿಕ್ಸರ್‌) ಡೇವಿಡ್‌ ಮಲಾನ್‌ ಔಟಾಗದೇ 16 ರನ್‌, ಲಿಯಾಮ್‌ ಲಿವಿಂಗ್‌ಸ್ಟೋನ್‌ ಔಟಾಗದೇ 27 ರನ್‌ ಹೊಡೆದರು.

    ಪ್ರಸಿದ್ದ್‌ ಕೃಷ್ಣ 2 ವಿಕೆಟ್‌, ಭುವನೇಶ್ವರ್‌ ಕುಮಾರ್‌ 1 ವಿಕೆಟ್‌ ಕಿತ್ತರು. ಕುಲದೀಪ್‌ ಯಾದವ್‌ 84 ರನ್‌ ನೀಡಿದರೆ,  ಕೃನಾಲ್‌ ಪಾಂಡ್ಯ 6 ಓವರ್‌ ಎಸೆದು 72 ರನ್‌ ನೀಡಿದರು. ಶಾರ್ದೂಲ್‌ ಠಾಕೂರ್‌ 7.3 ಓವರ್‌ ಎಸೆದು 54 ರನ್‌ ನೀಡಿ ದುಬಾರಿಯಾದರು.

    ಆರಂಭಿಕ ಆಟಗಾರನಾಗಿ ಆಗಮಿಸಿ ಶತಕ ಸಿಡಿಸಿದ ಜಾನಿ ಬೈರ್‌ಸ್ಟೋ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತು. ಮಾರ್ಚ್‌ 28 ರಂದು ಪುಣೆ ಮೈದಾನದಲ್ಲೇ ಕೊನೆಯ ಫೈನಲ್‌ ಪಂದ್ಯ ನಡೆಯಲಿದೆ.

  • ಗ್ರೇಮ್ ಸ್ಮಿತ್ ದಾಖಲೆ ಮುರಿದ ಕೊಹ್ಲಿ

    ಗ್ರೇಮ್ ಸ್ಮಿತ್ ದಾಖಲೆ ಮುರಿದ ಕೊಹ್ಲಿ

    ಪುಣೆ: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ 41 ರನ್ ಬಾರಿಸುತ್ತಿದ್ದಂತೆ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಗ್ರೇಮ್ ಸ್ಮಿತ್ ದಾಖಲೆ ಮುರಿದಿದ್ದಾರೆ.

    ವಿರಾಟ್ ನಾಯಕನಾಗಿ ಏಕದಿನ ಪಂದ್ಯದಲ್ಲಿ 5,441 ರನ್ ಸಿಡಿಸುವ ಮೂಲಕ ದಕ್ಷಿಣ ಆಫ್ರಿಕಾ ತಂಡ ಮಾಜಿ ನಾಯಕ ಗ್ರೇಮ್ ಸ್ಮಿತ್ ಅವರ ದಾಖಲೆಯನ್ನು ಮುರಿದಿದ್ದಾರೆ. ಸ್ಮಿತ್ 150 ಏಕದಿನ ಪಂದ್ಯಗಳಿಂದ 5,416 ರನ್ ಗಳಿಸಿದ್ದರು. ಇದೀಗ ಸ್ಮಿತ್ ಅವರ ದಾಖಲೆಯನ್ನು ಮುರಿದು ಕೊಹ್ಲಿ ಹೊಸ ದಾಖಲೆಯನ್ನು ತನ್ನ ಹೆಸರಿಗೆ ಬರೆಸಿಕೊಂಡಿದ್ದಾರೆ.

    ವಿರಾಟ್ ಈ ಮೂಲಕ ನಾಯಕನಾಗಿ ಅತೀ ಹೆಚ್ಚು ರನ್ ಸಿಡಿಸಿದವರ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದ್ದಾರೆ. ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ ರಿಕಿ ಪಾಟಿಂಗ್ 234 ಪಂದ್ಯಗಳಿಂದ 8,497 ರನ್ ಸಿಡಿಸಿ ಮೊದಲ ಸ್ಥಾನದಲ್ಲಿದ್ದರೆ, 200 ಪಂದ್ಯಗಳಿಂದ 6641 ರನ್ ಬಾರಿಸುವ ಮೂಲಕ ಎರಡನೇ ಸ್ಥಾನದಲ್ಲಿ ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ಇದ್ದಾರೆ. ಮೂರನೇ ಸ್ಥಾನದಲ್ಲಿ ಸ್ಟೀಫನ್ ಫ್ಲೇಮಿಂಗ್ ಇದ್ದು, ನಾಲ್ಕನೇ ಸ್ಥಾನದಲ್ಲಿ ಶ್ರೀಲಂಕಾದ ಅರ್ಜುನ್ ರಣತುಂಗ ಪಡೆದುಕೊಂಡಿದ್ದಾರೆ.

    ಈ ದಾಖಲೆಯೊಂದಿಗೆ ವಿರಾಟ್ ಇನ್ನೊಂದು ದಾಖಲೆ ಮಾಡಿದ್ದು, ಮೂರನೇ ಕ್ರಮಾಂಕದಲ್ಲಿ ಬ್ಯಾಟ್‍ಬೀಸಿ 10 ಸಾವಿರ ರನ್ ಸಿಡಿಸಿದ ವಿಶ್ವದ ಎರಡನೇ ಆಟಗಾರನಾಗಿ ಹೊರ ಹೊಮ್ಮಿದ್ದಾರೆ. ಇಂಗ್ಲೆಂಡ್ ವಿರುದ್ಧ ಪುಣೆಯಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ 10,000 ರನ್ ಸಿಡಿಸಿ ನೂತನ ದಾಖಲೆ ನಿರ್ಮಿಸಿದರು. ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಟಿಂಗ್ ಮೂರನೇ ಕ್ರಮಾಂಕದಲ್ಲಿ 330 ಇನ್ನಿಂಗ್ಸ್ ಗಳಿಂದ 12,662 ರನ್ ಬಾರಿಸುವ ಮೂಲಕ ಮೊದಲ ಸ್ಥಾನದಲ್ಲಿದ್ದರೆ. ಎರಡನೇ ಸ್ಥಾನ ವಿರಾಟ್ ಕೊಹ್ಲಿ ಪಾಲಾಗಿದೆ. ಕೊಹ್ಲಿ 190 ಇನ್ನಿಂಗ್ಸ್ ಗಳಿಂದ 10,000 ರನ್ ಸಿಡಿಸಿದ್ದಾರೆ. 3 ಮತ್ತು 4 ನೇ ಸ್ಥಾನದಲ್ಲಿ ಕ್ರಮವಾಗಿ ಶ್ರೀಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕರ ಮತ್ತು ದಕ್ಷಿಣ ಆಫ್ರಿಕಾದ ಜಾಕ್ ಕಾಲಿಸ್ ಇದ್ದಾರೆ.

    ವಿರಾಟ್ ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟ್‍ಬೀಸಿ 66ರನ್ (79 ಎಸೆತ,3 ಬೌಂಡರಿ, 1 ಸಿಕ್ಸರ್) ಸಿಡಿಸಿ ಔಟ್ ಆದರು. ಭಾರತ ಪರ ಕೆ. ಎಲ್ ರಾಹುಲ್ 108 ರನ್( 114 ಬಾಲ್,7 ಬೌಂಡರಿ,2 ಸಿಕ್ಸರ್) ಬಾರಿಸಿ ಭಾರತಕ್ಕೆ ಬೃಹತ್ ಮೊತ್ತ ಪೇರಿಸುವಲ್ಲಿ ನೆರವಾಗಿದ್ದಾರೆ. ಭಾರತ ನಿಗದಿತ ಓವರ್‍ ಗಳಲ್ಲಿ 6 ವಿಕೆಟ್ ಕಳೆದುಕೊಂಡು 336 ರನ್ ಗಳಿಸಿದೆ. ಇಂಗ್ಲೆಂಡ್ 337 ರನ್‍ಗಳ ಗುರಿ ಪಡೆದುಕೊಂಡಿದೆ.

  • ಮೊದಲ ಏಕದಿನ ಪಂದ್ಯದಲ್ಲಿ ಬಾಲ್ ಬದಲಾವಣೆಯ ರಹಸ್ಯವೇನು?

    ಮೊದಲ ಏಕದಿನ ಪಂದ್ಯದಲ್ಲಿ ಬಾಲ್ ಬದಲಾವಣೆಯ ರಹಸ್ಯವೇನು?

    ಪುಣೆ: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದ ಮೊದಲ ಅವಧಿಯಲ್ಲಿ ಭಾರತ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ 3 ಓವರ್ ಆಗುವಷ್ಟರಲ್ಲೇ ಪಂದ್ಯದಲ್ಲಿ ಬಳಸುತ್ತಿದ್ದ ಹೊಸ ಬಾಲ್‍ನ್ನು ಬದಲಾವಣೆ ಮಾಡಲಾಗಿತ್ತು.

    ಕ್ರಿಕೆಟ್‍ನಲ್ಲಿ ಬಾಲ್‍ಗಳಲ್ಲಿ ಲೋಪ ಮತ್ತು ಸ್ಟೇಡಿಯಂನಿಂದ ಹೊರ ಹೋದ ಬಾಲ್ ಸಿಗದೆ ಇದ್ದಾಗ ಮಾತ್ರ ಚೆಂಡನ್ನು ಬದಲಾವಣೆ ಮಾಡಲಾಗುತ್ತದೆ. ಆದರೆ ಪುಣೆಯಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದ ಆರಂಭದ 3 ನೇ ಓವರ್ ನಲ್ಲೇ ಬಾಲ್‍ನ್ನು ಬದಲಾಯಿಸಲು ಅಂಪೈರ್ ನಿರ್ಧಾರ ಮಾಡಿದ್ದರು.

    ಇದ್ದನ್ನು ಗಮನಿಸಿದ ಅಭಿಮಾನಿಗಳಲ್ಲಿ ಬಾಲ್ ಬದಲಾವಣೆಯ ಕುರಿತು ಭಾರೀ ಕೂತುಹಲ ಮೂಡಿಸಿತ್ತು. ಆದರೆ ಪಂದ್ಯ ಮುಗಿದ ಬಳಿಕ ಬಾಲ್ ಬದಲಾವಣೆಯ ಕಾರಣ ರೀವಿಲ್ ಆಗಿದೆ.

    ಭಾರತ ಬ್ಯಾಟಿಂಗ್ ಆರಂಭಿಸಿ 3ನೇ ಓವರ್ ವೇಳೆ ಹೊಸ ಬಾಲ್‍ನ್ನು ಅಂಪೈರ್ ಬದಲಾವಣೆಗಾಗಿ ಕೊಂಡೊಯ್ಯಲಾಗಿತ್ತು. ಶಿಖರ್ ಧವನ್ ಹೊಡೆದ ಬಾಲ್ ಬೌಂಡರಿ ಗೆರೆ ದಾಟಿದ ನಂತರ ಬಾಲ್‍ನ್ನು ಬದಲಾವಣೆ ಮಾಡಲಾಯಿತು. ಇದಕ್ಕೆ ಕಾರಣ ಚೆಂಡಿನಲ್ಲಿ ಇದ್ದಂತಹ ಸಣ್ಣ ತೂತು.

    ಮೊದಲ ಏಕದಿನ ಪಂದ್ಯದ ವೇಳೆ ಹೊಸ ಬಾಲ್‍ನ್ನು ಬಳಕೆ ಮಾಡಲಾಗುತ್ತಿತ್ತು. ಆದರೆ ಕೇವಲ 16 ಎಸೆತ ಎಸೆಯುವಷ್ಟರಲ್ಲಿ ಬಾಲ್‍ನಲ್ಲಿ ಕಂಡು ಬಂದ ದೋಷವನ್ನು ಗಮನಿಸಿದ ಅಂಪೈರ್ ಬದಲಾವಣೆ ನಿರ್ಧರಿಸಿದ್ದರು. ಬಾಲ್ ಮೈದಾನದ ಬೌಂಡರಿ ರೋಪ್, ಮೈದಾನದಲ್ಲಿದ್ದ ವಸ್ತುವಿಗೆ ಅಥವಾ ಡಿಜಿಟಲ್ ಬೋರ್ಡ್‍ಗೆ ಬಡಿದ ಪರಿಣಾಮ ಬಾಲ್‍ನಲ್ಲಿ ತೂತು ಕಂಡು ಬಂದು ಬಾಲ್‍ನ ತೂಕ ಕಡಿಮೆಯಾಗಿತ್ತು. ಹೀಗಾಗಿ ಅಂಪೈರ್ ಚೆಂಡು ಬದಲಾವಣೆಯ ನಿರ್ಧಾರ ಕೈಗೊಳ್ಳಲಾಯಿತು.

  • ಮೊದಲ ಪಂದ್ಯದಲ್ಲೇ ವಿಶ್ವದಾಖಲೆ ನಿರ್ಮಿಸಿದ ಕೃನಾಲ್‌ ಪಾಂಡ್ಯ

    ಮೊದಲ ಪಂದ್ಯದಲ್ಲೇ ವಿಶ್ವದಾಖಲೆ ನಿರ್ಮಿಸಿದ ಕೃನಾಲ್‌ ಪಾಂಡ್ಯ

    ಪುಣೆ: ತಾನು ಆಡಿದ ಮೊದಲ ಪಂದ್ಯದಲ್ಲೇ ಕೃನಾಲ್‌ ಪಾಂಡ್ಯ ವಿಶ್ವದಾಖಲೆ ಬರೆದಿದ್ದಾರೆ. ಅತಿ ಕಡಿಮೆ ಎಸೆತದಲ್ಲಿ ಅರ್ಧಶತಕ ಹೊಡೆಯುವ ಮೂಲಕ ಈ ಸಾಧನೆ ನಿರ್ಮಿಸಿದ್ದಾರೆ.

    ಇಂದು ಕೃನಾಲ್‌ ಪಾಂಡ್ಯ 26 ಎಸೆತದಲ್ಲಿ 50 ರನ್‌ ಹೊಡೆದರು. ಟಾಮ್‌ ಕರ್ರನ್‌ ಎಸೆದ ಎಸೆತದಲ್ಲಿ ಒಂದು ಸಿಂಗಲ್‌ ರನ್‌ ಓಡಿ ವಿಶ್ವದಾಖಲೆ ನಿರ್ಮಿಸಿದರು.

    ಇದಕ್ಕೂ ಮೊದಲು ಈ ದಾಖಲೆ ನ್ಯೂಜಿಲೆಂಡ್‌ ಆಟಗಾರ ಜಾನ್‌ ಮೋರಿಸ್‌ ಹೆಸರಿನಲ್ಲಿತ್ತು. 1990ರಲ್ಲಿ ಮೋರಿಸ್‌ ಇಂಗ್ಲೆಂಡ್‌ ವಿರುದ್ದದ ಪಂದ್ಯದಲ್ಲಿ 36 ಎಸೆತದಲ್ಲಿ ಅರ್ಧಶತಕ ಹೊಡೆದಿದ್ದರು.

    ಕೃನಾಲ್‌ ಪಾಂಡ್ಯ ಕ್ರೀಸಿಗೆ ಬಂದಾಗ ಭಾರತ 40.3 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 205 ರನ್‌ ಗಳಿಸಿತ್ತು. ರಾಹುಲ್‌ಗೆ ಜೊತೆಯಾದ ಕೃನಾಲ್‌ ಆರಂಭದಲ್ಲಿ ನಿಧನವಾಗಿ ಆಡಿ ನಂತರ ಬೌಂಡರಿ ಸಿಕ್ಸರ್‌ಗಳನ್ನು ಚಚ್ಚಲು ಆರಂಭಿಸಿದರು.‌ ಇವರಿಬ್ಬರು ಮುರಿಯದ 6ನೇ ವಿಕೆಟಿಗೆ ಕೊನೆಯ 57 ಎಸೆತದಲ್ಲಿ 112 ರನ್‌ ಹೊಡೆಯುವ ಮೂಲಕ ತಂಡದ ಮೊತ್ತವನ್ನು 300 ರನ್‌ಗಳ ಗಡಿಯನ್ನು ದಾಟಿಸಿದರು.

    ಕೃನಾಲ್‌ ಪಾಂಡ್ಯ 58 ರನ್‌(31 ಎಸೆತ, 7 ಬೌಂಡರಿ, 2 ಸಿಕ್ಸರ್‌) ಹೊಡೆದರೆ ರಾಹುಲ್‌ 62 ರನ್‌(43 ಎಸೆತ, 4 ಬೌಂಡರಿ, 4 ಸಿಕ್ಸರ್‌) ಹೊಡೆದರು.

    ವೇಗದ ಅರ್ಧಶತಕವನ್ನು ಜನವರಿಯಲ್ಲಿ ಮೃತರಾದ ತಂದೆಗೆ ಅರ್ಪಿಸುವುದಾಗಿ ಕೃನಾಲ್‌ ಹೇಳಿದರು.

    ಇಂಗ್ಲೆಂಡ್‌ ವಿರುದ್ಧ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಕೃನಾಲ್‌ ಪಾಂಡ್ಯ ಮತ್ತು ಪ್ರಸಿದ್ಧ್‌ ಕೃಷ್ಣ ಪದಾರ್ಪಣೆ ಮಾಡಿದರು. ಪಂದ್ಯಕ್ಕೂ ಮೊದಲು ಸಹೋದರ ಹಾರ್ದಿಕ್‌ ಪಾಂಡ್ಯ ಅವರು ಕೃನಾಲ್‌ಗೆ ಟೀಂ ಇಂಡಿಯಾದ ಕ್ಯಾಪ್‌ ನೀಡಿದರು.

    ಭಾರತದ ರನ್‌ ಏರಿದ್ದು ಹೇಗೆ?
    50 ರನ್‌ – 77 ಎಸೆತ
    100 ರನ್‌ – 139 ಎಸೆತ
    150 ರನ್‌ – 172 ಎಸೆತ
    200 ರನ್‌ – 238 ಎಸೆತ
    250 ರನ್‌ – 278 ಎಸೆತ
    300 ರನ್‌ – 294 ಎಸೆತ
    317 ರನ್‌ – 300 ಎಸೆತ

  • ಮೊದಲ ಪಂದ್ಯದಲ್ಲೇ ಕೃನಾಲ್‌ ಸ್ಫೋಟಕ ಅರ್ಧಶತಕ – ಇಂಗ್ಲೆಂಡಿಗೆ 318 ರನ್‌ ಗುರಿ

    ಮೊದಲ ಪಂದ್ಯದಲ್ಲೇ ಕೃನಾಲ್‌ ಸ್ಫೋಟಕ ಅರ್ಧಶತಕ – ಇಂಗ್ಲೆಂಡಿಗೆ 318 ರನ್‌ ಗುರಿ

    ಪುಣೆ: ಮೊದಲ ಏಕದಿನ ಪಂದ್ಯದಲ್ಲೇ ಕೃನಾಲ್‌ ಪಾಂಡ್ಯ ಅಬ್ಬರಿಸಿದ್ದಾರೆ. ಶಿಖರ್‌ ಧವನ್‌, ವಿರಾಟ್‌ ಕೊಹ್ಲಿ, ಕೊನೆಯಲ್ಲಿ ಕೆಎಲ್‌ ರಾಹುಲ್‌ ಅವರ ಸ್ಫೋಟಕ ಅರ್ಧಶತಕದಿಂದ ಭಾರತ ಇಂಗ್ಲೆಂಡಿಗೆ 318 ರನ್‌ಗಳ ಗುರಿಯನ್ನು ನೀಡಿದೆ.

    ಕೃನಾಲ್‌ ಪಾಂಡ್ಯ ಕ್ರೀಸಿಗೆ ಬಂದಾಗ ಭಾರತ 40.3 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 205 ರನ್‌ ಗಳಿಸಿತ್ತು. ರಾಹುಲ್‌ಗೆ ಜೊತೆಯಾದ ಕೃನಾಲ್‌ ಆರಂಭದಲ್ಲಿ ನಿಧನವಾಗಿ ಆಡಿ ನಂತರ ಬೌಂಡರಿ ಸಿಕ್ಸರ್‌ಗಳನ್ನು ಚಚ್ಚಲು ಆರಂಭಿಸಿದರು.‌ ಇವರಿಬ್ಬರು ಮುರಿಯದ 6ನೇ ವಿಕೆಟಿಗೆ ಕೊನೆಯ 57 ಎಸೆತದಲ್ಲಿ 112 ರನ್‌ ಹೊಡೆಯುವ ಮೂಲಕ ತಂಡದ ಮೊತ್ತವನ್ನು 300 ರನ್‌ಗಳ ಗಡಿಯನ್ನು ದಾಟಿಸಿದರು.

     

    ಕೃನಾಲ್‌ ಪಾಂಡ್ಯ 58 ರನ್‌(31 ಎಸೆತ, 7 ಬೌಂಡರಿ, 2 ಸಿಕ್ಸರ್‌) ಹೊಡೆದರೆ ರಾಹುಲ್‌ 62 ರನ್‌(43 ಎಸೆತ, 4 ಬೌಂಡರಿ, 4 ಸಿಕ್ಸರ್‌) ಹೊಡೆದರು. ಮಾರ್ಕ್‌ ವುಡ್‌ ಎಸೆದ 48ನೇ ಓವರಿನಲ್ಲಿ 28 ರನ್‌ ಬಂದರೆ ನಂತರದ ಎರಡು ಓವರಿನಲ್ಲಿ 12 ರನ್‌, 13 ರನ್‌ ಬಂದಿತ್ತು.

    ಭಾರತದ ಪರ ರೋಹಿತ್‌ ಶರ್ಮಾ 28 ರನ್‌, ಶಿಖರ್‌ ಧವನ್‌ 98 ರನ್(106‌ ಎಸೆತ, 11 ಬೌಂಡರಿ, 2 ಸಿಕ್ಸರ್‌) ನಾಯಕ ಕೊಹ್ಲಿ 56 ರನ್‌( 60 ಎಸೆತ, 6 ಬೌಂಡರಿ) ಹೊಡೆದು ಔಟಾದರು. ಮೊದಲ ವಿಕೆಟಿಗೆ ಧವನ್‌, ರೋಹಿತ್‌ 64 ರನ್‌, ಎರಡನೇ ವಿಕೆಟಿಗೆ ಶಿಖರ್‌ ಧವನ್‌, ಕೊಹ್ಲಿ 105 ರನ್‌ಗಳ ಜೊತೆಯಾಟವಾಡಿದರು.

    ಇಂಗ್ಲೆಂಡ್‌ ವಿರುದ್ಧ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಕೃನಾಲ್‌ ಪಾಂಡ್ಯ ಮತ್ತು ಪ್ರಸಿದ್ಧ್‌ ಕೃಷ್ಣ ಪದಾರ್ಪಣೆ ಮಾಡಿದರು. ಪಂದ್ಯಕ್ಕೂ ಮೊದಲು ಸಹೋದರ ಹಾರ್ದಿಕ್‌ ಪಾಂಡ್ಯ ಅವರು ಕೃನಾಲ್‌ಗೆ ಟೀಂ ಇಂಡಿಯಾದ ಕ್ಯಾಪ್‌ ನೀಡಿದರು.

    ರನ್‌ ಏರಿದ್ದು ಹೇಗೆ?
    50 ರನ್‌ – 77 ಎಸೆತ
    100 ರನ್‌ – 139 ಎಸೆತ
    150 ರನ್‌ – 172 ಎಸೆತ
    200 ರನ್‌ – 238 ಎಸೆತ
    250 ರನ್‌ – 278 ಎಸೆತ
    300 ರನ್‌ – 294 ಎಸೆತ
    317 ರನ್‌ – 300 ಎಸೆತ

  • ಶಿವಾಜಿ ಮಾರುಕಟ್ಟೆಯಲ್ಲಿ ಬೆಂಕಿ – 25 ಅಂಗಡಿಗಳು ಭಸ್ಮ

    ಶಿವಾಜಿ ಮಾರುಕಟ್ಟೆಯಲ್ಲಿ ಬೆಂಕಿ – 25 ಅಂಗಡಿಗಳು ಭಸ್ಮ

    ಮುಂಬೈ: ಪುಣೆಯ ಹಳೆಯ ಹಣ್ಣು ಮತ್ತು ತರಕಾರಿ ಮಾರುಕಟ್ಟೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಸುಮಾರು 25 ಅಂಗಡಿಗಳು ಸುಟ್ಟು ಭಸ್ಮವಾಗಿದೆ.

    ಮಹಾರಾಷ್ಟ್ರದ ಪುಣೆ ಕಂಟೋನ್ಮೆಂಟ್ ಪ್ರದೇಶದ ಪ್ರಸಿದ್ಧ ಶಿವಾಜಿ ಮಾರುಕಟ್ಟೆಯಲ್ಲಿ ಮುಂಜಾನೆ 4 ಗಂಟೆ ಸರಿ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಸುಮಾರು 25ಕ್ಕೂ ಅಧಿಕ ಅಂಗಡಿಗಳು ಸುಟ್ಟು ಕರಕಲಾಗಿದೆ.

    ಘಟನೆ ಕುರಿತಂತೆ ಮಾಹಿತಿ ದೊರೆತ ತಕ್ಷಣ 9 ಅಗ್ನಿಶಾಮಕ ದಳವನ್ನು ಸ್ಥಳಕ್ಕೆ ಕಳುಹಿಕೊಡಲಾಯಿತು ಹಾಗೂ ಕೇವಲ ಅರ್ಧ ಗಂಟೆಯಲ್ಲಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಯಿತು ಎಂದು ಪುಣೆ ಮಹಾನಗರ ಪಾಲಿಕೆಯ ಅಗ್ನಿಶಾಮಕ ದಳದ ಮುಖ್ಯಸ್ಥ ಪ್ರಶಾಂತ್ ರಾನ್‍ಪೈಸ್ ತಿಳಿಸಿದ್ದಾರೆ.

    ಸದ್ಯ ಘಟನೆಯಲ್ಲಿ ಯಾರಿಗೂ ಹಾನಿಯಾಗಿಲ್ಲ ಹಾಗೂ ಬೆಂಕಿ ಹೊತ್ತಿಕೊಳ್ಳಲು ಕಾರಣವೇನು ಎಂಬುದರ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಿಲ್ಲ ಎಂದು ಹೇಳಿದರು.

  • 16 ಹುಡುಗರು, ಮೂವರು ಯುವತಿಯರನ್ನ ಪ್ರೇಮದ ಬಲೆಯಲ್ಲಿ ಬೀಳಿಸಿಕೊಂಡ ಮದನಾರಿ

    16 ಹುಡುಗರು, ಮೂವರು ಯುವತಿಯರನ್ನ ಪ್ರೇಮದ ಬಲೆಯಲ್ಲಿ ಬೀಳಿಸಿಕೊಂಡ ಮದನಾರಿ

    – ಪೊಲೀಸರ ಬಲೆಗೆ ಬಿದ್ದಿದ್ದೇಗೆ ದುಂಡು ಮಲ್ಲಿಗೆ ಸುಂದರಿ?
    – ಹೋಟೆಲ್ ರೂಂ ಕಾಯ್ದಿರಿಸಿ ಬಾ, ಬಾ ಅಂತಿದ್ಳು

    ಮುಂಬೈ: ಡೇಟಿಂಗ್ ಆ್ಯಪ್ ಮೂಲಕ 16 ಹುಡುಗರು ಮತ್ತು ಮೂವರು ಯುವತಿಯರನ್ನ ತನ್ನ ಪ್ರೇಮದ ಬಲೆಯಲ್ಲಿ ಬೀಳಿಸಿಕೊಂಡಿದ್ದ ದುಂಡು ಮಲ್ಲಿಗೆ ಸುಂದರಿಯನ್ನ ಪೊಲೀಸರು ಬಂಧಿಸಿದ್ದಾರೆ. ಎರಡು ದಿನಗಳ ಹಿಂದೆ ಮಹಾರಾಷ್ಟ್ರದ ಪಿಂಪರಿ-ಚಿಂಚವಾಡಾ ಠಾಣೆಯ ನಾಲ್ವರು ಅಧಿಕಾರಿಗಳ ತಂಡ ಸುಂದರಿಯನ್ನ ಅರೆಸ್ಟ್ ಮಾಡಿದ್ದಾರೆ.

    27ರ ಸಯಾಲಿ ಉರ್ಫ್ ಶಿಖಾ ದೇವೇಂದ್ರ ಕಾಳೆ ಬಂಧಿತ ವಂಚಕಿ. ಆರೋಪಿ ಸಯಾಲಿ 16 ಯುವಕರನ್ನ ತನ್ನ ಪ್ರೇಮದ ಪಾಶದಲ್ಲಿ ಬಂಧಿಸಿ ಅವರ ಬಳಿಯಲ್ಲಿರುವ ಚಿನ್ನಾಭರಣ ಮತ್ತು ನಗದು ದೋಚಿ ಪರಾರಿಯಾಗುತ್ತಿದ್ದಳು. ಬಂಬಲ್ ಡೇಟಿಂಗ್ ಆ್ಯಪ್ ನಲ್ಲಿ ಸೆಕ್ಸ್ ಗಾಗಿ ಹುಡುಗಿಯರನ್ನ ಹುಡುಕುತ್ತಿರೋ ಯುವಕರನ್ನೇ ಸಯಾಲಿ ಟಾರ್ಗೆಟ್ ಮಾಡಿಕೊಂಡು ಅವರ ಸ್ನೇಹ ಬೆಳೆಸುತ್ತಿದ್ದಳು.

    ಹೋಟೆಲ್ ರೂಂ ಕಾಯ್ದಿರಿಸಿ ಬಾ ಅಂತಿದ್ಳು: ಹುಡುಗರ ವೀಕ್‍ನೆಸ್ ಲಾಭವಾಗಿ ಬಳಸಿಕೊಳ್ಳುತ್ತಿದ್ದ ಸಯಾಲಿ ಹೋಟೆಲ್ ರೂಂ ಬುಕ್ ಮಾಡಿ ಯುವಕರಿಗೆ ಆಹ್ವಾನ ನೀಡುತ್ತಿದ್ದಳು. ದುಂಡು ಮಲ್ಲಿಗೆಯ ತೋಳುಗಳಲ್ಲಿ ಬಂಧಿಯಾಗಲು ಓಡೋಡಿ ಬರುತ್ತಿದ್ದ ಯುವಕರಿಗೆ ಮದ್ಯದಲ್ಲಿ ನಿದ್ದೆ ಮಾತ್ರೆ ಸೇರಿಸಿ ಕೊಡುತ್ತಿದ್ದಳು. ಮದ್ಯ ಕುಡಿದ ಯುವಕ ನಿದ್ದೆಗೆ ಜಾರುತ್ತಿದ್ದಂತೆ ಅವರ ಬಳಿಯಲ್ಲಿರುವ ಚೈನ್, ಉಂಗುರ, ವಾಚ್, ಮೊಬೈಲ್ ಮತ್ತು ಹಣ ಕಿತ್ಕೊಂಡು ಜೂಟ್ ಆಗುತ್ತಿದ್ದಳು. ನಂತರ ಆತನೊಂದಿಗೆ ಚಾಟ್ ಮಾಡಿದ್ದ ಮೊಬೈಲ್ ನಂಬರ್, ಡೇಟಿಂಗ್ ಆ್ಯಪ್ ಖಾತೆಯನ್ನ ಡಿಲೀಟ್ ಮಾಡುತ್ತಿದ್ದಳು. ಹೀಗೆ 16 ಹುಡುಗರಿಗೆ ದಾಳಿಂಬೆ ಹಲ್ಲುಗಳನ್ನ ಫಳ ಫಳ ಅಂತ ತೋರಿಸಿ ಮಕ್ಮಲ್ ಟೋಪಿ ಹಾಕಿದ್ದಳು.

    ಬುರುಡೆ ಮದನಾರಿ: ಸಯಾಲಿಯಿಂದ ವಂಚಿತ ಯುವಕರು ದೂರು ಸಲ್ಲಿಸುವಾಗ ಓರ್ವ ಮಹಿಳೆ ತಮ್ಮನ್ನ ಡೇಟಿಂಗ್ ಆ್ಯಪ್ ಮೂಲಕ ಮೋಸ ಮಾಡಿದ್ದಾಳೆ ಅಂತ ಮಾತ್ರ ಆರೋಪಿ ಬಗ್ಗೆ ಮಾಹಿತಿ ನೀಡುತ್ತಿದ್ದರು. ಮೇಲ್ನೋಟಕ್ಕೆ ತಾನು ಖಾಸಗಿ ಕಂಪನಿಯ ಉದ್ಯೋಗಿ ಅಂತ ಎಲ್ಲರ ಬಳಿಯೂ ಮದನಾರಿ ಬುರುಡೆ ಬಿಟ್ಟಿದ್ದಳು.

    ನಕಲಿ ಖಾತೆಯ ಖೆಡ್ಡಾಗೆ ಬಿದ್ಳು: ಯಾವುದೇ ಸಾಕ್ಷ್ಯ, ಸುಳಿವು ಸಿಗದ ಕಾರಣ ಪೊಲೀಸರು ಆರಂಭದಲ್ಲಿ ತಲೆಯನ್ನ ಚಚ್ಚಿಕೊಂಡಿದ್ದುಂಟು. ಕೊನೆಗೆ ಪಿಂಪರಿ ಚಿಂಚವಾಡ ಬ್ರ್ಯಾಂಚ್ ಪೊಲೀಸರು ನಾಲ್ಕು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಟೀಂ ರಚನೆ ಮಾಡಿದ್ರು. ಇನ್‍ಸ್ಪೆಕ್ಟರ್ ಪ್ರಸಾದ್ ಗೋಖಲೆ ತಮ್ಮ ತಂಡದ ಸದಸ್ಯರೊಂದಿಗೆ ಅದೇ ಡೇಟಿಂಗ್ ಆ್ಯಪ್ ನಲ್ಲಿ ಖಾತೆ ತರೆದು ಸಯಾಲಿಗಾಗಿ ಶೋಧ ನಡೆಸಿದರು. ಈ ವೇಳೆ ಸಯಾಲಿ ಕೆಲವರಿಗೆ ಫ್ರೆಂಡ್ ರಿಕ್ವೇಸ್ಟ್ ಕಳಸಿದ್ದಾಳೆ. ಆರಂಭದಲ್ಲಿ ಪೊಲೀಸರು ಫ್ರೆಂಡ್ ರಿಕ್ವೆಸ್ಟ್ ಒಪ್ಪಿಕೊಳ್ಳದಿದ್ದರೂ ಪದೇ ಪದೇ ಅವರನ್ನ ಸಯಾಲಿ ಸಂಪರ್ಕಿಸಿದ್ದಾಳೆ.

    ಪೊಲೀಸರು ಸ್ಮೈಲ್‍ಗಿಕ್ ಹೆಸರಿನ ಖಾತೆ ಮೂಲಕ ಆಕೆಯೊಂದಿಗೆ ಮಾತನಾಡಿದ್ದಾರೆ. ನಂತರ ಆಕೆಯೊಂದಿಗೆ ಚಾಟ್ ಮಾಡಿ ಪರಸ್ಪರ ಮೊಬೈಲ್ ನಂಬರ್ ಚೇಂಜ್ ಮಾಡಿಕೊಂಡಿದ್ದಾರೆ. ಎಲ್ಲರಿಗೆ ಮಕ್ಮಲ್ ಟೋಪಿ ಹಾಕಿದ್ದ ಫಳ ಫಳ ಹಲ್ಲಿನ ಸುಂದರಿ ಪೊಲೀಸಪ್ಪನಿಗೆಯೇ ಟೋಪಿ ಹಾಕಲು ಪ್ಲಾನ್ ಮಾಡಿ, ಅವರನ್ನ ಮನೆಗೆ ಬರುವಂತೆ ಆಹ್ವಾನ ನೀಡಿದ್ದಾಳೆ.

    ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಸಯಾಲಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿರುವ ಸಯಾಲಿ ಇದುವರೆಗೂ ಮೂವರು ಯುವತಿಯರು ಮತ್ತು 16 ಯುವಕರಿಗೆ ಪ್ರೀತಿ ಹೆಸರಲ್ಲಿ ಮೋಸ ಮಾಡಿರೋದಾಗಿ ಒಪ್ಪಿಕೊಂಡಿದ್ದಾಳೆ. ಲಾಕ್‍ಡೌನ್ ವೇಳೆ ಕೆಲಸ ಕಳೆದುಕೊಂಡಿದ್ದರಿಂದ ಈ ಕೃತ್ಯಕ್ಕೆ ಸಯಾಲಿ ಮುಂದಾಗಿದ್ದಳು ಎಂದು ವರದಿಯಾಗಿದೆ.

  • ಕೋವಿಡ್‌ ಲಸಿಕೆ ತಯಾರಕ ಸೀರಂನಲ್ಲಿ ಅಗ್ನಿ ದುರಂತ – ಐವರು ಬಲಿ

    ಕೋವಿಡ್‌ ಲಸಿಕೆ ತಯಾರಕ ಸೀರಂನಲ್ಲಿ ಅಗ್ನಿ ದುರಂತ – ಐವರು ಬಲಿ

    ಮುಂಬೈ: ಕೊರೊನಾ ವ್ಯಾಕ್ಸಿನ್ ತಯಾರಿಸುತ್ತಿರುವ ಪುಣೆ  ಸೀರಂ ಸಂಸ್ಥೆಯಲ್ಲಿ  ಸಂಭವಿಸಿದ ಬೆಂಕಿ ಅವಘಡದಲ್ಲಿ ಐವರು ಸಾವನ್ನಪ್ಪಿದ್ದಾರೆ.

    ಇಂದು ಮಧ್ಯಾಹ್ನ ನಿರ್ಮಾಣ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಐವರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಇದೀಗ ಲಭ್ಯವಾಗಿದೆ. ಇಂಗ್ಲೆಂಡಿನ ಆಕ್ಸ್‌ಫರ್ಡ್‌  ವಿಶ್ವವಿದ್ಯಾಲಯ ಹಾಗೂ ಆಸ್ಟ್ರಾಜೆನಿಕಾ ಕಂಪನಿ ಅಭಿವೃದ್ಧಿಪಡಿಸಿರುವ ಕೊವಿಶೀಲ್ಡ್ ಲಸಿಕೆ ಸೀರಂ ಸಂಸ್ಥೆಯಲ್ಲಿ ಉತ್ಪಾದಿಸಲಾಗುತ್ತಿದೆ. ಆದರೆ ಕೊರೊನಾ ಲಸಿಕೆ ಸಂಗ್ರಹಿಸಿಟ್ಟ ಪ್ರದೇಶದಲ್ಲಿ ಅಗ್ನಿ ಅವಘಡ ಸಂಭವಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

    ಈ ಕುರಿತು ಆದರ್ ಪೂನವಾಲಾ ಟ್ವೀಟ್ ಮಾಡಿ, ಇದೀಗ ಆಘಾತಕಾರಿ ಮಾಹಿತಿ ಲಭ್ಯವಾಗಿದ್ದು, ಘಟನೆಯಲ್ಲಿ ಕೆಲವರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ತನಿಖೆ ವೇಳೆ ಲಭ್ಯವಾಗಿದೆ. ಇದರಿಂದ ತೀವ್ರ ದುಃಖವಾಗಿದ್ದು, ಸಾವನ್ನಪ್ಪಿದವರ ಕುಟುಂಬದವರಿಗೆ ಸಂತಾಪ ಸೂಚಿಸುತ್ತೇನೆ ಎಂದು ತಿಳಿಸಿದ್ದಾರೆ.

    ಸತತ ಮೂರು ಗಂಟೆಗಳ ಅಗ್ನಿಶಾಮಕ ಸಿಬ್ಬಂದಿ ಪ್ರಯತ್ನದ ಬಳಿಕ ಬೆಂಕಿ ನಿಯಂತ್ರಣಕ್ಕೆ ಬಂದಿದ್ದು, ಶಾರ್ಟ್ ಸರ್ಕ್ಯೂಟ್‌ನಿಂದ ಅವಘಡ ಸಂಭವಿಸಿರಬಹುದೆಂದು ಶಂಕಿಸಲಾಗಿದೆ. ಇದೀಗ ನಾವು ಇಬ್ಬರನ್ನು ರಕ್ಷಿಸಿದ್ದು, ಇನ್ನೂ ಕಾರ್ಯಾಚರಣೆ ಮುಂದುವರಿದಿದೆ. ಬಳಿಕ ನಷ್ಟದ ಕುರಿತು ಲೆಕ್ಕ ಹಾಕಲಾಗುತ್ತದೆ ಎಂದು ಆದರ್ ಪೂನವಾಲಾ ತಿಳಿಸಿದ್ದಾರೆ.

    ಸೀರಂ ವಿಶ್ವದ ಅತಿದೊಡ್ಡ ಲಸಿಕೆ ಉತ್ಪಾದನೆ ಮಾಡುವ ಸಂಸ್ಥೆಯಾಗಿದ್ದು, 10 ಅಗ್ನಿ ಶಾಮಕ ದಳದ ವಾಹನಗಳು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದವು.

  • ಪುಣೆಯ ಸೀರಂ ಸಂಸ್ಥೆಯಲ್ಲಿ ಭಾರೀ ಅಗ್ನಿ ಅವಘಡ

    ಪುಣೆಯ ಸೀರಂ ಸಂಸ್ಥೆಯಲ್ಲಿ ಭಾರೀ ಅಗ್ನಿ ಅವಘಡ

    ಪುಣೆ: ವಿಶ್ವದ ಅತಿದೊಡ್ಡ ಲಸಿಕೆ ಉತ್ಪಾದನೆ ಮಾಡುವ ಪುಣೆಯ ಸೀರಂ ಸಂಸ್ಥೆಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ.

    ಕೋವಿಶೀಲ್ಡ್‌ ಅಭಿವೃದ್ಧಿ ಪಡಿಸುತ್ತಿರುವ ಸೀರಂ ಸಂಸ್ಥೆಯ ಒಂದನೇ ಗೇಟ್‌ನಲ್ಲಿ ಅಗ್ನಿ ದುರಂತ ಸಂಭವಿಸಿದೆ. ಈಗಾಗಲೇ 10 ಅಗ್ನಿ ಶಾಮಕ ದಳದ ವಾಹನಗಳು ಸ್ಥಳಕ್ಕೆ ದೌಡಾಯಿಸಿದ್ದು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ.

    ಇಂಗ್ಲೆಂಡಿನ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಮತ್ತು ಆಸ್ಟ್ರಜೆನಿಕಾ ಕಂಪನಿ ಅಭಿವೃದ್ಧಿ ಪಡಿಸಿದ್ದ ಕೋವಿಶೀಲ್ಡ್‌ ಲಸಿಕೆಯ ಉತ್ಪಾದನೆ ಸೀರಂ ಸಂಸ್ಥೆಯಲ್ಲಿ ನಡೆಯಿತಿತ್ತು.

    ಕೋವಿಶೀಲ್ಡ್‌ ಲಸಿಕೆಯನ್ನು ಸಂಗ್ರಹಿಟ್ಟ ಜಾಗದಲ್ಲಿ ಅಗ್ನಿ ಅವಘಡ ಸಂಭವಿಸಿಲ್ಲ ಎಂದು ವರದಿಯಾಗಿದೆ.

  • ತಟ್ಟೆಯಲ್ಲಿರುವ ಊಟ ಖಾಲಿ ಮಾಡಿದ್ರೆ ಸಿಗುತ್ತೆ ರಾಯಲ್ ಎನ್‍ಫೀಲ್ಡ್ ಬೈಕ್

    ತಟ್ಟೆಯಲ್ಲಿರುವ ಊಟ ಖಾಲಿ ಮಾಡಿದ್ರೆ ಸಿಗುತ್ತೆ ರಾಯಲ್ ಎನ್‍ಫೀಲ್ಡ್ ಬೈಕ್

    – ಹೋಟೆಲಿನಿಂದ ಹೊಸ ಆಫರ್, ಕಂಡೀಷನ್ಸ್ ಅಪ್ಲೈ

    ಮುಂಬೈ: ಹೋಟೆಲ್ ಗಳು ಗ್ರಾಹಕರನ್ನ ಸೆಳೆಯಲು ನಾನಾ ಮಾರುಕಟ್ಟೆ ತಂತ್ರಗಳನ್ನ ಪ್ರಯೋಗಿಸುತ್ತವೆ. ಇದೀಗ ಪುಣೆಯ ಶಿವರಾಜ್ ಹೋಟೆಲ್ ಗ್ರಾಹಕರಿಗೆ ವಿಶೇಷ ಆಫರ್ ನೀಡಿದೆ. ಹೋಟೆಲ್ ಪ್ರಕಟಿಸಿರುವ ಜಾಹೀರಾತಿನ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಭರ್ಜರಿ ಊಟಕ್ಕಾಗಿ ಕೆಲ ಹೋಟೆಲ್ ಗಳು ಮಹಾರಾಜ ಥಾಲಿ, ಬಾಹುಬಲಿ ಥಾಲಿ ಹೆಸರಿನ ಆಫರ್ ಗಳನ್ನ ಗ್ರಾಹಕರಿಗೆ ನೀಡುತ್ತವೆ. ಶಿವರಾಜ್ ಹೋಟೆಲ್ ಬುಲೆಟ್ ಥಾಲಿ ಪರಿಚಯಿಸಿದ್ದು, ಇದರಲ್ಲಿ ನೀಡುವ ಎಲ್ಲ ಖಾದ್ಯಗಳು ಒಂದು ಗಂಟೆಯೊಳಗೆ ತಿನ್ನುವ ಗ್ರಾಹಕರಿಗೆ ರಾಯಲ್ ಎನ್ ಫೀಲ್ಡ್ ಬೈಕ್ ಉಚಿತವಾಗಿ ನೀಡಲಾಗುತ್ತದೆ. ಈ ಬುಲೆಟ್ ಥಾಲಿ ಮಾಂಸಾಹಾರ ಸಹ ಒಳಗೊಂಡಿರುತ್ತದೆ. ಈ ಥಾಲಿ ಸಿದ್ಧಪಡಿಸಲು 55 ಬಾಣಸಿಗರು ಕೆಲಸ ಮಾಡುತ್ತಾರೆ.

    ಬುಲೆಟ್ ಥಾಲಿಯಲ್ಲಿ ಏನೆಲ್ಲ ಇರುತ್ತೆ?:
    ನಾಲ್ಕು ಕೆಜಿ ಮಟನ್, ಕರಿದ ಮೀನು, 12 ತರಹದ ವಿವಿಧ ಆಹಾರ ಇರಲಿದೆ. ಇದರಲ್ಲಿ ಪೊಮ್‍ಫ್ರೆಟ್ ಎಂಟು ಪೀಸ್, ಸುರ್ಮಾಯಿ ಎಂಟು ಪೀಸ್, ಚಿಕನ್ ಲೆಗ್ ಪೀಸ್ 8, ಕಿಲ್ಲಾಂಬಿ ಕರ್ರಿ, ಒಂದು ಮಟನ್ ಮಸಲಾ, ಕರಿದ ಹುಂಜ, ಕೋಲಂಬಿ ಬಿರಿಯಾನಿ, ಎಂಟು ರೊಟ್ಟಿ, ಎಂಟು ಚಪಾತಿ, ಒಂದು ಸುಕ್ಕಾ, ಕೋಲಂಬಿ ಕೋಲಿವಾಡಾ, ನೀರಿನ ನಾಲ್ಕು ಬಾಟಲ್, ರಾಯತಾ, ಎಂಟು ಸೋಲ್ಕಡಿ, ಎಂಟು ಹಪ್ಪಳ ಮತ್ತು ಎಂಟು ಮಟನ್ ಅಲಾನಿ ಸೂಪ್

    ಎರಡು ಆಯ್ಕೆಗಳಿವೆ: ಈ ಆಫರ್ ಕುರಿತು ಮಾತನಾಡಿರುವ ಹೋಟೆಲ್ ಮಾಲೀಕ ಅತುಲ್ ವಾಯಕರ್, ಗ್ರಾಹಕರಿಗೆ ಎರಡು ರೀತಿಯ ಆಫರ್ ಗಳನ್ನ ನೀಡಲಾಗುತ್ತದೆ. ಮೊದಲನೆಯದ್ದು 4 ಸಾವಿರ 444 ರೂ.ಬೆಲೆಯ ಬುಲೆಟ್ ಥಾಲಿಯನ್ನ ಇಬ್ಬರು ಜೊತೆಯಾಗಿ ಒಂದು ಗಂಟೆಯೊಳಗೆ ತಿಂದು ಮುಗಿಸಬೇಕು. ಎರಡನೇ ಆಯ್ಕೆ 2 ಸಾವಿರದ ಐದು ನೂರು ಬೆಲೆಯ ಒಂದು ಮಿನಿ ಬುಲೆಟ್ ಥಾಲಿಯನ್ನ ಓರ್ವ ಗಂಟೆಯಲ್ಲಿ ತಿನ್ನಬೇಕು. ಯಾರಾದ್ರೂ ಒಂದು ಗಂಟೆಯೊಳಗೆ ಬುಲೆಟ್ ಥಾಲಿ ಸೇವಿಸಿದ್ರೆ ರಾಯಲ್ ಎನ್‍ಫೀಲ್ಡ್ ಬುಲೆಟ್ ನೀಡಲಾಗುವುದು ಎಂದು ಹೇಳಿದ್ದಾರೆ.

    ಹೋಟೆಲ್ ಮುಂಭಾಗಲ್ಲಿ ಆರು ಬುಲೆಟ್ ಬೈಕ್ ಗಳನ್ನ ನಿಲ್ಲಿಸಲಾಗಿದೆ. ಇದರ ಜೊತೆಗೆ ಹೋಟೆಲ್ ನಲ್ಲಿ ಆರು ಬಗೆಯ ಬುಲೆಟ್ ಥಾಲಿಗಳು ಗ್ರಾಹಕರಿಗೆ ಸಿಗಲಿದೆ. ರಾವಣ್ ಥಾಲಿ, ಬುಲೆಟ್ ಥಾಲಿ, ಮಲ್ವಾನಿ ಮಚಲಿ ಥಾಲಿ, ಪೈಲ್ವಾನ್ ಮಟನ್ ಥಾಲಿ, ಬಕಾಸುರ ಚಿಕನ್ ಥಾಲಿ ಮತ್ತು ಸರ್ಕಾರ್ ಮಟನ್ ಥಾಲಿ ಸಿಗಲಿದೆ. ಸೋಲಾಪುರ ಜಿಲ್ಲೆಯ ಸೋಮನಾಥ್ ಕುಟುಂಬದ ಒಬ್ಬರು ಮಾತ್ರ ಬುಲೆಟ್ ಬೈಕ್ ತಮ್ಮದಾಗಿಸಿಕೊಂಡಿದ್ದಾರೆ.

    ಒಟ್ಟಿನಲ್ಲಿ ಕಡಿಮೆ ಖರ್ಚಿನಲ್ಲಿ ಮಾಲೀಕನ ಈ ಆಫರ್ ಸೂಪರ್ ಹಿಟ್ ಆಗಿ ಹೋಟೆಲ್ ಫುಲ್ ಫೇಮಸ್ ಆಗಿದೆ.